ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ವಿಶ್ವ ಗುಬ್ಬಚ್ಚಿಗಳ ದಿನ

ಎಲ್ಲಿ ಹೋದವು ಈ ಗುಬ್ಬಚ್ಚಿಗಳು..! ಕೆ.ಶಿವು ಲಕ್ಕಣ್ಣವರ ಎಲ್ಲಿ ಹೋದವು ಈ ಗುಬ್ಬಚ್ಚಿಗಳು..! ಮಾರ್ಚ್ ೨೦ ವಿಶ್ವ ಗುಬ್ಬಚ್ಚಿಗಳ ದಿನ. ಅದಕ್ಕಾಗಿ ಆ ನೆಪದಲ್ಲಿ ಈ ಗುಬ್ಬಚ್ಚಿಗಳ ಕುರಿತಾದ ಈ ಲೇಖನ… ಒಂದು ಕಾಲದಲ್ಲಿ ಬಹುತೇಕ ಹಳ್ಳಿಮನೆಗಳಲ್ಲಿ ಬೆಳಗ್ಗಿನ ಅಲಾರ್ಮ್ ಎಂದರೆ ಗುಬ್ಬಚ್ಚಿಗಳ ಚಿಲಿಪಿಲಿಯೇ… ಈಗಲೂ ಬೇರೆ ಊರು ಇರಲಿ, ನಮ್ಮ ಊರಿನಲ್ಲಿ ಅಲ್ಲಲ್ಲಿ ಮನೆಗಳಲ್ಲಿ ಗುಬ್ಬಚ್ಚಿಗಳು ಗೋಡು ಕಟ್ಟುತ್ತಿವೆ. ವಾಸಿಸುತ್ತಿವೆ. ಅಷ್ಟಿಷ್ಟು ಇರುವ ಈ ಗುಬ್ಬಚ್ಚಿಗಳು ಹಾಗೋ-ಹೀಗೋ ಹೇಗೋ ವಾಸಿಸುತ್ತವೆ… ಒಂದಿಷ್ಟು ದಿನಗಳ ವರೆಗೆ ಕಣ್ಮರೆಯಾಗಿದ್ದ ಈ ಗುಬ್ಬಚ್ಚಿಗಳು ಈಗ ಒಂದಿಷ್ಟು ನೋಡಲು ಸಿಗುತ್ತಿವೆ. ಅದೇ ಪುಣ್ಯ. ಈ ಗುಬ್ಬಚ್ಚಿಗಳು ಮಣ್ಣಿನ ಮನೆಗಳ ಜಂತಿಯ ಬಿರುಕುಗಳಲ್ಲಿ ಅಥವಾ ಅಲ್ಲಲ್ಲಿ ಮನೆಗಳ ಸಂದಿ-ಗೊಂದಿಗಳಲ್ಲಿ ಗೂಡು ಕಟ್ಟಿಕೊಂಡು ವಾಸಿಸುತ್ತವೆ. ಈ ಗುಬ್ಬಚ್ಚಿಗಳು ವಾಸಿಸುವ ಜಂತಿಯ ಬಿರುಕುಗಳು ಅಥವಾ ಸಂದಿ-ಗೊಂದಿಗಳಲ್ಲೇ ತಮ್ಮ ವಂಶೋದ್ಧಾರದ ಪಡಿಪಾಟಲನ್ನು ತೀರಿಸಿಕೊಳ್ಳುತ್ತಿವೆ. ವಂಶೋದ್ಧಾರವೆಂದರೆ ಅದೇ ಗೂಡುಗಳಲ್ಲಿ ತತ್ತಿ(ಮೊಟ್ಟೆ) ಇಡುವುದು, ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುವುದು, ಆ ಮರಿ ತುಸು ರಕ್ಕೆ:ಪುಕ್ಕ ಮೂಡಿದೊಡನೆ ಹಾರುವುದು. ಹೀಗೆ ವಂಶೋದ್ಧಾರದ ಸಂಸ್ಕಾರದಲ್ಲಿ ಗುಬ್ಬಚ್ಚಿಗಳು ಅಷ್ಟಿಷ್ಟಾಗಿ ಒಂದಿಷ್ಟು ಜೀವನ ಕಾಣುತ್ತಿವೆ … ಸಾಂದರ್ಭಿಕವಾಗಿ ಹೇಳುತ್ತೇನೆ, ಗುಬ್ಬಚ್ಚಿಗಳಂತೆ ನಮ್ಮ ಹಳ್ಳಿಯಲ್ಲಿ ಕಾಗೆ, ಗೂಬೆಗಳು, ಅಲ್ಲಲ್ಲಿ ಅಪರೂಪಕ್ಕೊಮ್ಮೆ ಕಾಣಸಿಗುವ ರತ್ನ ಪಕ್ಷಿ (ಹಳ್ಳಗಳಲ್ಲಿ ಈ ರತ್ನ ಪಕ್ಷಿಗೆ ಸಾಂಬಾರಗಾಗಿ ಅಂತಲೂ ಕರೆಯುತ್ತಾರೆ)ಗಳು, ಗೊರವಂಕಗಳು ಇತ್ಯಾದಿ ಪಕ್ಷಿಗಳು ಅಪರೂಪದ ಅತಿಥಿಯಂತೆ ಕಾಣಸಿಗುತ್ತವೆ… ಹೊಲ-ಗದ್ದೆ, ತೋಟಗಳಲ್ಲೂ ಗಣನೀಯವಾದ ಅಪರೂಪದ ಅತಿಥಿಯಾದರೂ ಇವೆ ಇವು. ಆದರೆ ಇವುಗಳ ಸಂಖ್ಯೆ ತೀರಾ ಗಣನೀಯವಾಗಿ ಇಳಿಮುವಾಗಿದೆ. ಅಂದರೆ ಈ ಪಕ್ಷಿಗಳೆಲ್ಲ ಮುಂದೊಂದು ದಿನ ಕನಸಿನಂತೆ ಆಗಬಹುದು. ಇವುಗಳೆಲ್ಲವೂ ಸರ್ವನಾಶವಾಗಲೂಬಹುದು… ಇದೆಲ್ಲ ಈಗ ಯಾಕೆ ಮಾತು ಬಂತಂದರೆ ಮಾರ್ಚ್ ೨೦ ವಿಶ್ವ ಗುಬ್ಬಚ್ಚಿಗಳ ದಿನವಾದ್ದರಿಂದ ಇದೆಲ್ಲ ನೆನಪಾಯಿತು… ಒಂದು ಮುಖ್ಯ ವಿಷಯವೆಂದರೆ ಈ ಗುಬ್ಬಚ್ಚಿಗಳು, ಕಾಗೆ, ಗೂಬೆಗಳೆಲ್ಲ ಕಾಂಕ್ರೀಟ್ ಕಾಡುಗಳಾದ ಪಟ್ಟಣ, ನಗರ, ಮಹಾನಗರಗಳಲ್ಲಿ ಕಾಣಸಿಗುವುದೇ ಇಲ್ಲ. ಅಂದರೆ ನಾಶವಾಗಿವೆ. ಮನುಷ್ಯ ತನ್ನ ಮಿತಿಮೀರಿದ ತೀವ್ರ ಸ್ವಾರ್ಥದಲ್ಲಿ ಈ ಉಳಿದ ಪ್ರಕೃತಿ ಸಹಜ ಪ್ರಾಣಿ-ಪಕ್ಷಿಗಳಿಗೆ ಜಾಗವೇ ಇಲ್ಲದಂತೆ ಮಾಡಿದ್ದಾನೆ..! ಇರಲಿ, ಮುಖ್ಯ ವಿಷಯಕ್ಕೆ ಬರುತ್ತೇನೆ ಈಗ. ಅದೇ ಗುಬ್ಬಚ್ಚಿಗಳ ವಿಷಯ… ಈ ಗುಬ್ಬಚ್ಚಿಗಳು ಸಂಗ್ರಹಿಸಿಟ್ಟ ಭತ್ತದ ಒಣಹುಲ್ಲುಗಳ ತೆನೆಯಲ್ಲಿ ಅಲ್ಲಲ್ಲಿ ಸಿಗುವ ಭತ್ತಗಳನ್ನು ಹುಡುಕುತ್ತ ಸಂಸಾರ ಸಮೇತ ಸುಪ್ರಭಾತ ಹಾಡುವುದು ಗುಬ್ಬಚ್ಚಿಗಳ ದಿನಚರಿಯ ಮೊಟ್ಟ ಮೊದಲ ಕೆಲಸ..! ಹೆಣ್ಣು ಗುಬ್ಬಿಯ ಗರ್ಭದಲ್ಲಿ ಪುಟ್ಟದೊಂದು ಗುಬ್ಬಚ್ಚಿ ಮೊಳೆಯುತ್ತಿದೆ ಎಂಬುದು ತಿಳಿಯುತ್ತಿದ್ದಂತೆಯೇ ಅವುಗಳ ತಯಾರಿ ಶುರು. ಗಂಡು ಗುಬ್ಬಿಗಂತೂ ಆಗ ಎಲ್ಲಿಲ್ಲದ ಕೆಲಸ. ಒಂದೊಂದೇ ಹುಲ್ಲುಕಡ್ಡಿಗಳನ್ನು ಆರಿಸಿ ತಂದು ಗೂಡನ್ನು ಕಟ್ಟಿ ಜೋಪಾನ ಮಾಡುವುದೇನು. ಕಾಳು ಕಡಿ ಸಂಗ್ರಹಿಸುವುದೇನು. ಆ ಸಂಭ್ರಮ ಅವಕ್ಕೇ ಗೊತ್ತು..! ಮೊಟ್ಟೆಗೆ ಸರದಿಯಂತೆ ಕಾವುಕೊಡುವ ಜೋಡಿ! ಮನೆಯೊಡತಿ ಅಕ್ಕರೆಯಿಂದ ಹಾಕಿದ ಅಕ್ಕಿ ಕಾಳುಗಳನ್ನೆಲ್ಲ ತನ್ನ ಪುಟ್ಟ ಕೊಕ್ಕಲ್ಲಿ ಆರಿಸಿಕೊಂಡು, ಗೂಡಲ್ಲಿ ರಚ್ಚೆಹಿಡಿದ ಮರಿಗಳ ಬಾಯಿಗೆ ಗುಟುಕಿಡುವ ಪರಿ. ಆಹಾ ಅದನ್ನು ನೋಡಿಯೇ ಆನಂದಿಸಬೇಕು… ಆದರೆ. ಆ ಮಧುರ ಕ್ಷಣಗಳು ಇನ್ನು ಮರೀಚಿಕೆ ಮಾತ್ರವಾ…? ಮನುಷ್ಯನ ಸಹವಾಸದಲ್ಲೇ ಬದುಕುತ್ತಿದ್ದ ಮನೆಗುಬ್ಬಿಗಳು ‘ಈ ಮನುಷ್ಯರ ಸಹವಾಸವೇ ಸಾಕು’ ಎಂದು ಹಳ್ಳಿಮನೆ ಬಿಟ್ಟು ಪಟ್ಟಣ ಸೇರಿದ್ದೇವೆಯೇ..? ಹಾಗೇನೂ ಇಲ್ಲ ಎಂದಾದರೆ ಇದ್ದ ಗುಬ್ಬಿಗಳೆಲ್ಲ ಎಲ್ಲಿ ಹೋದವು? ಹಳ್ಳಿಗಳಲ್ಲಿ ಪ್ರತಿ ಮನೆಯಲ್ಲೂ ಏನಿಲ್ಲವೆಂದರೆ ಕನಿಷ್ಠ 10-15 ಸಂಖ್ಯೆಯಲ್ಲಿರುತ್ತಿದ್ದ ಗುಬ್ಬಚ್ಚಿ ಮಾಯವಾಗಿದ್ದೇಕೆ..? ಅಳಿವಿನಂಚಿಗೆ ಸರಿಯುತ್ತಿರುವ ‘ಮನೆಗುಬ್ಬಿ’ಗಳನ್ನು ರಕ್ಷಸಿ ಎಂದು ಕೂಗಿ ಹೇಳುವುದಕ್ಕಾಗಿ ಇಂದು ‘ವಿಶ್ವ ಮನೆ ಗುಬ್ಬಿಗಳ ದಿನ’ವನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷ ಮಾ.20 ರಂದು ಆಚರಣೆಗೊಳ್ಳುವ ಈ ದಿನದಂದು ಗುಬ್ಬಿಗಳ ಸಂತತಿಯನ್ನು ರಕ್ಷಿಸುವುದಕ್ಕೆ ಪಣತೊಡಲಾಗುತ್ತದೆ… ಮನುಷ್ಯನ ಸ್ನೇಹಿತರಾದ ಈ ಗುಬ್ಬಿಗಳು ಚಿಂವ್ ಚಿಂವ್ ಎನ್ನುತ್ತ ಮನೆತುಂಬ ಓಡಾಡುತ್ತಿದ್ದರೇನೇ ಶೋಭೆ. ಆದರೆ ಕಾರಣಾಂತರಗಳಿಂದ ಅವುಗಳ ಸಂತತಿ ಕಡಿಮೆಯಾಗುತ್ತಿರುವುದು ಆತಂಕ ಮೂಡಿಸಿದೆ… ಎಲ್ಲಿ ಹೋದವು ಮುದ್ದು ಗುಬ್ಬಚ್ಚಿಗಳು..?– ಮನುಷ್ಯನ ಸಾಂಗತ್ಯದಲ್ಲೇ ಬದುಕಲು ಬಯಸುತ್ತಿದ್ದ ಗುಬ್ಬಿಗಳು ಗೂಡು ಕಟ್ಟುತ್ತಿದ್ದಿದ್ದೇ ಮನೆಯ ಮಾಡಿನ ಸಂದಿ-ಗೊಂದಿಗಳಲ್ಲಿ. ಸದಾ ಮನೆಯಲ್ಲೇ ಕೂತು, ಹೊರಗೆಲ್ಲೂ ಸುತ್ತದವರಿಗೆ ‘ಮನೆಗುಬ್ಬಿ’ ಎಂಬ ಉಪಮೇಯ ಈಗಲೂ ಚಾಲ್ತಿಯಲ್ಲಿದೆ. ಅಂದರೆ ಅಷ್ಟರ ಮಟ್ಟಿಗೆ ಗುಬ್ಬಚ್ಚಿಗಳು ಮನೆಯ ಸದಸ್ಯರೇ ಆಗಿ ಮನೆಯಲ್ಲುಳಿಯುತ್ತಿದ್ದವು. ಆದರೆ ಇತ್ತೀಚೆಗೆ ಹಳ್ಳಿ ಮನೆಗಳೂ ಥಾರಸಿಯಾಗಿ ಬದಲಾಗಿದ್ದು, ಮೊಬೈಲ್ ತರಂಗಗಳು ಗುಬ್ಬಚ್ಚಿಯ ಜೀವಕ್ಕೇ ಸಂಚಕಾರ ಎಂಬ ಆತಂಕ ಮುಂತಾದವೆಲ್ಲ ಸೇರಿ ಮುದ್ದು ಗುಬ್ಬಚ್ಚಿಗಳು ಕಣ್ಣಿಗೇ ಕಾಣದಂತೆ ಮಾಯವಾಗಿವೆ… ವಿಶ್ವವನ್ನು ಸುಂದರವಾಗಿಸಿದ ಗುಬ್ಬಚ್ಚಿಗಳು ವಿಶ್ವ ಗುಬ್ಬಿಗಳ ದಿನದಂದು ಈ ಪುಟ್ಟ ಪ್ರಭೇದವನ್ನು ರಕ್ಷಿಸಲು ಕೈಜೋಡಿಸೋಣ. ಅವುಗಳ ಚಿಲಿಪಿಲಿ ಸದ್ದು ಈ ವಿಶ್ವವನ್ನು ಮತ್ತಷ್ಟು ಸುಂದರವಾಗಿಸಿದೆ. ಅವುಗಳಿಗೆ ನೀರು, ಆಹಾರ, ನೆರಳು ನೀಡಿ ಸಲಹೋಣ… ಈ ಸುಂದರ ಗುಬ್ಬಿಗಳನ್ನು ರಕ್ಷಿಸೋಣ. ಇಲ್ಲವೆಂದರೆ ನಮ್ಮ ಮುಂದಿನ ತಲೆಮಾರಿಗೆ ಇವುಗಳ ಚಿತ್ರವನ್ನಷ್ಟೇ ತೋರಿಸಬೇಕಾದೀತು… ರಕ್ಷಣೆಯ ಕುರಿತು ಅರಿವು ಮೂಡಿಸೋಣ– ನಿಸರ್ಗದ ಸಣ್ಣಪುಟ್ಟ ಜೀವಿಗಳೂ ನಮ್ಮ ಬದುಕನ್ನು ಸುಂದರವಾಗಿಸಿವೆ. ನಿಸರ್ಗದ ಪ್ರತಿ ವಸ್ತುವನ್ನೂ, ಜೀವಿಯನ್ನೂ ರಕ್ಷಿಸುವುದು ನಮ್ಮ ಕರ್ತವ್ಯ. ವಿಶ್ವ ಗುಬ್ಬಿ ದಿನದಂದು ಈ ಪಕ್ಷಿಗಳ ರಕ್ಷಣೆಯ ಕುರಿತು ಅರಿವು ಮೂಡಿಸೋಣ… ಗುಬ್ಬಿಗಳ ಚಿಲಿಪಿಲಿ ಸದ್ದಿನಿಂದಲೇ ಈ ಜಗತ್ತು ಸುಂದರವಾಗಿದೆ. ಎಂದು ನನಗೆ ಹಲವು ಬಾರಿ ಅನ್ನಿಸುತ್ತದೆ. ಅವುಗಳಿಗೆ ನಮ್ಮ ಮನೆಯ ಒಂದು ಮಾಡಿನಲ್ಲಿ ಕೊಂಚ ಜಾಗ ಮಾಡಿಕೊಡೋಣ. ಅವುಗಳಿಗೆ ನೀರು, ಆಹಾರ ಒದಗಿಸೋಣ. ಈ ಬೇಸಿಗೆಯಲ್ಲಿ ಅವುಗಳ ರಕ್ಷಣೆ ನಮ್ಮ ಹೊಣೆ..! ಈ ಸಮತೋಲನದ ಗುಬ್ಬಚ್ಚಿಗಳು ಈಗ ಬೇಕಾಗಿದೆ..! ಇಂತಿಷ್ಟು ಹೇಳಿ ನನ್ನ ಮಾತು ಮುಗಿಸುತ್ತೇನೆ..!

ವಿಶ್ವ ಗುಬ್ಬಚ್ಚಿಗಳ ದಿನ Read Post »

ಇತರೆ

ಲಹರಿ

ಇಂದು ಬಾನಿಗೆಲ್ಲ ಹಬ್ಬ ಚಂದ್ರಪ್ರಭ ಬಿ. ಇಂದು ಬಾನಿಗೆಲ್ಲ ಹಬ್ಬ… ಕಳೆದ ದಶಕದ ಸಿನಿಮಾ ಹಾಡೊಂದರ ಈ ಸಾಲು ಮುಂದುವರಿದಂತೆ ಗಾಳಿ ಗಂಧ, ಭೂಮಿ, ಪುಷ್ಪ ಕುಲ, ಸುಮ್ಮನಿರದ ಮನಸು, ಓಡುತಿರುವ ವಯಸು, ಉಸಿರಿಗೆ ಉಕ್ಕುವ ಎದೆ,ಮರಳು..ಕಡಲು..ಅಪ್ಪುವಲೆ – ಎಲ್ಲಕ್ಕೂ ಇಂದು ಹಬ್ಬ ಎಂದು ಬಣ್ಣಿಸುತ್ತದೆ. ತನ್ನ fast beat (ದೃತ್ ಲಯ) ನಿಂದಾಗಿ ಇಡೀ ಗೀತೆಯೇ ಕಿವಿಗೆ ಹಬ್ಬವಾಗುವ ವಿಶಿಷ್ಟ ಹಾಡು ಇದು. ಒಂದರ್ಥಲ್ಲಿ ಹೀಗೆ ಮನಸ್ಸು ಖುಷಿಯಿಂದ ಕುಪ್ಪಳಿಸಿ ತನ್ನಷ್ಟಕ್ಕೆ ತಾನೇ ಸಾಲೊಂದನ್ನು ಗುನುಗತೊಡಗುವ ಗಳಿಗೆಯೇ ಅವರವರ ಪಾಲಿನ ಹಬ್ಬ. ಇನ್ನು ಕಾಲಕಾಲಕ್ಕೆ ಆಗಮಿಸುವ ಹಬ್ಬಗಳದೂ ಒಂದು ಸೊಬಗು, ಸೊಗಸು. ಬಹುತ್ವ ಪ್ರಧಾನವಾಗಿರುವ ಭಾರತದ ನೆಲದಲ್ಲಿ ಹೆಜ್ಜೆ ಹೆಜ್ಜೆಗೆ ಭಾಷೆ, ವೇಷ, ಉಡುಪು,ಆಹಾರ – ಪದ್ಧತಿ ಇತ್ಯಾದಿ ಎಲ್ಲದರಲ್ಲಿ ಅಭೂತಪೂರ್ವ ಬದಲಾವಣೆ ಕಂಡು ಬರುತ್ತದೆ. ಅಂತೆಯೇ ಈ ನೆಲದ ಮಕ್ಕಳು ಆಚರಿಸುವ ಹಬ್ಬಗಳಲ್ಲೂ ವೈವಿಧ್ಯತೆಯದೇ ಕಾರುಬಾರು. ಬಹುತೇಕ ಹಬ್ಬಗಳು ಋತುಮಾನಕ್ಕೆ ಅನುಗುಣವಾಗಿ ಬರುವಂಥವುಗಳಾಗಿವೆ. ಬಿರು ಬಿಸಿಲ ಬೇಸಗೆ ಕರಗಿ ಮೋಡ ಮಳೆಯಾಗುವ ಹೊತ್ತಲ್ಲಿ ಆಗಮಿಸುವುದು ಶ್ರಾವಣ. ಅಂಬಿಕಾತನಯದತ್ತರ “ಶ್ರಾವಣ ಬಂತು ನಾಡಿಗೆ ಬಂತು ಬೀಡಿಗೆ ಬಂತು ಕಾಡಿಗೆ…” ಗೀತೆಯನ್ನು ಕೇಳತೊಡಗಿದರೆ ಮುಗಿಲ ಸೆರೆಯಿಂದ ಮುಕ್ತವಾದ ಮಳೆ ಧಾರೆ ಧಾರೆಯಾಗಿ ಇಳೆಯನ್ನೆಲ್ಲ ತೋಯಿಸುತ್ತಿರುವಂತೆ ಭಾಸವಾಗುತ್ತದೆ. ವೈಶಾಖದ ಧಗೆಯಲ್ಲಿ ಬಿರುಕು ಬಿಟ್ಟ ಭುವಿ ವರ್ಷ ಧಾರೆಗೆ ಮೈತೆರೆದು ಬೆಟ್ಟ, ಬಯಲು,ನದಿ,ಕಣಿವೆ,ಗಿಡ ಮರ, ಪ್ರಾಣಿ ಪಕ್ಷಿ – ಎಲ್ಲವೆಂದರೆ ಎಲ್ಲರಿಗೂ ತೊಯ್ದು ತೊಪ್ಪೆಯಾಗುವ ಸಂಭ್ರಮ. ಹದಗೊಳಿಸಿದ ತನ್ನ ಭೂಮಿಯನ್ನು ಉತ್ತಿ ಬಿತ್ತಲು ಅಣಿಯಾಗುವ ರೈತ ಬಂಧು. ಸಾಲು ಸಾಲಾಗಿ ಬರುವ ಹಬ್ಬಗಳನ್ನು ಆಚರಿಸುವ ಸಡಗರದಲ್ಲಿ ಅವ್ವಂದಿರು.. ಗುಡಿ ಗುಂಡಾರಗಳಲ್ಲಿ ವಿಶೇಷ ಪೂಜೆ, ಅಲಂಕಾರ, ತೇರೆಳೆವ ಸಂಭ್ರಮ. ನಾಡಿಗೆ ದೊಡ್ಡದೆಂಬ ಹೆಗ್ಗಳಿಕೆಯ ನಾಗರ ಪಂಚಮಿ. ಜೀಕುವ ಜೋಕಾಲಿ, ಬಗೆ ಬಗೆಯ ಉಂಡಿ ತಂಬಿಟ್ಟು, ಹೋಳಿಗೆ. ಪಂಚಮಿಯನ್ನು ಹಿಂಬಾಲಿಸಿ ಬರುವ ಗಣೇಶ ಚತುರ್ಥಿ. ಅಬಾಲ ವೃದ್ಧರಾದಿ ಎಲ್ಲರಿಗೂ ಬೆನಕನನ್ನು ಅತಿಥಿಯಾಗಿ ಕರೆತಂದು ಕೂಡ್ರಿಸುವ, ಪೂಜಿಸುವ, ಮರಳಿ ಮತ್ತೆ ಕಳಿಸಿಕೊಡುವ ಸಂಭ್ರಮ. ಹೋಳಿಗೆ, ಕಡುಬು, ಮೋದಕಗಳ ಜತೆಗೆ ಪಟಾಕಿ ಸುಡುವ, ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಆಮೋದ ಪ್ರಮೋದ. ತಕ್ಕ ಮಟ್ಟಿಗೆ ಮಳೆ ಸುರಿದಿದ್ದಾದರೆ ರೈತನ ಮೊಗದಲ್ಲೂ ಒಂದು ಹೊಸ ಕಳೆ, ಭರವಸೆ. ಕಾಳು ಕಡಿ ತಕ್ಕೊಂಡು ಗೋಧಿ, ಜೋಳ ಬಿತ್ತಲು ಕಾಯುವ ಸಮಯದಲ್ಲಿ ನವರಾತ್ರಿ ಸಡಗರ. ದೇವಿ ಆರಾಧನೆ, ಪುರಾಣ ಪುಣ್ಯ ಕಥಾ ಶ್ರವಣ..ಮಹಾನವಮಿ, ವಿಜಯದಶಮಿ. ಗೋಧಿ ಹಚ್ಚ ಹಸಿರಿನಿಂದ ಕಂಗೊಳಿಸುವ ಹೊತ್ತಲ್ಲಿ ಸಾಲು ದೀಪಗಳ ಹೊತ್ತು ತರುವ ದೀಪಾವಳಿ. ಶ್ರಾವಣದ ಮೋಡಗಳೆಲ್ಲ ಚದುರಿ ಕಾರ್ತೀಕದ ಬೆಳಕಿನ ಗೂಡುಗಳ ಹಾವಳಿ. ಹೊಸ ಬಟ್ಟೆ ಖರೀಸುವ, ಸುಣ್ಣ ಬಣ್ಣ ಬಳಿದು ಮನೆ ಸಿಂಗರಿಸುವ, ಬಗೆ ಬಗೆ ಭಕ್ಷ್ಯ ಭೋಜ್ಯ ತಯಾರಿಸುವ, ಆ ಪೂಜೆ ಈ ಪೂಜೆ, ಅಂಗಡಿಗಳ ಹೊಸ ಖಾತೆಯ ಲೆಕ್ಕ, ಮಿತ್ರರು, ಬಂಧುಗಳನ್ನು ಭೇಟಿ ಮಾಡುವ, ಆನಂದಿಸುವ ರಸ ಗಳಿಗೆ. ಗೌರಿ ಹುಣ್ಣಿಮೆ, ಎಳ್ಳಮಾವಾಸ್ಯೆ, ಸಂಕ್ರಾಂತಿಯ ಸುಗ್ಗಿ ವೈಭವ. ‌ಚರಗ ಚೆಲ್ಲುವ ವಿಶಿಷ್ಟ ಆಚರಣೆ. ಭೂಮಿ ತಾಯಿಗೆ ಕೃತಜ್ಞತೆ ಸಲ್ಲಿಸುವ ರೈತ ಬಂಧುಗಳ ಅಪರೂಪದ ನಡೆ. ಎಳ್ಳು ಹೋಳಿಗೆ, ಸೇಂಗಾ ಹೋಳಿಗೆ, ಸಜ್ಜಿ ರೊಟ್ಟಿ, ಕಾರೆಳ್ಳು ಚಟ್ನಿ, ತರಾವರಿ ಪಲ್ಯಗಳನ್ನು ಬುತ್ತಿ ಕಟ್ಟಿಕೊಂಡು ಬೆಳೆಯ ನಡುವೆ ಕುಳಿತು ಉಣ್ಣುವ, ತೆನೆಗಟ್ಟಿದ ಕಾಳುಗಳನ್ನು ಸುಟ್ಟು ಸಿಹಿ ತೆನೆ ಸವಿಯುವ ಅನನ್ಯ ಕಾಲ. ಪ್ರಕೃತಿಯಲ್ಲೂ ಬದುಕಿನಲ್ಲೂ ಸಂಕ್ರಮಣವನ್ನು ಅರಸುವ ಮನುಜ ಸಹಜ ಹುಡುಕಾಟ. ಹಿಂಬಾಲಿಸುವ ತೆನೆ ಕಟ್ಟುವ ಹಬ್ಬ, ಕಾಮ ದಹನದ ಹೋಳೀ ಹುಣ್ಣಿಮೆ, ಪೂಜೆ ಉಪವಾಸದ ಶಿವರಾತ್ರಿ.. ಚೈತ್ರಾಗಮನ. ಎಲೆ ಉದುರಿ ಹೊಸ ಚಿಗುರು, ಮುಗುಳು ನಗುವಾಗ ಕೋಗಿಲೆಯ ಗಾನವೂ ಮಾವಿನ ಸವಿಯೂ ಬೆರೆತು ಹಿತವಾಗುವ ಬೇಸಗೆ. ಯುಗಾದಿಯ ಸಂದರ್ಭದಲ್ಲಿ ಬಾಳ್ವೆಯಲ್ಲಿ ಸಿಹಿ ಕಹಿ ಸಮ್ಮಿಲನದ ಸಂಕೇತವಾಗಿ ಬೇವು ಬೆಲ್ಲದ ಸವಿಯುಣ್ಣುವ ಸಡಗರ.‌ ಉರುಳುತ್ತ ಉರುಳುತ್ತ ಋತು ಚಕ್ರವೊಂದು ಪೂರ್ಣಗೊಂಡು ಮತ್ತೆ ಹೊಸ ನಿರೀಕ್ಷೆಗಳೊಂದಿಗೆ ಬದುಕಿನ ಬಂಡಿ ಎಳೆವ ಜೀವಗಳು. ಪ್ರತಿಯೊಂದು ಹಬ್ಬಕ್ಕೂ ಒಂದು ವೃತ್ತಾಂತ, ಕತೆಯ ಹಿನ್ನಲೆ, ಅಧ್ಯಾತ್ಮಿಕತೆಯ ಲೇಪನ. ಅದೆಂತೇ ಇರಲಿ. ಈ ಹಬ್ಬಗಳು ಇರಲೇಬೇಕೆ? ಕಾಸಿಗೆ ಕಾಸು ಕೂಡಿಸಿ ಸಾಲ ಮಾಡಿ ಹಬ್ಬ ಆಚರಿಸುವುದು ತರವೆ? ಇದ್ದವರದು ಒಂದು ಕತೆಯಾದರೆ ಇಲ್ಲದವರ ಪಾಡು ಏನು? ಇತ್ಯಾದಿ ಪ್ರಶ್ನೆ ಸಾಲು ಕಾಡುವುದು ನಿಜ. ಇರುವವರು ಇಲ್ಲದವರು, ಮಿತ್ರರು ಶತ್ರುಗಳು, ಬೇಕಾದವರು ಬೇಡದವರು – ಎಲ್ಲರೂ ಒಬ್ಬರು ಇನ್ನೊಬ್ಬರಿಗೆ ಕೊಟ್ಟು ತೆಗೆದುಕೊಂಡು ಜೀವನ ಸಹ್ಯವಾಗುವಂತೆ ಮಾಡುವ ಅವಕಾಶ ಒದಗಿಸುವುದು ಹಬ್ಬಗಳು. ತನ್ನಂತೆ ಪರರ ಬಗೆವ ಹೃದಯಗಳಿಗೆ ಕೈಯೆತ್ತಿ ಕೊಡಲು ಹಬ್ಬದ ನೆಪ ಬೇಕಿಲ್ಲ. ಆದರೆ ಪ್ರೇರಣೆಯಿರದೇ ಹಂಚಿಕೊಳ್ಳಲು ಒಪ್ಪದ ಜೀವಗಳಿಗೆ ಹಬ್ಬಗಳೇ ಬರಬೇಕು. ಸಾಮಾಜಿಕ, ಆರ್ಥಿಕ, ರಾಜಕೀಯ ಯಾವ ಆಯಾಮದಲ್ಲಿದ್ದರೂ ಬದುಕಿನ ಏಕತಾನತೆಯನ್ನು ನೀಗಲು ಹಬ್ಬಗಳು ಬರಬೇಕು. ಬದುಕಿಗೆ ಬಣ್ಣ ತುಂಬಿ ಬದುಕು ಹೆಚ್ಚೆಚ್ಚು ಸಹ್ಯ ಆಗುವಂತೆ ಮಾಡಲು ಹಬ್ಬಗಳು ಬೇಕು. ನಮ್ಮ ನಮ್ಮ ನಡುವಿನ ಗೋಡೆಗಳ ದಾಟಿ, ಅಹಮ್ಮಿನ ಕೋಟೆ ಒಡೆದು ಸೇತುವೆ ಕಟ್ಟಲು ಹಬ್ಬಗಳೇ ಬರಬೇಕು. ಮತ್ತೆ ಮತ್ತೆ ಬರುವ ಯುಗದ ಆದಿ ಎಲ್ಲ ಜೀವಿಗಳಿಗೂ ಚೈತನ್ಯದಾಯಿನಿ. ಹಳತನ್ನು ಕಳಚಿಕೊಂಡು ಹೊಸತಿಗೆ ತೆರೆದುಕೊಳ್ಳಲು ಹಪಾಪಿಸುವ ಜೀವಗಳ ಒಳ ತುಡಿತ. ಮತ್ತೊಂದು ಬೇಸಗೆ..ಮತ್ತೆ ಮಳೆಗಾಲ..ಉಕ್ಕುವ ನದಿ, ಕೆರೆ ತೊರೆಗಳು.. ಬರಗಾಲದ ಬವಣೆ.. ಜಲ ಪ್ರಳಯ, ಹನಿ ನೀರಿಗೆ ಹಾಹಾಕಾರ – ಎಲ್ಲವುಗಳನ್ನು ದಾಟುತ್ತ ದಾಟುತ್ತ ಮತ್ತೆ ಮತ್ತೆ ಬಂದು ಬದುಕಿಗೆ ಬಣ್ಣ ತುಂಬುವ, ಜೀವಸೆಲೆಯಾಗುವ ಹಬ್ಬಗಳದೇ ಒಂದು ಬಗೆ. ತನ್ನೊಳಗಿನ ಒಲವು ನಲಿವು, ಮಿಡಿತ ತುಡಿತಗಳಿಗೆ ಸಾಕ್ಷಿಯಾಗುವ ಜೀವ ಕಡು ತಾಪದಲ್ಲಿ ರೋಧಿಸುವಂತೆಯೇ ನಲಿವಿನಲ್ಲಿ ಹಾಡಲು ತೊಡಗುವುದು ಕೂಡ ಹಬ್ಬದ ಮಾದರಿಯೇ. ಈ ಬರಹದ ಆರಂಭದಲ್ಲಿ ನಿರೂಪಿಸಿರುವಂತೆ ಜೀವ ಕುಣಿದು ಕುಪ್ಪಳಿಸಲು ತೊಡಗಿದೆಯೆಂದರೆ ಹೃದಯದಲ್ಲಿ ನೂರು ವೀಣೆಗಳ ಸ್ವರ ಮೀಟಿದೆ ಎಂತಲೇ ಅರ್ಥ. ನಗುವು ಸಹಜದ ಧರ್ಮ ನಗಿಸುವುದು ಪರ ಧರ್ಮ| ನಗುವ ಕೇಳುತ ನಗುವುದತಿಶಯದ ಧರ್ಮ|| ನಗುವ ನಗಿಸುವ ನಗಿಸಿ ನಗುತ ಬಾಳುವ ವರವ| ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ|| ನಕ್ಕು ಹಗುರಾಗದೇ ಸಾಗದ ಬದುಕನ್ನು ಸಹನೀಯವಾಗಿಸಿಕೊಳ್ಳಲು ಮಂದಹಾಸವನ್ನು ಧರಿಸುವುದೇ ಇರುವ ಒಂದೇ ದಾರಿ.. ಹೆಜ್ಜೆ ಹೆಜ್ಜೆಯಲ್ಲಿ ಜತೆಯಾಗುವ ಕವಿ ಸಾಲುಗಳೊಂದಿಗೆ ಸಾಗುವಾಗ ಮತ್ತೆ ಮತ್ತೆ ನೆನಪಾಗುವವು ಇಂಥವೇ ಸಾಲು.. ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ ನಾ ನಕ್ಕು ಜಗವಳಲು ನೋಡಬಹುದೆ? ನಾನಳಲು ಜಗವೆನ್ನನೆತ್ತಿಕೊಳದೆ? (ಈಶ್ವರ ಸಣಕಲ್) ನಿಮ್ಮ ತುಟಿಯ ಮೇಲೊಂದು ನಗು ಮೂಡಿದ ಕ್ಷಣ ನಿಮಗೂ ಹಬ್ಬ..ನಿಮ್ಮ ಸುತ್ತಲೂ ಇರುವವರಿಗೂ ಹಬ್ಬ.. **********

ಲಹರಿ Read Post »

ಇತರೆ

ಪ್ರಸ್ತುತ

ಮೊಬೈಲ್ ಬಳಕೆ ಹರೀಶಬಾಬು ಬಿ. ಮೊಬೈಲ್ ಬಳಕೆಯಿಂದ ಮಾನವನಿಗೆ ಉಂಟಾಗುತ್ತಿರುವ ಪರಿಣಾಮ ಅಷ್ಟು ಇಷ್ಟಲ್ಲ. ಇಂದಿನ ಗಣಕಯಂತ್ರ ಯುಗದಲ್ಲಿ ಎಲ್ಲವೂ ಅಂತರ್ಜಾಲ ಆಧಾರಿತ ಗಣಕಯಂತ್ರದ ಕೆಲಸಳಾಗಿವೆ. ದಿನೇ ದಿನೇ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಾ ಹೋದ ಕಾರಣದಿಂದ ಮಾನವನ ಬರವಣಿಗೆ ಮತ್ತು ಮಾನವ ಮಾಡುವ ಕೆಲಸಗಳು ಕಮ್ಮಿ ಆಗಿವೆ. ಆದ ಕಾರಣದಿಂದ ಎಲ್ಲರೂ ಗಣಕ ಯಂತ್ರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರಲೇ ಬೇಕಾದ ಸಂತತಿ ಈ ಗಣತಂತ್ರ ಯುಗದ ಜನರಿಗೆ ಎದುರಾಗಿದೆ. ಮೊದಲು ಪ್ರತಿಯೊಂದು ಕಛೇರಿಗಳಲ್ಲಿಯೂ ಹಿಂದೆ ಬರವಣಿಗೆ ವ್ಯವಹಾರ ಹೊಂದಿತ್ತು ಆದರೆ ಇವತ್ತು ಆ ಸೌಲಭ್ಯ ಕಣ್ಣುಮರೆಯಾಗಿದೆ.ಇದರಿಂದ ಜನತೆಗೆ ಅನುಕೂಲ ಅನಾನುಕೂಲ ಎರಡು ಉಂಟಾಗಿದೆ. ಈ ಗಣತಂತ್ರ ಯುಗ ದಿನ ದಿನಕ್ಕೂ ರಂಗು ಹೇರುತ್ತಿದ್ದ ಕಾರಣದಿಂದ ಇಡೀ ಪ್ರಪಂಚವೇ ಗಣತಂತ್ರಮಯವಾಗಿದೆ . ಗಣಕಯಂತ್ರದಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಅರಿತ ಈ ಜನತೆ ಅದರ ಸೇವೆಗಳನ್ನು ಅಂಗೈಯಲ್ಲಿ ನೋಡುವಾಗೆ ಸ್ಮಾಟ್ ಪೋನ್ ಬಳಕೆ ಕಂಡು ಕೊಂಡರು. ಎಲ್ಲಾ ಸೌಲಭ್ಯಗಳು,ಸೇವೆಗಳನ್ನು ಮತ್ತು ವ್ಯವಹಾರವನ್ನು ಈ ಜಂಗಮಗಂಘೆಯಲ್ಲಿಯೇ ನಡೆಸಲು ಪ್ರಯತ್ನಸಿದರು ಎಲ್ಲಾ ಸೇವೆಗಳು ಸರಾಗವಾಗಿ ಮತ್ತು ಸುಲಭವಾಗಿ ಸೇವೆಗಳು ದೊರೆಯುವ ಕಾರಣಾತರದಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಮೊಬೈಲ್ ಬಳಕೆ ಹೇರಳವಾಗಿ ಬೆಳೆಯಿತು. ಬಳಕೆಯನ್ನು ನಾನ ಉಪಯೋಗಕ್ಕೆ ಬಳಸುತ್ತಾ ಹೋದಂತೆ ಎಲ್ಲಾ ಗಣತಂತ್ರ ಯುಗದಲ್ಲಿ ಗಣಕಯಂತ್ರದ ಬಳಕೆ ಗಣನೀಯವಾಗಿ ಇಳಿಕೆಯಾಗುತ್ತಾ ಎಲ್ಲಾ ಸೇವೆಗಳು ಮೊಬೈಲ್ ನಲ್ಲಿ ದೊರೆಯುವಂತೆ ತಂತ್ರಜ್ಞಾನವನ್ನು ವಿಜ್ಞಾನಿಗಳು ಸೃಷ್ಟಿಸಿದರು . ಎಲ್ಲಾ ಸೇವೆಗಳು ಇದರಲ್ಲೇ ದೊರೆಯುವ ಕಾರಣದಿಂದ ಅಂಗೈಯಲ್ಲಿ ಇಡೀ ಪ್ರಪಂಚದ ಹಾಗು ಹೋಗುಗಳು ಮತ್ತು ಬ್ಯಾಕಿಂಗ್, ಪೋಸ್ಟ್ ,ಮಾಹಿತಿ ವ್ಯವಸ್ಥೆ ಮತ್ತು ದಿನನಿತ್ಯದ ಚಟುವಟಿಕೆಗಳು ಮತ್ತು ಇನ್ನೂ ಇತರೆ ಕಾಯ೯ಗಳ ಬಳಕೆಯಲ್ಲಿ ತುಂಬಾ ಅನುಕೂಲಕರವಾದ ಸೌಲಭ್ಯ ಒದಗಿಸುವ ತಂತ್ರಜ್ಞಾನ ಸಿಕ್ಕಿತು. ಯಾವುದೇ ಒಂದು ವಸ್ತುವಿನ ಬಳಕೆ ನಿಯಮಿತವಾಗಿ ಇದ್ದರೆ ಅದರಿಂದ ನಮಗೆ ಅನುಕೂಲವೂ ಉಂಟು ಮತ್ತೆ ನಮ್ಮ ಜೀವನಕ್ಕೆ ಉಳಿತೇ ಅದನ್ನು ವೈಪರೀತವಾಗಿ ಬಳಸಿದರೆ ಅದರ ಪರಿಣಾಮಕ್ಕೆ ನಾವೆ ಹೊಣೆಗಾರರು. ಇತ್ತೀಚಿನ ದಿನಗಳಲ್ಲಿ ಇಂದು ಒಂದು ರೀತಿಯ ಮಾರಕವಾಗಿ ಬೆಳೆಯುತ್ತಾ ಬಂದು ಇದೆ ಈ ಸ್ಮಾಟ್೯ ಫೋನ್ ಬಳಕೆ. ದಿನೇ ದಿನೇ ತಂತ್ರಜ್ಞಾನ ಹೆಚ್ಚುತ್ತಾ ಹೋದಂತೆ ಮೊಬೈಲ್ ಬಳಕೆಯೂ ಕೂಡ ಹೆಚ್ಚಾಗುತ್ತ ಹೋದಂತೆ ಎಲ್ಲಾ ಅದರ ಪರಿಣಾಮ ಜನರ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತಾ ಬಂದು ಇದೆ. ಶಾಲಾ ಕಾಲೇಜಿನಿಂದ ಹಿಡಿದು ಒಬ್ಬ ಬಹುದೊಡ್ಡ ನೌಕರಿ ಉದ್ಯಮಿವರೆಗೂ ಈ ಸ್ಮಾಟ್ ಪೋನ್ ಬಳಕೆಯ ಪರಿಣಾಮ ತುಂಬಾ ಅಗಾದವಾಗಿದೆ. ಎಲ್ಲಾ ಸೇವೆಗಳು ಇದರಲ್ಲೇ ಸಿಗುತ್ತಿರುವುದರಿಂದ ಈ ಬಳಕೆ ವೈಪರೀತವಾಗಿದೆ. ನೆಟ್ ಬ್ಯಾಕಿಂಗ್ ಸೇವೆ ಮೊಬೈಲ್ ನಲ್ಲಿಯೇ ದೊರೆಯುತ್ತಿರುವ ಗೂಗಲ್ ಪೇ,ಪೋನ್ ಪೇಗಳಿಂದ ಎಷ್ಟೋ ಉದ್ಯಮಿಗಳು ನೌಕರರು ತಿಂಗಳು ಗಟ್ಟಲೇ ದುಡಿದು ಸಂಪಾದಿಸಿದ ಲಕ್ಷ ಲಕ್ಷ ಹಣವನ್ನು ಕಳೆದುಕೊಂಡು ಇದ್ದಾರೆ .ತಂತ್ರಜ್ಞಾನ ಹೆಚ್ಚಾದ ಕಾರಣದಿಂದ ಎಲ್ಲೆಡೆಯೂ ಈ ಬ್ಯಾಕಿಂಗ್ ವ್ಯವಸ್ಥೆ ಬಳಕೆ ಹೆಚ್ಚು ಪ್ರಗತಿಯಲ್ಲಿ ಇದೆ. ಇದರಿಂದ ಹಣ ದೋಚೊ ಖದೀಮರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಳವಾಗಿದೆ. ನಾವು ದಿನನಿತ್ಯ ದೃಶ್ಯ ಮಾಧ್ಯಮ ಮತ್ತು ದಿನ ಪತ್ರಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರೆಡಿಯೋದಲ್ಲಿ ಕೇಳುತ್ತಾ ಇದ್ದೀವಿ ಗೂಗಲ್ ಪೇ ಮತ್ತು ಪೋನ್ ಪೇ ಗಳಿಂದ ಬಿಲ್ ಪಾವತಿ ಮಾಡಿಸಿಕೊಳ್ಳುವ ನೆಪದಲ್ಲಿ ನಮ್ಮ ಬ್ಯಾಂಕ್ ಖಾತೆಯ ಹಣವನ್ನು ದೋಚಿದ್ದಾರೆ ಎಂದು ಇದೇ ಸಮಸ್ಯೆಯ ಬಗ್ಗೆ ಪೋಲಿಸ್ ಮೊರೆ ಹೊದ ಎಷ್ಟು ಜನರು ಇದ್ದಾರೆ. ಮೊಬೈಲ್ ಬಳಕೆಯಿಂದಾ ಉಂಟಾಗುತ್ತಿರುವ ನಷ್ಟ ಈ ಸಮಾಜಕ್ಕೆ ಅಷ್ಟು ಇಷ್ಟಲ್ಲ ಅದರ ಉಪಯೋಗಿಂತಲೂ ಅದರ ಅನಾನುಕೂಲದ ಪರಿಣಾಮವೇ ಹೆಚ್ಚು ಭರಿಸುತ್ತಿದೆ ಈ ಸಮಾಜ. ಹುಟ್ಟುವ ಪ್ರತಿಯೊಂದು ಕೂಸು ಕೂಡ ಜಂಗಮಗಂಘೆಯಲ್ಲಿ ಕಲಿಯುತ್ತಾ ನಲಿಯುತ್ತಾ ಆಡುತ್ತಾ ಬೆಳೆಯುತ್ತಾ ಬಂದಿದೆ. ತಂದೆ ತಾಯಿಗಳು ಮಗುವಿನ ನಿಮಾ೯ಪಕರು ಅವರ ಭವಿಷ್ಯಕ್ಕೆ ಮಾರಕವಾಗುವ ರೀತಿಯಲ್ಲಿ ಈ ಸ್ಮಾಟ್೯ ಪೋನ್ ಬಳಕೆ ಅವರಿಗೆ ತೋರಿಸಿ ಅವರ ಜೀವನಕ್ಕೆ ಬಹುದೊಡ್ಡ ಪಿಡುಕು ಉಂಟು ಮಾಡುತ್ತಿದ್ದಾರೆ. ಏನ್ ತಿಳಿಯದ ಮಗುವಿಗೆ ಇವರು ಈ ಜಂಗಮಗಂಘೆ ಕೊಟ್ಟು ಅವರ ಭವಿಷ್ಯದ ಹಾದಿಗೆ ಅಡಚಣೆಯನ್ನು ಉಂಟು ಮಾಡುತ್ತಾರೆ.ಹಾಗೆಯೇ ಅವರು ಎಷ್ಟೇ ಅಲ್ಲದೇ ಇನ್ನೂ ಬುದ್ದಿವಂತ ಹಾಗೂ ವಯಸ್ಕರು ಕೂಡ ಈ ಜಂಗಮಗಂಘೆ ಎಂಬಾ ಪೀಡೆಯಿಂದಾ ಹಾಳುಗುತ್ತಾದ್ದಾರೆ. ಈ ಮೊಬೈಲ್ ಎಂಬ ಪೀಡೆ ಕೆಲವು ಜೀವಗಳನ್ನೇ ಬಲಿ ತೆಗೆದುಕೊಳ್ಳುತ್ತಾ ಬಂದು ಇದೆ. ಪ್ರೀತಿ ವಿಷಯದಲ್ಲಿ ಮೊಬೈಲ್ ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಕಾಣದೂರಿನ ಚಂದಮಾಮಗಳಿಗೆ ತನ್ನ ಊರಿನ ಚಂದಮಾಮನಾಗೆ ಕಾಣಿಸುವಂತೆ ಪರಿಚಯ ಮಾಡುತ್ತದೆ ಈ ಮೊಬೈಲ್. ಕಾಣದೂರಿನ ಚಂದಮಾಮಗಳಿಗೆ ಪ್ರೀತಿಯಲ್ಲಿ ಪೋನ್ ಮೆಸೆಜ್ಗಳು ಬೀಗರು ಪಾತ್ರದಲ್ಲಿ ಈ ಮೊಬೈಲ್ ಹೊಂದಿದೆ. ಎಲ್ಲೋ ಹುಟ್ಟಿ ಬೆಳೆದ ಈ ಪ್ರೀತಿಗೆ ಮೊಬೈಲ್ ಸೂತ್ರದಾರಿಯಾಗಿ ಕೆಲಸ ಮಾಡುತ್ತದೆ. ಪ್ರೀತಿ ಎಂಬಾ ಡ್ರಾಮದಲ್ಲಿ ಸಂಗೀತ ನಿರ್ದೇಶಕರಾಗಿ ಈ ಮೊಬೈಲ್ ಪಾತ್ರವಹಿಸುತ್ತದೆ. ಸಿನೆಮಾ,ಮೋಜು, ಮಸ್ತಿ ,ಪಾಟಿ೯,ಬರ್ತಡೇ, ದೇವಾಲಯ, ಇನ್ನೂ ಮುಂತಾದವುಗಳಿಗೆ ಕರೆಯ್ಯೋಲೆ ಕಳಿಸುವ ಆಹ್ವಾನ ಪತ್ರಿಕೆಯ ಪಾತ್ರವನ್ನು ಈ ಮೊಬೈಲ್ ನಿವ೯ಹಿಸುತ್ತದೆ. ಪ್ರಿಯತಮೆ ಮತ್ತು ಪ್ರಿಯಕರನ ನಡುವೆ ಒಂದು ರೀತಿಯ ಮಧ್ಯವರ್ತಿಯಾಗಿ ಬಹು ಮುಖ್ಯವಾಗಿ ಕಾಯ೯ನಿವ೯ಹಿಸುತ್ತದೆ. ಭಯಕರವಾದ ಪ್ರೀತಿ ರಹಸ್ಯಗಳಲ್ಲಿ ಸಲ್ಲದ ಕಾಯ೯ಗಳು ಅಗತ್ಯಕ್ಕೆ ಸಮಯಕ್ಕೆ ತಕ್ಕಂತೆ ನಡೆಯದೇ ಹೋದಾಗ ಕೊನೆಗೆ ಜವರಾಯನ ಪಾತ್ರವಾಗಿಯು ಕೂಡ ಈ ಮೊಬೈಲ್ ನಿವ೯ಹಿಸುತ್ತದೆ. ವಾಹನ ಚಾಲನೆ ವೇಳೆ ಮೊಬೈಲ್ ಬಳಕೆಯಿಂದ ಹೋದ ಪ್ರಾಣಗಳೆಷ್ಟೋ. ಟ್ರಾಫಿಕ್ನಲ್ಲಿ ಮೊಬೈಲ್ ಬಳಕೆ ಮಾಡುತ್ತಾ ಚಾಲನೆ ಮಾಡುವ ಸಮಯದಲ್ಲಿ ಅರಿವು ಇಲ್ಲದೇ ಅಪಘಾತಕ್ಕೆ ಒಳಪಟ್ಟು ಮೃತಪಟ್ಟ ಸವಾರರು ಎಷ್ಟು? ಅವಘಾತದಿಂದ ನರಳುತ್ತಿರುವವರು ಎಷ್ಟು? ದಿನೇ ದಿನೇ ಇದರಿಂದ ಸಾವಿಗೀಡಾದವರ ಸಂಖ್ಯೆ ಹೆಚ್ಚಾಗುತ್ತಾ ಹೋಗಿದೆ. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆಯನ್ನು ಮತ್ತು ಪ್ರಯಾಣದ ಬ್ಯಾಸರವನ್ನು ನೀಗಲು ಇಯರ್ರ್ಪೋನ್ ಗಳಿಂದ ಸಂಗೀತವನ್ನು ಆಲಿಸುತ್ತಾ ಅಥವಾ ಬೇರೊಬ್ಬರ ಬಳೀ ಪೋನ್ ನಲ್ಲಿ ಮಾತನಾಡುತ್ತ ಪ್ರಯಾಣ ಮಾಡಬೇಕಾದರೆ ಹಿಂದೆ ಬರುವಂತಹ ವಾಹನಗಳ ಶಬ್ಧ ಸರಿಯಾಗಿ ಚಾಲಕನಿಗೆ ಕೇಳಿಸದ ಕಾರಣದಿಂದ ನಾವು ಓವರ್ಟೇಕ್ ಮಾಡಲು ಅಥವಾ ರಸ್ತೆಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಬದಲಾಗುವಾಗ ಹಿಂದಿನ ವಾಹನಗಳ ಶಬ್ಬ ನಮಗೆ ಕೇಳಿಸಿಕೊಳ್ಳದೇ ಸರಕ್ಕನೆ ನಮ್ಮ ವಾಹನವನ್ನು ಒಂದು ಭಾಗದಿಂದ ಇನ್ನೋಂದು ಭಾಗಕ್ಕೆ ತಿರುಗಿಸುತ್ತೇವೆ ಆಗ ಹಿಂದಿನಿಂದ ರಭಸವಾಗಿ ಬಂದ ವಾಹನಗಳು ಚಾಲಕನ ಹತೋಟಿಗೆ ಬರದೆ ನಮ್ಮ ಮೇಲೆ ಹರಿದು ಬಿಡುತ್ತವೆ ಆಗ ನಾವು ಸಾವನ್ನಪ್ಪಬೇಕಾಗುತ್ತದೆ. ಮತ್ತು ಪಾದಚಾರಿಗಳು ಮೊಬೈಲ್ ಗೇಮ್,ಮೆಸೆಜ್,ವಿಡಿಯೋ ನೋಡುವ ಪರಿಯಲ್ಲಿಯೇ ರಸ್ತೆಗಳನ್ನು ದಾಟುತ್ತಾರೆ ಅವರಿಗೆ ಮುಂದೆ ಹಿಂದೆ ಬರುವ ವಾಹನಗಳ ಬಗ್ಗೆ ಅರಿವೆ ಇರುವುದಿಲ್ಲ. ಹಿಂದಿನಿಂದ ರಭಸವಾಗಿ ಬಂದ ವಾಹನಗಳು ಚಾಲಕನ ನಿಯಂತ್ರಣಕ್ಕೆ ಬಾರದೇ ಪಾದಚಾರಿಗಳ ಮೇಲೆ ಹರಿದು ಬಿಡುತ್ತವೆ. ಬದುಕ ಸಾವುಗಳ ನಡುವೆ ಹೋರಾಟ ಮಾಡುತ್ತಾ ಜೀವನ ಕಳೆಯಬೇಕು ಆಗುತ್ತದೆ ಆದ್ದರಿಂದ ಇವು ಈ ಎಲ್ಲಾ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಸೂಕ್ತವಾದ ರೀತಿಯಲ್ಲಿ ಅಗತ್ಯಕ್ಕೆ ತಕ್ಕಂತೆ ಈ ಮೊಬೈಲ್ ಬಳಕೆ ಮಾಡಿಕೊಂಡು ಆರಾಮಾಗಿ ಜೀವನ ನಡೆಸುವುದು ಮಾನವ ಜೀವನಕ್ಕೆ ಒಳಿತು. ಇನ್ನೂ ಕೆಲವರು ಮೊಬೈಲ್ ನಲ್ಲಿ ಸಿಗುವ ನಾನ ಬಗೆಯ ಅನಪೇಕ್ಷಿತ ಮಾಹಿತಿಯನ್ನು ತಿಳಿದುಕೊಂಡು ಅವರ ಮನಸ್ಸಿನ ಮೇಲೆ ಮಾನಸಿಕ ಒತ್ತಡವನ್ನು ತಂದುಕೊಳ್ಳುತ್ತಾರೆ. ಮತ್ತೆ ಮೊಬೈಲ್ ನಲ್ಲಿ ಬರುವ ಆಶೀಲಕರವಾರ ವಿಡಿಯೋ ಮತ್ತು ಪೋಟೋ ನಾನ ಬಗೆಯ ಮನರಂಜನೆ ಕಾಯ೯ಗಳನ್ನು ನೋಡಿ ಅವರ ಮನದಲ್ಲಿ ಕಾಮುಕತೆಯ ಹೆಚ್ಚಾಗುವ ಸಂತತಿಗಳು ಕೂಡ ಹೆಚ್ಚಾವ ಸಾಧ್ಯತೆಗಳೂ ಕೂಡ ಇವೆ. ಮನದಲ್ಲಿ ಕಾಮುಕ ಮಾನೋಭಾವ ಹೆಚ್ಚಾಗಿ ಸಮಾಜದಲ್ಲಿ ನಾನ ಅಹಿತಕರ ಚಟುವಟಿಕೆಗಳಿಗೆ ಎಡೆಮಾಡಿಕೊಡುತ್ತಿದೆ ಈ ಮೊಬೈಲ್ ನಲ್ಲಿ ದೊರೆಯುವ ಕೆಲವು ಸನ್ನಿವೇಶಗಳು. ಮೊಬೈಲ್ ಬಳಕೆ ಹೆಚ್ಚಾಗಿ ಬಳಸುತ್ತಿರುವುದರಿಂದ ಅವರ ಅರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತ. ಮಾನವರಲ್ಲಿನ ಏಕಾಗ್ರತೆ ಮಟ್ಟ, ನೆನಪಿನ ಶಕ್ತಿ,ದೃಷ್ಟಿ ದೋಷ ಮತ್ತು ಬುದ್ದಿ ಶಕ್ತಿ ಎಲ್ಲವನ್ನೂ ಕಳೆದುಕೊಳ್ಳತ್ತಾ ಇದ್ದಾರೆ. ಇನ್ನೂ ಕೆಲವರು ವೈಪರೀತ್ಯ ಸ್ಟಾರ್ಟ್ ಪೋನ್ ಬಳಕೆಯಿಂದ ಬುದ್ದಿ ಮಾದ್ಯರು ಹಾಗಿರುವ ಕೆಲವು ಸನ್ನಿವೇಶಗಳನ್ನು ನಾವು ಈ ಸಮಾಜದಲ್ಲಿ ನೋಡುತ್ತಿದ್ದೇವೆ.ಒಟ್ಟಾರೆ ನಾವು ಮೊಬೈಲ್ ಅನ್ನು ಒಳ್ಳೆಯತನವಾಗಿ ಬಳಸಿಕೊಂಡರೇ ನಮ್ಮ ವೃತ್ತಿಪರ ಜೀವನಕ್ಕೂ ಮತ್ತು ಸಾಮಾಜಿಕ ಜೀವನಕ್ಕೂ ಅನುಕೂಲವಿದೆ .ಕೆಟ್ಟದಕ್ಕೆ ಬಳಸಿಕೊಂಡರೇ ಖಂಡಿತವಾಗಿಯೂ ಕೆಟ್ಟಪರಿಣಾಮಗಳು ಬೀರುವ ಸಾಧ್ಯತೆಗಳು ಹೆಚ್ಚಿರುತ್ತವೆ .ಎಷ್ಟು ಕೆಟ್ಟ ಪರಿಣಾಮಗಳು ಇವೆಯೋ ಎಷ್ಟೋ ಒಳ್ಳೆ ಅನುಕೂಲಗಳು ಸಹಾ ಇವೆ. ಬಳಕೆಯ ಆಯ್ಕೆ ಬಳಕೆಗಾರ ಕೈಯಲ್ಲಿ ಇರುತ್ತದೆ ಒಳ್ಳೆಯದಕ್ಕೆ ಬಳಸಿ ಜ್ಞಾನ ಸಂದಾದನೆಗೆ ಅನುಕೂಲ ಕಲ್ಪಿಸಿಕೊಳ್ಳಿ ನಿಮ್ಮ ಅಮೂಲ್ಯವಾದ ಜೀವನದಲ್ಲಿ. “ ಮೊಬೈಲ್ ಬಳಕೆ ಮಿತವಿರಲಿ ಜೀವನಕ್ಕೆ ಒಳಿತಾಗಿರಲಿ “ ********

ಪ್ರಸ್ತುತ Read Post »

ಇತರೆ

ಪ್ರವಾಸ ಕಥನ

ಮರೀನ್ ಡ್ರೈವ್ ಎಂಬ ಮೋಹಕ ತಾಣ ಸ್ಮಿತಾ ರಾಘವೇಂದ್ರ ಮರೀನ್ ಡ್ರೈವ್ ಎಂಬ ಮೋಹಕ ತಾಣ ಮೊದಲ ಬಾರಿಗೆ ಮುಂಬೈಗೆ ಭೇಟಿ ಕೊಡುತ್ತಿರುವ ನನಗೆ.. ಮುಂಬೈ ಜನ ಜೀವನ ನೋಡಬೇಕು ಎಂಬ ತೀವ್ರವಾದ ತುಡಿತವಿತ್ತು.. ಯಾಕೆಂದರೆ ಕಾಯ್ಕಿಣಿ, ಮತ್ತು ಚಿತ್ತಾಲರ ಕಥೆಗಳಿಂದ ಮುಂಬೈ ನಗರಿಯ ಪೂರ್ಣ ಚಿತ್ರಣವೊಂದು ನನ್ನ ಮನಃಪಟಲದೊಳಗೆ ಗಿರಕಿ ಹೊಡೆಯುತ್ತಲೇ ಇತ್ತು.. ಬಿಡದೇ ಕಾಡಿದ ಕಥೆಗಳ ಎಳೆ ಹಿಡಿದು ಕಳೆದು ಹೋದ ಮಗುವೊಂದು ತಾಯಿ ಹುಡುಕುವಂತೆ. ಬೆರಗು ಮತ್ತು ಆಸೆ ಕಂಗಳಲ್ಲಿ, ಇಡೀ ನಗರ ಬ್ಯಾಟರಿ ಹಿಡಿದು ಹುಡುಕುವ ಉಮೇದು ಹೊಂದಿದ್ದೆ. ಯಾವುದೇ ವೆಹಿಕಲ್ ಬಳಸದೇ ರೈಲು ಮತ್ತು ನಡಿಗೆಯ ಮೂಲಕ ಸುತ್ತಿ ಸುತ್ತಿ ಒಂದಿಷ್ಟು ಸಂತ್ರಪ್ತಭಾವ. ಎಂದಿಗೂ ನಿದ್ರೆ ಮಾಡದ ನಗರ, ಪ್ರತಿ ಕನಸನ್ನು ಜೀವಂತಗೊಳಿಸುವ ನಗರ, ರಾತ್ರಿಯೆಲ್ಲಾ ಪಾರ್ಟಿ ಮಾಡುವ ನಗರವೂ ​​ಹೌದು! ಮುಂಬಯಿಯಲ್ಲಿನ ರಾತ್ರಿಜೀವನವು ಯಾರನ್ನಾದರೂ ಬೆಚ್ಚಿ ಬೀಳುವಷ್ಟು ಬೆರಗುಗೊಳಿಸುತ್ತದೆ, . ಚಂದ್ರನು ಅಂತಿಮವಾಗಿ ವಿದಾಯ ಹೇಳುವ ಸಮಯಕ್ಕೆ ನಕ್ಷತ್ರಗಳು ಹೊರಬಂದ ಕ್ಷಣದಿಂದಲೇ, ಮುಂಬೈಯ ರಾತ್ರಗಳು ಬಹಳಷ್ಟು ಸೋಜಿಗ ವಾಗಿ ತೋರುತ್ತದೆ. ರಿಕ್ಷಾವಾಲಾ ಹತ್ತಿರ ಕೇಳಿದ್ವಿ ಇಲ್ಲಿ ಮರೀನ್ ಡ್ರೈವ್ ಅಂತ ಇದೆಯಲ್ಲ ಅದೆಲ್ಲಿ ಇದೆ,ಅಂದಿದ್ದಕ್ಕೆ ಅಯ್ಯೋ,, ಅದಾ!! ಅಲ್ಲಿ ಬರೀ ಜೋಡಿ ಜೀವಗಳೇ ಇರೋದು ನೋಡೋಕೆ ಅಂತ ಏನಿಲ್ಲ ಅಲ್ಲಿ ಅವರಾಡುವ ಮಂಗಾಟ ನೋಡೋಕೆ ಸಿಗುತ್ತೆ ಅಷ್ಟೇ.. ಅಂತ ಮೂಗು ಮುರಿದು ಮುಗುಳ್ನಕ್ಕಿದ್ದ.. ಅಮಿತಾಬ್ ಬಚ್ಚನ್ ತನ್ನ ಆರಂಭಿಕ ದಿನಗಳನ್ನು ಮುಂಬೈನಲ್ಲಿ ಮೆರೈನ್ ಡ್ರೈವ್‌ನಲ್ಲಿ ಬೆಂಚ್ ಮೇಲೆ ಮಲಗಿದ್ದನೆಂದು ಎಲ್ಲೋ ತಿಳಿದುಕೊಂಡ ನನಗೆ ಅದನ್ನು ನೋಡಲೇ ಬೇಕಾಗಿತ್ತು.. ಮತ್ತು ಇಲ್ಲಿ ಚಿತ್ರೀಕರಿಸಲಾದ ಚಲನಚಿತ್ರಗಳಾದ ಮುಕದ್ದಾರ್ ಕಾ ಸಿಕಂದರ್, ಸಿಐಡಿ , ವೇಕ್ ಅಪ್ ಸಿಡ್,ಹೀಗೇ ಅನೇಕ ಚಿತ್ರ ಗಳು ಸಾಗರ ಭಾವಪೂರ್ಣ ಉಪಸ್ಥಿತಿಯನ್ನು ಮನಸುರೆಗೊಳ್ಳುವಂತೆ ಚಿತ್ರೀಕರಿಸಿದ್ದು ನೋಡಿದ್ದೆ. ಅವೆಲ್ಲ ಸೆಳೆತಗಳು ಒಟ್ಟುಗೂಡಿ ನನ್ನ ಆ ಪ್ರದೇಶದ ಹೆಬ್ಬಾಗಿಲಿಗೆ ತಂದು ನಿಲ್ಲಿಸಿತ್ತು. ಮರೀನ್ ಡ್ರೈವ್ ಸಮುದ್ರದ ಅಭಿಮುಖವಾಗಿರುವ, ಜಗತ್ತಿನ ಪ್ರಸಿದ್ಧ ಚೌಪಾಟಿ ಕಡಲತೀರ. . ಇಲ್ಲಿನ ಮುಸ್ಸಂಜೆ ಹಾಗೂ ಬೆಳಕು, ಕಡಲ ತೀರದ ನೈಸರ್ಗಿಕ ಸೌಂದರ್ಯದ ನೋಟವನ್ನು ಒದಗಿಸುತ್ತವೆ. ರಥವೇರಿಬರುವ ರವಿ ಸದ್ದಿಲ್ಲದೇ ಕಡಲಿನ ಜೊತೆಗೆ ಸರಸ ಸಲ್ಲಾಪದಲ್ಲಿ ತೊಡಗುತ್ತಾನೆ..ರಾತ್ರಿ ಪೂರ್ತಿ ಮಡಿಲೊಳಗೆ ಮಲಗಿದವನ ಇಂಚಿಂಚೇ ಹುರಿದುಂಬಿಸಿ ಕಳುಹಿಸುತ್ತಿರುವಂತೆ ಭಾಸವಾಗುತ್ತದೆ.. ದಿನವೆಲ್ಲ ದಣಿದ ಅದೇ “ಇನ”ನ ಮತ್ತೆ ಬಾಚಿ ಮಡಿಲೊಳಗೆ ಹುದುಗಿಸಿಕೊಳ್ಳುವ ಕಡಲ ಪ್ರಕ್ರಿಯೆಗೆ ನೋಡುತ್ತ ಕುಳಿತವರೂ ನಾಚಿ ನೀರಾಗಿ ಪ್ರೀತಿ ಹಂಚಿಕೊಳ್ಳುತ್ತಾರಾ?! ಅದಕ್ಕೆ ಇಲ್ಲಿ ಪ್ರೇಮಿಗಳ ಕಲರವ ಜಾಸ್ತಿಯಾ ಅಂತನ್ನಿಸುತ್ತದೆ.. ಮುಂಬೈನ ಸಾಂಪ್ರದಾಯಿಕವಾಗಿ ಬಾಗಿದ ಕರಾವಳಿ ಬೌಲೆವಾರ್ಡ್‌ನ ಮೆರೈನ್ ಡ್ರೈವ್ ಅನ್ನು ಬೀದಿ ದೀಪಗಳ ಹೊಳೆಯುವ ದಾರದಿಂದಾಗಿ ಕ್ವೀನ್ಸ್ ನೆಕ್ಲೆಸ್ ಎಂದು ಕರೆಯತ್ತಾರೆ.ನಿಜಕ್ಕೂ ಇದು ಮುತ್ತಿನ ಹಾರದಂತೆ ಕಂಗೊಳುಸುತ್ತದೆ.. ರಾತ್ರಿಯ ಈ ಕಡಲ ತೀರದ ನೋಟ ವರ್ಣನೆಗೆ ಸಿಕ್ಕುವಂತಹದ್ದಲ್ಲ.. ಬೀಸಿ ಬರುವ ಅಲೆಯ ನಡುವೆ ಹೊಳೆವ ಮುತ್ತಿನ ಹಾರ. ಮೈ ಮನಗಳ ಮುದ ನೀಡಿ ಎಂತಹ ನೋವನ್ನೂ ಕಡಲು ಒಮ್ಮೆ ಕಸಿದುಕೊಂಡು ಬಿಡುತ್ತದೆ.. ಪಕ್ಕದಲ್ಲಿ ಕುಳಿತ ನಮ್ಮೆಜಮಾನ್ರ ಹೆಗಲಮೇಲೆ ನಾನೂ ತಣ್ಣಗೆ ಕೈ ಏರಿಸಿದ್ದೆ ಆಗಲೇ ಪುಟ್ಟ ಮಗುವೊಂದು ಗುಲಾಬಿ ಹೂಗಳ ಗುಚ್ಚವನ್ನೇ ಹಿಡಿದು ತಗೊಳಿ ಸರ್ ಅನ್ನುತ್ತ ನಮ್ಮ ಹತ್ತಿರ ಬಂದು ನಿಂತಿತ್ತು.. ಅರೇ ಈಗ್ಯಾಕೆ ಗುಲಾಬಿ ಎನ್ನುವಂತೆ ಪುಟ್ಟ ಪೋರನ ದಿಟ್ಟಿಸಿದರೆ ಪ್ರಪೋಸ್ ಮಾಡೋಕೆ ಅನ್ನೋದೇ.. ತಗೊಳ್ಳಲು ಕೈ ಚಾಚಿದರು. ಯಾರಿಗೆ ಅಂದೆ, ಯಾರಿಗಾದರೂ ಆಗುತ್ತೆ ಅಂದಾಗ ನಾನು ಕಣ್ಣಿಟ್ಟು ಆ ಪೋರನ ಓಡಿಸಿದ್ದೆ.. ಅವನು ಕೈಯೊಳಗೆ ಹೂವು ಇಟ್ಟೇ ಹೋಗಿದ್ದ.. ನನಗೆ ಆಶ್ಚರ್ಯ ವಾಗಿದ್ದು ಆ ಪುಟ್ಟ ಹುಡುಗನ ಬುದ್ದಿವಂತಿಕೆ ಮತ್ತು ವ್ಯಾಪಾರೀ ಗುಣ.. ಹೂ ಗುಚ್ಛವನ್ನು ಹಿಡಿದು ಸುಮ್ಮನೇ ಅತ್ತಿಂದಿತ್ತ ಓಡಾಡುತ್ತಾನೆ ಅಷ್ಟೇ.. ಕುಳಿತು ಇಷ್ಟಿಷ್ಟೇ ನುಲಿಯುತ್ತಿದ್ದ ಆಸಾಮಿಗೆ ತಗೊಳಿ ಅಂತ ಒತ್ತಾಯ ಮಾಡತೊಡಗಿದ.. ಅರೇ ಎಂತಹ ಚಾಲಾಕಿ ಪೋರ ಯಾರಿಗೆ ಯಾವ ಸಮಯದಲ್ಲಿ ಹೂವು ಬೇಕು ಅಂತ ನಿಖರವಾಗಿ ಊಹಿಸಿ ಮಾರಾಟಮಾಡುವ ಅವನ ಜಾಣತನಕ್ಕೆ ದಂಗಾಗಿದ್ದೆ. ಬದುಕು ಎಲ್ಲವನ್ನೂ ಕಲಿಸುತ್ತೆ.ಅವನು ಯಾವ ಸೈಕಾಲಜಿ ಸ್ಟಡಿ ಮಾಡಿಲ್ಲ ಆದರೆ ಆ ಪುಟ್ಟ ಪ್ರಪಂಚದೊಳಗೆ ಜೀವನಾನುಭವ ಕರಾರುವಕ್ಕಾಗಿದೆ ಅನ್ನುಸಿತು.. ಅವನು ಕೆಂಪು ಗುಲಾಬಿ ಖರೀದಿಸಿದ್ದೂ ಆಯ್ತು ಈ ಪರಿಯ ಜನ ಜಂಗುಳಿಯ ಜಾತ್ರೆಯಂತ ಜಾಗದಲ್ಲಿ ಅದೆಂತ ಏಕಾಂತ ಬಯಸಿ ಬರುತ್ತಾರೆ ಎನ್ನುವದು ಅರ್ಥವೇ ಆಗಲಿಲ್ಲ.. ಬಹುಶಃ ದಟ್ಟ ಬಯಲಿನಲ್ಲಿ ಸಾಗರಾಭಿಮುಖವಾಗಿ ಕುಳಿತಾಗ ಸಾಗರದಂತೆ ಭಾವಗಳೂ ಉಕ್ಕುತ್ತವೆಯೇನೋ.. ಅಳುವ ಕಂಗಳು.ಸಂತೈಸುವ ಕೈಗಳು. ಜಗಳವಾಡುವ ಬಾಯಿಗಳು,ಸೋಲುವ ಮನಸುಗಳು,ಕ್ರಷ್ ಆಗುವ ಹೃದಯಗಳು, ಮುದ್ದಾಡುವ ದೇಹಗಳು.. ಶೂನ್ಯ ದಿಟ್ಟಿಸುವ ಒಂಟಿ ಜೀವಗಳು,, ಅಲ್ಲಿ ಎಲ್ಲವೂ ನಡೆಯುತ್ತದೆ.. ರವಿಯ ಉದಯ ಕಾಲದಿಂದ ಅಂತ್ಯ ಕಾಲದವರೆಗೂ ನಿರಾತಂಕವಾಗಿ ಕುಳಿತು ನಿರಾಳವಾಗಿ ಹೋಗುತ್ತಾರೆ. ಮಧ್ಯ ಮಧ್ಯ ಬರುವ ನಮ್ಮಂತ ಪ್ಯಾಮಿಲಿಗಳು ಕೇವಲ ಪೋಟೊ ಕ್ಕೆ ಪೋಸ್ ಕೊಟ್ಟು ಹೋಗುತ್ತಿರ್ತಾರೆ ಅಷ್ಟೇ.. ಬೆನ್ನಿಗೆ ಕಣ್ಣಿಲ್ಲವೆಂದು ಕುಳಿತೇ ಇರುವ ಜೀವಗಳಿಗೆ ನೋ ಟೆನ್ಷನ್…ಅಲ್ಲಿ ಉಕ್ಕುವ ಶರಧಿ ಓಕುಳಿಯಾಡುವ ಸೂರ್ಯ, ರಂಗೇರುವ ಜೀವಗಳು ಅಷ್ಟೇ ಪ್ರಪಂಚ ಅಲ್ಲಿ ಯಾರು ಯಾರನ್ನೂ ನೋಡುವದೇ ಇಲ್ಲ ಪ್ರತಿಯೊಬ್ಬರಿಗೂ ಅವರದ್ದೇ ಅವಶ್ಯಕತೆಗಳು. ಪಬ್ಲಿಕ್ ನಲ್ಲಿ ಒಮ್ಮೆ ಪ್ರೀತಿ ಮಾಡ್ಬೇಕು ಅನ್ನುವ ಛೋಟೀ ಸಿ ಆಸೆಯನ್ನು ಮದುವೆಯಾದವರೂ ಅವರವರ ಸಂಗಾತಿ ಜೊತೆಗೇ ತೀರಿಸಿಕೊಳ್ಳಬಹುದು.. ಶುದ್ಧ ಪ್ರೇಮಿಗಳ ಭಾವೋದ್ವೇಗದ ವಿಶಾಲ ಬಯಲುದಾಣ ಈ ಮರೀನ್ ಡ್ರೈವ್ ಎಂಬ ಮೋಹಕ ಜಾಗ.. ಕುಳಿತಷ್ಟೂ ಹೊತ್ತೂ ಹೊಸ ಹೊಸ ಅನುಭವಗಳ ಜೊತೆಗೆ ಪ್ರಕೃತಿ ಸೌಂದರ್ಯ ವನ್ನೂ ಭರಪೂರ ಸವಿಯಬಹುದು. ಮಕ್ಕಳಿಂದ ವಯೋವೃದ್ಧರವರೆಗೂ ನಿರ್ಭಿಡೆಯಾಗಿ ಮುದಗೊಳ್ಳುವ ಜಾಗ.. ವಿಶೇಷವಾಗಿ ರವಿವಾರದಂದು ನೂರಾರು ಬೀದಿ ಮಾರಾಟಗಾರರು ಹೆಸರುವಾಸಿ ಬೀದಿ ತಿನಿಸುಗಳಾದ ಭೇಲ್ ಪುರಿ, ಪಾನಿ ಪುರಿ, ಸ್ಯಾಂಡ್ ವಿಚ್, ಫಾಲೂದಾ ಮೊದಲಾದವುಗಳನ್ನು ಸವಿಯಬಹುದು. ******

ಪ್ರವಾಸ ಕಥನ Read Post »

ಇತರೆ

ಲಂಕೇಶರನ್ನು ಏಕೆ ಓದಬೇಕು?

ಲಂಕೇಶರನ್ನು ಏಕೆ ಓದಬೇಕು? ನಾಗಸ್ವಾಮಿ ಮುತ್ತಿಗೆ ನಾನೆeಕೆ? ಲಂಕೇಶ್. ಅವರನ್ನು. ಒದಬೆeಕು….ಮಾನವ.ಸಹಜ.ನೊeವು. ಹತಾಶೆ. ಸಿಟ್ಟು. ಕಿeಳರಿಮೆಗಳಿಂದ.ಕುಗ್ಗಿ.ಹೊeಗಿದ್ದ.ನನ್ನಂಥವರಿಗೆ.ಬೆಳಕಾಗಿ. ಬಂದು.ಕನಸುಗಳ ನ್ನು.ಬಿತ್ತಿದರು..ನಮ್ಮ. ಗ್ರಹಿಕೆ ಗಳನ್ನು. ವಿಸ್ತರಿಸಿ.ಹೊಸ. ಹೊಸ. ಲೊeಕಗಳ..ಜ್ಞಾನದ. ಸವಿಯನ್ನು.ಉಣಬಡಿಸಿದರು..ಸುತ್ತಲಿನ.ಆಗುಹೊeಗುಗಳಿಗೆ.ಚಿಕಿತ್ಸಕ.ನೊeಟ.ಬಿeರುವಂತೆ.ಮಾಡಿದರು…. ನಾವು. ಏನಾದರೂ. ತಪ್ಪು. ಮಾಡಿದರೆ…ಲಂಕೇಶ್. ಸರ್.ನಮಗೆ.ಉಗಿದಂತಾಗುತ್ತದೆ..ನೈತಿಕತೆ..ಕಳೆದುಕೊಂಡು. ಮಾತಾಡಿದರೆ..ಅದೊಂದು. ಕ್ಷುಲ್ಲಕ .ವ್ಯಕ್ತಿತ್ವದ.ಗಟಾರದ ಬದುಕು. ಅನ್ನಿಸುಷ್ಟರ.ಮಟ್ಟಿಗೆ..ಅವರ.ಸಾಹಿತ್ಯ.ನಮ್ಮನ್ನು.ಎಚ್ಚರದಲ್ಲಿಡುತ್ತದೆ……ಬಹುಶಃ.. ಅವರ. ಸಾಹಿತ್ಯದ. ಸೊಬಗಿಲ್ಲದಿದ್ದರೆ..ನಾನು. ಈರಿeತಿ.ಬರೆಯಲು.ಆಗುತಿರಲಿಲ್ಲವೆeನೊ…ನನ್ನ.ಮಟ್ಟಿಗೆ. ಗೌರವ.ಘನತೆ ಯಿಂದ.ತಾಯಕರಣೆಯಿಂದ.ಬದುಕಲು..ಆಳವಾದ.. ಸೂಕ್ಷ್ಮ ಸಂವೆeದನೆಯಂದ..ಜಗತ್ತನ್ನು. ಅರ್ಥ ಮಾಡಿಕೊಂಡು. ಇನ್ನಷ್ಟು. ಕಾಲ. ಮಾನವಿeಯ ವಾಗಿರಲು.ಮೆeಷ್ಟ್ರ.ಚಿಂತನೆ. ಬೆeಕು…….ಅಮೂಲ್ಯ. ಮಾನವ. ಸಂಪತ್ತನ್ಬು ಉಳಿಸಿ.ಬೆಳೆಸಲು.ಅವರ.ಟಿeಕೆ.ಟಿಪ್ಪಣಿ.. ಬೆeಕe.ಬೆeಕು.. ಬದುಕಿನ. ಪುಳಕ.ಅನುಭವಿಸಲು.ಅವರ. ಮರೆಯುವ.ಮುನ್ನ. ಅನನ್ಯ.ಕಾಣ್ಕೆ…ಬದುಕಿನ.ಸಡಗರಕ್ಕೆ.ನಿಮ್ಮಿ.ಕಾಲಂ.ಅಂತೂ…ಅದ್ವಿತೀಯ…. ಮಾನವ.ಬದುಕಿನ. ಅರ್ಥ. ನಿರ್.ಅರ್ಥ ಕತೆ.ಮನಸ್ಸಿನ.ನಿಗೂಢ.ಶಕ್ತಿ.ಯ.ವಿಸ್ಮಯ ದ.ಅನುಭವ. ಪಡೆಯಲು.. ನಿeಲುವಿನ..ಕಾವ್ಯಾಂತರಂಗದ.ವೈಯಾರವಂತೂ.ಅವಿಚ್ಛಿನ್ನ ವಾದದ್ದು…ಅಷ್ಟೇ. ಏಕೆ? ಈಗಿನ. ಜನಮಾನಸ.ಅರಿತು.ಮುನ್ನಡೆಸಲು…ಇಡಿe…ಲಂಕೇಶ್. ಸರ್.ಅವರ.ಸಮಗ್ರ..ಸಾಹಿತ್ಯ.ವನ್ನು.ಮತ್ತೆ.ಮತ್ತ…ಓದುತ್ತಲೆeಇರಭeಕು.ಅಲ್ಲವೆe?.

ಲಂಕೇಶರನ್ನು ಏಕೆ ಓದಬೇಕು? Read Post »

ಇತರೆ

ಪಾಟೀಲ ಪುಟ್ಟಪ್ಪ

ಪ್ರಪಂಚ ತೊರೆದ ಪಾಪು ನಾಡೋಜ, ಟಿಎಸ್ಆರ್ ಪ್ರಶಸ್ತಿ ಪುರಸ್ಕೃತ, ಡಾ.ಪಾಟೀಲ ಪುಟ್ಟಪ್ಪ ಅಸ್ತಂಗತ..! ಹಿರಿಯ ಪತ್ರಕರ್ತ, ರಾಜ್ಯಸಭೆ ಮಾಜಿ ಸದಸ್ಯ ನಾಡೋಜ ಡಾ.ಪಾಟೀಲ ಪುಟ್ಟಪ್ಪ (102) ಅವರು ವಿಧಿವಶರಾಗಿದ್ದಾರೆ… ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಕಳೆದ ಫೆ.10 ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ನಿಧನರಾಗಿದ್ದಾರೆ… ನಿನ್ನೆಯಷ್ಟೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪಾಪು ಅವರ ಆರೋಗ್ಯ ವಿಚಾರಿಸಿದ್ದರು. ಬಳಿಕ ಮಾತನಾಡಿದ್ದ ಸಿಎಂ, ರಾಷ್ಟ್ರೀಯ ಬಸವ ಪುರಸ್ಕಾರದೊಂದಿಗೆ ಹತ್ತು ಲಕ್ಷ ರೂ. ನಗದು ನೀಡಲಾಗುವುದು. ಅಲ್ಲದೇ ಡಾ.ಪಾಟೀಲ ಪುಟ್ಟಪ್ಪ ಅವರ ಆರೋಗ್ಯ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದರು… ನಾಡೋಜ ಪಾಪು ಅವರು, ವಿಪರೀತ ಜ್ವರ, ಉಸಿರಾಟ ತೊಂದರೆ ಹಾಗೂ ಆಯತಪ್ಪಿ ಬಿದ್ದ ಪರಿಣಾಮ ತಲೆಗೆ ಪೆಟ್ಟಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೇ ದೀರ್ಘಕಾಲದ ಪುಪ್ಪಸ ತೊಂದರೆ ಹಾಗೂ ತಲೆಯಲ್ಲಿ ರಕ್ತಸ್ರಾವ ಉಂಟಾಗಿದ್ದರಿಂದ ಚಿಕಿತ್ಸೆ ಮಾಡಲಾಗಿತ್ತು. ಕಿಡ್ನಿ ತೊಂದರೆ, ರಕ್ತ ಹೀನತೆ ಹಾಗೂ ಸೋಂಕು ಕಂಡು ಬಂದಿದ್ದು, ಈ ಎಲ್ಲಾ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗಿತ್ತು… ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಲಾಯಿತು. ಆದರೆ ಶಸ್ತ್ರಚಿಕಿತ್ಸೆ ನಂತರ ಆರೋಗ್ಯ ಗಂಭೀರವಾಗಿತ್ತು. ಬಳಿಕ ಕೃತಕ ಉಸಿರಾಟ ಯಂತ್ರ (ವೆಂಟಿಲೇಟರ್) ಅಳವಡಿಸಲಾಗಿತ್ತು. ದೀರ್ಘಕಾಲ ಹಾಸಿಗೆ ಹಿಡಿದ ಪರಿಣಾಮ ಪಲ್ಮನರಿ ಥ್ರಂಬೋ ಎಂಬೋಲಿಸಂ ಆಗಿದೆ ಎಂದು ತಜ್ಞ ವೈದ್ಯ ಪ್ರೊ.ಡಿ.ಎಂ.ಕಬಾಡಿ ತಿಳಿಸಿದ್ದರು… ಹೀಗೆಯೇ ಕೊನೆಗೂ ಅಸ್ತಂಗತರಾದರೂ ಡಾ. ಪಾಟೀಲ ಪುಟ್ಟಪ್ಪನವರು..! ಡಾ.ಪಾಟೀಲ ಪುಟ್ಟಪ್ಪನವರ ‘ಪ್ರಪಂಚ’..!– ಕನ್ನಡ ನಾಡಿಗೆ ಕೀರ್ತಿ ತಂದವರು ಪುಟ್ಟಪ್ಪದ್ವಯರು. ಸಾಹಿತ್ಯ ಲೋಕಕ್ಕೆ ಕುವೆಂಪು. ಪರ್ತಕರ್ತರಾಗಿ ಪ್ರಪಂಚ ಖ್ಯಾತಿಯ ಪಾಟೀಲ ಪುಟ್ಟಪ್ಪ ಅಥವಾ ಪಾ.ಪುರವರು. ಡಾ.ಪಾಪು ಹುಟ್ಟಿದ್ದು ಹಾವೇರಿ ತಾಲ್ಲೂಕಿನ ಕುರುಬಗೊಂಡ ಹಳ್ಳಿಯಲ್ಲಿ. ತಂದೆ ಸಿದ್ಧಲಿಂಗಪ್ಪ, ತಾಯಿ ಮಲ್ಲಮ್ಮ… ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟಿದ ಊರು ಮತ್ತು ಹಾವೇರಿಯಲ್ಲಿ ಮುಗಿಸಿದರು. ಲಿಂಗರಾಜ ಕಾಲೇಜ ಸೇರಿ ಕಾನೂನು ಪದವಿ ಗಳಿಸಿದರು. ಬಿಜಾಪುರದಲ್ಲಿ ವಕೀಲ ವೃತ್ತಿ ಆರಂಭ ಮಾಡಿದರು. ಕಕ್ಷಿಗಾರರಿಲ್ಲದೇ ಸಂಪಾದನೆ ಖೋತವಾಯಿತು. ಊಟಕ್ಕೂ ತತ್ವಾರ. ಉದ್ಯೋಗಕ್ಕಾಗಿ ಮುಂಬೈಗೆ ಪಯಣ ಬೆಳೆಸಿದರು. ಅವರು ಕೋರ್ಟಿಗಿಂತ ಪತ್ರಿಕಾ ಕಚೇರಿಗಳಿಗೆ ಹೋದದ್ದೇ ಹೆಚ್ಚು. ಫ್ರೀ ಪ್ರೆಸ್ ಜರ್ನಲ್‌ದ ಸದಾನಂದ, ಬಾಂಬೆ ಕ್ರಾನಿಕಲ್ ಪತ್ರಿಕೆಯು ಸೈಯದ್ ಅಬ್ದುಲ್ಲಾ ಮತ್ತು ಎ.ಜಿ.ತೆಂಡೂಲ್ಕರ್ ಸ್ನೇಹ, ಪತ್ರಿಕೋದ್ಯಮದ ಹುಚ್ಚು ಹಿಡಿಸಿತು… ಕ್ಯಾಲಿಫೋರ್ನಿಯಾಗೆ ತೆರಳಿ ಪತ್ರಿಕೋದ್ಯಮದ ಎಂ.ಎಸ್‌ಸಿ. ಗಳಿಸಿ ಹಿಂದಿರುಗಿ ಬಂದು ಪತ್ರಿಕಾರಂಗ ಪ್ರವೇಶ ಮಾಡಿದರು… ೧೯೪೭ರಲ್ಲಿ ವಿಶಾಲ ಕರ್ನಾಟಕ, ೧೯೫೨ರಲ್ಲಿ ನವಯುಗ, ೧೯೫೪ರಲ್ಲಿ ಪ್ರಪಂಚ ಸಾಪ್ತಾಹಿಕ, ೧೯೫೬ರಲ್ಲಿ ಸಂಗಮ ಮಾಸಿಕ, ೧೯೫೯ರಲ್ಲಿ ವಿಶ್ವವಾಣಿ ದೈನಿಕ, ೧೯೬೧ರಲ್ಲಿ ಮನೋರಮ ಸಿನಿಮಾ ಪಾಕ್ಷಿಕ, ೧೯೬೪ರಲ್ಲಿ ಸ್ತ್ರೀ ಮಾಸಿಕ ಮುಂತಾದ ಹಲವಾರು ಪತ್ರಿಕೆಗಳ ಸಂಪಾದಕತ್ವ‌ ವಹಿಸಿದ್ದರು… ಮೊನಚಿನ ಬರಹಕ್ಕೆ ಬೆರಗಾಗಿ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಪದವಿ ಪಡೆದರು. ಯಾವುದೇ ಕಚೇರಿ ನೇರಪ್ರವೇಶ, ಕನ್ನಡ ಬಳಕೆಗೆ ಆಗ್ರಹ. ಕನ್ನಡ ದುರವಸ್ಥೆ ಕಂಡು ಖಂಡನೆ ಇತ್ಯಾದಿ ಇದ್ದೇ ಇತ್ತು… ಅಧಿಕಾರಿಗಳಿಗೆ ಚಾಟಿ ಪ್ರಹಾರವೂ‌ ನಡದೇ ಇತ್ತು. ಇವರು ಕನ್ನಡಕ್ಕೆ ಗಳಿಸಿಕೊಟ್ಟ ಸ್ಥಾನಮಾನ ಅಪಾರ. ಚರಿತ್ರಾರ್ಹ ಕಾರ‍್ಯ ಸಾಧನೆಯಾಗಿತ್ತು… ಹಲವಾರು ಸಾಹಿತ್ಯ ಕೃತಿಗಳ ರಚನೆಯೂ ನಡೆದೇ ಇತ್ತು. ಸಾವಿನ ಮೇಜುವಾನಿ, ಗವಾಕ್ಷ ತೆರೆಯಿತು, ಶಿಲಾಬಾಲಿಕೆ ನುಡಿಗಳು-ಕಥಾಸಂಕಲನಗಳು ; ಸರ್ ಸಿದ್ದಪ್ಪ ಕಂಬಳಿ, ಹೊಸಮನಿ ಸಿದ್ದಪ್ಪನವರು- ಜೀವನ ಚರಿತ್ರೆ ; ನನ್ನೂರು ಈ ನಾಡು, ಹೊಸದನ್ನ ಕಟ್ಟೋಣ, ಬದುಕುವ ಮಾತು-ಪ್ರಬಂಧ ಸಂಕಲನಗಳು ಮುಖ್ಯವಾದ ಅವರ ಕೃತಿಗಳು… ಡಾ.ಪಾಟೀಲ ಪುಟ್ಟಪ್ಪನವರನ್ನು ಅರಸಿಬಂದ ಪ್ರಶಸ್ತಿಗಳು ಹಲವಾರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ರಾಜ್ಯಸಭಾ ಸದಸ್ಯತ್ವ, ೨೦೦೩ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬಸವಶ್ರೀ ಪ್ರಶಸ್ತಿ, ಟಿ.ಎಸ್.ಆರ್. ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದುವುಗಳು. ಅಭಿಮಾನಿಗಳು ಅರ್ಪಿಸಿದ ಗೌರವಗ್ರಂಥ ‘ಪ್ರಪಂಚದ ಪಾಪು’ ಮತ್ತು ‘ನಾನು ಪಾಟೀಲ ಪುಟ್ಟಪ್ಪ.’ ಮುಂತಾದವುಗಳು..! ಇಷ್ಟು ಹೇಳಿ ಡಾ.ಪಾಟೀಲ ಪುಟ್ಟಪ್ಪನವರ ಬಗೆಗೆ ಮಾತು ಮುಗಿಸುತ್ತೇನೆ… ‌ ‌‌‌‌‌‌ ‌ — ಕೆ.ಶಿವು.ಲಕ್ಕಣ್ಣವರ

ಪಾಟೀಲ ಪುಟ್ಟಪ್ಪ Read Post »

ಇತರೆ

ಪರಿಚಯ

ಹನುಮಾಕ್ಷಿ ಗೋಗಿ. ಅನನ್ಯ ಶಾಸನ ಸಂಶೋಧಕಿ, ಸಾಹಿತಿ, ಪ್ರಕಾಶಕಿ ಹನುಮಾಕ್ಷಿ ಗೋಗಿ..! ಸಂಶೋಧಕಿ ಹನುಮಾಕ್ಷಿ ಗೋಗಿಯವರು ನನಗಷ್ಟೇಯಲ್ಲ ನಮ್ಮ ಗೆಳೆಯರಿಗೆ ಪರಿಚಯವಾಗಿದ್ದು ಇದೇ ಧಾರವಾಡದಲ್ಲಿ ನೆಲಸಿದ್ದ ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನ ಅಗಡಿ ಗ್ರಾಮದವರಾಗಿದ್ದ ನನ್ನ ಅಷ್ಟೇ ಅಲ್ಲ ಅನೇಕಾನೇಕ ನಮ್ಮ ಗೆಳೆಯರ ಮಾರ್ಗದರ್ಶಕರಾಗಿದ್ದ ಮೋಹನ ನಾಗಮ್ಮನವರ ಮೂಲಕ. ಮೋಹನ ನಾಗಮ್ಮನವರಿಗೆ ಇದ್ದ ಅನೇಕಾನೇಕ ಶಿಷ್ಯ ಬಳಗದಲ್ಲಿ ನಾನು, ರೈತ ಕವಿಯಾದ ಚಂಸು ಅಂದರೆ ಚಂದ್ರಶೇಖರ ಪಾಟೀಲ ಮತ್ತು ರೈತ, ನ್ಯಾಯವಾದಿ ಮತ್ತು ಲೇಖಕ ವಿಜಯಕಾಂತ ಪಾಟೀಲಗಳು ತೀರಾ ಹತ್ತಿರದ ಶಿಷ್ಯರಾಗಿದ್ದೆವು. ಆ ಸಮಯದಲ್ಲಿ ಸಿಕ್ಕವರು ಅಂದರೆ ನಮಗೆ ತೀರಾ ಪರಿಚಿತವಾದರು ಸಂಶೋಧಕಿ ಹನುಮಾಕ್ಷಿ ಗೋಗಿಯವರು… ಹನುಮಾಕ್ಷಿ ಗೋಗಿಯವರು ಬರೀ ಸರ್ಕಾರಿ ಅಧಿಕಾರಿಗಳು ಮಾತ್ರ ಆಗಿರಲಿಲ್ಲ. ಅವರೊಬ್ಬ ಅನನ್ಯ ಲೇಖಕಿಯಾಗಿದ್ದರು. ಅದರಲ್ಲೂ ಅವರೊಬ್ಬ ಶಾಸನಗಳ ಸಂಶೋಧಕಿಯಾಗಿದ್ದರು. ಅವರ ಸಂಶೋಧನೆ ತೀರಾ ಹಸಿವಿನಿಂದ ಕೂಡಿತ್ತು, ಅಂದರೆ ಅವರು ಶಾಸನ ಅಧ್ಯಯನದಲ್ಲಿ ಅಷ್ಟೊಂದು ತೀರಾ ಚಿಕಿತ್ಸಕರಾಗಿದ್ದರು. ಶಾಸನಗಳ ಹುಡುಕಾಟದಲ್ಲಿ ಭಾರೀ ಹಸಿವು ಉಳ್ಳವರು ಆಗಿದ್ದರು ಹನುಮಾಕ್ಷಿ ಗೋಗಿಯವರು… ಮಹಿಳಾ ಸಾಹಿತ್ಯದಲ್ಲಿ ಹೆಸರು ಮಾಡಿದವರೂ ಆಗಿದ್ದರು. ಹಾಗಾಗಿಯೇ ಹನುಮಾಕ್ಷಿ ಗೋಗಿಯವರು ‘ಮಹಿಳಾ ಸಾಹಿತ್ಯಕಾ’ ಎಂಬ ಪ್ರಕಾಶನವನ್ನೂ ತೆರೆದು ನಾಡಿನ ಪ್ರಮುಖ ಲೇಖಕಿಯರ ಸಾಹಿತ್ಯವನ್ನು ಪ್ರಚುರಪಡಿಸಿದವರು ಮತ್ತು ಈಗಲೂ ಆ ನಿಟ್ಟಿನ ಕೆಲಸದಲ್ಲಿ ತೊಡಗಿಕೊಂಡವರು. ಇವರ ಪ್ರಕಾಶನದಿಂದ ಅಮೂಲ್ಯ ಸಾಹಿತ್ಯ ಒಡಮೂಡಿದೆ. ಹಾಗಾಗಿಯೇ ತಾವೊಬ್ಬ ಸಾಹಿತಿಯಾಗಿಯೂ ಇತರ ಪ್ರಮುಖ ಮಹಿಳಾ ಸಾಹಿತಿಗಳನ್ನೂ ಹೊರತಂದವರು ಹನುಮಾಕ್ಷಿ ಗೋಗಿಯವರು… ಮುಖ್ಯವಾಗಿ ಇವರೊಬ್ಬ ಶಿಲಾ ಶಾಸನಗಳ ಸಂಶೋಧಕಿಯಾಗಿ ಮಾಡಿದ ಕೆಲಸ ಅಮೂಲ್ಯ ಮತ್ತು ಅನನ್ಯವಾದದು. ಇಂತಹ ಹನುಮಾಕ್ಷಿ ಗೋಗಿಯವರ ಬಗೆಗೆ ಒಂದು ಕಿರು ಟಿಪ್ಪಣಿ ಹೀಗಿದೆ… ಹನುಮಾಕ್ಷಿ ಗೋಗಿ ಅವರು ೧೯೫೫ ಜೂನ ೧ ರಂದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬೈಚಬಾಳ ಗ್ರಾಮದಲ್ಲಿ ಜನಿಸಿದರು… ಇವರು ಮೂಲತಃ ಅವಿಭಜಿತ ಗುಲ್ಬರ್ಗಾ ಅಥವಾ ಕಲಬುರ್ಗಿ ಜಿಲ್ಲೆಯವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅದೇ ವಿಶ್ವ ವಿದ್ಯಾಲಯದಿಂದ ಶಾಸನ ಶಾಸ್ತ್ರದಲ್ಲಿಯೂ ಅವರು ಪ್ರಥಮ ಶ್ರೇಣಿಯೊಂದಿಗೆ ಪ್ರಥಮ ಸ್ಥಾನವನ್ನೂ ಪಡೆದುಕೊಂಡರು. ಸದ್ಯ ಕರ್ನಾಟಕ ರಾಜ್ಯ ಸರಕಾರದ ಸಹಕಾರ ಇಲಾಖೆಯ ಸೇವೆಯಲ್ಲಿದ್ದಾರೆ. ಈಗ ಧಾರವಾಡದಲ್ಲಿ ನೆಲೆಸಿರುವ ಹನುಮಾಕ್ಷಿ ಗೋಗಿಯವರು, ಲೇಖಕಿ, ಸಂಶೋಧಕಿ ಹಾಗೂ ಪ್ರಕಾಶಕಿಯಾಗಿಯೂ ಇದ್ದಾರೆ… ಇವರು ‘ಮಹಿಳಾ ಸಾಹಿತ್ಯಿಕಾ’ ಎನ್ನುವ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ, ಅದರ ಮೂಲಕ ಅನೇಕಾನೇಕ ಲೇಖಕಿಯರ ಸಾಹಿತ್ಯದ ವಿವಿಧ ಪ್ರಕಾರಗಳ ೪9ಕ್ಕೂಹೆಚ್ಚು ಕೃತಿಗಳನ್ನು ಪ್ರಕಟಗೊಳಿಸಿದ್ದಾರೆ… ಶಾಸನಗಳ ಆಕರ ಸಂಶೋಧಕಿಯಾಗಿರುವ ಇವರ ಕೃತಿಗಳು ಹೀಗಿವೆ– ವ್ಯಾಸಂಗ (೧೯೮೩). ಮುದ್ನೂರು ಮತ್ತು ಯಡ್ರಾಮಿ ಶಾಸನಗಳು (೧೯೯೩) (ಡಾ. ಬಿ. ಆರ್. ಹಿರೇಮಠ ಜೊತೆಯಲ್ಲಿ). ಸುರಪುರ ತಾಲೂಕಿನ ಶಾಸನಗಳು (೧೯೯೪). ಕಲಬುರ್ಗಿ ಜಿಲ್ಲೆಯ ಶಾಸನಗಳು (೧೯೯೫). ಕರ್ನಾಟಕ ಭಾರತಿ ಸೂಚಿ (೨೦೦೨). ಅನುಶಾಸನ (೨೦೦೨). ಉಪ್ಪಾರ ಹಣತೆ (೨೦೦೨). ಬೀದರ ಜಿಲ್ಲೆಯ ಶಾಸನಗಳು (೨೦೦೫). ಕಾಳಾಮುಖ ಮತ್ತು ಪಾಶುಪತ ದೇವಾಲಯಗಳು (೨೦೦೭). ಲಕ್ಕುಂಡಿ ಶಾಸನಗಳು (೨೦೦೮). ಡಂಬಳ: ಸಾಂಸ್ಕೃತಿಕ ಅಧ್ಯಯನ (೨೦೦೮) (ಡಾ. ಪಿ. ಕೆ. ರಾಥೋಡರ ಜೊತೆಯಲ್ಲಿ). ಜಗದ್ಗುರು ತೋಂಟದಾರ್ಯ ಮಠದ ದಾಖಲು ಸಾಹಿತ್ಯ (೨೦೦೯) (ಡಾ. ಪಿ. ಕೆ. ರಾಥೋಡ ಜೊತೆಯಲ್ಲಿ). ನವಿಲುಗುಂದ ಸಿರಿ (ಶತಮಾನೋತ್ಸವ ಸ್ಮರಣ ಸಂಚಿಕೆ) (೨೦೦೯). ಅಣ್ಣಯ್ಯ ತಮ್ಮಯ್ಯಗಳ ಪುರಾಣ (೨೦೧೦) (ಡಾ. ಪಿ. ಕೆ. ರಾಥೋಡ ಜೊತೆಯಲ್ಲಿ). ಚೈತನ್ಯಶೀಲೆ ( ಸರೋಜಿನಿ ಚವಲಾರ ಅವರ ಸಂಭಾವನಾ ಗ್ರಂಥ) (೨೦೧೧). ಹುಬ್ಬಳ್ಳಿ ತಾಲೂಕಿನ ಶಾಸನಗಳು (೨೦೧೩). ಡಾ.ಆರ್.ಎನ್.ಗುರವ ಸಂಪ್ರಬಂಧಗಳು (೨೦೧೪). ರಾಜಮನೆತನದ ಚರಿತ್ರೆಗಳು (೨೦೧೪). ಲಕ್ಷ್ಮೇಶ್ವರದ ಶಾಸನಗಳು (೨೦೧೫). ದಂಡಿನ ದಾರಿ (೨೦೧೬). ಯಾದಗಿರಿ ಜಿಲ್ಲೆಯ ಶಾಸನಗಳು (೨೦೧೬). ಇವರ ಸಂಶೋಧನೆಗೆ ಸಂದ ಸನ್ಮಾನ ಮತ್ತು ಪುರಸ್ಕಾರಗಳು-– ೧೯೯೧ – ಆಡಳಿತಾತ್ಮಕ ಸೇವೆಗೆ ಸನ್ಮಾನ. ೪ನೆಯ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ನರಗುಂದದ ಪುರಸ್ಕಾರ. ೧೯೯೫ – ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ದತ್ತಿನಿಧಿ ಪ್ರಶಸ್ತಿ, ಬೆಂಗಳೂರು. ೧೯೯೬ – ರಾಜ್ಯ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಬೆಂಗಳೂರು. ೨೦೦೪ – ಮಾತೋಶ್ರೀ ರತ್ನಮ್ಮ ಹೆಗ್ಗಡೆ ಬಹುಮಾನ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ. ೨೦೦೫ – ಡಾ. ಜ. ಚ. ನಿ. ಪ್ರಶಸ್ತಿ, ರಾಜೂರು. ೨೦೦೫ – ಬಾಲಕೃಷ್ಣ ಪ್ರಶಸ್ತಿ, ನರೇಗಲ್ಲ. ೨೦೦೫ – ಲೇಪಾಕ್ಷಸ್ವಾಮಿ ಪ್ರಶಸ್ತಿ, ಬೆಂಗಳೂರು. ೨೦೦೬ – ಡಾ. ಶೈಲಜ ಉಡಚಣ ಪ್ರಶಸ್ತಿ, ಕಲಬುರ್ಗಿ. ೨೦೦೬ – ರುಕ್ಮಿಣಿಬಾಯಿ ಸ್ಮಾರಕ ಪ್ರಶಸ್ತಿ, ಬೆಂಗಳೂರು. ೨೦೦೭- ಡಾ. ದ. ರಾ. ಬೇಂದ್ರೆ ಪ್ರಶಸ್ತಿ, ಅಡ್ನೂರು. ೨೦೦೯ – ಡಾ. ಬಾ. ರಾ. ಗೋಪಾಲ ಪ್ರಶಸ್ತಿ, ಇತಿಹಾಸ ಅಕ್ಯಾಡಮಿ, ಬೆಂಗಳೂರು. ೨೦೧೪ – ಉತ್ತರ ಕರ್ನಾಟಕ ಲೇಖಕಿಯರ ಸಂಘದಿಂದ ಇನ್ಫೋಸಿಸ್ ಫೌಂಡೇಶನ್ ಪ್ರಶಸ್ತಿ. ೨೦೧೪ – ಚಂದ್ರಗಿರಿ ಮಹೋತ್ಸವ ಸಮಿತಿ ವತಿಯಿಂದ ಶಾಸನ ಸಾಹಿತ್ಯ ಪ್ರಶಸ್ತಿ. ೨೦೧೫ – ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ೨೦೧೨ರ ಗೌರವ ಪ್ರಶಸ್ತಿ. ೨೦೧೫ – ಕರ್ನಾಟಕ ಲೇಖಕಿಯರ ಸಂಘದಿಂದ ಪುಸ್ತಕಕ್ಕೆ ಜಯಮ್ಮ ಕರಿಯಣ್ಣ ದತ್ತಿ ಬಹುಮಾನ. ೨೦೧೫ – ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನದಲ್ಲಿ ಲೋಪಾಮುದ್ರಾ ಪ್ರಶಸ್ತಿ. ೨೦೧೫ – ಜಗದ್ಗುರು ತೋಂಟದಾರ್ಯ ಮಠದಿಂದ ಸನ್ಮಾನ. ೨೦೧೫ – ಕಸಾಪದಿಂದ ಟಿ.ಗಿರಿಜಮ್ಮ ಸಾಹಿತ್ಯ ಪ್ರಶಸ್ತಿ. ೨೦೧೬ – ಮಲ್ಲೆಪುರಂ ಪ್ರತಿಷ್ಠಾನ ಸಾಹಿತ್ಯ ಪ್ರಶಸ್ತಿ. ೨೦೧೭ – ಬೇಲೂರು ಬಸವಕಲ್ಯಾಣದ ಉರಿಲಿಂಗ ಪೆದ್ದಿ ಸಾಹಿತ್ಯ ಪ್ರಶಸ್ತಿ. ಹೀಗೆಯೇ ವಿವಿಧ ಪುರಸ್ಕಾರ ಮತ್ತು ಪ್ರಶಸ್ತಿಗಳು ಬಂದಿವೆ ಹನುಮಾಕ್ಷಿ ಗೋಗಿಯವರಿಗೆ… ಹೀಗೆಯೇ ಒಬ್ಬ ಸರ್ಕಾರಿ ಅಧಿಕಾರಿಯಾಗಿಯೂ ಶಾಸನ ಸಾಹಿತ್ಯ ಮತ್ತು ಇತರೆ ಸಾಹಿತ್ಯದ ಕೃಷಿಯಲ್ಲಿ ತೊಡಗಿಸಿಕೊಂಡರು ಹನುಮಾಕ್ಷಿ ಗೋಗಿಯವರು..! *********** — ಕೆ.ಶಿವು.ಲಕ್ಕಣ್ಣವರ

ಪರಿಚಯ Read Post »

ಇತರೆ

ಲಂಕೇಶರನ್ನು ಏಕೆ ಓದಬೇಕು?

ಲಂಕೇಶರನ್ನು ಏಕೆ ಓದಬೇಕು? ಸುಪ್ರಿಯಾ ನಟರಾಜ್ ನಾನೇಕೆ ಲಂಕೇಶರನ್ನು ಓದುತ್ತೇನೆ ಪಿಯುಸಿ ಯಿಂದಲೂ ವಿಜ್ಞಾನದ ವಿದ್ಯಾರ್ಥಿಯಾಗಿದ್ದ ನನಗೆ, ಕನ್ನಡ ಸಾಹಿತ್ಯದಲ್ಲಿ ಅಪಾರವಾದ ಆಸಕ್ತಿ ಇತ್ತು. ಆದರೆ, ಪುಸ್ತಕಗಳನ್ನು ಸಂಗ್ರಹಿಸುವುದು ನನ್ನ ಹವ್ಯಾಸವಾಗಿತ್ತೇ ಹೊರತು, ಓದುವುದು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ನನಗೆ ಪುಸ್ತಕಗಳ ಮೇಲೆ ಪ್ರೀತಿ ಇತ್ತು. ಆದರೆ ಅವುಗಳನ್ನು ಓದುವ ಚಟವಿರಲಿಲ್ಲ.  ಆದರೂ ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವುದು ನನ್ನ ಆಸ್ಥೆಯಾಗಿದ್ದರಿಂದ ಕನ್ನಡ ರತ್ನ ಪರೀಕ್ಷೆ ಯಲ್ಲಿ ಉತ್ತೀರ್ಣಳಾಗಿ, ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿರುವಾಗ, ನನ್ನ ಸಂಗ್ರಹದಲ್ಲಿ ಹಲವಾರು ವರ್ಷಗಳಿಂದ ಬೆಚ್ಚಗೆ ಕುಳಿತಿದ್ದ ಮಲೆಗಳ ಮದುಮಗಳನ್ನು, ಮೂಕಜ್ಜಿಯನ್ನು ಭೇಟಿಯಾದ ಮೇಲೆ ನನ್ನಲ್ಲಿದ್ದ ‘ಓದುಗ’ ಪ್ರಜ್ಞೆ ಜಾಗೃತವಾಯಿತು. ಈ ಪ್ರಜ್ಞೆ, ನನ್ನಿಂದ ಕುವೆಂಪು, ಶಿವರಾಮ ಕಾರಂತ, ಕೆ.ಪಿ ಪೂರ್ಣಚಂದ್ರ ತೇಜಸ್ವಿ, ಯು.ಆರ್ ಅನಂತಮೂರ್ತಿ, ಎಸ್.ಎಲ್.ಭೈರಪ್ಪ, ಪಿ.ಲಂಕೇಶ್ ಅವರ ಪರಿಚಯ ಮಾಡಿಸಿ, ಸಾಹಿತ್ಯದ ರೂಪುರೇಷೆಗಳನ್ನು ಮನಸ್ಸಿನಲ್ಲಿ ಮೂಡಿಸಿತು. ನನಗೆ ಪಿ.ಲಂಕೇಶ್ ಅವರ ಪರಿಚಯ ವಾಗಿದ್ದು ಅವರ ಅವ್ವ ಎಂಬ ಕಾವ್ಯದಿಂದ. ಈ ಕವನದಲ್ಲಿ ಲಂಕೇಶರು, ಕೃಷಿ ಸಂಸ್ಕೃತಿಯ ತಾಯಿ ಮತ್ತು ಮಗುವಿನ ಸಂಬಂಧವನ್ನು ರೂಪಕವಾಗಿ ವರ್ಣಿಸಿದ್ದಾರೆ. ಲಂಕೇಶರ ಅವ್ವ ನಮ್ಮ ನಾಡಿನ  ಸಾವಿರಾರು ಹೆಣ್ಣುಮಕ್ಕಳಂತೆ ಮಣ್ಣಿನ ಮಗಳು. ಅವಳ ಉರುಟು ಬದುಕಿನಂತೆ, ಇಲ್ಲಿ ಬಳಸಿದ ಭಾಷೆಯೂ ಉರುಟು. ಲಂಕೇಶರು ತಮ್ಮ ತಾಯಿಗೆ ಕೊಡುವ ಹೋಲಿಕೆಗಳಂತೂ ಓದುಗನನ್ನು ದಿಗ್ಭ್ರಾಂತಿಸುತ್ತದೆ. ಅವಳ ಕಪ್ಪು ನೆಲಸತ್ವ, ಬನದ ಕರಡಿ, ನೊಂದ ನಾಯಿ, ಪೇಚಾಡುವ ಕೋತಿಯ ಗುಣಗಳು, ಹೆಣ್ಣುಮಗಳೊಬ್ಬಳ ಒಂಟಿ ಹೋರಾಟದ ಬದುಕಿನ ಅನಿವಾರ್ಯ ಲಕ್ಷಣಗಳು. ನನಗೆ ಈ ಕವಿತೆ, ‘ಹೊತ್ತುಹೊತ್ತಿಗೆ ತುತ್ತನಿಟ್ಟು ಸಲುಹಿದಾಕೆ, ನಿನಗೆ ಬೇರೆ ಹೆಸರು ಬೇಕೇ, ಸ್ತ್ರೀ ಎಂದರೆ ಅಷ್ಟೇ ಸಾಕೇ’  ಎಂಬ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಸಾಲುಗಳನ್ನು ನೆನಪಿಸಿತು. ಲಂಕೇಶರು, ತಮ್ಮ ತಾಯಿಯನ್ನು ಕೃತಕವಾಗಿ ಹೊಗಳದೇ ಅಭಿನಂದಿಸಿದ್ದಾರೆ. ನೀರಿನಲ್ಲಿ ಹಿಟ್ಟನ್ನು ಕಲಿಸಿ, ಹದಮಾಡಿ, ತಟ್ಟುತ್ತಾ ಹೋದಂತೆ ಸಿದ್ಧವಾಗುವ ರೊಟ್ಟಿ ತಯಾರಿಸುವುದು ಎಲ್ಲರಿಗೂ ಸಿದ್ಧಿಸುವಂತದಲ್ಲ. ಆದರೆ ಲಂಕೇಶರು ತಟ್ಟಿರುವ ರೊಟ್ಟಿ,ವಿಭಿನ್ನ.  ಈ ಮಹತ್ವದ ಕತೆ, ಮನುಷ್ಯನ ಸೂಕ್ಷ್ಮ ಸಂವೇದನೆಗಳನ್ನು ಪ್ರತಿಬಿಂಬಿಸುವ ಕನ್ನಡಿಯಾಗಿದೆ. ರೊಟ್ಟಿಯಲ್ಲಿ ರೈತನ ದುಡಿಮೆ,ಪರಿಶ್ರಮ, ಅಮ್ಮನ ಪ್ರೀತಿ ಇದೆ. ಹಸಿದವರ ಒಡಲನ್ನು ತಣಿಸುವ ಗುಣ ಇದೆ. ಆದರೆ, ಲಂಕೇಶರ ರೊಟ್ಟಿಯಲ್ಲಿ, ಹರಕು ಬಟ್ಟೆಯ ಹಸಿದ ವ್ಯಕ್ತಿ, ವಿಚಿತ್ರ ವ್ಯಕ್ತಿತ್ವದ ಹೆಣ್ಣು, ಪೊಲೀಸ್ ಅವ್ಯವಸ್ಥೆ, ಹಸಿವು, ಭಯ, ಕೋಪ, ಅಸಹಾಯಕತೆಯ ಅಂಶಗಳು ಕಾಣಸಿಗುತ್ತದೆ. ಇನ್ನು ಲಂಕೇಶರನ್ನು ಭೇಟಿಮಾಡಲು ನನಗೆ ಸಿಕ್ಕ ಮತ್ತೊಂದು ಕೊಂಡಿ, ‘ಸಂಕ್ರಾಂತಿ’ ನಾಟಕ. ‘ಕ್ರಾಂತಿ’ ಎಂದರೆ ಸುಗ್ಗಿಯ ಸಂಭ್ರಮ. ಸೂರ್ಯ ತನ್ನ ಪಥವನ್ನು ಬದಲಾಯಿಸುವ ದಿನ. ಅಂತಹ ದಿನದಂದು, ಒಂದು ಸಾಮಾಜಿಕ ವಿನ್ಯಾಸದಲ್ಲಿ, ಅದೂ ದಲಿತರ ಕೇರಿಯಲ್ಲಿ, ಕಾಣುವ ವಿಚಿತ್ರ ತಿರುವು ಈ ನಾಟಕದಲ್ಲಿ ಚಿತ್ರಣಗೊಂಡಿದೆ. ಬೇರೆ ಎಲ್ಲಾ ಲೇಖಕರು ತಮ್ಮನಾಟಕಗಳಲ್ಲಿ ಕ್ರಾಂತಿಯ ಸಾಧ್ಯತೆ ಹೇಳಿದ್ದರೆ, ಲಂಕೇಶರು ಇಲ್ಲಿ ‘some ಕ್ರಾಂತಿ’ಯನ್ನುಂಟು ಮಾಡಿದ್ದಾರೆ. ಹನ್ನೆರಡನೇ ಶತಮಾನದ ಬಸವಣ್ಣನ ನೇತೃತ್ವದ ವಚನಕಾರರ ಚಳವಳಿ ಸಮಾಜದಲ್ಲಿ ನಿಜವಾಗಲೂ ಬದಲಾವಣೆ ತಂದಿತ್ತೇ? ತಂದಿದೆಯೇ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿ, ಸಮಾಜದ ಬದಲಾವಣೆ ಸಂಕೀರ್ಣ ಎಂಬ ಕಹಿ ಸತ್ಯವನ್ನು ಕಕ್ಕುತ್ತದೆ. ಈ ನಾಟಕವನ್ನು ಹರಳಯ್ಯ ಮಧುವರಸರ ಪ್ರಕರಣದಿಂದ  ಸ್ಪೂರ್ತಿ ಹೊಂದಿರುವುದಾಗಿ ಸ್ವತಃ  ಲಂಕೇಶರೇ ಹೇಳಿದ್ದಾರೆ. ‘ಜಾತಿ ಎಂಬ ಸೂತಕ’ ಎಂಬಂತ ಈ ನಾಟಕಕ್ಕೆ ಸಂವಾದಿಯಾಗಿ ‘ಮುಟ್ಟಿಸಿಕೊಂಡವನು’ ಎಂಬ ಇವರದೇ ಮತ್ತೊಂದು ಕತೆಯನ್ನು ಗಮನಿಸಬಹುದು. ಬಸಲಿಂಗನ ಇಲ್ಲಿನ ಜಾತಿ ಧರ್ಮಗಳ ಇಕ್ಕಟ್ಟಿನ ಸ್ಥಿತಿ, ಅಂಧ ಅನಿಸಿಕೆಗಳು, ಈಗಿನ ತಲೆಮಾರಿಗೂ ದಾಟಿಸಿದೆ, ದಾಟಿಸುತ್ತಿದೆ. ಜಾತಿ ಪದ್ಧತಿಯಿಂದ ಕಲುಷಿತಗೊಂಡ ಸಮಾಜ ಸುಧಾರಿಸುವುದು,ಮನುಷ್ಯ ಬಸಲಿಂಗನಂತೆ ಮುಗ್ಧತೆಯಿಂದ ಬದಲಾಗಿ ಜಾತಿ ಎಂಬುದನ್ನು ಧಿಕ್ಕರಿಸಿದಾಗ…ಈ ಕತೆಯನ್ನು ಓದುತ್ತಿರುವಾಗ ನನಗೆ ಯು.ಆರ್. ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯಲ್ಲಿ ಬರುವ ಪಾತ್ರಧಾರಿಯೊಂದು, ತನ್ನ ಮಡಿ ಬಿಟ್ಟು, ಗುಟ್ಟಾಗಿ ಮತ್ತೊಬ್ಬರ ಮನೆಯಲ್ಲಿ ಉಪ್ಪಿಟ್ಟು, ಅವಲಕ್ಕಿ ತಿಂದ ಪ್ರಸಂಗ ನೆನಪಾಯಿತು. ನನ್ನ ಪ್ರಕಾರ ಲಂಕೇಶರು, ವ್ಯಕ್ತಿಯೊಬ್ಬ ಹೇಗೆ ಬದುಕಬಲ್ಲ ಆದರೆ ಹೇಗೆ ಬದುಕುತ್ತಿದ್ದಾನೆ  ಎಂಬುದನ್ನು ತಮ್ಮ ಕಾದಂಬರಿಗಳಲ್ಲಿ,ಕತೆಗಳಲ್ಲಿ, ನಾಟಕಗಳಲ್ಲಿ ಹೇಳುತ್ತಾರೆ.ಇವರ ಕಾದಂಬರಿಗಳು ನನ್ನನ್ನು ಸಕ್ರಿಯವಾಗಿ ಓದಿಸಿಕೊಂಡು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಸಾಮಾನ್ಯವಾಗಿ ನಾ ಕಂಡ ಲಂಕೇಶರು, ದಲಿತ ಲೇಖಕರು ಗ್ರಹಿಸಿರುವುದಕ್ಕಿಂತಲೂ ಹೆಚ್ಚು ಸೂಕ್ಷ್ಮವಾಗಿ ದಲಿತ ಪ್ರಜ್ಞೆಯನ್ನು ಗಮನಿಸುತ್ತಾರೆ. ಆದ್ದರಿಂದ ನನಗೆ ಲಂಕೇಶರನ್ನು ಓದಬೇಕು, ಮತ್ತಷ್ಟು ಓದಬೇಕು ಎಂದೆನಿಸುತ್ತದೆ *********

ಲಂಕೇಶರನ್ನು ಏಕೆ ಓದಬೇಕು? Read Post »

ಇತರೆ

ಲಂಕೇಶರನ್ನು ಏಕೆ ಓದಬೇಕು?

ಲಂಕೇಶರನ್ನು ಏಕೆ ಓದಬೇಕು? ನವೀನ್ ಮಂಡಗದ್ದೆ ಲಂಕೇಶ್ ಅವರನ್ನು ನಾನೇಕೆ ಓದುತ್ತೇನೆ.. ಲಂಕೇಶ್ ನನ್ನ ಹಾಗೆ ದಮನಿತ, ಅನಕ್ಷರಸ್ಥ, ಗ್ರಾಮೀಣ ಪ್ರದೇಶದಿಂದ ಬಂದವರು, …ಇಷ್ಟೆಲ್ಲ ಮಿತಿಗಳಿದ್ದಾಗಲೂ ಅವರು ಸಾಹಿತ್ಯ, ಸಿನಿಮಾ, ಪತ್ರಿಕೆ ಎಂದೆಲ್ಲ ಕೆಲಸ ಮಾಡಿದರು.. ಈ ಹಿನ್ನೆಲೆಯಲ್ಲಿ ನಮಗೀಗ ಕೆಲಸ‌ ಮಾಡಲು ಸಾಕಷ್ಟು ‘ ಸ್ಪೇಸ್’ ಇದೆ ಹಾಗಾಗಿ ಲಂಕೇಶ್ ನನಗೆ ಸ್ಪೂರ್ತಿ.. ಗ್ರಾಮೀಣ ಪ್ರದೇಶಗಳಿಂದ ನಗರ ಕಡೆಗೆ ಮುಖ ಮಾಡುವ ಯುವಕರು ಅಲ್ಲಿನ ಹುಸಿವೈಭವಕ್ಕೆ ಮಾರು ಹೋಗಿ ನಗರಗಳಲ್ಲಿ ಉಳಿದು ಬಿಡುತ್ತಾರೆ.. ಲಂಕೇಶ್ ನಗರದ ಕಡೆ ಮುಖ ಮಾಡಿದರೂ ತನ್ನ ಹಳ್ಳಿಯನ್ನು ಮರೆಯಲಿಲ್ಲ, ಅವರೊಬ್ಬ ಅಕ್ಷರಸ್ತ ವ್ಯಕ್ತಿಯಾಗಿ ಅನಕ್ಷರಸ್ಥ ಸಮುದಾಯದ ಜೊತೆ ನಿಂತರು  ಅವರ ಊರಾದ ಕೊನಗವಳ್ಳಿಯಲ್ಲಿ ಕೌದಿಗಳನ್ನು ಹೊಲಿಸಿ ಬೆಂಗಳೂರಿನಲ್ಲಿ ತೆಗೆದುಕೊಂಡು ಹೋಗಿ ಮಾರಿ ಅದರ ಹಣವನ್ನು ಕೌದಿ ನೇಯ್ದವರಿಗೆ ತಂದುಕೊಡುತ್ತಿದ್ದರಂತೆ ಸಾಹಿತ್ಯ ಕಲಿಸುವ ಬದ್ದತೆ ಏನು ಅದರ ಪ್ರತಿಫಲ ಏನಾಗಿರಬೇಕು ಎಂಬುದಕ್ಕೆ ಸ್ಪಷ್ಟ ಉದಾಹರಣೆ ಲಂಕೇಶ್. ಜಾತಿ ವ್ಯವಸ್ಥೆಯಿಂದ ನಿಯಂತ್ರಿಸಲ್ಪಡುವವರು ಓದಲೇಬೇಕಾದ ಕತೆ ಮುಟ್ಟಿಸಿಕೊಂಡವನು, ನನ್ನ ಎಚ್ಚರದ ಧ್ವನಿಯಾಗಿ ಆ ಕತೆಯನ್ನು ಓದುತ್ತೇನೆ. ಬಿರುಕು ಕಾದಂಬರಿಯ ಬಸವರಾಜನ ಪಾತ್ರ ನನ್ನನ್ನು ಕಾಡುತ್ತಿರುತ್ತದೆ. ಅದರಲ್ಲಿ ಅವನು ಆಗಾಗ ತನ್ನ ಅಂಗಿಯನ್ನು ಬದಲಿಸುತ್ತಾನೆ, ಅದು ವ್ಯಕ್ತಿತ್ವ ಬದಲಾವಣೆಯ ಸಂಕೇತ, ಆಧುನಿಕೋತ್ತರ ಕಾಲದಲ್ಲು ಇದು ಸಹಜವಾಗಿ ರೂಪುಗೊಂಡಂತೆ ಇದೆಯಲ್ಲ ಅನಿಸುವ ಕಾರಣಕ್ಕಾಗಿ ಆ ಕಾದಂಬರಿಯನ್ನು ಮತ್ತೆ ಮತ್ತೆ ಓದುತ್ತೇನೆ, ಒಟ್ಟಾರೆ ಲಂಕೇಶ್ ಅನುಭವಿಸಿದಷ್ಟು ಕಷ್ಟಗಳನ್ನು ಅನುಭವಿಸದ ನಾವು ಅವರನ್ನು ಸ್ಪೂರ್ತಿಯಾಗಿ ಭಾವಿಸಲು ಸಾಧ್ಯವಿದೆ.

ಲಂಕೇಶರನ್ನು ಏಕೆ ಓದಬೇಕು? Read Post »

ಇತರೆ

ಪ್ರಸ್ತುತ

‘ಜಾಲ’ತಾಣ ಸ್ಮಿತಾ ರಾಘವೇಂದ್ರ ಹೆಸರೇ ಹೇಳುವಂತೆ ಇದೊಂದು “ಜಾಲ” ಮತ್ತೆ ನಾವೆಲ್ಲ ಅಲ್ಲಿ “ತಾಣ” ಪಡೆದವರು ಜಾಲದೊಳಗೆ ಸಿಲುಕಿಕೊಂಡ ಕೀಟದಂತಾಗಿದ್ದೇವೆ.. ಆದರೂ ನಾವಿಲ್ಲಿ ತಂಗಿದ್ದೇವೇ ತಂಗುತ್ತೇವೆ ಇಂದೂ ಮುಂದೂ ಸದಾ ತಂಗಲೇ ಬೇಕಾದ ಜಾಲದಲ್ಲಿ ಒಂದಿಷ್ಟು ಜಾಗೃತೆಯೂ ಮುಖ್ಯ ಅಂಶವಾಗುತ್ತದೆ. ಹೌದು.. ಸಾಮಾಜಿಕ ಜಾಲತಾಣವು ಸಂಬಂಧಗಳನ್ನು ಕಸಿಯುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಎಂಬುದು ಜನ ಜನಿತವಾದ ಮಾತು ಮತ್ತು ಸತ್ಯದ ಮಾತುಕೂಡಾ.. ಯಾಕೆ!? ಎಂದು ಸ್ವಲ್ಪವೇ ಸ್ವಲ್ಪ ವಿಚಾರಮಾಡುವದಕ್ಕೂ ನಮಗಿಂದು ಸಮಯವಿಲ್ಲ.. ಯಾಕೆಂದರೆ ನಮ್ಮ ಅಳಿದುಳಿದ ಸಮಯವನ್ನು ಜಾಲತಾಣ ನುಂಗಿಹಾಕಿದೆ. ಚಕ್ರವ್ಯೂಹದಲಿ ಸಿಕ್ಕಿಕೊಂಡ ಅಭಿಮನ್ಯುವಿನಂತಾಗಿದ್ದೇವೆ. ಯಾಕೆ ಎಂದು ಯೋಚಿಸಿದರೆ ಹಲವಾರು ವಿಷಯಗಳು ಅನಾವರಣವಾಗುತ್ತಲೇ ಹೋಗುತ್ತದೆ. ಈ ಜಾಲತಾಣ ನಮ್ಮ ವಯಕ್ತಿಕ ವಿಷಯಗಳಿಗೆ, ಸಂಬಧಗಳಿಗೆ ಅವಕಾಶ ಮಾಡಿಕೊಡುವುದಿಲ್ಲ. ನಿರಂತರವಾಗಿ ಹೆಚ್ಚು ಸಮಯಗಳಕಾಲ ಜಾಲತಾಣದಲ್ಲಿ ತೊಡಗುವುದು ಸ್ಥಿರ ಸಂಬಂಧಗಳಿಗೆ ಅಂದರೆ ಅಣ್ಣ- ತಮ್ಮ, ಗಂಡ- ಹೆಂಡತಿ, ಅಪ್ಪ -ಅಮ್ಮ, ಅಕ್ಕ -ತಂಗಿ, ಹೀಗೇ ಹಲವು ಸಬಂಧಗಳಿಗೆ ಸಮಸ್ಯೆಯನ್ನು ಉಂಟುಮಾಡುತ್ತಿದೆ.ಅವರೊಂದಿಗಿನ ಸಂವಹನ ಕಡಿಮೆಯಾಗುತ್ತಿದೆ. ಬೇಕಾದ,ಮತ್ತು ಬೇಡದ ಎಲ್ಲ ಸಂಗತಿಗಳೂ ಇಲ್ಲಿ ಅಡಕವಾಗಿರುವಕಾರಣ,ಹೆಚ್ಚು ಹೆಚ್ಚು ಸಮಯ ಜಾಲತಾಣದಲ್ಲಿ ಮುಳುಗುವದರಿಂದ ಅವಶ್ಯಕತೆ ಗಿಂತ ಹೆಚ್ಚು ವಿಷಯ ಸಂಗ್ರಹಣೆ ಹವ್ಯಾಸವಾಗಿ ಹೋಗುತ್ತದೆ. ಬಿಟ್ಟೆನೆಂದರೂ ಬಿಡದ ಮಾಯೆ ಇದು. ಸಂಬಂಧಗಳ ಮೂಲಭೂತ ಅಂಶ ನಂಬಿಕೆ. ಜಾಲತಾಣದ ಕಾರಣದಿಂದ ನಂಬಿಕೆ ಎನ್ನುವದು ಗೋಡೆಯ ತುದಿಯಲ್ಲಿ ಇಟ್ಟ ತಕ್ಕಡಿಯಂತಾಗಿದೆ ಸಾಮಾಜಿಕ ಜಾಲತಾಣದಲ್ಲಿ ವಯಕ್ತಿಕ ಅಭಿಪ್ರಾಯಗಳು ಮತ್ತು ಮಾಹಿತಿ ಹಂಚಿಕೆ ಹೆಚ್ಚು ದುರ್ಬಲವಾಗಿರುತ್ತದೆ. ಅದು ಯಾವಕಾರಣಕ್ಕೂ ಸೇಪ್ ಕೂಡ ಅಲ್ಲ. ನಮ್ಮ ಇಡೀ ವ್ಯಕ್ತಿತ್ವವನ್ನೇ ಸೆರೆಹಿಡಿದು ಅಳೆದು ತೂಗಿಬಿಡುತ್ತದೆ ಈ ಜಾಲತಾಣ ಈಗೀಗ ಹ್ಯಾಕರ್‌ಗಳ ಹಾವಳಿಯಿಂದಾಗಿ ನಮ್ಮ ಎಲ್ಲಾ ಮಾಹಿತಿಗಳು ಸೋರಿಕೆಯಾಗುವ ಸಂಭವವು ಜಾಸ್ತಿಯಾಗಿರುತ್ತದೆ ಮತ್ತು ಮೊಬೈಲ್‌ನಲ್ಲಿ ನಾವು ಬ್ರೌಸ್ ಮಾಡುವಾಗ ಕೊಡುವ ನಮ್ಮ ಮಾಹಿತಿಗಳೇ ಆಗಲಿ, ಫೋಟೋಗಳೇ ಅಗಲಿ ದುರ್ಬಳಕೆಯಾಗುತ್ತಿರುವುದು ಅತ್ಯಂತ ದುಃಖಕರವಾದ ಸಂಗತಿಯಾಗಿದೆ. ಅಲ್ಲದೇ ನಮ್ಮ ಮೊಬೈಲ್‌ಗಳಲ್ಲಿರುವ ಮಾಹಿತಿಯನ್ನು ಸುಲಭವಾಗಿ ಕದಿಯುವಂತ ಇತರ ಸ್ವಾಫ್ಟವೇರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾರಣ ಯಾವುದಕ್ಕೂ ಮೊಬೈಲ್‌ಗಳಲ್ಲಿ ನಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸದಿರುವುದು ತೀರಾ ಸೂಕ್ತ. ಪ್ರತಿಯೊಂದನ್ನೂ ಹಂಚಿಕೊಳ್ಳುತ್ತಾ ಬೇಡದ ನೊವುಗಳಿಗೆ ದುರ್ಘಟನೆಗಳಿಗೆ ನಾವೇ ಎಡೆಮಾಡಿಕೊಳ್ಳುತ್ತಿದ್ದೇವೆ.. We all went to Goa with the family” ಅಂತ ಯುವತಿಯೊಬ್ಬಳು ಕುಟುಂಬದ ಜೊತೆಗಿನ ಫೋಟೋ ಶೇರ್ ಮಾಡಿದ್ದಳು ಅದನ್ನು ನೋಡಿದ ಯಾರೊ ಒಬ್ಬ ಅಸಾಮಿ ತಿರುಗಿ ಬರುವದರೊಳಗೆ ಮನೆ ದರೋಡೆಮಾಡಿ ಹೋಗಿದ್ದ. ಎಲ್ಲೇ ಹೋದರೂ ಏನೇ ತಿಂದರೂ ಎಲ್ಲವನ್ನೂ ಜಾಲತಾಣದಲ್ಲಿ ಅಪ್ಡೇಟ್ ಮಾಡುವ ನಾವು ಎಷ್ಟು ಅಜಾರೂಕರಾಗುತ್ತಿದ್ದೇವೆ. ಅವಶ್ಯಕತೆಗಿಂತ ಹೆಚ್ಚಾಗಿ ಬಳಸಿದಾಗಲೇ ಇವೆಲ್ಲ ಅವಾಂತರಗಳು ಆಗೋದು. ” ಯಾರಾದರೂ ಏನನ್ನಾದರೂ ಹಂಚಿಕೊಂಡಾಗ ಫೋಟೋಗಳನ್ನು ಲೈಕ್‌ ಮಾಡಿದಾಗ ನಂತರ, ಅವರು ಯಾರು , ಎಲ್ಲಿಂದ, ಎಂಬಿತ್ಯಾದಿ ವಯಕ್ತಿಕ ಚಾಟ್‌ ನಡೆಯುತ್ತದೆ. ಅದು ಅಲ್ಲಿಗೇ ಮುಗಿಯದೇ ಇನ್ಬಾಕ್ಸನಲ್ಲಿ ಇಣುಕಿ ಸಂಪರ್ಕ ಸಾಧಿಸಲು ಹಾತೊರೆಯುತ್ತಾರೆ. ಸಹಜ ಮಾತಾದರೆ ಎಲ್ಲವೂ ಓಕೆ ಕೆಲವರಿರುತ್ತಾರೆ ಜೊಲ್ಲು ಪಂಡಿತರು, ಅಂತವರು ಹಿಂದೆ ಮುಂದೆ ನೋಡುವದಿಲ್ಲ ನೀನು ನನಗೆ ಬಹಳ ಇಷ್ಟ, ಸಕತ್ ಆಗಿ ಕಣ್ತೀಯಾ, ನಾನು ನಿನ್ನ ಲವ್ ಮಾಡ್ತೀನಿ, ಅಂತೆಲ್ಲ ಒಂದೇ ಸಮನೇ ಮಾತೊಗೆದು ಬಿಡುತ್ತಾರೆ.. ಅದರ ವಿವರಣೆ ಕೇಳುವ ಸಂಯಮ ಇಲ್ಲದ ಸಂಬಂಧಗಳಿಗೆ ಇಷ್ಟು ಸಾಕಲ್ಲವಾ? ಅದೆಷ್ಟೋ ಸುಂದರ ಸಂಬಂಧಗಳು ಸಂಸಾರಗಳು ಇದರಿಂದ ಘಾಸಿಗೊಳಗಾಗಿರುವದು ಎಲ್ಲರಿಗೂ ತಿಳಿದ ವಿಚಾರ. ತಪ್ಪುಗಳೇ ನಮ್ಮಿಂದ ಘಟಿಸಬೇಕೆಂದೇನೂ ಇಲ್ಲ. ಬಳಕೆಯ ಅಜ್ಙಾನದಿಂದಲೇ ಹೆಚ್ಚು ತೊಂದರೆಗಳು ಆಗುವದು. ಹಳ್ಳಿಗಳಲ್ಲಿ ಹೆಚ್ಚೆಚ್ಚು ಘಟನೆಗಳು ಹೇಗೆ ಜರುಗುತ್ತವೆ ಗೊತ್ತಾ?!ಸ್ವಲ್ಪ ವಯಸ್ಸಾದವರು, ಹೆಣ್ಮಕ್ಕಳು,ಪ್ರಪಂಚಕ್ಕೆ ತೆರೆದುಕೊಳ್ಳದ ಹಲವು ಮನಸುಗಳು ಇರುತ್ತವೆ. ಅವರು ಯಾವತ್ತೂ ಜಗತ್ತೇ ನಮ್ಮ ಕೈಯೊಳಗೆ ಎಂಬ ಮಾಯೆಯನ್ನು ಕೈಯಲ್ಲಿ ಹಿಡಿದು ನೋಡುರುವದಿಲ್ಲ. ಏನೋ ಸಮಯ ಕಳೆಯಲಿ ಎಂದೋ ಎಲ್ಲರ ಹತ್ತಿರವೂ ಇದೆ ಎಂದೋ ಒಂದು ಹೊಸ ಮೊಬೈಲ್ ಕೈಗೆ ಬಂದಿರುತ್ತದೆ.. ಅದರ ತಂತ್ರಜ್ಞಾನದ ಅರಿವಿನ ಕೊರತೆ ಸಾಕಷ್ಟು ಇರುವಕಾರಣ,ಯಾರೋ ಒಬ್ಬರು ಪೇಸ್ಬುಕ್ ವಾಟ್ಸಪ್ ಅಕೌಂಟ್ ಒಂದನ್ನು ಮಾಡಿಕೊಟ್ಟು ಬಿಡುತ್ತಾರೆ. ಅದರ ಉಪಯೋಗದ ಬಗ್ಗೆ ಮಾಹಿತಿ ನೀಡುವದಿಲ್ಲ. ಜಾಲತಾಣವೆಂದರೆ ಹಂಚಿಕೊಳ್ಳುವದು ಅಂತಷ್ಟೇ ಅವರಿಗೆ ತಿಳಿದಿರುವ ವಿಚಾರ.. ಶೆರ್ ಮಾಡಲು ಹೋಗಿ ಟ್ಯಾಗ್ ಮಾಡುವದು..ಕಂಡಿದ್ದಕ್ಕೆಲ್ಲ ಕಮೆಂಟ್ ಮಾಡುವದು. ಎಲ್ಲರೊಂದಿಗೆ ಸಂವಹನ ನಡೆಸುವದು. ಎಲ್ಲರೂ ಮಾಡಿದಂತೆಯೇ ತಾವೂ ಮಾಡಬೇಕೆಂಬ ತುಡಿತಕ್ಕೆ ಬೀಳುತ್ತಾರೆ. ಇವುಗಳಿಂದ ಅವರಿಗೆ ಅರಿಯದಂತೆ ಎದುರಿಗಿನ ವ್ಯಕ್ತಿ ಇಂತವರ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುತ್ತಾನೆ. ಕ್ರಮೇಣ ಇವರೇ ಅರಿಯದ ಜಾಲದೊಳಗೆ ಬಿದ್ದು ಒದ್ದಾಡುತ್ತಾರೆ.. ನಿಭಾಯುಸುವ ಜಾಣತನವಿಲ್ಲದೇ ಸಂಸಾರವನ್ನು ತೊರೆದು ಹೋಗುವದು,ಆತ್ಮಹತ್ಯೆ ಮಾಡಿಕೊಳ್ಳುವದು, ಇಂತಹ ಕಠಿಣ ನಿರ್ಧಾರಕ್ಕೆ ಬರುತ್ತಾರೆ.. ಇಡೀ ಸಂಸಾರದ ನೆಮ್ಮದಿಯೇ ನಾಶವಾಗುವ ಹಂತಕ್ಕೆ ಒಂದು ಮುಗ್ಧ ಸಂಸಾರವೊಂದು ಬಂದು ನಿಲ್ಲುತ್ತದೆ. ಇದಕ್ಕೆಲ್ಲ ತಿಳುವಳಿಕೆಯ ಕೊರತೆಯೇ ಕಾರಣ. ಕೆಲವರು ಗೊತ್ತಿದ್ದು ಇನ್ನು ಕೆಲವರು ಗೊತ್ತಿಲ್ಲದೇ ಹಗಲು ಕಂಡ ಬಾವಿಗೆ ರಾತ್ರಿ ಬಂದು ಬೀಳುತ್ತಿದ್ದಾರೆ.. ಕಣ್ಣಿಗೆ ಕಾಣದ ಎಂದೂ ನೋಡದ ಸ್ನೇಹಿತರಿಗೆ ಹುಟ್ಟಿದ ದಿನದ ಶುಭಾಶಯ ತಪ್ಪದೇ ಕೋರುವ ನಾವು, ಮನೆಯೊಳಗಿನ ಸಂಬಂಧ ಮರೆತೇ ಬಿಡುತ್ತೇವೆ. ಅತಿಯಾದ ಸಾಮಾಜಿಕ ಜಾಲತಾಣವು ನಮ್ಮ ಸ್ವಭಾವವನ್ನೇ ಬದಲಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮಾತೇ ಮರೆತುಹೋಗಿದೆ. ಒಬ್ಬರೇ ನಗುವ ಹುಚ್ಚರಂತಾಗಿದ್ದೇವೆ.. ಕಿವಿಯೊಳಗಿನ ಇಯರ್ ಪೋನ್ ಯಾರು ಕಿವುಡರು ಎನ್ನುವದು ತಿಳಿಯದಾಗಿದೆ. ಸೋಶಿಯಲ್‌ ಮಿಡಿಯಾ ಬಳಕೆಯಿಂದ ತಮ್ಮನ್ನು ತಾವು ಸ್ವಭಾವದಲ್ಲಿ ಹೇಗೆ ನಿಯಂತ್ರಿಸಿಕೊಳ್ಳಬೇಕು ಎಂದು ಎಚ್ಚರವಹಿಸಿಕೊಳ್ಳಬೇಕಾದುದು ಸದ್ಯದ ತುರ್ತಿನ ಪರಿಸ್ಥಿತಿ. ಕೇವಲ ಜಾಲತಾಣದಲ್ಲಿಯೇ ಎಲ್ಲವನ್ನೂ ಸೃಷ್ಟಿಸಿ ಕೊಳ್ಳುವ ಹಂಬಲ ಹಪಾಹಪಿತನ ತೋರುತ್ತಿದ್ದೇವೆ. ಈ ಗ್ಯಾಜೆಟ್ ಲೋಕ ಎಲ್ಲವನ್ನೂ ಕೊಡಲು ಎಂದಿಗೂ ಸಾದ್ಯವಿಲ್ಲ. ಮದರ್ಸ ಡೇ ಪೋಷ್ಟ ಹಾಕಲು ಒಬ್ಬಾತ ಅಮ್ಮನ ಪೋಟೋ ಹುಡುಕುತ್ತಿದ್ದ ಅವನ ಹತ್ತಿರ ಒಂದೇ ಒಂದು ಫೋಟೋ ಕೂಡ ಇರಲಿಲ್ಲ. ಅಮ್ಮ ಅನಾಥಾಶ್ರಮದಲ್ಲಿ ಇದ್ದಳು. ಏನಂತ ಹೇಳೋದು ಈ ನಡತೆಗೆ??! ನಮ್ಮೊಳಗಿನ ಸಂಬಂಧಗಳನ್ನು ಮರೆತು ಇನ್ನೆಲ್ಲೋ ಆಪ್ತತೆಯನ್ನು ಹುಡುಕುತ್ತೇವೆ.. ಮುಖಕ್ಕೆ ಮುಖತೀಡಿಕೊಂಡು ಹಾಕುವ ಪೋಟೊಗಳೆಲ್ಲ ರಾತ್ರಿ ಮುಖತಿರುಗುಸಿ ಮಲಗುತ್ತವೆ ಎನ್ನುವದು ಅರಿವಾಗಬೇಕಿದೆ. ತೋರಿಕೆಯ,ಪ್ರದರ್ಶನದ ಬದುಕು ಪರಿತಪ್ಪಿಸುವತ್ತ ಸಾಗುತ್ತಿದೆ. ಮಕ್ಕಳಿಗೆ ಹೇಳಬೇಕಾದ ದೊಡ್ಡವರೇ ಮೊಬೈಲ್ ಎಂಬ ಲೋಕದಲ್ಲಿ ಮುಳುಗಿ ಹೋಗಿದ್ದಾರೆ.. ತಂದೆ ತಾಯಿಯರೇ ಮಗು ನಮ್ಮ ಮೊಬೈಲ್ ಅನ್ನು ಪದೇ ತೆಗೆದುಕೊಳ್ಳುತ್ತದೆ ನಮಗೆ ಸಿಗುವದೇ ಇಲ್ಲ ಎಂದು,ಅವರಿಗಾಗಿಯೇ ಬೇರೆ ಮೊಬೈಲ್ ಕೊಡಿಸುವಷ್ಟು ಬುದ್ಧಿವಂತರಾಗಿದ್ದಾರೆ. ಕೇವಲ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಜಾಲತಾಣಗಳು ಅಷ್ಟೇ ಅಹಿತಕರ ಎಂದು ಅರಿವಾಗಬೇಕಿದೆ. ಎಲ್ಲ ಅರಿತ ದೊಡ್ಡವರೇ ಮೊಬೈಲ್ ಎಂಬ ಮಾಯೆಯ ದಾಸರಾದರೆ ಚಿಕ್ಕಮಕ್ಕಳು ಆಗದೇ ಇರುತ್ತಾರೆಯೇ.. ಎಲ್ಲಿ ನೋಡಿದರೂ ಮಕ್ಕಳನ್ನು ಮೊಬೈಲ್ ಇಂದ ದೂರವಿಡಿ ಎಂಬ ಮಾತು ಕೇಳಿಬರುತ್ತದೆ. ಕೇವಲ ಹೇಳುವದರಿಂದ ಮಕ್ಕಳು ಕಲಿಯಲಾರು ನಮ್ಮ ನಡೆಯನ್ನು ಅನುಸರಿಸುತ್ತಾರೆ. , ರಸ್ತೆಬದಿಯಲ್ಲಿ ಭಿಕ್ಷೆ ಬೇಡುವವರು,ಅಂಗವಿಕಲರು,ಅಪಘಾತಕ್ಕೆ ಒಳಗಾದವರು,ಇಂತಹ ಹತ್ತು ಹಲವು ಫೋಟೋ ಗಳನ್ನು ನೋಡಿ ಮರುಗುವ ಕಣ್ಣೀರ ದಾರೆಯೇ ಇಮೊಜಿಗಳಲ್ಲಿ ಉಕ್ಕಿಸುವ ನಾವು. ನಿಜವಾಗಿ ಇಂತವರು ನಮ್ಮ ಎದುರು ಬಂದಾಗ ಕಂಡೂ ಕಾಣದಂತೆ ಹೋಗುತ್ತೇವೆ. ಇಲ್ಲ ಮತ್ತೊಂದು ಫೋಟೋವನ್ನು ತೆಗೆದು ಹಂಚಿ ಲೈಕು ಕಮೆಂಟ್ ಗಿಟ್ಟಿಸಿಕೊಳ್ಳುವತ್ತ ಚಿತ್ತ ಹರಿಸುತ್ತೇವೆ. ಎಷ್ಟೊಂದು ಕಠಿಣ ಅಜಾಗರೂಕ ಬುದ್ಧಿಹೀನರಾಗುತ್ತಿದ್ದೇವೆ ನಾವುಗಳು. ಒಮ್ಮೆ ಚಿಂತನೆ ಮಾಡಿ ಮೊಬೈಲ್ ಕೆಳಗಿಟ್ಟು ಪ್ರಪಂಚ ನೋಡಿ. ಸಾಕಷ್ಟು ಸಂಗತಿಗಳು ನಮ್ಮ ಕಣ್ಣು ತೆರೆಸುತ್ತವೆ. ತೀರಾ ವಯಕ್ತಿಕ ಬದುಕಿನ ಒಳಮನೆಗೆ ಮೊಬೈಲ್ ಎಂಬ ಮಾಯೆ ತನ್ನ ಆಟಾಟೋಪ ಮೆರೆಯದಂತೆ ಜಾಗ್ರತೆ ವಹಿಸುವದು ಇಂದಿನ ದಿನಗಳಲ್ಲಿ ತುಂಬಾ ಅವಶ್ಯ.ಸಂಬಂಧಗಳು ಮುರಿಯುತ್ತಿರುವದೇ ಮೊಬೈಲ್ ಗಳಿಂದ. ತಲೆ ತಗ್ಗಿಸಿ ನನ್ನ ನೋಡು, ತಲೆ ಎತ್ತಿ ನಿಲ್ಲುವಂತೆ ಮಾಡುತ್ತೇನೆ” ಎಂದು ಪುಸ್ತಕ ಹೇಳಿದರೆ, “ತಲೆ ತಗ್ಗಿಸಿ ನನ್ನ ನೋಡು, ಮತ್ತೆ ತಲೆ ಎತ್ತದಂತೆ ಮಾಡುತ್ತೇನೆ” ಎಂದು ಮೊಬೈಲ್ ಹೇಳಿತಂತೆ. ಈ ಎಲ್ಲಾ ಮಾತುಗಳು ನಮಗೆ ನಗುತರಿಸುತ್ತದೆ ಎನ್ನುವುದು ಎಷ್ಟು ಸತ್ಯವೋ ಇದೇ ನಿಜವಾದ ವಾಸ್ತವ ಸತ್ಯ ಎನ್ನುವುದು ಈಗಲಾದರೂ ನಾವು ಒಪ್ಪಿ ಕೊಳ್ಳದೇ ಹೋದರೆ ನಾವು ತೆಗೆದ ಗುಂಡಿಯಲ್ಲಿ ನಾವು ಬೀಳುವದಲ್ಲದೇ ನಮ್ಮ ಎಲ್ಲ ಸಂಬಂಧಗಳನ್ನು ಎಳೆದು ಮಣ್ಣು ಮುಚ್ಚಲೇಬೇಕಾಗುತ್ತದೆ. ಅದರ ಬದಲು ಹೀಗೂ ಮಾಡಿನೋಡಬಹುದು. *ಇಂತಿಷ್ಟು ಸಮಯ ಅಂತ ನಿಗದಿ ಮಾಡಿಕೊಂಡು ಆ ಸಮಯದಲ್ಲಿ ಮಾತ್ರ ಜಾಲತಾಣ ತರೆಯಿರಿ *ಗಂಡ ಹೆಂಡತಿಯ ನಡುವೆ ಪಾಸ್ವರ್ಡಿನ ಬೀಗದ ಕೀಲಿ ಇಬ್ಬರಲ್ಲಿಯೂ ಇರಲಿ. *ಮಲಗುವ ಮನೆಗೆ ಮೊಬೈಲ್ ಒಯ್ಯಬೇಡಿ *ಬೆಳಿಗ್ಗೆ ಏಳುತ್ತಲೇ ಜಾಲತಾಣದ ಒಳಹೊಕ್ಕುವದನ್ನು ನಿಷೇಧಿಸಿ. *ಮನೆಯವರು ಮಾತನಾಡುವಾಗ ಮೊಬೈಲ್ ಮುಟ್ಟಬೇಡಿಮೊಬೈಲ್ ಗೆ ಮೀಸಲಿಟ್ಟ ಸಮಯವನ್ನು ಪ್ರೀತಿ ಪಾತ್ರರಿಗೊಂದಿಷ್ಟು ಅವಷ್ಯವಾಗಿ ಕೊಡಿ. *ಮಕ್ಕಳ ಎದುರು ಮೊಬೈಲ್ ಹಿಡಿಯಲೇಬೇಡಿ. *ಆಗಾಗ ಡಾಟಾ ಹಾಕಿಸುವದನ್ನೇ ನಿಲ್ಲಿಸಿ ಉಳಿತಾಯದ ಜೊತೆಗೆ, ನೆಮ್ಮದಿ ಮತ್ತು ಬೇರೆ ವಿಚಾರಗಳಿಗೆ ತರೆದುಕೊಳ್ಳಲು ಸಮಯವೂ ಸಿಗುತ್ತದೆ.ಅಲ್ಲವೇ!? ***********

ಪ್ರಸ್ತುತ Read Post »

You cannot copy content of this page

Scroll to Top