ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಗಡಿ ಮೀರಿದ್ದು.ಸ್ಮಿತಾಭಟ್ ಕವಿತೆ

ಕಾವ್ಯ ಸಂಗಾತಿ ಗಡಿ ಮೀರಿದ್ದು. ಸ್ಮಿತಾಭಟ್ ಒಲವಿಗೆ ಕಸಿ ಮಾಡುವ ಯೋಜನೆ ಕೈಗೊಳ್ಳಬಾರದುನೆಲದ ಕಾವಿನಲಿ ಒಡೆದ ಮೊಳಕೆ ಚಿವುಟಬಾರದುಬೆಳಕಿನ ಗೆರೆ ಹಿಡಿದು ಸಾಗಿಮತ್ತೆ ನೆಲಕ್ಕೆ ಅಪ್ಪಳಿಸುವ ಬಿಂದುಅಲ್ಲಿ ಕೈ ಗೊಂಡಿದ್ದು ಏನುಒಂದು ಭರವಸೆ ಮತ್ತು ಪ್ರೀತಿನಂಬಿ ಕಾಯುವ ಬುವಿ,ಬಾನುಎಲ್ಲವೂ ಗಡಿ ಮೀರಿದ್ದು ಗಡಿ ಗೆರೆಗಳನೇ ಬದುಕಾಗಿಸಿಕೊಂಡಮನುಷ್ಯ ಸ್ವಾರ್ಥಕ್ಕಷ್ಟೆ ಸೀಮಿತಯುಗಗಳೇ ಕಳೆದಿವೆಪ್ರೇಮದ ಸರಹದ್ದು ದಾಟಿ.ಬರೀ ಭ್ರಮೆಗಳಲೇ ಬದುಕುಹಾಸಿಕೊಳ್ಳಲಾಗದು.ಆಗೀಗ ಆತು ಕೊಳ್ಳಲಾದಾರೂನಂಬಿಕೆಗಳು ಬೇಕು.ಭಾವಗಳ ಬದಿಗೊತ್ತಿ,ಕಳಚಿ ಕೊಳ್ಳುವ ಪೊರೆಹಾವು, ಚಿಟ್ಟೆ ಏನು ಬೇಕಾದರೂಆಗಬಹುದು. ಪ್ರತೀ ಗಡಿಗೂ ಫಲಕಗಳ ಕೆತ್ತುತ್ತಾರೆಹೆಜ್ಜೆ ಇಟ್ಟಲೆಲ್ಲ ಗಡಿ ದಾಟಿದ ಭಾವಆಗಸವನ್ನಷ್ಟೇ ನೋಡ ಬಯಸುವ ನಾನುಒಸರುತ್ತದೆ ಹೆಬ್ಬೆರಳು ಕಗ್ಗಲ್ಲು ತಾಕಿಒಲವಿಗೆ ಗಡಿ ಗೆರೆಗಳಿಲ್ಲಮುಕ್ತಾಯ ಆರಂಭಗಳಿಲ್ಲಸ್ವಾಗತ ಬೀಳ್ಕೊಡುಗೆಗಳೂ ಇಲ್ಲನೆಲದ ಹಂಗು ತೊರೆದ ಹಕ್ಕಿ ಸದಾ ಸುಖಿ. ಸ್ಮಿತಾಭಟ್

ಗಡಿ ಮೀರಿದ್ದು.ಸ್ಮಿತಾಭಟ್ ಕವಿತೆ Read Post »

ಕಾವ್ಯಯಾನ

ನನ್ನ ಹೃದಯದಿಂದ ನಿಮ್ಮ ಹೃದಯಕ್ಕೆ

ಕಾವ್ಯ ಸಂಗಾತಿ ನನ್ನ ಹೃದಯದಿಂದ ನಿಮ್ಮ ಹೃದಯಕ್ಕೆ ಕಮಲಾ ರಾಜೇಶ್ ನಾರಿಮಣಿ ತಾನೊಪ್ಪಿ ಮುದ್ದಾಡ ಬಯಸಿದರೆಪೌರುಷದ ಗಂಡು ಸಹಕರಿಸಿ ನಲಿಯೆನಾರಿಮಣಿ ಒಪ್ಪದಲೆ ಮುದ್ದಾಡ ಬಯಸಿದರೆಕ್ರೂರಮೃಗ ನೀನಾಗ ಕಮಲಾತ್ಮವೆನನ್ನ ಹೃದಯದಿಂದ ನಿಮ್ಮ ಹೃದಯಕ್ಕೆಶುಭರಾತ್ರಿ ನೀನಿರದ ರಾತ್ರಿಯಲಿ ನೆನಪುಗಳು ಸುಳಿಯುತಿರೆನಾನೆದ್ದು ಕುಳಿತು ನೋಡಿದೆನು ಸುತ್ತಮೌನದಲಿ ಮಾತಾಡಿ ನಿಶ್ಶಬ್ದ ಸರಿಸಿದರೆನಾನಿನಗೆ ಸಖಿಯಾದೆ ಕಮಲಾತ್ಮವೆನನ್ನ ಹೃದಯದಿಂದ ನಿಮ್ಮ ಹೃದಯಕ್ಕೆಶುಭೋದಯ ಬೇಲೂರ ಶಿಲೆಯಂತೆ ನೋಡ ಬಯಸಿದ ನಲ್ಲಬೇಲೂರು ಇಲ್ಲ ಬನವಾಸಿ ಇಲ್ಲಮಾಲೂರ ಪಕ್ಕ ಕೋಸಂಬರಿಯೆ ಸವಿಬೆಲ್ಲಕಾಲ ನೂಕಿದಿರಲ್ಲ ಕಮಲಾತ್ಮವೆನನ್ನ ಹೃದಯದಿಂದ ನಿಮ್ಮ ಹೃದಯಕ್ಕೆ ಶುಭೋದಯ ಸುತನ ಭಂಡಾರವನು ಬರಿದು ಮಾಡುವ ತಂದೆಸುತನ ಏಳ್ಗೆಯನು ಸಹಿಸದ ತಾಯಿಯುಜತನದಲಿ ಸೋದರನ ಹಾರೈಸದಿಹ ತಂಗಿಕ್ಷಿತಿಯೊಳಗೆ ಸತ್ತಂತೆ ಕಮಲಾತ್ಮವೆ

ನನ್ನ ಹೃದಯದಿಂದ ನಿಮ್ಮ ಹೃದಯಕ್ಕೆ Read Post »

You cannot copy content of this page

Scroll to Top