ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ತಾಯಿಯೇ ಮಕ್ಕಳನ್ನು ಅಳಿಸಬಹುದೇ?

ಆದರೆ ಅವರನ್ನು ಈಗಲೇ ತಯಾರು ಮಾಡೋದ್ರಲ್ಲಿ ತಪ್ಪೇನಿದೆ? ಇವತ್ತು ತಿದ್ದಿಕೊಳ್ಳದಿದ್ದರೆ ಈಗ ನೋಡಿ ನಾನು ಅಳ್ತಿದ್ದೀನಲ್ಲ, ಹಾಗೆ ಮುಂದೆ ಅವರೂ ಹಾಗೇ ಅಳ್ತಾರೆ ಅಷ್ಟೇ. ತಾಯಿಯೇ ಮಕ್ಕಳನ್ನು ಅಳಿಸುವುದೇ?

ತಾಯಿಯೇ ಮಕ್ಕಳನ್ನು ಅಳಿಸಬಹುದೇ? Read Post »

ಇತರೆ

ವಾರ್ಷಿಕ ವಿಶೇಷಾಂಕ

‘ಸಂಗಾತಿ’ ಕನ್ನಡ ಸಾಹಿತ್ಯದ ವೆಬ್ ಪತ್ರಿಕೆ ಇದೇ ಅ.೨೦ ಕ್ಕೆ ಎರಡು ವರ್ಷ ಮುಗಿಸಿ,ಮೂರನೇ ವಸಂತಕ್ಕೆ ಅಡಿಯಿಡುತ್ತಿದೆ
ಈ ಎರಡು ವರ್ಷಗಳಲ್ಲಿ ಸಂಗಾತಿ ಪತ್ರಿಕೆ ಕವಿತೆ, ಕತೆ, ಜೀವನ ಚರಿತ್ರೆ, ಅಂಕಣ ಬರಹಗಳ ಮೂಲಕ ಕನ್ನಡ ಸಾಹಿತ್ಯದ ವರ್ತಮಾನದ ದನಿಯನ್ನು ಕಟ್ಟಿಕೊಟ್ಟಿದೆ. ನಾಡಿನ ಹಿರಿಯರು, ಕಿರಿಯರು ಸಂಗಾತಿಗೆ ಬರೆದಿದ್ದಾರೆ.
ಎರಡು ವರ್ಷದ ಪಯಣದ ಈ ಸಂದರ್ಭದಲ್ಲಿ ಪತ್ರಿಕೆ ವಿಶೇಷ ಸಂಚಿಕೆ ತರಲು ತಿರ್ಮಾನಿಸಿದೆ

ವಾರ್ಷಿಕ ವಿಶೇಷಾಂಕ Read Post »

ಇತರೆ

ಪ್ರಿಯ ಬಾಪುವಿಗೊಂದು ಪತ್ರ

ಹೋರಾಟ, ಜೈಲು, ಉಪವಾಸ, ಬರಹ, ತ್ಯಾಗ- ಅಬ್ಬಬ್ಬಾ! ಬರೆಯುತ್ತಾ ಹೋದರೆ ಎಂದೂ ಮುಗಿಯದಿರುವ ಅಗಣಿತ ಅದ್ಭುತ ನೀವು. ನಿಮ್ಮ ಬದುಕಿನ ರೀತಿ, ನೀತಿ, ಸಿದ್ಧಾಂತಗಳು ಇಂದಿಗೂ ಚಾಲ್ತಿಯಲ್ಲಿರುವುದನ್ನು ಕಂಡಾಗ ನನ್ನ ಮನಸ್ಸು ಹೇಳುತ್ತದೆ- ‘ಬಾಪು, ನೀವು ಎಂದೆಂದಿಗೂ ಅಮರ.’

ಪ್ರಿಯ ಬಾಪುವಿಗೊಂದು ಪತ್ರ Read Post »

ಇತರೆ, ದಾರಾವಾಹಿ

ಆಶ್ಚರ್ಯ! ತನ್ನ ಕೈಕಾಲುಗಳನ್ನು ಯಾರೋ ಬಿಗಿಯಾಗಿ ಕಟ್ಟಿ ಹಾಕಿರುವಂತೆ ಭಾಸವಾಗುತ್ತದೆ. ಜೋರಾಗಿ ಅರಚಿಕೊಳ್ಳುತ್ತಾನೆ. ಆದರೂ ಬಿಡುಗಡೆ ದೊರಕುವುದಿಲ್ಲ. ವಿಧಿಯಿಲ್ಲದೆ ಮರಳಿ ತನ್ನ ಕುಟುಂಬವನ್ನು ತಬ್ಬಿಕೊಂಡು ಮುದುಡುತ್ತಾನೆ.

Read Post »

ಇತರೆ

ಪತ್ರಕರ್ತ ಗಾಂಧೀಜಿ

ಪತ್ರಿಕೋದ್ಯಮ ನನಗೆ ಶಿಕ್ಷಣ ಇದ್ದಂತೆ. ನನ್ನೊಳಗೆ ಇಣುಕಿ ನೋಡಿ ನನ್ನ ದೌರ್ಬಲ್ಯಗಳನ್ನು ಕಂಡುಕೊಳ್ಳುವುದು ಸಾಧ್ಯವಾಗುತ್ತದೆ. ಚುರುಕಾದ ಪದಪ್ರಯೋಗ, ಕಠಿಣ ವಿಶೇಷಣ ಬಳಸಬೇಕೆಂದು ನನ್ನ ಕೋಪ ಹಾಗೂ ಪ್ರತಿಷ್ಠೆ ಆಜ್ಞಾಪಿಸುತ್ತದೆ. ಕಳೆಯನ್ನೆಲ್ಲಾ ಕಿತ್ತುಹಾಕಲು ಬರವಣಿಗೆ ಒಂದು ಸಾಧನ ಎನ್ನುತ್ತಿದ್ದ ಗಾಂಧೀಜಿ ಒಬ್ಬ ಮಹಾಗದ್ಯ ಶಿಲ್ಪಿ

ಪತ್ರಕರ್ತ ಗಾಂಧೀಜಿ Read Post »

ಇತರೆ

ಶಾಸ್ತ್ರೀಜಿ ಎಂಬ ಧ್ರುವ ತಾರೆಯ ನೆನಪಿನಲ್ಲಿ…

ಸಾದಾರಣ ರೂಪು, ಸಾದಾರಣ ಉಡುಪಿನ, ಕುಳ್ಳಗಿನ ಆಕಾರದ ದೇಶದ ಪ್ರಧಾನಿಯೆನಿಸಿದ ವ್ಯಕ್ತಿಯೊಬ್ಬರೂ ತುಸು ದುಗುಡದಿಂದ ಮನೆಯಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದಾರೆ. ಅವರ ಮನದಲ್ಲಿ ನೂರಾರು ಚಿಂತೆಗಳಿವೆ. ‘ ಹತ್ಯಾರೋಂ ಕಾ ಜವಾಬ್, ಹತ್ಯಾರೋಂಸೆ ದೇಂಗೆ..

ಶಾಸ್ತ್ರೀಜಿ ಎಂಬ ಧ್ರುವ ತಾರೆಯ ನೆನಪಿನಲ್ಲಿ… Read Post »

ಇತರೆ

ಗಾಂಧಿ ಜಯಂತಿ ವಿಶೇಷ ಮಗುವಾಗಿ ಬಿಟ್ಟ ಗಾಂಧಿ ಅಜ್ಜನ ಫೋಟೋ ಅಲ್ಲಿಇಟ್ಟಿದ್ರಪ್ಪ ಹಾಗೆಹೂಗಳ ಮಾಲೆ ಎಲ್ಲ ತಂದುತುಂಬಿದ್ರಪ್ಪ ಹೀಗೆ ಹಣ್ಣು ಬೆಲ್ಲ ಇಟ್ಟಿದ್ರಲ್ಲಿಘಮ ಘಮ ಕಡ್ಡಿಯ ಕಂಪುಪುಟ್ಟ ಹಾಗೇ ನೋಡ್ತಾ ಇದ್ದಹತ್ತಿತು ಅವನಿಗೆ ಜೊಂಪು ಹಣ್ಣು ಹೂವು ಯಾವುದು ಮುಟ್ಟದೆಗಾಂಧಿ ತಾತ ಬಂದಪುಟ್ಟನ ಹತ್ತಿರ ಏನೋ ಹೇಳುತಬಾರೋ ಜೊತೆಯಲಿ ಎಂದ ತಾತನ ನಡಿಗೆ ಎಷ್ಟು ಜೋರುಪುಟ್ಟುಗೆ ಓಡುವ ಆಟಅನಾತ ಅಜ್ಜಿಯ ಜೋಪಡಿ ಹೊಕ್ಕುಕುಡಿದನು ನೀರಿನ ಲೋಟ ಅಲ್ಲಿಂದಿಲ್ಲಿಗು ಕೇಳುತ ಬಂದಗಿಡಗಳ ಬೆಳೆಸಿಲ್ಲೇನುಹೀಗೇ ಗಿಡಗಳ ಕಡಿಯುತ ಉಳಿದರೆನರಕವ ಕಟ್ಟುವ ಪ್ಲ್ಯಾನು ತಟ್ಟನೆ ಪುಟ್ಟುವ ನಿಲ್ಲಿಸಿ ಗಾಂಧಿಹೊರಟೇ ಬಿಟ್ಟ ಅತ್ತಕೆಸರಲಿ ಬಿದ್ದ ನಾಯಿಯ ಎತ್ತಿಬಿಸ್ಕೀಟ ಎರಡು ಇತ್ತ ಅಯ್ಯೋ ಅಯ್ಯೋ ಎಷ್ಟು ಹೊಲಸುಕಸದ ಗುಂಡಿ ರಸ್ತೆಕಸವನು ಹೆರಕಲು ಹೊರಟೇ ಬಿಟ್ಟಪುಟ್ಟನ ನಿಲ್ಲಿಸಿ ಮತ್ತೆ ಶಾಲೆಯ ವರೆಗೂ ಬಂದಿದ್ದಾಯ್ತುಹೋದ ಎಲ್ಲಿ ಈತಮಕ್ಕಳು ನೆಟ್ಟ ಗಿಡಗಳ ಮಧ್ಯಬಿಳಿಯ ಉಡುಗೆಯ ತಾತ ಮಕ್ಕಳ ಪ್ರೀತಿಯ ಗುರುಗಳು ಬಂದ್ರುಮಕ್ಕಳೇ ಅವರ ನೀತಿತಾತನೂ ಈಗ ಮಗುವಾಗಿ ಬಿಟ್ಟಅವನಿಗೂ ಅದುವೇ ಪ್ರೀತಿ. ——————                 ತಮ್ಮಣ್ಣ ಬೀಗಾರ.

Read Post »

ಇತರೆ

ಇರುಳೆಲ್ಲಾ ಮೋಜು ಮಸ್ತಿಮಾಡಿ ನಶೆಯಲಿ ಹೊರಳಾಡುವರು
ಹಗಲು ಉಪವಾಸ ಸತ್ಯಾಗ್ರಹದಲ್ಲಿ ಪಾಲುಗೊಂಡರು ನೋಡು

Read Post »

ಇತರೆ

ಭಾಷಾ ಕಲಿಕೆ

ಲೇಖನ ಭಾಷಾ ಕಲಿಕೆ ಗಣಪತಿ ಹೆಗಡೆ ಗುಡಿಯಾ ಖಾನಾ ಖಾಯಾ?’, ಸಾಯಂಕಾಲ ನಾಲ್ಕೂವರೆಗೆ ಮೊಮ್ಮಗಳನ್ನು ಟ್ರೋಲಿಯಲ್ಲಿ ಕೂಡ್ರಿಸಿ ಕೊಂಡು ಅಪಾರ್ಟ್ ಮೆಂಟಿನ ಸುತ್ತಲೂ ತಿರುಗಾಡಲು ತೆಗೆದುಕೊಂಡು ಹೋದಾಗ ಗೇಟಿನ ಬಾಗಿಲಿನಲ್ಲಿ ಕಾಯುತ್ತಿರುವ ಕಾವಲುಗಾರ ಮೊದಲು ನನ್ನ ಮೊಮ್ಮಗಳಲ್ಲಿ ಕೇಳುವುದು ಈ ವಾಕ್ಯ.  ಪಾಪ ಅವಳೇನು ಹೇಳಿಯಾಳು. ಹತ್ತು ತಿಂಗಳ ಎಳಗೂಸು ಅವಳು. ‘ತಿಂದಾತಾ’? ಅವನು ಕೇಳಿದ ಪ್ರಶ್ನೆ ಅವಳಿಗೆ ಅರ್ಥವಾಗಲಿ ಅಂತ ನಾನು ಅದನ್ನೇ ಕನ್ನಡದಲ್ಲಿ ಕೇಳುತ್ತಿದ್ದೆ. ಆಗ ‘ಹೂಂ’ ಎನ್ನುತ್ತಿದ್ದಳು. ಕಾವಲುಗಾರನಿಗೂ ತಾನು ಕೇಳಿದ ಪ್ರಶ್ನೆಗೆ ಉತ್ತರ ಸಿಕ್ಕಿದ ಸಮಾಧಾನ. ಈ ಅಪಾರ್ಟ್ಮೆಂಟಿನಲ್ಲಿ ಸುಮಾರು ಇನ್ನೂರು ಮನೆಗಳಿವೆ.   ಅಪಾರ್ಟ್ ಮೆಂಟ್ ಕರ್ನಾಟಕದಲ್ಲಿದ್ದ ಮಾತ್ರಕ್ಕೆ ಅಪಾರ್ಟ್ ಮೆಂಟಿನ ಭಾಷೆ  ಕನ್ನಡವೇ  ಆಗಬೇಕೆಂಬುದು ಯಾವ ನ್ಯಾಯ?  ಕನ್ನಡ, ತಮಿಳು, ತೆಲುಗು, ಕೊಂಕಣಿ, ತುಳು ಹಿಂದಿ ಭಾಷೆಯನ್ನು ಮಾತೃಭಾಷೆಯಾಗುಳ್ಳ ಜನರು ಸೌಹಾರ್ದಯುತರಾಗಿಯೇ ಇದ್ದಾರೆ ಇಲ್ಲಿ. ಅವರವರ ಮನೆಯವರಲ್ಲಿ ಪರಸ್ಪರ ಮಾತನಾಡುವಾಗ ಈ ಭಾಷಾ ವೈವಿಧ್ಯತೆಗಳನ್ನು ಗಮನಿಸಬಹುದು.  ಮೂರು ವರ್ಷಗಳನ್ನು ಕಳೆದ ಕೂಡಲೇ ಮಕ್ಕಳು ಪರಸ್ಪರ ಇಂಗ್ಲೀಷಿನಲ್ಲೇ ಮಾತನಾಡಿಕೊಳ್ಳುತ್ತಾರೆ. ಬಹುಶಃ ಇಲ್ಲಿ ವಾಸಿಸುವವರು ಮಧ್ಯಮ ಅಥವಾ ಮೇಲುಮಧ್ಯಮ ವರ್ಗದವರಾದುದರಿಂದ ಇಂಗ್ಲೀಷ್ ಮಾಧ್ಯಮದ ಹುಡುಗರಾದುದರಿಂದ ಇದು ಸಹಜ. ಆದರೆ ನಾವು ಅಜ್ಜ ಮತ್ತು  ಮೊಮ್ಮಗಳು ಕನ್ನಡದಲ್ಲಿಯೇ ಮಾತನಾಡಿಕೊಳ್ಳುವದರಿಂದ ಬಹುಶಃ  ನಾವು ಶುದ್ಧ ಕನ್ನಡಿಗರೆಂದು ಇಲ್ಲಿ ಓಡಾಡುವ ಮಕ್ಕಳಿಗೆ ಹಾಗೂ ಹಿರಿಯರಿಗೆ ಗುತ್ತಾಗಿದೆ. ಇಲ್ಲಿಯ ಮಕ್ಕಳು, ಮೊಮ್ಮಗಳ ಜೊತೆ ಕನ್ನಡದಲ್ಲಿ ಮಾತನಾಡಿ ಕೆಲವೊಮ್ಮೆ ನನ್ನ ಜೊತೆ ಇಂಗ್ಲೀಷಿಗೆ ವರ್ಗವಾಗಿ ಬಿಡುತ್ತಾರೆ. ಆಮೇಲೆ ನಾನು ಕನ್ನಡದಲ್ಲಿ ಮಾತನಾಡಿದಾಗ ನನ್ನಲ್ಲಿಯೂ ಕನ್ನಡದಲ್ಲಿಯೇ ಮಾತನ್ನು ಮುಂದುವರಿಸುತ್ತಾರೆ. ಕನ್ನಡ ಭಾಷೆ ಗುತ್ತಿಲ್ಲದ ಮಕ್ಕಳ ಜೊತೆ ನಾನು ಇಂಗ್ಲೀಷಿಗೆ ಜಾರುತ್ತೇನೆ. ಕೆಲವು ಯುವಕ/ಯುವತಿಯರಲ್ಲಿ, ಮಕ್ಕಳಲ್ಲಿ ಹಾಗೂ ವಯಸ್ಸಾದವರಲ್ಲಿ  ನಾನು ಮಾತನಾಡುವಾಗ ಹಿಂದಿ ಅಥವಾ ಇಂಗ್ಲೀಷ್ ಬಳಸದೆ ಅವರು ಬೇರೆ ಭಾಷೆಯಲ್ಲಿ ಮಾತನಾಡಲು ತೊಡಗಿದಾಗಲೂ ನಾನು ಉದ್ದೇಶಪೂರ್ವಕವಾಗಿ ಕನ್ನಡದಲ್ಲಿಯೇ ಉತ್ತರಿಸತೊಡಗಿದೆ. ಬಹಳಷ್ಟು ಜನರು ‘ಅರ್ಥವಾಗುವ ಕನ್ನಡದಲ್ಲಿ’ ಮಾತನಾಡತೊಡಗಿದರು. ಅವರು ಮೊಮ್ಮಗಳ ಜೊತೆಯಲ್ಲಿಯೂ ಕನ್ನಡವನ್ನೇ ಬಳಸುತ್ತಿದ್ದರು. ಕೆಲವೇ ಹಿರಿಯ ಜೀವರಿಗೆ ಅವರ ಮಾತೃಭಾಷೆ ಬಿಟ್ಟು ಬೇರೆ ಭಾಷೆ ಬರುವದಿಲ್ಲವೋ ಏನೋ? ಮೊಮ್ಮಗಳ ಜೊತೆ ಕೇವಲ ಹಾಯ್/ ಬಾಯ್ ಅಂತ ಕೈಯಾಡಿಸುತ್ತಿದ್ದರು. ಅಷ್ಟೇ. ಉಳಿದ ಭಾಷಿಗರೂ  ಮೊಮ್ಮಗಳ ಜೊತೆ ಹೈ, ಬಾಯ್, ಬೇಬಿ ಮುಂತಾದ ಒಂದೆರಡು ಅಕ್ಷರಗಳಿಂದಾದ ಶಬ್ದಗಳನ್ನು ಬಳಸಿ ಮಾತನಾಡುತ್ತಾರೆ. ಮೊಮ್ಮಗಳು ಕೈ ಬೀಸಿ ಹಾಯ್ ಅಂತ ಹೇಳಿ ಪ್ರತಿಕ್ರಿಯಿಸತ್ತಾಳೆ ಅಷ್ಟೇ. ವಯಸ್ಸಾದ ಜೋಡಿಯನ್ನು ನೋಡಿದರೆ ಅವರ ಮಾತೃಭಾಷೆ ಯಾವುದು ಅಂತ ಗುತ್ತಾಗಿಬಿಡುತ್ತದೆ. ಮಾತು ಅರ್ಥವಾಗದೇ ಇದ್ದರೂ ಯಾವ ಭಾಷೆ ಎನ್ನುವದನ್ನು ತಿಳಿಯುವದು ಕಷ್ಟವಲ್ಲ. ಅವರಲ್ಲಿ ತೆಲುಗು, ಹಿಂದಿ ಹಾಗೂ ತಮಿಳಿನ ಹಿರಿ ಜೀವಿಗಳಲ್ಲಿ ಬಹಳಷ್ಟು ಜನರಿಗೆ ಅವರ ಮಾತೃ ಭಾಷೆ ಬಿಟ್ಟು ಬೇರೆ ಭಾಷೆಗಳು ಮಾತಾಡಲು ಕಷ್ಟ ಇದೆ ಅನಿಸುತ್ತದೆ. ಕೊಂಕಣಿ ಹಾಗೂ ತುಳು ಮಾತೃಭಾಷೆಯವರು ಕನ್ನಡವನ್ನು ಸಲೀಸಾಗಿ ಮಾತನಾಡುತ್ತಿದ್ದರು. ಕನ್ನಡ ಹೊರತಾಗಿ ಇಂಗ್ಲೀಷ್ ಹಾಗೂ ಹಿಂದಿಯನ್ನು ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡಲು ನನಗೆ ಬರುವದಿಲ್ಲ. ಆ ಬಗ್ಗೆ ಪ್ರಯತ್ನವನ್ನೂ ಮಾಡಲಿಲ್ಲವೆನ್ನಿ. ಆದರೆ ಈ ಲೇಖನದ ಉದ್ದೇಶ ಕಾವಲುಗಾರರ ಜೊತೆ ಮಾತನಾಡುವದು.  ಏಳೆಂಟು ಕಾವಲುಗಾರರಿದ್ದರು ಇಲ್ಲಿ. ಅವರಲ್ಲಿ ಒಬ್ಬನನ್ನು ಬಿಟ್ಟು ಉಳಿದವರು ಆಸ್ಸಾಮ್ ಹಾಗೂ ಓರಿಸ್ಸಾದಿಂದ  ಬಂದವರು. ಆಸ್ಸಾಮಿನಿಂದ ಬಂದವರ  ಮಾತೃಭಾಷೆ ಬಂಗಾಲಿ ಅಂತ ಹೇಳಿದರು. ಓರಿಸ್ಸಾದಿಂದ  ಬಂದವನದು ಓರಿಯಾ . ಒಂದು ಏಜೆನ್ಸಿಯ ಮುಖಾಂತರ ನೇಮಣೂಕಿಯಾಗಿ ಇಲ್ಲಿ ಪ್ರವೇಶ ಪಡೆದವರು. ಅವರಿಗೆ ಬೆಂಗಳೂರಿನಲ್ಲಿ ಕೆಲಸ ಮಾಡಲು  ಹಿಂದಿ ತಿಳಿದಿರಬೇಕಾದುದು ಕಡ್ಡಾಯವಂತೆ. ನೆನಪಿರಲಿ ಹಿಂದಿ. ಕನ್ನಡವಲ್ಲ. ಓಡಿಸ್ಸಾದವನಿಗೆ ಹಿಂದಿ ಕಲಿಯುವುದು  ಕಷ್ಟವಲ್ಲ ಅಂತ ಹೇಳಿದನು. ಆದರೆ ಬಂಗಾಲಿ ಮಾತೃಭಾಷೆಯವರಿಗೆ ಹಿಂದಿ ಕಲಿಯುವುದು ಅಂದರೆ ಕನ್ನಡ ಅಥವಾ ಯಾವುದೇ ಇತರ ಭಾಷೆಗಳನ್ನು ಕಲಿತ ಹಾಗೆಯೇ ಕಷ್ಟಕರ. ಆದರೇನು ಅವಶ್ಯಕತೆ ಬಿದ್ದಾಗ ಭಾಷೆ ಕಲಿಯುವುದು ಕಷ್ಟವೇ? ಹೊಟ್ಟೆ ಭಾಷೆಯನ್ನು ಕಲಿಸುತ್ತದೆ. ಅವರು ಹೇಳುವ ಹಾಗೆ ಬೆಂಗಳೂರಿನಲ್ಲಿ ಹಿಂದಿ ಮಾತ್ರ ಅನಿವಾರ್ಯವಾದ ಭಾಷೆ!. ಮೊಮ್ಮಗಳ ಜೊತೆ ನನ್ನ ‘ವಾಕಿಂಗ್’ ಬೆಳಿಗ್ಗೆ ಹಾಗೂ ಸಂಜೆ ನಡೆದೇ  ಇತ್ತು. ಇಂಗ್ಲೀಷ ಹೇಗೂ ಪಾಲಕರು ಹಾಗೂ ಶಾಲೆಯಲ್ಲಿ ಕಲಿಸೇ ಕಲಿಸುತ್ತಾರೆ ಅಂತ ನಾನು ಕನ್ನಡದಲ್ಲೇ ಅದರಲ್ಲೂ ನಮ್ಮ ಹವ್ಯಕ ಭಾಷೆಯಲ್ಲಿಯೇ ಮೊಮ್ಮಗಳ ಜೊತೆ ಮಾತನಾಡುತ್ತಿದ್ದೆ. ಕಾವಲುಗಾರರು ಮೊಮ್ಮಗಳ ಜೊತೆ ಅಭಿನಯ ಪೂರ್ವಕವಾಗಿಯಯೇ ಮಾತನಾಡುತ್ತಿದ್ದರು.  ಮಾತನಾಡುವಾಗ ಅವರಿಗೂ ಅರ್ಥವಾಗಲಿ ಅಂತ ಅವರು ಹೇಳಿದ ಹಿಂದಿ ಶಬ್ದಕ್ಕೆ ಪರ್ಯಾಯವಾಗಿ ಕನ್ನಡ ಶಬ್ದವನ್ನು ಮೊಮ್ಮಗಳಲ್ಲಿ ಹೇಳುತ್ತಿದ್ದೆ. ಕ್ರಮೇಣ ಮೊಮ್ಮಗಳು ಹೂಂ/ಉಹೂಂ ಎನ್ನಲು ಕಲಿತಳು. ಆ ಕಾವಲುಗಾರರು ನಾನು ಕನ್ನಡದಲ್ಲಿ ಮಾತನಾಡಿದರೆ ಬೇರೆ ಕಡೆ ಲಕ್ಷ್ಯ ತಿರುಗಿಸುತ್ತಿದ್ದರು. ಆದ್ದರಿಂದ ಮೊಮ್ಮಗಳ ಸಲುವಾಗಿ ನಾನು ಅನಿವಾರ್ಯವಾಗಿ ಹಿಂದಿಯನ್ನು ಕನ್ನಡ ಮಾಧ್ಯಮದ ಜೊತೆ ಕಾವಲುಗಾರರ ಜೊತೆ ಪ್ರಯೋಗಿಸುತ್ತಿದ್ದೆ. ನಾನು ಊರಿಗೆ ಮರಳಿದೆ. ಆಮೇಲೆ ಒಂದೆರಡು ತಿಂಗಳು ಕಳೆದು ಪುನಃ ಬೆಂಗಳೂರಿಗೆ ಹೋದೆನು.  ಸ್ವಲ್ಪದಿನ ಅಲ್ಲಿ ಉಳಿಯಬೇಕಾಯಿತು. ಹಾಗೇ ಮೊಮ್ಮಗಳ ಜೊತೆ ವಾಕಿಂಗ್ ಮುಂದುವರಿಯಿತು. “ಗುಡಿಯಾ ಖಾನಾ ಖಾಯಾ?, ಮಮ್ಮಿ ನಹೀಂ ಆಯಾ?, ಕಲ್ ಆಓ, ಬರಸ್ ಆತಾ ಹೈ ಅಬ್ ಚಲೋ, ಬಾಲ್ ಪಕಡೊ, ಜಂಪ್ ಕರೊ, ಮುಂತಾದ ಮಾತುಗಳು ನಡೆದೇ ಇದ್ದವು. ನಾನು ಮೊಮ್ಮಗಳಲ್ಲಿ ಹೇಳಿದ ಶಬ್ದಗಳು ಕಾವಲುಗಾರರಿಗೆ ಅರ್ಥವಾಗಲಿಲ್ಲ. ಅವರಿಗೆ ಅದರ ಅವಶ್ಯಕತೆಯೂ ಬೀಳಲಿಲ್ಲ.  ಆದರೆ ಮೊಮ್ಮಗಳು ಈಗ ಹಿಂದಿಯನ್ನುಸ್ವಲ್ಪ ಸ್ವಲ್ಪ ಅರ್ಥಮಾಡಿಕೊಳ್ಳುತ್ತಿದ್ದಾಳೆ.

ಭಾಷಾ ಕಲಿಕೆ Read Post »

ಇತರೆ

ಹಿರಿಯರು ಹೊರೆಗಳಾಗದಿರಲಿ

ಲೇಖನ ಹಿರಿಯರು ಹೊರೆಗಳಾಗದಿರಲಿ ವಿಶ್ವನಾಥ ಎನ್ ನೇರಳಕಟ್ಟೆ [6:36 am, 26/09/2021] ಸಂಗಾತಿ ಸಾಹಿತ್ಯ ಪತ್ರಿಕೆ: ಸುರಕ್ಷಾ ವೃದ್ಧಾಶ್ರಮ’ ಹೀಗೆಂದು ಕೆಂಪು ಅಕ್ಷರಗಳಲ್ಲಿ ಬರೆದಿದ್ದ ಬೋರ್ಡನ್ನು ನೆತ್ತಿ ಮೇಲೆ ಹೊತ್ತುಕೊಂಡಂತೆ ಕುಳಿತಿದ್ದ ನಾರಾಯಣರಾಯರ ಕಣ್ಣಿನ ತುಂಬ ಅಸಹಾಯಕತೆಯಿತ್ತು. ‘ಎರಡು ದಿನಗಳ ಇಲ್ಲಿಯ ಬದುಕೇ ಸಾಕಾಗಿಹೋದಂತಿದೆ ನಿಮಗೆ’, ಪಕ್ಕದಲ್ಲಿ ಕುಳಿತಿದ್ದ ವೃದ್ಧರು ಪ್ರಶ್ನಿಸಿದರು. ಉತ್ತರಿಸಬೇಕೆಂದು ಇವರಿಗೆ ಅನಿಸಲಿಲ್ಲ. ಮಗ ತನ್ನನ್ನು ಇಲ್ಲಿ ಬಿಟ್ಟುಹೋದ ಸನ್ನಿವೇಶ ಅವರ ಕಣ್ಣೆದುರು ತಾಂಡವವಾಡತೊಡಗಿತ್ತು. “ಅಪ್ಪಾ, ನಿಧಾನಕ್ಕೆ ಬನ್ನಿ. ಅಲ್ಲಿ ಮೆಟ್ಟಿಲು ಇದೆ ನೋಡಿ. ನನ್ನ ಕೈ ಗಟ್ಟಿ ಹಿಡಿದುಕೊಳ್ಳಿ”, ವೃದ್ಧಾಶ್ರಮಕ್ಕೆ ಕರೆತರುವಾಗ ಕಾಳಜಿಯ ಮುಖವಾಡ ಹೊತ್ತು ಮಗನಾಡಿದ ಮಾತು ಅವರ ಕಿವಿ ತಮಟೆಯನ್ನು ಈಗಲೂ ಕತ್ತರಿಸತೊಡಗಿತ್ತು. “ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ ಎಂಬ ತೋರಿಕೆಯ ಮಾತು ಬೇರೆ. ಯಾವ ಕರ್ಮಕ್ಕೆ ಆರೋಗ್ಯ?” ನಾರಾಯಣರಾಯರು ಗೊಣಗಿಕೊಂಡದ್ದು ಮಾತ್ರ. ಅದ್ಯಾವುದೋ ಮಾಯೆಯಲ್ಲಿ ಪಕ್ಕದಲ್ಲಿದ್ದ ವೃದ್ಧರಿಗೆ ಸ್ಪಷ್ಟವಾಗಿ ಕೇಳಿಸಿತು. “ನಿಮ್ಮ ಮಗನಾದರೋ ನಿಮ್ಮನ್ನು ಇಲ್ಲಿಗೆ ಕರೆತಂದು ಬಿಟ್ಟು ಹೋಗಿದ್ದಾನೆ. ನನ್ನ ಮಗ ರಾತ್ರೆ ಹೊತ್ತಿಗೆ ಮನೆಯಿಂದ ಹೊರದಬ್ಬಿ ಬಾಗಿಲು ಹಾಕಿಕೊಂಡ. ಅದು ಚಳಿಗಾಲ ಬೇರೆ. ನಾನು ಅನುಭವಿಸಿದ ಸಂಕಟ ದೇವರಿಗೇ ಪ್ರೀತಿ…” ಉಕ್ಕಿಬಂದ ಕಣ್ಣೀರು ಅವರ ಮಾತಿಗೆ ಅರೆಕ್ಷಣದ ಬ್ರೇಕ್ ಹಾಕಿತು. “ಐದು ವರ್ಷ ಆಗಿದೆ ನಾನಿಲ್ಲಿಗೆ ಬಂದು. ಒಂದು ದಿನವೂ ಬಂದದ್ದಿಲ್ಲ, ವಿಚಾರಿಸಿದ್ದಿಲ್ಲ. ನಾಳೆ ನಾನು ಸತ್ತರೂ ಬರಲಿಕ್ಕಿಲ್ಲವೇನೋ…” ದುಃಖದ ಮಹಾಪ್ರವಾಹದಲ್ಲಿ ಅವರಿಗೆ ಮಾತು ಮುಂದುವರಿಸಲಾಗಲಿಲ್ಲ. ನಾರಾಯಣರಾಯರನ್ನೂ ದುಃಖ ಪರವಶಗೊಳಿಸಿತ್ತು. ಮೌನವೇ ನಡೆದುಹೊರಟಂತೆ ತಮ್ಮ ರೂಮನ್ನು ಹೊಕ್ಕರು. ‘ಹೊತ್ತು ಹೋಗುತ್ತಿಲ್ಲ’ ಎಂದು ಅಂದುಕೊಂಡವರು ಬ್ಯಾಗಿನೊಳಗಿದ್ದ ಡೈರಿಯನ್ನು ಎತ್ತಿಕೊಂಡರು. ‘ಒಳ್ಳೆಯದಾಗಲಿ’ ಡೈರಿಯ ಮೊದಲ ಪುಟದಲ್ಲಿ ತಂದೆ ಬರೆದಿದ್ದ ಈ ಪದ ನಾರಾಯಣರಾಯರನ್ನು ಭಾವನಾತ್ಮಕವಾಗಿಸಿತು. “ನನ್ನ ತಂದೆಯನ್ನು ನಾನು ಅಂದು ವೃದ್ಧಾಶ್ರಮಕ್ಕೆ ಕಳಿಸಬಾರದಿತ್ತು. ಚೆನ್ನಾಗಿ ನೋಡಿಕೊಂಡಿದ್ದರೆ ಇಂದು ನನ್ನ ಮಗ ನನ್ನನ್ನು ವೃದ್ಧಾಶ್ರಮದ ಪಾಲಾಗಿಸುತ್ತಿರಲಿಲ್ಲ” ಭೂತಕಾಲದ ಯೋಚನೆ ನಾರಾಯಣರಾಯರ ಸ್ಮøತಿಪಟಲದಲ್ಲಿ ಓಡಾಡತೊಡಗಿತು. ಗೋಡೆಯ ಮೇಲೆ ತೂಗಾಡುತ್ತಿದ್ದ ಕ್ಯಾಲೆಂಡರ್ 2050ನೇ ಇಸವಿಯನ್ನು ಸಾರಿ ಹೇಳುತ್ತಿತ್ತು. *************************************   ‘ವಸುಧೈವ ಕುಟುಂಬಕಂ’ ಎಂದು ಜಗತ್ತಿಗೇ ಸಾರಿದ ರಾಷ್ಟ್ರ ನಮ್ಮದು. ‘ಭೂಮಿಯೇ ಒಂದು ಕುಟುಂಬ; ಭೂಮಿಯಲ್ಲಿರುವ ಎಲ್ಲರೂ ನಮ್ಮವರು’ ಎನ್ನುವ ಈ ತತ್ತ್ವದ ಮೂಲಕವೇ ಭಾರತ ಗುರುತಿಸಿಕೊಂಡಿದೆ, ಬೆಳೆದಿದೆ; ಜ್ಞಾನದ ಹಣತೆಯನ್ನು ಜಗತ್ತಿನುದ್ದಕ್ಕೂ ಬೆಳಗಿದೆ. ಆದರೆ ಆಧುನಿಕತೆಯ ಕಪಿಮುಷ್ಟಿಗೆ ಸಿಲುಕಿಕೊಂಡ ನಾವು ಇಂದು ತೀರಾ ಭಿನ್ನ ನೆಲೆಯಲ್ಲಿ ಸಾಗುತ್ತಿದ್ದೇವೆ. ಕೌಟುಂಬಿಕ ಬಾಂಧವ್ಯಗಳನ್ನೂ ವ್ಯಾವಹಾರಿಕತೆಯ ದೃಷ್ಟಿಕೋನದಿಂದ ಗಮನಿಸಿಕೊಳ್ಳುತ್ತಿದ್ದೇವೆ. ನಮ್ಮ ಕುಟುಂಬದವರನ್ನೂ ನಮ್ಮವರು ಎಂದು ಅಂದುಕೊಳ್ಳದ ಸಂಕುಚಿತ ಮನಃಸ್ಥಿತಿಗೆ ಒಳಗಾಗುತ್ತಿದ್ದೇವೆ. ‘ಸರ್ವೇಜನಃ ಸುಖಿನೋ ಭವಂತು’ ಎಂದು ಬೋಧಿಸಿದ ರಾಷ್ಟ್ರದ ಕಸದ ತೊಟ್ಟಿಯಲ್ಲಿ ವೃದ್ಧೆಯನ್ನು ಕಾಣುವಂತಾಗುತ್ತದೆ. ಅವರ ಮಕ್ಕಳೇ 50 ಲಕ್ಷದ ಕಾರಿನಲ್ಲಿ ಕರೆತಂದು ಎಸೆದುಹೋಗಿರುತ್ತಾರೆ. ಚಳಿಗೆ ಮರಗಟ್ಟಿರುವ ಅವಳ ಸ್ಥಿತಿ ಸಮಾಜದ ಅದೆಷ್ಟೋ ಜನರ ಕಣ್ಣೀರಿಗೆ ಕಾರಣವಾಗುತ್ತದೆ. ಆದರೆ ಅವರ ಮಕ್ಕಳ ಕಣ್ಣು ತೆರೆಯುವುದೇ ಇಲ್ಲ.    ಭಾರತವನ್ನು ಕಂಡು ವಿದೇಶಿಯರು ಅಚ್ಚರಿಪಟ್ಟಿದ್ದರು. ಇಲ್ಲಿನ ಕುಟುಂಬ ವ್ಯವಸ್ಥೆ ಅವರಲ್ಲಿ ದಿಗ್ಭಮೆಯನ್ನು, ಕುತೂಹಲವನ್ನು ಹುಟ್ಟುಹಾಕಿತ್ತು. ಹತ್ತಿಪ್ಪತ್ತು ಜನ ಒಂದೇ ಸೂರಿನಡಿಯಲ್ಲಿ ಬಾಳುವುದು ಅವರ ಪಾಲಿಗೆ ಇನ್ನಿಲ್ಲದ ಅದ್ಭುತವಾಗಿತ್ತು. ಭಾರತದ ಕುಟುಂಬ ವ್ಯವಸ್ಥೆಯೊಳಗಿನ ಬಾಂಧವ್ಯ, ಸಂಬಂಧಗಳ ನಡುವಿನ ಪರಸ್ಪರ ನಂಬಿಕೆಯನ್ನು ಕೂಗಿ ಹೇಳುವ ರೀತಿಯಲ್ಲಿ ಬದುಕಿದ ವಿಧಾನ ಒಂದು ಅನುಕರಣೀಯ ಮಾದರಿಯನ್ನು ಹುಟ್ಟುಹಾಕಿತ್ತು. ಕೌಟುಂಬಿಕ ಮೌಲ್ಯಗಳ ಅದಃಪತನವು ಎಂತಹ ತಲೆಮಾರನ್ನು ರೂಪುಗೊಳಿಸಬಹುದು ಎನ್ನುವುದಕ್ಕೆ ನಿದರ್ಶನವೆಂಬಂತೆ ಒಂದು ಅರ್ಥಪೂರ್ಣ ಕಥೆಯಿದೆ. ಒಬ್ಬ ವ್ಯಕ್ತಿ ತನ್ನ ಹೆಂಡತಿಯ ಮಾತು ಕೇಳಿ ತನ್ನ ವೃದ್ಧ ತಂದೆಯನ್ನು ಮನೆಯಿಂದ ಹೊರಹಾಕುತ್ತಾನೆ. ರಕ್ತವನ್ನೂ ಹೆಪ್ಪುಗಟ್ಟಿಸಬಲ್ಲಂತಹ ಚಳಿಗಾಲದ ರಾತ್ರಿಯದು. “ಮೈ ಮುಚ್ಚಿಕೊಳ್ಳುವುದಕ್ಕೆ ಒಂದು ಕಂಬಳಿಯನ್ನಾದರೂ ಕೊಡು” ಎಂದು ಆ ವೃದ್ಧ ತನ್ನ ಮಗನಲ್ಲಿ ಅಂಗಲಾಚುತ್ತಾನೆ. ಅರೆಬರೆ ಹರಿದ, ಹಳೆಯ ಕಂಬಳಿಯೊಂದನ್ನು ಮನೆಯೊಳಗಿಂದ ತಂದ ಮಗ ಋಣವೇ ಮುಗಿಯಿತೆಂಬಂತೆ ತಂದೆಯ ಮುಖಕ್ಕೆ ಅದನ್ನು ಎಸೆಯುತ್ತಾನೆ. ಈ ಎಲ್ಲಾ ವಿದ್ಯಮಾನವನ್ನೂ ಗಮನಿಸುತ್ತಿದ್ದ ಆ ವೃದ್ಧನ ಮೊಮ್ಮಗ, ಎಂಟು ವರ್ಷದವನು, ತಕ್ಷಣ ತನ್ನ ಅಜ್ಜನ ಬಳಿಗೆ ಓಡುತ್ತಾನೆ. ಅಜ್ಜನ ಮೈಮೇಲೆ ಹರಡಿದ್ದ ಕಂಬಳಿಯನ್ನು ಅರ್ಧ ಭಾಗ ಮಾಡಿ ಒಂದು ಭಾಗವನ್ನು ತೆಗೆದುಕೊಳ್ಳುತ್ತಾನೆ. ಆ ಹಳೇ ಕಂಬಳಿ ಏಕೆ ಎಂದು ತಂದೆ ಕೇಳಿದ್ದಕ್ಕೆ ಆ ಪುಟ್ಟ ಹುಡುಗ ಹೇಳಿದ್ದಿಷ್ಟು- “ಇನ್ನು ಸ್ವಲ್ಪ ವರ್ಷಗಳಾದ ಮೇಲೆ ನೀವು ಮುದುಕರಾಗುತ್ತೀರಿ. ಆಗ ನಾನೂ ನಿಮ್ಮನ್ನು ಇದೇ ರೀತಿ ಮನೆಯಿಂದ ಹೊರಹಾಕುತ್ತೇನೆ. ಆಗ ನೀವು ಕಂಬಳಿ ಬೇಕೆಂದು ಕೇಳಿದರೆ ಕೊಡುವುದಕ್ಕೆ ಬೇಕಲ್ಲಾ.” ಮಕ್ಕಳು ಹೇಳಿಕೊಟ್ಟದ್ದನ್ನು ಅನುಸರಿಸುವುದಕ್ಕಿಂತಲೂ ಕಂಡದ್ದನ್ನು ಕಂಡ ಹಾಗೆಯೇ ಅನುಸರಿಸುತ್ತಾರೆ. ತಂದೆ- ತಾಯಿಯನ್ನು ವೃದ್ಧಾಶ್ರಮಕ್ಕೆ ತಳ್ಳುವುದನ್ನು ಇಂದಿನ ಮಕ್ಕಳು ಕಾಣುವಂತಾಗಬಾರದು, ಕಲಿಯುವಂತಾಗಬಾರದು. ಪ್ರಪಂಚದ ಹಲವು ದೇಶಗಳು ಆರ್ಥಿಕವಾಗಿ ಮುಂದುವರಿದಿವೆ ನಿಜ. ಆದರೆ ಕೌಟುಂಬಿಕ ಸಂಬಂಧಗಳ ನೆಲೆಯಲ್ಲಿ ಅವುಗಳ ನಡೆ ಪ್ರಶ್ನಾರ್ಹವಾದುದು. ನಮಗೆ ಗೊತ್ತಿದೆ, ಹಲವು ದೇಶಗಳಲ್ಲಿ ಮಕ್ಕಳು ಪ್ರಾಯಪ್ರಬುದ್ಧರಾದ ಮೇಲೆ ತಮ್ಮ ಹೆತ್ತವರಿಂದ ಹಣವನ್ನು ಅಪೇಕ್ಷಿಸುವಂತಿಲ್ಲ. ಒಂದುವೇಳೆ ಹಣವನ್ನು ಪಡೆದುಕೊಂಡರೆ ಅದನ್ನು ಹಿಂದಿರುಗಿಸಬೇಕು. ಮಕ್ಕಳು ಹಣ ಗಳಿಕೆ- ನಿರ್ವಹಣೆಯ ಮಹತ್ವವನ್ನು ಮನಗಾಣುವಂತಾಗಲು ಈ ವ್ಯವಸ್ಥೆಯನ್ನು ಹೆತ್ತವರು ರೂಪಿಸಿಕೊಂಡಿದ್ದಾರೆ ನಿಜ. ಉದ್ದೇಶ ಒಳ್ಳೆಯದೇ. ಆದರೆ ಅದು ಉಂಟುಮಾಡುವ ಪರಿಣಾಮ? ಹೆತ್ತವರಿಂದಲೇ ಸಾಲ ಪಡೆದುಕೊಂಡ ಮಕ್ಕಳು ಹೆತ್ತವರನ್ನು ವ್ಯಾವಹಾರಿಕತೆಯ ಆಯಾಮದಿಂದಲೇ ಗಮನಿಸಿಕೊಳ್ಳತೊಡಗುತ್ತಾರೆ. ಅವರ ಜೊತೆಗಿನ ಭಾವನಾತ್ಮಕತೆಯನ್ನು ಕಳೆದುಕೊಳ್ಳುತ್ತಾರೆ. ಆದರೆ ಭಾರತ ಹಾಗಲ್ಲ. ಬದುಕಿನ ಬಿಂದು ಬಿಂದುಗಳಲ್ಲಿಯೂ ಭಾವನಾತ್ಮಕತೆಯನ್ನು ಬಚ್ಚಿಟ್ಟುಕೊಂಡ ಭವ್ಯತೆ ಭಾರತದ್ದು. ಆದರೆ ಆಧುನಿಕತೆಯೆಂಬ ಮಾಯೆ ಭಾರತದ ಕೌಟುಂಬಿಕ ವ್ಯವಸ್ಥೆಯೊಳಗಿನ ಭಾವನಾತ್ಮಕತೆಯನ್ನು ಮೂಲೆಗುಂಪು ಮಾಡುತ್ತಿದೆ ಎನ್ನುವುದು ಸತ್ಯ. ಆಧುನಿಕತೆಯ ಪರಿಣಾಮವಾಗಿ ವೃದ್ಧರು ವೃದ್ಧಾಶ್ರಮಗಳ ಪಾಲಾಗುತ್ತಿದ್ದಾರೆ. ಜಾಗತೀಕರಣದ ಪರಿಣಾಮವಾಗಿ ಗ್ರಾಮಗಳು ವೃದ್ಧಾಶ್ರಮಗಳಾಗುತ್ತಿವೆ. ಕುಟುಂಬದ ಬೆಂಬಲವನ್ನು ಕಳೆದುಕೊಂಡ ಹಿರಿಯರ ಬದುಕಿನಲ್ಲಿ ಭರವಸೆಯನ್ನು ಹುಟ್ಟಿಸಬೇಕಾದದ್ದು ತುಂಬಾ ಮುಖ್ಯ. ಈ ನಿಟ್ಟಿನಲ್ಲಿ ವೃದ್ಧಾಶ್ರಮಗಳ ಮುಖ್ಯಸ್ಥರು, ಸಿಬ್ಬಂದಿಗಳ ಸೇವೆ ಗಮನಾರ್ಹವಾದದ್ದು. ನೆಲೆ ಕಳೆದುಕೊಂಡವರ ಮನಸ್ಸಿನ ಅಲೆಯನ್ನು ಕಾಪಿಡುವ ಅವರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರೀತಿ ವಂಚಿತರ ಬದುಕನ್ನು ಪ್ರೀತಿಯ ಹಾದಿಯಲ್ಲಿಯೇ ಮುನ್ನಡೆಸಲು ಶ್ರಮಿಸುವ ಅವರ ಕಾಯಕ ನಿಷ್ಠೆಗೆ ಸಲಾಂ ಹೇಳಬೇಕಾಗಿದೆ.

ಹಿರಿಯರು ಹೊರೆಗಳಾಗದಿರಲಿ Read Post »

You cannot copy content of this page

Scroll to Top