ಗಜಲ್
ನನ್ನ ದೂರಾಗಿಸಿ ನೀ ಮನಸಾರೆ ಸುಖದಿ ಬಾಳಲಾರೆ ಬಲ್ಲೆ ನಿನ್ನ ಹೃದಯವನ್ನು
ಒಂದೇ ದಿನವಾದರೂ ಜೊತೆ ಬಾಳಿದರೆ ಈ ಜನ್ಮ ಪರಿಪೂರ್ಣವೆಂದು ನಂಬಿರುವೆ
ಗಜಲ್ ಅಂತರಂಗದ ಪ್ರೀತಿಯ ದೀಪ ಬೆಳಗಬೇಕಿದೆ ತೂಗುದೀಪವೇವಿರಹವು ಮಂಜಿನ ಹೂವಾಗಿ ಕರಗಬೇಕಿದೆ ತೂಗುದೀಪವೇ ಒಲುಮೆಯ ಮಧುರ ನಕ್ಷತ್ರಗಳ ಎಣಿಕೆಯ ಎಷ್ಟೋ ರಾತ್ರಿಗಳು ಕಳೆದಿವೆಹೃದಯಗಳ ಬಡಿತ ಕೇಳುತ ಕರಗಳಲ್ಲಿ ಬೆರೆಯಬೇಕಿದೆ ತೂಗುದೀಪವೇ ಬೇವಫಾ ನಾವಿಬ್ಬರೂ ಅಲ್ಲ ಜನುಮಾಂತರ ಬಂಧನ ಬದಲಾಗುವುದೆಸ್ಪಂದಿಸಿದ ಭಾವ ರಾಗ ರಾಗಿಣಿಯರು ಬಾಳಬೇಕಿದೆ ತೂಗುದೀಪವೇ ಚಾತಕ ಪಕ್ಷಿಯಂತೆ ಕಾಯುತಿರುವೆ ನಿನ್ನೊಲುಮೆಯ ಗುಟುಕಿಗಾಗಿಹೃದಯಗಳಲ್ಲಿ ಮೂಡಿದ ಪ್ರೀತಿಯು ನೀಗಬೇಕಾಗಿದೆ ತೂಗುದೀಪವೇ ಆಮಂತ್ರಣ ನೀಡದೆ ಬರುವ ಸಾವು ಬರುವ ಮುನ್ನವೇ ಮಾಜಾದುಃಖ ದುಮ್ಮಾನ ಬಿಟ್ಟು ಒಂದಾಗಬೇಕಿದೆ ತೂಗುದೀಪವೇ ಮಾಜಾನ್ ಮಸ್ಕಿ
ಕಾವ್ಯ ಸಂಗಾತಿ ಗಜಲ್ ಪ್ರಕಾಶಸಿಂಗ್ ರಜಪೂತ್ ಜೀವಿಗೆ ನೋವಿನಾ ಅಭ್ಯಾಸ ಬೇಕುಜೀವನಕ್ಕೆ ತನ್ನದೇ ಇತಿಹಾಸ ಬೇಕು ಊಟದಾ ಅತಿರೇಕ ರೋಗಕ್ಕೆ ಮೂಲವೋದೇಹಕ್ಕೆ ಅದಕ್ಕಾಗಿ ಉಪವಾಸ ಬೇಕು ಕಣ್ಣಲ್ಲಿ ಹೊಸತನದ ಬಯಕೆ ನಿತ್ಯವಿಲ್ಲಿದೇಹಕ್ಕೆ ಆಕರ್ಷಿಸುವ ವಿನ್ಯಾಸ ಬೇಕು ನಿತ್ಯವೆ ಜಗದಿ ಬದಲಾವಣೆಯ ಬಯಕೆಅರಳಲು ಮನ ಹೂವಿಗೆ ಮಧುಮಾಸ ಬೇಕು ಬಿಸಿಲುಗಾಳಿಯ ಮಧ್ಯೆ ತೃಷೆಯು ತಣಿಸಲುಮಳೆಯಲಿ ಮನ ನೆನೆಯುವ ಉಲ್ಲಾಸ ಬೇಕು ಆಶಾ ಚಕ್ರದಿ ತಿರುಗಿ ಸೋತಿದ ಚಾಂಚಲ್ಯಕೆ“ಪ್ರಕಾಶ”ಕೊನೆಯ ಘಟ್ಟಲಿ ಸನ್ಯಾಸ ಬೇಕು
ಕಾವ್ಯ ಸಂಗಾತಿ ಗಜಲ್ ಕನವರಿಸುತಿದೆ ಕಳೆದ ಬಾಲ್ಯವು ಹೃದಯದಲಿ ಮರೆಯಲಾದೀತೆ ಹೇಳಿ ಒಮ್ಮೆರಿಂಗಣಿಸುತಿದೆ ಸವಿ ನೆನಪುಗಳು ಬಾಳ ಪಥದಲಿ ಅಳಿಸಲಾದೀತೆ ಹೇಳಿ ಒಮ್ಮೆ ! ಸವೆದ ಹೆಜ್ಜೆ ಹೆಜ್ಜೆಗಳಲೂ ಹಸನಾಗುತಿದೆ ಮಧುರ ಗುರುತುಗಳು ತುಂಟತನದಿಕೂಡಿ ಕಳೆದ ಆಟಗಳವು ಹೆಚ್ಚು ಗೆಳೆತನದಲಿ ತೊರೆಯಲಾದೀತೆ ಹೇಳಿ ಒಮ್ಮೆ ! ಶೃಂಗರಿಸಲೇ ಮನದ ಹೊತ್ತಗೆಯನು ಬಿತ್ತುತ ಸವಿಭಾವಗಳ ಚಿತ್ತಾರವ ಲಾಸ್ಯದಿಆಪ್ತಭಾವಗಳ ಮೆರೆಸಲೇ ನೆನಹುಗಳ ದಿಬ್ಬಣದಲಿ ಬಿಡಲಾದೀತೆ ಹೇಳಿ ಒಮ್ಮೆ ! ಆಡಿ ಓಡುತ ಬಿದ್ದು ಏಳುತ ಕಲಿತ ಪಾಠಗಳವು ಹಸಿರು ಕಂಗಳಲಿ ಅರಳಿ ಚೆಲ್ವಲಿಸ್ವಪ್ನಗಳ ಕಾಣುತಲಿ ನಲಿದಿದೆ ಬಾಳ ಯಾಣದಲಿ ಕಳಚಲಾದೀತೆ ಹೇಳಿ ಒಮ್ಮೆ ! ನವ್ಯತೆಯ ಬಿನ್ನಾಣ ಬರಲಿ ನೂರೆಂಟು ಬಾಲ್ಯವು ಸದಾ ಚೊಕ್ಕ ‘ನಯನಾ’ ಳಿಗೆಬಾಳ ಕಣ್ಮಣಿಯಾಗಿ ಬಾಲ್ಯ ಹಸಿರು ಮನದಲಿ ಎಸೆಯಲಾದೀತೆ ಹೇಳಿ ಒಮ್ಮೆ !! ನಯನ. ಜಿ. ಎಸ್
You cannot copy content of this page