ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಆರೋಗ್ಯ, ಇತರೆ

ಯಾವ ಕಾಲಕ್ಕೆ ಯಾವ ತರಕಾರಿ ಸೂಕ್ತ ?

ಲೇಖನ ಯಾವ ಕಾಲಕ್ಕೆ ಯಾವ ತರಕಾರಿ ಸೂಕ್ತ ? ಆಶಾ ಸಿದ್ದಲಿಂಗಯ್ಯ ತರಕಾರಿ ಎಂಬುದು ಸಾಮಾನ್ಯವಾಗಿ ಹಣ್ಣುಗಳನ್ನು ಹೊರತಾಗಿ ಅಹಾರವಾಗಿ ಉಪಯೋಗಿಸಲಾಗುವ ಸಸ್ಯಗಳ ಭಾಗಗಳು. ಮಳೆಗಾಲದ ತರಕಾರಿಗಳು : ಟೊಮೊಟೊ, ಬೆಂಡೆ, ಬದನೆ, ಹುರುಳಿ, ತಿಂಗಳ ಹುರಳಿ, ಗೆಣಸು, ಸೌತೇ, ಕಲ್ಲಂಗಡಿ, ಕರಬೂಜ, ಕುಂಬಳ, ಹಾಗಲ, ಮೂಲಂಗಿ ಮುಂತಾದುವುಗಳು. ಚಳಿಗಾಲದ ತರಕಾರಿಗಳು: ಕ್ಯಾಬೇಜ್, ಹೂವುಕೋಸು, ಗಜ್ಜರಿ, ಬಟಾಣಿ, ಈರುಳ್ಳಿ, ಆಲೂಗಡ್ಡೆ, ಮೂಲಂಗಿ, ಟರ್ನಿಪ್, ಸೊಪ್ಪು ತರಕಾರಿ ಮುಂತಾದುವುಗಳು. ಬೇಸಿಗೆ ತರಕಾರಿಗಳು : ಸೌತೇ, ಕಲ್ಲಂಗಡಿ, ಕರಬೂಜ, ಕುಂಬಳ, ಬೆಂಡೆ, ಬದನೆ ಮುಂತಾದವುಗಳು. ನಮ್ಮ ದೇಹವನ್ನು ಸಮಸ್ತ ರೋಗರುಜಿನಗಳಿ೦ದ ದೂರವಿರಿಸಲು ನಾವು ಸೇವಿಸುವ ಆಹಾರವು ನಮ್ಮ ಹಸಿವನ್ನು ಹಿಂಗಿಸುವುದರ ಜೊತೆಗೆ ಅದು ಔಷಧದಂತೆ ಕಾರ್ಯನಿರ್ವಹಿಸುವಂತಿರಬೇಕು. ಆರೋಗ್ಯದಾಯಕ ಜೀವನಕ್ಕಾಗಿ ಆಹಾರಪದ್ಧತಿಯಲ್ಲಿ ಸೊಪ್ಪುಯುಕ್ತ ಹಸಿರು ತರಕಾರಿಗಳನ್ನು ಸೇರಿಸಿಕೊಳ್ಳುವುದು ತುಂಬಾ ಮುಖ್ಯ. ಸೊಪ್ಪು,ತರಕಾರಿಗಳ ಪ್ರಯೋಜನಗಳು ನಾರಿನಾಂಶದಿಂದ ಸಮೃದ್ಧವಾಗಿವೆ ಈ ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿ ನಾರಿನ೦ಶವು ಯಥೇಚ್ಚವಾಗಿರುವುದರಿಂದ,  ಜೀರ್ಣಾಂಗವ್ಯೂಹ ಅತ್ಯುತ್ತಮವಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವಲ್ಲಿ ಚಮತ್ಕಾರವನ್ನೇ ಮಾಡಬಲ್ಲವು. ಮಲಬದ್ಧತೆಯ ಉಪಟಳವನ್ನು ದೂರವಿರಿಸಲು ನಾವು ಸೇವಿಸುವ ಆಹಾರದಲ್ಲಿ ನಾರಿನಂಶವು ಸಾಕಷ್ಟಿರುವುದು ಅತ್ಯಗತ್ಯ. ಮಲವಿಸರ್ಜನೆಯು ಸರಾಗವಾಗಿ ಆಗುವಂತಾಗಲು, ಸೊಪ್ಪುಯುಕ್ತ ಹಸಿರು ತರಕಾರಿಗಳನ್ನು ಸೇವಿಸಿರಿ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತವೆ ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿರುವ  ನಾರಿನಂಶವು  ಶರೀರದ ರಕ್ತದೊತ್ತಡ ಹಾಗೂ ಕೊಲೆಸ್ಟೆರಾಲ್ ನ ಮಟ್ಟವನ್ನು ಸರಿಪಡಿಸಲು ನೆರವಾಗುತ್ತದೆ. ತೂಕ ಕಡಿಮೆ ಆಗಲೂ ಸಹಕಾರಿ ತೂಕನಷ್ಟವನ್ನು ಹೊಂದುವುದಕ್ಕೆ ಪೂರಕವಾಗಿರುವ ಆಹಾರಕ್ರಮಗಳ ರೂಪದಲ್ಲಿ ಸೊಪ್ಪುಯುಕ್ತ ಹಸಿರು ತರಕಾರಿಗಳು ಚೆನ್ನಾಗಿ ಕೆಲಸ ಮಾಡುತ್ತವೆ. ಏಕೆಂದರೆ ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೊಂದಿದ್ದು, ಕಡಿಮೆ ಮಟ್ಟದಲ್ಲಿ ಕ್ಯಾಲರಿಗಳನ್ನು ಹೊಂದಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಸೊಪ್ಪುಯುಕ್ತ ಹಸಿರು ತರಕಾರಿಗಳು ನಾನಾ ಬಗೆಯ ವಿಟಮಿನ್ ಗಳು ಹಾಗೂ ಖನಿಜಾಂಶಗಳನ್ನು ಒಳಗೊಂಡಿವೆ. ಇವುಗಳ ಜೊತೆಗೆ,ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿ ರೋಗಗಳ ವಿರುದ್ಧ ಸೆಣೆಸಾಡುವ ಕೆಲವು ಮಾಧ್ಯಮಗಳಿದ್ದು, ಅವು ಶರೀರವನ್ನು ನಾನಾ ಬಗೆಯ ರೋಗರುಜಿನಗಳಿ೦ದ ರಕ್ಷಿಸುತ್ತವೆ. ಮಧುಮೇಹ ಸೊಪ್ಪುಯುಕ್ತ ಹಸಿರು ತರಕಾರಿಗಳು ಮಧುಮೇಹದ ಅಪಾಯವನ್ನು ತಡೆಗಟ್ಟುತ್ತವೆ ಹಾಗೂ ಜೊತೆಗೆ ನಿಮ್ಮ ಶರೀರವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಕೂಡ ನೆರವಾಗುತ್ತವೆ. ತ್ವಚೆಯ ಆರೋಗ್ಯಕ್ಕಾಗಿ ಸೊಪ್ಪುಯುಕ್ತ ಹಸಿರು ತರಕಾರಿಗಳು ನಿಮ್ಮ ತ್ವಚೆಯ ಹಾಗೂ ಕೇಶರಾಶಿಯ ಆರೋಗ್ಯಕ್ಕೂ ಸಹ ಒಳ್ಳೆಯದು. ಪ್ರತಿದಿನವೂ ಸೊಪ್ಪುಯುಕ್ತ ಹಸಿರು ತರಕಾರಿಗಳ ಸೇವನೆಯಿಂದ ನೀವು ಆರೋಗ್ಯಕರವಾದ ತ್ವಚೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಸೊಪ್ಪುಯುಕ್ತ ಹಸಿರು ತರಕಾರಿಗಳನ್ನು ಬಳಸಿಕೊಂಡು ತಯಾರಿಸಿದ ಸಲಾಡ್ ಗಳ ಸೇವನೆಯಿಂದಾಗುವ ಹಲವಾರು ಪ್ರಯೋಜನಗಳ ಪೈಕಿ ಇದೂ ಸಹ ಒಂದು. ಕ್ಯಾಲ್ಸಿಯಂನಿಂದ ಸಮೃದ್ಧವಾಗಿವೆ ಕೆಲವೊ೦ದು ಸೊಪ್ಪುಯುಕ್ತ ಹಸಿರು ತರಕಾರಿಗಳು ಕ್ಯಾಲ್ಸಿಯಂನಿಂದಲೂ ಸಂಪನ್ನವಾಗಿವೆ. ನಮಗೆಲ್ಲಾ ತಿಳಿದಿರುವಂತೆ ಮೂಳೆಗಳು ಹಾಗೂ ಹಲ್ಲುಗಳನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ಕ್ಯಾಲ್ಷಿಯಂ ಆತ್ಯಂತ ಅವಶ್ಯಕ ಮೂಲವಸ್ತುವಾಗಿದೆ. ಕಣ್ಣುಗಳನ್ನು ಬಾಧಿಸುವ ರೋಗಗಳನ್ನು ಹತ್ತಿಕ್ಕುತ್ತವೆ ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿರುವ ಕೆಲಬಗೆಯ ಆಂಟಿ ಆಕ್ಸಿಡೆಂಟ್ ಗಳು ಕಣ್ಣಿನ ಪೊರೆಗಳಂತಹ, ನೇತ್ರ ಸಂಬಂಧೀ ರೋಗಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕೀಲುಗಳಿಗೆ ಸಂಬಂಧಿಸಿದ ರೋಗಗಳನ್ನು ತಡೆಗಟ್ಟುತ್ತವೆ ಆರ್ಥ್ರೈಟಿಸ್ನಂತಹಾ ಕೀಲುಗಳಿಗೆ ಸಂಬಂಧಿಸಿದ ಕೆಲವೊಂದು ರೋಗಗಳನ್ನು ತಡೆಗಟ್ಟುವಲ್ಲಿಯೂ ಸಹ ತರಕಾರಿಗಳು ಪ್ರಯೋಜನಕಾರಿಯಾಗಿವೆ. ಸೊಪ್ಪುಯುಕ್ತ ಹಸಿರು ತರಕಾರಿಗಳ ಮತ್ತೊಂದು ಪ್ರಯೋಜನವೇನೆಂದರೆ, ಅವು ಹೃದ್ರೋಗಗಳ ಅಪಾಯವನ್ನೂ ಸಹ ತಡೆಗಟ್ಟಬಲ್ಲವು. ತರಕಾರಿಗಳು ತಾರುಣ್ಯಭರಿತರನ್ನಾಗಿರಿಸುತ್ತವೆ. ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿ ಕೆಲವೊಂದು ಬಯೋ ಪ್ರತಿಬಂಧಕ ಕಾರಕಗಳಿದ್ದು ಅವು ಆರೋಗ್ಯಕರವಾದ ತ್ವಚೆ ಹಾಗೂ ಮೂಳೆಗಳನ್ನು ಪಡೆಯುವಲ್ಲಿ ಸಹಕಾರಿಯಾಗಿರುತ್ತವೆ.  ತರಕಾರಿಗಳ ಒಂದು ಅತ್ಯುತ್ತಮವಾದ ಗುಣವಿಶೇಷವೇನೆಂದರೆ, ಅವು ಟನ್ನುಗಟ್ಟಲೆ ಕ್ಯಾಲರಿಗಳನ್ನು ಒಳಗೊಂಡಿರಲಾರವು. ಹೀಗಾಗಿ,  ಸೊಪ್ಪು, ತರಕಾರಿಗಳ ಪ್ರಮಾಣದ ಕುರಿತಾಗಿ ಚಿಂತಿಸುವ ಅವಶ್ಯಕತೆ ಇಲ್ಲದೇ ಅವುಗಳನ್ನು ಧಾರಾಳವಾಗಿ ಸೇವಿಸಬಹುದು.

ಯಾವ ಕಾಲಕ್ಕೆ ಯಾವ ತರಕಾರಿ ಸೂಕ್ತ ? Read Post »

ಆರೋಗ್ಯ, ಇತರೆ

ಮದರಂಗಿ (ಮೆಹೆಂದಿ)

ಮದರಂಗಿ (ಮೆಹೆಂದಿ) ಮದರಂಗಿಯಲ್ಲಿ ಮನಸ್ಸಿನ ರಂಗು ಮೂಡಿದೆ. ಆಶಾ ಸಿದ್ದಲಿಂಗಯ್ಯ ಮದುವೆಯ ಸಂದರ್ಭದಲ್ಲಿ ಮದುಮಗ ಅಥವಾ ಮದುಮಗಳಿಗೆ ಕೈಗೆ ಹಚ್ಚುವ ಪ್ರಾಕೃತಿಕ ಬಣ್ಣ. ಎಂದರೆ ಇದೊಂದು ಎಲ್ಲರಿಗೂ ಇಷ್ಟವಾಗುವ ನಿಸರ್ಗದ ಒಂದು ಗಿಡವಾಗಿದೆ. ಔಷಧೀಯ ಗುಣವುಳ್ಳ ಗಿಡವಾಗಿದ್ದು, ಇದರ ಸೊಪ್ಪನ್ನು ಔಷಧಕ್ಕೆ ಬಳಸುತ್ತಾರೆ. ಭಾರತೀಯ ಸಂಪ್ರದಾಯದಲ್ಲಿ ಕೈಗಳಿಗೆ ಬಣ್ಣವನ್ನು ಹಚ್ಚಿಕೊಳ್ಳುವ ರೂಢಿ ಇದೆ. ಮದರಂಗಿ ತಯಾರಿಕೆ ಮದರಂಗಿಯನ್ನು ಕೈಗಳಿಗೆ ಹಚ್ಚಿಕೊಳ್ಳುವುದಾದರೆ, ಮದರಂಗಿಯ ಸೊಪ್ಪು, ನಿಂಬೆಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಅರೆದು, ಕೈಗಳಿಗೆ ಹಚ್ಚಬೇಕು. ವಿಜ್ಞಾನ ಮುಂದುವರಿದ ಹಾಗೆ ಜನರು ಮದರಂಗಿಯನ್ನು ಬೇರೆ ವಿಧಾನದಲ್ಲಿ ಸುಲಭವಾಗಿ ತಯಾರಿಸಿಕೊಳ್ಳಲು ದಾರಿಯನ್ನು ಕಂಡುಕೊಂಡಿದ್ದಾರೆ.  ಹೇಗೆಂದರೆ,ಮದರಂಗಿ ಸೊಪ್ಪನ್ನು ಒಣಗಿಸಿ ಪುಡಿಮಾಡಿ ಅದಕ್ಕೆ ನಿಂಬೆಹಣ್ಣಿನ ರಸವನ್ನು ಸೇರಿಸಿ ಕಲಸಿ ಹಚ್ಚುವ ವಿಧಾನವನ್ನು ಬಳಸಿದ್ದಾರೆ. ಹೀಗೆ ಮದರಂಗಿಯಲ್ಲಿ ಚಿತ್ರಗಳನ್ನು ಬಿಡಿಸಿಕೊಳ್ಳುವ ರೂಢಿಯನ್ನು ಮಾಡಿಕೊಂಡಿದ್ದಾರೆ. ಹೀಗೆ ಸಣ್ಣ ಸಣ್ಣ ಚಿತ್ರಗಳನ್ನು ಬರೆದು ಅದಕ್ಕೆ ಡಿಸೈನ್ ಎಂದು ಹೆಸರಿಸಿಕೊಂಡಿದ್ದಾರೆ. ಮದರಂಗಿಯ ಡಿಸೈನ್ ಗಳಿಗೆ ಕೆಲವು ಉದಹರಣೆ ಎಂದರೆ, ಇಂಡಿಯನ್ ಡಿಸೈನ್, ಅರೇಬಿಕ್ ಡಿಸೈನ್, ಶೈಲಿ ಅರೇಬಿಕ್ ಡಿಸೈನ್ ಇತ್ಯಾದಿ… ಮದರಂಗಿ ಬ‍ಣ್ಣದ ಗುಟ್ಟು ಹಚ್ಚಿದ ಮದರಂಗಿಯನ್ನು ತುಂಬಾ ರಂಗಾಗಿಸಲು ಹಲವು ವಿಧಾನಗಳಿವೆ. ಒಂದು ವಿಧಾನ : ಸ್ವಲ್ಪ ಏಲಕ್ಕಿಯನ್ನು ಹುರಿದು ಅದರ ಶಾಖ ಕೊಡಬೇಕು. ಎರಡನೇ ವಿಧಾನ : ನಿಂಬೆ ಹಣ್ಣಿನ ರಸವನ್ನು ಹಚ್ಚಬೇಕು. ಮೂರನೇ ವಿಧಾನ : ಸ್ವಲ್ಪ ಸಕ್ಕರೆಯನ್ನು ನೀರಿನಲ್ಲಿ ಕರಗಿಸಿ, ಆ ನೀರನ್ನು ಹಚ್ಚಬೇಕು. ಔಷಧೀಯ ಗುಣ ಗೋರಂಟಿ ಎಲೆಗಳಿಗೆ ಔಷಧೀಯ ಗುಣಗಳಿವೆ. ಕಷಾಯದ ರೂಪದಲ್ಲಿ ಇಲ್ಲವೆ ಸರಿಯ ರೂಪದಲ್ಲಿ ಇವನ್ನು ಹುಣ್ಣು, ತರಚು ಹಾಗೂ ಸುಟ್ಟಗಾಯಗಳು ಮತ್ತು ಕೆಲವು ಚರ್ಮರೋಗಗಳಿಗೆ ಬಳಸುತ್ತಾರೆ. ಕಷಾಯ ಗಂಟಲುನೋವಿಗೆ ಒಳ್ಳೆಯ ಮದ್ದು.  ಗೋರಂಟಿಯ ಹೂವನ್ನು ಆವೀಕರಣಕ್ಕೊಳಪಡಿಸಿ ಒಂದು ಬಗೆಯ ಪರಿಮಳಯುಕ್ತ ತೈಲವನ್ನು ಪಡೆಯಬಹುದು. ಇದಕ್ಕೆ ಮೆಹಂದಿ ಎಣ್ಣೆ ಎಂದು ಹೆಸರು. ಇದನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಗೋರಂಟಿಯ ಚೌಬೀನೆಯನ್ನು ಉಪಕರಣಗಳ ಹಿಡಿ, ಗೂಟ ಮುಂತಾದವುಗಳ ತಯಾರಿಕೆಗೆ ಉಪಯೋಗಿಸುತ್ತಾರೆ. ಎಳೆಯ ಕಡ್ಡಿಗಳನ್ನು ಹಲ್ಲುಜ್ಜಲು ಇಂಡೋನೇಷ್ಯದಲ್ಲಿ ಬಳಸುತ್ತಾರೆ. ಗೋರಂಟಿಯನ್ನು ವಾಣಿಜ್ಯ ದೃಷ್ಟಿಯಿಂದ ದೆಹಲಿ, ಗುಜರಾತ್ ಮತ್ತು ಮಾಲ್ವ ಎಂಬ ಮೂರು ಬಗೆಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ದೆಹಲಿ ಗೋರಂಟಿ ಅತ್ಯುತ್ತಮವಾದ್ದು. ಗೋರಂಟಿಯ ಉಪಯೋಗಗಳು ಅಂಗೈ ಅಂಗಾಲು ಉರಿ ಹಸಿ ಗೋರಂಟಿ ಸೊಪ್ಪನ್ನು ನುಣ್ಣಗೆ ಅರೆದು ಸ್ವಲ್ಪ ನಿಂಬೆಹುಳಿ ಸೇರಿಸಿ ಚೆನ್ನಾಗಿ ಮಸೆದು ಅಂಗೈ ಅಂಗಾಲುಗಳಿಗೆ ಲೇಪಿಸುವುದು. ತಲೆಯಲ್ಲಿ ಹೇನು ಮತ್ತು ಸೀರು ನಿವಾರಣೆಗೆ ಹಸಿ ಅಥವಾ ಒಣಗಿದ ಒಂದು ಹಿಡಿ ಗೋರಂಟಿ ಸೊಪ್ಪನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ಅರೆದು 2ಗ್ರಾಂ ಆರತಿ ಕರ್ಪೂರವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ತಲೆಗೆ ಹಚ್ಚುವುದು. (ಅಥವಾ) ಹಸಿ ಅಥವಾ ಒಣಗಿದ ಒಂದು ಹಿಡಿ ಗೋರಂಟಿ ಸೊಪ್ಪನ್ನು ನುಣ್ಣಗೆ ಅರೆದು ಸ್ವಲ್ಪ ಕರ್ಪೂರ ಮತ್ತು ಆಲಿವ್ ಎಣ್ಣೆಯನ್ನು ಬೆರಿಸಿ ತಲೆ ಕೂದಲಿಗೆ ಹಚ್ಚುವುದು. ಇದರಿಂದ ಹೇನುಗಳು, ಸೀರುಗಳು ನಾಶವಾಗುವುವು. ಬಿಳಿ ಕೂದಲು ಕಪ್ಪಾಗಲು (ಬಾಲನೆರೆ) ಒಂದು ಹಿಡಿ ಹಸೀ ಗೋರಂಟಿ ಕಾಯಿಗಳನ್ನು ನುಣ್ಣಗೆ ಅರೆದು ಒಂದು ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕಾಯಿಸಿ ಚತುರಾಂಷ ಕಷಾಯ ಮಾಡುವುದು. ಚೆನ್ನಾಗಿ ಪಕ್ವವಾಗಿರುವ 25 ಗ್ರಾಂ ನೀಲಿ ದ್ರಾಕ್ಷಿಯನ್ನು ತಂದು ಬೀಜಗಳನ್ನು ಬೇರ್ಪಡಿಸಿ ನುಣ್ಣಗೆ ರುಬ್ಬಿ ಮೇಲಿನ ಕಷಾಯಕ್ಕೆ ಸೇರಿಸುವುದು. ನಂತರ ಒಂದು ಬಟ್ಟಲು ಈ ಕಷಾಯಕ್ಕೆ ಕಾದಾರಿದ ನೀರು ಸ್ವಲ್ಪ ಸೇರಿಸಿ ಕೂದಲಿಗೆ ಹಚ್ಚುವುದು. ಬೆಳಿಗ್ಗೆ ಸೀಗೆಕಾಯಿ ಹಾಕಿ ಬಿಸಿ ನೀರಿನ ಸ್ನಾನ ಮಾಡುವುದು. ಹೀಗೆ ಮೂರು ನಾಲ್ಕು ತಿಂಗಳ ಉಪಚಾರದಿಂದ ಸಫಲತೆ ದೊರೆಯುವುದು. ಕಾಮಾಲೆಯಲ್ಲಿ ಎರಡು ಹಿಡಿ ಹಸಿ ಗೋರಂಟಿ ಸೂಪ್ಪನ್ನು ಚೆನ್ನಾಗಿ ಜಜ್ಜಿ ಒಂದು ಬಟ್ಟಲು ನೀರಿನಲ್ಲಿ ರಾತ್ರಿ ನೆನೆ ಹಾಕುವುದು, ಬೆಳಿಗ್ಗೆ ಈ ನೀರನ್ನು ಒಂದು ಶುಭ್ರವಾದ ಬಟ್ಟೆಯಲ್ಲಿ ಶೋಧಿಸಿ ದಿನಕ್ಕೆ ಒಂದು ವೇಳೆ 7 ದಿನಗಳು ಕುಡಿಯುವುದು. ಮೂಲವ್ಯಾಧಿಯಲ್ಲಿ ಎರಡು ಹಿಡಿ ಹಸಿ ಗೋರಂಟಿ ಸೂಪ್ಪನ್ನು ಚೆನ್ನಾಗಿ ಜಜ್ಜಿ ತೆಳು ಬಟ್ಟೆಯಲ್ಲಿ ಸೋಸಿ ರಸ ತೆಗೆಯಿರಿ, ಅರ್ಧ ಟೀ ಚಮಚ ರಸಕ್ಕೆ ಎರಡು ಚಿಟಿಕೆ ಸುಟ್ಟಬಿಗಾರದ ಪುಡಿ ಸೇರಿಸಿ ಬೆಳಿಗ್ಗೆ ಒಂದೇ ವೇಳೆ ಸೇವಿಸುವುದು. ತಲೆ ಸುತ್ತು ಎರಡು ಗ್ರಾಂ ಗೋರಂಟಿ ಬೀಜಗಳನ್ನು ನಯವಾಗಿ ಅರೆದು ಒಂದು ಟೀ ಚಮಚ ಶುದ್ಧ ಜೇನಿನಲ್ಲಿ ಮಿಶ್ರ ಮಾಡಿ ಸೇವಿಸುವುದು. ಹಲ್ಲು ನೋವು ಮತ್ತು ಹುಳುಕು ಹಲ್ಲಿನಲ್ಲಿ ಹಸಿ ಗೋರಂಟಿ ಸೂಪ್ಪನ್ನು ಜಜ್ಜಿ ಉಂಡೆ ಮಾಡಿ ನೋವಿರುವ ಜಾಗದಲ್ಲಿ ಇಡುವುದು, ರಸವನ್ನು ಆಗಾಗ್ಗೆ ಉಗುಳುತ್ತಿರುವುದು. ಬೆವರು ಸೆಲೆ ಒಂದು ಹಿಡಿ ಹಸಿ ಗೋರಂಟಿ ಎಲೆಗಳನ್ನು ತಂದು ಚೆನ್ನಾಗಿ ಕುಟ್ಟಿ ಶುಭ್ರವಾದ ಬಟ್ಟೆಯಲ್ಲಿ ಸೋಸಿ ಚೆನ್ನಾಗಿ ರಸ ತೆಗೆಯುವುದು, ಈ ರಸವನ್ನು ಬೆವರು ಸೆಲೆಗೆ ಹಚ್ಚುವುದು. ಗಜಕರ್ಣ, ಹುಳುಕಡ್ಡಿ ಮತ್ತು ದದ್ದುಗಳಿಗೆ ಮೊದಲು ಗಾಯ ಇರುವು ಕಡೆ ಒರಟು ಬಟ್ಟೆಯಿಂದ ಸ್ವಲ್ಪ ಉಜ್ಜುವುದು. 20ಗ್ರಾಂ ಗೋರಂಟಿ ಬೀಜಗಳನ್ನು ಗಟ್ಟಿ ಮೊಸರಿನಲ್ಲಿ 3ದಿನ ನೆನೆಹಾಕುವುದು, ಮೂರು ದಿನಗಳ ನಂತರ ಈ ಬೀಜಗಳನ್ನು ಚೆನ್ನಾಗಿ ರುಬ್ಬಿ ಲೇಪಿಸುವುದು. 2ಗ್ರಾಂ ಬೀಜಗಳ ಚೂರ್ಣವನ್ನು ಕಾದಾರಿದ ನೀರಿನಲ್ಲಿ ಹೊಟ್ಟೆಗೆ ಕೊಡುವುದು. ಬಿಳಿ ತೊನ್ನು ಮತ್ತಿತರ ಚರ್ಮ ವ್ಯಾಧಿಗಳಿಗೆ ಈ ಮೂಲಿಕೆಯಲ್ಲಿ ರಕ್ತ ಶುದ್ದಿ ಮಾಡುವ ಗುಣವಿದೆ, 10ಗ್ರಾಂ ಗೋರಂಟಿ ಬೀಜಗಳನ್ನು ನಯವಾಗಿ ಅರೆದು ಚೂರ್ಣ ಮಾಡುವುದು. ಅರ್ಧ ಟೀ ಚಮಚ ಚೂರ್ಣಕ್ಕೆ ಅರ್ಧ ಸಕ್ಕರೆ ಪುಡಿ ಸೇರಿಸಿ ಸೇವಿಸುವುದು. ಹೀಗೆ ನಲವತ್ತು ದಿವಸ, ಒಂದು ಟೀ ಚಮಚ ಗೋರಂಟಿ ಬೀಜಗಳನ್ನು ನಿಂಬೆ ರಸದಲ್ಲಿ ಅರೆದು ಹೊರಗೆ ಲೇಪಿಸುವುದು, ಸ್ವಲ್ಪ ಶ್ರೀಗಂಧವನ್ನು ನೀರಿನಲ್ಲಿ ತೇದು ನೀರಿನಲ್ಲಿ (ಒಂದು ಬಟ್ಟಲು) ಕದಡಿ ಸೇವಿಸುವುದು. ಮದರಂಗಿ ಕೈಯ ಮೇಲೆ ಹೇಗೆ ರಂಗು ಮೂಡಿಸುತ್ತದೆಯೋ ಹಾಗೆಯೇ ಪ್ರಾಕೃತಿಕ ಔಷಧವು ಹೌದು.. ಮದರಂಗಿಯಲ್ಲಿ ಮನಸ್ಸಿನ ರಂಗು ಮೂಡಿದೆ… *******************

ಮದರಂಗಿ (ಮೆಹೆಂದಿ) Read Post »

ಆರೋಗ್ಯ, ಇತರೆ

ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಅನುಭವ ಆರೋಗ್ಯದ ಬಗ್ಗೆ ಕಾಳಜಿ ಇರಲಿ ಚಂದ್ರಮತಿ ಅದೊಂದು ಸಂಜೆ ! ಸಹಿಸಲಾರದ ವೇದನೆ ಆತಂಕ .ಬಲಹೀನ ತೋಳುಗಳು . ಏನಾಯ್ತು , ಹೇಗಾಯ್ತು ಮುಂದೆ ನಾನು  ಕೆಲಸ ಮಾಡೋದು ಹೇಗೆ  ಎಂದೆಲ್ಲ ಯೋಚಿಸ್ತಾ ಸಮಯ ವ್ಯರ್ಥಮಾಡಿ ಸಹಿಸಿಕೊಳ್ಳಲು ಅಸಾಧ್ಯ ವಾದಾಗ ಮೊರೆ ಹೋಗಿದ್ದು ಗೂಗಲ್ ಮಹಾಶಯನನ್ನು . ಅವನ ಸಲಹೆಯಂತೆ ಮನೆಯ ಸನಿಹದಲ್ಲೇ ಇರುವ ರೂಪೇಶ್ ಆರ್ಥೋಪೆಡಿಕ್ ಸೆಂಟರ್ಗೆ ಬೇಟಿ ಕೊಟ್ಟಾಗ ಅಲ್ಲಿಯ ಡಾ. ರೂಪೇಶ್ ಅವರು ಸರಳ ಮಾತು ಹಾಗೂ ಸೌಜನ್ಯತೆಯಿಂದ ಸರಿಯಾದ ಚಿಕಿತ್ಸೆ ಮಾಡಿಸ್ಕೊಂಡರೆ ಸರಿ ಹೋಗ್ತೀರ . ಚಿಂತೆ ಭಯವನ್ನೆಲ್ಲಾ ಬಿಟ್ಟು ಪಿಸಿಯೋತೆರಪಿ  ಹತ್ತು ಸೆಶನ್ ಮಾಡಿಸಿಕೊಳ್ಳಿ ಎಂದು ಧೈರ್ಯ ತುಂಬಿದಂತಹ ಪ್ರಾಮಾಣಿಕ ವೈದ್ಯರು. ಎಷ್ಟು ವಯಸ್ಸು ? ವಾವ್ ಹಾಗೆ ಕಾಣಸೋದೇ ಇಲ್ಲ ಎಷ್ಟು ಯಂಗ್ ಕಾಣ್ತಿದೀರ ಅದು ನಿಮಗೆ ಗೊತ್ತೇ ? ಅಂತ ಪ್ರೀತಿಯಿಂದ ಕೇಳಿದಾಗ ಮನಸ್ಸಿನಲ್ಲೇ ನಕ್ಕು  ‘ ರೋಗಿ ಬಯಸಿದ್ದು ಹಾಲು ಅನ್ನ ಡಾಕ್ಟರ್ ಕೇಳಿದ್ದು ಹಾಲು ಅನ್ನ ‘  ಅನ್ನೋ ಹಾಗೆ ಮೊದಲೇ ಸ್ವಲ್ಪ ಮಟ್ಟಿಗೆ ಆರೋಗ್ಯ ದ ಕಾಳಜಿ ಹಾಗೂ ಸೌಂದರ್ಯ ಪ್ರಜ್ಞೆ ಇರುವ ಹಾಗೂ ಅರ್ಧ ಶತಕ ಬಾರಿಸಿದ ನನಗೆ ಆ ನೋವಿನಲ್ಲೂ ಅವರ ಮಾತು ಹಿತವೆನಿಸಿ ಇದಕ್ಕಿಂತ ಹೆಚ್ಚು ರೋಗಿಗೆ ಇನ್ನೇನು ಬೇಕು ಅಂದುಕೊಂಡು ಹೌದಾ ! ಎಂದು ಅಚ್ಚರಿ ತೋರಿಸಿ ಧನ್ಯವಾದಗಳನ್ನು ತಿಳಿಸಿದೆ. ಮೃದು ಮಾತು ನಡತೆಯಿಂದಲೇ ಅರ್ಧ ನೋವು  ಕಡಿಮೆ ಮಾಡಿ ಗೆಳೆಯರಂತೆ ಚಿಕಿತ್ಸೆ ನೀಡಿದ್ದು ಭರವಸೆಯನ್ನು ತುಂಬಿದ್ದು ಫಿಸಿಯೋತೆರಪಿಷ್ಟ  ಮಿ.ಮಾನ್ತೇಷ್    ತುಂಬಾ  ಸರಳ ಹಾಗೂ ಪ್ರಾಮಾಣಿಕ ವ್ಯಕ್ತಿತ್ವ.  ‘ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ‘ ಅನ್ನೋ ಹಾಗೆ ವಯಸ್ಸು ಚಿಕ್ಕ ದಾದರೂ  ಪಿಸಿಯೋಥೆರಪಿಯಲ್ಲಿ ಹೆಚ್ಚಿನ ಅನುಭವವುಳ್ಳ ವ್ಯಕ್ತಿ .ಕೆಲವು ತಿಂಗಳುಗಳಿಂದ ನಿದ್ದೆಯನ್ನೇ ಕಾಣದ ನನಗೆ ಹಾಗೂ ಒಂದು ಚಿಕ್ಕ ವಸ್ತು ವನ್ನೂ ಹಿಡಿಯಲು ಸಾಧ್ಯವಾಗದ ಈ ನನ್ನ ತೋಳುಗಳಿಗೆ ಭರವಸೆಯಿಂದ ಸಾಂತ್ವನ ನೀಡಿದ ಪುಣ್ಯಾತ್ಮರು ಎಂದರೂ ಅತಿಶಯೋಕ್ತಿಯಾಗಲಿಕ್ಕಿಲ್ಲ. ಎರಡು ವರ್ಷಗಳ ಅವರ ವೃತ್ತಿಯಲ್ಲಿ 2000 ಕ್ಕೂ ಹೆಚ್ಚು ಮತ್ತು ಒಂದು ವರ್ಷ ಅವಧಿಯಲ್ಲಿ ಬೆಂಗಳೂರಿನಲ್ಲಿ 800ಕ್ಕೂ ಹೆಚ್ಚು  ವಿವಿಧ ತರಹದ ಆರ್ಥೋ ಗೆ ಸಂಬಂಧ ಪಟ್ಟಂತಹ ಎಲ್ಲಾ  ರೋಗಿಗಳಿಗೆ ಫಿಸಿಯೋತೆರಪಿ ನೀಡಿ ಗಣಮುಖಮಾಡಿದಂತಹ ಅದ್ಭುತ ಫಿಸಿಯೋಥೆರಪಿಷ್ಟ್.  ಏಕೆಂದರೆ ಯಾವುದೇ ರೀತಿಯ ನೋವು ಉಪಶಮನ ಔಷಧಿಗಳನ್ನು ಸಲಹೆ ನೀಡದೆ ಕೇವಲ ಫಿಸಿಯೋ ಮತ್ತು ಬ್ರೀಥಿಂಗ್ ವಿಥ್ ಮೆಲೋಡಿ ಮ್ಯೂಸಿಕ್,  ನೀಡಲ್ ಚಿಕಿತ್ಸೆ ಹೀಗೆ ಅನೇಕ   ಥೆರಪಿ  ಯಿಂದಲೇ ನನಗೆ ಕೇವಲ ಒಂದು ತಿಂಗಳಲ್ಲೇ  ಸಂಪೂರ್ಣ ಗುಣಮುಖಳನ್ನಾಗಿಸಿದ್ದು ನನಗೆ ಸರಿಯಾದ ಸಮಯಕ್ಕೆ ಸಿಕ್ಕ ರತ್ನ ಎಂಬುದು ನನ್ನ ಅಭಿಮತ.‘ ಯಾವುದೇ ರೋಗವಿರಲಿ ಆರಂಭದಲ್ಲೇ ಅದನ್ನು ಸರಿಯಾಗಿ ಗುರುತಿಸಿ ಚಿಕಿತ್ಸೆ ನೀಡುವಂತಹ ಇಂತಹ ವೈದ್ಯರುಗಳ ಅವಶ್ಯಕತೆಯಿದೆ ‘ದೇವರನ್ನು ನಾವು ಒಂದು ಒಳ್ಳೆಯ ವ್ಯಕ್ತಿ ಯಲ್ಲೇ ಕಾಣಬಹುದು . ಬೇರೆ ಕಡೆ ಹುಡುಕುವ ಅವಶ್ಯಕತೆ ಇಲ್ಲವೆಂದನಿಸಿತು.‘ ವೈದ್ಯಃ ನಾರಾಯಣೋ ರೂಪಃ ‘   ಅನ್ನೋ ಹಾಗೆ  ವೈದ್ಯರಲ್ಲೇ ದೇವರನ್ನು ಕಂಡ  ಕ್ಷಣ . ದಿನದಿಂದ ದಿನಕ್ಕೆ ನೋವು ಗುಣಮುಖವಾದಂತೆ ಅವರಲ್ಲಿ  ನಾರಾಯಣನ ರೂಪವನ್ನೇ ಕಂಡ ನಾನು ಅವರ ಶ್ರಮಕ್ಕೆ ಹಾಗೂ ಚಿಕಿತ್ಸೆಗೆ  ಚಿರ ಋಣಿಯಾಗಿರುತ್ತೇನೆ. ಆಪತ್ಕಾಲದ ಬಾಂಧವರೆಂದರೆ ಹೃದಯವಂತ ವೈದ್ಯರು. ಹೆಚ್ಚಾಗಿ ನಲವತ್ತರ ಹರೆಯದಲ್ಲಿ ಕಾಣಿಸಿಕೊಳ್ಳುವ ಫ್ರೋಜನ್ ಶೋಲ್ಡರ್ ಎಂಬ ದೈತ್ಯ ನೋವನ್ನು ನಿರ್ಲಕ್ಷಿಸ ಬಾರದು.  ಹಾಗೂ  ಪ್ರಾರಂಭದಲ್ಲೇ ಪರೀಕ್ಷಿಸಿ  ಚಿಕಿತ್ಸೆ ಮಾಡಿಸಿ ಕೊಳ್ಳಲೇ ಬೇಕು  ಮೂಢ ನಂಬಿಕೆಗೆ ಅವಕಾಶ ಕೊಡದೆ ಮೊದಲು ವೈದ್ಯಕೀಯ ತಪಾಸಣೆ ಮಾಡಿಸ ಬೇಕು ಅನ್ನೋ ಅರಿವು ಪ್ರತಿ ಯೊಬ್ಬರಲ್ಲೂ  ಬರಬೇಕು. ಮಿತಿ ಮೀರಿದ ಸಂದರ್ಭದಲ್ಲಿ ಭಗವಂತನೂ ಅಸಹಾಯಕನಾಗಿ ಬಿಡುತ್ತಾನೆ.ವಯಸ್ಸು ಯಾವುದೇ ಇರಲಿ ಇರುವಷ್ಟೂ ದಿನ ಆರೋಗ್ಯವಂತರಾಗೇ ಇದ್ದು ಚಟುವಟಿಕೆಯಿಂದ ಕ್ರಿಯಾಶೀಲರಾಗಿ ಜೀವನ ಪಯಣ ಮುಗಿಸ ಬೇಕು ಅನ್ನೋ ಮನೋಭಾವ ಎಲ್ಲರಲ್ಲೂ ಮೂಡಬೇಕು. ಅದರ ಜೊತೆ ದೇವರಂಥ ವೈದ್ಯರು ದೊರಕಬೇಕು. *************************************

ಆರೋಗ್ಯದ ಬಗ್ಗೆ ಕಾಳಜಿ ಇರಲಿ Read Post »

ಆರೋಗ್ಯ, ಇತರೆ

ಟೆಲಿಮೆಡಿಸನ್-

ಲೇಖನ ಟೆಲಿಮೆಡಿಸನ್- ದೂರವಾಣಿಯಮೂಲಕತಲುಪಿಸುವಸಹಾಯವಾಣಿ ಡಾ.ವಿಜಯಲಕ್ಚ್ಮೀಪುರೋಹಿತ್ ದೂರವಾಣಿಯಮೂಲಕವೇರೋಗಿಯ/ ರೋಗದಅವಸ್ಥೆತಿಳಿದುಕೊಂಡುಸೂಕ್ತಸಲಹೆ, ಸಂಶಯಪರಿಹಾರ, ಪಥ್ಯಪಾಲನೆ, ಔಷಧಿ, ಉಪಚಾರಕ್ರಮ, ಮನೋಸ್ಥೈರ್ಯಬೆಳೆಸುವದು,ಅವಶ್ಯಕತೆಇದ್ದಲ್ಲಿಅಂಬುಲನ್ಸವ್ಯವಸ್ಥೆಕಲ್ಪಿಸುವದು, ರೋಗಿಯನ್ನಸೂಕ್ತವಾದಆಸ್ಪತ್ರೆಗೆಸೇರಿಸುವದುಇತ್ಯಾದಿಸೇವೆಗಳನ್ನುಬರೀದೂರವಾಣಿಸಂಭಾಷಣೆಯಮೂಲಕಒದಗಿಸುವಮಹತ್ವದಕಾರ್ಯವನ್ನುಈಟೆಲಿಮೆಡಿಸಿನ್ಸೇವೆಯಮೂಲಕಮಾಡಲಾಗುತ್ತದೆ. ಕೋವಿಡ 19 , ಇದುಕೊರೊನಾಎಂಬವೈರಸ್ಮುಖಾಂತರಮನುಕುಲಕ್ಕೆಬಂದುತೊಂದರೆಉಂಟುಮಾಡಿದಹೊಸಕಾಯಿಲೆ . ಕಣ್ಣು, ಮೂಗುಬಾಯಿಯಮೂಲಕಮಾನವದೇಹವನ್ನುಸೇರುವಈವೈರಾಣುಗಂಟಲಪ್ರವೇಶಿಸಿಅಲ್ಲಿಂದlungs ಪುಪ್ಪುಸದಕಾರ್ಯಕ್ಷಮತೆಯನ್ನುತಗ್ಗಿಸುತ್ತಹೋಗುತ್ತದೆ. ಹಾಗೆಯೆಉಸಿರಾಟದತೊಂದರೆಗಂಭೀರವಾಗಬಹುದು, ಅಲ್ಲದೆಬೇರೆಅವಯವಗಳಿಗೂರೋಗಹರಡಿತೀವ್ರತೊಂದರೆಉಂಟಾಗಬಹುದುಒಮ್ಮೊಮ್ಮೆರೋಗಿಯುಸಾವನ್ನಪ್ಪಬಹುದು. ಇಂತಹವಿಷಮಪರಿಸ್ಥಿತಿಯಲ್ಲಿನಮ್ಮಕರ್ನಾಟಕಸರಕಾರವನ್ನುಅವರಶ್ಲಾಘನೀಯಕೆಲಸವನ್ನುನಾವೆಲ್ಲಮೆಚ್ಚಲೇಬೇಕು. “ಆಪ್ತಮಿತ್ರ“ಸಹಾಯವಾಣಿಸಂಪರ್ಕನಾಡಿನಎಲ್ಲಜನತೆಗೂಕಲ್ಪಿಸಿಕೋಟ್ಟಿದ್ದಾರೆ. ಈಸಹಾಯವಾಣಿಯುನಮ್ಮಮಾನ್ಯಮುಖ್ಯಮಂತ್ರಿಗಳಾದಶ್ರೀಯಡಿಯೂರಪ್ಪನವರು, ಆರೋಗ್ಯಇಲಾಖೆಯಮಂತ್ರಿಗಳುಅಲ್ಲದೇ disaster management team (ವಿಪತ್ತುನಿರ್ವಹಣೆತಂಡ.) ಮತ್ತುಕರ್ನಾಟಕದಆರೋಗ್ಯಹಾಗೂಕುಟುಂಬರಕ್ಷಣೆಯವರೂ ( karnataka health and family welfare)ಈಸಹಾಯವಾಣಿಯಸದುದ್ದೇಶದಲ್ಲಿಭಾಗವಹಿಸಿದ್ದಾರೆ. ನಮ್ಮಆಯುಷ್ಯಇಲಾಖೆಯ joint director dr sridhar ಅವರೂ commissionar _ಆದಶ್ರೀಮತಿ ಮೀನಾಕ್ಷಿನೇಗಿಅವರುಸೇರಿದಂತೆರೋಗದಹತೋಟಿಗೆಸರಿಯಾದಸಮಯಕ್ಕೆಇದನ್ನುಸಾರ್ವಜನಿಕಬಳಕೆಗೆಸಿಧ್ದಪಡಿಸಿದ್ದಾರೆ. ಅಲ್ಲದೇಈಡಿಜಿಟಲ್ಆ್ಯಾಪ( digital app) ಮಾಡುವಲ್ಲಿ(Infosys )ಇನಫೋಸಿಸ್ಸಂಸ್ಥೆಯವರಸಹಾಯಹಸ್ತವೂಇದೆ. CRM system  develop ಮಾಡಿದ್ದಾರೆ. ಇದೊಂದು toll free ನಂಬರಾಗಿರುತ್ತದೆ. ಯಾರುಬೇಕಾದರೂಈಸಹಾಯವಾಣಿಗೆಕರೆಮಾಡಬಹುದು.ಇದಕ್ಕೆಯಾವಶುಲ್ಕಇಲ್ಲ. ಕರ್ನಾಟಕದಯಾವದೇಊರು, ಹಳ್ಳಿಯಿಂದಕರೆಮಾಡಿತಮ್ಮಆರೋಗ್ಯದಬಗ್ಗೆತಿಳಿದುಕೊಳ್ಳಬಹುದು. ಇಡೀನಮ್ಮರಾಜ್ಯದಲ್ಲಿಇಂತಹ 6  ಕೇಂದ್ರಗಳಿದ್ದುಬೆಂಗಳೂರು, ಮೈಸೂರು,ಮಂಗಳೂರುಇತ್ಯಾದಿಕಡೆಗಳಲ್ಲಿಈಕೇಂದ್ರಗಳಿವೆ. ಈಕೋವಿಡ್ಕಾಯಿಲೆಗೆಸಂಬಂಧಿಸಿದಂತೆನಮ್ಮಆಪ್ತಮಿತ್ರವು 2 ಹಂತದಲ್ಲಿಕಾರ್ಯನಿರ್ವಹಿಸುತ್ತದೆ. ಇಲ್ಲಿಮುಖ್ಯವಾಗಿinfluenza like illness,( Ili) severe acute respiratory Illness  (Sari) ಈರೋಗದಹಂತಗಳನ್ನುತಿಳಿದುಸಕಾಲಕ್ಕೆಸೂಕ್ತಸಹಾಯಒದಗಿಸುವಲ್ಲಿಬಹಳಸಹಾಯಕಾರಿಆಗಿದೆ. ಹಾಗೂಬಹಳಷ್ಟುಜನರುಹೊರದೇಶದಿಂದಬಂದತಕ್ಷಣವೇಈ app download ಮಾಡಿಕೊಂಡುನಮನ್ನ್ನುಸಂಪರ್ಕಿಸಿದಉದಾಹರಣೆಗಳಿವೆ. ಮೊದಲನೆಯಹಂತದಲ್ಲಿರೋಗಿಯಬಗ್ಗೆಎಲ್ಲಮಾಹಿತಿಸಂಗ್ರಹಿಸಿರುತ್ತಾರೆ. ಅಂದರೆರೋಗಿಯಹೆಸರು, ವಯಸ್ಸು, ಊರು, ಮನೆವಿಳಾಸ,ಅವರಿಗಿರುವಲಕ್ಷಣಗಳು, ಎಷ್ಟುದಿನಗಳಿಂದಶುರುಆಗಿದೆ, ಈಸಧ್ಯದಲಕ್ಷಣಹೊರತುಪಡಿಸಿಮತ್ತೆಏನಾದರೂಕಾಯಿಲೆಆಂದರೆರಕ್ತದಒತ್ತಡ, ಸಕ್ಕರೆಕಾಯಿಲೆ, ಮೂತ್ರಜನಕಾಂಗಗಳರೋಗ, ಕಾನ್ಸರ, ಅಥವಾಅವರಿಗೆಈಗಾಗಲೇಕೊರೊನಾಸೋಂಕುತಗುಲಿದೆಯಾ,? ಅಥವಾಕೊವಿಡ್ಪೇಶಂಟರೋಗಿಗಳಸಂಪರ್ಕಕ್ಕೆಬಂದಿರುತ್ತ್ತಾರಾ?ಅವರವಾಸಸ್ಥಳಅಥವಾಕಚೇರಿಯಲ್ಲ್ಲಾಗಲಿ, ಕೊವಿಡ್ಪೇಶಂಟ್ಇದ್ದಾರಾಅವರಸಂಪರ್ಕಕ್ಕೆಬಂದಿದಾರಾ? ಮತ್ತೆಕೆಲವುಜಾಗಗಳು hot spot, containment zone ಗಳಾಗಿದ್ದುಅಲ್ಲಿಂದಏನಾದರೂಆವ್ಯಕ್ತಿಬಂದಿದ್ದಾರಾಇತ್ಯಾದಿಮಾಹಿತಿಇರುತ್ತದೆ. ಅಂದರೆರೋಗಿಯಎಲ್ಲಸವಿವರವಾದಮಾಹಿತಿ patients  detailed historyಇದ್ದಲ್ಲಿಅದನ್ನ್ಅವರುಮೊದಲನೇಹಂತದಲ್ಲಿಉಲ್ಲೇಖಿಸಿರುತ್ತ್ತಾರೆ. ಈಮೊದಲಹಂತದಲ್ಲಿನರ್ಸಿಂಗ ,nursingಫಾರ್ಮಾpharmaಹಾಗೂಆಯುಷ(ayush )Jr ವೈದ್ದರುಕಾರ್ಯನಿರ್ವಹಿಸುತ್ತಾರೆ. ಹಾಗೂಮೊದಲನೇಹಂತದವರುದಿನಾಲೂಒಮ್ಮೆಎಲ್ಲರೋಗಿಗಳಜೊತೆಮಾತನಾಡಿಅವರಆರೋಗ್ಯವಿಚಾರಿಸುತ್ತಾರೆ. ಏನಾದರೂಅವಶ್ಯವಿದ್ದಲ್ಲಿಮತ್ತೆಎರಡನೇಹಂತಕ್ಕೆಕಳಿಸುತ್ತಾರೆ. ಎರಡನೇಹಂತಕ್ಕೆಈವಿವರಗಳುಬಂದಾಗಅಲ್ಲಿಹೆಚ್ಚಾಗಿ30ವರ್ಷಅನುಭವೀವೈದ್ದರುಇಂಟಿಗ್ರೆಟೆಡಮೆಡಿಸಿನಓದಿದವೈದ್ಯಕೀಯವೃತ್ತಿಯವರುತಮ್ಮಸೇವೆಸಲ್ಲಿಸುತ್ತಾರೆ.ನಮಗೆಒಂದುಪೇಶಂಟ್ಬಂದತಕ್ಷಣನಮ್ಮಮೊಬೈಲಗೆಒಂದು sms ಮೆಸೆಜಕೂಡಬರುತ್ತ್ತದೆ. ಇಂತಹಹೆಸರಿನಪೇಷಂಟ್ನಿಮ್ಮಸೇವೆಗೆಕಾಯುತ್ತಿದ್ದಾರೆದಯವಿಟ್ಟುಕರೆಗೆಸ್ಪಂದಿಸಿಅಂತತಿಳಿಸಿರುತ್ತ್ದೆ.ನಾವುಎಸ್ಟುಬೇಗನಮ್ಮಿಂದಆಗುತ್ತದೊಅಂದರೆ ಒಂದು_5 ರಿಂದ10 ನಿಮಿಷದಒಳಗೆಆಕೇಸನ್ನುವಿಚಾರಣೆಗೆತೆಗೆದುಕೊಳ್ಳುತ್ತ್ತೆವೆ. ಮೊದಲನೇಹಂತದಲ್ಲಿಬಂದಮಾಹಿತಿಗಳನ್ನುಕೂಲಂಕುಷವಾಗಿಓದಿತಿಳಿದುಕೊಂಡುತಕ್ಷಣಪೇಶಂಟ್ಗೆನಾವುಆಪ್ತಮಿತ್ರಸಹಾಯವಾಣಿಯಮೂಲಕಫೋನ್ಮಾಡುತ್ತೆವೆ. ಆಗಪೇಸಂಟಗೆನಾವುಆಪ್ತಮಿತ್ರದಿಂದಡಾಕ್ಟರಕರೆಮಾಡುತ್ತ್ತಿದ್ದೆವೆ,ನಿಮ್ಮಸಮಸ್ಯೆಏನುಅಂತಕೇಳಿತಿಳಿದುಕೋಳ್ಳುತ್ತೆವೆ. ಆಗಅವರಲಕ್ಷಣ, ರೋಗದುಲ್ಬಣತೆಅಂದರೆ, ನೆಗಡಿಕೆಮ್ಮು, ಜ್ವರ,  ಮತ್ತಿನ್ನಿತರಲಕ್ಷಣಗಳಅವಸ್ಸ್ಥೆತಿಳಿದುಕೊಂಡುರೊಗಿಗೆಆವೇಳೆಯಲ್ಲಿಯಾವತರಹದಸೇವೆಯಅವಶ್ಯಕತೆಇದೆಎಂಬುದನ್ನುಪರೀಕ್ಷಿಸಿಅದಕ್ಕೆತಕ್ಕಂತೆ SMS message ಮೂಲಕಔಷಧಕಳಿಸಿಕೊಟ್ಟುಹೇಗೆಸೇವಿಸಬೇಕುಅಂತವಿವರಕೊಟ್ಟಿರುತ್ತದೆ . ಇನ್ನುಕೆಲವರಿಗೆರೋಗದಬಗ್ಗೆಸರಿಯಾದತಿಳುವಳಿಕೆಇಲ್ಲದೆವ್ರಥಾಗಾಬರಿಯಲ್ಲಿದ್ದುಮಾನಸಿಕಉದ್ವೇಗಕ್ಕೆಒಳಗಾಗಿರುತ್ತಾರೆ. ಅಂತಹರೋಗಿಗಳಿಗೆಸೂಕ್ತವಾದತಿಳುವಳಿಕೆ, counselling ಮಾಡಿಅವರಸಂಶಯಪರಿಹಾರಮಾಡಲಾಗುತ್ತದೆ . ಇನ್ನುಕೆಲವರಿಗೆಜ್ವರಸತತವಾಗಿಬರುತ್ತಿದ್ದುಅವರನ್ನುಅವರಮನೆಯಹತ್ತಿರದಜ್ವರಚಿಕಿತ್ಸಾಲಯ(fever clinic) ಗೆವಿಳಾಸವನ್ನುನಾವೇಕೊಟ್ಟುಕಳುಹಿಸುತ್ತೆವೆ. ಈ_app ತಯಾರುಮಾಡುವಾಗಲೇಕರ್ನಾಟಕದಎಲ್ಲಊರುಗಳಲ್ಲಿಜನರಿಗೆಅನಕೂಲವಾಗುವಂತೆfever clinic ಗಳವಿಳಾಸತಿಳಿಸುವವ್ಯವಸ್ಥೆಯನ್ನುಬಹಳಚೆನ್ನಾಗಿಕಲ್ಪಿಸಿಕೊಟ್ಟಿದೆ. ನಾವುಕೂಡನಮ್ಮ computer ನಲ್ಲಿನೊಡಿತತ್ಕ್ಷಣಕ್ಕೆಅದನ್ನುರೋಗಿಗೆಕೊಟ್ಡಾಗಆರೋಗಿಯುಸಕಾಲಕ್ಕೆfever clinin ತಲುಪಬಹುದು. ಅಲ್ಲಿಅವಶ್ಯಕತೆಇದ್ದಾಗ swab test ಮಾಡುತ್ತಾರೆ, ಇಲ್ಲವಾದಲ್ಲಿರೋಗಿಯನ್ನು physical exam ಮಾಡಿಅವರವರಲಕ್ಷಣಪ್ರಕಾರಔಷಧಿಸಲಹೆಮಾಡುತ್ತಾರೆ. ಅದೆಲ್ಲಶುಲ್ಕರಹಿತವಾದಪ್ರಕ್ರಿಯೆಗಳು. ಮತ್ತೆಕೆಲವುಸಂದರ್ಭಗಳಲ್ಲಿಉಸಿರಾಟದತೊಂದರೆ, ತೀವ್ರಜ್ವರಕೊವಿಡ್ಪಾಸಿಟಿವ್ಇದ್ದಾಗನಮ್ಮಕೊವಿಡ್ಅಂಬುಲನ್ಸಸರ್ವೀಸ್ಬಹಳಉತ್ತಮವಾಗಿಕಾರ್ಯನಿರ್ವಹಿಸುವಲ್ಲಿಸಫಲಆಗಿದೆ. (Covid ambulance service). Ambulance drivers ಗೆನಮ್ಮಮೆಸೆಜ್ಹೋಗಿ, ಅದರಜೊತೆಗೆರೋಗಿಯಹೆಸರು, ವಿಳಾಸ, ಫೋನ್ನಂಇತ್ಯಾದಿಗಳುಮಾಹಿತಿಯಾಗಿದ್ದುರೋಗಿಯನ್ನುಸರಿಯಾದಆಸ್ಪತ್ರೆಗೆ, ಸರಿಯಾದವೇಳೆಯಲ್ಲಿತಲುಪಿಸುವಕೆಲಸಮಾಡುತ್ತಾರೆ. ಅದುಸರಕಾರಿಅಥವಾಖಾಸಗೀಆಸ್ಪತ್ರೆಆಗಿರಬಹುದು‌ರೋಗಿಯಇಚ್ಛೆಯ , ಅನುಕೂಲದಪ್ರಕಾರಅವರನ್ನುಆಸ್ಪತ್ರೆಗೆಸೇರಿಸಲಾಗುತ್ತದೆ. ಆಸ್ಪತ್ರೆಗಳಲ್ಲಿಯೂಕೆಲವುವಿಧಗಳಿವೆ: *CCC: covid care centre :ಇದರಲ್ಲಿಲಕ್ಷಣಗಳಿಲ್ಲದಆದರೆಕೊವಿಡ್ಪಾಸಿಟಿವ್ಇದ್ದುಜೊತೆಗೆಕಡಿಮೆರೋಗದತೊಂದರೆಗಳುಕಂಡುಬಂದಲ್ಲಿಈಕೇಂದ್ರಗಳಿಗೆದಾಖಲಿಸಲಾಗುವದು. (Asymptomatic and mild cases) *DCHC: Dedicated Covid Health Centre. ಇದರಲ್ಲಿcovid positive ಇದ್ದು,ಕಡಿಮೆಲಕ್ಷಣಗಳಿಂದಹಿಡಿದುಮಧ್ಯಮರೋಗಇದ್ದವರನ್ನುದಾಖಲಿಸಲಾಗುತ್ತದೆ. ಹಾಗೂಇಂತಹವರಿಗೆ _24 ಗಂಟೆಗಳನಿಗಾಇಟ್ಟಿರಲಾಗುತ್ತದೆ. *DCH: Dedicated Covid Hospital: ಇದರಲ್ಲಿ intensive care unit(icu), ventilator ವೆಂಟಿಲೇಟರಗಳಸೌಲಭ್ಯಗಳಿದ್ದುಬಹಳತೀವ್ರಅವಸ್ಥೆಯಲ್ಲಿಯರೋಗಿಗಳನ್ನುಇರಿಸಲಾಗುತ್ತದೆ. ಹಾಗೂರೋಗಿಯನ್ನುಬಹಳಜಾಗರೂಕವಾಗಿನೋಡಿಕೊಳ್ಳಲಾಗುತ್ತದೆ. ಈರೀತಿನಮ್ಮಆಪ್ತಮಿತ್ರಸಹಾಯವಾಣಿಯಲ್ಲಿರೋಗಿಯಅವಶ್ಯಕತೆನೋಡಿಕೋಂಡುತಕ್ಕವ್ಯವಸ್ಥೆಒದಗಿಸಲಾಗುತ್ತದೆ. ಅದರಪ್ರಕಾರವಾಗಿ OTC ( over the counter) Health Counselling , Ambulance Assignment,, Non Medical Case, Follow up ಮುಂತಾದಸಲಹೆಗಳಲ್ಲಿನಾವುಯಾವದನ್ನುರೋಗಿಗೆಸೂಚಿಸಿದರೀತಿಯಲ್ಲಿಅದನ್ನತಿಳಿಸಿಆಕೇಸನ್ನುಅವತ್ತಿಗೆಮುಗಿಸುತ್ತೆವೆ.(Close) ಮಾಡಿರುತ್ತೆವೆ. ಇನ್ನುintegrated drs ಬಗ್ಗೆಹೇಳಬೆಕೆಂದರೆನಾವುBAMS 51/2 years ಓದಿಮುಂದೆ_2_ವರ್ಷದ integrated medicine  short term course ನ್ನುಆಗಿನಬೇಂಗಳೂರುವಿಶ್ವವಿದ್ಯಾಲಯದಿಂದಆಧುನಿಕಶಿಕ್ಷಣತರಬೇತಿಪಡೆದುವಿಕ್ಟೋರಿಯಾ, ವಾಣಿವಿಲಾಸಕೆಸಿಜನರಲ್ಮುಂತಾದಆಸ್ಪತ್ರೆಗಳಲ್ಲಿಪೂರ್ಣಾವಧಿಯತರಬೇತಿಪಡೆದವರಾಗಿರುತ್ತೆವೆ. ಹಾಗೂಈಗಎಲ್ಲವೈದ್ಯರು25-30 ವರ್ಷ family physician ಆಗಿಸಮಾಜದಲ್ಲಿಸೇವೆಸಲ್ಲಿಸಿದವರಾಗಿದ್ದೇವೆ. ಅಷ್ಟೇಅಲ್ಲದೇಈಆಪ್ತಮಿತ್ರಸಹಾಯವಾಣಿಯಕೆಲಸವನ್ನು computer ನಲ್ಲಿಮಾಡಬೇಕಾದಅನಿವಾರ್ಯತೆಯಲ್ಲಿಎಲ್ಲವೈದ್ಯರೂಅದನ್ನು__operate ಮಾಡುವದನ್ನುಕಡಿಮೆಅವಧಿಯಲ್ಲಿಕಲಿತುಸರಕಾರದಿಂದಒದಗಿಸಿರುವ training session ನನ್ನುಎಲ್ಲವೈದ್ರುಉತ್ಸಾಹದಿಂದಕಲಿತುಕೆಲಸಕ್ಕೆಸಿಧ್ದರಾದರು. ಕೆಲವುವೈದರುತಮ್ಮತಮ್ಮ clinic ಗಳಲ್ಲಿಯೂಕೆಲಸಮಾಡಿprivate practice ನಲ್ಲೂರೋಗಿಗಳನ್ನುಪರೀಕ್ಷಿಸಿ, ತಮ್ಮಜೀವನದಪರಿವೆಯನ್ನುಲೆಕ್ಕಿಸದೇ, ತಮ್ಮಕುಟುಂಬದವರಿಂದದೂರಉಳಿದು, ಈಸರಕಾರದಸಹಾಯವಾಣಿಯಲ್ಲಿಕೈಜೋಡಿಸಿಅತ್ಯಂತಮಹತ್ತರವಾದಶ್ಲಾಘನೀಯವಾದಕಾರ್ಯವನ್ನುಮಾಡಿದ್ದಾರೆಂದುಹೇಳಲುಹೆಮ್ಮೆಅನಿಸುತ್ತದೆ. ಎರಡೂಹೊತ್ತಿನclinic ನೋಡಿಕೊಂಡುಈಕೆಲಸದಲ್ಲ್ಲೂಕೈಜೋಡಿಸಿದವರಿದ್ದಾರೆ.  ಆಪ್ತಮಿತ್ರಸಹಾಯವಾಣಿಯುಎರಡು shift ನಲ್ಲಿಕೆಲಸನಿರ್ವಹಣೆಮಾಡುತ್ತದೆ. ಒಂದುಬೆಳಿಗ್ಗೆ8 a. M to 2 p.m ೮ಗಂಟೆಯಿಂದಮಧ್ಯಾಹ್ನ೨ಗಂಟೆವರೆಗೂಹಾಗೂ2 p.m to _9 p.m.(೨_ಗಂಟೆಯಿಂದರಾತ್ರಿ೯ಗಂಟೆ) ವರೆಗೂಕಾರ್ಯಮಾಡುತ್ತದೆ. ನಮ್ಮನಮ್ಮಕೆಲಸದಅವಧಿ ಯಲ್ಲಿನಮಗೆಬಂದಿರುವಪೇಶಂಟಗಳನ್ನುಸಂಪರ್ಕಿಸಿಸೂಕ್ತನಿರ್ಧಾರತೆಗೆದುಕೊಳ್ಳಬೇಕಾಗುತ್ತದೆ. ಹಾಗೂಒಂದುವೇಳೆಎಲ್ಲಪೇಶಂಟಟಿಕೆಟ್ಗಳನ್ನುಪೂರ್ತಿಗೊಳಿಸಲಾಗದಿದ್ರೆಮುಂದೆಸ್ವಲ್ಪಹೆಚ್ಚಿನಸಮಯತಗೊಂಡುಅವತ್ತಿನಎಲ್ಲರೋಗಿಗಳನ್ನುಅಟೆಂಡ್ಮಾಡಬೇಕಾಗುತ್ತದೆ. ಅಲ್ಲದೇನಮ್ಮಎಲ್ಲಮಹಿಳಾವೈದ್ಯರಪಾಲೂಇದರಲ್ಲಿಬಹುದೊಡ್ಡದಾಗಿದೆ.clinic ನೋಡಿಕೊಂಡು, ಮನೆಯಲ್ಲಿಯಾವಕೆಲಸದವರಸಹಾಯಇಲ್ಲದೇಹೋದರೂಮನೆಕೆಲಸದಜವಾಬ್ದಾರಿಯನ್ನುತಮ್ಮಹೆಗಲಿಗೇರಿಸಿಕೊಂಡುಹೊತ್ತುಹೊತ್ತಿಗೆಮನೆಯಎಲ್ಲರಊಟತಿಂಡಿಯನ್ನುಮಾಡುವಲ್ಲಿಚಾಕಚಕ್ಯತೆಯನ್ನುತೋರಿಸಿ,ಅಷ್ಟೇಲವಲವಿಕೆಯಿಂದಈಸಹಾಯವಾಣಿಯಕೆಲಸದಲ್ಲಿಕೈಜೋಡಿಸಿದ್ದಾರೆ. ಅದಕ್ಕೇಹೇಳುವದಲ್ವೇ“ತೊಟ್ಟಿಲತೂಗುವಕೈಜಗತ್ತನ್ನೇತೂಗಬಲ್ಲದು”ಅಂತ. ಎಷ್ಟೊಮನೆಗಳಲ್ಲಿಪುರುಷರೂಇಂತಹಸಂದಿಗ್ದಸಮಯದಲ್ಲಿಮನೆಕೆಲಸದಲ್ಲಿಕೈಜೋಡಿಸಿದ್ದುಹೊಗಳಿಕೆಗೆಸೂಕ್ತವಾದದ್ದು. ಎಲ್ಲವೈದ್ದರೂತಮ್ಮವಯಸ್ಸನ್ನುಮರೆತುಅತೀಉತ್ಸಾಹದಿಂದಸರಕಾರದಜೊತೆನಿಂತು, ಮಾನವೀಯತೆಯಮಮಕಾರವನ್ನುಎತ್ತಿಹಿಡಿದಿದ್ದಾರೆ. ಹಾಗೂಜನಪದೋಧ್ವಂಸ (pandemic disease)ರೋಗಗಳಬಗ್ಗೆನಮ್ಮಪುಸ್ತಕಗಳಲ್ಲಿಓದಿತಿಳಿದರೂಪ್ರತ್ಯಕ್ಷವಾಗಿನಿಭಾಯಿಸುವಅನುಭವವೇಬೇರೆ . ಅದೊಂದುಸಂತ್ರಪ್ತಿ,ಆನಂದನಿಜಆದರೆಒಮ್ಮೊಮ್ಮೆರೋಗಿಯತೀವ್ರಸ್ವರೂಪದಸಂದರ್ಭದಲ್ಲಿ , ಅವರಗೋಳುಅವರಮನೆಯಪರಿಸ್ಥಿತಿ, ಆರ್ಥಿಕಕಷ್ಟ, ಸಣ್ಣಸಣ್ಣಮಕ್ಕಳಿಗೂರೋಗಅಂಟಿರುವದು , ಎಲ್ಲರಮನಸ್ಸಿನಆತಂಕ, ಗಾಬರಿರೋಗಿಗಳುಅಂಬುಲನ್ಸನಲ್ಲಯೇಉಸಿರಾಟದತೊಂದರೆಯಿಂದಬಳಲುವದುಇವೆಲ್ಲಕೇಳಿನಮ್ಮಹ್ರದಯವೂಮಮಕಾರದಿಂದಮಿಡಿದುನಮ್ಮೆಲರಕಣ್ಣಂಚಿನಲಿನೀರುಬಂದಿದ್ದೂಇದೆ. ವೈದ್ಯರಾಗಿನಮ್ಮಕೈಲಾದಸ್ಟುಮಾಡಿದ್ದೇವೆಅಂತನಾವೇಸಮಾಧಾನಮಾಡಿಕೊಂಡರೂಪೇಶಂಟಗಳಆರ್ತನಾದನಮ್ಮಕಿವಿಯಲ್ಲಿಎಷ್ಟೋಹೊತ್ತುಇದ್ದೇಇರುತ್ತದೆ.ಇದೇಸಮಯದಲ್ಲಿನಮ್ಮಕೆಲವುವೈದ್ಯರುತಾವೇಸ್ವತ: ಕಾಯಿಲೆಗೆತುತ್ತಾದಉದಾಹರಣೆಗಳೂಇವೆ. ಕೆಲವರುಪರಿವಾರದಇತರಸದಸ್ಯರೊಡನೆಆಸ್ಪತ್ರೆಸೇರಿಚಿಕಿತ್ಸೆಪಡೆದುಕೊಂಡರೆಇನ್ನಕೆಲವರುಮನೆಯಲ್ಲಿಯೇಇದ್ದು(home quarantine ) ಆಗಿದ್ದುಚಿಕಿತ್ಸೆಪಡೆದಿದ್ದಾರೆ. ದೈವವಶಾತ್ನಮ್ಮತಂಡದವೈದ್ದರುಸಮಯಕ್ಕೆಸರಿಯಾಗಿಚಿಕಿತ್ಸೆಪಡೆದುಗುಣಮುಖರಾಗಿದ್ದಾರೆಎಂಬುವದೇಸಮಾಧಾನಕರವಿಷಯ. ನಮ್ಮಈಕೆಲಸಕ್ಕೆಬಹಳಜನರೋಗಿಗಳುಧನ್ಯವಾದಗಳನ್ನುಹೇಳುತ್ತಬಹಳತ್ರಪ್ತ್ತಿಯನ್ನುಹೋಂದಿದ್ದಾರೆ. ನಾವುಎಲ್ಲಸಲಹೆಗಳನ್ನುನೀಡಿದಬಳಿಕವೂಎಷ್ಟೋಸಲಪೇಶಂಟಗಳುಧನ್ಯವಾದಹೇಳುತ್ತಲೇಇರುತ್ತಾರೆ. ಹಾಗೂಸಾರ್ವಜನಿಕರೂಕೂಡಸಾಕಸ್ಟುಅರಿವುಮೂಡಿಸಿಕೊಂಡಿದ್ದಾರೆ. ಮಾಸ್ಕಧರಿಸುವದು,ಜನಗಳಮಧ್ಯಅಂತರಕಾಪಾಡಿಕೊಳ್ಳುವದು, ಕೈಗಳನ್ನುಶುಚಿಯಾಗಿಟ್ಟುಕೊಳ್ಳುವದು , ಆರೋಗ್ಯಕರಆಹಾರಸೇವನೆ, ವ್ಯಾಯಾಮ, ಧ್ಯಾನ, ಅನಾವಶ್ಯಕವಾಗಿಹೊರಗಡೆತಿರುಗಾಡದೇಇರುವದು, ಪ್ರತಿಷ್ಟೆಯನ್ನುಪಕ್ಕಕ್ಕಿಟ್ಟುಸರಳವಾದಕೆಲವೇಜನಸಮೂಹದಲ್ಲಿಹಬ್ಬ, ಮದುವೆ, ಹುಟ್ಟುಹಬ್ಬದಆಚರಣೆಗಳನ್ನುಅನುಸರಿಸುತ್ತಿದ್ದಾರೆ. ಹೀಗಾಗಿಬಹಳಜನಕಾಯಿಲೆಬರದಂತೆಕಾಪಾಡಿಕೊಳ್ಳುವಲ್ಲಿಸಫಲರಾದರೆ, ಇನ್ನುಬಹಳಜನಕಾಯಿಲೆಬಂದನಂತರವೂಚೆನ್ನಾಗಿಚೇತರಿಸಿಕೊಂಡದ್ದನ್ನುಕಾಣುತ್ತೆವೆ. ಹಾಗೂನಮ್ಮಸರಕಾರವೂಈಗಬಹಳಸ್ಟುವೈದ್ಯರನ್ನುಇದರಲ್ಲಿನೇಮಕಮಾಡಿಯಾರೂತೊಂದರೆಗೀಡಾಗದೇಬೇಗನೆಚಿಕಿತ್ಸೆಸೌಲಭ್ಯಒದಗಿಸುವಲ್ಲಿಮುಂದಾಗಿದೆ.‌ ಹಾಗಾಗಿಮೊದಮೊದಲುಒಬ್ಬೊಬ್ಬವೈದ್ಯರಿಗೂಅತಿಯಾದಸಂಖ್ಯೆಯಲ್ಲಿಪೇಶಂಟಬರುತ್ತಿದ್ದುಈಗಸ್ವಲ್ಪಸುಧಾರಣೆಕಂಡುಬಂದಿದೆ. ಇದಕ್ಕೆಲ್ಲಪರಿಹಾರಬೇಗಸಿಗಲಿ,ಎಲ್ಲರಜೀವನಸುಗಮವಾಗಿಸಾಗಲಿಅಂತಭಗವಂತನಲ್ಲಿಪ್ರಾರ್ಥೊಸೋಣ. **********************************************

ಟೆಲಿಮೆಡಿಸನ್- Read Post »

ಆರೋಗ್ಯ, ಇತರೆ

ಭಯ ಪಡುವುದೇನಿಲ್ಲ

  ಡಾ ಪ್ರತಿಭಾ  ಹಳಿಂಗಳಿ ಭಯ ಅಂದರೆ ಏನು ಎನ್ನುವವರು ಕೂಡ ಈ ಕೊರೊನಾ ಮಹಾಮಾರಿಗೆ ಹೆದರುವಂತಾಗಿದೆ.ತನ್ನ ಕಬಂಧ ಬಾಹುಗಳಿಂದ ಇಡಿಯ ವಿಶ್ವವನ್ನೇ ತಲ್ಲಣಗೊಳಿಸಿರುವ ಈ ರೋಗಕ್ಕೆ ಚಿಕಿತ್ಸೆ ಇನ್ನು ಲಭ್ಯವಿಲ್ಲ.            ಇದರ ಮುಖ್ಯ ಲಕ್ಷಣ ಸೀನು,ಕೆಮ್ಮು,ಜ್ವರ ನೋಡಿದರೆ ಸಾಮಾನ್ಯ ನೆಗಡಿ,ಕೆಮ್ಮಿನಂತೆ ಈ ರೋಗ ಯಾವುದೇ ಹೊತ್ತಿನಲ್ಲಿ ತನ್ನ ಅಸ್ತಿತ್ವ ಬದಲಾಯಿಸಿ ಭಯಂಕರ ವಾಗಿಬಿಡುತ್ತದೆ.ಉಸಿರಾಟದ ತೊಂದರೆ ಉಂಟಾಗಿ ಸರಿಯಾಗಿ ಉಸಿರಾಡಲು ಆಗದೆ ಆಕ್ಸಿಜನ್, ವೆಂಟಿಲೇಟರಗಳ ಬಳಕೆ ಅನಿವಾರ್ಯ ವಾಗುತ್ತದೆ.ಕೊರೊನಾ ಪೀಡಿತ ಎಲ್ಲಾ ರೋಗಿಗಳಿಗೂ ಆಕ್ಸಿಜನ್ ಮತ್ತು ವೆಂಟಿಲೆಟರ್ ಗಳ ಅವಶ್ಯಕತೆ ಇರುವುದಿಲ್ಲ ಬಹಳಷ್ಟು ಜನರಲ್ಲಿ ಅದು ಸಾಮಾನ್ಯ ಕೆಮ್ಮು, ಶೀತ ,ಜ್ವರ ದಂತಹ ಲಕ್ಷಣ ಹೊಂದಿ ಸರಿಹೋಗುತ್ತದೆ.                     ಇಷ್ಟು ಆದರೆ ಕೊರೊನಾ ಕ್ಕೆ ಯಾರ ಹೆದರುತ್ತಿರಲಿಲ್ಲವೆನೊ? ಆದರೆ ಇದು ಸಾಮಾನ್ಯ ಎನಿಸುತ್ತಲೆ ಕೆಲವರಿಗೆ ಉಸಿರಾಟದ ತೊಂದರೆ ಉಂಟಾಗಿ ರೋಗಿ ಸಾವನ್ನಪ್ಪಬಹುದು.ಇದರಲ್ಲಿ ಸಾವಿನ ಪ್ರಮಾಣ ಕಡಿಮೆ ಇರಬಹುದು ಆದರೆ ಇದು ಅತಿ ವೇಗವಾಗಿ ಹಬ್ಬುವ ,ಮತ್ತು ಸಾಂಕ್ರಾಮಿಕವಾಗಿ ಒಬ್ಬರಿಂದ ಒಬ್ಬರಿಗೆ ಕೆಮ್ಮು, ಸೀನು ಇದರ ಮೂಲಕ ಮತ್ತು ಶ್ವಾಸದ ಮೂಲಕವೂ ಈ ರೋಗ ಹೊರಡುತ್ತದೆ. ಇದರಲ್ಲಿ ನಾವೇನು ಮಾಡಲು ಸಾಧ್ಯ ಇದರ ಬಗ್ಗೆ  ಅಷ್ಟೇ ನಾವು ಗಮನ ಹರಿಸಬೇಕು. ನಾವು ನೋಡುತ್ತಿರುವ ಹಾಗೆ ಪ್ರತಿಯೊಬ್ಬ ಮನುಷ್ಯನ ಸಹಜ ಚಟುವಟಿಕೆ ಮತ್ತು ಆರ್ಥಿಕತೆಗೆ ಹೊಡೆತ ಬಿದ್ದಂತಾಗಿದೆ. ನಿತ್ಯದ ಜನಜೀವನ ಅಸ್ತವ್ಯಸ್ತ ಆಗಿದೆ.ಬಸ್ಸಿನಲ್ಲಿ ಕೂರಲು ಭಯ,ಹೊಟೆಲಿಗೆ ಹೋಗಲು ಭಯ, ಜನಸಂದಣಿ ಯಂತು ಆಗಲೇ ಬಾರದು. ಅದರಂತೆ ಸಾಮಾಜಿಕವಾಗಿಯೂ ಬಹಳಷ್ಟು ಬದಲಾವಣೆಗಳಾಗಿವೆ. ಮದುವೆಗಳನ್ನು ಸರಳವಾಗಿ ಮಾಡಬೇಕು. ಜನದಟ್ಟಣೆ ಆಗದಂತೆ ನೋಡಿಕೊಳ್ಳಬೇಕು . ಯಾರಾದರೂ ತೀರಿ ಹೋದರು ಸಹ ಜನ ಜಾಸ್ತಿ ಸೇರಬಾರದು. ಯಾವುದೇ ಕಾರ್ಯಕ್ರಮ ಮಾಡಲು ಜನ ಸೇರಬಾರದು. ಕಾರ್ಯಕ್ರಮ ಮಾಡಲೇ ಕೂಡದು ಹೀಗೆ ಜನರ ಸಾಮಾಜಿಕ ಕೊಂಡಿಗಳು ಕಳಚುತ್ತಿದ್ದು ಮನುಷ್ಯ ಒಬ್ಬಂಟಿಯಾಗಿ ಬದುಕಬೇಕಾಗಿದೆ.ಇದು ಇಂದಿನ ತುರ್ತು ಕೂಡಾ ಪ್ರತಿಯೊಬ್ಬರೂ ಇದರ ಬಗ್ಗೆ ಹೆದರದೆ ಆತ್ಮವಿಶ್ವಾಸ ದಿಂದ  ಇದನ್ನೆದುರಿಸುವ ಧೈರ್ಯ ಮಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ ಕಡ್ಡಾಯವಾಗಿ ಧರಿಸಬೇಕು. ಮೇಲಿಂದ ಮೇಲೆ ಕೈ ತೊಳೆಯುತ್ತಿರಬೇಕು.ಅನಿವಾರ್ಯ ಕಾರಣ ಗಳಿದ್ದರೆ ಮಾತ್ರ ಮನೆಯಿಂದ ಹೊರ ಹೋಗಬೇಕು. ಇದು ಯಾರೋ ನಮ್ಮ ಮೇಲೆ ಹೇರಿದ ಕಾನೂನು ಆಗಬಾರದು. ನಾವೇ ಸ್ವಯಂ ಪ್ರೇರಿತರಾಗಿ ನಮ್ಮ ಮತ್ತು ನಮ್ಮ ಸುತ್ತಲಿನ ಜನರ ಸೌಖ್ಯ ಕ್ಕಾಗಿ ಇದನ್ನು ಅನುಸರಿಸಲೇಬೇಕು .      ‌‌                **********

ಭಯ ಪಡುವುದೇನಿಲ್ಲ Read Post »

ಆರೋಗ್ಯ, ಇತರೆ

ಆರೋಗ್ಯ

ಧೂಮಪಾನ ದುಷ್ಟಪರಿಣಾಮಗಳು. ಸಂಗಮೇಶ ಎನ್ ಜವಾದಿ  ಧೂಮಪಾನ ಎಂದರೆ ಹೊಗೆಯ ರುಚಿ ತೆಗೆದುಕೊಳ್ಳುವ ಅಥವಾ ಉಸಿರಿನ ಮೂಲಕ ಹೊಗೆಯನ್ನು ಒಳತೆಗೆದುಕೊಳ್ಳುವುದನ್ನು ಧೂಮಪಾನ ಸೇವನೆ ಯೆಂದು ಕರೆಯಲಾಗುತ್ತದೆ. ಇದರಿಂದ ಹೊರಡುವ ಹೊಗೆಯನ್ನು ಉಚ್ಛ್ವಾಸದ ಮೂಲಕ ಒಳತೆಗೆದುಕೊಂಡಾಗ ಇದರ ಸಕ್ರಿಯ ವಸ್ತುಸಾರಗಳು ಆಲ್ವಿಯೋಲೈ ಮೂಲಕ ಶ್ವಾಸಕೋಶದಲ್ಲಿ ಹೀರಲ್ಪಡುತ್ತವೆ.ಈ ಸಕ್ರಿಯ ವಸ್ತುಸಾರಗಳು ನರಗಳ ತುದಿಗಳಲ್ಲಿ ರಾಸಾಯನಿಕ ಕ್ರಿಯೆಗಳನ್ನುಂಟುಮಾಡಿ ಹೃದಯ ಬಡಿತದ ವೇಗ, ನೆನಪಿನ ಶಕ್ತಿ, ಸಕ್ರಿಯತೆ ಹಾಗೂ ಪ್ರತಿಕ್ರಿಯಿಸುವ ಸಮಯದಲ್ಲಿ ಏರಿಕೆಯನ್ನುಂಟುಮಾಡುತ್ತವೆ. ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಚಟ ಹೆಚ್ಚಾಗಿ ಗ್ರಾಸವಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ 500ರಲ್ಲಿ 100ಜನರಿಗೆ ಮಾದಕ ವ್ಯಸನಿಗಳಾಗಿದ್ದರೆ, ಇತ್ತೀಚಿನ ದಿನಗಳಲ್ಲಿ 100ರಲ್ಲಿ 40 ಜನರಿಗೆ ಇಂತಹ ಚಟಗಳಿಗೆ ವ್ಯಸನಿಯಾಗಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಇಂತಹ ಮಾದಕ ವಸ್ತುಗಳ ಸೇವನೆಯಿಂದ ಯಾವುದೇ ಪ್ರಯೋಜನ ವಿಲ್ಲದುದ್ದರೂ,ಮೋಜು ಮಸ್ತಿಗಾಗಿ, ಪಾಶ್ಚಾತ್ಯ ಸಂಸ್ಕೃತಿಯ ಸೆಳೆತ, ಸಂಪ್ರದಾಯದ ಕಂದಾಚಾರ, ಕಾಮೋತ್ತೇಜನ ಪ್ರಚೋದನೆಗಾಗಿ, ಆಕ್ರಮಣ ಶೀಲತೆ ತೋರಿಸಲು, ಪ್ರತಿಭೆ ಪ್ರದರ್ಶನಕ್ಕೆ, ಹಣಕಾಸು ಸಮಸ್ಯೆ, ಖಿನ್ನತೆ ಯಂತಹ ವಿಷಯಗಳಿಂದಾಗಿ,ಧೂಮಪಾನದಂತ ಚಟಗಳತ್ತ ಆಕರ್ಷಿತರಾಗುತ್ತಿದ್ದಾರೆ. ಹೀಗಾಗಿ ಈಗ ತಂಬಾಕು ಭಾರತದಲ್ಲಿ ಹಲವು ರೂಪಗಳಲ್ಲಿ ಸರ್ವೇಸಾಮಾನ್ಯವಾಗಿ ವ್ಯಾಪಕವಾಗಿ ಬಳಕೆಯಲ್ಲಿರುವ ಒಂದು ವ್ಯಸನಕಾರಿ ಪದಾರ್ಥ. ನಿಕೊಟಿನ್ ತಂಬಾಕನ್ನು ಸಿಗರೇಟ್ ರೂಪದಲ್ಲಿ ವಿಶ್ವದಾದ್ಯಂತ ಹೆಚ್ಚಾಗಿ ಬಳಸಲಾಗುತ್ತಿರುವಂತೆ, ಭಾರತದಲ್ಲಿ ಸಿಗರೇಟ್, ಬೀಡಿ, ನಶ್ಯ, ಹುಕ್ಕಾ ಮತ್ತು ಜಗಿಯುವ ತಂಬಾಕು ಎಂಬ ಬೇರೆಬೇರೆ ರೂಪದಲ್ಲಿ ಬಳಸಲಾಗುತ್ತದೆ.ಧೂಮಪಾನ ದುಶ್ಚಟಗಳ  ಬಳಕೆಗೆ ಯಾವುದೇ ನಿರ್ಧಿಷ್ಟ ಕಾರಣಗಳು ಇಲ್ಲದಿದ್ದರೂ, ಹಿರಿಯರ ಜೊತೆಗೆ ಇವತ್ತಿನ ಯುವ ಸಮೂಹ ಕೂಡ, ಕ್ಷುಲಕ ಕಾರಣ, ಕ್ಷಣಿಕ ತೀರ್ಮಾನಗಳಿಂದಾಗಿ ದುಶ್ಚಟಕ್ಕೆ ಬಲಿಯಾಗುತ್ತಿದೆ. ವಿಶ್ವ ಸಂಸ್ಥೆಯ ಸಮೀಕ್ಷೆಯ ಪ್ರಕಾರ 1 6ರ ವಯೋಮಿತಿಯಿಂದ 30ರ ವಯೋಮಿತಿಯ ಒಳಗಿನವರೇ, ಇಂತಹ ದುಶ್ಚಟಗಳಿಗೆ ಬಲಿಯಾಗುತ್ತಾರೆ ಎನ್ನುವ ಅಂಶ ಹೊರಗೆಡುವಿದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯ ಎಂದರೆ ಶೇ 10ರಲ್ಲಿ 4 ಜನ ಧೂಮಪಾನವನ್ನು, 3 ಜನ ಮದ್ಯಪಾನವನ್ನು ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸ್ತ್ರೀಯರು ಕೂಡ ಇದರಿಂದ ಹೊರತಾಗಿಲ್ಲ. ಧೂಮಪಾನ ಅತಿ ಹೆಚ್ಚಿನ ವ್ಯಸನಕಾರಿ ಪದಾರ್ಥ ಮತ್ತು ಅದರ ಸೇವನೆ ಬಿಡಬೇಕೆಂದುಕೊಂಡರೂ ಬಿಡಲು ಸಾಧ್ಯವಾಗುವುದಿಲ್ಲ. ಇದು ಹೆಚ್ಚಿನ ವಿಷಕಾರಿ ಗುಣ ಹೊಂದಿದೆ. ಜಗತ್ತಿನಾದ್ಯಂತ ಪ್ರತಿ ವರ್ಷ ತಂಬಾಕು ಸೇವನೆಯಿಂದ 40 ಲಕ್ಷ ಸಾವು ಸಂಭವಿಸುತ್ತಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ತಂಬಾಕು ಪ್ರತಿ ವರ್ಷ ಒಂದು ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಕೊಲ್ಲುತ್ತಿದೆ.ತಂಬಾಕು ಸಂಬಂಧಿತ ರೋಗಗಳಿಂದ ಭಾರತದಲ್ಲಿ ಪ್ರತಿನಿತ್ಯ 2500 ಜನರು ಮರಣ ಹೊಂದುತ್ತಿದ್ದಾರೆ. ವಿಶ್ವದಾದ್ಯಂತ ಕೊಕೇನ್ ಅಥವಾ ಹೆರಾಯಿನ್ ಮತ್ತು ಮದ್ಯ ಬಳಕೆಯಿಂದ, ಅಗ್ನಿ ದುರಂತ, ಕೊಲೆ, ಆತ್ಮಹತ್ಯೆ, ಅಪಘಾತ ಮತ್ತು ಏಡ್ಸ್ ನಿಂದಾಗುವ ಸಾವುಗಳ ಒಟ್ಟೂ ಸಂಖ್ಯೆಗಳಿಗಿಂತಲೂ ತಂಬಾಕು ಸೇವನೆಯಿಂದ ಸಾಯುವವರ ಸಂಖ್ಯೆಯು ಅಧಿಕ ಪ್ರಮಾಣದಲ್ಲಿದೆ. ಧೂಮಪಾನದಲ್ಲಿ ಏನಿದೇ : ಹೊಗೆಸೊಪ್ಪಿನ ಗಿಡದಲ್ಲಿನ ನಿಕೊಟಿಯಾನಾ ಟೊಬ್ಯಾಕಮ್ ಎನ್ನುವ ಸಾರವನ್ನು ಬಳಸಿಕೊಂಡು ತಯಾರಾಗುವ ಪದಾರ್ಥ ತಂಬಾಕು. ಈ ಗಿಡದ ಒಣಗಿದ ಎಲೆಗಳನ್ನು ಉಳಿದ ಕೆಲವು ವಸ್ತುಗಳೊಂದಿಗೆ ಮಿಶ್ರಣ ಮಾಡಿ ಬೀಡಿ, ಸಿಗರೇಟ್, ನಶ್ಯ, ಹುಕ್ಕಾ, ಜರ್ದಾ, ಕಡ್ಡಿಪುಡಿ ಮತ್ತು ತಂಬಾಕಿನ ಉಳಿದ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಸುಫಾರಿ ಜಗಿಯುವುದರ ಮೂಲಕ, ಸೇದುವುದರ ಮೂಲಕ (ನಶ್ಯ), ಧೂಮಪಾನದ ಮೂಲಕ (ಸಿಗರೇಟ್, ಬೀಡಿ) ಹೀಗೆ ಅನೇಕ ವಿಧಗಳಲ್ಲಿ ತಂಬಾಕನ್ನು ಬಳಸಲಾಗುತ್ತದೆ. ಮುದ ನೀಡುವ ನಿಕೊಟಿನ್ ತಂಬಾಕು ಗಿಡದ ಎಲೆಗಳಲ್ಲಿ ಕಂಡುಬರುವ ರಾಸಾಯನಿಕ. ಧೂಮಪಾನ ಅಥವಾ ತಂಬಾಕು ಜಗಿಯುವುದು ನಿಕೊಟಿನ್ ಮತ್ತು ಕಾರ್ಬನ್ ಮೋನಾಕ್ಸೈಡ್ ಹಾಗೂ ಟಾರ್ಗಳನ್ನೊಳಗೊಂಡು ಅಂದಾಜು 4000 ಬೇರೆ ರೀತಿಯ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಧೂಮಪಾನ ವ್ಯಸನಕ್ಕೆ ಕಾರಣಗಳು : ತಂಬಾಕು ಸೇವನೆಯು ಮಿದುಳಿನಲ್ಲಿ ಆನಂದ ನೀಡುವ ಡೋಪಮೈನ್‌ ನರವಾಹಕವನ್ನು ಬಿಡುಗಡೆ ಮಾಡುತ್ತದೆ. ಮಿದುಳು ಇದನ್ನು ಆನಂದದಾಯಕವಾದ ಚಟುವಟಿಕೆ ಎಂದು ಗ್ರಹಿಸುತ್ತದೆ ಮತ್ತು ವ್ಯಕ್ತಿಯು ತಂಬಾಕು ಸೇವನೆಯನ್ನು ಮತ್ತೆಮತ್ತೆ ಬಯಸುವಂತೆ ಮಾಡುತ್ತದೆ. ಕ್ರಮೇಣ ಮಿದುಳಿನ ಸಂದೇಶವಾಹಕಗಳು ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತವೆ. ಇದರಿಂದಾಗಿ ಆನಂದದ ಭಾವ ಹೊಂದಲು ಮಿದುಳು ಹೆಚ್ಚು ತಂಬಾಕು ಪದಾರ್ಥಗಳ ಸೇವನೆಯನ್ನು ಬಯಸುತ್ತದೆ. ವ್ಯಕ್ತಿಯು ನಿಕೊಟಿನ್ ಸೇವಿಸಿದಾಗ, ರಾಸಾಯನಿಕಗಳು ಚರ್ಮ, ಬಾಯಿ, ಮೂಗಿನ ನಾಳಗಳು ಹಾಗೂ ಶ್ವಾಸಕೋಶಗಳ ಮೂಲಕ ಮಾನವನ ಮಿದುಳನ್ನು ತಲುಪುತ್ತವೆ. ನಿಕೊಟಿನ್ಯುಕ್ತ ಧೂಮಪಾನವು ನಿಮಗೆ ತಕ್ಷಣ ನಶೆಯನ್ನು ಮತ್ತು ಅತಿಯಾದ ಶಕ್ತಿಯನ್ನು ನೀಡುತ್ತದೆ. ಕೆಲವು ನಿಮಿಷಗಳ ನಂತರ, ನಶೆ ಇಳಿದು ಹೋಗುತ್ತದೆ ಮತ್ತು ನಿಮಗೆ ಸುಸ್ತಾದಂತೆ ಅಥವಾ ಶಕ್ತಿ ಕಡಿಮೆಯಾದಂತೆ ಭಾಸವಾಗುತ್ತದೆ. ಇದರ ಪರಿಣಾಮವಾಗಿ, ನಿಮಗೆ ಮತ್ತೆ ಧೂಮಪಾನ ಮಾಡಬೇಕೆಂದು ಅನಿಸುತ್ತದೆ.ಅಧ್ಯಯನಗಳ ಪ್ರಕಾರ ಮಕ್ಕಳು ಹಾಗೂ ಹದಿಹರೆಯದವರು ಹೆಚ್ಚಿನ ಪ್ರಮಾಣದಲ್ಲಿ ತಂಬಾಕು ಉತ್ಪನ್ನಗಳ ವ್ಯಸನಿಗಳಾಗುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ತಂಬಾಕು ಬಳಸಲು ಆರಂಭಿಸಿದರೆ, ವ್ಯಸನಿಗಳಾಗುವ ಸಾಧ್ಯತೆ ಹೆಚ್ಚು.ತಂಬಾಕು ವ್ಯಸನದಿಂದ ಮಿದುಳಿನಲ್ಲಿ ಉಂಟಾಗುವ ಬದಲಾವಣೆಗಳು ಕೊಕೇನ್ ಮತ್ತು ಹೆರಾಯಿನ್ ಬಳಕೆಯಿಂದ ಉಂಟಾಗುವ ಬದಲಾವಣೆಗಳಂತೆ. ದೀರ್ಘಕಾಲದ ಬಳಕೆಯಿಂದ ವ್ಯಕ್ತಿಗೆ ಧೂಮಪಾನ ಮಾಡುವ (ಅಥವಾ ತಂಬಾಕು ಪದಾರ್ಥಗಳ ಬಳಕೆಯ) ಬಯಕೆ ಕೂಡ ಉಂಟಾಗಬಹುದು. ಸಾಮಾನ್ಯವಾಗಿ ಬೆಳಗ್ಗೆ ಏಳುವಾಗ, ಕಾಫಿಯ ಸೇವಿಸುವಾಗ, ಕೆಲಸದ ನಡುವಿನ ಊಟದ ವಿರಾಮದಲ್ಲಿ ತಂಬಾಕು ಸೇವನೆಯನ್ನು ಬಯಸುವಂತೆ ಮಾಡುತ್ತದೆ. ವಾಹನ ಚಲಿಸುವಾಗ, ಮದ್ಯಪಾನ ಮಾಡುವಾಗ ಅಥವಾ ಒತ್ತಡದ ಕೆಲಸ ಮಾಡುತ್ತಿರುವಾಗ ಧೂಮಪಾನ ಮಾಡಬೇಕೆಂದು ಬಲವಾಗಿ ಅನಿಸುವ ಸಾಧ್ಯತೆಯೂ ಇದೆ. ಧೂಮಪಾನದ ದುಷ್ಟಪರಿಣಾಮಗಳು : ಸಿಗರೇಟ್ ನಲ್ಲಿ ಸುಮಾರು 4000 ವಿಷ ಪದಾರ್ಥಗಳಿದ್ದು 400ರಕ್ಕೂ ಹೆಚ್ಚು ಪದಾರ್ಥಗಳು ಕ್ಯಾನ್ಸರಿಗೆ ಕಾರಣವಾಗಿವೆ,ಅತಿಯಾದ ಧೂಮಪಾನ ನರಗಳ ದೌರ್ಬಲ್ಯ,  ಜೀರ್ಣ  ಶಕ್ತಿಯಲ್ಲಿನ  ಇಳಿತಕ್ಕೆ ಕಾರಣವಾಗುತ್ತದೆ. ಸತತವಾದ ದಮ್ಮು , ರಕ್ತದ ಖಾಯಿಲೆ  ಉಂಟುಮಾಡುತ್ತದೆ. ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಗೆ ಭಂಗ ತರುತ್ತದೆ. ದೇಹದ ಎಲ್ಲಾ ಅಂಗಗಳಿಗೂ ಧಕ್ಕೆಯಾಗುತ್ತದೆ .5 ಸೆ, ಮೀ, ಸಿಗರೇಟ್ ಸೇವನೆಯಿಂದ 5 ನಿಮಿಷ ಆಯಸ್ಸು ಕಡಿಮೆಯಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಜಠರ ಮತ್ತು ಕರುಳಿನ ಮೇಲೆ ಧೂಮಪಾನ ಸರಿಪಡಿಸಲು ಆಗದಂತಹ ಪರಿಣಾಮ ಬೀರುತ್ತದೆ. ಸಿಗರೇಟಿನಲ್ಲಿರುವ ದುಷ್ಪರಿಣಾಮ ಬೀರುವ ವಿಷದ ಅಂಶ ಜಠರದ ಒಳಪದರವನ್ನು ಸವೆಸುತ್ತದೆ ಮತ್ತು ಜೀರ್ಣಾಂಗದ ಕಿಣ್ವಗಳು ಸರಿಯಾಗಿ ಕೆಲಸ ಮಾಡಲು ಅಡ್ಡಿಪಡಿಸುತ್ತದೆ. ಇದೇ ಕಾರಣದಿಂದ ಧೂಮಪಾನ ವ್ಯಸನಿಗಳು ಆಹಾರ ಜೀರ್ಣವಾಗುವುದರಲ್ಲಿ ತೊಂದರೆ ಅನುಭವಿಸುತ್ತಾರೆ.ಧೂಮಪಾನ ವ್ಯಸನಿಯಾಗಿದ್ದರೆ ನಿಮ್ಮ ನಾಲಗೆಯ ಮೇಲಿರುವ ರುಚಿ ಗ್ರಾಹಕ (ಟೇಸ್ಟ್ ಬಡ್) ಗಳು ಬೇಗನೆ ನಶಿಸಿ ಹೋಗುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿಯೇ ಧೂಮಪಾನ ವ್ಯಸನಿಗಳು ಖಾರ ಪದಾರ್ಥಗಳನ್ನು ಯಾವುದೇ ತೊಂದರೆಯಿಲ್ಲದೆ ಸೇವಿಸುತ್ತಾರೆ. ಅವರ ನಾಲಗೆಯ ಮೇಲಿನ ರುಚಿ ಗ್ರಾಹಕಗಳು ನಶಿಸಿ ಹೋಗಿರುವ ಕಾರಣ ಅವರಿಗೆ ರುಚಿ ತಿಳಿಯುದಿಲ್ಲ. ಕಳೆದ ದಶಕದಲ್ಲಿ ತಂಬಾಕು ಸಂಬಂಧಿತ ರೋಗಗಳು ತ್ವರಿತವಾಗಿ ಹೆಚ್ಚಾಗಿವೆ. ಸಂತಾನಕ್ಕಾಗಿ ದಂಪತಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಮಹಿಳೆಯರಲ್ಲಿ ಬೇಗನೆ ರಜೋನಿವೃತ್ತಿ ಹೊಂದುವಿಕೆ ಕಂಡು ಬರುತ್ತಿದೆ.ಧೂಮಪಾನ ಮಾಡುವವರು ಶೇ.14 ಬಂಜೆತನಕ್ಕೆ ಒಳಗಾಗುತ್ತಾರೆ. ಶೇ.30ರಷ್ಟು ಬಹುಬೇಗ ರಜೋನಿವೃತ್ತಿ ಹೊಂದುತ್ತಾರೆ. 30ರ ವಯೋಮಾನದ ಮಹಿಳೆಯರಲ್ಲಿ ಫಲವತ್ತತೆ ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಈ ಪ್ರಕ್ರಿಯೆಯು 35ರ ನಂತರ ವೇಗ ಪಡೆದುಕೊಳ್ಳುತ್ತದೆ. ಆದರೆ ತಂಬಾಕು ಬಳಕೆಯು ಅವಧಿಗೆ ಮುಂಚೆಯೇ ಈ ಸಮಸ್ಯೆಯನ್ನು ಹೆಚ್ಚಿಸುತ್ತದೆ. ದಿನಕ್ಕೆ 10ಕ್ಕಿಂತಲೂ ಹೆಚ್ಚು ಸಿಗರೇಟುಗಳ ಸೇವನೆಯು ನಿಮ್ಮ ಗರ್ಭಧರಿಸುವ ಸಾಮರ್ಥ್ಯ‌ದ ಮೇಲೆ ಹಾನಿಯುಂಟುಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.ಧೂಮಪಾನ ಮಾಡುತ್ತಿರುವ ಮಹಿಳೆಯರು ಶೇ.60ರಷ್ಟು ತಾವು ಗರ್ಭವತಿಯಾಗುವ ಸಾಧ್ಯತೆಯನ್ನು ಕಡಿಮೆ ಮಾಡಿಕೊಳ್ಳುವರು. ಇದು ಅಪಸ್ಥಾನೀಯ ಗರ್ಭಾವಸ್ಥೆ ಮತ್ತು ಇತರೆ ಟ್ಯೂಬಲ್‌ ಫ್ಯಾಕ್ಟರ್‌ ಬಂಜೆತನಕ್ಕೂ ಸಂಬಂಧ ಹೊಂದಿದೆ. ಸಿಗರೇಟಿನಲ್ಲಿ ಇರುವ ರಾಸಾಯನಿಕಗಳು ಗರ್ಭಕಂಠದ ಕ್ಯಾನ್ಸರ್‌ನ ಅಪಾಯವನ್ನು ಒಳಗೊಂಡಿವೆ.ತಂಬಾಕು ಪುರುಷರ ಸಂತಾನೋತ್ಪತ್ತಿ ಶಕ್ತಿಯ ಮೇಲೂ ಪ್ರಭಾವ ಬೀರುತ್ತದೆ. ಇದು ರಕ್ತನಾಳಗಳಿಗೆ ಹಾನಿಯುಂಟು ಮಾಡಿ ರಕ್ತದ ಹರಿವಿನ ಮೇಲೂ ಪ್ರಭಾವ ಬೀರುತ್ತದೆ. ಕೆಲವು ಅಧ್ಯಯನಗಳು ಧೂಮಪಾನದ ಪರಿಣಾಮಗಳನ್ನು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಮತ್ತು ಕಡಿಮೆಯಾದ ಲೈಂಗಿಕ ನೆರವೇರಿಕೆಯೊಂದಿಗೆ ಸಂಬಂಧ ಕಲ್ಪಿಸಿವೆ. ಮಾನವನ ವೀರ್ಯ ಕಣಗಳು ಸಮರ್ಪಕವಾಗಿ ಸಂತುಲಿತ ಒಂದರಿಂದ ಒಂದಕ್ಕೆ ಸಂಬಂಧ ಹೊಂದಿರುವ ಪ್ರೊಟಮೈನ್‌ 1 ಮತ್ತು ಪ್ರೊಟಮೈನ್‌ 2 ಎಂದು ಕರೆಯಲಾಗುವ ಎರಡು ಚಿಕ್ಕ, ಅಧಿಕ ಆವೇಶದ ಪ್ರೊಟೀನುಗಳನ್ನು ಕೊಂಡೊಯ್ಯುತ್ತವೆ. ಆದರೂ ಧೂಮಪಾನಿಗಳ ವೀರ್ಯವು ಬಹಳ ಕಡಿಮೆ ಪ್ರೊಟಮೈನ್‌ ಅನ್ನು ಕೊಂಡೊಯ್ಯುತ್ತದೆ. ತಂಬಾಕಿನಿಂದ ಉಂಟಾಗುವ ಹಾನಿಯು ವೀರ್ಯದಲ್ಲಿ ಕ್ರೊಮೊಸೋಮುಗಳ ಹಾನಿ ಮತ್ತು ಡಿಎನ್‌ಎ ವಿಘಟನೆಯನ್ನೂ ಒಳಗೊಳ್ಳುತ್ತದೆ. ಧೂಮಪಾನವು ವೀರ್ಯಕ್ಕೆ ಹಾನಿಯುಂಟುಮಾಡಿ ಸಂತಾನಶಕ್ತಿಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಧೂಮಪಾನಿಗಳ ವೀರ್ಯದಿಂದ ಬೆಳವಣಿಗೆಯಾದ ಭ್ರೂಣವು ಡಿಎನ್‌ಎ ಹಾನಿಯ ಕಾರಣದಿಂದಾಗಿ ಬದುಕುಳಿಯುವ ಕಡಿಮೆ ಸಾಧ್ಯತೆಯನ್ನು ಹೊಂದಿರುತ್ತದೆ. ನಿಷ್ಟ್ರೀಯ ಧೂಮಪಾನ ಪುರುಷರ ಸಂತಾನಶಕ್ತಿಯ ಮೇಲೆ ಪ್ರಭಾವ ಬೀರಬಹುದು. ಪುರುಷ ಧೂಮಪಾನಿಗಳು ಕಡಿಮೆ ಚಲನಶೀಲತೆಯೊಂದಿಗೆ ವೀರ್ಯದ ಕಡಿಮೆ ಗುಣಮಟ್ಟದೊಂದಿಗೆ ಬಳಲಬಹುದು ಮತ್ತು ಇದು ಅಸಹಜ ಆಕಾರದ ವೀರ್ಯಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಒಬ್ಬ ವ್ಯಕ್ತಿಯು ನಿರಂತರವಾಗಿ ಧೂಮಪಾನ ಮಾಡುವವನಾಗಿದ್ದರೆ, ಮೊಟ್ಟೆಗಳನ್ನು ಫಲವತ್ತತೆಗೊಳಿಸುವ ವೀರ್ಯದ ಸಾಮರ್ಥ್ಯ‌ವನ್ನೂ ಕಡಿಮೆ ಮಾಡಬಹುದು. ದೀರ್ಘಕಾಲದ ತಂಬಾಕು ಸೇವನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಚರ್ಮ ಹಾಗೂ ಹಲ್ಲುಗಳ ಅಕಾಲಿಕ ಮುಪ್ಪು (ಚರ್ಮ ಸುಕ್ಕುಗಟ್ಟುವಿಕೆ), ಕಣ್ಣಿನ ಪೊರೆ, ಅಧಿಕ ಅಥವಾ ಕಡಿಮೆ ರಕ್ತದೊತ್ತಡ, ಬೊಜ್ಜು, ಉಸಿರಾಟದ ತೊಂದರೆ, ಹೃದಯದ ತೊಂದರೆ ಹಾಗೂ ಸ್ಟ್ರೋಕ್ ಅಪಾಯ, ಭ್ರೂಣಕ್ಕೆ ಹಾನಿ ( ಗರ್ಭಿಣಿ ಮಹಿಳೆಯರು ಧೂಮಪಾನ ಮಾಡುವುದರಿಂದ), ನಪುಂಸಕತ್ವ ಅಥವಾ ಬಂಜೆತನದ ಸಮಸ್ಯೆಗಳು ಉಂಟಾಗಬಹುದು. ತಂಬಾಕು ಸೇವನೆಯು ಮಧುಮೇಹ, ಸಂಧಿವಾತ ಹಾಗೂ ಆಸ್ಟಿಯೋಪೊರೊಸಿಸ್ ಮುಂತಾದ ತೊಂದರೆಗಳನ್ನು ಹೆಚ್ಚು ಮಾಡಬಹುದು ಜೊತೆಗೆ ಧೂಮಪಾನ ಮಾಡಿದವರ ಆಯುಷ್ಯವು ಧೂಮಪಾನ ಮಾಡದವರ ಆಯುಷ್ಯಕ್ಕಿಂತ 15 ವರ್ಷ ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗಿದೆ ಹಾಗೂ ತಂಬಾಕಿನ ಪರೋಕ್ಷ ಧೂಮಪಾನ (ಪ್ಯಾಸಿವ್ ಸ್ಮೋಕಿಂಗ್) ಕೂಡ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು, ಹಾಗೂ ಇದು ಮಾರಕವೆಂದು ಸಾಬೀತಾಗಿದೆ. ದೀರ್ಘಾವಧಿಯ ಪರೋಕ್ಷ ಧೂಮಪಾನದಿಂದ ಶ್ವಾಸಕೋಶ, ಸ್ತನ ಹಾಗೂ ಲಿವರ್ ಕ್ಯಾನ್ಸರ್ ಸಾಧ್ಯತೆ ಹೆಚ್ಚು. ಇದು ಸ್ಟ್ರೋಕ್ ಹಾಗೂ ಹೃದಯಾಘಾತಗಳಿಗೆ ಕೂಡ ಕಾರಣವಾಗಬಹುದು. ಪರೋಕ್ಷ ಧೂಮಪಾನದಿಂದ ಹೊರಬರಲು ಯಾವುದೇ ‘ಸುರಕ್ಷತೆ’ಗಳಿಲ್ಲ ಹಾಗೂ ಹೊಗೆಯ ಅಪಾಯವನ್ನು ತಡೆಯಲು ಸಾಧ್ಯವಿಲ್ಲ.ಸಾಮಾನ್ಯವಾಗಿ ಬೀಡಿ, ನಶ್ಯ ಮತ್ತು ಇತರ ಹೊಗೆ ರಹಿತ ತಂಬಾಕು ಪದಾರ್ಥಗಳು ಸಿಗರೇಟ್ ಗಿಂತ ‘ಸುರಕ್ಷಿತ’ ಎಂಬ ನಂಬಿಕೆಯಿದೆ. ಇದು ಸತ್ಯವಲ್ಲ. ಅವು ಕೂಡ ಸಿಗರೇಟ್ನಂತೆಯೇ ವ್ಯಕ್ತಿ ಹಾಗೂ ಆತನ ಸುತ್ತಮುತ್ತಲಿನವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಧೂಮಪಾನ ವ್ಯಸನದ ಪರಿಣಾಮಗಳು — ತಂಬಾಕು ಅಥವಾ ನಿಕೊಟಿನ್ ಬಳಕೆ ದೇಹದ ಪ್ರತಿಯೊಂದು ಅಂಗದ ಮೇಲೂ ಪರಿಣಾಮ ಬೀರುತ್ತದೆ. ತಂಬಾಕು ಉತ್ಪನ್ನಗಳ ಬಳಕೆಯು ಅಡ್ರೆನಾಲಿನ್ (ದೇಹದೊಳಗೆ ಬಿಡುಗಡೆಗೊಳ್ಳುವ ಮುದ ನೀಡುವ ವಸ್ತು) ಬಿಡುಗಡೆ ಮಾಡುತ್ತದೆ. ಅದು ದೇಹದ ಉಷ್ಣಾಂಶವನ್ನು, ಹೃದಯ ಬಡಿತವನ್ನು ಹಾಗೂ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಶ್ವಾಸಕೋಶ, ಬಾಯಿ, ಸ್ತನ, ಗರ್ಭಕೋಶ, ಪ್ಯಾನ್ಕ್ರಿಯಾಸ್, ಮೂತ್ರಪಿಂಡ ಅಥವಾ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್ ತೊಂದರೆಗೆ ಒಳಗಾಗುವ ಅಪಾಯ ಹೆಚ್ಚು. ಹೊಗೆರಹಿತ ತಂಬಾಕು ಸೇವನೆಯನ್ನು ಮಾಡುವವರಲ್ಲಿ ಬಾಯಿ, ಧ್ವನಿಪೆಟ್ಟಿಗೆ, ಅನ್ನನಾಳ, ಪ್ಯಾನ್ಕ್ರಿಯಾಸ್ ಹಾಗೂ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು. ಧೂಮಪಾನವನ್ನು ತಡೆಗಟ್ಟುವ ವಿಧಾನ: ಅನೇಕ ಜನರು ಕೋಲ್ಡ್ ಟರ್ಕಿ ವಿಧಾನದ ಮೂಲಕ ತಮ್ಮ ನಿಕೋಟಿನ್ ಚಟವನ್ನು ಬಿಡಲು ಸಮರ್ಥರಾಗಿದ್ದಾರೆ (ಆದರೆ ಮನೋವೈದ್ಯರು

ಆರೋಗ್ಯ Read Post »

You cannot copy content of this page

Scroll to Top