ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಾಗರಾಜ ಬಿ.ನಾಯ್ಕಕವಿತೆ-ಅನಾಗತ

ಕಾವ್ಯ ಸಂಗಾತಿ ನಾಗರಾಜ ಬಿ.ನಾಯ್ಕ ಅನಾಗತ ಅನಾಗತ ದಿನಗಳ ಕುಣಿತತಲೆಯಲ್ಲಿ ನೂರು ಭಾವ ಭವಿತಮಾತು ಕೃತಿ ನಗು ಅಳುಎಲ್ಲವೂ ಸುತ್ತಿದ ಮಿಳಿತಒಂದಿಷ್ಟು ಅನುಭವ ಅನುಭಾವಸೇರಿದರೆ ನಾಲ್ಕು ದಿನಕೆ ಉಳಿಕೆಕಳೆದದ್ದು ಹೆಚ್ಚು ಪಡೆದದ್ದು ಕಡಿಮೆಎಲ್ಲಾ ಮುಗಿದರೆ ನಾಳೆ ಚಿಂತೆಅರ್ಥ ಅನರ್ಥಗಳ ಪ್ರಶ್ನೆ ಉತ್ತರಕೊನೆಗೊಮ್ಮೆ ನಮ್ಮದೇ ಸಾಂತ್ವನಬರಲಿರುವ ದಿನಗಳ ಕುತೂಹಲಏಕೆ ಹೇಗೆ ಎಂದರೂ ನಿರ್ದಿಷ್ಟವಿಲ್ಲಬದುಕೆಂದರೆ ಎಲ್ಲವೂ ಸುಪ್ತಅಂತರಂಗದಿ ಕುಳಿತು ನಗುವ ಭಾವಸರಿಸುಮಾರು ಮಾತು ಜೀವಂತಇರಲು ಇರದಿರಲು ಜೀವದ ಧಾವಂತಸ್ಪಷ್ಟ ಹೆಜ್ಜೆಗೆ ಅದರದೇ ಉತ್ತರಕಾಯುವುದು ಬದುಕಿನ ಕಾತರದಿನ ಕ್ಷಣಗಳ ಉಲ್ಲಸಿತ ಮನಬರಲಿ ಬರವಿಲ್ಲದ ಸಂತಸದ ದಿನ ನಾಗರಾಜ ಬಿ.ನಾಯ್ಕ

ನಾಗರಾಜ ಬಿ.ನಾಯ್ಕಕವಿತೆ-ಅನಾಗತ Read Post »

ಕಾವ್ಯಯಾನ

ಲಕ್ಷ್ಮೀದೇವಿ ಪತ್ತಾರ,ಹೊಸ ವರ್ಷದ ಆಗಮನ

ಕಾವ್ಯ ಸಂಗಾತಿ ಲಕ್ಷ್ಮೀದೇವಿ ಪತ್ತಾರ, ಹೊಸ ವರ್ಷದ ಆಗಮನ ಬಲಗಾಲಿಟ್ಟು ಒಳಗೆ ಬಾಮದುಮಗಳಂತೆ ನವ ವರುಷಸೆಡಗರ ಸಂಭ್ರಮದಿ ನಿನಗೆ ಸ್ವಾಗತನಿನ್ನನಾಗಮನದಿಂದ ನಮಗಾಗುವುದು ಬಲು ಹರುಷ ಶುಭ ಶಕುನದ ರೂಪವಾಗಿ ಬರುತ್ತಿದೆಈ ಹೊಸ ವರುಷಎಲ್ಲೆಲ್ಲೂ ಇರುವ ರಾಮನುಅಯೋಧ್ಯೆಪುರದಲಿ ನೆಲೆಸುವನುಎಂತಹ ಅಪೂರ್ವ ರಸನಿಮಿಷ ! ನವಯುಗದ ಕಾಲ ಗುಣದಿಂದಎಲ್ಲೆಲ್ಲೂ ಶಾಂತಿ ಸೌಹಾರ್ದತೆ ನೆಲೆಸಲಿಸಮೃದ್ಧಿ ಮನೆ ಮಾಡಲಿಭಾರತಮಾತೆಗೆ ಮತ್ತಷ್ಟು ಬಲ ಬರಲಿಭಾರತೀಯರು ಎಲ್ಲೆಡೆ ಮೆರೆಯಲಿ ಹುಟ್ಟುವ ಪ್ರತಿ ಹೊಸ ವಿಷಯವಸ್ತುನಿರೀಕ್ಷೆ,ಆಕರ್ಷಣೆಯ ತುತ್ತುಆಕರ್ಷಣೆ , ನಿರೀಕ್ಷೆಯ ಕನಸುಉತ್ಸಾಹ ,ಉಲ್ಲಾಸ ಬದುಕಿನ ಸ್ವತ್ತು ಮುದ್ದು ಕಂದನಂತೆ ಅಂಬೆಗಾಲಿಟ್ಟುಬರುತ್ತಿರುವ ಹೊಸ ವರುಷವೆನಿನ್ನಿಂದ ಎಲ್ಲರ ಮನೆಮನಗಳುಆನಂದ ,ಸಂಭ್ರಮ ,ಸಮೃದ್ಧಿಯ ಗೂಡಾಗಲಿ. ಲಕ್ಷ್ಮೀದೇವಿ ಪತ್ತಾರ

ಲಕ್ಷ್ಮೀದೇವಿ ಪತ್ತಾರ,ಹೊಸ ವರ್ಷದ ಆಗಮನ Read Post »

ಕಾವ್ಯಯಾನ

ರಸ ಋಷಿ ಕುವೆಂಪು ನೆನಪಿನಲ್ಲಿ,ಶ್ರೀವಲ್ಲಿ ಶೇಷಾದ್ರಿ ಕವಿತೆ-ಚೇತನ ಧಾರೆ ಕುವೆಂಪು

ಕುವೆಂಪು ನೆನಪಲ್ಲಿ

ಶ್ರೀವಲ್ಲಿ ಶೇಷಾದ್ರಿ

ಚೇತನ ಧಾರೆ ಕುವೆಂಪು

ರಸ ಋಷಿ ಕುವೆಂಪು ನೆನಪಿನಲ್ಲಿ,ಶ್ರೀವಲ್ಲಿ ಶೇಷಾದ್ರಿ ಕವಿತೆ-ಚೇತನ ಧಾರೆ ಕುವೆಂಪು Read Post »

ಕಾವ್ಯಯಾನ

ರಸ ಋಷಿ ಕುವೆಂಪು ನೆನಪಿನಲ್ಲಿ ಡಾ ಕಸ್ತೂರಿ ದಳವಾಯಿಕವಿತೆ-ವಿಶ್ವಮಾನವನಿಗೆ ನಮನ

ಕುವೆಂಪು ನೆನಪಿನಲ್ಲಿ

ಡಾ ಕಸ್ತೂರಿ ದಳವಾಯಿ

ವಿಶ್ವಮಾನವನಿಗೆ ನಮನ

ರಸ ಋಷಿ ಕುವೆಂಪು ನೆನಪಿನಲ್ಲಿ ಡಾ ಕಸ್ತೂರಿ ದಳವಾಯಿಕವಿತೆ-ವಿಶ್ವಮಾನವನಿಗೆ ನಮನ Read Post »

ಕಾವ್ಯಯಾನ

ರಸ ಋಷಿ ಕುವೆಂಪು ನೆನಪಿನಲ್ಲಿ,ನಳಿನಾ_ದ್ವಾರಕನಾಥ್ ಕವಿತೆ

ಕುವೆಂಪು ನೆನಪಿನಲ್ಲಿ ನಳಿನಾ_ದ್ವಾರಕನಾಥ್ ಕುವೆಂಪು ಮಲೆನಾಡಿನ ಸೀಮೆಯಲ್ಲಿ ಹುಟ್ಟುಕರುನಾಡಿಗೆ ಸಾಹಿತ್ಯಸೇವೆ ಕೊಟ್ಟುಸಹ್ಯಾದ್ರಿಯ ಸೌಂದರ್ಯ ಸವಿಯುತಸುಂದರ ಕಾವ್ಯಧಾರೆಯನ್ನು ಹರಿಸುತ ರಸ ಋಷಿಯಾದರು ಕನ್ನಡದ ಕುವರಭುವಿಯೊಳು ನಿಮ್ಮ ಹೆಸರು ಅಮರಶ್ರೀ ರಾಮಾಯಣ ದರ್ಶನಂ ಬರೆದರುಜ್ಞಾನಪೀಠಕ್ಕೆ ಪ್ರಥಮ ಭಾಜನರಾದರು ಓ ನನ್ನ ಚೇತನ ಆಗು ನೀ ಅನಿಕೇತನನಮ್ಮೀ ನಾಡಿನ ಶ್ರೇಷ್ಠ ಕವಿಗೀ ನಮನವಿಶ್ವಮಾನವ ಸಂದೇಶದ ಅಭಿಯಾನವೈಚಾರಿಕತೆ ನಾಟಕಗಳೊಂದಿಗೆ ಯಾನ ರಾಷ್ಟ್ರ ಕವಿ ಎಂಬುವ ಬಿರುದಿನಿಂದಕುವೆಂಪು ಎಂಬ ಕಾವ್ಯನಾಮದಿಂದಹೆಸರಾದರು ಕನ್ನಡಮ್ಮನ ಕಂದನಾಗಿಉಸಿರಾಯಿತು ಕನ್ನಡವೇ ಜೀವವಾಗಿ ಮನುಜಮತ ವಿಶ್ವಪಥದ ಘೋಷಣೆಕನ್ನಡ ಕನ್ನಡಿಗರಿಗೆ ಮೊದಲ ಮನ್ನಣೆಭಾಷೆಯ ಮರೆತವನಾರು ಕನ್ನಡಿಗನಲ್ಲಕನ್ನಡಕ್ಕೆ ನಮಿಸಿ ನಡೆಯಲು ಸೋಲಿಲ್ಲ ಕವಿಶೈಲವಾಯ್ತು ಜನಿಸಿದ ಕುಪ್ಪಳ್ಳಿಯುಕನ್ನಡ ಸಾಹಿತ್ಯದ ಅಗ್ರಮಾನ್ಯ ಕವಿಯುಎಲ್ಲಾದರೂ ಇರು ನೀ ಎಂತಾದರೂ ಇರುಎಂದೆಂದಿಗೂ ಕನ್ನಡವಾಗಿರೆಂದು ಸಾರಿದರು ನಳಿನಾ_ದ್ವಾರಕನಾಥ್

ರಸ ಋಷಿ ಕುವೆಂಪು ನೆನಪಿನಲ್ಲಿ,ನಳಿನಾ_ದ್ವಾರಕನಾಥ್ ಕವಿತೆ Read Post »

You cannot copy content of this page

Scroll to Top