ವಸುಂಧರಾ ಕದಲೂರು ಕವಿತೆ-ಮುಖ್ಯ- ಅಮುಖ್ಯದಾಟ
ಕಾವ್ಯ ಸಂಗಾತಿ ವಸುಂಧರಾ ಕದಲೂರು. ಮುಖ್ಯ- ಅಮುಖ್ಯದಾಟ ಮೇಲುಕೀಳಾಟದ ಯುದ್ಧ ಯಾವತ್ತೂಅಮುಖ್ಯ: ಈ ಹೊತ್ತಿನ ತುತ್ತು, ಒಲೆ ಹೊತ್ತಿಅನ್ನವೋ ಗಂಜಿಯೋ ಬೆಂದರಾಗುತ್ತಿತ್ತುಇದೇ ಸತ್ಯದ ಮುಖ್ಯ ಬಾಬತ್ತು ಕಣ್ಣಾಮುಚ್ಚೇ ಚದುರಂಗ ಆಡಿaದಾಳಹೂಡಿ ಗಾಳಹಾಕಿ ಕೋಟೆಗೋಡೆಕಟ್ಟಿ – ಕೆಡವಿ; ಕೆಟ್ಟ ಆಟಹೂಡಿ ಸಿಂಹಾಸನಆರೋಹಣದ ಹಿಂದೆಯೇ ಅಧಃಪತನನೋಡಿ, ಇದು ಅಮುಖ್ಯದಾಟ ಎಂದರಿವಾಗುವಮುನ್ನ ಶಿರ ಬಾಗಿದರೆ ಮುಗಿಯಿತು ಜೀವದಾಟ! ಯುದ್ಧ, ಕಂದನ ತೊಟ್ಟಿಲ ಮೇಲೆ ತೂಗುಬಿದ್ದಘಟಸರ್ಪ; ಕಕ್ಕಿದರೂ ಕುಕ್ಕಿದರೂ ಆಪತ್ತೇಬದುಕು ಕಸಿದಂತೆ, ಆಸೆ ಕುಸಿದಂತೆಆಜೀವನ ನರಳಾಟ; ತಾಯಂದಿರ ಮಡಿಲಿಗೆಹಾಲೂಡುವ ಎದೆಗೆ ಯುದ್ಧವೆಂಬುದುಯಾವತ್ತೂ ಅಮುಖ್ಯದಾಟ. ಮಕರಂದಕಾಡುವ ದುಂಬಿಯಾಟ; ಮಳೆಮೋಡಕೆತಡೆಯೊಡ್ಡುವ ಬೆಟ್ಟಸಾಲು, ಹಸಿದೊಡಲಿ ತುಂಬಿಸುವಅವ್ವನ ರೊಟ್ಟಿ ದುಡಿಮೆಗಾರ ಅಪ್ಪನ ಗಟ್ಟಿ ರಟ್ಟೆ ನಡುವೆಯುದ್ಧ ಮುಖ್ಯ ಎಂದದ್ದು ಯಾರು ಯಾವತ್ತಿಗೆ?!
ವಸುಂಧರಾ ಕದಲೂರು ಕವಿತೆ-ಮುಖ್ಯ- ಅಮುಖ್ಯದಾಟ Read Post »









