ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಪರಿಸರ

ಜೀವನ

ವಿಶಾಲ ದೃಷ್ಟಿಕೋನಗಳೇ ಸುಂದರ ಬದುಕಿಗೆ ಆಧಾರ “ ಪ್ರೊ ಸುಧಾ ಹುಚ್ಚಣ್ಣವರ “ವಿಶಾಲ ದೃಷ್ಟಿಕೋನಗಳೇ ಸುಂದರ ಬದುಕಿಗೆ ಆಧಾರ “             “ದೃಷ್ಟಿಯಂತೆ ಸೃಷ್ಟಿ “ಎನ್ನುವ ಹಾಗೆ ನಮ್ಮಲ್ಲಿರುವ ವಿಶಾಲ ದೃಷ್ಟಿಕೋನಗಳೇ ನಮ್ಮ ಸುಂದರ ಬದುಕಿಗೆ ಆಧಾರವಾಗುತ್ತದೆ.ಸೃಷ್ಟಿಯಲ್ಲಿ ಇತರ ಜೀವಿಗಳಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ತೀರ್ಮಾನ ಮಾಡುವ ವಿವೇಕ ಇರುವುದಿಲ್ಲ ಆದರೆ ಮನುಷ್ಯನಲ್ಲಿ ಈ ವಿವೇಕವೂ ಪೂರ್ಣ ಪ್ರಮಾಣದಲ್ಲಿ ವಿಕಾಸವಾಗಿದೆ.ಸೃಷ್ಟಿಯ ಆದಿಯಿಂದಲೂ ಮನುಷ್ಯ ತನ್ನ ವಿವೇಕವನ್ನು ಹಲವಾರು ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತ ಬಂದಿದ್ದಾನೆ.ನಮ್ಮ ಸುತ್ತಲಿರುವ ಒಳಿತು ಕೆಡಕುಗಳ ಮಧ್ಯದಲ್ಲಿಯೇ ವಿಭಿನ್ನವಾದ ದೃಷ್ಟಿಕೋನಗಳು ವಿಭಿನ್ನ ರೀತಿಯಲ್ಲಿ ನಮ್ಮನ್ನು ವಿಚಲಿತಗೊಳಿಸುತ್ತವೆ.ಆದರೆ ಮನುಷ್ಯ ಜನ್ಮದ ಶ್ರೇಷ್ಠತೆಯನ್ನು ಅರಿತುಕೊಂಡು ಸಾಗಿದಾಗ ನಮ್ಮ ಮನೋಭಾವನೆಗಳು ವಿಶಾಲ ಗೊಳ್ಳುತ್ತಾ ಹೋಗುತ್ತವೆ.ನಮ್ಮಲ್ಲಿ ಕೆಲವೊಮ್ಮೆ ಸಂಕುಚಿತ ಮನೋಭಾವನೆಗಳು ಒಡಮೂಡಿದಾಗ ನಾನೇ ಶ್ರೇಷ್ಠ ಎನ್ನುವ ಅಹಂಭಾವ ನಮ್ಮ ಅವನತಿಗೆ ಕಾರಣವಾಗುತ್ತದೆ.ಎಲ್ಲರಿಗಿಂತ ನಾನೊಬ್ಬನೇ ಶ್ರೇಷ್ಠ ನಾನೇ ವೀರ ಶೂರ ಧೀರ ಸುಂದರ ಸಶಕ್ತ ಸುಶಿಕ್ಷಿತ ಎಂಬ ಸಂಕುಚಿತ ಮನೋಭಾವನೆಗಳೆ ಮೂಡಿದಾಗ ಮನುಷ್ಯ ಜನ್ಮದ ನೈಜ ಬೆಳವಣಿಗೆ ಕುಂಠಿತವಾಗುತ್ತ ಹೋಗುತ್ತದೆ.ಬದಲಾಗಿ “ತನ್ನಂತೆ ಪರರು ನಾನು ಪರರಂತೆ ಸಹಜೀವಿ “ಎಂಬ ವಿಶಾಲ ಮನೋಭಾವನೆ ನಮ್ಮಲ್ಲಿದ್ದಾಗ ಯಾವುದೇ ವ್ಯತ್ಯಾಸಗಳು ನಮ್ಮಲ್ಲಿ ದುಃಖವನ್ನುಂಟು ಮಾಡಲಾರವು.           ನಮ್ಮ ಸುತ್ತಮುತ್ತಲೂ ಸಣ್ಣವರು ದೊಡ್ಡವರು ಬಡವ ಶ್ರೀಮಂತ ಎಂದು ಹೇಳುತ್ತೇವೆ ಆದರೆ ಪರಸ್ಪರ ಹೋಲಿಸಿದಾಗ ಯಾರೂ ಸಣ್ಣವರಲ್ಲ ಯಾರೂ ದೊಡ್ಡವರಲ್ಲ ಈ ಸತ್ಯವನ್ನು ತಿಳಿದಾಗ ಮಾತ್ರ ನಮ್ಮಲ್ಲಿ ವಿಶಾಲ ದೃಷ್ಟಿಕೋನಗಳು ಸುಂದರ ಬದುಕಿಗೆ ಸೋಪಾನವಾಗುತ್ತದೆ.ಒಂದು ಕುಟುಂಬದ ವಾತಾವರಣದಿಂದ ಇಡೀ ವಿಶ್ವದ ವರೆಗೂ ನಾವು ಅವಲೋಕಿಸುತ್ತಾ ಸಾಗಿದಾಗ ಈ ದೊಡ್ಡಸ್ತಿಕೆಯ ಹೋರಾಟ ಸಮಾಜದ ಎಲ್ಲ ರಂಗಗಳಲ್ಲಿ ಇದ್ದೇ ಇದೆ, ಪ್ರತಿಯೊಬ್ಬನೂ ತಾನು ಎಲ್ಲರಿಗಿಂತ ದೊಡ್ಡವನಾಗಬೇಕು ಎಂದು ಭಾವಿಸುತ್ತಾನೆ. ಆದರೆ ಅದು ಹೋರಾಟದ ಸ್ವರೂಪ ಪಡೆದಾಗ ಮಾತ್ರ ಪರಸ್ಪರರಲ್ಲಿ ದ್ವೇಷ ಅಸೂಯೆಗೆ ಕಾರಣವಾಗುತ್ತದೆ. “ಅರಿತು ಸಾಗಿದಾಗ ಬದುಕೇ ಸುಂದರ” ಎನ್ನುವಂತೆ ಇಲ್ಲಿ ಯಾರೂ ಹೆಚ್ಚು ಅಲ್ಲ ಕಡಿಮೆಯೂ ಅಲ್ಲ ಒಬ್ಬರಿಗೊಬ್ಬರು ಸಹಕಾರ ಸಹಬಾಳ್ವೆಯೊಂದಿಗೆ ಸಾಗಿದಾಗ ಮಾತ್ರ ಜೀವನದ ಪಯಣ ಸುಲಭವಾಗುತ್ತದೆ.ಇಲ್ಲವಾದರೆ ಬರೀ ಸಂಕುಚಿತ ಮನೋಭಾವನೆಗಳೆ ನಮ್ಮನ್ನು ಆವರಿಸಿದರೆ ಜೀವನದ ಸಣ್ಣ ಪುಟ್ಟ ವಿಚಾರಗಳೂ ಸಹ ನಮಗೆ ಸಂಕೀರ್ಣವೆನಿಸುತವೆ. ನಮ್ಮ ದೃಷ್ಟಿಕೋನಗಳು ಎಂದಾಗ ಒಂದು ದೃಷ್ಟಾಂತ ನೆನಪಾಗುತ್ತದೆ ಅದೆಂದರೆ ,ದೊಡ್ಡದಾದ ಗುಡ್ಡದ ಕೆಳಗಡೆ ಒಂದು ಕುಟೀರ, ಆ ಕುಟೀರದ ಎದುರುಗಡೆ ಒಂದು ದಷ್ಟಪುಷ್ಟವಾಗಿ ಬೆಳೆದ ಹೆಮ್ಮೆಯನ್ನು ಕಟ್ಟಿರುತ್ತಾರೆ, ಒಂದು ದಿನ ಆ ಹೆಮ್ಮೆಯ ಮಾಲೀಕ ಗುಡ್ಡವನ್ನೇರಿ ವಿಶಾಲ ಆಗಸ ಹಸಿರು ಸೃಷ್ಟಿಯನ್ನು ನೋಡುವುದರಲ್ಲಿ ತನ್ಮಯನಾಗಿದ್ದ, ಹಾಗೆಯೇ ನೋಡುತ್ತಾ ಅಕಸ್ಮಾತಾಗಿ ಅವನ ದೃಷ್ಟಿಕೋನ ಗುಡ್ಡದ ಕೆಳಗಿರುವ ಕುಟೀರದ ಎದುರುಗಡೆ ಕಟ್ಟಿದ ಎಮ್ಮೆ ಅತ್ತ ಹರಿಯಿತು ಆಗ ಎತ್ತರದ ಗುಡ್ಡದ ಮೇಲಿಂದ ತನ್ನ ಎಮ್ಮೆಯನ್ನು ನೋಡಿದ ಮಾಲೀಕ ಅಂದುಕೊಳ್ಳುತ್ತಾನೆ “ಈ ಎಮ್ಮೆ ಎಷ್ಟು ಚಿಕ್ಕದಾಗಿ ಕಾಣುತ್ತಿದೆಎಲ್ಲಾ ” ಎಂದು ಅಂದುಕೊಂಡ.ಹಾಗೆಯೇ ಗುಡ್ಡದ ಕೆಳಗಡೆ ನಿಂತಿರುವಂತಹ ಎಮ್ಮೆ ಅದೇ ಸಮಯಕ್ಕೆ ಸರಿಯಾಗಿ ಗುಡ್ಡದ ಮೇಲೆ ನಿಂತಿದ್ದ ತನ್ನ ಮಾಲೀಕನನ್ನು ನೋಡಿ” ನಮ್ಮ ಮಾಲಿಕ ಎಷ್ಟು ಕುಳ್ಳನಾಗಿ ಕಾಣುತ್ತಾ ನಲ್ಲ” ಎಂದುಕೊಂಡಿತು ಇಲ್ಲಿ ಮಾಲೀಕನ ದೃಷ್ಟಿಯಲ್ಲಿ ಎಮ್ಮೆ ಚಿಕ್ಕದು, ಎಮ್ಮೆಯ ದೃಷ್ಟಿಕೋನದಲ್ಲಿ ಮಾಲೀಕ ಚಿಕ್ಕವನಾಗಿ ಕಂಡ ,ವಾಸ್ತವದಲ್ಲಿ ನಿಜವಾಗಿ ನೋಡಿದರೆ ಯಾರೂ ಚಿಕ್ಕವರು ಅಲ್ಲ ದೊಡ್ಡವರೂ ಅಲ್ಲ ಕೇವಲ ನಮ್ಮ ನಮ್ಮ ದೃಷ್ಟಿಕೋನ ವಷ್ಟೇ.ಇಂತಹದ್ದೇ ಎಷ್ಟೋ ಸಂಗತಿಗಳು ನಮ್ಮ ಸುತ್ತಮುತ್ತಲೂ ನಾವು ಗಮನಿಸುತ್ತಾ ಸಾಗುತ್ತೇವೆ, ದೃಷ್ಟಿಕೋನಕ್ಕೆ ಅನುಸಾರವಾಗಿ ನಮಗಾಗುವ ಅನುಭವಗಳು ವಿಭಿನ್ನ ಹಾಗೂ ಕೆಲವೊಮ್ಮೆ ವಿಚಿತ್ರವೂ ಸಹ ಆಗಿರುತ್ತವೆ.ಒಂದು ಕುಟುಂಬದಲ್ಲಿ ಎಲ್ಲರ ಆಗುಹೋಗುಗಳನ್ನು ನೋಡಿಕೊಳ್ಳುವ ಮನೆಯ ಯಜಮಾನ ನಾನೊಬ್ಬನೇ ಶ್ರೇಷ್ಠ ಎಂದುಕೊಂಡರೆ ಅದು ಅವನ ಸಂಕುಚಿತ ದೃಷ್ಟಿಕೋನ ಹಾಗೆಯೇ ಕುಟುಂಬದಲಿ  ಎಲ್ಲರ ಬೇಕು ಬೇಡಿಕೆಗಳಿಗೆ ಸ್ಪಂದಿಸುವ ಎಲ್ಲರ ಆರೈಕೆ ಮಾಡುವ ಕುಟುಂಬದ ಒಡತಿ ನಾನೇ ಹೆಚ್ಚು ಎಂದುಕೊಂಡರೆ ಅದು ಅವರ ದೃಷ್ಟಿಕೋನ ಹೀಗೆ ಪ್ರತಿಯೊಬ್ಬರಲ್ಲೂ ಕೇವಲ ನಾನು ಹೆಚ್ಚು ಎನ್ನುವ ದೃಷ್ಟಿಕೋನ ವಿದ್ದರೆ ಪರಸ್ಪರ ಪ್ರೀತಿ ವಿಶ್ವಾಸ ಸಹಕಾರ ನಂಬಿಕೆ ಹೊಂದಾಣಿಕೆ ಇರಲಾರದು. ಈ ಸೃಷ್ಟಿಯಲ್ಲಿ ಒಂದು ತನ್ನ ಉಳಿವಿಗಾಗಿ ಇನ್ನೊಂದು ಜೀವಿಯ ಮೇಲೆ ಅವಲಂಬಿಸಿದೆ ,ಪರಸ್ಪರ ಅವಲಂಬನೆಯ ಸ್ವರೂಪವಾಗಿ ಇಡೀ ಸೃಷ್ಟಿ ಸಾಗುತ್ತಿದೆ ಇಲ್ಲಿ ನಾನು ಹೆಚ್ಚು ನೀನು ಕಡಿಮೆ ಎಂಬ ಭಾವವೇ ಬರಲಾರದು ಹಾಗೆಯೇ ಪ್ರತಿಯೊಬ್ಬ ಮನುಷ್ಯ ತನ್ನ ಇತಿಮಿತಿಯೊಳಗೆ ವಿಶಾಲ ದೃಷ್ಟಿಕೋನದಿಂದ ಜೀವನ  ಸಾಗಿದರೆ ಬದುಕು ಕಷ್ಟವೆನಿಸದು ಎಲ್ಲವೂ ಸರಳವಾಗಿ ಸುಲಲಿತವಾಗಿ ಇರುತ್ತದೆ.       “ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ  ಕುದುರೆ ನೀನ್ ಅವನು  ಪೆಳದಂತೆ ಪಯಣಿಗರು ಮದುವೆಗೂ ಮಸಣಕೊ ಹೋಗೆಂದ ಕಡೆ ಹೋಗು ಪದ ಕುಸಿಯೆ ನೆಲವಿಹುದು” ಮಂಕುತಿಮ್ಮ॥ ಎನ್ನುವ ಹಾಗೆ ಈ ಬದುಕಿನ ಪಯಣದಲ್ಲಿ ಎಲ್ಲವೂ ನಾವಂದುಕೊಂಡಂತೆ ಇರಲಾರದು ಕೆಲವೊಮ್ಮೆ ಸನ್ನಿವೇಶಗಳಿಗೆ ನಾವೇ ಹೊಂದಿಕೊಳ್ಳಬೇಕಾಗುತ್ತದೆ ಇದು ಅವಶ್ಯ ಹಾಗೂ ಅನಿವಾರ್ಯವೂ ಕೂಡಾ,ಬರೀ ಮುಂದೇನಾಗುವುದೋ ಎಂಬ ಆತಂಕ ಭಯದಲ್ಲಿ ಜೀವನ ಸಾಗಿಸು ವುದಲ್ಲ ,ಒಳ್ಳೆಯದೇ ಆಗುತ್ತದೆ ಎನ್ನುವ ಸಕಾರಾತ್ಮಕ ಮನೋಭಾವನೆಯಿಂದ ನಮ್ಮ ಕಾರ್ಯದಲ್ಲಿ ವೈಶಿಷ್ಟ್ಯಪೂರ್ಣವಾಗಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಎಲ್ಲವೂ ಒಳ್ಳೆಯದೇ ಆಗುತ್ತದೆ. “ಭಾವನೆ ಒಳ್ಳೆಯದಾದರೆ ಭಾಗ್ಯಕ್ಕೆನು ಕಡಿಮೆ” ಎನ್ನುವಂತೆ ನಮ್ಮ ಭಾವನೆಗಳು ಉತ್ತಮವಾಗಿದ್ದಾಗ ಒಳ್ಳೆಯ ದೃಷ್ಟಿಕೋನದಿಂದ ಕೂಡಿದ್ದಾಗ ನಮಗೆ ಸಿಗುವ ಪ್ರತಿಫಲವೂ ಸಹ ಉತ್ತಮವಾಗಿಯೇ ಇರುತ್ತದೆ.ಅನವಶ್ಯಕವಾಗಿ ಇಲ್ಲಸಲ್ಲದ ವಿಚಾರದಲ್ಲಿ ತೊಡಗದೆ ಆದಷ್ಟು ಸಕಾರಾತ್ಮಕವಾಗಿ ವಿಶಾಲ ಮನೋಭಾವನೆಯನ್ನು ಹೊಂದುತ್ತಾ ಪ್ರತಿಯೊಂದು ಸನ್ನಿವೇಶ ವಸ್ತು ವಿಷಯ ವ್ಯಕ್ತಿ ಎಲ್ಲದರಲ್ಲೂ ಒಳ್ಳೆಯದನ್ನು ಮಾತ್ರ ನಾವು ಕಾಣುತ್ತಾ ಸಾಗಿದರೆ ಬಹುಶಃ ನಮ್ಮ ಬದುಕೇ ಒಂದು ಸುಂದರವಾದ ತಾಣವಾಗುತ್ತದೆ.             ಒಂದು ಗುಲಾಬಿ ಹೂವನ್ನು ನೋಡಿದಾಗ ಒಬ್ಬ ವ್ಯಕ್ತಿ ಅದರ ಸೌಂದರ್ಯವನ್ನು ಆಸ್ವಾದಿಸುತ್ತಾನೆ ಇದು ವಿಶಾಲ ದೃಷ್ಟಿಕೋನ, ಬದಲಾಗಿ ಅದೇ ಹೂವನ್ನು ನೋಡಿದ ಮತ್ತೊಬ್ಬ ವ್ಯಕ್ತಿ ಆ ಗುಲಾಬಿ ಹೂವಿನ ಕೆಳಗಿರುವ ಮುಳ್ಳುಗಳನ್ನು ಮಾತ್ರ ಗಮನಿಸುತ್ತಾನೆ ಇದು ಸಂಕುಚಿತ ದೃಷ್ಟಿಕೋನ, ಬರೀ ಮುಳ್ಳಿನ ತಕರಾರುಗಳನ್ನು ಹೇಳುವ ವ್ಯಕ್ತಿಗೆ ಗುಲಾಬಿ ಹೂವಿನ ಸೌಂದರ್ಯದ ಅರಿವಾಗದು ಇಂತಹ ವ್ಯಕ್ತಿ ಗುಲಾಬಿ ಹೂವೇ ಮುಳ್ಳಿನಿಂದ ಕೂಡಿದೆ ಎನ್ನುತ್ತಾನೆ ಆದರೆ ಹೂವಿನ ಸೌಂದರ್ಯವನ್ನು ಮಾತ್ರ ಗಮನಿಸಿದ ವ್ಯಕ್ತಿ ಅದರ ಸುಂದರತೆಯನ್ನು ಸವಿಯುತ್ತಾನೆ.ಹೀಗೆಯೇ ನಮ್ಮ ಬದುಕು ಎಷ್ಟೋ ಸಾರಿ ಒಳ್ಳೆಯದನ್ನು ಬಿಟ್ಟು ಬರೀ ಕೆಟ್ಟದ್ದರ ಕಡೆಗೆ ಮಾತ್ರ ದೃಷ್ಟಿಕೋನ ವಾಲುತ್ತದೆ ಆಗ ಪ್ರಪಂಚದಲ್ಲಿ ಯಾವುದೂ ನಮಗೆ ಸರಿಯಾಗಿ ಕಾಣುವುದಿಲ್ಲ ಬದಲಾಗಿ ಎಷ್ಟೋ ನಕಾರಾತ್ಮಕ ಅಂಶಗಳಿದ್ದರೂ ಕೂಡ ಸಕಾರಾತ್ಮಕವಾಗಿ ರುವುದನ್ನು ಮಾತ್ರ ನಾವು ಗಮನಿಸುತ್ತಾ ಸಾಗಿದರೆ ನಮ್ಮಲ್ಲಿರುವ ದೃಷ್ಟಿಕೋನಗಳು ವಿಶಾಲಗೊಳುತಾ ಸಾಗುತ್ತವೆ ಆಗ ಈ ಬದುಕೇ ಒಂದು ಅದ್ಭುತ ಹಾಗೂ ವಿಶಿಷ್ಟ ಎನಿಸುತ್ತದೆ. ನಮ್ಮ ವಿಶಾಲ ದೃಷ್ಟಿಕೋನಗಳು  ಮಾತ್ರ ನಮ್ಮ ಮನೋಭಾವನೆಗಳನ್ನು ಬಲಗೊಳಿಸ ಬಲ್ಲವು.        “ವಿಶಾಲ ದೃಷ್ಟಿಕೋನಗಳೇ ಸುಂದರ ಬದುಕಿಗೆ ಆಧಾರ “             “ದೃಷ್ಟಿಯಂತೆ ಸೃಷ್ಟಿ “ಎನ್ನುವ ಹಾಗೆ ನಮ್ಮಲ್ಲಿರುವ ವಿಶಾಲ ದೃಷ್ಟಿಕೋನಗಳೇ ನಮ್ಮ ಸುಂದರ ಬದುಕಿಗೆ ಆಧಾರವಾಗುತ್ತದೆ.ಸೃಷ್ಟಿಯಲ್ಲಿ ಇತರ ಜೀವಿಗಳಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ತೀರ್ಮಾನ ಮಾಡುವ ವಿವೇಕ ಇರುವುದಿಲ್ಲ ಆದರೆ ಮನುಷ್ಯನಲ್ಲಿ ಈ ವಿವೇಕವೂ ಪೂರ್ಣ ಪ್ರಮಾಣದಲ್ಲಿ ವಿಕಾಸವಾಗಿದೆ.ಸೃಷ್ಟಿಯ ಆದಿಯಿಂದಲೂ ಮನುಷ್ಯ ತನ್ನ ವಿವೇಕವನ್ನು ಹಲವಾರು ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತ ಬಂದಿದ್ದಾನೆ.ನಮ್ಮ ಸುತ್ತಲಿರುವ ಒಳಿತು ಕೆಡಕುಗಳ ಮಧ್ಯದಲ್ಲಿಯೇ ವಿಭಿನ್ನವಾದ ದೃಷ್ಟಿಕೋನಗಳು ವಿಭಿನ್ನ ರೀತಿಯಲ್ಲಿ ನಮ್ಮನ್ನು ವಿಚಲಿತಗೊಳಿಸುತ್ತವೆ.ಆದರೆ ಮನುಷ್ಯ ಜನ್ಮದ ಶ್ರೇಷ್ಠತೆಯನ್ನು ಅರಿತುಕೊಂಡು ಸಾಗಿದಾಗ ನಮ್ಮ ಮನೋಭಾವನೆಗಳು ವಿಶಾಲ ಗೊಳ್ಳುತ್ತಾ ಹೋಗುತ್ತವೆ.ನಮ್ಮಲ್ಲಿ ಕೆಲವೊಮ್ಮೆ ಸಂಕುಚಿತ ಮನೋಭಾವನೆಗಳು ಒಡಮೂಡಿದಾಗ ನಾನೇ ಶ್ರೇಷ್ಠ ಎನ್ನುವ ಅಹಂಭಾವ ನಮ್ಮ ಅವನತಿಗೆ ಕಾರಣವಾಗುತ್ತದೆ.ಎಲ್ಲರಿಗಿಂತ ನಾನೊಬ್ಬನೇ ಶ್ರೇಷ್ಠ ನಾನೇ ವೀರ ಶೂರ ಧೀರ ಸುಂದರ ಸಶಕ್ತ ಸುಶಿಕ್ಷಿತ ಎಂಬ ಸಂಕುಚಿತ ಮನೋಭಾವನೆಗಳೆ ಮೂಡಿದಾಗ ಮನುಷ್ಯ ಜನ್ಮದ ನೈಜ ಬೆಳವಣಿಗೆ ಕುಂಠಿತವಾಗುತ್ತ ಹೋಗುತ್ತದೆ.ಬದಲಾಗಿ “ತನ್ನಂತೆ ಪರರು ನಾನು ಪರರಂತೆ ಸಹಜೀವಿ “ಎಂಬ ವಿಶಾಲ ಮನೋಭಾವನೆ ನಮ್ಮಲ್ಲಿದ್ದಾಗ ಯಾವುದೇ ವ್ಯತ್ಯಾಸಗಳು ನಮ್ಮಲ್ಲಿ ದುಃಖವನ್ನುಂಟು ಮಾಡಲಾರವು.           ನಮ್ಮ ಸುತ್ತಮುತ್ತಲೂ ಸಣ್ಣವರು ದೊಡ್ಡವರು ಬಡವ ಶ್ರೀಮಂತ ಎಂದು ಹೇಳುತ್ತೇವೆ ಆದರೆ ಪರಸ್ಪರ ಹೋಲಿಸಿದಾಗ ಯಾರೂ ಸಣ್ಣವರಲ್ಲ ಯಾರೂ ದೊಡ್ಡವರಲ್ಲ ಈ ಸತ್ಯವನ್ನು ತಿಳಿದಾಗ ಮಾತ್ರ ನಮ್ಮಲ್ಲಿ ವಿಶಾಲ ದೃಷ್ಟಿಕೋನಗಳು ಸುಂದರ ಬದುಕಿಗೆ ಸೋಪಾನವಾಗುತ್ತದೆ.ಒಂದು ಕುಟುಂಬದ ವಾತಾವರಣದಿಂದ ಇಡೀ ವಿಶ್ವದ ವರೆಗೂ ನಾವು ಅವಲೋಕಿಸುತ್ತಾ ಸಾಗಿದಾಗ ಈ ದೊಡ್ಡಸ್ತಿಕೆಯ ಹೋರಾಟ ಸಮಾಜದ ಎಲ್ಲ ರಂಗಗಳಲ್ಲಿ ಇದ್ದೇ ಇದೆ, ಪ್ರತಿಯೊಬ್ಬನೂ ತಾನು ಎಲ್ಲರಿಗಿಂತ ದೊಡ್ಡವನಾಗಬೇಕು ಎಂದು ಭಾವಿಸುತ್ತಾನೆ. ಆದರೆ ಅದು ಹೋರಾಟದ ಸ್ವರೂಪ ಪಡೆದಾಗ ಮಾತ್ರ ಪರಸ್ಪರರಲ್ಲಿ ದ್ವೇಷ ಅಸೂಯೆಗೆ ಕಾರಣವಾಗುತ್ತದೆ. “ಅರಿತು ಸಾಗಿದಾಗ ಬದುಕೇ ಸುಂದರ” ಎನ್ನುವಂತೆ ಇಲ್ಲಿ ಯಾರೂ ಹೆಚ್ಚು ಅಲ್ಲ ಕಡಿಮೆಯೂ ಅಲ್ಲ ಒಬ್ಬರಿಗೊಬ್ಬರು ಸಹಕಾರ ಸಹಬಾಳ್ವೆಯೊಂದಿಗೆ ಸಾಗಿದಾಗ ಮಾತ್ರ ಜೀವನದ ಪಯಣ ಸುಲಭವಾಗುತ್ತದೆ.ಇಲ್ಲವಾದರೆ ಬರೀ ಸಂಕುಚಿತ ಮನೋಭಾವನೆಗಳೆ ನಮ್ಮನ್ನು ಆವರಿಸಿದರೆ ಜೀವನದ ಸಣ್ಣ ಪುಟ್ಟ ವಿಚಾರಗಳೂ ಸಹ ನಮಗೆ ಸಂಕೀರ್ಣವೆನಿಸುತವೆ. ನಮ್ಮ ದೃಷ್ಟಿಕೋನಗಳು ಎಂದಾಗ ಒಂದು ದೃಷ್ಟಾಂತ ನೆನಪಾಗುತ್ತದೆ ಅದೆಂದರೆ ,ದೊಡ್ಡದಾದ ಗುಡ್ಡದ ಕೆಳಗಡೆ ಒಂದು ಕುಟೀರ, ಆ ಕುಟೀರದ ಎದುರುಗಡೆ ಒಂದು ದಷ್ಟಪುಷ್ಟವಾಗಿ ಬೆಳೆದ ಹೆಮ್ಮೆಯನ್ನು ಕಟ್ಟಿರುತ್ತಾರೆ, ಒಂದು ದಿನ ಆ ಹೆಮ್ಮೆಯ ಮಾಲೀಕ ಗುಡ್ಡವನ್ನೇರಿ ವಿಶಾಲ ಆಗಸ ಹಸಿರು ಸೃಷ್ಟಿಯನ್ನು ನೋಡುವುದರಲ್ಲಿ ತನ್ಮಯನಾಗಿದ್ದ, ಹಾಗೆಯೇ ನೋಡುತ್ತಾ ಅಕಸ್ಮಾತಾಗಿ ಅವನ ದೃಷ್ಟಿಕೋನ ಗುಡ್ಡದ ಕೆಳಗಿರುವ ಕುಟೀರದ ಎದುರುಗಡೆ ಕಟ್ಟಿದ ಎಮ್ಮೆ ಅತ್ತ ಹರಿಯಿತು ಆಗ ಎತ್ತರದ ಗುಡ್ಡದ ಮೇಲಿಂದ ತನ್ನ ಎಮ್ಮೆಯನ್ನು ನೋಡಿದ ಮಾಲೀಕ ಅಂದುಕೊಳ್ಳುತ್ತಾನೆ “ಈ ಎಮ್ಮೆ ಎಷ್ಟು ಚಿಕ್ಕದಾಗಿ ಕಾಣುತ್ತಿದೆಎಲ್ಲಾ ” ಎಂದು ಅಂದುಕೊಂಡ.ಹಾಗೆಯೇ ಗುಡ್ಡದ ಕೆಳಗಡೆ ನಿಂತಿರುವಂತಹ ಎಮ್ಮೆ ಅದೇ ಸಮಯಕ್ಕೆ ಸರಿಯಾಗಿ ಗುಡ್ಡದ ಮೇಲೆ ನಿಂತಿದ್ದ ತನ್ನ ಮಾಲೀಕನನ್ನು ನೋಡಿ” ನಮ್ಮ ಮಾಲಿಕ ಎಷ್ಟು ಕುಳ್ಳನಾಗಿ ಕಾಣುತ್ತಾ ನಲ್ಲ” ಎಂದುಕೊಂಡಿತು ಇಲ್ಲಿ ಮಾಲೀಕನ ದೃಷ್ಟಿಯಲ್ಲಿ ಎಮ್ಮೆ ಚಿಕ್ಕದು, ಎಮ್ಮೆಯ ದೃಷ್ಟಿಕೋನದಲ್ಲಿ ಮಾಲೀಕ ಚಿಕ್ಕವನಾಗಿ ಕಂಡ ,ವಾಸ್ತವದಲ್ಲಿ ನಿಜವಾಗಿ ನೋಡಿದರೆ ಯಾರೂ ಚಿಕ್ಕವರು ಅಲ್ಲ ದೊಡ್ಡವರೂ ಅಲ್ಲ ಕೇವಲ ನಮ್ಮ ನಮ್ಮ ದೃಷ್ಟಿಕೋನ ವಷ್ಟೇ.ಇಂತಹದ್ದೇ ಎಷ್ಟೋ ಸಂಗತಿಗಳು ನಮ್ಮ ಸುತ್ತಮುತ್ತಲೂ ನಾವು ಗಮನಿಸುತ್ತಾ ಸಾಗುತ್ತೇವೆ, ದೃಷ್ಟಿಕೋನಕ್ಕೆ ಅನುಸಾರವಾಗಿ ನಮಗಾಗುವ ಅನುಭವಗಳು ವಿಭಿನ್ನ ಹಾಗೂ ಕೆಲವೊಮ್ಮೆ ವಿಚಿತ್ರವೂ ಸಹ ಆಗಿರುತ್ತವೆ.ಒಂದು ಕುಟುಂಬದಲ್ಲಿ ಎಲ್ಲರ ಆಗುಹೋಗುಗಳನ್ನು ನೋಡಿಕೊಳ್ಳುವ ಮನೆಯ ಯಜಮಾನ ನಾನೊಬ್ಬನೇ ಶ್ರೇಷ್ಠ ಎಂದುಕೊಂಡರೆ ಅದು ಅವನ ಸಂಕುಚಿತ ದೃಷ್ಟಿಕೋನ ಹಾಗೆಯೇ ಕುಟುಂಬದಲಿ  ಎಲ್ಲರ ಬೇಕು ಬೇಡಿಕೆಗಳಿಗೆ ಸ್ಪಂದಿಸುವ ಎಲ್ಲರ ಆರೈಕೆ ಮಾಡುವ ಕುಟುಂಬದ ಒಡತಿ ನಾನೇ ಹೆಚ್ಚು ಎಂದುಕೊಂಡರೆ ಅದು ಅವರ ದೃಷ್ಟಿಕೋನ ಹೀಗೆ ಪ್ರತಿಯೊಬ್ಬರಲ್ಲೂ ಕೇವಲ ನಾನು ಹೆಚ್ಚು ಎನ್ನುವ ದೃಷ್ಟಿಕೋನ ವಿದ್ದರೆ ಪರಸ್ಪರ ಪ್ರೀತಿ ವಿಶ್ವಾಸ ಸಹಕಾರ ನಂಬಿಕೆ ಹೊಂದಾಣಿಕೆ ಇರಲಾರದು. ಈ ಸೃಷ್ಟಿಯಲ್ಲಿ ಒಂದು ತನ್ನ ಉಳಿವಿಗಾಗಿ ಇನ್ನೊಂದು ಜೀವಿಯ ಮೇಲೆ ಅವಲಂಬಿಸಿದೆ ,ಪರಸ್ಪರ ಅವಲಂಬನೆಯ ಸ್ವರೂಪವಾಗಿ ಇಡೀ ಸೃಷ್ಟಿ ಸಾಗುತ್ತಿದೆ ಇಲ್ಲಿ ನಾನು

ಜೀವನ Read Post »

ಇತರೆ

ವರ್ತಮಾನ

ಕವಡೆ ಲೋಬಾನದ ಪರಿಮಳಕ್ಕೆ ಬಿತ್ತು ಕರಾಳ ಕೊರೊನಾ ಪೆಟ್ಟು ಪ್ರತೀ ವರುಷವೂ ಸಂಕ್ರಮಣದಿಂದ ನಾಗರಪಂಚಮಿವರೆಗೆ ಹಳ್ಳಿ ಹಳ್ಳಿಗಳು ಸೇರಿದಂತೆ ನಗರ ಪಟ್ಟಣಗಳ ತುಂಬೆಲ್ಲಾ ವೃತ್ತಿರಂಗಭೂಮಿ ನಾಟಕಗಳ ಸುಗ್ಗಿ. ಬಹುಪಾಲು ಜಾತ್ರೆಗಳು ಜರುಗುವುದು ಇದೇ ಅವಧಿಯಲ್ಲೇ. ಒಕ್ಕಲುಮಕ್ಕಳು ಬೆಳೆವ ಬೆಳೆಗಳ ಫಸಲಿನಸುಗ್ಗಿ ಮುಗಿದು ಹಬ್ಬ, ಹುಣ್ಣಿಮೆ, ಜಾತ್ರೆಗಳ ಸಡಗರ ಸಂಭ್ರಮ. ವರ್ಷವೆಲ್ಲ ದುಡಿದ ಜೀವಗಳಿಗೆ ಆಡಿ ನಲಿದು, ಹಾಡಿ, ಕುಣಿವ ಹಂಗಾಮ. ಸಹಜವಾಗಿ ವೃತ್ತಿರಂಗ ನಾಟಕಗಳೆಂದರೆ ಜನ ಸಾಮಾನ್ಯರ ಮನರಂಜನೆಯ ಘಮಲು. ಕವಡೆ ಲೋಬಾನದ ಪರಿಮಳ. ಝಗಮಗಿಸುವ ಬಣ್ಣಬಣ್ಣದ ಬೆಳಕು. ವೃತ್ತ, ಕಂದ ಪದ್ಯಗಳ ಕಲರವ. ಕೆಲವುಕಡೆ ನಾಟಕಗಳದ್ದೇ ಜಾತ್ರೆ. ಪುಣ್ಯಕ್ಕೆ ಈಸಲ ಬನಶಂಕರಿಯಲ್ಲಿ ಹನ್ನೊಂದು ನಾಟಕ ಕಂಪನಿಗಳು ಮಹಾಜಾತ್ರೆಯ ಫಲಕಂಡಿದ್ದವು. ಅದೆನೇ ಇರಲಿ ಜನಸಂಸ್ಕೃತಿಯ ಇಂತಹ ಸಮೃದ್ಧ ರಂಗಸುಗ್ಗಿಯನ್ನು ಈಬಾರಿ ಕೊರೊನಾ ಎಂಬ ಕರಾಳ ರಕ್ಕಸ ಸಾರಾಸಗಟಾಗಿ ನುಂಗಿ ನೊಣೆಯಿತು. ಶಿರಸಿಯಂತಹ ಜಾತ್ರೆಗಳ ಕ್ಯಾಂಪ್ ಕಮರಿ ಹೋಗಿ ಹತ್ತಾರು ನಾಟಕ ಕಂಪನಿಗಳು ಮುಚ್ಚಿದವು. ಸ್ಥಳಾಂತರಿಸಲೂ ಹಣದ ಕೊರತೆ. ನೂರಾರು ಕಲಾವಿದರ ಹಸಿವಿನ ಅನ್ನವನ್ನು ಕೊರೊನಾ ಕಸಿದು ಬಿಟ್ಟಿತು. ಹೆಸರು ಮಾಡಿದ, ಪ್ರಸಿದ್ದಿ ಪಡೆದ ಕೆಲವು ಕಲಾವಿದರು ಹೇಗೋ ತಿಂಗಳೊಪ್ಪತ್ತು ಬದುಕುಳಿದಾರು. ಆದರೆ ಸಣ್ಣ ಪುಟ್ಟ ಪೋಷಕ ಪಾತ್ರಮಾಡುವ ನಾಟಕ ಕಂಪನಿಯ ಕಲಾವಿದರು, ಪ್ರೇಕ್ಷಾಂಗಣದ ಗೇಟ್ ಕಾಯುವವ, ಪರದೆ ಎಳೆಯುವ ಸ್ಟೇಜ್ ಮೇಸ್ತ್ರಿ, ಬೆಳಕಿನ ಸಂಯೋಜನೆಯ ವೈರ್ಮ್ಯಾನ್, ರಂಗಪಾರ್ಟಿಯ ಸಹಾಯಕ, ನೆಲ ಅಗೆದು ಸ್ಟೇಜ್ ಕಟ್ಟುವ ರಂಗಕಾರ್ಮಿಕರು… ಹೀಗೆ ನೂರಾರುಮಂದಿ ನೇಪಥ್ಯ ಕಲಾವಿದರು ಕಂಪನಿ ನಾಟಕಗಳಿಲ್ಲದೇ ಅಸಹಾಯಕತೆಯ ಬಿಸಿಯುಸಿರು ಬಿಡುತ್ತಿದ್ದಾರೆ. ಹಾಗೆಯೇ ಕಂಪನಿ ಶೈಲಿಯ ವೃತ್ತಿ ನಾಟಕಗಳನ್ನೇ ಬದುಕುವ ಸಹಸ್ರಾರು ಸಂಖ್ಯೆಯ ಹವ್ಯಾಸಿ ಕಲಾವಿದರು, ಕ್ಯಾಸಿಯೋ, ರಿದಂಪ್ಯಾಡ್ ನುಡಿಸುವ, ಮೇಲ್ ಮತ್ತು ಫೀಮೇಲ್ ಕಂಠದಲ್ಲಿ ಹಾಡುವ ರಂಗಗೀತೆಗಳ ಗಾಯಕರು ನೋವಿನ ನಿಟ್ಟುಸಿರು ಬಿಡುವಂತಾಗಿದೆ. ನಗರ, ಪಟ್ಟಣ, ಹಳ್ಳಿ, ಹಟ್ಟಿ, ಮೊಹಲ್ಲಾಗಳ ತುಂಬೆಲ್ಲಾ ಲಾಕ್ ಡೌನ್, ಸೀಲ್ ಡೌನ್ ಗಳ ದಿಗ್ಭಂಧನ. ಪ್ರತೀವರ್ಷ ಒಂದೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹತ್ತಾರು ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದವು. ಸರಕಾರದ ನೆರವಿಲ್ಲದೇ ನಮ್ಮ ಗ್ರಾಮೀಣರು ತಾವೇ ನಾಟಕ ರಚಿಸಿ, ತಾವೇ ನಿರ್ದೇಶಿಸಿ, ತಾವೇ ಲಕ್ಷಗಟ್ಟಲೇ ಹಣಹಾಕಿ ಇಂತಹ ಹವ್ಯಾಸಿ ಕಲಾವಿದೆಯರನ್ನು ಆಮಂತ್ರಿಸಿ ತಾವೂ ಪಾತ್ರ ಮಾಡುತ್ತಾ ಕಂಪನಿ ಶೈಲಿಯ ವೃತ್ತಿ ನಾಟಕಗಳನ್ನು ಪ್ರದರ್ಶಿಸುವ ಮೂಲಕ ವೃತ್ತಿ ರಂಗಭೂಮಿಯ ಲೋಕ ಮೀಮಾಂಸೆ ಮೆರೆಯುತ್ತಿದ್ದರು. ಏನಿಲ್ಲವೆಂದರೂ ವರ್ಷಕ್ಕೆ ಏಳೆಂಟು ಸಾವಿರಕ್ಕೂ ಹೆಚ್ಚು ನಾಟಕಗಳು ಕನ್ನಡ ನಾಡಿನಾದ್ಯಂತ ಪ್ರದರ್ಶನಗೊಳ್ಳುತ್ತಿದ್ದವು. ಇವೆಲ್ಲವೂ ವೃತ್ತಿರಂಗಭೂಮಿ ಶೈಲಿಯ ನಾಟಕಗಳೇ. ಇವರು ಯಾರೂ ಅಪ್ಪೀ ತಪ್ಪಿಯೂ ಪ್ರಯೋಗಾತ್ಮಕವಾದ ಕಾರ್ನಾಡ, ಕಾರಂತ, ಕಂಬಾರ, ಲಂಕೇಶರ ಆಧುನಿಕ ಶೈಲಿಯ ನಾಟಕಗಳನ್ನು ಪ್ರದರ್ಶಿಸಿದವರಲ್ಲ. ಹವ್ಯಾಸಿಗಳಾಗಿದ್ದುಕೊಂಡೇ ಕಂಪನಿ ನಾಟಕಗಳ ಕವಡೆ ಲೋಬಾನ ಪೂಜೆಯ ಕಂಪು ಸೂಸುತ್ತಾ ಹಳ್ಳಿಯ ನಾಟಕಗಳಲ್ಲಿ ದುಡಿದು ವರ್ಷದ ಹಸಿವಿನೊಡಲು ತುಂಬಿಕೊಳ್ಳುತ್ತಿದ್ದರು. ಆ ಎಲ್ಲ ಕಲಾವಿದೆಯರ ಅನ್ನದ ಮೇಲೆ ಈವರ್ಷ ಕೊರೊನಾ ಕಾರ್ಗಲ್ಲು ಬಿದ್ದಿದೆ. ******** ಮಲ್ಲಿಕಾರ್ಜುನ ಕಡಕೋಳ

ವರ್ತಮಾನ Read Post »

ಇತರೆ

ಹಾಸ್ಯ

ಮನೆಯೇ ಮಂತ್ರಾಲಯ? ಜ್ಯೋತಿ ಡಿ .ಬೊಮ್ಮಾ ಮತ್ತದೆ ಸಂಜೆ ಅದೇ ಬೇಸರದಲ್ಲಿ ಎಕಾಂಗಿಯಾಗಿ ಕುಳಿತಿದ್ದಾಗ ಬಾಜು ಮನಿ ಅಕ್ಕೋರು ಬಂದರು ,ಬರ್ರಿ ಬರ್ರಿ ಎಂದು ಸ್ವಾಗತಿಸಿ ಪಕ್ದಲ್ಲೆ ಇದ್ದ ಖುರ್ಚಿ ಕಡೆಗೆ ಕೈ ತೊರಿಸಿದೆ ಕುಳಿತುಕೊಳ್ಳಲು.ಕುರ್ಚಿ ಸರಕ್ಕನೆ ನನ್ನಿಂದ ನಾಲ್ಕು ಮಾರು ದೂರ ಎಳೆದುಕೊಂಡು ಕುಳಿತರು .ಮುಖಕ್ಕೆ ಮಾಸ್ಕ ಹಾಕಿಕೊಂಡೆ ಮಾತಾಡತೊಡಗಿದರು.ನಿಮಗ ಗೊತ್ತದ ಇಲ್ಲ ,ಇಲ್ಲೆ ಬಾಜು ಕಾಲೊನಿದಾಗ ಯಾರಿಗೋ ಕರೊನಾ ಬಂದದಂತರ್ರಿ ,ಅವರ ಮನ್ಯಾಗಿನವರಿಗೆಲ್ಲ ಎಳಕೊಂಡು ಹೊಗ್ಯಾರಂತ ,ಮುಖಕ್ಕೆ ಹಾಕಿದ ಮಾಸ್ಕ ತೆಗೆದು ಅಲ್ಲೆ ಪಕ್ಕದಲ್ಲಿ ಉಗುಳಿ ಮತ್ತೆ ಮಾಸ್ಕ ಹಾಕಿಕೊಂಡರು.ಅಲ್ರಿ ಅಕ್ಕೊರು ಮೊದಲ ನಾವು ಮತ್ತ ನಮ್ಮನಿ ಅಕ್ಕಪಕ್ಕ ಸ್ವಚ್ಚ ಇಟಗೊಬೇಕು ,ಹಾಗೆಲ್ಲ ಅಲ್ಲಿ ಇಲ್ಲಿ ಉಗಳಬಾರದ್ರಿ ಎಂದು ತಿಳಿಸಲು ಪ್ರಯತ್ನಿಸಿದೆ.ಅದಕ್ಕವರು ಛಲೊ ಹೆಳತ್ರಿ..ಉಗಳ ಬಂದ್ರ ಬಾಯಾಗ ಇಟಗೊಂಡ ಕೂಡಬೇಕಾ.ಉಗಳೆನು ಹೇಳಿ ಕೇಳಿ ಬರತದೇನು ಎಂದು ಮತ್ತೊಮ್ಮೆ ತಪ್ಪಕ್ಕನೆ ಉಗುಳಿ ಮತ್ತ ಮಾಸ್ಕ ಹಾಕಿಕೊಂಡೆ ಮಾತಾಡತೊಡಗಿದರು.ಅಲ್ರಿ ಈ ಸರ್ಕಾರದೊರು ಎಟೊಂದು ಕಂಪಿಸ್ ಮಾಡಲತಾರಿ ಒಮ್ಮಿ ಎಲ್ಲಾ ಚಾಲೂ ಮಾಡತಿವಿ ಅಂತಾರ ,ಒಮ್ಮಿಇನ್ನೂ ಸ್ವಲ್ಪ ದಿನ ಮುಂದೂಡತೀವಿ ಅಂತಾರ,ಸಾಲಿ ಸುರು ಮಾಡತೀವಿ ಅಂತಾರ ,ಒಮ್ಮೆ ಇನ್ನೂ ಎರಡು ತಿಂಗಳ ತೆರೆಲ್ಲ ಅಂತಾರ ,ಹೊರಗ ಬರಬ್ಯಾಡರ್ರಿ ಅಂತಾರ ಮತ್ತ ಕರೋನಾ ಜತಿಗೆ ಬದುಕೊದು ಕಲಿರಿ ಅಂತಾರ ನನಗರ ಟೊಟಲ್ ಕಂಪೂಸ್ ಆಗಲತದ ನೋಡ್ರಿ..ಯಾವದು ಕೇಳಬೇಕು ಯಾರದು ಕೇಳಬೇಕು ಒಂದು ತಿಳಿವಲ್ದು ಎಂದರು.ಯಾಕ ಅಷ್ಟು ಟೆನ್ಷನ್ ಮಾಡಕೋತಿರಿ ಈಗ ಯಾರದ ಎನ ನಿಂತದ ,ಮಾಡಲತಿವಿ ಉಣ್ಣಲತಿವಿ ,ಆವಾಗೀಟು ಹೊರಗ ಓಡಾಡತಿದ್ವಿ ಈಗ ಅದೆಲ್ಲ ಕಟ್ ಆಗ್ಯಾದ, ಎನಿದ್ರೂ ನಮಗೇನು ಅಡುಗಿ ಮಾಡಾದೂ ತೊಳೆದು ತಪ್ಪತದೆನು ಅಂದೆ.ಐ,,,ಮೂರು ತಿಂಗಳಾತು ಒಂದು ಸೀರಿ ತಗೊಂಡಿಲ್ಲ ,ಒಂದು ಬೌಲ್ವ್ಸಹೊಲಿಸಿಲ್ಲ ,ಬ್ಯೂಟಿ ಪಾರ್ಲರ ಮಾರಿ ನೊಡಲಾರದಕ್ಕ ನನ್ನ ಮಾರಿ ನೊಡಕೊಳ್ಳಲಾರದಂಗ ಆಗೇದ. ಈ ಕರೋನಾ ಎನಾರ ನನ್ನ ಕೈಯಾಗ ಸಿಕ್ಕರ ನಾ ಸುಮ್ಮನ ಬಿಡಾಕಿ ಅಲ್ಲ ನೋಡ್ರಿ , ಎಂದು ರಾಂಗಾದರು .ಅಯ್ಯೊ ಅಕ್ಕೊರೆ ,ಸಿಟ್ಟಿಲೆ ಅದಕ್ಕ ಹಿಡಿಲಾಕ ಹೊಗಿರಿ ಮತ್ತ ,, ನಿಮಗ ಹಿಡದು ಕ್ವಾರಂಟೈನ್ ಮಾಡತಾರ ಮತ್ತ ಎಂದೆ.ಮಾಡ್ಲಿ ಬಿಡ್ರಿ..ಅಲ್ಲೆನ್ ತಕಲಿಫ ಇಲ್ಲ.ಪೇಪರನಾಗ ನೋಡಿರಿಲ್ಲ..ಊಟ ಬಿಸಿಲೇರಿ ನೀರು ಮೊಟ್ಟೆ ಡ್ರೈಪ್ರೂಟ್ಸ ಎಲ್ಲ ಕೊಡತಾರಂತ ಟೈಮ ಟೈಮಿಗೆ , ಹೇಗೋ ಈ ಬ್ಯಾಸಗಿ ಮನ್ಯಾಗೆ ಕಳದೀವಿ ,ಒಂದು ಟೂರ್ ಇಲ್ಲ , ಪಿಕ್ ನಿಕ್ ಇಲ್ಲ ,ಸುಮ್ಮ ಅಲ್ಲೆರ ಹೋಗಿ ಇದ್ದರ ಒಂದಷ್ಟೂ ದಿನ ಔಟಿಂಗ ಆದಂಗ ಆಗತದ ,,ಈ ಅಡಗಿ ಮನಿ ಕಾಟ ತಪ್ಪತದ ,ಹೌದಿಲ್ಲ ಎಂದರು . ಮಾತಾಡಿ ಗಂಟಲು ಕರ ಕರ ಎಂದಿಬೇಕು ,ಮಾಸ್ಕ ತೆಗೆದು ಮತ್ತೊಮ್ಮೆ ಉಗುಳಿ ಬಂದರು.ಹಾಗಲ್ಲರಿ ಅಕ್ಕೊರೆ , ಕ್ವಾರಂಟೈನ್ ದಾಗ ನಮ್ಮ ಮನಿ ಮಂದಿಗೆಲ್ಲ ಒಂದೆ ಕಡೆ ಇಡತಾರೊ ಬೇರೆ ಬೇರೆ ಕಡಿ ಇಡತಾರಿ ಎಂದು ಕೇಳಿದೆ.ಬ್ಯಾರೆನೆ ಇಡಲಿ ಬಿಡ್ರಿ ,ಯಾಕ ಇಷ್ಟು ದಿನ ಒಳಗೆ ಒಂದೆ ಕಡಿ ಉಳದು ಸಾಕಾಗಿಲ್ಲೆನು , ನನಗಂತೂ ಸಾಕಾಗೇದ ದೀನಾ ಅವೆ ಮಾರಿ ನೋಡಿ ಎಂದು ಬೇಜಾರಾದರು.ಮತ್ತೆ ಅಕ್ಕೊರೆ ,,ಪೇಪರನಾಗ ನೋಡ್ದೆ , ಅಲ್ಲಿ ಕ್ವಾರಂಟೈನದಾಗ ಇರೋರು ದಂಗೆ ಏಳಕಹತ್ಯಾರಂತ ,ಓಡಿಹೊಗತಿದಾರಂತ ಎಂದೆ. ಅಯ್‌..ಅವರೆಲ್ಲ ಗಂಡಮಕ್ಕಳೆರಿ,, ಅವರಿಗೆ ಗುಟಕ ಶರಿ ಸಿಗಲಾರದಕ್ಕ ಹಾಗ ಮಾಡಲತಿರಬೇಕು..ಹೆಣ್ಣು ಮಕ್ಕಳ ಯಾರಾರ ಮನಿಗ ಕಳಸ್ರಿ ಎಂದು ದಂಗೆ ಎದ್ದಿದು ಪೇಪರನಾಗ ಬಂದಂದ ಎನು ಎಂದರು. ಕ್ವಾರಂಟೈನ್ ಎಂದರೆ ಭಯಂಕರ ಭಯ ಪಟ್ಟುಕೊಂಡಿದ್ದ ನನಗೆ ಬಾಜು ಮನಿ ಅಕ್ಕೊರ ಮಾತು ಕೇಳಿ ಸ್ವಲ್ಪ ನಿರಾಳವಾಯಿತು.ಬರತಿನ್ರಿ ,ಜ್ವಾಳದ ಹಿಟ್ಟು ಮುಗದಾದ ,ಬೀಸಕೊಂಡು ಬರಬೇಕು , ಬಾಜು ಓಣ್ಯಾಗ ಕರೋನಾ ಬಂದೋರು ಯಾರ್ಯಾರು ಈ ರಸ್ತೆದಾಗ ಓಡ್ಯಾಡೋರೊ ಎನೊ ಎಂದು ರಸ್ತೆ ಮೇಲೆ ಮತ್ತೊಮ್ಮೆ ಉಗಿದು ಹೊದರು.ಅವರು ಹೋದ ಮೇಲೂ ಕ್ವಾರಂಟೈನ್ ಗಂಗುನಲ್ಲೆ ಇದ್ದ ನಾನು ಪತಿ ಮನೆಗೆ ಬಂದ ಮೇಲೆ ಕೇಳಿದೆ. ಅಲ್ಲಿ ಕ್ವಾರಂಟೈನದಾಗ ಇರೋರು ಭಾಳ ಆರಾಮ ಇರತಾರಂತರಿ..ಕೆಲಸ ಇಲ್ಲ ಬೊಗಸಿ ಇಲ್ಲ..ಎಂದೆ. ಹೌದಾ ,ಬೆಕಾರೆ ನಿಂಗೂ ಬಿಟ್ಟು ಬರತೆನಿ ನಡಿ.ಹೇಂಗೂ ಸರ್ಕಾರದ ಜೀಪು ರೆಡಿನೆ ಅದಾವ , ಎಂದಾಗ ದಿಗಿಲು ಬಿದ್ದು ತೆಪ್ಪಗಾದೆ , ಮನೆಯೆ ಮಂತ್ರಾಲಯ ಎಂದುಕೊಳ್ಳುತ್ತ. ********

ಹಾಸ್ಯ Read Post »

ಇತರೆ

ಪ್ರಸ್ತುತ

ಶಾಲೆಗಳ ಪುನರಾರಂಭ ಶಾಲೆಗಳನ್ನು ಪುನರಾರಂಭಿಸುವ ಕುರಿತು ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿ ಪಾಲಕರ, ಶಿಕ್ಷಕರ , ಆಡಳಿತ ಮಂಡಳಿಗಳ ಅಭಿಪ್ರಾಯ ಸಂಗ್ರಹಿಸುತ್ತಿದೆ.ಜುಲೈ 1 ರಿಂದ 4 ರಿಂದ 7 ನೇ ತರಗತಿ, ಜುಲೈ 15 ರಿಂದ 1 ರಿಂದ 3 ಮತ್ತು 8 ರಿಂದ 10 ನೇ ತರಗತಿ, ಜುಲೈ 20 ರಿಂದ ಪೂರ್ವ ಪ್ರಾಥಮಿಕ ತರಗತಿಗಳನ್ನು ಪುನರಾರಂಭಿಸುವ ಪ್ರಸ್ತಾವನೆಯನ್ನು ಸರ್ಕಾರ ಜನರ ಮುಂದಿಟ್ಟಿದೆ. ಮೊದಲನೇ ಮಾದರಿ ಮತ್ತು ತಾರೀಖುಗಳೆರಡೂ ಸಮಂಜಸವಾಗಿವೆಯೆಂಬುದು ನನ್ನ ಅಭಿಪ್ರಾಯ.ತರಗತಿಗಳನ್ನು ನಡೆಸಲು ಮೂರು ಮಾದರಿಗಳ ಪ್ರಸ್ತಾವನೆಯನ್ನು ಸರ್ಕಾರ ಮುಂದಿಟ್ಟಿದೆ. ಅಗತ್ಯವಾದ ಸುರಕ್ಷಿತ ಕ್ರಮಗಳೊಂದಿಗೆ ಎಂದಿನಂತೆ ತರಗÀತಿ ನಡೆಸುವುದು ಮೊದಲನೇ ಮಾದರಿ.ಇದು ವ್ಯವಹಾರಿಕ ಹಾಗೂ ಸೂಕ್ತ.ಪ್ರತಿದಿನ ಎರಡು ಪಾಳಿಗಳಲ್ಲಿ ಶಾಲೆಯನ್ನು ನಡೆಸುವುದು ಎರಡನೇ ಮಾದರಿ. ಅಂದರೆ ಕೆಲವು ತರಗತಿಗಳನ್ನು ಬೆಳಿಗ್ಗೆ 8 ರಿಂದ 12 ಮತ್ತು ಉಳಿದ ತರಗತಿಗಳನ್ನು ಮದ್ಯಾಹ್ನ 1 ರಿಂದ 5 ರವರೆಗೆ ನಡೆಸುವ ವಿಧಾನ. ಬಾಡಿಗೆ ವಾಹನಗಳು ವಿದ್ಯಾರ್ಥಿಗಳನ್ನು ತರಗತಿವಾರು ಕರೆದುಕೊಂಡು ಬರುವ ಪದ್ಧತಿ ಇಲ್ಲದಿರುವುದರಿಂದ ಹಾಗೂ ಒಂದೇ ವಾಹನದಲ್ಲಿ ಎಲ್ಲಾ ತರಗತಿಯ ಮಕ್ಕಳೂ ಪ್ರಯಾಣ ಸುವುದರಿಂದ ಮಕ್ಕಳ ಪ್ರಯಾಣ ವೆಚ್ಚ ಕಡಿಮೆ ಇರುತ್ತದೆ. ತರಗತಿವಾರು ವಿದ್ಯಾರ್ಥಿಗಳು ಪ್ರಯಾಣ ಸಬೇಕೆಂದರೆ , ನಿಗದಿತ ಸಂಖ್ಯೆಯ ಕೊರತೆಯಿಂದಾಗಿ ಪ್ರಯಾಣ ವೆಚ್ಚದಲ್ಲಿ ಏರಿಕೆ ಸಹಜ.ಬಾಡಿಗೆ ವಾಹನಗಳ ಮೂಲಕ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರುವ ಪಾಲಕರಿಗೆ ಹೆಚ್ಚಿನ ವೆಚ್ಚ ತಗಲಲಿದೆ. ಶಾಲಾ ವಾಹನಗಳೇ ಇದ್ದರೆ, ತಗಲುವ ಹೆಚ್ಚುವರಿ ವೆಚ್ಚವನ್ನು ಪಾಲಕರಿಗೆ ವರ್ಗಾಯಿಸಲಾಗುತ್ತದೆ.ಈ ವಿಧಾನದ ಅಳವಡಿಕೆಯಿಂದ ಶಾಲೆಯ ಶಿಕ್ಷಕೇತರ ಸಿಬ್ಬಂದಿ ಹಾಗೂ ಕೆಲವು ಶಿಕ್ಷಕರು ಹೆಚ್ಚುವರಿ ಸಮಯ ದುಡಿಯುವುದು ಅನಿವಾರ್ಯವಾಗಲಿದೆ; ಅದು ಅಪೇಕ್ಷಣೀಯವಲ್ಲ.ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ರಜೆ ಇದ್ದರೂ, ಮನೆಯಲ್ಲೇ ಕುಳಿತರೂ ಸಂಬಳ ಬರುತ್ತದೆ.ಆದರೆ, ಖಾಸಗಿ ಶಾಲಾ ಶಿಕ್ಷಕರಿಗೆ ಹೆಚ್ಚಿನ ದುಡಿಮೆಗೆ, ಕೆಲವರಿಗೆ ರಜಾ ಅವಧಿಗೆ ಸಂಬಳ ಇರುವದಿಲ್ಲ.ಮೂರನೇ ಮಾದರಿಯಂತೆ ತರಗತಿಗಳನ್ನೇ ದಿನಬಿಟ್ಟು ದಿನ ಪಾಳಿಯಲ್ಲಿ ನಡೆಸುವುದು. ಮಕ್ಕಳ ಕಲಿಯುವಿಕೆ,ದಿನಚರಿಯಲ್ಲಿ ನಿಯಮಿತತೆ ಕಾಪಾಡುವಿಕೆ ಹಾಗೂ ವ್ಯವಹಾರಿಕ ಸಾಧ್ಯತೆಯ ದೃಷ್ಟಿಯಿಂದ ಸಮಂಜಸವಲ್ಲ.ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತಿ ಅವಶ್ಯವಾದ ಆಟ, ಓಟ, ಸ್ನೇಹಿತರ ಒಡನಾಟದಿಂದ ಕಳೆದ 3 ತಿಂಗಳಿನಿಂದಲೂ ಲಾಕ್ ಡೌನ್ ನಿಂದಾಗಿ ಬೆಳೆಯುವ ಮಕ್ಕಳು ವಂಚಿತರಾಗಿದ್ದಾರೆ. ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿರುವ ಮಕ್ಕಳಿಗೆ ಶುದ್ಧ ಗಾಳಿಯನ್ನು ಸೇವಿಸುವ, ಆಟ, ಪಾಠಗಳಲ್ಲಿ ತೊಡಗಿಕೊಳ್ಳುವ ಅವಕಾಶವನ್ನೂ ಇನ್ನೂ ತಡೆಗಟ್ಟುವುದು ಸಮಂಜಸವಲ್ಲ.ರಾಜಕೀಯ ಸಭೆ ಸಮಾರಂಭಗಳಿಗೆ ಹೋದರೆ, ಮಾಲ್ ಗೆ ಹೋದ್ರೆ, ಹೋಟೆಲುಗಳಿಗೆ ಹೋದ್ರೆ. ಕಛೇರಿಗಳಿಗೆ …ಮದುವೆ-ಎಂಗೇಜ್ಮೆಂಟ್ ಗಳಿಗೆ ಹೋದ್ರೆ.., ಧಾರ್ಮಿಕ ಸ್ಥಳಗಳಿಗೆ ಹೋದರೆ ಕೊರೊನಾ ಸೋಂಕು ತಗಲುವದಿಲ್ಲವೆ?ಮಕ್ಕಳು ಮನೆಲಿದ್ರೂ ಹೊರಗೆಹೋದ ಪಾಲಕರು ಮತ್ತೆ ಮನೆಗೆ ಹೋಗಲ್ವಾ? ಆ ಮೂಲಕ ಮನೆಯವರಿಗೆಲ್ಲಾ ಕರೋನ ಬರಲ್ವಾ? ಮದ್ಯವನ್ನು ಹೊರಗಿನಿಂದ ತಂದು ಮನೆಲಿ ಪಾರ್ಟಿ ಮಾಡೋದ್ರಿಂದ ಕೋರೊನ ಬರಲ್ವಾ?ಅಪ್ಪ ಅಮ್ಮ ಇಬ್ಬರೂ ಕೆಲಸಗಳಿಗೆ ಹೋಗುವ ಪರಿಸ್ಥಿತಿಯಲ್ಲಿ ಮನೆಯಲ್ಲೇ ಮಕ್ಕಳ ಶಿಕ್ಷಣ ಹೇಗೆ?ಆನ್ ಲೈನ್ ಸೌಲಭ್ಯ ಇಲ್ಲದ ಮಕ್ಕಳು ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೆಷ್ಟು ಮಕ್ಕಳು ಫೇಸ್ ಬುಕ್, ವಾಟ್ಸ ಏಪ್, ಬೇಡದ ಹಾಗೂ ಸುರಕ್ಷಿತವಲ್ಲದ ಜಾಲತಾಣಗಳಿಗಳಿಗೆ ಭೇಟಿ ನೀಡಿ ಮಾನಸಿಕವಾಗಿ ಕುಗ್ಗುತ್ತಿದ್ದಾರೆ ಎಂದು ಗಮನಿಸಿಲಾಗಿದೆಯೇ? ಇನ್ನೀಗ ಶಾಲೆಯೆ ಇಲ್ಲ ಅಂದ್ರೆ ಮಕ್ಕಳು ಮೊಬೈಲ್ ..ಟಿವಿ ಗಳ ನಡುವೆ ಸಿಲುಕಿ ಇನ್ನೇನೆಲ್ಲಾ ಆಗಬಹುದು?ಶಿಕ್ಷಣದಿಂದ ಮಾನವರು ರೂಪುಗೊಳ್ಳಬೇಕೇ ಹೊರತು ರೊಬೋಟ್ ಗಳಲ್ಲ. ಅಂತರ್ಜಾಲದಲ್ಲಿ ಭರಪೂರ ಮಾಹಿತಿ ಲಭ್ಯ. ಆದರೆ ಆನ್ ಲೈನ್ ಶಿಕ್ಷಣ ಶಾಲಾ ಶಿಕ್ಷಣಕ್ಕೆ ಪರ್ಯಾಯವಲ್ಲ.ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿ ಸದಸ್ಯರು(ಸರ್ಕಾರಿ ಮತ್ತು ಖಾಸಗಿ ರಂಗ) ಕೂಡಾ ಪಾಲಕರು,ಅವರಿಗೆ ವೈಯಕ್ತಿಕ ಮತ್ತು ಸಾಮಾಜಿಕ ಹೊಣೆಗಾರಿಕೆ ಇದೆಯೆಂಬುದನ್ನು ಮರೆಯಲಾಗದು.ಕೊರೊನಾವನ್ನು ಹೊಡೆದೋಡಿಸುತ್ತೇವೆ, ಮೂಲೋತ್ಪಾಟನೆ ಮಾಡುತ್ತೇವೆ, ನಾಶ ಮಾಡಿಬಿಡುತ್ತೇವೆ, ಮುಂತಾದ ಘೋಷಣೆಗಳು ರಾಜಕಾರಣಿಗಳ ವೇದಿಕೆಗೆ ಮಾತ್ರ ಸೀಮಿತ. ಕೊರೊನಾ ಭೂಮಿಯ ಮೇಲೆ ವಾಸಿಸಲು ಬಂದಿರುವ ಇನ್ನೊಂದು ವೈರಾಣು. ನೆಗಡಿ, ಫ್ಲೂ ಮುಂತಾದ ವೈರಸ್ ಗುಂಪಿಗೆ ಸೇರಿರುವ ಕೊರೊನಾ, ಮಾಧ್ಯಮಗಳು ಮತ್ತು ರಾಜಕಾರಣಿಗಳು ಬಿಂಬಿಸುತ್ತಿರುವಷ್ಟು ಅಪಾಯಕಾರಿಯಲ್ಲ. ಅದರೊಂದಿಗೆ ಬದುಕಲೇಬೇಕಾದ ಅನಿವಾರ್ಯತೆ ಉದ್ಭವಿಸಿರುವುದು ವಾಸ್ತವ.ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತಿರುವ , ಹುಲಿಯ ಹೆಸರನ್ನು ಕೇಳಿಯೇ ಭಯದಿಂದ ಬೆವರುವವರ ಅರಚಾಟವನ್ನೇ ನಿಜವೆಂದು ನಂಬುವ ಅಗತ್ಯವಿಲ್ಲ. ಆರತಿ ತೆಗೆದುಕೊಂಡರೆ ಉಷ್ಣ, ತೀರ್ಥ ಕುಡಿದರೆ ಶೀತವಾಗುವ ಸೂಕ್ಷ್ಮ ಪ್ರಕೃತಿಯ ಮಕ್ಕಳನ್ನು ಶಾಲೆಗೆ ಕಳುಹಿಸುವ ಆಯ್ಕೆಯನ್ನು ಅವರ ಪಾಲಕರೇ ನಿರ್ಧರಿಸಲಿ.ಕಂಫರ್ಟ ವಲಯದಲ್ಲಿ ಕುಳಿತಿರುವವರ ಅತಾರ್ಕಿಕ ಭಯವನ್ನು ಪುರಸ್ಕರಿಸಿ,ಶಾಲೆಗಳ ಪುನರಾರಂಭವನ್ನು ಮುಂದೂಡಿ ಲಕ್ಷಾಂತರ ಮಕ್ಕಳ ಬೆಳವಣಿಗೆ ಕುಂಠಿತಗೊಳಿಸುವದು ಸರಿಯಲ್ಲ;ಅದು ಅವರಿಗೆ ಮಾಡುವ ದ್ರೋಹ.ಈ ಹಂತದಲ್ಲಿ, ಜುಲೈ ಒಂದನೇ ತಾರೀಖಿನಿಂದ ಶಾಲೆಗಳನ್ನು ಪ್ರಾರಂಭಿಸುವದೇ ಸೂಕ್ತ. ******* ಗಣೇಶ ಭಟ್ ಶಿರಸಿ

ಪ್ರಸ್ತುತ Read Post »

ಇತರೆ

ಲಹರಿ

ಮಾವಿನ ಪುರಾಣ ಮಾವಿನ ಪುರಾಣ ಹಣ್ಣುಗಳಲ್ಲಿ ಮಾವು ಕೊಡುವ ಖುಷಿ, ಯಾವ ಹಣ್ಣು ಕೂಡ ಕೊಡದು ಎಂದರೆ ತಪ್ಪಾಗಲಾರದು.ಹಣ್ಣುಗಳಲ್ಲಿ ಮಾವಿಗೆ ವಿಶೇಷ ಸ್ಥಾನಮಾನ,ರಾಜಮರ್ಯಾದೆ.ಮಾವಿನ ಹಣ್ಣು, ಹಣ್ಣುಗಳ ರಾಜ. ಬೇಸಿಗೆ ಶುರುವಾದೊಡನೆ ಮಾವು ಶುರುವಾಗುತ್ತದೆ.ನಮ್ಮಲ್ಲಿ ಮೊದಲು ಗಿಣಿಮೂತಿ ಮಾವಿನಕಾಯಿ ಜೊತೆ ಈ ಸೀಸನ್ ಶುರುವಾಗುತ್ತದೆ.ಎರೆಡು ಮಳೆ ಆಗುವ ತನಕ ಮಾವು ತಿನ್ನುವುದಿಲ್ಲ.ಒಂದು ದೃಷ್ಟಿ , ಬಂದ ಈ ಗಿಣಿಮೂತಿ ಕಾಯಿಯ ಮೇಲೆ ಇಟ್ಟುಕೊಂಡು ನೋಡದ ಹಾಗೆ ಮಾರುಕಟ್ಟೆಯಲ್ಲಿ ಓಡಾಡುತ್ತೇವೆ.ಮಳೆ ಸ್ವಲ್ಪ ಲೇಟಾದರೆ ಚಡಪಡಿಕೆ ಶುರು.ನಾಲ್ಕೋ,ಐದೋ ಗಿಣಿ ಮಾವಿನಕಾಯಿ ಖರೀದಿಸಿ ಉಪ್ಪು,ಖಾರ ಹಚ್ಚಿಕೊಂಡು ಸವಿಯುವುದೇ ಚೆಂದ.ಮನೆಯಲ್ಲಿ ಹಿರಿಯರ ಕೂಗಾಟ….ಮಳೆ ಬರಲಿ ಎಂದು. ಅಷ್ಟರಲ್ಲೇ ಉಪ್ಪಿನಕಾಯಿ ಹಾಕುವ ಮಾವಿನ ಕಾಯಿ,ಅದರಲ್ಲೂ ಆಮ್ಲೇಟ್ ಕಾಯಿ ಬಂದಿರುತ್ತೆ.ಸ್ವಲ್ಪ ದಿನ ಮನೆಗಳಲ್ಲಿ ಅದರದ್ದೇ ಸಂಭ್ರಮ. ಮಕ್ಕಳು ಕದ್ದುಮುಚ್ಚಿ ಅದನ್ನೇ ತಿಂದು ಬೈಗುಳ ತಿನ್ನುತ್ತಾರೆ.ಉಪ್ಪಿನಕಾಯಿ ಜಾಡಿ ಸೇರಿ ಅಟ್ಟಕ್ಕೆ ಸೇರುತ್ತದೆ.ನಂತರದ್ದೇ ದಿಢೀರ್ ಗಿಣಿಮಾವಿನಕಾಯಿಯ ಉಪ್ಪಿನಕಾಯಿ.ಮಕ್ಕಳಿಗೆ ಈಗ ಸ್ವಾತಂತ್ರ ತಿನ್ನಲು.ಚಿತ್ರಾನ್ನದ ಜೊತೆ ಪರಮಾನ್ನ ಇದು. ಎರೆಡು ಮಳೆ ಆದ ತಕ್ಷಣ ಮಾರುಕಟ್ಟೆಯಲ್ಲಿ ಮಾವಿನ ಸುಗ್ಗಿ. ಎಲ್ಲಕ್ಕಿಂತ ಮೊದಲು ಬಾದಾಮಿ ಹಣ್ಢಿನ ದರ್ಬಾರು.ಮೊದಲಿಗೆ ಕೆ.ಜಿ.ಗೆ 120 ರೂಪಾಯಿಗಿಂತ ಕಮ್ಮಿ ಸಿಗದು.ಕೊಳ್ಳುವ ಜನ ಹಿಂದಕ್ಕೆ ಹೋಗಬಾರದೆಂದು ಇದರ ಜೊತೆಯ ಬುಟ್ಟಿಯಲ್ಲಿ ಸ್ಥಳೀಯ ನಾರಿನ ಹಣ್ಣು ಕೆ.ಜಿ.ಗೆ 50 ರೂಪಾಯಿ. ತಿಂದವರು ಸ್ವಲ್ಪ ಶಾಪ ಹಾಕಿ ಚಪ್ಪರಿಸುತ್ತಾರೆ. ನಂತರದ್ದೇ ಮಾವುಗಳ ರಾಜ ರಸ್ಪುರಿ ಮಾವು ಲಗ್ಗೆ ಇಡುತ್ತದೆ. ತೆಂಡುಲ್ಕರ್ ಬ್ಯಾಟಿಂಗ್ ಗೆ ಬಂದ ಹಾಗೆ ರಸ್ಪುರಿ ಮಾವು ಬರುತ್ತದೆ.ಇದಕ್ಕೆ ನಮ್ಮಲ್ಲಿ ಕಸಿಹಣ್ಣು ಎಂದೇ ಬಿರುದಾಂಕಿತ.ಮೊದಲು ಕೆ.ಜಿ.ಗೆ 70 ರಿಂದ ಶುರು.ನಂತರ ನಂತರ 60.50 ,40. ರಸ್ಫುರಿ ಬಂದ ತಕ್ಷಣ ಬಾದಾಮಿ ಮಾವಿನಹಣ್ಣು ನೆಲ ಕಚ್ಚುತ್ತದೆ.ಬಾದಾಮಿ ಕೂಡ 60 ರೂಪಾಯಿಗೆ ಸಿಗುತ್ತದೆ.ರಾಜ ಬಂದ ಮೇಲೆ ಉಳಿದವರಿಗೆ ಬೆಲೆ ಇಲ್ಲ.ನಾರಿನ ಮಾವಿನಹಣ್ಣು ಓಟ ಕಿತ್ತಿರುತ್ತದೆ. ಈ ಕಸಿ ಮಾವು ರಸ್ಪುರಿ ಬಂದ ಮೇಲೆ ಮನೆಮನೆಗಳಲ್ಲಿ ಹೋಳಿಗೆ ಶುರು.ಹೋಳಿಗೆ ಶೀಕರಣೆ ತಿನ್ನದವನು ರಸಿಕನೇ ಅಲ್ಲ!. ಶೀಕರಣೆಗೆ ರಸ್ಪುರಿ ಮಾವು ಬಿಟ್ಟು ಬೇರಾವುದೇ ಹಣ್ಣಿನಲ್ಲಿ ಮಾಡಿದರೆ ರುಚಿ ಕಮ್ಮಿ. ಬೇರೆ ಬೇರೆ ಭಾಗದಲ್ಲಿ ಈ ತಳಿಗೆ ಬೇರೆ ಬೇರೆ ಹೆಸರುಗಳಿವೆ. ನಂತರ ಬೇರೆ ಬೇರೆ ಮಾವುಗಳ ರುಚಿ ನೋಡುವ ಭಾಗ್ಯ. ಅಡಕೆ ಪುಟ್ಟ ಮಾವಂತೂ ಬಲು ರುಚಿ.ಇದರ ರುಚಿ ಸಕ್ಕರೆ. ಮಕ್ಕಳಿಗೆ ಬಲು ಪ್ರಿಯವಾದ ತಳಿ.ಇದರ ಜೊತೆಗೆ ನಾಟಿ ಮಲಗೋಬ ಹಣ್ಣು, ನಾಟಿ ಹಣ್ಣುಗಳು ಶುರು.ಈ ನಾಟಿ ಹಣ್ಣುಗಳು ಸಿಹಿಹುಳಿ ಮಿಶ್ರಿತ. ನಂತರ ಮಲಗೋಬ ಹಣ್ಣು. ಕತ್ತರಿಸಿಕೊಂಡೇ ತಿನ್ನಬೇಕು ಇದನ್ನು. ಸರಿಯಾದ ಒಂದು ಹಣ್ಣನ್ನು ತಿಂದರೆ ಹೊಟ್ಟೆ ಭರ್ತಿಯಾಗುತ್ತದೆ..ಬಹಳ ಮಜವಾದ ಸಿಹಿ.ಗೊತ್ತಿಲ್ಲದವರಿಗೆ ಕೆಲ ವ್ಯಾಪಾರಿಗಳು ಮಲಗೋಬ ಬದಲು ನಾಟಿ ಮಲಗೋಬವನ್ನೇ ಮಲಗೋಬ ಎಂದು ಮಾರುತ್ತಾರೆ.ಕೊಳ್ಳುವವರು ಹುಷಾರಾಗಿರಬೇಕು. ನಂತರದ್ದು ಜೀರಿಗೆ ಮಾವಿನಹಣ್ಣು.ಸ್ವಲ್ಪ ಮಟ್ಟಿಗೆ ಆಕಾರದಲ್ಲಿ ರಸ್ಪುರಿಯನ್ನು ಹೋಲುತ್ತದೆ.ವಿಶೇಷ ಸುವಾಸನೆಯ ತಳಿ ಇದು.ಕೆಲವರಿಗೆ ಇದು ರುಚಿಸದು.ಇತ್ತೀಚೆಗೆ ಇದರ ತಳಿ ಕಡಿಮೆಯಾಗುತ್ತಿದೆ.ಕೆಲವರು ಇದನ್ನು ಮಾರುವ ಗೋಜಿಗೆ ಹೋಗದೆ ಗಿಡದಲ್ಲೇ ಬಿಡುತ್ತಾರೆ.ಮಾರುಕಟ್ಟೆಯಲ್ಲಿ ಬೆಲೆ ಕಮ್ಮಿ ಇದಕ್ಕೆ. ಇನ್ನೂ ಹಲವು ಹೆಸರಿನ ಸ್ಥಳೀಯ ಹಣ್ಣುಗಳು ಕಡಿಮೆ ಪ್ರಮಾಣದಲ್ಲಿ ಬರುತ್ತವೆ. ಕಸಿ ಮಾವಿನ ಹಣ್ಣಿಗೆ ಸ್ವಲ್ಪ ಮಟ್ಟಿಗೆ ಸ್ಪರ್ದೆ ಒಡ್ಡುವ ತಳಿ ಎಂದರೆ ಸೇಂಧೂರ ಹಣ್ಣು. ಹಸಿರಿದ್ದರೆ ಈ ತಳಿ ಹುಳಿ.ಸಂಪೂರ್ಣ ಹಣ್ಣಾದರೆ ಸ್ವರ್ಗದ ಸಿಹಿ ರುಚಿ.ಇದನ್ನು ಸಿಂಧೂರ ಎಂತಲೂ,ಬೇರೆ ಬೇರೆ ಹೆಸರುಗಳಿವೆ.40 ರೂಪಾಯಿಯಿಂದ 25 ರೂಪಾಯಿಯ ತನಕ ಕೆ.ಜಿ.ಗೆ ಮಾರಲ್ಪಡುತ್ತದೆ. ಕೊನೆಯದಾಗಿ,ಬೇಸಿಗೆ ಮುಗಿಯುವ ಹೊತ್ತಿಗೆ ನೀಲಂ ಶುರುವಾಗುತ್ತದೆ.ಅಷ್ಟರಲ್ಲಾಗಲೇ ಮಳೆ ಶುರುವಾಗಿರುತ್ತದೆ.ಈ ನೀಲಂ ಕೂಡ ಸಿಹಿಯಾದ ತಳಿ.ಮಳೆ ಶುರುವಾದರೆ ಈ ಹಣ್ಣಿನಲ್ಲಿ ಹುಳುಗಳು ಶುರುವಾಗುತ್ತದೆ.ನೋಡಿಕೊಂಡು ತಿನ್ನಬೇಕು.ಸೀಸನ್ ಮುಗಿದರೂ ಮಾರುಕಟ್ಟೆಯಲ್ಲಿ ಸಿಗುವ ಏಕೈಕ ಹಣ್ಣು ಇದು.ಮಹಾರಾಷ್ಟ್ರದಿಂದ ಈ ಹಣ್ಣು ಬರುತ್ತದೆ.ಮಹಾರಾಷ್ಟ್ರದಲ್ಲಿ ಮಳೆ ಶುರುವಾದ ಮೇಲೆ ಮಾವಿನಹಣ್ಣನ್ನು ತಿನ್ನುವುದಿಲ್ಲವಂತೆ.ವ್ಯಾಪಾರಿಗಳು ಹೆಚ್ಚು ರಿಸ್ಕ್ ತೆಗೆದುಕೊಳ್ಳದೆ ನಮ್ಮ ರಾಜ್ಯಕ್ಕೆ ರಫ್ತು ಮಾಡುತ್ತಾರೆ. ಸೀಸನ್ ಇರುವಾಗ ಆಯಾ ಹಣ್ಣುಗಳನ್ನು ಚೆನ್ನಾಗಿ ತಿನ್ನಬೇಕು.ಆರೋಗ್ಯಕ್ಕೆ ಒಳ್ಳೆಯದು. ************ ಕೊಟ್ರೇಶ್ ಅರಸಿಕೆರೆ

ಲಹರಿ Read Post »

ಇತರೆ, ಪರಿಸರ

ಪರಿಸರ

ಮರಗಳ ಕಡಿದರೆ ಖಚಿತ ನಮ್ಮದೇ ಮಾರಣ ಹೋಮ!! ಜಯಶ್ರೀ ಜೆ.ಅಬ್ಬಿಗೇರಿ                                                    ಇದು  ಕೇವಲ ಇಪ್ಪತ್ತು ಮೂವತ್ತು ವರ್ಷಗಳ ಹಿಂದಿನ ಮಾತು ಪ್ರತಿ ಗ್ರಾಮದಲ್ಲೂ ಚಾವಡಿ ಕಟ್ಟೆಗೆ ಹೊಂದಿಕೊಂಡಂತೆ ಮತ್ತು  ಊರ ಹೊರಗಿನ ಗ್ರಾಮ ದೇವತೆಯ ದೇವಸ್ಥಾನದ ಸನಿಹ ಗಿಡ ಮರಗಳ ಸೊಂಪಾದ ನೆರಳು ಇದ್ದೇ ಇರುತ್ತಿತ್ತು.  ದುಡಿದು ದಣಿದು ಬಂದ ರೈತಾಪಿ ವರ್ಗ,  ಹಿರಿಯರು, ಹೈದರು ಮಕ್ಕಳಿಗೆಲ್ಲ ಮನದ ಭಾವನೆಗಳನ್ನು ಹಂಚಿಕೊಳ್ಳುವ ಅಡ್ಡಾದಂತೆ ಕೆಲಸ ನಿರ್ವಹಿಸುತ್ತಿತ್ತು.  ಪ್ರತಿಯೊಬ್ಬರ ಮನೆಯ ಹಿಂದೆ ಹಿತ್ತಲಿನಲ್ಲಿ ತರಹೇವಾರಿ ತರಕಾರಿಯೊಂದಿಗೆ ವಿಧ ವಿಧ ಗಿಡಗಳಿಗೂ ಜಾಗ ಕಡ್ಡಾಯವಾಗಿರುತ್ತಿತ್ತು. ಕೆಲವರಂತೂ ಊರಾಚೆಗೆ ತೋಟದಲ್ಲಿ ಮನೆ ಕಟ್ಟಿಕೊಂಡು ಪ್ರಕೃತಿ ಮಾತೆಯ ಮಡಿಲಲ್ಲಿ ಆನಂದಿಸುವ ಪರಿಯೂ ಕಂಡು ಬರುತ್ತಿತ್ತು. ಇತ್ತೀಚಿಗೆ  ಅಭಿವೃದ್ಧಿಯ ಹೆಸರಿನಲ್ಲಿ ಅದೆಷ್ಟು ನಾವು ಉನ್ಮಾದಿತರಾಗಿದ್ದೇವೆ ಎಂದರೆ ನಮ್ಮ ಕಾಲ ಮೇಲೆ ನಾವು ಕಲ್ಲು ಹಾಕಿಕೊಳ್ಳುತ್ತಿರುವುದು ನಮಗೆ ತಿಳಿಯುತ್ತಿಲ್ಲ. ಮರದ ಬುಡಕ್ಕೆ ಕೊಡಲಿ ಪೆಟ್ಟು ಹಾಕುತ್ತಿರುವುದು ನಮ್ಮ ಬುಡಕ್ಕೇ ಪೆಟ್ಟು ಎನ್ನುವುದು ಬುದ್ಧಿಗೆ ತಿಳಿದಿದ್ದರೂ ಶೋಕಿ ಹಿಂದೆ ಬೆನ್ನು ಹತ್ತಿ ನಮ್ಮ ಜೀವನದ ದಾರಿಯನ್ನೇ ಬದಲಾಯಿಸಿಕೊಂಡು ಮರಗಳ ರಕ್ಷಣೆಯನ್ನು ಕೇವಲ ಉದ್ದುದ್ದ ಭಾಷಣಗಳನ್ನು ಮಾಡಿ ಸಾಲು ಮರದ ತಿಮ್ಮಕ್ಕನಂಥ ಮರಗಳ ಪ್ರೇಮಿ ಹೆಸರು ಹೇಳಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದೆವೆ. ಮರಗಳ ರಕ್ಷಿಸುವ ಯೋಜನೆಗಳೆಲ್ಲ ಕಾಗದದ ಕುದುರೆಗಳಾಗಿವೆ. . ರಸ್ತೆ ಅಗಲೀಕರಣದ ಹೆಸರಿನಲ್ಲಿ ಮರಣ ಹೊಂದಿದ ಮರಗಳ ಸಂಖೈಯಂತೂ ಲೆಕ್ಕಕ್ಕಿಲ್ಲ. ದಿನವೂ ಯಾವುದೋ ಒಂದು ಹೆಸರಿಗೆ ಮರಗಳ ಮಾರಣ ಹೋಮ ನಡೆಯುತ್ತಲೇ ಇದೆ. ನಮ್ಮ ದುರಾಸೆಗೆ ಬಲಿಯಾಗುತ್ತಿರುವ ಮರಗಳು ನಮ್ಮ ಅವಿವೇಕತನಕ್ಕೆ ಮರ ಮರ ಮರಗುತ್ತಿವೆ    ಧರ್ಮೋ ರಕ್ಷತಿ ರಕ್ಷತಃ ಎನ್ನುವ ಮಾತಿನಂತೆ ವೃಕ್ಷೊ ರಕ್ಷತಿ ರಕ್ಷತಃ ಮಾತು ದಿಟವೇ ಎನ್ನುವುದು ಅರಿತಿದ್ದರೂ ನಮ್ಮ ನಡೆ ಮಾತ್ರ ಪೈಶಾಚಿಕದಂತೆನೆಸುತ್ತಿದೆ. ಮರಗಳನ್ನೆಲ್ಲ ನೆಲಕ್ಕುರುಳಿಸಿ ಆಕಾಶ ಮುಟ್ಟುವ ಮಹಲು ಮಾಲ್ಗಳನ್ನು ಕಟ್ಟಲೇಬೇಕೆಂಬ ಪಣ ತೊಟ್ಟವರಂತೆ ಹಳ್ಳಿ ಪಟ್ಟಣ ನಗರಗಳೆಂಬ ಭೇದ  ಭಾವ ತೋರದೆ ತಾತ ಮುತ್ತಾತಂದಿರು ವಷರ್ಾನುಗಟ್ಟಲೇ ನೀರುಣಿಸಿ ಬೆಳೆಸಿದ ಮರಗಳನ್ನು ಕ್ಷಣಾರ್ಧದಲ್ಲಿ ಕೊಡಲಿ ಹಿಡಿದು ನೆಲಸಮಗೊಳಿಸುತ್ತಿದ್ದೇವೆ. ಇದು ಊರುಗಳಲ್ಲಿಯ ಕತೆಯಾದರೆ, ಕಾಡಿನತ್ತ ಧಾವಿಸಿ  ಕಾಂಚಾಣ ಎಣಿಸಲು ಹವಣಿಸಿ, ಕಾಡಿನ ಪ್ರಾಣಿಗಳನ್ನು ನಾಡಿಗೆ ಕರೆತರುತ್ತಿದ್ದೇವೆ.  ಇದೇ ಸ್ಥಿತಿ ಮುಂದುವರೆದರೆ ಭವಿಷ್ಯ ಘನಘೋರ. ನಮ್ಮ ಜೀವಕ್ಕೆ  ಕುತ್ತು ಖಚಿತ.ಎಂಬುದು ಪರಿಸರ ವಾದಿಗಳಿಗೆ  ಪ್ರಕೃತಿ ಪ್ರೀಯರಿಗೆ ಬಿಡದೇ ಕಾಡುತ್ತಿರುವ ಭಯ.  ಸೃಷ್ಟಿ ಹುಟ್ಟಿದ ಆರಂಭದಲ್ಲಿ ಮೂರು ಭಾಗದಷ್ಟು ನೀರು ಒಂದು ಭಾಗದಷ್ಟೇ ಭೂಮಿ ಇತ್ತು. ಭೂಮಿಯ ಮೇಲೆಲ್ಲ ಹಸಿರು ಕಂಗೊಳಿಸುತ್ತಿತ್ತು. ಆಹಾರ ಧಾನ್ಯಗಳ ಉತ್ಪಾದನೆಗಾಗಿ ಜಮೀನಿನ ಅವಶ್ಯಕತೆಯಿದೆ ಎಂದು   ಮಾನವ ಕಾಡನ್ನು ನಾಶ ಪಡಿಸಿದ. ದೈವತ್ವದ ಸ್ಥಾನ ನೀಡಿ ಪೂಜಿಸುತ್ತಿದ್ದ ಮರಗಳನ್ನು ಬರುಬರುತ್ತ ಸಂಚಾರಿ ಹೆಸರಿನಲ್ಲಿ ಸಾವಿರಾರು ಮರಗಳ ತಲೆಗಳನ್ನು ತುಂಡರಿಸಿದ. ಈ ಭೂಮಿಯ ಮೇಲೆ ಬದುಕಲು ನಮ್ಮಷ್ಟೇ ಹಕ್ಕು ಪಡೆದ ನಮ್ಮ ಜೀವನಕ್ಕೆ ಸಹಕಾರಿಯಾಗಿರುವ ಸುಮಾರು 500ಕ್ಕೂ ಹೆಚ್ಚು ಪಕ್ಷಿ ಸಂಕುಲಗಳ ಕ್ರಿಮಿ ಕೀಟಗಳ ನಾಶಕ್ಕೂ  ಮುನ್ನುಡಿ ಬರೆಯತೊಡಗಿದ. ಈ ವಿನಾಶವನ್ನು ಕಂಡ ಪ್ರಾಜ್ಞರು, ಆಯುವರ್ೇದದ ಚಿಕಿತ್ಸೆ ತಜ್ಞರು ಸಸಿಗಳ ನೆಡುವಿಕೆಗೆ ಪ್ರೇರೇಪಿಸಿದರು.. ಬೇವು ಆಲದ ಮರದಂಥ ಅತ್ಯುಪಯುಕ್ತ  ಮರಗಳ ಮಹತ್ವವನ್ನು ಸಾರಿದರು.ಅವುಗಳ ಗಾಳಿಯನ್ನು ಶ್ವಾಸಿಸಿದರೆ ಶ್ವಾಸಕೋಶಗಳಿಗೆ ಅತ್ಯುತ್ತಮವೆಂದು  ಜನಮಾನಸದಲ್ಲಿ ಬಿತ್ತಿದರು. ಒತ್ತಡದ  ಬದುಕಿನ ಫಲಶೃತಿಯಾಗಿ ರಕ್ತದೊತ್ತಡ ಮಧುಮೇಹದಂಥ ಜೀವನ ಪೂತರ್ಿ ಜೀವ ತಿನ್ನುವ ಕಾಯಿಲೆಗಳು ವಯೋ ಭೇದವಿಲ್ಲದೇ ಬೆನ್ನು ಬಿದ್ದಿವೆ. ದಿನವಿಡಿ ಕಂಪ್ಯೂಟರ್ ಇಂಟರ್ಪಪಪಪಪಪನೆಟ್ನಲ್ಲಿ ಮುಳುಗಿದ ಕಣ್ಣುಗಳಿಗೆ ದಿನದ ಕೆಲ ಹೊತ್ತು ಹಸಿರು ಗಿಡಗಳೆಡೆಗೆ  ದೃಷ್ಟಿಯಿಡುವಂತೆ, ಹಸಿರನ ಮಧ್ಯದಲ್ಲಿ ವಾಯುವಿಹಾರ ನಡೆಸುವಂತೆ ವೈದ್ಯರು ಗ್ರೀನ್ ಥೆರಪಿ ಸಲಹೆ ನೀಡುತ್ತಿದ್ದಾರೆ. ಆದರೆ ಹಸಿರು ಗಿಡ ಮರಗಳೆಲ್ಲಿ ಸಿಗುತ್ತಿಲ್ಲ. ಅಲ್ಲಲ್ಲಿ ಕಾಂಕ್ರೀಟ್ ಕಾಡುಗಳು ಸಣ್ನ ಪುಟ್ಟ ಪಾಕರ್್ಗಳು ಮಾತ್ರ ಕಣ್ಣಿಗೆ ಬೀಳುತ್ತವೆ. ಸಮೀಕ್ಷೆಯ ಅಧ್ಯಯನದ ಪ್ರಕಾರ ಹಸಿರು ಒತ್ತಡವನ್ನು ಕಡಿಮೆ ಮಾಡುವುದಲ್ಲದೇ ಇತ್ತೀಚಿಗೆ ಹೆಚ್ಚುತ್ತಿರುವ ಹೃದ್ರೋಗದ ಸಾವುಗಳನ್ನು ಕಡಿಮೆಗೊಳಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ ಎಂಬ ವರದಿ ಹೊರ ಬಿದ್ದಿದೆ. ಮನೆಯ ಮುಂದೆ ಹಿಂದೆ ಹಸಿರಿಗೆಂದೇ ಮೀಸಿಲಿಟ್ಟಿದ್ದ ಜಾಗ ಈಗೀಗ ಫೋರ್ ವ್ಹೀಲರ್ಸ್ ಬೈಕ್ ಪಾಕರ್ಿಂಗ್ನ ಪಾಲಾಗುತ್ತಿದೆ. ಮರಗಳಿಗಾಗಿ ಹುಡುಕಿಕೊಂಡು ಮೈಲುಗಟ್ಟಲೇ ನಡೆಯುವ ಪ್ರಸಂಗ ತಲೆದೋರಿದೆ.  ಮರ ಗಿಡಗಳು ಮನೆ ಮುಂದೆ ಇದ್ದರೆ ಕೋಟಿ ಕೋಟಿ ಅದಾಯ ಅದ್ಹೇಗೆ ಎಂದು ಹುಬ್ಬೇರಿಸುತ್ತೀರೇನು! ಮರವೊಂದು ತನ್ನ ಜೀವಿತಾವಧಿಯಲ್ಲಿ ಹೂವು ಕಾಯಿ ಹಣ್ಣು ಉರುವಲು ರೂಪದಲ್ಲಿ ಆದಾಯ ತರುವುದಲ್ಲದೇ ತಜ್ಞರ ಪ್ರಕಾರ ಶ್ವಾಸ ಸಂಬಂಧಿತ ಕ್ಯಾನ್ಸರ್ನಿಂದ ಬಳಲುವ 10 ಲಕ್ಕಕ್ಕಿಂತಲೂ ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ಜೀವ ದಾನ ನೀಡುತ್ತವೆ. ಅವು ನೀಡುವ  ಪ್ರಾಣ ವಾಯುವಿಗೆ ಬೆಲೆ ಕಟ್ಟಲಾದೀತೆ? ವೈಭವೀಕರಣದ ಜೀವನದ ಭ್ರಾಂತಿಯಲ್ಲಿ  ಸ್ವಚ್ಛ ಗಾಳಿಗೆ ಪರದಾಡುವ ಸ್ಥಿತಿ ನಿಮರ್ಾಣವಾಗಿದೆ ಎಲ್ಲೆಲ್ಲೂ ಕಾಖರ್ಾನೆಯ ವಿಷಾನೀಲ ವಾಹನದ ದಟ್ಟನೆಯ ಧೂಳು ನಮ್ಮ ಶ್ವಾಸದ ಗೂಡಿಗೆ ಕೈ ಹಾಕುತ್ತಿದೆ. ಮಳೆಯ ಆರ್ಭಟವನ್ನು ಸಹಿಸಿಕೊಂಡು ಮಣ್ಣಿನ ಸವಕಳೀಯನ್ನು ತಡೆಯುತ್ತಿದ್ದ ಮರಗಳು ಇದೀಗ  ನಮ್ಮ ಆರ್ಭಟಕ್ಕೆ  ತಾವೇ  ಕೊನೆಯುಸಿರೆಳೆಯುತ್ತಿವೆ. “       ಅತಿಯಾದ ಕಾಡಿನ ನಾಶ ಅತಿವೃಷ್ಟಿ ಅನಾವೃಷ್ಟಿ ಉಂಟಾಗುತ್ತಿದೆ. ಇದರಿಂದ  ತುತ್ತಿನ ಚೀಲ ತುಂಬಿಸುವ ಅನ್ನದಾತನ ತುತ್ತಿಗೆ ತತ್ವಾರ ತಂದೊಡ್ಡಿ ಆತನನ್ನು ಆತನ ಕುಟುಂಬವನ್ನೂ ಬಲಿತೆಗೆದುಕೊಳ್ಳುವ ಹಂತಕ್ಕೆ ಬಂದು ನಿಂತಿದ್ದೇವೆ.   ನಮ್ಮ ಸ್ವಾರ್ಥಕ್ಕೆ ಭೂ ಮಂಡಲವೆಲ್ಲ ಧಗ ಧಗ ಉರಿಯುವ ಕೆಂಡದುಂಡೆಯಂತೆ ಭಾಸವಾಗುತ್ತಿದೆ. ಕಾಡುಗಳ ಕಣ್ಮರೆಯಿಂದ. ಜೀವ ವೈವಿಧ್ಯತೆಯ ಅಮಾಯಕ ಮೂಕ ಪ್ರಾಣಿಗಳ ಮತ್ತು ಕಾಡು ಪ್ರಾಣಿಗಳ ಅವಸಾನವಷ್ಟೇ ಅಲ್ಲ ಪ್ರಕೃತಿಯ ಸಮತೋಲನವನ್ನೇ ಅಲ್ಲಾಡಿಸುತ್ತಿದೆ. ಅದಲ್ಲದೇ ಮಳೆಯ ಪ್ರಮಾಣವೂ ತುಂಬಾ ಕುಸಿಯುತ್ತಿದೆ. ರೆಫ್ರಿಜರೇಟರ್ನಂತಹ ವಸ್ತುಗಳ ಬಳಕೆಯಿಂದ ಭೂಮಿಗೆ ರಕ್ಷಣಾ ಕವಚದಂತಿರುವ ಓಜೋನ್ ಪರದೆಗೂ ಅಲ್ಲಲ್ಲಿ ರಂಧ್ರಗಳು ಬಿದ್ದು ಅದಕ್ಕೂ ಜೀವ ಭಯ ಕಾಡುತ್ತಿದೆ. ಇದರ ಪರಿಣಾಮ ಜಾಗತಿಕ ತಾಪಮಾನ ಏರಿ ಜೀವ ಹಿಂಡುತ್ತಿದೆ ಬಿಸಿಲಿನ ತಾಪಕ್ಕೆ ಮಂಜು ಕರಗಿ ಸಮುದ್ರಕ್ಕೆ ಸೇರುತ್ತಿದೆ. ಪ್ರವಾಹಗಳ ಭೀತಿಯೂ ಹೆಚ್ಚುತ್ತಿದೆ. ಜೀವ ರಕ್ಷಕ ಆಮ್ಲಜನಕ ನೀಡುವ ಗಿಡ ಮರಗಳ ರಕ್ಷಿಸದಿದ್ದರೆ ನಮಗೆ ಉಳಿಗಾಲವಿಲ್ಲ. ಮರಗಳ ಧರೆಗುರುಳಿಸುವುದು ಅತಿ ಸುಲಭ. ಮರಗಳನು ಧರೆಯ ಮೇಲೆ ಬೆಳೆಸುವುದು ಕಷ್ಟದ ಕೆಲಸ. ಅಶ್ವತ್ಥಮೇಕಂ ಪಿಚುಮಂದುಮೇಕಮ್ ನ್ಯಗ್ರೋಧಮೇಕಂ ದಶತಿಂತ್ರಿಣೀಶ್ಚ ಕಪಿತ್ಥಬಿಲ್ವಾಮಲಕಾಮ್ರವೃಕ್ಷಾನ್ ಧಮರ್ಾರ್ಥಮಾರೋಪ್ಯ ಸ ಯಾತಿ ನಾಕಂ ಒಂದು ಅರಳಿ ಮರ ಒಂದು ಬೇವಿನ ಮರ ಒಂದು ಆಲದ ಮರ ಹತ್ತು ಹುಣಸಿ ಮರ ಸಾಕಷ್ಟು ಬೇಲ ಬಿಲ್ವ ನೆಲ್ಲಿ ಮತ್ತು ಮಾವಿನ ಮರಗಳನ್ನು ಧಮರ್ಾರ್ಥಕ್ಕಾಗಿ ಬೆಳೆಸಿ ಒಬ್ಬನು ಸ್ವರ್ಗಕ್ಕೆ ಹೋಗುತ್ತಾನೆ ಎಂದು ಹೇಳುವ ಸಂಸ್ಕೃತ ಶ್ಲೋಕ ಧರೆಯನ್ನೇ ಸ್ವರ್ಗವನ್ನಾಗಿಸುವ ಸಂದೇಶವನ್ನು ಸಾರುತ್ತದೆ. ಮರಗಳು ಆಮ್ಲಜನಕ ತಯಾರಿಸುವ ಕಾಖರ್ಾನೆಗಳು ಒಂದು ಬಲಿತ ಮರವು ಪ್ರತಿ ವರ್ಷ 25-30 ಕಿಲೊ ಇಂಗಾಲದ ಡೈ ಆಕ್ಸೈಡ್ ತೆಗೆದು ಹಾಕಬಲ್ಲದು. ಜೀವ ರಕ್ಷಕ ಮರಗಳನ್ನು ಅಭಿವೃದ್ಧಿ ಹೆಸರಿನಲ್ಲಿ  ಕಡಿದರೆ ಖಚಿತ ನಮ್ಮದೇ ಮಾರಣ ಹೋಮ.  ಇನ್ನಾದರೂ ಎಚ್ಚೆತ್ತುಕೊಂಡು ಗಿಡ ಮರಗಳನ್ನು ಬೆಳೆಸಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವತ್ತ ಹೊಸ ಹೆಜ್ಜೆ ಇಡೋಣ.                                                   *********

ಪರಿಸರ Read Post »

ಇತರೆ, ಪರಿಸರ

ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ.

ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ? ನಂದಿನಿ ಹೆದ್ದುರ್ಗ ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ. ‘ರೀಫಿಲ್ ಮಾತ್ರ ಸಾಕು’ ಎಂದೆ.. ‘ಅಯ್ಯೋ ರೀಫಿಲ್ಗೂ ,ಫುಲ್ ಪೆನ್ನಿಗೂ ಎರಡೇ ರೂಪಾಯಿ ವ್ಯತ್ಯಾಸ ಮೇಡಮ್ . ಇದನ್ನೇ ತಗೋಳಿ ‘ ಅಂದ ಅಂಗಡಿಯ ಹುಡುಗ. ತಕ್ಕಮಟ್ಟಿಗೆ ವಿದ್ಯಾವಂತನಂತೇ ಕಾಣುತ್ತಿದ್ದ.. ಎರಡು ಮೂರು ರೂಪಾಯಿಗಳ ವ್ಯತ್ಯಾಸಕ್ಕಲ್ಲಣ್ಣ ರಿಫಿಲ್ ಕೇಳ್ತಿರುವುದು.. ನಾನು ಉತ್ಪತ್ತಿ ಮಾಡುವ ಕಸದ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಎಂದೆ… ವಿಚಿತ್ರ ಪ್ರಾಣಿಯಂತೆ ಸುತ್ತಲಿನವರು ನೋಡಿದರೆ ಇನ್ನೂ ಕೆಲವರು ನೀವು ಏನ್ ಮಾಡ್ತೀರಾ ಮೇಡಮ್…?ಎಂದರು. ಗೃಹಿಣಿ ಎಂದೆ.. ಅಬ್ಬಾ ಗೃಹಿಣಿ ಯಾಗಿ ಇಷ್ಟು ಸೂಕ್ಷ್ಮ ವಿಷಯಗಳಲ್ಲಿ ಗಮನವಿದೆಯಾ ಎಂದರು… ಗೃಹಿಣಿ ಇಂತಹ ವಿಷಯಗಳಲ್ಲಿ ಹೆಚ್ಚು ಜಾಗೃತಿ ವಹಿಸಬಾರದೇ ಅಥವಾ ಆಕೆ ಬೇಸಿಕಲಿ ಅಸೂಕ್ಷ್ಮಳೇ? ಅವರ ಪ್ರಶ್ನೆಗಳು ವಿಚಿತ್ರವೆನಿಸಿತು. “ಇಲ್ಲಾಆಆಆ….ಇನ್ ಮುಂದೆ ಹೀಗೇ ತರಕಾರಿ ತಂದರೆ ನಾನು ಮನೆಯೊಳಗೇ ತಗೊಂಡು ಹೋಗಲ್ಲ…” ಅವತ್ತು ಮನೆಯಲ್ಲಿ ಜೋರು ಜಗಳ. ಅವಳ ಗಂಡ ದಿನಾ ಎಫ್ಬಿಯಲ್ಲಿ ಬರುವ ವಿಡಿಯೊ ಗಳನ್ನು ನೋಡಿ ‘ನೋಡ್ ಸುಮಿ ಇಲ್ಲಿ.. ಮೀನಿನ ಹೊಟ್ಟೆಯಲ್ಲು ,ಹಸುವಿನ ಹೊಟ್ಟೆಯಲ್ಲೂ ಬರೀ ಪ್ಲಾಸ್ಟಿಕ್ಕು…ಜನರಿಗೆ ಬುದ್ದಿನೇ ಬರಲ್ಲಾ ಅಲ್ವಾ…’ ಅಂತಿರ್ತಾನೆ. ಆದರೆ ಅವನು ಮಾತ್ರ ಹೊರಗೆ ಹೋಗುವಾಗ ಕೈಚೀಲ ಕೊಟ್ರೆ ಅಲ್ಲೇ ಇಟ್ಟು ಹೋಗ್ತಾನೆ.. ನಾನೊಬ್ಬ ಪ್ಲಾಸ್ಟಿಕ್ ಬಳಸುವುದರಿಂದ ಮಹಾ ಬದಲಾವಣೆ ಏನೂ ಆಗಲ್ಲ…ಅನ್ನುವುದು ಅವನ ವಾದ. ಬಹಳಷ್ಟು ಬಾರಿ ತಿಳಿಹೇಳಿ,ವಾದಿಸಿ ಸೋತ ಸುಮತಿ ಅವತ್ತು ಪ್ಲಾಸ್ಟಿಕ್ ನಲ್ಲಿ ತಂದ ತರಕಾರಿಗಳನ್ನು ಒಳಗೆ ತೆಗೆದುಕೊಂಡೇ ಹೋಗಲಾರೆ ಅಂತ ಮುಷ್ಕರ ಮಾಡಿದಳು.. ಆ ಮೇಲಿಂದ ಸ್ವಲ್ಪ ಸ್ವಲ್ಪ ಬದಲಾವಣೆ ಕಾಣುತ್ತಿದೆ… ಚಪ್ಪಲಿ ಕೊಂಡ ಮೇಲೆ ಅದಕ್ಕಾಗಿ ಕೊಡುವ‌ ರಟ್ಟಿನ ಪೆಟ್ಟಿಗಳನ್ನು ಬೇಡ ಎಂದರೆ ಅಂಗಡಿಯವ‌ನಿಗೆ ಅಚ್ಚರಿ.! ಸೀರೆ ಕೊಂಡಮೇಲೆ ಪಾಕೀಟು ಹಿಂದಿರುಗಿಸಿದರೆ ಹೊಸತರ ಹಾಗೆ ಅನಿಸುವುದಿಲ್ವಂತೆ. ಅಗತ್ಯವಿದೆಯೇ ಅದೆಲ್ಲಾ? ತಿನ್ನುವ ಪಿಜ್ಜಾದ ಮೂರುಪಟ್ಟು ಪ್ಯಾಕಿಂಗ್. ಸಣ್ಣದೊಂದು ಬಿಸ್ಕತ್ತು ಪ್ಯಾಕಿಗೆ ಮತ್ತೇನೋ ಪ್ಲಾಸ್ಟಿಕ್ ಆಟಿಕೆ ಫ್ರಿ.. ಆ ಫ್ರಿ ಸಿಗುವ ವಸ್ತವಿಗಾಗಿಯೇ ಮಗುವಿಗೆ ಬಿಸ್ಕತ್ತು ಪ್ಯಾಕಿನ ಮೋಹ.. ಒಂದು ಕೊಂಡರೆ ಮತ್ತೊಂದೇನೋ ಉಚಿತ… ಆ ಉಚಿತದ್ದು ಮೂರು ದಿನಕ್ಕೆ ಖಂಡಿತವಾಗಿ ಕಸ.. ಚೈನಾ ಮೇಡ್ ಬಹಳ ಚೀಪು. ಇದೊಂದು ಇರಲಿ ಅಂತ ಅನಿಸುವುದೂ ಸಹಜ. ಮೂರೇ ದಿನಕ್ಕೆ ಕೆಟ್ಟು ಹೋಗುವ ಅವು ರಿಪೇರಿಗೆ ಒದಗಲಾರವು. ಮತ್ತೆ ಕಸ.. ಮನೆಯಿಂದ ಹೊರಗೆ ಕಾಲಿಟ್ಟರೆ ಕಸ.. ಹೊರಗಿನಿಂದ ಒಳಗೆ ಬಂದರೆ ಮತ್ತೊಂದಿಷ್ಟು ಕಸ.. ಕಸ ಕಸ ಕಸ.. ಬದುಕೇ ಕಸಮಯವಾದ ಕಾಲ ಇದು. …. ಈ‌ ಮೊದಲೆಲ್ಲಾ ಮಹಾನಗರಗಳಿಗೆ ಮಾತ್ರ ಕಸ ವಿಲೇವಾರಿ ಸಮಸ್ಯೆ ಎನಿಸುತಿತ್ತು.. ಹಳ್ಳಿಯಲ್ಲಾದರೆ ಪ್ರತಿ ಮನೆಯಲ್ಲೂ ಒಂದು ತಿಪ್ಪೆ ಇರುತಿತ್ತು..ಮನೆಯ ಎಲ್ಲಾ ಕಸವೂ ಅಲ್ಲಿ ಕೊಳೆತು ಅದರ ಮೇಲೆ ಎರಡು ಕುಂಬಳ ಬೀಜ ಎಸೆದರೆ ವರ್ಷಕ್ಕಾಗುವಷ್ಟು ಕುಂಬಳ ಸಿಕ್ತಿತ್ತು.. ಆದರೆ.. ಪ್ಲಾಸ್ಟಿಕ್ ಹಳ್ಳಿಯನ್ನೂ ಬಿಡುತಿಲ್ಲ ಈಗ. ಪ್ರತಿ ಪ್ರಜ್ಞಾವಂತ ಹಳ್ಳಿಗ ನಿತ್ಯ ದಿನಚರಿಯೊಂದಿಗೆ ಕಡ್ಡಾಯ ಎನುವಂತೆ ಒದಗುವ ಪ್ಲಾಸ್ಟಿಕ್ ಅನ್ನು ಏನು ಮಾಡಬಹುದು ಅಂತ ತೋಚದೆ ಒದ್ದಾಡುತ್ತಾನೆ.. ನಗರದಂತೆ ಕಸ ಒಯ್ಯುವ ಗಾಡಿ ಇಲ್ಲಿಗೆ ಬರುವುದಿಲ್ಲ. ನೀರೊಲೆ ಕಾಣಿಸುವುದು ಸುಲಭದ ಮಾರ್ಗವಾದರೂ ವಾಯುಮಾಲಿನ್ಯ ನಿಶ್ಚಿತ. ಮಣ್ಣು ಅದನ್ನು ಜೀರ್ಣಿಸಿಕೊಳ್ಳಲಾರದು.. ಹರಿವ ನೀರಿಗೆ ಬಿಡವುದು ಥರವಲ್ಲ. ಮತ್ತೇನು ಮಾಡಬಹುದು..? … ಪ್ರತಿ ಮನುಷ್ಯನು ಜಾಗೃತನಾಗಲೇಬೇಕಾದ  ಪರ್ವಕಾಲ ಇದು ಎನಿಸುತ್ತದೆ. ಆದಷ್ಟೂ ಮಟ್ಟಿಗೆ ತಾನು ವೈಯಕ್ತಿಕವಾಗಿ ಸೃಷ್ಟಿಸುವ ಕಸದ ಪ್ರಮಾಣವನ್ನು ಕಡಿಮೆ ಮಾಡುವ ಕಡೆಗೆ ಯೋಚಿಸಲೇಬೇಕಾಗಿದೆ. ಒಂದು ಎಕ್ಸಟ್ರಾ ಪೇಪರ್ ನ್ಯಾಪ್ಕಿನ್ ತೆಗೆಯುವ ಮೊದಲು,ಅನಗತ್ಯ ವಸ್ತವೊಂದನ್ನು ಕೊಳ್ಳುವ ಮೊದಲು,ಒಂದು ತುತ್ತು ಆಹಾರವನ್ನು ವ್ಯರ್ಥಮಾಡುವ ಮುನ್ನ ಎರಡನೇ ಬಾರಿ ಯೋಚಿಸುವವ ಮಾತ್ರ ನಿಜಕ್ಕೂ ಇಂದಿನ ನಾಗರಿಕ ವ್ಯಕ್ತಿ ಎನ್ನಬಹುದು.. “ಮಾಲಿನ್ಯ ನಿಯಂತ್ರಿಸಿ ,ಪರಿಸರ ಉಳಿಸಿ” ಈ ಘೋಷ ವಾಕ್ಯಕ್ಕೆ ಬದ್ದರಾಗಲೇಬೇಕಾದ ಕಾಲ ಸನ್ನಿಹಿತ ವಾಗಿದೆ. … ಜಗತ್ತೇ ಒಂದು ಕುಟುಂಬ ಎನ್ನುವ ಮಾತು ಈಗಿನ ದಿನಮಾನಗಳಲ್ಲಿ ಹೆಚ್ಚು ಪ್ರಸ್ತುತ ಎನಿಸುವುದಿಲ್ಲವೇ.? ದೂರದ ವೂಹಾನ್ ನಲ್ಲಿ‌ ಬಂದ ‌ಕೊರೊನಾ ತಿಂಗಳೊಪ್ಪತ್ತಿಗೆ ಜಗತ್ತನ್ನೇ ವ್ಯಾಪಿಸಿದ ಬಗೆ .. ಭೂಮಿಯ ಆ ಬದಿಯಲ್ಲಿ ಬಂದ ರಾಕ್ಷಸ ಸ್ವರೂಪಿ ಮಿಡತೆಗಳು ಎರಡೇ ವಾರದಲ್ಲಿ ನಮ್ಮ ದೇಶಕ್ಕೂ ಬಂದ ವೇಗ. ಲೋಕವನ್ನೇ ಆಹುತಿ ತೆಗೆದುಕೊಳ್ಳುವಂಥ  ಮನುಷ್ಯ ಮನುಷ್ಯನ ನಡುವಿನ ವರ್ಣ ವರ್ಗ ಸಂಬಂಧಿ ಕದನಗಳು ದಿನ‌ ಮುಗಿಯುವುದರೊಳಗಾಗಿ ಎಲ್ಲೆಡೆ ಸುದ್ದಿಯಾಗುವ ಗದ್ದಲೆಬ್ಬಿಸುವ ಹುನ್ನಾರ.. ಈ ಎಲ್ಲವೂ “ಸದ್ಯ..ನಾನು ಸುಖವಾಗಿದ್ದೇನೆ ಸಾಕು” ಎನ್ನುವ ಮನಸ್ಥಿತಿಗೆ ಅಂಕಿತ ಹಾಡಲಿಕ್ಕಾಗಿಯೇ ಬಂದವು ಎಂಬುದು ತಿಳಿಯುತ್ತಿದೆ.. ನೀನು ಕ್ಷೇಮವಿದ್ದರೆ ಮಾತ್ರ ನಾನೂ ಕ್ಷೇಮ ಎನ್ನುವ ಹೊಂದಾವಳಿ ನಿರ್ಮಾಣವಾಗಲೇಬೇಕಿದೆ.. ಜೂನ್ ಐದು..ಅಂದರೆ ಇಂದು ವಿಶ್ವ ಪರಿಸರ ದಿನ.. ನಾಲ್ಕು ಮಾತಾಡಿ, ನಾಲ್ಕಕ್ಷರ ಬರೆದು ನಮ್ಮ ಕರ್ತವ್ಯ ಮುಗಿಸುವ ಯೋಜನೆಗೆ ಇತಿಶ್ರಿ ಹಾಡಿ ಸಣ್ಣಪುಟ್ಟ ಬದಲಾವಣೆಗಳನ್ನು ದಿನಚರಿಗೆ ಅಳವಡಿಸಿಕೊಳ್ಳಬಹುದೇ..? ನೂರು ಸಸಿಯನ್ನು ಕ್ಯಾಮೆರಾಗಾಗಿ ನೆಟ್ಟು ಒಂದೂ ಬದುಕದ ಒಣ ಮಹೋತ್ಸವದ ಆಚರಣೆಗೆ ಬದಲಾಗಿ ತನ್ನ ಇತಿಮಿತಿಯಲ್ಲಿ ಐದಾದರೂ ಗಿಡಗಳನ್ನು ನೆಟ್ಟು ಪೋಷಿಸುವುದಕ್ಕೆ ಈ ದಿನವನ್ನು ನಿಮಿತ್ತ ಮಾಡಿಕೊಳ್ಳಬಹುದೇ..? ಒಮ್ಮೆ ಹಿಂದಿರುಗಿ ನೋಡಿದರೆ ಹಿರಿಯರು ನಿರ್ಮಿಸಿಕೊಂಡ ದೇವರಕಾಡು,ಬನದ ಮರ,ಚೌಡಿ ಪೂಜೆ, ಬಯಲು ಬಸವ,ಕಾಡು ಬಸವ,ಬ್ರಹ್ಮ ದೇವರು, ಗುಂಡುತೋಪು ಇವೆಲ್ಲವೂ ಅದೆಷ್ಟು ಸಹಜವಾಗಿ ಈ ನೆಲ ಜಲ ವೃಕ್ಷಗಳನ್ನು ರಕ್ಷಿಸುತ್ತಿದ್ದವು. ಇವೆಲ್ಲವೂ ‘ನಂಬಿಕೆಯೆಂದರೆ..,ಇಲ್ಲಾ ಇಲ್ಲ ಮೂಢನಂಬಿಕೆ’  ಎನ್ನುವ ನಾಗರಿಕರ ಲೋಕ ಈಗ ನಮ್ಮದು. … ಮನುಷ್ಯನ ಮಿತಿ ಮೀರಿದ ವೇಗಕ್ಕೆ ಇತಿ ಹೇಳಲಿಕ್ಕಾಗಿಯೇ ಜಗತ್ತಿಗೆ ಕೊರೊನಾ ಬಂದಿದೆ ಎನುವುದನ್ನು ಒಂದಿಲ್ಲೊಂದು ಬಾರಿ ನಾವೆಲ್ಲರೂ ಹೇಳಿರುವ ಈ ಕಾಲದಲ್ಲಿ  ನಿತ್ಯವೂ ಬೇಸರ ಹುಟ್ಟಿಸುವಷ್ಟು ಬಾರಿ ಜಗತ್ತಿನ,ದೇಶದ ,ರಾಜ್ಯದ ,ಜಿಲ್ಲೆಯ, ಸ್ಥಳೀಯ ಸೋಂಕಿನ ಅಂಕಿಅಂಶಗಳನ್ನು ಮಾದ್ಯಮಗಳು  ಹೇಳುತ್ತಲೇ ಇರುತ್ತವೆ.. ಪ್ರತಿ ಬಾರಿ ಕೇಳಿದಾಗಲೂ ಮಾಸ್ಕಿನ ನೆನಪೂ,ಕೈತೊಳೆಯುವ ಮನಸ್ಸೂ,ಕ್ವಾರಂಟೈನಿನ ಭಯವೂ ಹೃದಯಮೆದುಳಿರುವ ಈ‌ ಮನುಷ್ಯ ಮಾತ್ರನಿಗೆ ಹೊಕ್ಕಿಳಿಯುವುದಂತೂ ಸತ್ಯ. ಹೀಗೊಂದು ಬಗೆ ಮನುಷ್ಯನನ್ನು ಎಚ್ಚರಿಸುತ್ತದೆ ಎಂದರೆ ಪ್ರತೀ ಹನ್ನೆರಡು ತಾಸಿಗೊಮ್ಮೆ ನಮ್ಮ ದೇಶದ,ನಮ್ಮ ರಾಜ್ಯದ,ಜಿಲ್ಲೆಯ, ತಾನು ವಾಸಿಸುವ ಏರಿಯಾದ ಮಾಲಿನ್ಯದ ಕುರಿತಾದ ಅಂಕಿಅಂಶಗಳು ಪ್ರತಿಯೊಬ್ಬರ ಮೊಬೈಲಿಗೆ ಬಂದು ಬೀಪಿಸಿದರೆ ನಮ್ಮೊಳಗೆ ಒಂದು ಎಚ್ಚರಿಕೆಯ ಗಂಟೆ ಮೊಳಗಬಹುದೇ…? ಪ್ರತೀ ರಸ್ತೆಯ ತಿರುವಿನಲ್ಲಿ, ಊರಿನ ಆರಂಭದಲ್ಲಿ ವಾಯುಮಾಲಿನ್ಯ ,ಶಬ್ದ ಮಾಲಿನ್ಯ, ನೆಲಮಾಲಿನ್ಯ ಇಷ್ಟಿಷ್ಟಿದೆ ಎನ್ನುವ ಮಾಹಿತಿ ದೊರಕಿದರೆ ನಮ್ಮ ಕೊಳ್ಳುಬಾಕತನಕ್ಕೆ ,ಕಸೋತ್ಪಾದನೆಗೆ ಒಂದು ಶೇಕಡವಾದರೂ ತಡೆ ಬೀಳಬಹುದಲ್ಲವೇ..? ಒಂದು ನದಿ ಅಥವಾ ಹೊಳೆಯ  ನೀರಿನ ಮಟ್ಟದಂತೆಯೇ ಅದರ ಜಲದ ಮಾಲಿನ್ಯ ‌ಮಟ್ಟವೂ ಪ್ರತಿನಿತ್ಯ ಮಾಹಿತಿ ಬೋರ್ಡಿನಲ್ಲಿ ದಾಖಲಾದರೆ  ನಮ್ಮ ಅಸೂಕ್ಷ್ಮತೆ ತುಸುವಾದರೂ ಬದಲಾಗಬಹುದೇ..? … ಪರಿಸರದಷ್ಟು ನಿಗೂಢ, ನಿಷ್ಠುರ  ವಿಷಯ ಬೇರೊಂದಿಲ್ಲ. ತಾನು ಗೆದ್ದೆ ಎಂದುಕೊಂಡಾಗಲೆಲ್ಲಾ ಅದು ಮನುಷ್ಯ ಜೀವಿಗೆ ನಾನಿದ್ದೇನೆ ಎನುವಂತೆ ಪಾಠ ಕಲಿಸುತ್ತಲೇ ಬಂದಿದೆ.. ಬದುಕು ಮತ್ತು ಭೂಮಿ ಒಂದನ್ನೊಂದು ಗಾಢವಾಗಿ ಅವಲಂಬಿಸಿರುವುದು ತಿಳಿದ ನಂತರವೂ ನಮ್ಮ ಹಮ್ಮು ಕಮ್ಮಿಯಾಗುವುದಿಲ್ಲ.. ಗುಬ್ಬಚ್ಚಿಯನ್ನು ನಾಶ ಪಡಿಸಿದರೆ ತಾನು ವರ್ಷಕ್ಕೆ ಬೆಳೆಯುವ ಧಾನ್ಯ  ಮೂರು ವರ್ಷ ಉಣ್ಣಲು ಸಾಲುತ್ತದೆ ಎಂದುಕೊಂಡ ತಲೆತಿರುಕ ಚೀನಾ ಅವುಗಳನ್ನು ಕೊಂದು ಅನುಭವಿಸಿದ ಬೇಗೆ ನಮ್ಮ ಕಣ್ಣೆದುರಿಗೇ ಇದ್ದರೂ ತಪ್ಪಿನಿಂದ ನಾವು ಕಲಿಯುವುದಿಲ್ಲ… ಗರ್ಭ ತುಂಬಿಕೊಂಡ ಆನೆಗೆ ಹಣ್ಣಿನ ರೂಪದಲ್ಲಿ ಸಾವು ತೋರುವ ಮಹಾ ಮನುಷ್ಯರು ನಾವು… ಅಗಾಧ‌ನೋವು ಅನುಭವಿಸುತ್ತಲೇ ಸುಮ್ಮನೇ ಘೀಳಿಟ್ಟು ,ಹರಿವ ನದಿಗಿಳಿದು ಬೇಗೆ ಶಮನಗೊಳಿಸಿಕೊಳ್ಳಲೆತ್ನಿಸಿ ಸಾವು ನೋಡಿದ ಯಃಕಶ್ಚಿತ್ ಆನೆ ಅದು.. ಮನುಷ್ಯ ಹೇಗೆ ಮತ್ತು ಏಕೆ ಇಷ್ಟೊಂದು ಸ್ವಾರ್ಥಿಯಾದ.!! ಹಣವೇ..?ಹಸಿವೇ…?ಗೆಲ್ಲುವ ಬಗೆಯೇ? ಸಾಮಾನ್ಯ ತಿಳುವಳಿಕೆಗೂ ನಿಲುಕುವ ಸಂಗತಿ ಎಂದರೆ ಎಕಾಲಜಿ ಮತ್ತು ಎಕಾನಮಿ ಸದಾ ಒಂದಕ್ಕೊಂದು ಪೂರಕವಾಗಿಯೇ ಕೆಲಸ ಮಾಡುತ್ತವೆ. ಹಾವು ಇಲಿಯನ್ನು,ಇಲಿ ಕಪ್ಪೆಯನ್ನು ಕಪ್ಪೆ ಕೀಟವನ್ನು ,ಕೀಟ ಹೂವು ಹೀಚುಗಳನ್ನು ತಿನ್ನುವುದು ಕೊರತೆ ಅಲ್ಲ..ಅದೇ ಕ್ರಮ ಬದ್ದತೆ ‌. its not by default.. It is by design.. .. ಮಣ್ಣನ್ನು ಆರೋಗ್ಯವಾಗಿಡುವ,ಪರಿಸರವನ್ನು ಸಹಜವಾಗಿರಿಸುವ , ಕಸದ ಉತ್ಪತ್ತಿ ಕಡಿಮೆಯಾಗಿಸುವ ಕುರಿತು ನಮ್ಮ ಕೊಡುಗೆ ಏನು.? ಬಹುಶಃ ಇಂದಲ್ಲದಿದ್ದರೆ ಇನ್ನೆಂದೂ‌ ನಮಗೆ ಈ ನಿಟ್ಟಿನಲ್ಲಿ ಕಾರ್ಯತತ್ಪರರಾಗುವ ಅವಕಾಶ ಸಿಗದೇ ಹೋಗಬಹುದು… ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ.? _ ನಂದಿನಿ ಹೆದ್ದುರ್ಗ.

ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ. Read Post »

ಇತರೆ, ಪರಿಸರ

ಪ್ರಕೃತಿ ರಕ್ಷತಿ ರಕ್ಷಿತಾಃ

ಪ್ರಕೃತಿ ರಕ್ಷತಿ ರಕ್ಷಿತಾಃ ಜ್ಯೋತಿ ನಾಯ್ಕ ಜೂನ್ ಐದು ಅಂದಾಕ್ಷಣ ವಿಶ್ವ ಪರಿಸರ ದಿನಾಚರಣೆ ಸ್ಮರಿಸೋದು ಸಾಮಾನ್ಯ ಏಕೆಂದರೆ ಪರಿಸರವು ಹಲವು ಜೈವಿಕ & ಭೌತಿಕ ಘಟಕಗಳ ಆಗರ, ಇವುಗಳ ನಡುವೆಯೇ ಬೇಕು-ಬೇಡಗಳ ಸಂಘರ್ಷ. ೧೯೭೨-೧೯೭೩ರಿಂದ ವಿಶ್ವ ಸಂಸ್ಥೆಯ ನೇತೃತ್ವದಲ್ಲಿ ಪರಿಸರದ ಜಾಗೃತಿಗೊಳಿಸುತ್ತಲೇ ಬಂದಿದ್ದೇವೆ ಆದರೂ ಮತ್ತೆ ಮತ್ತೇ ನಮ್ಮ ಪರಿಸರದ ಬಗ್ಗೆ ತಿಳಿಯುವ ಹಾಗೂ ಅದರ ಮಹತ್ವ ಅರಿಯುವ ಜೊತೆಗೆ ನಮ್ಮಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಅವಲೋಕಿಸಿ ಸಂರಕ್ಷಿಸಲು ಪಣತೊಡುವ ಮಹತ್ವದ ದಿನ. ಈ ಪರಿಸರ ಅನ್ನೋ ಮೌನ ದೃಶ್ಯ ದೇವತೆ ಆರಾಧನೆ ಪ್ರಾಚೀನ ಕಾಲದಿಂದಲೂ ಸಾಗಿ ಬಂದಿದೆಯಾದರು ಇಂದಿನ ಪ್ರಕೃತಿ ಆರಾಧಕರೆ ಭಿನ್ನ. ಮಾತನಾಡುವಂತಹ ವಿವೇಚನೆ ಮನುಷ್ಯನಂತೆ ಪ್ರಕೃತಿಗೂ ಇದ್ದಿದ್ದರೆ ಬಹುಶಃ ಸೇಟೆದು ನಿಂತು ಪ್ರತಿರೋಧವೊಡ್ಡಿ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿತ್ತೇನೋ.! ದುಡಿಮೆಯ ಅರ್ಧದಷ್ಟು ಆರೋಗ್ಯಕ್ಕೆ, ಆಸ್ಪತ್ರೆಗೆ ಹಾಕುವ ನಮಗೆ ಪ್ಲಾಸ್ಟಿಕ್ನ ಹಸಿರು ವರ್ಣದ ನೀರು ಸೇವಿಸದ, ಆಮ್ಲಜನಕ ಬಿಡುಗಡೆ ಮಾಡದ, ಇತರೆ ಗೊಬ್ಬರ ಬಯಸದೆ ಕಣ್ಣಿಗೆ, ಮನಸ್ಸಿಗೆ ಮುದ ನೀಡುವ ಕಾರ್ಖಾನೆಗಳ ಮೂಲಕ ಹೆರಿಗೆಯಾದ ಸಾವಿಲ್ಲದ ವಸ್ತುಗಳ ಮೇಲೆಯೇ ಹೆಚ್ಜಿನ ಮೋಹವೆಂದರೆ ಅತಿಶಯೋಕ್ತಿಯೇನಲ್ಲ. ನಗರವಾಸಿಗಳ & ಹಳ್ಳಿಗರ ನಿತ್ಯ ಬದುಕು ಪ್ರಕೃತಿಯ ಮಧ್ಯೆಯೇ. ಮಾನವನು ಪ್ರಕೃತಿಯ ಶಿಶುವಾಗಿದ್ದು ಪ್ರಕೃತಿಯ ಉಳಿವಿಲ್ಲದೆ ಮನುಷ್ಯ & ಪ್ರಾಣಿ ಸಂಕುಲದ ಆಸ್ತಿತ್ವಕ್ಕೆ ಧಕ್ಕೆಯಾಗುವುದರಲ್ಲಿ ನಿಸ್ಸಂದೇಹ. ಪ್ರಸ್ತುತ ಆಧುನೀಕರಣದ ಭರಾಟೆಯಲ್ಲಿ ಕೈಗಾರಿಕರಣ, ನಗರೀಕರಣ, ವಿಜ್ಞಾನ & ತಂತ್ರಜ್ಞಾದ ಅಭಿವೃದ್ಧಿ ನೆಪದಲ್ಲಿ ಪ್ರಕೃತಿಯ ಸಂರಕ್ಷಣೆಯನ್ನು ಮರೆತು ಆಧುನಿಕ ಜಗತ್ತು ಜಾಗತಿಕ ತಾಪಮಾನ, ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ದಮಾಲಿನ್ಯ, ಮಣ್ಣಿನ ಮಾಲಿನ್ಯ, ಕಾಡಿನ ನಾಶಕ್ಕೆ ಕಾರಣರಾಗುತ್ತಲೇ ಬಂದಿದ್ದು, ಹೃದ್ರೋಗ, ಉಸಿರಾಟ, ಕ್ಷಯ, ಕಾಲರಾ ಮುಂತಾದ ಸಾಂಕ್ರಾಮಿಕ ರೋಗಗಳು ಜನ್ಮ ತಾಳಿ ಮಾನವ ಸಂತತಿಗೆ ಕಾಡುತ್ತಲೇ ಬಂದಿವೆ ಎಂಬುವುದನ್ನು ಮರೆಯಬಾರದು. ಬಹು ಮಹಡಿಯ ಕಟ್ಟಡಗಳು ತಲೆ ಎತ್ತುತ್ತಲೇ ಇವೆ, ಆದರೆ ಪ್ರಕೃತಿಯ ಸೊಬಗು ಮಾತ್ರ ಕಾಸು ಖರ್ಚು ಮಾಡಿ ಸವಿಯುವ ದುಃಸ್ಥಿತಿಗೆ ತಲುಪಿದ್ದೇವೆ. ಇವಕ್ಕೆಲ್ಲ ಕಾರಣ ನಮ್ಮೊಳಗೆ ಅಂತರ್ಗತವಾಗಿ ಅಡಗಿ ಕುಳಿತ ಬಯಕೆಯೆಂಬ ಧೂರ್ತ, ಪ್ರಕೃತಿವೆಂಬ ಸಂಜೀವಿನಿಯು ಮಾನವನ ಹಸಿವಿಗೆ ಕಸುವು ನೀಡಿದರೆ ಪ್ರಕೃತಿಯ ಹಸಿವಿಗೆ ಕಸುವು ಮನುಷ್ಯನೇ ಆಗಬೇಕಾದ ದುಃಸ್ಥಿತಿ ಬರಬಹುದು, ಆದ್ದರಿಂದ ಪ್ರಕೃತಿ ರಕ್ಷತಿ ರಕ್ಷಿತಾಃ ಅನ್ನೋ ಮಾತು ಮರೆಯದೆ ಪ್ರಕೃತಿಯ ಸೊಬಗನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪ್ರಕೃತಿ ಸೌಂದರ್ಯದ ಸೊಬಗನ್ನು ಸವಿಯುವ ಧಾವಂತದಲ್ಲಿ ಎಲ್ಲಿ, ಯಾವ ರೀತಿ ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತಿದ್ದೇವೆಂದು ಅರಿಯದೆ ಸಾಗುತ್ತಲೇ ಇದ್ದೇವೆ. ಸೇವಿಸಲು ಶುದ್ಧ ಗಾಳಿ,ನೀರಿಲ್ಲದೆ ಬಾಟಲ್ ನೀರು ಸೇವಿಸುವ ನಾವು ಮುಂದೊಂದು ದಿನ ಆಮ್ಲಜನಕದ ಟ್ಯಾಂಕ್ ಟೊಂಕಕ್ಕೆ ಕಟ್ಟಿಕೊಂಡು ಜೀವ ಉಳಿಸಿಕೊಳ್ಳುವ ಸಲುವಾಗಿಯೇ ದುಡಿದು  ಹೆಣವಾಗಬೇಕಾದ ಸಮಯ ಬಂದೊದಗಬಹುದು. ಈಗಾಗಲೇ ಪ್ರಾಣಿ ಸಂಗ್ರಹಾಲಯ, ಗಾರ್ಡನ್ಗಳೆಂದು ನಿರ್ಮಿಸಿಕೊಂಡು ಹಣ ಪೀಕಿ ಕೊಳ್ಳುವ ವ್ಯವಸ್ಥೆ ಆರಂಭವಾಗಿದ್ದು ಅದೆಲ್ಲ ಕ್ಷಣ ಮಾತ್ರದ ಆನಂದ. ಬದುಕು, ಬದುಕಲು ಬಿಡು ಎಂಬ ಮಾತನ್ನು ನೆನಪಿನಲ್ಲಿಟ್ಟುಕೊಳ್ಳುತ  ಇತರೆ ಪ್ರಾಣಿಗಳನ್ನು, ಪಕ್ಷಿಗಳನ್ನು ಸ್ವಾತಂತ್ರವಾಗಿ, ಸ್ವಚೆಂದವಾಗಿ ಬಿಡಬೇಕು ಆಗ ನಿಜವಾದ ಪ್ರಕೃತಿ ಸೌಂದರ್ಯ ಶಾಶ್ವತವಾಗಿ ನೆಲೆಯೂರುವಂತಹ ವ್ಯವಸ್ಥೆ ಆಗಬಹುದು. ಕಲ್ಪನೆಗೂ ನಿಲುಕದ ನಿಸರ್ಗದ ತಾಣಗಳನ್ನು ಅಳಿವಿನಂಚಿನಲ್ಲಿ ದೂಡಿರುವ ಕಾರಣ ನಾಳೆ ನಮ್ಮಗಳ ಅಳಿವಿನ ದಿನಗಳು ಹತ್ತಿರ ಬಂದಿವೆ ಎಂಬುವುದನ್ನು  ಈಗಾಗಲೇ ಕೊರೊನಾ ಮಾರಿಯು ಸೂಚನೆ ಕೊಟ್ಟು ಎಚ್ಚರಿಸಿದೆ. ನಮ್ಮ ಹೆಣಗಳು ನಮ್ಮವರೇ ಮುಟ್ಟದಂತಹ ದುಃಸ್ಥಿತಿಗೆ ಬಂದಿದ್ದೇವೆಂದರೆ ಮೌನ ಪ್ರಕೃತಿಯು ಹೆಣಗಳನ್ನು ಹುಳಲು ತೆರಿಗೆ ಕೇಳುತ್ತಿರುವಂತೆ ಭಾಷವಾಗುತ್ತಿದೆ ಹಾಗೂ ಧರೆಯು ತನ್ನ ಒಡಲೊಳಗೆ ಸ್ವೀಕರಿಸಿ ತೃಪ್ತಿ ಪಡಲು ಸಹ ಸಂಕೋಚ ಪಡುತ್ತಿದೆ ಅನ್ನಿಸುತ್ತೆ.! ಸೋಜಿಗವಲ್ಲವೇ..!? ಮರಗಿಡಗಳಲ್ಲಿ ಇದ್ದಿದ್ದರೆ ನೆತ್ತರ ಕೆಂಪು ಧರೆಯೆಲ್ಲ ಆಗಿರುತ್ತಿತ್ತು ಇಷ್ಟೊತ್ತಿಗೆ ಕೆಂಪು!. ಇಷ್ಟೊಂದು ಪ್ರಕೃತಿದತ್ತ ನೈಸರ್ಗಿಕ ಸಂಪನ್ಮೂಲಗಳ ನಾಶಕ್ಕೆ ಮಾನವ ಸಂಕುಲದ ಸ್ವಾರ್ಥವೇ ಪ್ರಧಾನವೆಂದರೆ ತಪ್ಪಾಗದು. ಭಾರತೀಯ ನೆಲದಲ್ಲಿ ವನಸಿರಿಯ ಸೊಬಗು ವರ್ಣಿಸಲಸದಳ ಏಕೆಂದರೆ ಇಲ್ಲಿನ ಪ್ರತಿ ಸಸ್ಯವು ಸಂಜೀವಿನಿಗಳಂತೆ..! ವೈದ್ಯ ಲೋಕ ಕಣ್ಬಿಡುವ ಮುನ್ನವೇ ನಮ್ಮ ಪೂರ್ವಜರು ಬಳಕೆ ಮಾಡಿ ಆರೋಗ್ಯ ಕಾಪಾಡಿಕೊಂಡು ಈ ಪ್ರಕೃತಿ ವಿಸ್ಮಯದ ಮಹತ್ವವನ್ನು ನಮ್ಮ ಪೀಳಿಗೆಗೆ ವರ್ಗಾಯಿಸಿದ್ದು ಇಡೀ ವಿಶ್ವವೇ ನಮ್ಮೆಡೆ ಗಮನ ಕೇಂದ್ರೀಕರಿಸಿ ನೋಡುವಂತೆ ಮಾಡಿದೆ. ಹೀಗೆ ನಮ್ಮಉಪಯೋಗಕ್ಕೆ ಕಾಡುಗಳನ್ನು ಸಂಪೂರ್ಣ ನಾಶಗೊಳಿಸುತ್ತ ಸಾಗಬೇಕೆ!? ಅಥವಾ ಉಳಿಸುವೆಡೆಗೆ ಗಮನ ಹರಿಸಬೇಕೆ!? ಎಂಬುದನ್ನು ಅರಿತು ಏರುತ್ತಿರುವ ಜಾಗತಿಕ ತಾಪಮಾನ & ಜನ ಸಂಖ್ಯೆಯ ನಿಯಂತ್ರಣ ಮಾಡುತ್ತ ಇಂದಿನ ಶಾಲಾ,ಕಾಲೇಜಿನ ಮಕ್ಕಳಿಗೆ ವಿಜ್ಞಾನ,ತಂತ್ರಜ್ಞಾನದ ಜೊತೆಗೆ ಪರಿಸರ ಮಹತ್ವವನ್ನು ತಿಳಿಸಿಕೊಡುವ ಅತ್ಯಗತ್ಯವಿದೆ. ಭಾರತ ಸರ್ಕಾರ ಜೂನ್ ಮಾಸ ಸಂಪೂರ್ಣ ವನಮಹೋತ್ಸವ ಆಚರಣೆ ಮಾಡುವ ಕೆಲಸ ಮಾಡುತ್ತಿದ್ದು ಅದರಲ್ಲಿ ಪೂರ್ಣ ಪ್ರಮಾಣದ ತೊಡಗಿಸಿಕೊಳ್ಳುವಿಕೆ ಆಗಬೇಕಿದೆ. ಶುದ್ಧಗಾಳಿ & ನೀರು, ಉತ್ತಮ ಆಹಾರ, ಅಂತರ್ಜಲ ಏರಿಕೆ ಹಾಗೂ ತಾಪಮಾನದ ಇಳಿಕೆಗೆ ಸರ್ಕಾರ & ಕೈ ಜೋಡಿಸುತ್ತಿರುವ ಸಂಸ್ಥೆಗಳಿಗೆ ನಾವು ಸಹಕರಿಸುತ್ತ ಪ್ರತಿ ಕುಟುಂಬದಲ್ಲಿ ಎಷ್ಟು ಜನರಿದ್ದೆವೋ ಅಷ್ಟು ಮರಗಳನ್ನು ನೆಡುವ ಪ್ರಯತ್ನ ಮಾಡುವ ಅವಶ್ಯವಿದೆ. ಹಾಗೂ ಕೃಷಿಯಲ್ಲಿ ತೊಡಸಿಗಿಸಿಕೊಂಡಿರುವ ರೈತವರ್ಗಕ್ಕೆ ಬೆಲೆಬಾಳುವ ಮರಗಳನ್ನು ಬೆಳೆಸಲು ಸಂಸ್ಥೆಗಳು ಸಾಲ ಕೊಡಲು ಸಹ ಮುಂದಾಗಿದ್ದು ಸರ್ಕಾರವು ಮುಂದಾಗಿದೆ. ಜೊತೆಗೆ ಕೆರೆಗಳ ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು. ಕಾಡಂಚಿನ ಗ್ರಾಮಗಳ ಜನತೆಗೆ ವನ್ಯ ಜೀವಿಗಳಿಂದ ತೊಂದರೆ ಆಗದಂತೆ ನೋಡಿಕೊಳ್ಳುವುದು. ಹಾಗೂ ವನ್ಯ ಜೀವಿಗಳ ಜೀವಕ್ಕೆ ಅಪಾಯವಾಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಾ ಅರಣ್ಯ ಕೃಷಿ ಯೋಜನೆ, ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಇಳಿಜಾರಿಗೆ ಇಂಗು ಗುಂಡಿಗಳ ನಿರ್ಮಾಣ ಮಾಡುತ್ತ ಕೃಷಿಕರಿಗೂ ಸರ್ಕಾರ ಸಹಕಾರ ನೀಡುತ್ತಾ ಪ್ರಕೃತಿಯ ಉಳಿವಿಗೆ ಎಲ್ಲಾರು ಶ್ರಮಿಸುವ ಅಗತ್ಯವಿದೆ ಎಂಬ ಇಂಗಿತ ನನ್ನದು. ಧನ್ಯವಾದ. ***********

ಪ್ರಕೃತಿ ರಕ್ಷತಿ ರಕ್ಷಿತಾಃ Read Post »

ಇತರೆ

ಒಲವಿನೋಲೆ

ಓದೋಕೊಂದು ಒಲವಿನೋಲೆ ಜಯಶ್ರೀ ಜೆ.ಅಬ್ಬಿಗೇರಿ ಜೀವದ ಗೆಳತಿ, ನೆತ್ತಿ ಸುಡುವ ಸೂರ‍್ಯನ ಅರ್ಭಟ ತಗ್ಗಿಸಲೆಂದೇ ಮಟ ಮಟ ಮಧ್ಯಾಹ್ನ ಸುರಿದ ಮಳೆ ಗಕ್ಕನೇ ನಿಂತಾಗ, ಆಗಸದಲ್ಲಿ ಕಾಮನಬಿಲ್ಲು ಮೈ ಅರಳಿಸಿಕೊಂಡು ತುಟಿ ಬಿರಿದು ನಿಂತಿತು. ಅದೇ ಕ್ಷಣ ಕಾಗದವನ್ನೇ ದೋಣಿಯಾಗಿಸಿ ನಾನು ನೀನು ಕೈ ಕೈ ಹಿಡಿದು ತೇಲಿ ಬಿಟ್ಟ ಘಳಿಗೆ ಅದೆಷ್ಟು ಮಧುರ ಅನುಭವ! ಅಲ್ಲವೇ ಗೆಳತಿ? ಅದನ್ನು ಮರೆಯಲಾದೀತೆ? ಹಾಲ್ಗಡಲು ಕಡೆಯುವಾಗ ಜನಿಸಿದ ಅಪ್ಸರೆಯಂತೆ ನಿನ್ನ ನೋಟ ಕಂಗೊಳಿಸುತ್ತಿರುವಾಗ ಗಗನದ ಮಳೆ ಬಿಲ್ಲು ನಸು ನಾಚಿ ಮರೆಯಾಯಿತು. ತಕ್ಷಣವೇ ಬಲು ಮೋಹಗೊಂಡು ನಿನ್ನ ಸುಕೋಮಲ ಬೆರಳಿಗೆ ಬೆರಳು ಬೆಸೆದೆ. ನಿನ್ನನ್ನು ಗೆಳತಿಯಾಗಿ ಪಡೆದು ಪರಿಪೂರ‍್ಣನಾದೆ ಎಂಬ ಭಾವದಲ್ಲಿ ಮಿಂದು ನನ್ನ ಹೃದಯ ಕುಣಿಯಿತು. ನಾನೇ ಭಾಗ್ಯವಂತ ನಾನೇ ಪುಣ್ಯವಂತ ನನಗರಿವಿಲ್ಲದೇ ಉಸಿರಿದೆ ..ಅದಕ್ಕೆ ನೀನು ಊಹ್ಞೂಂ ಇಲ್ಲ ನಾನೇ ಭಾಗ್ಯವತಿ ಎಂದದ್ದು ಇಂದಿಗೂ ಕಿವಿಯಲ್ಲಿ ಅನುರುಣಿಸುತ್ತಿದೆ. ಅರೆಗಳಿಗೆಯೂ ನಿನ್ನಿಂದ ದೂರಾಗಿ ಇರಲಾರೆ.ಎಂದೆನಿಸಿತು. ಆ ಕ್ಷಣವೇ ನಿನ್ನಲ್ಲಿ ಬೆರೆತು ನನ್ನನ್ನೇ ಮರೆತು ಬಿಡಬೇಕೆಂದು ಹೃದಯ ವೀಣೆಯ ತಂತಿ ಹಠ ಹಿಡಿಯಿತು. ಯಾರಿಗೂ ಕಾಣದಂತೆ ಹೃದಯದಲ್ಲಿ ಮರೆ ಮಾಡಿ ನಿನ್ನನ್ನು ಮುಚ್ಚಿಟ್ಟುಕೊಂಡು ಬಂದು ನನ್ನ ಕೋಣೆ ಸೇರಿದೆ. ನಾನೆಂದೂ ಕಾಣದ ಅನುಭವ ಮನದಲ್ಲಿ ಅಂದು ರಾತ್ರಿಯೆಲ್ಲ ಕಣ್ಣಿಗೆ ಕಣ್ಣು ಅಂಟಿಸಲು ಸಾಧ್ಯವಾಗಲೇ ಇಲ್ಲ. ನಿನ್ನನ್ನು ಕಾಣುವ ಮುನ್ನ ಈ ಕಣ್ಣುಗಳು ಅದೆಷ್ಟು ಸುಂದರಿಯರನ್ನು ಕಂಡಿವೆ ಲೆಕ್ಕವಿಲ್ಲ. ಆದರೆ ಆ ಯಾರೊಬ್ಬರಲ್ಲೂ ನಿನ್ನಂತೆ ಆಕರ್ಷಣೆಯ ಸೆಳೆತ ಇರಲಿಲ್ಲವೆಂತಲ್ಲ. ಮನಸ್ಸು ಯಾಕೋ ಅತ್ತ ವಾಲಲೇ ಇಲ್ಲ. ತೆರೆದ ಬಾಹುಗಳ ಚಾಚಿ ಬಿಗಿದಪ್ಪುವಂತ ಕನಸು ಕಾಣಲೇ ಇಲ್ಲ. ಅದಾವ ಗಳಿಗೆಯಲ್ಲಿ ಸಂಚಾರಿ ಮನಸ್ಸು ನಿನ್ನ ಕಂಡು ಬೆಸೆದುಕೊಂಡಿತೋ ತಿಳಿಯಲಿಲ್ಲ. ನಿನ್ನ ಹೆಜ್ಜೆಯೊಂದಿಗೆ ಹೆಜ್ಜೆ ಬೆಸೆಯುವ ಕೆಲಸಕ್ಕೆ ಮನಸ್ಸು ದಿನವೂ ಜಾತಕ ಪಕ್ಷಿಯಂತೆ ಕಾಯುತ್ತಿತ್ತು. ನನ್ನ ಪ್ರತಿ ನೋವನ್ನು ನಿನ್ನದೆಂದೇ ತಿಳಿದು, ಮುಂದೆ ಮುಂದೆ ನಡೆ ನಾನೂ ನಿನ್ನೊಂದಿಗಿದ್ದೇನೆ ಎಂದು ಎದೆಗೆ ಧೈರ‍್ಯ ತುಂಬಿ,ಕಣ್ಣ ಕಂಬನಿ ಒರೆಸಿದ ಪರಿಯಲ್ಲಿ ಒಡಲ ಬಳ್ಳಿಯನ್ನು ಸಂತೈಸುವ ತಾಯಿ ಹೃದಯವನ್ನು ನಿನ್ನಲ್ಲಿ ಕಂಡು ಅಚ್ಚರಿಗೊಂಡೆ. . ನಮ್ಮ ಸ್ನೇಹವೆಂದೆಂದೂ ಇರಲಿ ಹೀಗೆ ಶಾಶ್ವತ ಎಂದು ನೀ ತುಟಿಯಂಚಿನಲ್ಲಿ ನಗುತ್ತ ಹೇಳಿದಾಗ ಇದ್ದ ಕೊಂಚ ಸಂಕೋಚವೂ ದೂರ ಓಡಿತು. ತುಂಟತನದ ಆಟಗಳಲ್ಲಿ ಮೈ ಮರೆತು ಪಟ್ಟ ಖುಷಿಗೆ ಲೆಕ್ಕವಿಲ್ಲ. ಪ್ರೀತಿಯೇ ಬದುಕು ಅದಿಲ್ಲದೇ ಬದುಕಿಲ್ಲ ಎಂದು ತೋರಿದವಳು ನೀನಲ್ಲವೇ? ನಿನ್ನೊಂದಿಗಿರುವ ಬದುಕು ಅದೆಷ್ಟು ಚೆಂದವಲ್ಲವೇ? ಗೆಳತಿ ನಿನ್ನಂತೆ ಇನ್ನಾರು ಕಾಡಿಲ್ಲ ನನ್ನ ನಿದ್ದೆಗೆಡಿಸಿಲ್ಲ ನನ್ನ. ಬಂದು ಬಿಡು ನನ್ನ ಬಳಿಗೆ ಈಗ. ಕೈಯಲ್ಲಿ ಕಾಗದದ ದೋಣಿ ಹಿಡಿದು ನಿಂತಿರುವೆ. ಮಳೆ ಬಿಲ್ಲೂ ನಿನ್ನ ಬರುವಿಗಾಗಿಯೇ ಕಾಯುತ್ತಿದೆ. *************

ಒಲವಿನೋಲೆ Read Post »

ಇತರೆ, ಪರಿಸರ

ಇಕೊ ಕ್ಲಬ್ ಗಳ ಅನುಷ್ಠಾನ

ಪರಿಸರದ ಮಹತ್ವ ಮತ್ತು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಇಕೋ ಕ್ಲಬ್ ಗಳ ಅನುಷ್ಠಾನ ಪರಿಸರದ ಮಹತ್ವ ಮತ್ತು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಇಕೋ ಕ್ಲಬ್ ಗಳ ಅನುಷ್ಠಾನ ಹಸಿರೇ ಉಸಿರು- ಪ್ರಕೃತಿಯ ವಿಸ್ಮಯಗಳನ್ನು ಒಳಗೊಂಡಿರುವ ನಮ್ಮ ಸುತ್ತಲಿನ ಪರಿಸರವನ್ನು ನಾವು ಕಾಪಾಡಿಕೊಳ್ಳಬೇಕಾಗಿರುವುದು ಇಂದು ಅನಿವಾರ್ಯವಾಗಿದೆ. ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮ(NGC)ವು ಪರಿಸರ ಮತ್ತು ಅರಣ್ಯ ಮಂತ್ರಾಲಯ(MOEF) ಭಾರತ ಸರ್ಕಾರ (GOL)ದ ರಾಷ್ಟ್ರೀಯ ಶಾಲಾ ಕಾರ್ಯಕ್ರಮವಾಗಿದೆ. ಇದರಡಿಯಲ್ಲಿ ದೇಶದಾದ್ಯಂತ ಪ್ರತಿ ಜಿಲ್ಲೆಯ ಸುಮಾರು 250 ಶಾಲೆಗಳಲ್ಲಿ ಇಕೋಕ್ಲಬ್ ಗಳನ್ನು ಸ್ಥಾಪಿಸುವ ಮೂಲಕ ರಾಷ್ಟ್ರೀಯ ಹಸಿರು ಸೈನ್ಯವನ್ನು ರೂಪಿಸಲು ಹಾಕಿಕೊಂಡ ಯೋಜನೆಯಾಗಿದೆ. ಮಕ್ಕಳ ಮನಸ್ಸುಗಳನ್ನು ಆಕರ್ಷಿಸಿ “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬ ಗಾದೆ ಮಾತಿನಂತೆ ಪರಿಸರ ಜಾಗೃತಿಯನ್ನು ಅಚ್ಚು ಮಾಡುವುದಕ್ಕೆ ಸುಲಭವಾಗಿತ್ತದೆ. “ಯುವಕರನ್ನು ಹಿಡಿಯಿರಿ” ಎಂಬ ಮಂತ್ರವು ರಾಷ್ಟ್ರೀಯ ಹಸಿರು ಪಡೆಯ ಪ್ರಮುಖ ಅಂಶವಾಗಿದೆ. ಪ್ರಮುಖ ಉದ್ದೇಶ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಪರಿಸರ ರಕ್ಷಣೆ ಹಾಗೂ ಸುಧಾರಣೆಗಾಗಿ ಕ್ರಮಬದ್ಧ ಕಾರ್ಯಕ್ರಮಗಳನ್ನು ಕೈಗೊಳ್ಳುವುದು ಆರಂಭ – 2001 ರಲ್ಲಿ ಆರಂಭವಾದಾಗಿನಿಂದಲೂ ಹಲವು ನೋಡಲ್ ಏಜೆನ್ಸಿಗಳು ರಾಜ್ಯದಲ್ಲಿನ ಕಾರ್ಯಕ್ರಮದ ಅನುಷ್ಠಾನವನ್ನು ತೆಗೆದುಕೊಂಡಿವೆ.1 ಜನವರಿ 2009 ರಿಂದ ಕರ್ನಾಟಕದಲ್ಲಿ ಎಂಪ್ರಿ ಸಂಸ್ಥೆಯು ರಾಷ್ಟ್ರೀಯ ಹಸಿರುಪಡೆಯ ನೋಡೆಲ್ ಏಜೆನ್ಸಿ(NA)ಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿವರ್ಷ ಇಕೋಕ್ಲಬ್ ನ ವಿವಿಧ ಚಟುವಟಿಕೆಗಳನ್ನು ಮೂರು ಹಂತಗಳಲ್ಲಿ ಕೈಗೊಳ್ಳಲಾಗುವುದುಮೊದಲ ಹಂತ- ಜಾಗೃತಿ ಆಧಾರಿತ ಚಟುವಟಿಕೆಗಳುಉದಾ – ರಾಲಿ/ಜಾಥಾ, ತಜ್ಞರ ಜೊತೆ ಮಾತುಕತೆಗಳು, ಶೈಕ್ಷಣಿಕ ಚಲನಚಿತ್ರ ಪ್ರದರ್ಶನಗಳು /ವಿಚಾರಗೋಷ್ಠಿಗಳು ) ಎರಡನೆಯ ಹಂತ – ಕ್ರಿಯಾಶೀಲತೆ ಮತ್ತು ವೀಕ್ಷಣೆಉದಾ – ಸಮೀಕ್ಷೆ ಪ್ರವಾಸ, ದತ್ತಾಂಶ ಸಂಗ್ರಹ, ದಾಖಲೆಗಳ ರಕ್ಷಣೆ ಮೂರನೆಯ ಹಂತ- ಹೆಚ್ಚಿನ ಕ್ರಿಯಾಶೀಲತೆ.ಉದಾ – ತೋಟಗಳು, ವರ್ಮಿಕಾಂಪೋಸ್ಟಿಂಗ್, ನೀರು /ಶಕ್ತಿ ಸಂರಕ್ಷಣೆ ಮತ್ತು ನೈರ್ಮಲ್ಯ. ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಆರ್ಥಿಕ ಸಹಾಯವಾಗಿ ವಾರ್ಷಿಕ 5000 ರೂಗಳನ್ನು ಪ್ರತಿ ಇಕೋಕ್ಲಬ್ ಶಾಲೆಗೆ ನೀಡಲಾಗುತ್ತದೆ. ನಿಯಮಿತ ಹಾಗೂ ಶಾಲಾ ಭೇಟಿಗಳನ್ನು ನಡೆಸುವ ಮೂಲಕ ಕಾರ್ಯಕ್ರಮವನ್ನು ಬಲಪಡಿಸಲು ನಿರಂತರ ಬೆಂಬಲ ಮತ್ತು ನೆರವನ್ನು ಒದಗಿಸುವಲ್ಲಿ ರಾಷ್ಟ್ರೀಯ ಹಸಿರುಪಡೆ ತಂಡವು ತೊಡಗಿಕೊಂಡಿದೆ. ಇಕೋಕ್ಲಬ್ ನ ಉಸ್ತುವಾರಿ ಶಿಕ್ಷಕರಿಗೆ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಕ್ತ ತರಬೇತಿ/ಕಾರ್ಯಾಗಾರವನ್ನು ಮಾಡಲಾಗಿದೆ. ಅನುಷ್ಠಾನದ ಪರಿಣಾಮಗಳು ಧನಾತ್ಮಕ ಬದಲಾವಣೆಗೆ ಈ ಕಾರ್ಯಕ್ರಮವು ಪರಿಣಾಮಕಾರಿಯಾಗಿದ್ದು ವಿದ್ಯಾರ್ಥಿ/ನಿಯ ವೈಯಕ್ತಿಕ ಮಟ್ಟ, ಶಾಲಾ ಮಟ್ಟ ಹಾಗೂ ನೆರೆಹೊರೆ ಮಟ್ಟದಲ್ಲಿ ಧನಾತ್ಮಕ ಬದಲಾವಣೆಯನ್ನು ಕಾಣಬಹುದಾಗಿದೆ. ಪರಿಸರಾತ್ಮಕವಾಗಿ ಸುಸ್ಥಿರತೆ – ಸಾಮಾಜಿಕವಾಗಿ ವೈಯಕ್ತಿಕವಾದ ಜೀವನ ಶೈಲಿಯಲ್ಲಿ ಬದಲಾವಣೆ, ವಿದ್ಯಾರ್ಥಿಗಳ ನಡವಳಿಕೆ /ವರ್ತನೆ / ನಡತೆಯಲ್ಲಿ ಸಕಾರಾತ್ಮಕ ಬದಲಾವಣೆಯಾಗುತ್ತದೆ. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಸ್ಥಳೀಯ ಸಮಸ್ಯೆಗಳನ್ನು /ವಿಷಯಗಳನ್ನು ಗುರುತಿಸುವ ಅಗತ್ಯತೆಯನ್ನು ತಿಳಿಸುವುದರ ಜೊತೆಗೆ ಸಮಸ್ಯೆಗಳನ್ನು ಗುರುತಿಸಲು ಸಹಕಾರಿಯಾಗುತ್ತದೆ. ಮಕ್ಕಳಿಂದ ಹೆಚ್ಚು ಕ್ರಿಯಾಧಾರಿತ ಚಟುವಟಿಕೆಗಳನ್ನು ಮಾಡಿಸುವುದರಿಂದ ಮಕ್ಕಳು ಕೂಡ ಕ್ರಿಯಾಶೀಲರಾಗುತ್ತಾರೆ. ವಿಶ್ವ ಪರಿಸರ ದಿನದ ಆಚರಣೆಯ ಬಗ್ಗೆ ಅರಿವು ಮೂಡುತ್ತದೆ. ವಿದ್ಯಾರ್ಥಿಗಳಲ್ಲಿ ಪರಿಸರದ ಮಹತ್ವ, ಅರೋಗ್ಯ ಸ್ವಚ್ಛತೆ, ಪರಿಸರ ಸ್ವಚ್ಛತೆ ಮತ್ತು ಆರೋಗ್ಯಕರ ಅಭ್ಯಾಸಗಳಿಗೆ ಸಂಬಂಧಿಸಿದ ಹಲವು ವಿಚಾರಗಳನ್ನು ತಿಳಿಸುವುದರಿಂದ ವಿದ್ಯಾರ್ಥಿಗಳಲ್ಲಿ ಕಾಳಜಿ ಮೂಡುತ್ತದೆ. ಅವರು ಕೂಡ ಶ್ರಮದಾನದಲ್ಲಿ ತೊಡಗಿ ತಮ್ಮ ಶಾಲೆಗಳನ್ನು ಶುದ್ಧವಾಗಿಟ್ಟುಕೊಳ್ಳುವರು. ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿ ಪರಿಸರದ ಕುರಿತು ಮಕ್ಕಳಲ್ಲಿ ಆಸಕ್ತಿ ಮತ್ತು ಕಾಳಜಿ ಮೂಡಿಸುವುದರಿಂದ ಎಳೆಯ ವಯಸ್ಸಿನಲ್ಲೇ ಮಕ್ಕಳು ಇದರ ಉದ್ದೇಶವನ್ನರಿತು ಪರಿಸರದೊಂದಿಗೆ ಅವಿನಾಭಾವ ಸಂಬಂಧವೊಂದನ್ನು ಬೆಳೆಸಿಕೊಳ್ಳುತ್ತಾರೆ. ಶಾಲಾ ಪರಿಸರ ಹಾಗೂ ಊರಿನ ಪರಿಸರ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದರ ಜೊತೆಗೆ ಇರುವ ಸಸ್ಯಗಳನ್ನು ಸಂರಕ್ಷಿಸಿ ಇನ್ನೂ ಹೆಚ್ಚಿನ ಸಸಿಗಳನ್ನು ಬೆಳೆಸುವ ಕಡೆಗೆ ಗಮನ ಹರಿಸುತ್ತಾರೆ. ಯೋಗದಿಂದ ಆರೋಗ್ಯ ವೃದ್ಧಿ – ವಿದ್ಯಾರ್ಥಿಗಳಲ್ಲಿ ಯೋಗದ ಮಹತ್ವ ಅರಿತಾಗ ಸದೃಢ ಆರೋಗ್ಯಕ್ಕಾಗಿ ಯೋಗದ ಮಹತ್ವವನ್ನು ಅರಿತು ಅಳವಡಿಸಿಕೊಳ್ಳುತ್ತಾರೆ. ವನಮಹೋತ್ಸವ ಆಚರಣೆಯ ಮೂಲಕ ಸಸಿಗಳನ್ನು ನೆಟ್ಟು ದತ್ತು ಪಡೆದು ಅವುಗಳ ಆರೈಕೆ ಮತ್ತು ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಜಾಥಾ ಕಾರ್ಯಕ್ರಮಗಳ ಮೂಲಕ ಸಮುದಾಯದಲ್ಲಿ ಸ್ವಚ್ಛತೆಯ ಬಗೆಗಿನ ಅರಿವನ್ನು ಮೂಡಿಸಲು ಸಾಧ್ಯವಾಗಿದೆ. ಶೌಚಾಲಯದ ಪಾತ್ರ, ಆರೋಗ್ಯಕರ ಆಹಾರ ಮತ್ತು ನೀರಿನ ಸಂರಕ್ಷಣೆಯ ವಿಧಾನ ಮುಂತಾದವುಗಳ ಘೋಷಣೆಯಿಂದ ಎಲ್ಲರಲ್ಲಿ ಜಾಗೃತಿ ಉಂಟಾಗುತ್ತದೆ. ಕೈ ತೊಳೆಯುವ ಆರು ಕ್ರಮಬದ್ಧ ಹಂತಗಳನ್ನು ಮಾದರಿಯಾಗಿ ನೋಡಿ ಪಾಲಿಸುವುದರಿಂದ ಕೈತೊಳೆಯುವ ಕ್ರಮ ಮತ್ತು ಮಹತ್ವವನ್ನು ಅರಿತಿದ್ದಾರೆ. ಪರಿಸರ ವೀಕ್ಷಣೆಗಾಗಿ ಪ್ರವಾಸ, ನೈಸರ್ಗಿಕ ನೋಟ, ಪ್ರಾಣಿ ಸಂಗ್ರಹಾಲಯ, ಜಲಪಾತ, ಪರ್ವತ ಹಾಗೂ ನದಿ ಕಣಿವೆಗಳ ವೀಕ್ಷಿಸುವುದರಿಂದ ಮಕ್ಕಳಲ್ಲಿ ಪರಿಸರದ ಬಗ್ಗೆ ಆಸಕ್ತಿ, ಕುತೂಹಲ, ವೈವಿಧ್ಯ, ವಿಸ್ಮಯಗಳ ಅರಿವಾಗುತ್ತದೆ.*ವಿವಿಧ ಪರಿಸರಸ್ನೇಹಿ ಸ್ಪರ್ಧೆಗಳ ಆಯೋಜನೆಯ ಮೂಲಕ ಮಕ್ಕಳಲ್ಲಿ ಆರೋಗ್ಯಕರ ಸ್ಪರ್ಧಾ ಮನೋಭಾವ ಬೆಳೆಯುತ್ತದೆ.ಉದಾ – ಕೈಚೀಲ ತಯಾರಿಕೆ, ಭಾಷಣ ಸ್ಪರ್ಧೆ, ಆಶುಭಾಷಣ, ಪರಿಸರಗೀತೆಗಳ ಗಾಯನ, ಪ್ರಬಂಧ, ಚಿತ್ರಕಲಾ ಸ್ಪರ್ಧೆ ಇತ್ಯಾದಿ.. ಬೆಂಕಿ ಅವಘಡದ ಕುರಿತು ಪ್ರಾತ್ಯಕ್ಷಿಕೆ ಮತ್ತು ಜಾಗೃತಿಯನ್ನು ಮೂಡಿಸುವುದರಿಂದ ವಿಪತ್ತುಗಳ ಸಮಯದಲ್ಲಿ ತುರ್ತು ಕ್ರಮಗಳನ್ನು ಅಳವಡಿಸಿಕೊಳ್ಳುವ ಜ್ಞಾನ ವೃದ್ಧಿಯಾಗುತ್ತದೆ. ಪರಿಸರಪ್ರೇಯಿಮಗಳಾದ ಸಾಲುಮರದ ತಿಮ್ಮಕ್ಕ, ಸುಂದರಲಾಲ್ ಬಹುಗುಣರಂತಹ ಮಹಾನ್ ವ್ಯಕ್ತಿಗಳ ಪರಿಚಯ ಮತ್ತು ಅವರ ಕುರಿತು ಪ್ರಬಂಧ, ಭಾಷಣಗಳ ಮೂಲಕ ಅವರ ತತ್ವ ಆದರ್ಶಗಳನ್ನು ಮನದಟ್ಟು ಮಾಡಿಕೊಳ್ಳುತ್ತಾರೆ. ನಮ್ಮ ಸುತ್ತಮುತ್ತಲಿನ ಗಿಡಮೂಲಿಕೆಗಳ ಬಗ್ಗೆ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಯ ಮೂಲಕ ಆಯುರ್ವೇದದ ಬಗ್ಗೆ ಹಾಗೂ ನೈಸರ್ಗಿಕವಾಗಿ ಆರೋಗ್ಯವನ್ನು ಪ್ರಕೃತಿಯಲ್ಲಿ ದೊರೆಯುವ ಗಿಡಮೂಲಿಕೆಗಳಿಂದ ಹೇಗೆ ಕಾಪಾಡಿಕೊಳ್ಳುವುದು ಎಂಬ ಅಂಶವನ್ನು ತಿಳಿಯುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ “ಮುಸುಕಿನಿಂದ ಪರಿಸರದೆಡೆಗೆ ಪಯಣ” ಎಂಬಂತೆ ಪರಿಸದ ಮಹತ್ವ ತಿಳಿಸಿ ಮತ್ತು ಜಾಗೃತಿಯನ್ನು ಮೂಡಿಸುವಲ್ಲಿ ಶಾಲೆಗಳಲ್ಲಿ ಇಕೋ ಕ್ಲಬ್ ರಚನೆಯ ಅನುಷ್ಠಾನವು ಒಂದು ಮೈಲಿಗಲ್ಲಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಪರಿಸರದೊಂದಿಗೆ ಭಾವ ಬೆಸೆದು ಪರಿಸಸ್ನೇಹಿಗಳಾಗಿ ಬದುಕುವ ಪರಿಪಾಠವು ಕೂಡ ಮೈಗೂಡುತ್ತದೆ. ಜೂನ್ 5 ರಂದು ಪ್ರಪಂಚದಾದ್ಯಂತ ವ್ಯಾಪಕವಾಗಿ ಸಾಂಕೇತಿಕವಾಗಿ ಆಚರಿಸುತ್ತಿರುವ ವಿಶ್ವ ಪರಿಸರ ದಿನಾಚರಣೆಗೆ ಮಕ್ಕಳಲ್ಲಿ ಅವರ ಜೀವನಶೈಲಿಯಲ್ಲಿ ನಿರಂತರವಾಗಿ ಪರಿಸರ ಜಾಗೃತಿಯನ್ನು ಅಳವಡಿಸಿಕೊಳ್ಳುವ ಸ್ಫೂರ್ತಿಯನ್ನು ಇಕೋಕ್ಲಬ್ಗಳು ಮಾಡುತ್ತಿವೆ. ಇದು ಇನ್ನಷ್ಟು ಕ್ರಿಯಾಶೀಲವಾಗಿ ಅನುಷ್ಠಾನವಾದರೆ ಮುಂದಿನ ಪೀಳಿಗೆ ಪರಿಸರವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ****** ತೇಜಾವತಿ ಹೆಚ್.ಡಿ.

ಇಕೊ ಕ್ಲಬ್ ಗಳ ಅನುಷ್ಠಾನ Read Post »

You cannot copy content of this page

Scroll to Top