ಮುಖ್ಯಮಂತ್ರಿ ಅವರ ತಾಯಿಯ “ಅವ್ವ” ಮಾಲಿಕೆಯ ಪ್ರಕಟಣೆಗಳು
ಮುಖ್ಯಮಂತ್ರಿ ಅವರ ತಾಯಿಯ “ಅವ್ವ” ಮಾಲಿಕೆಯ ಪ್ರಕಟಣೆಗಳು
ಮುಖ್ಯಮಂತ್ರಿ ಅವರ ತಾಯಿಯ “ಅವ್ವ” ಮಾಲಿಕೆಯ ಪ್ರಕಟಣೆಗಳು Read Post »
ಮುಖ್ಯಮಂತ್ರಿ ಅವರ ತಾಯಿಯ “ಅವ್ವ” ಮಾಲಿಕೆಯ ಪ್ರಕಟಣೆಗಳು
ಮುಖ್ಯಮಂತ್ರಿ ಅವರ ತಾಯಿಯ “ಅವ್ವ” ಮಾಲಿಕೆಯ ಪ್ರಕಟಣೆಗಳು Read Post »
ಕೃತಿ ಹೆಸರು ನೆಗಳಗುಳಿ ಗಜಲ್ಸ್
ಲೇಖಕರು ಡಾ.ಸುರೇಶ ನೆಗಳಗುಳಿ ಮಂಗಳೂರು
ಮೊ.ನಂ.೯೪೪೮೨೧೬೬೭೪,೮೩೧೦೨ ೦೩೩೩೭೮
ಪ್ರಕಾಶಕರ…….ಕಲ್ಲಚ್ಚು ಪ್ರಕಾಶನ ಮಂಗಳೂರು ಮೊ,ನಂ ೯೮೮೦೬ ೯೨೪೪೭
ಪ್ರಕಟಿತ ವರ್ಷ….೨೦೨೦,ಬೆಲೆ ೧೨೫ ₹
ಹುಟ್ಟು ಸಾವುಗಳನ್ನು ಮೀರಿ ಶ್ರೇಷ್ಠವಾದ ಸಾಧ್ಯತೆಗಳಿಗೆ ಅನುವು ಮಾಡಿಕೊಡುವಂತಹ ಒಂದು ರೀತಿಯ ಐಕ್ಯತೆಯನ್ನು ಸಾಧಿಸಲು ಸಂಬಂಧಗಳು ಒಂದು ಅವಕಾಶವಾಗಿದೆ.
ಸಂಬಂಧಗಳು ನಂಟೋ….ಕಗ್ಗಂಟೋ…. Read Post »
ಪ್ರಸ್ತುತದ “ಒಟ್ಟಾರೆ ಕಥೆಗಳು” ಕಥಾ ಸಂಕಲನದಲ್ಲಿ ರವಿ ಬೆಳಗೆರೆಯವರ ಎಲ್ಲಾ ೨೩ ಕತೆಗಳ ಸಂಗ್ರಹವಿದೆ. ೧೯೭೯ ರಿಂದ ೧೯೯೫ ರವರೆಗೆ ಹದಿನಾರು ವರ್ಷಗಳಲ್ಲಿ ಅವರು ಬರೆದ ಇಪ್ಪತ್ತೊಂದು ಕಥೆಗಳು ಮತ್ತು ಅನಂತರದ 2ಕಥೆಗಳು
ಒಟ್ಟಾರೆ ಕಥೆಗಳು : ಕಥಾ ಸಂಕಲನ Read Post »
ಪುಸ್ತಕ ಸಂಗಾತಿ ಸಾಮಾಜಿಕ ಚಿಂತನೆಯ ಕಾವ್ಯಕುಸುರಿ ಅಂಜುಬುರುಕಿಯ ರಂಗವಲ್ಲಿ ವೃತ್ತಿಯಲ್ಲಿ ಆರಕ್ಷಕರಾಗಿರುವ ಮಂಜುನಾಥ ಯಲ್ವಡಿಕವೂರ ಪ್ರವೃತ್ತಿಯಲ್ಲಿ ಕವಿ.ಉಡುಪಿ ಅದಿತಿ ಪ್ರಕಾಶನ ಇವರ ಚೊಚ್ಚಲ ಕವನ ಸಂಕಲನವನ್ನು ಹೊರತಂದಿದೆ. ಕನ್ನಡದ ಪ್ರೀತಿಯ ಕವಿ ಜಯಂತಕಾಯ್ಕಿಣಿಯವರು ಮುನ್ನುಡಿಯಲ್ಲಿ ಇವರ ಕವನಗಳ ಬಗ್ಗೆ ಬರೆಯುತ್ತ “ವೃತ್ತಿಯಲ್ಲಿ ಪ್ರವೃತ್ತಿಯಲ್ಲಿ ಸಮಾಜವನ್ನು ಒಂದು ದೊಡ್ಡ ಕುಟುಂಬವೆಂದು ಗ್ರಹಿಸುವ ಜೀವಿಯೊಬ್ಬನ ಆತ್ಮಸಾಕ್ಷಿ ರೂಪುಗೊಳ್ಳುವ ಧ್ವನಿ ಸೊಲ್ಲುಗಳು ಇಲ್ಲಿವೆ. ಸಮಾಜದ ಜೀವಪರಿಸರದಲ್ಲಿ ತನ್ನ ಅಸ್ಮಿತೆಯನ್ನು ಬೆರೆಸಿಕೊಂಡಿರುವ ಈ ಕವಿತೆಗಳ ತುಡಿತ ಮಹತ್ವದ್ದಾಗಿದೆ ಎನ್ನುತ್ತಾರೆ.” ಕವಿ ಮಂಜುನಾಥ ನನಗೆ “ಕಾವ್ಯವೆಂದರೆ ಜೀವಂತಿಕೆಯ ನಿಗಿನಿಗಿ ಕೆಂಡ;ಅರ್ಥವಂತಿಕೆಯ ಬೆರಗು; ತಪದ ಮುನಿಯ ತಲ್ಲೀನತೆ; ಚಿಂತನೆಯ ನಾಗಾಲೋಟದಲ್ಲಿ ಸಿಕ್ಕ ಮೈಲಿಗಲ್ಲು ಅಂದುಕೊಳ್ಳುತ್ತಾರೆ. ಮತ್ತು ಇವನೆಲ್ಲಾ ಅಳವಡಿಸಿಕೊಂಡು ಕವಿ ಚಿಂತನಶೀಲನಾಗಿ,ಸಾಮಾಜಿಕ ಕಳಕಳಿಯೊಂದಿಗೆ, ಗಂಭೀರವಾಗಿ, ಅರ್ಥವಂತಿಕೆಯೊಂದಿಗೆ ಬರೆಯುತ್ತಾರೆ. ಅವರ ಮೊದಲ ಕವನ ‘ಕನಸು ಮಾರುವ ಹುಡುಗ’ದಲ್ಲಿ ಕವಿ ಕಾಣುವ ಕನಸು ಪ್ರೀತಿಯದ್ದು. ಮಾನವ ಪ್ರೀತಿಯದ್ದು. ಮೊದಲ ಸಾಲಿನಲ್ಲಿಯೇ ರಂಜಾನ್ ಪೇಟೆ ಪಕ್ಷಿಕಾಶಿಯ ಕೇಕೆ. ರಂಜಾನ್ ಮುಸ್ಲಿಂ ಹಬ್ಬ. ಆದರೆ ಅಲ್ಲಿ ಖರೀದಿಸುವ ಜನ ಜಂಗುಳಿಯಲ್ಲಿ ಎಲ್ಲಾ ಧರ್ಮದವರೂಇದ್ದಾರೆ. ಅಲ್ಲಿ ಉಕ್ಕುವ ಗೌಜುಗದ್ದಲ ಕವಿ ಕಿವಿಗೆ ಪಕ್ಷಿಗಳ ಕಲರವವಾಗಿ ಕೇಳುತ್ತದೆ. ಕಾರಣಾಂತರಗಳಿಂದ ಜಾತಿ ಧರ್ಮದ ಸಂಬಂಧಗಳಿಗೆ ಸಂಚಕಾರ ಬಂದಿದೆ. ಒಂದಾಗುವ ಯಾವ ಸೂಚನೆಯೂ ಇಲ್ಲಾ. ಒಂದಾಗುವ ಕನಸುಗಳೂ ಇರಲಾರವು. ಈ ಕವಿಯಲ್ಲಿ ಒಂದುಗೂಡಿಸುವ ಮನೋಸಂಕಲ್ಪವಿದೆ. ಅದಕೆ ಕವಿ “ಬೀಗ ಜಡಿದ ಕನಸ ಮನೆಗೆ ಕೀಲಿ ಬೇಕೆ?”ಎಂದು ಮುಗ್ಧ ವಾಗಿ ಪ್ರಶ್ನಿಸುತ್ತಾನೆ. ‘ಬೋಧಿವೃಕ್ಷದ ನೆರಳು’ ಕವನದಲ್ಲಿ ಸಾಮಾನ್ಯನಿಗೆ ಅಸಾಧ್ಯವಾದ ದಾರಿಯಲ್ಲಿ ಬುದ್ಧ ನಡೆದ ರೀತಿಯನ್ನು ವಿಸ್ಮಯದಿಂದ ನೋಡುವ ಕವಿ “ನಿನ್ನ ಅಚಲ ನಿರ್ಣಯದ ಮೇಲೆ ಮೋಹದ ಬಲೆ ಬೀಸಿ ಕುಣಿಯಲಿಲ್ಲವೇ ಸಂಬಂಧಗಳ ಮಾಯಾಜಿಂಕೆ?”ಎಂದು ಬುದ್ಧನನ್ನು ಪ್ರಶ್ನಿಸುತ್ತ ಆತ್ಮಾವಲೋಕನ ಮಾಡಿಕೊಳ್ಳುತ್ತಾನೆ. ಬುದ್ಧನ ನಡೆಯನ್ನು ಮಿಥ್ಯದ ಸಮಾಧಿಯಿಂದ ಹೊರಟ ಸತ್ಯದ ಬೆಳಕಿನ ಹಾದಿಗಳು ಅನ್ನುವನು. ಬಂಧಿಖಾನೆಯೊಳಗೆ ಭಗವಂತ ಈ ಕವನದ ಶೀರ್ಷಿಕೆಯೇ ಎಲ್ಲಾ ದೇವಾಲಯಗಳ ಗುಟ್ಟುಗಳನ್ನೂ ಬಯಲು ಮಾಡುತ್ತದೆ. ವರ್ತಮಾನದ ಗಂಟೆ ಜಾಗಟೆಗಳ ಒಡಲೊಳಗೆ ಭೂತಕಾಲದ ಇಂಪಿಲ್ಲಾ ಅನ್ನುವಲ್ಲಿ ಕವಿ ಹತಾಶೆಯ ನಿಟ್ಟುಸಿರು ಬಿಡುತ್ತಾನೆ. ದೇವನ ಕೈ ಕಾಲು ಕಣ್ಣು ಕಿವಿ ಶಿರವೆಳೆದು ಮಾಡಿದರು ಚೂರು ಚೂರು ಬಂಧಿಖಾನೆಯೊಳಗೆ ಬಂಧಿಯ ಮಾಡಿ ಅನ್ನುವನು. ದೇವಾಲಯದ ಮೂಲ ಆಶಯವನ್ನು ಬದಿಗೊತ್ತಿ ಹಕ್ಕಿಗಾಗಿ ಹೋರಾಡಿ ದೇವರನ್ನು ಕಟಕಟೆಗೇರಿಸುವ ಚಿತ್ರವನ್ನು ಬಿಚ್ಚಿಡುತ್ತಾನೆ. ‘ಅಮೆರಿಕಾ ಕುದುರೆ ‘ಎನ್ನುವ ಕವನದೊಳಗೆ ಅಮೆರಿಕದ ವ್ಯಾಪಾರಿ ಬುದ್ಧಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಸುವ ದುರ್ಬುದ್ಧಿಗಳನ್ನು ಹೇಳುತ್ತ ‘ಗಾಂಧಿ ಚರಕ ಪುಡಿಯೆಬ್ಬಿಸಿ ಚಕ್ರಾಧಿಪತ್ಯದ ಅಹಮ್ಮಿನ ಕುದುರೆ ಅಂತರ್ಜಾಲದ ಬಲೆಮುಂದೆ ಮಾರ್ಜಾಲ ಕುದುರೆ’ ಎನ್ನುತ್ತ ಅಮೆರಿಕಾ ಭಾರತದ ಮೇಲೆ ಬೀರಿದ ಪ್ರಭಾವವನ್ನು ಈ ಮೂಲಕ ಬಿಂಬಿಸುತ್ತಾರೆ. ಚಿಕ್ಕಪುಟ್ಟಊರದಾರಿ ಜೀರುಂಡೆಗಳ ನೆತ್ತರು ಹೀರುವ ರಕ್ಕಸಕುದುರೆ ಕಂದಕಗಳ ಕೊಚ್ಚೆಯಲ್ಲಿ ಹೇಲುಚ್ಚೆ ಹೊಯ್ವ ಅಂಧಕಾರ ಕುದುರೆ ಎಂದು ಅಮೆರಿಕದ ದುರುಳತನದ ಬಗ್ಗೆ ಅತೀ ಖಾರವಾಗಿ ಪ್ರತಿಕ್ರಿಯಿಸುತ್ತಾನೆ ಕವಿ. ‘ವಿಷಕಾರುವವರದ್ದೇ ಸದ್ದು’ ಕವನದೊಳಗೆ “ಈಗೀಗ ಕೇರಿಯ ಹಾದಿಗಳಲ್ಲಿ ಉರಗಗಳ ಸರದಿ ವಿಷ ಜೀವಿಗಳು ಹಾವೋ ನಾವೋ ಗೊಂದಲವೋ ಗೊಂದಲ’ ಎಂದು ಆರಂಭವಾಗುವ ಕವನದೊಳಗೆ ಊರುಗಳಲ್ಲಿ ತುಂಬಿರುವ ದುರುಳಜನರ ಬಗ್ಗೆ ವ್ಯಥಿಸುತ್ತಾ ‘ನಮ್ಮ ಕೇರಿಯಲ್ಲೀಗ ವಿಷದ ಉರಗಗಳ ಸದ್ದಿಲ್ಲಾ ವಿಷ ಕಾರುವವರದೇ ಸದ್ದು ಎಂದು ಕವನ ಅಂತ್ಯವಾಗುತ್ತದೆ. ‘ಡೊಂಬರಾಟದ ಹುಡುಗಿ’ ಯಂಥ ಸಾಮಾಜಿಕ ಸಮಸ್ಯೆಗಳು ಇವರ ಲೇಖನಿಯಿಂದ ಜೀವತಳೆದು ನಿಲ್ಲುತ್ತವೆ. ಅವರ ನುಡಿಯಲ್ಲೇ ಆಲಿಸಿ “ಚಿಂದಿ ಬಟ್ಟೆಯ ಮೇಲೆ ಸಹಿಮಾಡಿದೆ ಬಡತನದ ಪ್ರತಿಬಿಂಬ, ಕಣ್ಣಲ್ಲಿ ಕತ್ತಲೋಡಿಸಬೇಕೆಂಬ ಚಂದ್ರಬಿಂಬ”. ಕವಿ ಇಲ್ಲಿ ಪರಕಾಯ ಪ್ರವೇಶಮಾಡಿ ಡೊಂಬರ ಹುಡುಗಿಯ ಒಳತೋಟಿಯನ್ನು ಪ್ರಕಟಪಡಿಸುತ್ತಾನೆ. ‘ಈ ಶಹರದ ಕಣ್ಣುಗಳಲ್ಲಿ’ ಅನ್ನುವ ಕವನದೊಳಗೆ “ನೆತ್ತರು ಮೆತ್ತಿದ ಶಹರದ ಡಾಂಬರು ರಸ್ತೆಯ ಉನ್ಮಾದದ ತುದಿಗೆ ಹಸಿವ ತೃಷೆಗೆ ಕುಕ್ಕಡಿಸೋ ಗಿಡುಗಕ್ಕೆ ರಕ್ತ ಬಿಸಿಯಲ್ಲಾ ಸಿಹಿಯ ಮೃಷ್ಟಾನ್ನ ಅನ್ನುತ್ತ ಶಹರದ ಶುಷ್ಕ ಕ್ರೂರ ವಾಸ್ತವ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ರೀತಿ ಸೊಗಸಾಗಿದೆ. ಅಂಜುಬುರುಕಿಯ ರಂಗವಲ್ಲಿ ಕವನದೊಳಗೆ ಕವಿ ಸುಪ್ಪತ್ತಿಗೆಯವರ ದಾಳದ ಕುರುಡರಿಂದ ಹೀಯಾಳಿಸಲ್ಪಡುವ ಮಾನವೀಯತೆಯ ಸೌಧನ್ನು ನಿರ್ಮಿಸಲು ಹಂಬಲಿಸಿ ಗೋಡೆಗಳನ್ನು ಕೆಡವಲು ಆಶಿಸುವನು.”ಬಿರುಕು ಗೋಡೆಗಳಿಗೆ ಮುಚ್ಚಿದ ಊರದಾರಿಗಳಿಗೆ ರಂಗವಲ್ಲಿಯೇ ಬೆಳದಿಂಗಳಾಗಬೇಕೆಂಬ ಕನಸಿನ ಕನವರಿಕೆ” ಕವಿಯಿಲ್ಲಿ ಕಳೆದು ಹೋಗಿರುವ ಸಹೋದರತ್ವವನ್ನು ಮನೆ ಮನದ ಮೌಲ್ಯದ ವಸ್ತುಗಳನ್ನು ಕಳಕೊಂಡವನಂತೆ ವ್ಯಥಿತನಾಗಿದ್ದಾನೆ. ಕವಿಯ ಎದೆಯಲ್ಲಿ ದಹಿಸುತ್ತಿರುವ ವಿಷಯಗಳಿಗೆ ತಾಳ್ಮೆಯಿಂದ ಕಾದು ಕಾವು ನೀಡಿ ವಿಚಾರ ಲಹರಿಯನ್ನು ಹದವಾಗಿ ಹರಿಬಿಟ್ಟಿದ್ದಾನೆ. “ಭೂಗರ್ಭದಲಿ ಫಲದ ಸೆಲೆ ಅಡಗಿಸಿಟ್ಟ ಶತಮಾನದ ಫಲದ ಈ ನೆಲ ಕಳೆಗುಂದಿದೆ ರಕ್ತದ ಕಲೆಗೆ. ಪಂಚಾಗ ಬರೆಯಲು ಕೊಟ್ಟು ಸೈತಾನಗಳ ಕೈಗೆ ಎಳ್ಳುನೀರು ಬಿಟ್ಟು ನಾಳೆಗಳ ನೆಮ್ಮದಿಗೆ ಕೊತಕೊತಿಸುತ್ತಿದೆ ಕಾಲಾಂತರದ ಅದಲು ಬದಲಿನ ಮಹಾಪರ್ವಕೆ” ಕವಿಯ ಅಂತರಂಗದಲ್ಲಿ ತುಮುಲದ ಅಲೆಯೆದ್ದಿದೆ. ಮಹಾಮಹಿಮರು ನೀಡಿದ ಅಮೂಲ್ಯ ಜ್ಞಾನ ಸಂಪತ್ತನ್ನು ಜನರ ಕುರುಡು ನಂಬಿಗೆಯನ್ನು ಸ್ವಾರ್ಥ ಸ್ವಜನ ಹಿತಾಸಕ್ತಿಗೆ ಬಳಸಿಕೊಂಡು ಹಂಗಿಸುವ ನಗೆಬೀರುವ ಧುರುಳುತನದ ಬಗೆಗೆ ಹತಾಸೆ ಬೆಂಕಿಯಾಗಿ ಸುಡುತ್ತಿದೆ. ಈ ಎಲ್ಲಾ ಅನಿಷ್ಟಗಳನ್ನೂ ದೂರೀಕರಿಸುವ ಮಹಾತ್ಮನಿಗಾಗಿ ಹಂಬಲಿಸುತ್ತಿದೆ ಕವಿಮನ. ‘ಕಹಳೆಗಳು’ ಇಲ್ಲಿ ಪುರಾಣೇತಿಹಾಸ ಪ್ರಸ್ತುತ ಕಾಲವನ್ನು ಸಮೀಕರಿ ಆಗಾಗ ಅದರಿಂದ ಉಂಟಾದ ಪರಿಣಾಮವನ್ನು ಕವಿ ಪ್ರಸ್ತುತಪಡಿಸುತ್ತಾನೆ. ಈ ಕಹಳೆ ಯೆಂದರೆ ಮನದಲ್ಲಿ ಹುಟ್ಟಿದ ಯುದ್ಧ ಮೊದಲು ಹುರುಪು ಹುಟ್ಟಿಸುವುದು ಕಹಳೆಯ ಮೂಲಕ. ಈ ಯಾರೋ ,ಯಾವುದೋ ಉದ್ದೇಶದಿಂದ ಹುಟ್ಟಿಸಿದ ಪ್ರಚೋದನೆ ದುರ್ಯೋಧನನ ತೊಡೆ ಮುರಿಯಿತು. ದ್ರೋಣಾಚಾರ್ಯರ ಪ್ರಾಣ ತೆಗೆಯಿತು. ಹಾಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರವಹಿಸಿತು. ಆದರೆ ಕವಿಯ ನುಡಿಯಲ್ಲೇ “ಈಗೀಗ ಬೀದಿಸಮಾರಂಭಗಳಲ್ಲಿ, ಟೀವಿಯ ಪರದೆಗಳಲ್ಲಿ ಯಾವುದೋ ಕಹಳೆಗಳಿಗೆ ಯಾರದೋ ಬೇಳೆ ಬೆಳೆಯುವ ಹುನ್ನಾರ. ಇಂದು ಪರರ ಮನೆಯ ಮಗುವನ್ನು ಬಾವಿಗೆ ತಳ್ಳಿ ಆಳನೋಡುವ ಹುನ್ನಾರ. ಜನರ ಮೆದುಳಿಗೆ ಪ್ರಚೋದನಕಾರಿ ಮಾತುಗಳ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ತಂತ್ರ.ಕವಿ ಈ ಪ್ರಚೋದನೆಯಿಂದ ಪಾರಾಗಿದ್ದಾನೆ. ನನಗೆ ಬೀದಿ ಹೆಣವಾಗುವುದು ಇಷ್ಟವಿಲ್ಲಾ.ನೀವೂ ಆಗಬೇಡಿ ಎನ್ನುವುದು ಕವಿಯ ಪರೋಕ್ಷ ಸಂದೇಶವಿದೆ ಇಲ್ಲಿ. ‘ಅಪ್ಪನ ಬೀಡಿ’ ಎನ್ನುವ ಸಾಮಾನ್ಯ ವಸ್ತುವಿಗೆ ಕವಿ ತುಂಬುವ ಜೀವ ಸ್ವಾರಸ್ಯಕರವಾಗಿದೆ.”ನಿನ್ನ ಕೊಳಕು ಅಂಗಿಯೊಳಗೆ ಅಡಗಿಸಿಟ್ಟ ಬೀಡಿಗೆ ಅನೂಹ್ಯ ಚೇತನವಿತ್ತು”. ಸಾಮಾನ್ಯ ಚಟವಾಗಿ ಕಾಣುವ ಬೀಡಿ ಕವಿಗೆ ಅಪ್ಪನ ಜೀವನ ಪ್ರೀತಿಯಾಗಿ ಕಾಣುತ್ತದೆ. ಅಪ್ಪನ ಕೊನೆಗಾಲದಲ್ಲಿ ಅವನಿಗೆ ಇಷ್ಟವಾದ ಬೀಡಿಕೊಡಲಾರದಷ್ಟು ಬಡವನಾಗಿದ್ದ ಕವಿ, ಕೊನೆಯಲ್ಲಿ ‘ಮಹಲಿನಂತೆ ಮನೆಯ ಕಟ್ಟಿ ಅಪ್ಪನ ಇಷ್ಟದ ಬೀಡಿಯ ಕೂಡಿಟ್ಟು ಕಾದಿರುವೆ, ಸೇದಲು ಅಪ್ಪನೇ ಇಲ್ಲಾ”. ಈ ಕವನ ಓದುವಾಗ ಓದುಗ ಕಣ್ಣೀರಾಗದೆ ಇರಲಾರ. ಬೀಡಿ ಸಾಂಕೇತಿಕವಾಗಿ ಬಂದರೂ ಬದುಕಿನ ವಿಪರ್ಯಾಸ ಈ ಕವನದಲ್ಲಡಗಿದೆ. ಪ್ರತಿಭಾವಂತನೊಬ್ಬ ಸಾಹಿತ್ಯಕ್ಷೇತ್ರದಲ್ಲಿ ತೊಡಗಿಕೊಂಡರೆ ಆಗುವ ಪರಿಣಾಮ ನೋಡುವುದಾದರೆ ಮಂಜುನಾಥ್ ರವರ ಅಂಜುಬುರುಕಿಯ ರಂಗವಲ್ಲಿಯಲ್ಲಿ ನೋಡಬೇಕು. ಇದು ಅವರ ಮೊದಲ ಸಂಕಲನವೆಂದು ಅನಿಸುವುದೇ ಇಲ್ಲಾ. ಪಳಗಿದವನ ಕೈಕುಸುರಿ ಇಲ್ಲಿ ಕೆಲಸಮಾಡಿದೆ. ಕವನದ ವಸ್ತುವಿನ ಆಯ್ಕೆ ವೈವಿಧ್ಯಮಯವಾಗಿದೆ. ಹೆಚ್ಚಿನ ಕವನಗಳು ಸಾಮಾಜಿಕ ಚಿಂತನೆಯ ವಿಷಯಗಳಾಗಿವೆ. ಕೆಲವು ಕವನಗಳು ವೈಯಕ್ತಿಕವಾಗಿವೆ ಎನಿಸಿದರೂ ಅವು ಸಾರ್ವತ್ರಿಕ ಸತ್ಯವನ್ನು ಬಿಂಬಿಸುತ್ತವೆ.ದೃಢ ನಂಬಿಕೆಯೊಂದಿಗೆ ತಮ್ಮ ವಿಚಾರ ಮಂಡಿಸುತ್ತಾನೆ ಕವಿ. ಗಟ್ಟಿಯಾದ ಕವನಗಳ ಬಂಧ ಮಂಜುನಾಥರವರ ಹಿಡಿತದಲ್ಲೇ ಇದೆ. ಭಾಷೆಯ ಮೇಲಿನ ಪ್ರಭುತ್ವ ಸದೃಢವಾಗಿದೆ.ಆಡಂಬರದ ಶಬ್ದ ಸಾಲುಗಳ ಕೋಟೆಯನ್ನು ಭೇದಿಸಿ ಮುನ್ನುಗ್ಗಿದರೆ ಕವನದ ಅರ್ಥ ಹಿಡಿಯುವುದು ಸುಲಭಸಾಧ್ಯ. ಕಾವ್ಯದ ಒನಪು ವಯ್ಯಾರಗಳೊಂದಿಗೆ ಅರ್ಥವಂತಿಕೆ ಓದುಗನಿಗೆ ಲಭ್ಯವಿದೆ. ರಾಜಕೀಯ, ಧಾರ್ಮಿಕ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಷಯಗಳು. ಶೋಷಣೆಯ, ಪ್ರಚೋದಿಸವವರ ವಿಷಯಗಳಿದ್ದರೂ ಎಲ್ಲೂ ಸಹನೆ ಮೀರದೆ ಸುಂದರ ಕಾವ್ಯವನ್ನು ಕಟ್ಟಿಕೊಟ್ಟಿದ್ದಾರೆ. ತನ್ನ ಮನದಿಂಗಿತವನ್ನು ನಿರ್ಭಯವಾಗಿ ಹೇಳುವ ಕಸುಬುಗಾರಿಕೆ ಇವರಿಗೆ ಕರಗತವಾಗಿದೆ. ಓದು,ಬುದ್ದಿ, ಭಾವಗಳು ಇಲ್ಲಿ ಮೇಳೈಸಿವೆ.ತನ್ನ ಕಾವ್ಯ ಕುಸುರಿಯಲ್ಲಿ ನಿರಂತರೆಯನ್ನು ಕಾದುಕೊಂಡರೆ ಸಾಹಿತ್ಯದ ಯಾವುದೇ ಮಜಲುಗಳನ್ನು ಮುಟ್ಟುವ ಸಾಮರ್ಥ್ಯ ಮಂಜುನಾಥ ಯಲ್ವಡಿಕವೂರರವರಲ್ಲಿ ಇದೆ. ************************ ರಾಮಮೂರ್ತಿ ಎಸ್ ನಾಯಕ
ಸಾಮಾಜಿಕ ಚಿಂತನೆಯ ಕಾವ್ಯಕುಸುರಿ Read Post »
ಪುಸ್ತಕ ಪರಿಚಯ
ಕೃತಿ ಹೆಸರು…… ಒಲವಿನ ಮಧು ಬಟ್ಟಲು ಗಜಲ್ ಗಳು
ಲೇಖಕರು… ಶ್ರೀಮತಿ ಭಾಗ್ಯವತಿ ಕೆಂಭಾವಿ ಯಾದಗಿರಿ ಮೊ.೯೯೦೦೭೧೬೩೬೩
ಪ್ರಕಾಶನ…. ಬಿಸಿಲನಾಡು ಪ್ರಕಾಶನ ಕಲಬುರಗಿ ಮೊ.೯೪೮೧೦೦೦೯೪
ಪ್ರಥಮ ಮುದ್ರಣ …೨೦೨೦
ಒಲವಿನ ಮಧು ಬಟ್ಟಲು ಗಜಲ್ ಗಳು Read Post »
ಪುಸ್ತಕ ಸಂಗಾತಿ ‘ಒಳಗೊಂದು ವಿಲಕ್ಷಣ ಮಿಶ್ರಣ’ ಪ್ರತಿಯೊಂದು ಕಾಲಘಟ್ಟದ ಮನೋಧರ್ಮ ಆಯಾ ಕಾಲದ ಸಾಹಿತ್ಯ, ಕಲೆ ಇತ್ಯಾದಿ ಮಾಧ್ಯಮಗಳ ಮೂಲಕ ಸೂಕ್ಷ್ಮವಾಗಿ ವಿಶ್ಣೇಷಣೆಗೋ ವಿಮರ್ಶೆಗೋ ಒಳಗಾಗುತ್ತಾ ವಿಧವಿಧವಾಗಿ ಅಭಿವ್ಯಕ್ತಗೊಳ್ಳುತ್ತಿರುತ್ತದೆ. ಸಮಕಾಲೀನ ಆಗುಹೋಗುಗಳನ್ನು ಸೂಕ್ಷ್ಮ ಮನಸ್ಸಿನ ಕವಿ/ಕಲಾವಿದ ತನ್ನದೇ ರೀತಿಯಲ್ಲಿ ಗ್ರಹಿಸುತ್ತಾ ಅಭಿವ್ಯಕ್ತಿಸುತ್ತಿರುತ್ತಾನೆ. ಆತನ ಪ್ರಶಾಂತ ಸಾಗರದಂಥಹ ಮನಸ್ಸನ್ನು ಕಲಕುವ ಸಂಗತಿಗಳು ಎಬ್ಬಿಸುವ ಅಲೆಗಳು ಅಗಾಧವೂ ಪರಿಣಾಮಕಾರಿಯೂ ಆಗಿರುತ್ತವೆ. ಕವಿ/ಕಲಾವಿದ ತನ್ನದೇ ಒಂದು ಕ್ಲೋಸ್ಡ್ ಜಗತ್ತೋಂದನ್ನು ನಿರ್ಮಾಣ ಮಾಡಿಕೊಂಡು ಅದರೊಳಗೆ ವಿಹರಿಸುತ್ತಿರುತ್ತಾನಾದರೂ ಆತನೂ ಮೂಲತಃ ಸಮಾಜದ ಒಂದು ಭಾಗವಾಗಿರುವುದರಿಂದ ಅಲ್ಲಿನ ಆಗುಹೋಗುಗಳಿಗೆ ಆತನೂ ಸಾಕ್ಷಿದಾರ. ಆದರೆ ಆತನೇನೂ ಮೂಕಸಾಕ್ಷಿಯಲ್ಲ. ಬದಲಿಗೆ ಆ ಆಗುಹೋಗುಗಳು ಮತ್ತು ತಲ್ಲಣಗಳಿಗೆ ತನ್ನ ಕಲಾಸೃಷ್ಟಿಯ ಅಭಿವ್ಯೆಕ್ತಿಯ ಮೂಲಕ ಬದುಕಿನ ಸರಿ ತಪ್ಪುಗಳನ್ನು ತೋರುವ ತಿಳಿಗನ್ನಡಿಯಾಗುತ್ತಾನೆ. ನಮ್ಮ ನಡುವಿನ ಪ್ರತಿಭಾವಂತ ಕಥೆಗಾರ ಇಂದ್ರಕುಮಾರರ ಚೊಚ್ಚಲ ಕವನಸಂಕಲನ ‘ ಒಳಗೊಂದು ವಿಲಕ್ಷಣ ಮಿಶ್ರಣ’ ಆಧುನಿಕ ಯಾಂತ್ರಿಕ ಬದುಕಿನ ತಲ್ಲಣಗಳು, ಆಲೋಚನೆಗಳು, ಅಸಹನೀಯ ವಿಲಕ್ಷಣ ಅನುಭವಗಳನ್ನು ಓದುಗನ ಮುಂದಿಟ್ಟು ಆತನ ಆತ್ಮಸಾಕ್ಷಿಯನ್ನು ಕಲಕುವ ಒಂದು ದರ್ಪಣ ಕೃತಿ. ಕಥನಕಲೆಯಲ್ಲಿ ಪಳಗಿರುವ ಇಂದ್ರಕುಮಾರರ ಕೈ ಕಾವ್ಯಸೃಷ್ಟಿಯಲ್ಲೂ ಯಶಸ್ವಿಯಾಗಿರುವುದನ್ನು ಈ ಕೃತಿ ಸಾಕ್ಷೀಕರಿಸುತ್ತದೆ. ಕೃತಿಯ ಹೆಸರೇ ಸೂಚಿಸುವಂತೆ ಇಲ್ಲಿನ ಬಹುತೇಕ ಕವಿತೆಗಳು ವಿಲಕ್ಷಣಗಳ ಮಿಶ್ರಣವೇ ಸರಿ. ಈ ಕವಿತೆಗಳಲ್ಲಿರುವುದು ಇಡೀ ಆಧುನಿಕ ಸಮಾಜ ಮತ್ತು ಬದುಕನ್ನೊಳಗೊಳ್ಳುವ, ‘ಇಂದಿನ ಬಣ್ಣಗೆಟ್ಟ ಬದುಕಿ’ನ, ‘ಕಣ್ಣಿದ್ದೂ ಕುರುಡಾದ ಜನ’ರ , ‘ಅಸ್ವಸ್ತ ಅಸ್ತಿತ್ವ’ಗಳ ವಿಚಿತ್ರ ಮಿಶ್ರಣದ ಚಿತ್ರಣ. ಕವಿ ಹೇಳುವಂತೆ ಇಂದಿನ ಬದುಕು ಭರವಸೆಯಿಲ್ಲದ್ದು. “ ಬದುಕುವ ಭರವಸೆಗಳೆಲ್ಲ . . . . ಮಾರ್ಡನ್ ಟಾಯ್ಲೆಟ್ಟಿನೊಳಗೆ ಫ್ಲಷ್ ಆಗಿಹೋಗಿವೆ. ” ಇಲ್ಲಿನ ಕಾವ್ಯದ ಕಟ್ಟಡ ಕಟ್ಟಿರುವುದು ‘ಕಲಕಿದ ದ್ರಾವ್ಯ’ದ ಕಣಗಳಿಂದ. ಇಲ್ಲಿನ ಬಹುತೇಕ ಕವಿತೆಗಳು ಅತ್ಯಂತ ಪರಿಣಾಮಕಾರಿಯಾದ ಪದ ಚಿತ್ರಣಗಳಾಗಿವೆ. ಈ ಕವಿತೆಗಳು ಓದಿದಂತೆ ‘ಮನಸ್ಸು ಸಿಡಿದು ಸಾವಿರ ಹೋಳಾದಂತೆನಿಸುವುದು’ ಸಹಜವೇ. ಏಕೆಂದರೆ ಜಗತ್ತಿನ ಅಸಹನೀಯ ‘ಗೋಳಾಕಾರದ ಗೋಳು’ಗಳೆಲ್ಲಾ ‘ಪ್ರಕ್ಷುಬ್ಧ ಅಲೆಗಳಂತೆ’ ಈ ಕವಿತೆಗಳ ರೂಪದಲ್ಲಿ ಬಂದು ಮನಸ್ಸಿಗೆ ಬಡಿದು ವಿಚಲಿಸಿಬಿಡುವುದಷ್ಟೇ ಅಲ್ಲದೆ ಮನಃಸಾಕ್ಷಿಯ ‘ಕಟಕಟೆಗೆ’ ಎಳೆತಂದು ‘ ಖಾಲಿತನದ ಭಾರ ಎದೆಗಳ ಮೇಲೆ’ ಆವರಿಸುವಂತೆ ಮಾಡುತ್ತವೆ. ಈ ಕವಿತೆಗಳ ವಸ್ತು ಇಂದಿನ ಬದುಕಿನ ಜಂಜಾಟಕ್ಕೆ ಸಂಬಂಧಿಸಿದಂತೆ ‘ ಕಾಣಿಸದ್ದು ಕೇಳಿಸದ್ದು’ ಥರದ್ದಾಗಿವೆ. ಈ ಬದುಕನ್ನು ನಾವು ತೂಗುತ್ತಿರುವುದು ‘ಜಂಗು ತಕ್ಕಡಿಯಲ್ಲಿ’ ಎಂಬ ಅರಿವುಮೂಡಿ, ಈ ಬದುಕು ‘ಸಾಲದ ಬದುಕು’ ಎನಿಸಿ ಸಾಲದು ಈ ಬದುಕು ಎನಿಸುತ್ತದೆ. ಈ ‘ನೆಲದೊಡಲಿನ ಮಿಸುಕಾಟ’ದಲ್ಲಿ ನಾಚಿಕೆಯೆಲ್ಲವ ಬಿಟ್ಟು ಸಾಗುತ್ತಿರುವುದು ವಿಷಾದನೀಯ. ಜಗತ್ತು ಮಾನವೀಯತೆ ಕಳೆದುಕೊಂಡು ಕಣ್ಣಿದ್ದೂ ಕುರುಡರಾಗಿರುವುದು ಇಂದಿನ ದುರಂತವೇ ಸರಿ. ಈ ಚಿತ್ರಣ ನೋಡಿ; “. . . .ಜಗತ್ತು ಆಪರೇಷನ್ ಥಿಯೇಟರ್ನ ಬಾಗಿಲಲ್ಲಿತ್ತು” ಹೆಚ್ಚು ಕಡಿಮೆ ಸತ್ತಿರುವ ಜಗತ್ತಿಗೆ ‘ ಮಂಡಕ್ಕಿ ಚಿಲ್ಲರೆ ತೂರುವವರಿಲ್ಲ.’ ಎನಿಸುತ್ತದೆ. ಏಕೆಂದರೆ ; “ಮಾನವೀಯತೆಯ ಕೋರ್ಸಿನಲ್ಲಿ ಮರುಕದ ಕ್ಲಾಸ್ ಬಂಕ್ ಮಾಡಿದವರೆಲ್ಲಾ ಹೆಣಕ್ಕೆ ಹೆಗಲು ಕೊಟ್ಟುದ್ದನ್ನು ಬಿಟ್ಟು ತೂರಿದ ರೊಕ್ಕ ಆರಿಸಿಕೊಳ್ಳುವಲ್ಲಿ ಮಗ್ನರಾಗಿರುವವರಲ್ಲ ! ” ಮಾನವಸಹಜ ಪ್ರೀತಿ ಮಮತೆಗಳನ್ನೆಲ್ಲಾ ಗಾಳಿಗೆ ತೂರಿರುವ ಆಧುನಿಕ ಮನುಷ್ಯನ ಬದುಕಿನ ಹಲವಾರು ಸ್ತರಗಳ ಖಾಲಿತನದ ಅನಾವರಣ ಈ ಕವಿತೆಗಳಲ್ಲಿದೆ. ಮನುಷ್ಯ ಮಾನವೀಯತೆಯ ಒಳ-ಹೊರಗನ್ನು ಕಳೆದುಕೊಂಡು ‘ಗರ್ದಿಗಮ್ಮತ್ತಿನ ಓಡುವ ರೀಲು’ಗಳಾಗಿರುವುದು ವಿಪರ್ಯಾಸ. “ ಕಿಡ್ನಿ ಕಣ್ಣು ರಕ್ತ ಮಾರಿಕೊಳ್ಳುವುದು ಆಗಿನ್ನೂ ತಿಳಿದಿರಲಿಲ್ಲ.” “ ಇಲ್ಲಿ ಎಲ್ಲವೂ ಮಾರಾಟಕ್ಕಿದೆ ಸತ್ತ ಹೆಣ, ಅಂಡಾಣು, ವೀರ್ಯಾಣು.” ಮನುಷ್ಯನ ದೇಹವಷ್ಟೇ ಅಲ್ಲ ಮನಸ್ಸೂ ಮಾರಾಟದ ವಸ್ತುವಾಗಿದೆ. ‘ಅನ್ನದ ಮೇಲೆಯೇ ಉಚ್ಚೆಹೊಯ್ಯುವ,’ ‘ಅಮ್ಮ ಎಂಬ ಹಚ್ಚೆಗೈಯಲ್ಲೇ ಅವಳಿಗೆ ತದುಕುವ’ ಅಮಾನವೀಯ ಆಧುನಿಕ ಬದುಕಿದು. ಈ ಆಧುನಿಕ ಚಕ್ರವ್ಯೂಹದಲಿ ಸಿಲುಕಿ ನರಳುತ್ತಿರುವವರೇ ಬಹುತೇಕ ಮಂದಿ. ಇದು ವ್ಯಾಪಾರಿ ಯುಗ, ಡಿಸ್ಕೌಂಟ್ ಜಗತ್ತು. ‘ನಿಯತ್ತಿನ ತಲೆ ಮೊಟಕಿರುವ’ ಇಲ್ಲಿ ‘ಏನುಸಿಕ್ಕರೂ ನಾಲಿಗೆ ಒಡ್ಡುವವರೇ’ ಹೆಚ್ಚು. ‘ಆಡುವ ಪಿಸುಮಾತುಗಳೇ ಕಿವಿಗೆ ಘೋರವಾಗಿ ಬಡಿಯುವ’ ಸಮಾಜದಲ್ಲಿ ಸಾಗುತ್ತಿರುವ ಈ ಬದುಕು ಅದೆಷ್ಟು ಅನರ್ಥಕಾರಿ! “ ಸಿಟಿಯ ಸ್ಲಮ್ಮಿನಲ್ಲಿ ದೇವರಗುಡಿ ಹುಡುಕುತ್ತಿದ್ದೆ ದೇವರಿರಲಿಲ್ಲ ಯಾರೋ ಕದ್ದಿದ್ದರು.” ಎನ್ನುವ ಕವಿಯ ಆತಂಕದ ಶೋಧ ಬರೀ ಕವಿಯದ್ದಷ್ಟೇ ಆಗದೆ ಸೂಕ್ಷ್ಮ ಮನಸ್ಥಿತಿಯ ಎಲ್ಲರದ್ದೂ ಆಗಿದೆ. ಕವಿಯ ಕಾಡುವ ಒಂಟಿತನ ವಿಕ್ಷಿಪ್ತತೆ ಎಲ್ಲವೂ ಓದುಗರಿಗೂ ಕಾಡುತ್ತವೆ. ‘ಸೆಕೆಂಡುಗಳು ಗಂಟೆ ವರುಷಗಳಾಗಿ’ ಸಾಗುವಂತೆ ಏಕತಾನತೆಯಿಂದ ಕೂಡಿರುವ ಈ ಬದುಕಿನಲ್ಲಿ ಮನುಷ್ಯ ಸಹಜ ಪ್ರೀತಿ ಮಮತೆ ವಿಶ್ವಾಸಗಳನ್ನೆಲ್ಲಾ ಮರೆತು ‘ಕಲ್ಲಾಗಿಲ್ಲ, ಬದಲಿಗೆ ಮೃಗವಾಗಿದ್ದಾನೆ’ ಹಾಗು ‘ಜೀವನ ಪ್ರೀತಿಯ ಕೀಲಿಕೈ ಕಳೆದುಕೊಂಡಿದ್ದಾನೆ’ ಎನ್ನುವ ಕವಿ ಈ ಯಂತ್ರಯುಗದ ಯಾಂತ್ರಿಕ ಬದುಕಿನ ಕರಾಳಮುಖದ ದರ್ಶನಮಾಡಿಸುತ್ತಾರೆ. ಆಧುನಿಕ ಬದುಕಿನ ಸಾಂಸಾರಿಕ ಸಂಕಟಗಳು, ಪ್ರೇಮ-ಕಾಮ, ವಿವಾಹ-ವಿಚ್ಛೇದನಗಳು, ಒಂಟಿತನ, ಬಡತನ, ಬಗೆಬಗೆಯ ದೌರ್ಜನ್ಯಗಳ ಕುರಿತ ಅನೇಕ ಸಂಗತಿಗಳು ಈ ಕವಿತೆಗಳ ವಸ್ತು. ಇಂದಿನ ತಲ್ಲಣಗಳಿಗೆ ಕವಿ ಮನಸ್ಸು ಎಷ್ಟು ಸೂಕ್ಷ್ಮವಾಗಿ ಸ್ಪಂದಿಸುತ್ತದೆ ಎಂಬುದಕ್ಕೆ ಇಲ್ಲಿನ ಕವಿತೆಗಳೇ ಸಾಕ್ಷಿ. ಕವಿ ಮನಸ್ಸೇ ಹಾಗಲ್ಲವೆ? ಆತ ತನ್ನ ಸುತ್ತಲಿನ ಆಗುಹೋಗುಗಳಿಗೆ ಸೂಕ್ಷ್ಮವಾಗಿ ಪರಿಣಾಮಕಾರಿಯಾಗಿ ಸಾಕ್ಷೀಭಾವದಿಂದ ಎದುರುಗೊಳ್ಳುತ್ತಾನೆ. ಇಲ್ಲಿನ ಕವಿತೆಗಳು ಯಾವುದೋ ಆದರ್ಶ ಜಗತ್ತೊಂದನ್ನು ನಮ್ಮ ಕಣ್ಣಮುಂದೆ ತಂದಿರಿಸುವುದಿಲ್ಲ, ಬದಲಿಗೆ ಮನುಷ್ಯ ಸಮಾಜದ ಒಳ-ಹೊರಗಿನ ಜೊಳ್ಳನ್ನು ತೂರಿ ತೂರಿ ಜರಡಿಹಿಡಿಯುತ್ತವೆ. ಇಲ್ಲಿ ಬಳಸಿರುವ ಕಾವ್ಯಭಾಷೆ ವಸಂತಕಾಲದ ಕೋಕಿಲ ನುಡಿಯಲ್ಲ. ಅದು ಖಡ್ಗದಂತೆ ಮೊನಚಾದುದು, ನೇರವಾಗಿ ಮನಸಿಗೆ ನಾಟುವಂತಹ ತೀಕ್ಷ್ಣತೆ, ಭಾವತೀವ್ರತೆ ಈ ಭಾಷೆಗಿದೆ. ಯಂತ್ರಯುಗದ ತಲ್ಲಣಗಳನ್ನು ಕಟ್ಟಿಕೊಡುವಾಗ ಆ ಯುಗದ ಭಾಷೆಯನ್ನೇ ಬಳಸುವುದು ಸರಿಯಾದುದೇ ಆಗಿದೆ. ಕವಿಯಂತೂ ಭಾಷೆಯನ್ನು ಸೂಕ್ತವಾಗಿ ಅರ್ಥಪೂರ್ಣವಾಗಿ ದುಡಿಸಿಕೊಂಡಿದ್ದಾರೆ. ಅದೆಷ್ಟೋ ಸಾಲುಗಳು ಮನದಲ್ಲುಳಿಯುವ ಅರ್ಥಪೂರ್ಣ ಸಾಲುಗಳಿವೆ ಇಲ್ಲಿನ ಕವಿತೆಗಳಲ್ಲಿ. ಇಲ್ಲಿನ ‘ವಿಲಕ್ಷಣ ಮಿಶ್ರಣ’ ಕವಿಮನದೊಳಗಣ ಭಾವ ಲಹರಿಯೇನೋ ಎಂದು ಮೇಲ್ನೋಟಕ್ಕೆ ಒಮ್ಮೆಲೆ ಅನ್ನಿಸಿಬಿಡುವುದಾದರೂ, ಆಳವಾಗಿ ಅವಲೋಕಿಸಿದರೆ ಅದರ ವಸ್ತುವಿಷಯಗಳು ಹೊರ ಜಗತ್ತಿನಿಂದ ದೊರೆತ ಫಲಿತಗಳೇ ಆಗಿವೆ ಎಂಬುದು ಅರಿವಿಗೆ ಬರುತ್ತದೆ. ಹಾಗಾಗಿಯೇ ಇಲ್ಲಿನ ‘ಒಳಗು’ ಎಲ್ಲರದ್ದೂ ಆಗಿಬಿಡುತ್ತದೆ. ಈ ಕಾಡುವ ಕವಿತೆಗಳು ಓದುಗನ ಮನಸನ್ನು ಕಲಕುವ ‘ವಿಲಕ್ಷಣ ಮಿಶ್ರಣ’ವೇ ಸರಿ. ******************************* ಬಿ. ಜಿ. ಜಗದೀಶ ಸಾಗರ್
‘ಒಳಗೊಂದು ವಿಲಕ್ಷಣ ಮಿಶ್ರಣ’ Read Post »
ಒಟ್ಟಾರೆ ಕಥೆಗಳು : ಕಥಾ ಸಂಕಲನ
ಲೇಖಕರು : ರವಿ ಬೆಳಗೆರೆ
ಪ್ರಥಮ ಮುದ್ರಣ : ಡಿಸೆಂಬರ್ ೨೦೨೦ ಪ್ರಕಾಶಕರು : ಗಣೈಕ್ಯ ಮುದ್ರಣಾಲಯ
ಕೃತಿ ಹೆಸರು…..ಸಾಂಸ್ ಏ ಗಜಲ್ (ಕನ್ನಡ ಗಜಲ್ ಗಳು)
ಲೇಖಕರು…ಡಾ.ರೇಣುಕಾತಾಯಿ ಎಂ ಸಂತಬಾ ( ರೇಮಾಸಂ) ಮೊ.೯೮೪೫೨೪೧೧೦೮
ಪ್ರಥಮ ಮುದ್ರಣ ೨೦೨೦
,ಪ್ರಕಾಶನ…* ಸಂತಬಾ ಪ್ರಕಾಶನ ಹುಬ್ಬಳ್ಳಿ*
You cannot copy content of this page