ಸ್ವಂತಕ್ಕೆಬದುಕದ, ಬದುಕಲಾರದಹೆಣ್ಣುಜೀವವುಎಷ್ಟುಅಮೂಲ್ಯಎಂಬುದುಕವಿಕಂಡುಕೊಂಡಸತ್ಯ. ಕವಿಯಹೃದಯ, ಕಾವ್ಯದಮುಕ್ತಾಯದಲ್ಲಿಪ್ರಾಂಜಲತೆಯಿಂದಅವ್ವನಿಗೆ ಮೆಚ್ಚುಗೆ, ಕೃತಜ್ಞತೆಗಳಶ್ರದ್ಧಾಂಜಲಿಅರ್ಪಿಸುತ್ತದೆಅದೂಸಹಯಾವುದೇವಿಶೇಷಣಗಳಿಲ್ಲದೆ. ಅವ್ವಮನೆಯಿಂದಹೊಲಕ್ಕೆನಿತ್ಯಹೋದಂತೆತಣ್ಣಗೆಹೊರಟುಹೋದರುಎಂದುಹೇಳುವಮೂಲಕ
ಜೀವಾದಿಗಳ ಸಾನಿಧ್ಯದಲ್ಲಿ !
ನೂರೆಂಟು ಕಗ್ಗಂಟುಗಳ ಈ ಮಾನವ ಬದುಕಿನಲ್ಲಿ ಭ್ರಮೆಯಿಲ್ಲದೆ ಜೀವಿಸುವುದು ಅಸಾಧ್ಯ. ಒಬ್ಬೊಬ್ಬರಿಗೆ ಒಂದೊಂದು ಭ್ರಮೆ. ಹಾಗೇ ನನಗೆ ‘ಜೀವಜಂತು’ಗಳ ಪ್ರೀತಿಯ ಭ್ರಮೆ ; ಅಥವಾ ಇದೊಂದು ಹುಚ್ಚಿದ್ದರೂ ಇರಬಹುದು ಎಂದು ನನಗೆ ಮತ್ತು ನನ್ನನ್ನು ಬಲ್ಲವರಿಗೆ ಒಂದು ಸಣ್ಣ ಅನುಮಾನ !
ಜೀವಾದಿಗಳ ಸಾನಿಧ್ಯದಲ್ಲಿ ! Read Post »
ದಾರಾವಾಹಿ ಆವರ್ತನ ಅದ್ಯಾಯ-19 ಬ್ಯಾಂಕರ್ ನಾರಾಯಣರು ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ. ಅವರ ಹೆಂಡತಿ ಗಿರಿಜಕ್ಕ. ಇವರ ಮೂವರು ಮಕ್ಕಳೂ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಮತ್ತು ಸಂಸಾರದ ನಿಮಿತ್ತ ಹೊರದೇಶದಲ್ಲೂ, ಪರವೂರಿನಲ್ಲೂ ನೆಲೆಸಿದ್ದರು. ಆದ್ದರಿಂದ ಈಗ ಎರಡೂವರೆ ಸಾವಿರ ಚದರಡಿಯ ಮಾಳಿಗೆ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ಇರುವುದು. ಮನೆಗೆಲಸದ ವೆಂಕಮ್ಮ ದಿನಾ ನಿಶ್ಶಬ್ದವಾಗಿ ಬಂದು ತನಗೆ ನಿಗದಿಪಡಿಸಲಾದ ಕೆಲಸಕಾರ್ಯಗಳನ್ನು ಚೊಕ್ಕವಾಗಿ ಮಾಡಿಕೊಟ್ಟು ಹೊರಟು ಹೋಗುತ್ತಾಳೆ. ಹಬ್ಬ ಹರಿದಿನಗಳಲ್ಲೂ ಇನ್ನಿತರ ಶುಭದಿನಗಳಲ್ಲೂ ನಾರಾಯಣ ದಂಪತಿಯ ಮಕ್ಕಳು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಅಪ್ಪ ಅಮ್ಮಂದಿರೊಂದಿಗೆ ನಾಲ್ಕು ದಿನ ಖುಷಿಯಿಂದಿದ್ದು ಹೊರಟು ಹೋಗುವ ಪರಿಪಾಠವನ್ನು ನಿಭಾಯಿಸುತ್ತಿದ್ದಾರೆ. ಉಳಿದ ದಿನಗಳಲ್ಲಿ ‘ನನಗೆ ನೀನು, ನಿನಗೆ ನಾನು!’ ಎಂಬಂತಿರುತ್ತದೆ ಈ ಮುದಿಜೀವಗಳ ಬದುಕು. ತೀರಾ ಬಡತನದಿಂದ ಬಂದಂಥ ನಾರಾಯಣರು, ಕೆಳದರ್ಜೆಯ ಗುಮಾಸ್ತನಾಗಿ ಉದ್ಯೋಗ ಆರಂಭಿಸಿದವರು. ಆದರೆ ಕಾಯಕವೇ ಕೈಲಾಸ! ಎಂಬ ದೃಢ ನಂಬಿಕೆಯಿಂದ ತಮ್ಮ ಜೀವಮಾನವಿಡೀ ಮಿಲಿಟರಿ ಶಿಸ್ತಿನಂಥ ವ್ಯಕ್ತಿತ್ವವನ್ನು ರೂಢಿಸಿಕೊಂಡು, ಕಣ್ಕಾಪು ಕಟ್ಟಿದ ಕುದುರೆಯಂತೆ ಅತ್ತಿತ್ತದ ಯಾವ ವಿಷಯಗಳ ಕುರಿತಾಗಿಯೂ ಆಸಕ್ತಿವಹಿಸಿದೆ ಬರೇ ಬ್ಯಾಂಕಿಗಾಗಿಯೇ ಅವಿರತವಾಗಿ ದುಡಿಯುತ್ತ ಹಂತಹಂತವಾಗಿ ಮೇಲ್ದರ್ಜೆಗೆ ಭಡ್ತಿ ಹೊಂದಿ ಮ್ಯಾನೇಜರ್ ಹುದ್ದೆಗೆ ಏರಿದವರು. ಆದ್ದರಿಂದ ಆ ಉದ್ಯೋಗಕ್ಕಿರಬೇಕಾದ ಗತ್ತು, ಬಿಗುಮಾನಗಳನ್ನು ತುಸು ಹೆಚ್ಚೇ ತಮ್ಮ ಮೇಲೆ ಹೇರಿಕೊಂಡು ಅಧಿಕಾರದ ವರ್ಚಸ್ಸಿನಿಂದ ಮುಂದುವರೆದು ಬಹುಬೇಗನೇ ದಕ್ಷ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿ ನಿವೃತ್ತರಾದವರು. ಇಂಥ ಸ್ವಭಾವದ ನಾರಾಯಣರು ನಿವೃತ್ತರಾಗುವವರೆಗೆ ಯಾವ ದೈವದೇವರುಗಳನ್ನೂ ನಂಬದೆ, ಪೂಜಿಸದೆ ಕಟ್ಟಾ ನಾಸ್ತಿಕರಾಗಿ ಬದುಕುತ್ತ ಯಶಸ್ಸಿನ ಗುರಿ ತಲುಪಿದವರು. ಆದರೆ ನಿವೃತ್ತರಾದ ಕೆಲವೇ ವರ್ಷದೊಳಗೆ ಇದ್ದಕ್ಕಿದ್ದಂತೆ ಒಮ್ಮೆ ಅವರು ದೈವ ದೇವರಗಳ ಅತೀವ ಭಕ್ತರಾಗಿ ಬದಲಾಗಿಬಿಟ್ಟರು. ಅದಕ್ಕೆ ಮುಖ್ಯ ಕಾರಣವೂ ಇತ್ತು. ನಾರಾಯಣರು ಆವರೆಗೆ ಆರೋಗ್ಯವಂತರಾಗಿ ಘನ ಗಾಂಭೀರ್ಯದಿಂದ ಬದುಕಿದವರು. ಆದರೆ ಯಾವತ್ತು ಅವರನ್ನು ಮಧುಮೇಹ, ರಕ್ತದೊತ್ತಡ ಮತ್ತು ಅಸ್ತಮದಂಥ ವಯೋಸಹಜ ಕಾಯಿಲೆಗಳು ಆವರಿಸಿಕೊಂಡಿತೋ ಅಂದಿನಿಂದ ಅವರು ಒಳಗೊಳಗೇ ದುರ್ಬಲರಾಗತೊಡಗಿದರು. ಆವರೆಗೆ ಹಠ ಹಿಡಿದು ಕಾಪಾಡಿಕೊಂಡು ಬಂದಂಥ ಅವರ ಆತ್ಮಸ್ಥೈರ್ಯವೆಂಬ ಭದ್ರಕೋಟೆಯು ಒಡೆದು ನುಚ್ಚುನೂರಾಯಿತು. ಆ ಕಾಯಿಲೆಗಳ ಹಿಂಸೆಗಿಂತಲೂ ಅವು ತನ್ನಂಥ ಆರೋಗ್ಯವಂತ ಆತ್ಮ ಸಂಯಮಿಯನ್ನೇ ಹಿಡಿದುಕೊಂಡಿವೆ ಎಂದರೆ ಅರ್ಥವೇನು? ಎಂಬ ಆಘಾತವೇ ಅವರನ್ನು ಹಣ್ಣು ಮಾಡತೊಡಗಿತ್ತು. ಹಾಗಾಗಿ ಬರಬರುತ್ತ ಅವರಿಗೆ ಬದುಕೇ ನಶ್ವರವೆನ್ನಿಸತೊಡಗಿತು. ಅಸ್ತಮವೊಂದನ್ನುಳಿದು ಮತ್ತೆರಡು ಕಾಯಿಲೆಗಳು ಗಿರಿಜಕ್ಕನಿಗೂ ಇದ್ದವು. ಆದರೆ ಅವರು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವ ಹೆಂಗಸಲ್ಲ. ಕಾರಣ ಅದಾಗಲೇ ಅವರಲ್ಲಿ ವಯೋಸಹಜ ಪ್ರಬುದ್ಧತೆ ಮೂಡಿತ್ತು. ಹಾಗಾಗಿ ಆಕೆ ತಮ್ಮ ಇಷ್ಟದ ದೈವದೇವರುಗಳ ಪೂಜೆ ಪುನಸ್ಕಾರಗಳಲ್ಲೂ ದೈನಂದಿನ ಚಟುವಟಿಕೆಗಳಲ್ಲೂ ತೊಡಗಿಕೊಂಡು ನೆಮ್ಮದಿಯಿಂದ ಬದುಕುತ್ತಿದ್ದರು. ಆದರೆ ಗಂಡನ ನಿರುತ್ಸಾಹ ಮತ್ತು ಅವರು ಸದಾ ತಮ್ಮ ಕಾಯಿಲೆಗಳ ಬಗ್ಗೆಯೇ ಕೊರಗುತ್ತ ಕೃಶರಾಗುತ್ತಿದ್ದುದನ್ನು ಕಾಣುತ್ತಿದ್ದವರಿಗೆ ಆತಂಕವಾಗುತ್ತಿತ್ತು. ಆದ್ದರಿಂದ ದಿನಾಲು ಗಂಡನಿಗೆ ಬಗೆಬಗೆಯಿಂದ ಸಾಂತ್ವನ ಹೇಳುತ್ತ ಒತ್ತಾಸೆಯಾಗಿರಲು ಪ್ರಯತ್ನಿಸುತ್ತಿದ್ದರು. ಆದರೂ ನಾರಾಯಣರಿಗೆ ಹೆಂಡತಿಯ ಬುದ್ಧಿಮಾತುಗಳು ಹಿಡಿಸುತ್ತಿರಲಿಲ್ಲ. ಹೀಗಿದ್ದ ಸಮಯದಲ್ಲೇ ಒಮ್ಮೆ ನಾರಾಯಣರ ದೊಡ್ಡ ಕುಟುಂಬದ ಮೂಲದ ಮನೆಯಲ್ಲಿ ವರ್ಷಾವಧಿ ‘ಭೂತ’ ಕ್ಕೆ ನಡೆಯುವ ದಿನವನ್ನು ಗೊತ್ತು ಪಡಿಸಲಾಯಿತು. ಅದರ ಹೇಳಿಕೆ ನೀಡಲು ಅವರ ಹಿರಿಯ ಮಾವ ಸಂಜೀವಣ್ಣ ಮನೆಗೆ ಬಂದರು. ಸಂಜೀವಣ್ಣ ಮತ್ತು ನಾರಾಯಣರು ತೀರಾ ಹತ್ತಿರದ ಬಂಧುಗಳೇನಲ್ಲ. ಚಿಕ್ಕಮ್ಮ, ದೊಡ್ಡಮ್ಮನ ಮಕ್ಕಳಿಂದ ಸಂಬಂಧಿಗಳಾದವರು. ಹಿಂದೆಲ್ಲ ತಮ್ಮ ಬಂಧುಗಳು ಅಥವಾ ಸ್ನೇಹಿತರು ಎಂಬ ಭೇದಭಾವವಿಲ್ಲದೆ ಎಲ್ಲರೊಡನೆಯೂ ಖಡಕ್ಕಾಗಿ ವ್ಯವಹರಿಸುತ್ತಿದ್ದ ನಾರಾಯಣರು ಇಂದು ಕುಂದಿದ ಜೋಲು ಮುಖ ಹೊತ್ತುಕೊಂಡು ತಮ್ಮನ್ನು ಸ್ವಾಗತಿಸಿದ್ದನ್ನು ಕಂಡ ಸಂಜೀವಣ್ಣನಿಗೆ ಅನುಕಂಪವೂ ಅನುಮಾನವೂ ಒಟ್ಟೊಟ್ಟಿಗೆ ಮೂಡಿತು. ‘ಅರೇರೇ, ಏನೋ ನಾಣು…ಹೀಗಾಗಿಬಿಟ್ಟಿದ್ದೀಯಾ ಹುಷಾರಿಲ್ಲವನಾ…?’ ಎಂದು ಕೇಳಿಯೇ ಬಿಟ್ಟರು. ತಮ್ಮನ್ನು ಕಂಡ ಕೂಡಲೇ ಮಾವನ ಬಾಯಿಯಿಂದ ಹೊರಟ ಅಂಥ ಆತ್ಮೀಯತೆಯ ಮಾತುಗಳು ನಾರಾಯಣರೊಳಗಿನ ಹತಾಶೆಯ ತಂತಿಯನ್ನು ರಪ್ಪನೆ ಮೀಟಿದಂತಾಯಿತು. ‘ಅಯ್ಯೋ, ಮಾವಾ ನನ್ನ ಅವಸ್ಥೆಯನ್ನು ಏನೂಂತ ಕೇಳುತ್ತೀರಿ…? ಜೀವನದಲ್ಲಿ ಎಷ್ಟೊಂದು ಕಷ್ಟಪಟ್ಟು ಮೇಲೆ ಬಂದವನು ನಾನು ಅಂತ ನಿಮಗೆಲ್ಲರಿಗೂ ಗೊತ್ತುಂಟಲ್ಲವಾ? ನನ್ನ ಹೆತ್ತವರ ಅಂದಿನ ಬಡತನಕ್ಕೂ ನಾನು ಬೆಳೆದು ಬಂದ ರೀತಿಗೂ ಏನಾದರೂ ಸಂಬಂಧವಿದೆ ಅಂತ ನಿಮಗಾದರೂ ಅನಿಸುತ್ತದಾ ಹೇಳಿ!’ ಎಂದು ತಮ್ಮ ಕಳೆಗುಂದಿದ ಕಣ್ಣುಗಳಲ್ಲಿ ಹಿಡಿತ ತಪ್ಪಿ ತೊಟ್ಟಿಕ್ಕುತ್ತಿದ್ದ ನೀರನ್ನು ಬೈರಾಸಿನಿಂದ ಒರೆಸಿಕೊಳ್ಳುತ್ತ ಅಂದರು. ಮಾವನಿಗೆ ಸೋದರಳಿಯನ ಅಳು ನೋಡಿ ಇನ್ನೂ ಸೋಜಿಗವಾಯಿತು. ಹೌದು ಅವರು ನಾರಾಯಣರ ಕುಟುಂಬದ ಬಡತನವನ್ನು ಕಣ್ಣಾರೆ ಕಂಡಿದ್ದರು. ಅಲ್ಲದೇ ಅಂದು ಅವರ ಕುಟುಂಬವೂ ಅನುಕೂಲಸ್ಥವಾಗಿತ್ತು. ಹಾಗಾಗಿ ಆವತ್ತು ಅವರು ನಾರಾಯಣರ ಕುಟುಂಬಕ್ಕೆ ಸಹಾಯ ಮಾಡಲು ಮನಸ್ಸು ಮಾಡಿದ್ದರೆ ನೈಜ ಬಂಧುತ್ವವನ್ನು ಇನ್ನಷ್ಟು ಗಟ್ಟಿಯಾಗಿ ಉಳಿಸಿಕೊಳ್ಳಬಹುದಿತ್ತು. ಆದರೆ, ‘ಉಳ್ಳವರ ಬಹುತೇಕ ಸಹಾಯ ತಮ್ಮ ಪ್ರತಿಷ್ಠೆಯ ಪ್ರದರ್ಶನಕ್ಕಾಗಿಯೇ ಇರುತ್ತದೆ. ಅದು ನಿಜವಾದ ಬಡತನವನ್ನೆಂದೂ ಅಳಿಸುವ ಪ್ರಯತ್ನ ಮಾಡದು!’ ಎಂಬ ಮಾತಿನಂತೆಯೇ ಸಂಜೀವಣ್ಣನ ಮನಸ್ಥಿತಿಯೂ ಇತ್ತು. ಆದ್ದರಿಂದ ಅವರು, ‘ಅವರೇನೂ ತಮ್ಮ ಹತ್ತಿರದ ಸಂಬಂಧಿಗಳಲ್ಲ. ಅವರ ರಕ್ತ ಸಂಬಂಧಿಕರೇ ಸುಮಾರು ಜನ ಅನುಕೂಲಸ್ಥರಿದ್ದು ಅವರೆಲ್ಲರೂ ಸುಮ್ಮನಿರುವಾಗ ನಾವೇಕೆ ಮೇಲೆ ಬಿದ್ದುಕೊಂಡು ಹೋಗಿ ಉದ್ಧಾರ ಮಾಡಬೇಕು?’ ಎಂಬ ಧೋರಣೆಯಿಂದ ದೂರವೇ ಇದ್ದವರು. ಹೀಗೆ ಅಂದು ನಾರಾಯಣರ ಎಲ್ಲ ಬಂಧುಗಳೂ ಅವರ ಕುಟುಂಬವನ್ನು ಅಸ್ಪ್ರಶ್ಯರಂತೆ ಕಾಣುತ್ತ ದೂರದಿಂದಲೇ ಸಂಬಂಧವನ್ನು ನಿಭಾಯಿಸಿಕೊಂಡು ಬಂದಿದ್ದರು. ಆದರೆ ನಾರಾಯಣರು ಬೆಳೆದು ಬ್ಯಾಂಕ್ ಅಧಿಕಾರಿಯಾಗಿ ಹೆಸರು ಮಾಡಿದ ಮೇಲೆ ಇತರರಂತೆ ಸಂಜೀವಣ್ಣನ ಧೋರಣೆಯೂ ಬದಲಾಯಿತು ಮತ್ತು ವಯೋಸಹಜ ಪ್ರಬುದ್ಧತೆಯೂ ಅವರನ್ನು ಮೃದುವಾಗಿಸಿತ್ತು. ಪರಿಣಾಮ, ಅವರು ಈಗೀಗ ರಕ್ತ ಸಂಬಂಧಿಗಳೊಂದಿಗೆ ಹೆಚ್ಚೆಚ್ಚು ಅನ್ಯೋನ್ಯವಾಗಿರಲು ಪ್ರಯತ್ನಿಸುತ್ತ ಎಲ್ಲರ ಮನೆಗಳಿಗೂ ಆಗಾಗ ಭೇಟಿ ನೀಡುತ್ತ ಒಂದು ಮಟ್ಟದ ಬಾಂಧವ್ಯವನ್ನು ಹೊಸದಾಗಿ ಚಿಗುರಿಸುವಲ್ಲಿ ಸಫಲರಾಗಿದ್ದಾರೆ. ಇಂಥ ಸಂಜೀವಣ್ಣ ಇಂದು ನಾರಾಯಾಣರ ಮಾತಿಗೆ, ‘ಹೌದು ಹೌದು ಮಾರಾಯಾ ನಿನ್ನ ಅಪ್ಪ, ಅಮ್ಮ ಆವಾಗ ಇದ್ದ ಪರಿಸ್ಥಿತಿಯನ್ನು ನೆನೆದರೆ ನೀನಿಷ್ಟೊಂದು ಎತ್ತರಕ್ಕೆ ಬೆಳೆಯುತ್ತಿ ಅಂತ ನಾವ್ಯಾರೂ ಕನಸು ಮನಸಿನಲ್ಲೂ ಎಣಿಸಲಿಲ್ಲ ನೋಡು!’ ಎಂದು ತಾವೂ ಅವರ ಮಾತನ್ನು ಅನುಮೋದಿಸಿದರು. ಅಷ್ಟು ಕೇಳಿದ ನಾರಾಯಣರು ಸ್ವಲ್ಪ ಗೆಲುವಾದರು. ‘ಹ್ಞೂಂ, ಹೌದಲ್ಲವಾ ಮಾವ. ಹಾಗಿರುವಾಗ ಅಂಥ ಸ್ಥಾನಮಾನವನ್ನು ನಾನು ಗಳಿಸಲು ಮತ್ತದನ್ನು ಉಳಿಸಿಕೊಳ್ಳಲು ಜೀವನದ ಎಂಥೆಂಥ ಸಂಗತಿಗಳನ್ನೂ ಸುಖ ಸಂತೋಷಗಳನ್ನೂ ಕಣ್ಣೆತ್ತಿಯೂ ನೋಡದೆ ಇಷ್ಟು ವರ್ಷಗಳ ಕಾಲ ರಾಜ ಸಿಪಾಯಿಯಂತೆ ಬದುಕಿದೆನೆಂದರೆ ಸಣ್ಣ ವಿಷಯವಾ ಹೇಳಿ? ಆದರೆ ಇಷ್ಟೆಲ್ಲ ಆದ ಮೇಲೆ ರಿಟಾಯರ್ಮೆಂಟ್ನ ನಂತರವಾದರೂ ಸ್ವಲ್ಪ ನೆಮ್ಮದಿಯಿಂದ ಜೀವನ ಸಾಗಿಸುವ ಎಂದು ಕನಸು ಕಂಡಿದ್ದರೆ ಇದೇನಾಗಿ ಹೋಯಿತು ಮಾವಾ! ಇಷ್ಟರವರೆಗೆ ಎಲ್ಲಿದ್ದವೋ ಹಾಳು ಕಾಯಿಲೆಗಳೆಲ್ಲ ನನ್ನನ್ನು ನುಂಗಿ ನೀರು ಕುಡಿಯುತ್ತಿವೆಯಲ್ಲ? ಇವು ನನ್ನನ್ನು ಹಿಂಸಿಸುವುದನ್ನು ನೋಡಿದರೆ ಬಹಳ ಬೇಗನೇ ಸತ್ತು ಹೋಗುತ್ತೇನೇನೋ ಅಂತ ಟೆನ್ಷನ್ ಆಗಿಬಿಟ್ಟಿದೆ!’ ಎಂದು ನಾರಾಯಣರು ನೋವು ತೋಡಿಕೊಂಡರು. ಅವರ ಮಾತಿಗೆ ಸಂಜೀವಣ್ಣ ಮೌನವಾಗಿ ತಲೆಯಲ್ಲಾಡಿಸಿದರು. ಅಷ್ಟರಲ್ಲಿ ಗಿರಿಜಕ್ಕ ಇಬ್ಬರಿಗೂ ಕಾಫಿ ತಂದು ಕೊಟ್ಟು ತಾನೂ ಗಂಡನ ಪಕ್ಕದಲ್ಲಿ ಕುಳಿತವರು, ‘ಅಲ್ಲ ಸಂಜೀವಣ್ಣಾ, ಇವರ ಕಥೆ ಏನು ಮಾರಾಯ್ರೇ…! ಯಾವಾಗಲೂ ಇವರಿಗೆ ಬರೇ ಕಾಯಿಲೆಯದ್ದೇ ಚಿಂತೆಯಾಗಿಬಿಟ್ಟಿದೆಯಲ್ಲ? ಆ ಸಣ್ಣಪುಟ್ಟ ರೋಗಗಳು ನನಗೂ ಇವೆ. ಆದರೆ ನಾನ್ಯಾಕೆ ಟೆನ್ಷನ್ ಮಾಡಿಕೊಳ್ತಾ ಇಲ್ಲ! ಅದಾದರೂ ಅರ್ಥವಾಗಬೇಕಲ್ಲವಾ ಇವರಿಗೆ? ದಯವಿಟ್ಟು ಹೆಚ್ಚು ಚಿಂತೆ ಮಾಡ್ಕೋಬೇಡಿ. ಅದರಿಂದ ಇರುವ ಆರೋಗ್ಯವೂ ಕೆಟ್ಟು ಹೋಗುತ್ತದೆ. ಅಂತ ನಂಗಂತೂ ಹೇಳಿ ಹೇಳಿ ಸಾಕಾಗಿ ಹೋಯ್ತು. ಇನ್ನು ನೀವೇ ಇವರಿಗೆ ಬುದ್ಧಿ ಹೇಳಬೇಕಷ್ಟೇ!’ ಎಂದರು ನೋವಿನಿಂದ. ‘ಆಯ್ತು, ಆಯ್ತಮ್ಮಾ. ನಾನೇ ಹೇಳುತ್ತೇನೆ. ಇನ್ನು ನೀನೂ ಮಂಡೆಬಿಸಿ ಮಾಡ್ಕೊಂಡು ನಿನ್ನ ಆರೋಗ್ಯವನ್ನೂ ಕೆಡಿಸಿಕೊಳ್ಳಬೇಡ. ಒಳಗೆ ನಡಿ. ಏನಾದರೂ ಅಡುಗೆ ಮಾಡು. ಊಟ ಮಾಡಿಕೊಂಡೇ ಹೋಗುತ್ತೇನೆ’ ಎಂದು ಸಂಜೀವಣ್ಣ ಹಿರಿಯನ ಅಧಿಕಾರದಿಂದ ಆಜ್ಞಾಪಿಸಿದವರು ಸೋದರಳಿಯನ ಸಮಸ್ಯೆಗೂ ಅದಾಗಲೇ ಪರಿಹಾರವನ್ನು ಹುಡುಕಿಯಾಗಿತ್ತು. ಅದನ್ನು ತಿಳಿಸಲೂ ಇದೇ ಸುಸಂದರ್ಭವೆಂದುಕೊಂಡವರು, ‘ನೋಡು ನಾಣೂ ನಿನಗಿಂತ ಹಿರಿಯನಾಗಿ ಒಂದೆರಡು ಮಾತು ಹೇಳುತ್ತೇನೆ. ಅದನ್ನು ತಾಳ್ಮೆಯಿಂದ ಕೇಳಬೇಕು ನೀನು…?’ ಎಂದರು ಗಂಭೀರವಾಗಿ. ‘ಆಯ್ತು ಮಾವ, ಹೇಳಿ…!’ ಎಂದರು ನಾರಾಯಣರೂ ಆಸಕ್ತಿಯಿಂದ. ‘ನಮ್ಮ ದೇಹದಲ್ಲಿ ತ್ರಾಣ ಇರುವಾಗ ಮತ್ತು ರಕ್ತವೂ ಬಿಸಿಯಿರುವಾಗ ನಾವು ಯಾರು? ಈ ಭೂಮಿಯಲ್ಲಿ ಯಾಕೆ ಹುಟ್ಟಿದೆವು? ಮನುಷ್ಯ ಜೀವನ ಎಂದರೇನು? ನಮ್ಮ ಬದುಕಿನಲ್ಲಿ ತಾಪತ್ರಯಗಳು ಯಾಕೆ ಬರುತ್ತವೆ? ಸಂಸಾರ, ಬಂಧು ಬಳಗ, ಆಸೆ ದುರಾಸೆಗಳಿಗೆ ಅರ್ಥವೇನು? ಇಲ್ಲಿ ಯಾವುದು ಸತ್ಯ ಯಾವುದು ಮಾಯೆ? ಸತ್ತ ನಂತರ ಎಲ್ಲಿಗೆ ಹೋಗುತ್ತೇವೆ?’ ಎಂಬ ಯಾವ ಪ್ರಶ್ನೆಗಳೂ ನಮ್ಮಲ್ಲಿ ಹುಟ್ಟುವುದಿಲ್ಲ ಅಥವಾ ಹುಟ್ಟಿದರೂ ಅದಕ್ಕೆ ತಕ್ಕ ಉತ್ತರವೂ ನಮ್ಮ ಆಗಿನ ತಿಳಿವಿಗೆ ಸಿಗುವುದಿಲ್ಲ. ಹಾಗಾಗಿ ಸಮಾಜದ ಸಂಸ್ಕಾರ ಸಂಪ್ರದಾಯಗಳಿಗೆ ತಕ್ಕಂತೆ ಬದುಕನ್ನು ರೂಪಿಸಿಕೊಳ್ಳುತ್ತ ಹೋಗುತ್ತೇವೆ. ಆ ಪ್ರಯತ್ನದಲ್ಲಿ ಗೆಲ್ಲುತ್ತೇವೋ ಸೋಲುತ್ತೇವೋ ನಮಗೆ ಮುಖ್ಯವಾಗುವುದಿಲ್ಲ. ಆದರೆ ಕೊನೆಯಲ್ಲಿ ನಮ್ಮ ದಾರಿಯೇ ಸರಿ ಎಂಬ ನಿರ್ಧಾರಕ್ಕೆ ಬಂದು ಜೀವನ ಇಷ್ಟೇ ಎಂಬ ಭ್ರಮೆಯಲ್ಲಿ ಬದುಕುತ್ತೇವೆ. ಅಂಥ ಜೀವನದ ಅನುಭವಗಳಿದಿಂದಾಗಿ ಮುಂದೆ ಬರುವ ವೃದ್ಧಾಪ್ಯದ ಬಗ್ಗೆಯಾಗಲಿ ದೇಹವನ್ನು ಕೊನೆ ಮುಟ್ಟಿಸಲು ಎಡತಾಕುವ ರೋಗರುಜಿನಗಳ ಕುರಿತಾಗಲಿ ಸರಿಯಾದ ತಿಳುವಳಿಕೆ, ಕಾಳಜಿ ನಮಲ್ಲಿ ಹೆಚ್ಚಿನವರಿಗಿರುವುದಿಲ್ಲ. ಆದರೆ ಕೊನೆಯವರೆಗೆ ಬದುಕಿದ ಎಲ್ಲರಿಗೂ ಮುದಿತನ ಬಂದೇ ಬರುತ್ತದಲ್ಲ! ಒಂದು ದಿನ ಅದು ಬಂದು ಇನ್ನೇನು ಎಲ್ಲವೂ ಮುಗಿಯುತ್ತದೆ ಎಂಬಷ್ಟರಲ್ಲಿ ಆ ಕಠೋರ ಸತ್ಯವನ್ನು ಸ್ವೀಕರಿಸಲಾಗದೇ, ಎದುರಿಸಲಾಗದೇ ಸಣ್ಣ ಮಕ್ಕಳಂತೆ ಕೈಕಾಲು ಬಡಿದುಕೊಂಡು ಅಳತೊಡಗುತ್ತೇವೆ ಮತ್ತು ಕೊನೆಯಲ್ಲಿ ಮನಸ್ಸಿನ ಸ್ವಾಸ್ಥ್ಯವನ್ನು ಕಳೆದುಕೊಂಡು ನರಳುತ್ತೇವೆ. ಇಂಥ ಅವಸ್ಥೆಯಲ್ಲಿ ಒದ್ದಾಡುವವನು ನಿನ್ನೊಬ್ಬನೇ ಅಲ್ಲ ಮಾರಾಯಾ. ನನ್ನನ್ನೂ ಸೇರಿಸಿ ಹೆಚ್ಚಿನ ಮುದುಕರ ಅವಸ್ಥೆಯೇ ಹೀಗಾಗಿ ಬಿಟ್ಟಿದೆ. ಇವುಗಳ ಜೊತೆಯಲ್ಲಿ ಇನ್ನೊಂದು ದೊಡ್ಡ ದುರಂತವೆಂದರೆ ಸಾಯುವವರೆಗೂ ನಾವು ಈ ಜೀವನ ನಶ್ವರ ಎಂಬುದನ್ನು ಒಪ್ಪಿಕೊಳ್ಳುವುದೇ ಇಲ್ಲ! ಆದ್ದರಿಂದ ನೀನು ಈ ಎಲ್ಲಾ ವಿಚಾರಗಳನ್ನು ಅರ್ಥ ಮಾಡಿಕೊಂಡೆಯೆಂದರೆ ನಿನ್ನ ರೋಗರುಜಿನವೆಲ್ಲವೂ ಅರ್ಧಕ್ಕರ್ಧ ಗುಣವಾಗುತ್ತವೆ ನೋಡು!’ ಎಂದು ಗಂಭೀರವಾಗಿ ಹೇಳಿದರು. ಆದರೆ ಇನ್ನೂ ಕಣ್ಕಾಪು ಕಿತ್ತೊಗೆಯದ ನಾರಾಯಣರ ಮನಸ್ಸೆಂಬ ಮುದಿ ಕುದುರೆಗೆ ಆ ವಿಚಾರವು ಸ್ವಲ್ಪವೂ ಅರ್ಥವಾಗಲಿಲ್ಲ. ‘ಏನೋ ಮಾವಾ, ನನಗೊಂದೂ ತಿಳಿಯುವುದಿಲ್ಲ!’ ಎಂದು ಉದಾಸೀನ ತಾಳಿದರು. ಅವರ ಪ್ರತಿಕ್ರಿಯೆಯನ್ನು ಕಂಡ ಸಂಜೀವಣ್ಣನಿಗೆ ತಾನು ಬೋರ್ಗಲ್ಲ ಮೇಲೆ ನೀರೆರೆದಂತಾಯಿತಲ್ಲ ಎಂದೆನ್ನಿಸಿತು. ಆದರೂ ಸೋಲೊಪ್ಪಿಕೊಳ್ಳದೆ, ‘ಹಾಗೆಲ್ಲ ನಿರಾಶೆ ಮಾಡಿಕೊಳ್ಳಬಾರದು ಮಾರಾಯಾ. ನಿನ್ನ ತೊಂದರೆಗಳಿಗೆಲ್ಲಾ ಪರಿಹಾರ ಇದ್ದೇ ಇದೆ. ಸ್ವಲ್ಪ ತಾಳ್ಮೆಯಿಂದಿರು!’ ಎಂದು ಮೃದುವಾಗಿ ಅಂದವರು, ‘ಅದೆಲ್ಲ ಹಾಗಿರಲಿ ಮಾರಾಯಾ… ನೀನು ನಮ್ಮ ಮನೆತನದ ದೈವಗಳನ್ನು ನೋಡಲು ಬರದೆ ಎಷ್ಟು ವರ್ಷವಾಯಿತು ಹೇಳು? ಇಷ್ಟು ಕಾಲ ದುಡಿಮೆ ದುಡ್ಡು ಸಂಸಾರ ಅಂತ ಓಡುತ್ತಲೇ ಇದ್ದೆ. ಆದರೆ ಈಗ ನೋಡಿದರೆ ಅದರಿಂದ ನಿಜವಾದ ಸುಖ ಏನು ಪಟ್ಟೆ ಹೇಳು? ಅಷ್ಟಲ್ಲದೇ ನಿನ್ನ ಇಲ್ಲಿಯವರೆಗಿನ ದೊಡ್ಡ ಗೆಲುವಿಗೆ ಕಾರಣವಾದವರು ಯಾರು ಅಂತ ಒಮ್ಮೆಯಾದರೂ ಯೋಚಿಸಿದ್ದೀಯಾ? ಹತ್ತಾರು ತಲೆಮಾರಿನಿಂದಲೂ ನಮ್ಮ ಸಂತಾನವನ್ನು ಕಾಪಾಡಿಕೊಂಡು ಬಂದಂಥ ನಮ್ಮ ದೈವ, ಭೂತಗಳೇ ನಿನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದು ಅಂತ ಇನ್ನಾದರೂ ಅರ್ಥ ಮಾಡಿಕೋ ಮಾರಾಯಾ! ನೀನು
ಉತ್ತರ ಹುಡುಕುವ ಹಠವಾದರೂ ಯಾಕ …?
ಜೀವನ ಸಣ್ದು.. ಉತ್ತರ ಹುಡುಕುವ ಹಟನಾದ್ರೂ ಯಾಕ.. ಪ್ರಶ್ನೆಗಳಿಲ್ಲದೆ ಆನಂದಿಸೂನಂತ..!
ಉತ್ತರ ಹುಡುಕುವ ಹಠವಾದರೂ ಯಾಕ …? Read Post »
ಚಾರ್ಲಿ ಚಾಪ್ಲಿನ್
ದಿ ಟ್ರಂಪ್’, ‘ಮಾಡರ್ನ್ ಟೈಮ್ಸ್’, ‘ದಿ ಗ್ರೇಟ್ ಡಿಕ್ಟೇಟರ್’, ‘ಸಿಟಿ ಲೈಟ್ಸ್’, ’ದಿ ಸರ್ಕಸ್’, ‘ಗೋಲ್ಡ್ ರಷ್’ ಮುಂತಾದ ಚಿತ್ರಗಳಲ್ಲಿ ಆತ ನಡೆದದ್ದು, ಕುಣಿದದ್ದು, ಪ್ರೇಮಿಸಿದ್ದು, ಆಟ ಆಡಿದ್ದು, ಪೆಚ್ಚನಂತೆ ನಕ್ಕದ್ದು, ಹೀಗೆ ಆತ ಚಿತ್ರದಲ್ಲಿ ಮಾಡಿದ್ದು ಮತ್ತು ಮಾಡದೆ ಸುಮ್ಮನಿದ್ದದು ಎಲ್ಲವೂ ಪ್ರಿಯವೋ ಪ್ರಿಯ
ಪಾಸಿಟಿವ್ ಆಗಿರೋಣ
ಈ ಸಮಯದಲ್ಲಿ ಆಸ್ಪತ್ರೆಯ ಸಿಬ್ಬಂದಿ ಗಳು ಮತ್ತು ಮನೆ ಮಂದಿಯೆಲ್ಕ ಹಿರಿಯರನ್ನು ಅತೀ ಕಿರಿಯ ಮಕ್ಕಳಂತೆ ನೋಡಿಕೊಳ್ಳುವುದು ಕೂಡಾ ಅಷ್ಟೇ ಮುಖ್ಯ. ಹಿರಿಯರಾಗಲಿ, ಕಿರಿಯರಾಗಲಿ ‘ಪಾಸಿಟಿವ್ ‘ಬಂದಾಗ ಪಾಸಿಟಿವ್ ಆಗಿರುವುದು ಇನ್ನೂ ಮುಖ್ಯ.
ವೇದೋಕ್ತ ಪ್ರಕರಣ
ಶಾಹು ಮಹಾರಾಜರ ಇಂತಹ ಕ್ರಮಗಳ ವಿರುದ್ಧ ರಾಜೋಪಾಧ್ಯೆ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಿದನಾದರೂ ಎಲ್ಲಾ ನ್ಯಾಯಾಲಯಗಳೂ ಸಂಸ್ಥಾನವೊಂದರ ರಾಜನಾಗಿ ಶಾಹು ಮಹಾರಾಜರ ಈ ಆಜ್ಞೆ ನ್ಯಾಯಸಮ್ಮತ ಎಂದು ಮಹಾರಾಜರ ಕ್ರಮಗಳನ್ನು ಎತ್ತಿಹಿಡಿದವು.
ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಮೀಸಲಾತಿ
ದೇಶದ ನೂರಾರು ಮಹಾರಾಜರಲ್ಲಿ ಕೇವಲ ನಾಲ್ವರು ಮಾತ್ರ ದಲಿತ ಹಾಗೂ ಅಸ್ಪೃಶ್ಯರಿಗೆ ಮೀಸಲಾತಿ ನೀಡಿದ್ದು, ಇವರುಗಳಿಗೆ ಪ್ರೇರಣೆ ಆಗಿದ್ದು ನಾಲ್ವಡಿ ಕೃಷ್ಣ ರಾಜ ಒಡೆಯರ್ ರವರು.ಸಮಾನತೆಗಾಗಿ ಶ್ರಮಿಸಿದರು. ಅವರ ಕೊಡುಗೆ ಅಪಾರ.
ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಮೀಸಲಾತಿ Read Post »








