ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕೆ.ಶಶಿಕಾಂತ ಕವಿತೆ-ಹಾರೈಕೆ

ಕಾವ್ಯ ಸಂಗಾತಿ ಹಾರೈಕೆ ಕೆ.ಶಶಿಕಾಂತ ಯಾರ ಸೋಲೋಯಾರ ಗೆಲುವೋಯಾರ ನೋವೋಯಾರ ನಲಿವೋಬದುಕಿಗಾಗಲಿ ವಿಜಯವುಯಾರ ಸಾವೋಯಾರ ಹುಟ್ಟೋಯಾರ ಕೊಲೆಯೋಯಾರ ಹಬ್ಬವೋಬಾಳಿಗಿರಲಿ ಸಕಲ ಭಾಗ್ಯವು ಕೊಡಲಿ ಗರಗಸಮಚ್ಚು ಖಡ್ಗವುಹಸಿರನಳಿಯಲುಉಸಿರ ತೆಗೆಯಲುಬೇಡವೆಂಬುದು ತಿಳಿಯಲಿ ಅಳೆದು ತೂಗುವಸೇರು ತಕ್ಕಡಿಒಳಿತು ಕೆಡುಕಿನಸೈರಣೆಯ ನೀಡಲಿಎಬ್ಬಿ ತೆಗೆಯುವಹಾರಿ ಗುದ್ದಲಿಅಗೆದು ಹಾಕಲಿಕೊಳೆ ಕಸವನುಮುಂದೆ ತಳ್ಳಲಿಸಿಲುಕಿದ ಬಡ ಬಾಳನು ಗಿಡಮರದ ಬೆಳೆಯುಜೀವಪ್ರೀತಿ ಸಿರಿಯುನೆಲದ ತುಂಬಾ ಹಬ್ಬಲಿಸೊಕ್ಕು ಬಿಂಕದ, ಕಾಕು ಬುದ್ಧಿಯಹಲವು ವೈರಗಳಳಿಯಲಿಭೇದವಳಿದು,ಎಲ್ಲರನು ಸೆಳೆದುಬನ್ನಿಬನ್ನಿರೆಂದು ಕರೆಯುತಲಿ ಬಾಳುನೂರು ಸೀಮೆಯ ಮೀರಲಿಹಬ್ಬವಾಗಲಿ ‘ವಿಜಯ ದಶಮಿ’ಯುಸೋಲು ಶಬ್ದವು ಅಳಿಯಲಿ.

ಕೆ.ಶಶಿಕಾಂತ ಕವಿತೆ-ಹಾರೈಕೆ Read Post »

ಕಾವ್ಯಯಾನ

ದೇವರಾಜ್ ಹುಣಸಿಕಟ್ಟಿ-ಸತ್ತ ಚಂದ್ರಮನ ಶವ ಯಾತ್ರೆ

ಕಾವ್ಯಸಂಗಾತಿ ಸತ್ತ ಚಂದ್ರಮನ ಶವ ಯಾತ್ರೆ ದೇವರಾಜ್ ಹುಣಸಿಕಟ್ಟಿ ಪಡಸಾಲೆಯಲ್ಲಿ ಚಂದ್ರಮಸತ್ತು ಬಿದ್ದಿದ್ದಾನೆ…!!ಕರಾಳ ದಿನ ವೆಂದು….ಬೀದಿಗೊಂದು ಬಿದಿಗೆ ಚಂದ್ರನತಂದು….ನಡು ಬೀದಿಯಲ್ಲಿ ಇಟ್ಟು…ಮರೆತ ಮರೆವೆಗೆ ಮುಪ್ಪಡರಿದೆ…. ವರ್ಷಕ್ಕೊಮ್ಮೆ ಧೂಳು ಕೊಡವಿಜೋರು ಜೋರು ಅರಚುತ್ತೇವೆಚಂದ್ರನ ಹೊಳಪು ಹೊಳವು ಹೊರಮೈಯಲ್ಲ ಸ್ಪರ್ಶಿಸಿಒಂದಿಷ್ಟು ಬೀಗಿ ಬರುತ್ತೇವೆ…ಬೇಕಂತಲೇ ಒಳಗಿಳಿಯುವುದಮರೆಯುತ್ತೇವೆ…. ಮತ್ತದೇ…..ರಕ್ಕಸರ ರಾಕ್ಷಸರಾಟಕ್ಕೆಮೂಕ ಪ್ರೇಕ್ಷಕರಾಗುತ್ತೇವೆ… ಸತ್ತ ಚಂದ್ರಮನಿಗೂ ಗೊತ್ತು…ಆಟ ಹೊಸದಲ್ಲ ನೋಡಿ… ಗುಂಡು ಹೊಕ್ಕ ಗುಂಡಿಗೆಯಿಂದಲೇ“ಹೇ..ರಾಮ”…!ಎಂದವನಲ್ಲವೇ ಬಿಡಿ…!! ಚಂದ್ರಮನಿಗೋ ನೋಟಿನೊಳಗೆಉಳಿದ ಬಗೆ…ಸ್ಟ್ಯಾಂಪ್ ಗಳಲಿ ನಕ್ಕ ಬಗೆ…ಕಟಿಂಗ್ ಫ್ಲೆಕ್ಸ್ ಗಳಲಿ ಪ್ರೇಕ್ಷಕ ನಾದ ಬಗೆ….ಇನ್ನು ಹೆಚ್ಚೆಂದರೆ….ಊದುಬತ್ತಿ ಹೊಗೆ ಮೂಗಿಗಡರಿ….ಕೆಮ್ಮು ಬರುವಷ್ಟು ಚೆಂದದ ಪಟಗಳಲ್ಲಿ…ಅಲ್ಲಲ್ಲಿ ಅಳಿದುಳಿದ ಪಾಠಗಳಲ್ಲಿ..ಅಶ್ರು ತರ್ಪಣ ವಿಡಲು ಉಳಿಸಿದ್ದೀವಲ್ಲವೆಂದು…ಕಿಸಕ್ಕನೆ ನಕ್ಕು ಎದ್ದುಕೂರಬೇಕೆನ್ನಿಸಿದರೂ.. ಅಮವಾಸೆಯೇಇರಬೇಕೆಂದು ನೆನೆದು….ಮತ್ತೆ ಮೌನ ಪ್ರತಿ ಭಟನೆಗೆಜಾರುತ್ತಾನೆ…. ಸತ್ತ ಚಂದ್ರಮನಶವ ಯಾತ್ರೆ ಹೊರಡುತ್ತೆ ದಿನವೂನನ್ನೂರ ಕನಸಿನ ಬೀದಿಯಲ್ಲಿ…ಅದೇ ಅರೆ ಬೆತ್ತಲೆ ದೇಹ…ಒಂದಿಷ್ಟು ಎಂದೂ ಸಾಯದ ನಗು…ಮತ್ತದೇ….ಮುಪ್ಪಡರದ ವೇದನೆ ಹೊತ್ತು….ಹೂಳಲಾಗದ ಸುಡಲಾಗದಮತ್ತೇನೂ ಮಾಡಿದರೂ ಉಳಿದು ಬಿಡುವಚಂದಿರನ ಬಿತ್ತಿರುವನನ್ನವರ ಎದೆಯ ನೆಲದಲ್ಲಿ…ಒಂದಿಷ್ಟೇ ಇಷ್ಟು ನೆತ್ತರ ಕಂಬನಿ ತೆತ್ತು…..!

ದೇವರಾಜ್ ಹುಣಸಿಕಟ್ಟಿ-ಸತ್ತ ಚಂದ್ರಮನ ಶವ ಯಾತ್ರೆ Read Post »

You cannot copy content of this page

Scroll to Top