ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ರಾಜ್ಯೋತ್ಸವದ ಶುಭಾಶಯಗಳು

ಪ್ರಿಯರೆ, ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಿದ್ದೇವೆ.‌ ಕರ್ನಾಟಕ ಹಾಗೂ ಅದಕ್ಕೂ ಮೊದಲು ವಿಶಾಲ ಮೈಸೂರು ಎಂಬ ಹೆಸರು ಮತ್ತು ಒಗ್ಗೂಡುವಿಕೆಯ ಹಿಂದಿನ ಇತಿಹಾಸ ಅರಿಯುವುದು ಲೇಖಕರಾದ ನಮ್ಮೆಲ್ಲರ ಹೊಣೆ.‌ ೧೯೦೫ ರಿಂದ ೧೯೨೦ ರ ಸಮಯದಲ್ಲಿ ಕನ್ನಡ ಮಾತಾಡುವ ಪ್ರದೇಶದ ಒಗ್ಗೂಡುವಿಕೆಯ ಹೋರಾಟ ಸಹ ಆರಂಭವಾಯಿತು. ಕರ್ನಾಟಕ ವಿದ್ಯಾವರ್ದಕ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತನ ಹೋರಾಟವೂ ಕನ್ನಡ ಮಾತಾಡುವ ಪ್ರದೇಶಗಳ ಒಗ್ಗೂಡಿಸುವಿಕೆಯಲ್ಲಿದೆ. ಮದ್ರಾಸ್ , ಹೈದರಾಬಾದ್, ಮುಂಬಯಿ ಪ್ರಾಂತಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಒಗ್ಗೂಡುವಿಕೆಯಲ್ಲಿ ಆಲೂರು ವೆಂಕಟರಾಯರು, ರಾ.ಲ.ದೇಶಪಾಂಡೆ ಅವರ ಹೋರಾಟ ದೊಡ್ಡದು. ೧೯೫೬ ನವ್ಹಂಬರ್ ೧ ಹಾಗೂ ೧೯೭೩ ನವ್ಹಂಬರ್ ೧ ಕನ್ನಡಿಗರ ಪಾಲಿಗೆ ಮಹತ್ವದ ದಿನಗಳು. ನಿಜಲಿಂಗಪ್ಪ ಮತ್ತು ದೇವರಾಜ ಅರಸು ಅವರನ್ನು ಈ ಸಂದರ್ಭದಲ್ಲಿ ನೆನೆಯಬೇಕು. ಇವತ್ತು ಕನ್ನಡ ,ಕರ್ನಾಟಕ ಸಮಸ್ಯೆ ಎದುರಿಸುತ್ತಿವೆ. ಕೋವಿಡ್ ಜೊತೆಗೆ ಕೇಂದ್ರದ ಏಕಪಕ್ಷೀಯ ಧೋರಣೆ ಕರ್ನಾಟಕವನ್ನು ಸಂಕಟಕ್ಕೆ ದೂಡಿದೆ.‌ಇದರ ವಿರುದ್ಧ ಧ್ವನಿ ಎತ್ತಲು ರಾಜಕೀಯ ಶಕ್ತಿಗಳ ಜೊತೆ ಬರಹಗಾರರು ನಿಲ್ಲಬೇಕು. ಪ್ರಬಲ ರಾಜಕೀಯ ಪಕ್ಷದ ಜೊತೆ ನಿಂತಿರುವ, ಆತ್ಮಸಾಕ್ಷಿಯ ಮಾರಿಕೊಂಡ ಅಕ್ಷರ ಲೋಕವೂ ನಮ್ಮ ಕಣ್ಣ ಮುಂದಿದೆ ‌ . ಇಂತಹ ಸನ್ನಿವೇಶದಲ್ಲಿ ಬರಹಗಾರ ವಿರೋಧ ಪಕ್ಷವಾಗಿ , ಜನರ ಧ್ವನಿಯಾಗಿ ನಿಲ್ಲಬೇಕು. ಕನಿಷ್ಟ ಪಕ್ಷ ಕನ್ನಡ ಸಾಹಿತ್ಯ ಪರಂಪರೆಯ ಅರ್ಥಮಾಡಿಕೊಂಡರು, ಅಲ್ಲಿನ ಪ್ರತಿಭಟನೆ, ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ಗುಣ ಬರಹಗಾರರಿಗೆ ಬೇಕು. ಆ ಗುಣ ಸಂಗಾತಿ ಜೊತೆ ಇರುವ ಲೇಖಕಿ/ಲೇಖಕರದಾಗಲಿ ಎಂದು ಬಯಸುತ್ತದೆ. ರಾಜ್ಯೋತ್ಸವ ಶುಭಾಶಯಗಳೊಂದಿಗೆ ಸಂಗಾತಿ ಸಂಪಾದಕ ಬಳಗ ಕು.ಸ. ಮಧುಸೂದನ್ಡಾ.ಎಂ.ಈ.ಶಿವಕುಮಾರ್ ಹೊನ್ನಾಳಿ.ನಾಗರಾಜ ಹರಪನಹಳ್ಳಿ

ರಾಜ್ಯೋತ್ಸವದ ಶುಭಾಶಯಗಳು Read Post »

ನಿಮ್ಮೊಂದಿಗೆ

ಒಂದು ಲಸಿಕೆ ಹನಿ

ಕವಿತೆ ಒಂದು ಲಸಿಕೆ ಹನಿ ಕೊಟ್ರೇಶ್ ಅರಸೀಕೆರೆ ತಮ್ಮದಲ್ಲದ ತಪ್ಪಿಗೆ ಜೀವ ತೆತ್ತವರಿಗಾಗಿಬೂದಿ ಮುಚ್ಚಿದ ಕೆಂಡದ ಬದುಕುಒಡಲಲಿಟ್ಟುಕೊಂಡವರಿಗಾಗಿಬರಿಗಾಲಲ್ಲಿ ನಡೆದ ಪುಟ್ಟ ಕಂದಮ್ಮಗಳಿಗೆನನ್ನ ಆತ್ಮಗೌರವ ಬಿಟ್ಟು ಕೇಳಿಕೊಳ್ಳತ್ತೇನೆಒಂದು ಲಸಿಕೆ ಹನಿಯನ್ನು ಚುಮುಕಿಸಿನಿಮಗಾಗಿಯೇ ಓಟು ಒತ್ತುತ್ತೇನೆ! ರಾತ್ರಿಯೆಲ್ಲ ಕೆಮ್ಮಿ ಉಸಿರಿಗಾಗಿ ಹೋರಾಡಿಪ್ರಾಣ ಬಿಟ್ಟವರಿಗಾಗಿಮಕ್ಕಳನ್ನು ಮನೆಯಲ್ಲಿರಿಸಿ ಸೇವೆಗೈದ ವೈದ್ಯದಾದಿಯರಿಗಾಗಿಸೇವೆ ಮಾಡುತ್ತಲೇ ಪ್ರಾಣ ಬಿಟ್ಟವರ ಪರವಾಗಿಮಂಡಿಯೂರಿ ಕೇಳಿಕೊಳ್ಳುತ್ತೇನೆ ಒಂದು ಹನಿಲಸಿಕೆ ಚುಮುಕಿಸಿ ನಿಮಗಾಗಿ ಓಟು ಒತ್ತುತ್ತೇನೆ! ನಾನು ಯಾರಲ್ಲೂ ಹೇಳುವುದಿಲ್ಲ ನೀವು ಪರಮ ದ್ರೋಹಿಗಳೆಂದುನಾನು ಯಾರಲ್ಲೂ ಹೇಳುವುದಿಲ್ಲ ನೀವುಠಕ್ಕ ದೇಶಭಕ್ತರೆಂದುನಾನು ಯಾರಲ್ಲೂ ಹೇಳುವುದಿಲ್ಲ ನೀವುವಂಚಕರೆಂದುಒಂದು ಹನಿಯ ಲಸಿಕೆ ಚುಮುಕಿಸಿ ಬಿಡಿನನ್ನ ಓಟು ನಿಮಗಾಗಿ ಎಂದು! ನಾನೂ ವಂಚಿಸಲು ಸಿದ್ಧನಿದ್ದೇನೆ ಜೀವಕ್ಕಾಗಿನಾನೂ ಮೋಸ ಮಾಡಲು ಸಿದ್ಧನಿದ್ದೇನೆ ಮಡಿದ ಮುಗ್ಧರಿಗಾಗಿನಾನೂ ಪರಮ ಪಾಪಿಯಾಗಲು ಸಿದ್ಧನಿದ್ದೇನೆ ನನ್ನ ಹತ್ತು ಬೆರಳುಗಳಲ್ಲೂ ಓಟು ಒತ್ತುತ್ತೇನೆಒಂದು ಹನಿಯ ಲಸಿಕೆ ಚುಮುಕಿಸಿ ಬಿಡಿ! ನಾನು ಓಟು ಒತ್ತುತ್ತಲೇ ಇರುವೆನಿಮ್ಮ ದಾಹ ತೀರಿಸಿಕೊಳ್ಳಿಬೇಡಿಕೊಳ್ಳುತ್ತೇನೆ ಈ ಜನಾಂಗದಉಳಿವಿಗಾಗಿ ಒಂದು ಲಸಿಕೆ ಹನಿಯಚುಮುಕಿಸಿ ಬಿಡಿ! *****************************

ಒಂದು ಲಸಿಕೆ ಹನಿ Read Post »

ನಿಮ್ಮೊಂದಿಗೆ

ಮಾತಿನಲ್ಲಿಯೇ ಇದೆ ಎಲ್ಲವೂ…

ಲೇಖನ ಮಾತಿನಲ್ಲಿಯೇ ಇದೆ ಎಲ್ಲವೂ… ಪೂಜಾ ನಾಯಕ್ ನುಡಿದರೆ ಮುತ್ತಿನ ಹಾರದಂತಿರಬೇಕು| ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು| ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು| ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು| ನುಡಿಯೊಳಗಾಗಿ ನಡೆಯದಿದ್ದರೆ, ಕೂಡಲಸಂಗಮದೇವನೆಂತೊಲಿವನಯ್ಯ ? ಇತ್ತೀಚಿಗೆ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಒಮ್ಮೆಲೇ ಹಿಂದೆ ಪ್ರೌಢಶಾಲೆಯಲ್ಲಿ ಓದಿದ ಬಸವಣ್ಣನವರ ವಚನದ ಈ ಸಾಲುಗಳು ಥಟ್ಟನೆ ನೆನಪಾಯಿತು. ನೆನಪಾಗುವುದರ ಹಿಂದೆ ಒಂದು ಘಟನೆಯಿದೆ.              ಅಂದು ಐದರ ಇಳಿ ಸಂಜೆಯ ಹೊತ್ತು. ನಾನು ಮತ್ತು ನನ್ನ ಗೆಳತಿ, ರಸಾಯನಶಾಸ್ತ್ರ ವಿಷಯದ ಪ್ರಾಯೋಗಿಕ ತರಗತಿಗಳನೆಲ್ಲ ಮುಗಿಸಿ, ನಮ್ಮ ಕಾಲೇಜಿನಿಂದ ತುಸುದೂರ ಇರುವ ಬಸ್ಸ್ಟಾಂಡಿಗೆ ನಡೆದು ಬಂದು, ಬಸ್ ಹತ್ತಿ , ಆವತ್ತಿನ ಕಾಲೇಜಿನ ದಿನಚರಿಯನ್ನು ಮೆಲುಕು ಹಾಕುತ್ತಾ ಕುಳಿತಿದ್ದೆವು. ಇನ್ನೇನು, ಬಸ್ ಹೊರಡಲು ಕೆಲವೇ ಕೆಲವು ನಿಮಿಷಗಳು ಬಾಕಿ ಇದೆ ಎನ್ನುವಾಗ, ಬಿಳಿ ಬಣ್ಣದ ಉಡುಪು ತೊಟ್ಟ, ಬೆಳ್ಳನೆಯ ಕೂದಲು, ಸುಕ್ಕುಗಟ್ಟಿದ ಮೈ (ಚರ್ಮ), ಚಪ್ಪಲಿ ರಹಿತ ಪಾದಗಳು, ಒಂದು ಕೈಯಲ್ಲಿ ಊರುಗೋಲು, ಇನ್ನೊಂದು ಕೈಯಲ್ಲಿ ಚೀಲ ಹಿಡಿದು ಒಬ್ಬ ಮುದುಕರು ಇತ್ತ ನಾವು ಕುಳಿತ ಬಸ್ಸಿನೆಡೆಗೆ ನಡೆದು ಬರುತ್ತಿದ್ದಾರೆ. ಆ ಮುದುಕರ ಸಣಕಲು ಜೀವವೇ ಸಾರಿ – ಸಾರಿ ಹೇಳುವಂತಿತ್ತು, “ಇವರು ಜೋರಾಗಿ ಗಾಳಿ ಬಂದರೆ ತೂರಿ ಹೋಗುವರು” ಎಂದು. ಅವರನ್ನು ನೋಡಿದ ಯಾರಿಗಾದರೂ ಸರಿಯೇ, ಒಂದು ಕ್ಷಣ ಹಾಗೆ ಅನಿಸದೇ ಇರಲಿಕ್ಕಿಲ್ಲ.ಅವರಿಗಾಗಲೇ ಬಹಳ ವಯಸ್ಸಾಗಿದ್ದಿರಬೇಕು. ಅವರು ನಡೆಯಬೇಕಾದರೆ ಯಾರಾದರೂ ಕೈ ಹಿಡಿದುಕೊಳ್ಳಬೇಕಿತ್ತು ಇಲ್ಲವೇ ಊರುಗೋಲು, ಎರಡರಲ್ಲಿ ಒಂದು ಬೇಕೇ ಬೇಕು . ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ. ಕಿವಿಯೂ ಅಷ್ಟಕ್ಕಷ್ಟೇ. ಸುಮಾರು ನನ್ನ ಪ್ರಕಾರ ಎಂಭತ್ತರ ಮುದಿ ಜೀವದ ಅವರು ಹೇಗೋ ಅಲ್ಲಿ ಇಲ್ಲಿ ಹಿಡಿದುಕೊಂಡು ಹರಸಾಹಸಮಾಡಿ ಬಸ್ ಹತ್ತಿದವರೆ, ಮುಂಭಾಗದಲ್ಲಿನ ಖಾಲಿ ಸೀಟ್(ಆಸನ) ನಲ್ಲಿ ಚೀಲವನ್ನಿರಿಸಿಕೊಂಡು ಕುಳಿತುಕೊಂಡರು. ಇವರು ಈ ವಯಸ್ಸಿನಲ್ಲಿ, ಎಲ್ಲಿಗೆ ಹೋಗುತ್ತಿದ್ದಾರಪ್ಪಾ ಎಂದು ನನಗೆ ಅಚ್ಚರಿಯಾಯಿತು. ಆ ಮುದುಕರು ಕುಳಿತುಕೊಂಡ  ಎರಡೇ ಎರಡು ನಿಮಿಷಕ್ಕೆ, ಬಸ್ಸಿನ ಹಿಂಬಾಗಿಲಿನ ಕಡೆಯಿಂದ ಮಹಿಳಾ ನಿರ್ವಾಹಕಿ (ಕಂಡೆಕ್ಟರ್) ಟಿಕೆಟ್ ಟಿಕೆಟ್ ಎನ್ನುತ್ತಾ ಬರಹತ್ತಿದಳು. ಟಿಕೆಟು ಕೊಡುತ್ತಾ ಬರುತ್ತಿದ್ದ ಅವಳ ಕಣ್ಣ ದೃಷ್ಟಿ ಎಲ್ಲಿಯೂ ವಕ್ರೀಭವನವಾಗದೆ ನೇರವಾಗಿ ಮುಂಭಾಗದ ಆಸನದಲ್ಲಿ ಕುಳಿತಿರುವ ಈ ಮುದುಕರ ಮೇಲೆ ಬಿತ್ತು. ಅವಳ ದೃಷ್ಟಿ ಬೇರೆಲ್ಲಿಯೂ ಬೀಳದೆ ಮುಖ್ಯವಾಗಿ ಇವರ ಮೇಲೆಯೇ ಬೀಳಲು ಕಾರಣ, ಮುದುಕರು ಮಹಿಳಾ ಸೀಟ್ನಲ್ಲಿ ಕುಳಿತಿದ್ದಾರೆ!…. ಅವರನ್ನು ನೋಡಿದ್ದೆ ತಡ, ದರ-ದರನೆ ಬಿರುಗಾಳಿಯಂತೆ ಅವರತ್ತ  ಬಂದವಳೆ ಹೇಳಿದಳು….. ” ಏನಾಯ್ಯಾ, ಕಣ್ ಕಾಣ್ಸಂಗಿಲ್ಲೆನ್ ನಿನಗೆ? ಹಿಂದಕ್ಕ್ ಹೋಗ್ ಕುಂಡ್ರು” ಎಂದು. ಅಬ್ಬಾ! ವಯಸ್ಸಿನಲ್ಲಿ ಅಷ್ಟು ಹಿರಿಯರಾದವರಿಗೆ ಈ ರೀತಿಯಾದ ಸಂಭೋದನೆಯೇ? ನಾನು ಮತ್ತು ನನ್ನ ಗೆಳತಿ ನಾಗಶ್ರೀ, ಆಕೆಯಾಡಿದ ಒಂದು ಮಾತಿಗೆ ಬೆಚ್ಚಿ ಬೆರಗಾಗಿ ಹೋದೆವು. ಈಕೆಯಾಡಿದ ಮಾತಿನಿಂದಾಗಿ ಆ ಮುದುಕರಿಗೆ ಅತೀವ ದುಃಖವೂ ಹಾಗೆಯೇ ಸ್ವಲ್ಪ ಮಟ್ಟಿಗೆ ಅವರ ಮೂಖದಲ್ಲಿ  ಭಯ ಆವರಿಸಿದಂತೆ ನನಗೆ ಕಂಡವು. ಆದರೆ ಅವರಿಗೆ ಈ ಮಹಿಳಾ ಕಂಡೆಕ್ಟರ್ ತನ್ನನ್ನು ಈ ರೀತಿ ಗದರಿಸಿಕೊಂಡು ಮಾತನಾಡಿದ್ದು ಯಾಕೆ ಎಂದು ತಿಳಿಯುವ ಕುತೂಹಲ  ಉಂಟಾಗಿ ಕೇಳಿದರು, “ತಾಯಿ, ನಿನ್ನ ಮಾತು ನನಗೆ ಆಶ್ಚರ್ಯ ತಂದಿದೆ. ಯಾಕೆಂದರೆ ನಾನೇನು ಅಂತಹ ತಪ್ಪು ಮಾಡಿದೆ? ಈ ರೀತಿ ಗುಡುಗುತ್ತಿರುವೆಯಲ್ಲ ಏನು ಕಾರಣ?” ಎಂದು. ಅದಕ್ಕೆ ಆಕೆ, ” ಮ್ಯಾಗ್ ಏನ್ ಬರ್ದಾರ್ ಅಂದ್ ನೋಡಿಯೇನ? ಮಹಿಳಾ ಸೀಟ್ನಲ್ಲಿ ಯಾಕ್ ಕುಂತಿ? ಎದ್ದು ಹಿಂದ್ ನಡಿ ” ಎಂದಳು. ಆಗ ಮುದುಕರು ಹೇಳಿದರು, ” ನಾನು ಮೇಲೆ ಬರೆದಿರುವುದನ್ನು ನೋಡಿಲ್ಲ ಹಾಗೆಯೇ ನಾನು ಓದಲು ತಿಳಿದವನಲ್ಲ ತಾಯಿ ” ಎಂದು ಮೆಲ್ಲಗೆ ನುಡಿದರು. ಅದಕ್ಕೆ ಆಕೆ, “ಈಗ ನಾನು ಓದಿ ಹೇಳಿದ್ನಲ್ಲ, ಎದ್ದೋಗು”. ಎಂದಳು. ಆಗ ಅವರು, ಸಣ್ಣ ಧ್ವನಿಯಲ್ಲಿ ಹೇಳಿದರು “ಅಮ್ಮಾ, ನನಗೆ ಬೆನ್ನಿನ ಆಪರೇಷನ್ ಆಗಿದೆ. ಹಿಂದೆ ಕುಳಿತರೆ ಬಸ್ ಬ್ರೇಕ್ ಹಾಕಿದಾಗ, ಜಂಪ್ ಆದಾಗ ತೊಂದರೆ ಆಗುತ್ತೆ. ಹಾಗಾಗಿ ಮುಂಭಾಗದಲ್ಲಿ ನಾನು ಕುಳಿತಿರುವೆ” ಎಂದು. ಆ ವೃದ್ಧರು ಹೇಳುವ ರೀತಿ, ಅವರ ಸ್ಥಿತಿ ನೋಡಿದರೆ ಅಳು ಒತ್ತರಿಸಿ ಬರದ ಜನರಿರಲು ಸಾಧ್ಯವೇ ಇಲ್ಲ. ಆದರೂ ಆಕೆ ನಿಷ್ಕರುಣಿಯಂತೆ ನುಡಿದಳು, “ಹೋಗಯ್ಯಾ, ಏನಾದ್ರು ಒಂದು ಕಾರಣ ಕೊಟ್ ಬುಟ್ರೆ ನಾನು ಸುಮ್ಕೆ ಬುಟ್ ಬುಡ್ತಿನಿ ಅಂದ್ಕೊಂಡಿದ್ಯಾ? ನಿನ್ ಅಂತವರ್ನ ಎಷ್ಟ್  ಜನರ್ ನೋಡಿಲ್ಲ, ಎದ್ದೋಗ್-ಎದ್ದೋಗ್. ನಿನ್ನ ಪುರಾಣ ಎಲ್ಲ ಕಡೆಗೆ. ನೀನ್ ಹಿಂದ್ ಬಂದು ಕುಳ್ಳೋವರೆಗೆ ನಾನ್ ಟಿಕೆಟ್ ಕೊಡಂಗಿಲ್ಲ” ಎಂದು ತ್ರಿವಿಕ್ರಮನಂತೆ ಛಲತೊಟ್ಟು, ಆತನನ್ನು ಹೇಗಾದರೂ ಮಾಡಿ ಹಿಂದೆ ಕುಳ್ಳಿಸಿಯೇ ತೀರುವೆ ಎಂದು ಪಟ್ಟು ಹಿಡಿದು ಅಲ್ಲಿಯೇ ಕಂಬ ಹಿಡಿದು ನಿಂತೇ ಬಿಟ್ಟಳು. ಆ ಮುದುಕರು,” ಈಕೆಯ ಬಳಿ ವಾದ ಮಾಡಿ ಕಂಠ ಶೋಷಣೆ ಮಾಡಿಕೊಳ್ಳುವುದಕ್ಕಿಂತ ಸುಮ್ಮನಾಗುವುದೇ ಲೇಸು” ಎಂದು ತಮ್ಮ ಪಾಡಿಗೆ ತಾವು ಕುಳಿತುಕೊಂಡರು. ಈಕೆಗೆ ಸಮಾಧಾನವೇ ಆಗಲಿಲ್ಲ ಯಾಕೆಂದರೆ ಅವರು ಇವಳ ಮಾತಿಗೆ ಸ್ಪಂದಿಸದೆ ಮೌನದ ಮೊರೆ ಹೋಗಿದ್ದಾರೆ ಎಂದು . ಮಹಾಭಾರತದಲ್ಲಿ, ದ್ರೌಪದಿಯು ಕೀಚಕನ ಉಪಟಳವನ್ನು ತಾಳಲಾರದೇ ತನ್ನ ಕಷ್ಟವನ್ನು, ತನಗೆ ಆದ ಅವಮಾನವನ್ನು ಹೇಳಿಕೊಳ್ಳಲು ಭೀಮನಲ್ಲಿ ಬಂದಾಗ ಆತ ಏನೂ ಮಾತನಾಡದೆ ಕೆಲಕಾಲ ಸುಮ್ಮನಿದ್ದ. ಆಗ ಆತನನ್ನು ಹೇಗೆ ಮೂದಲಿಸಿ ಮಾತಿಗೆ ಸ್ಪಂದಿಸುವಂತೆ ಮಾಡಿದ್ದಳೋ, ಇವಳು ಹಾಗೆಯೇ ಮುದುಕರನ್ನು ಕೆಣಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಸಿಟ್ಟನ್ನು ಬಡಿದೆಬ್ಬಿಸಿ ಮಾತಿಗೆ ಅಣಿಗೊಳಿಸಿದಳು. ಅವರಿಬ್ಬರ ಮಧ್ಯೆ ಮಾತಿನ ಚಕಮಕಿಯೇ ನಡೆಯಿತು. ಚಿತ್ರವಿಚಿತ್ರ ವಾದಗಳನ್ನು ಮಾಡಿ, ಬಸ್ಸಿನಲ್ಲಿ ದೊಡ್ಡ ಗಲಾಟೆ ಎಬ್ಬಿಸಿಬಿಟ್ಟಳು ನಿರ್ವಾಹಕಿ. ಇದನ್ನು ಕಂಡು ಗಾಬರಿಗೊಂಡ ಉಳಿದ ಕೆಲ ಬಸ್ ಸಿಬ್ಬಂದಿಗಳು, ಕೆಲ ಪ್ರಯಾಣಿಕರು, ಜಗಳವನ್ನು ನಿಲ್ಲಿಸಲು ಮುಂದೆ ಬಂದರು. ಆತನಿಗೆ ಹಿಂದೆ ಹೋಗಿ ಕುಳಿತುಕೊ ಎಂದರೆ ಹೋಗುತ್ತಿಲ್ಲ. ಹಾಗೆಯೇ ನನಗೆ, ಬಾಯಿಗೆ ಬಂದ ಹಾಗೆ ಹೇಳುತ್ತಿದ್ದಾನೆ ಎಂದು ಮೊಂಡುವಾದವನ್ನು ಮಂಡಿಸಿ, ಆ ವೃದ್ಧರ ಮಾತುಗಳನ್ನೆಲ್ಲಾ ತಿರುಚಿ – ತಿರುಚಿ ಅವರಿಗೆ ಒಪ್ಪಿಸಿದಳು. ನಾನೇನು ಹೇಳಿಲ್ಲ ಸ್ವಾಮಿ ಆಕೆಗೆ. ನನ್ನ ಪರಿಸ್ಥಿತಿಯನ್ನು ಹೇಳಿದರೂ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದಳು. ಹಿರಿಯರಲ್ಲಿ ಹೇಗೆ ಮಾತನಾಡಬೇಕೆಂಬ ಕನಿಷ್ಠ ಸೌಜನ್ಯತೆಯನ್ನು ಆಕೆ ಹೊಂದಿಲ್ಲ. ಇಲ್ಲಿ ಕುಳಿತ ಯಾರಿಗಾದರೂ ಕೇಳಿ ಸ್ವಾಮಿ ಬೇಕಾದರೆ ಆಕೆ ಎಷ್ಟು ಕೆಟ್ಟ- ಕೆಟ್ಟ ಮಾತನಾಡಿದ್ದಾಳೆ ನನಗೆ ಎಂದು ಮುದುಕರು ಗೋಗರೆದರು. ಅವರೆಲ್ಲ ಅವಳದೇ ತಪ್ಪಿದೆ ಎಂದು ತಿಳಿದಿದ್ದರೂ, ಅವಳ ಪರ ವಹಿಸಿ ಮಾತನಾಡಿದರು. ಅದ್ಯಾಕೆ ಅವಳ ಪರ ವಾದ ಮಾಡಿದರೋ ಏನೋ ನನಗೆ ಗೊತ್ತಿಲ್ಲ. ಅವಳು ಮಾತನಾಡುವ ಪರಿ ನೋಡಿ ಅವರಿಗೂ ಹೆದರಿಕೆ ಹುಟ್ಟಿತೋ ಏನೋ ಅಥವಾ ಈಕೆ ಬಸ್ಸಿನಲ್ಲಿ ದೊಡ್ಡ ರಂಪಾಟ ಮಾಡುವಳೆಂದು, ಇವಳದ್ದೆ ಸರಿ ಎಂದು ವಾದಿಸುವುದು ಒಳಿತು ಎಂದು ಹಾಗೆ ಮಾಡಿದರೋ ಏನೋ. ಆ ವೃದ್ಧರಿಗೆ, ನಿಮ್ಮದು ಪೂರ್ತಿ ತಪ್ಪಿದೆ ಸುಮ್ಮನಿರು ಎಂದು ಬಾಯಿ ಮುಚ್ಚಿಸಿ, ಅಷ್ಟೂ ಜನ ಸೇರಿ ಹಿಂದೆ ಹೋಗಿ ಕುಳಿತುಕೊಳ್ಳಲು ಆದೇಶ ಮಾಡಿದರು. ಅದಕ್ಕೆ ಮುದುಕರು ಹೇಳಿದರು “ಸೌಜನ್ಯದಿಂದ ಒಂದೇ ಬಾರಿ ಹೇಳಿದರೆ ಸಾಕಾಗಿತ್ತು, ನೂರು ಬಾರಿ ಈ ರೀತಿ ಹೇಳುವುದಕ್ಕಿಂತ. ನನ್ನ ಕಷ್ಟ ಏನೇ ಇದ್ದರೂ ಸಹಿಸಿಕೊಂಡು ಹಿಂದೆ ಹೋಗಿ ಕುಳಿತುಕೊಳ್ಳುತ್ತಿದ್ದೆ. ಆದರೆ ಈಕೆ ನನ್ನ ಮೇಲೆ ಇಷ್ಟು ಆರೋಪ ಮಾಡಿ, ಹಿರಿಯರ ಬಳಿ ಯಾವ ರೀತಿ ಮಾತನಾಡುವುದು ಎಂಬ ಕನಿಷ್ಠ ಜ್ಞಾನವೂ ಇಲ್ಲದೇ ಅಜ್ಞಾನಿಯಂತೆ ವರ್ತಿಸಿದ್ದಾಳೆ. ನೀವೆಲ್ಲರೂ ಸುಳ್ಳಿನ ಪರವಾಗಿ ಮಾತನಾಡಿದಿರಿ. ಇರಲಿ ಬಿಡಿ ನಾನೇ ಹಿಂದೆ ಹೋಗಿ ಕುಳಿತುಕೊಳ್ಳುವೆ ಎಂದು ಅತ್ತ ಕಡೆ ಸಾಗುತ್ತಾ ಒಳಗೊಳಗೆ ಹೀಗೆ ಗೊಣಗಿದರು “ಛೇ, ಸತ್ಯವೆಂಬುದು ನನ್ನನ್ನು ಸಂಕಷ್ಟದಿಂದ ಪಾರುಮಾಡಲು ಶಕ್ತವಾಗಲಿಲ್ಲ. ಸತ್ಯವೆಂಬುದು ನಿರರ್ಥಕ”. ನೊಂದ ಮುದುಕರ ಬಾಯಿಂದ ಎಂಥ ಮಾತು ಬರುತ್ತದೆ ನೋಡಿ. ಇದು ಇಂದಿಗೂ ಅನೇಕ ಸಭ್ಯ , ಸಾತ್ವಿಕ ಜನರ ಮಾತೂ ಹೌದು. ಪ್ರಾಮಾಣಿಕವಾಗಿ ಬದುಕಿದ ವ್ಯಕ್ತಿಗೆ ಅನ್ಯಾಯವಾದಾಗ ಅವರು ಹೇಳುವ ಮಾತೂ ಇದೇ ಅಲ್ಲವೇ? ” ಸತ್ಯವೆಂಬುದು ನಿರರ್ಥಕವಾದದ್ದು”. ನಮಗೂ ಒಮ್ಮೊಮ್ಮೆ ಹೀಗೆ ಅನಿಸುತ್ತದಲ್ಲವೇ?ಈ ಮಾತುಗಳಲ್ಲಿ ಎಷ್ಟೊಂದು ಹತಾಶೆ, ಉದ್ವೇಗ ತುಂಬಿದೆ! ಮನಸ್ಸು ವಿಹ್ವಲವಾದಾಗ, ನೋವಿನಲ್ಲಿ ಬೆಂದುಹೋದಾಗ ಇಂಥ ಮಾತು ಬರುತ್ತವೆ. ಶಕ್ತಿಯಿಲ್ಲದಿದ್ದರೂ ಕೇವಲ ಹಣದ ಬೆಂಬಲದಿಂದ,  ಸುಳ್ಳಿನ ಘರ್ಜನೆಯಿಂದ, ಅಹಂಕಾರದಿಂದ ಮೆರೆಯುವವರನ್ನು ಕಂಡಾಗ, ಅಧರ್ಮದ ಮಾರ್ಗದ ಮೂಲಕ ಗೆಲುವನ್ನು, ಅಧಿಕಾರವನ್ನು, ಅದರ ಮೂಲಕ ಜನಮನ್ನಣೆಯನ್ನು ಪಡೆದವರನ್ನು ನೋಡಿದಾಗ ಸತ್ಯಕ್ಕೆ ಬೆಲೆಯೇ ಇಲ್ಲ ಎನ್ನಿಸಿ ಬಿಡುತ್ತದೆ. ಆದರೆ ಅದು ಸರಿ ಅಲ್ಲ. ಸುಳ್ಳು, ದೀಪಾವಳಿಯಲ್ಲಿ ಪುಟ್ಟ ಮಕ್ಕಳು ಹಚ್ಚುವ ಸುರ್-ಸುರ್ ಕಡ್ಡಿ (ನಕ್ಷತ್ರ ಕಡ್ಡಿ) ಇದ್ದ ಹಾಗೆ. ಅದು ನಾನಾ ರೀತಿಯ ಬಣ್ಣದ ಕಿರಣಗಳನ್ನು ಹೊರ ಸೂಸಿ ಕಣ್ಣು ಕುಕ್ಕಿಸುವಾಗ ತುಂಬಾ ಮನಮೋಹಕವಾಗಿ ಕಾಣಿಸುತ್ತದೆ. ಆದರೆ ಅದು ಕಣ್ಣು ರೆಪ್ಪೆ ಮಿಟುಕಿಸುವುದರ ಒಳಗಾಗಿ ಮಾಯವಾಗುತ್ತದೆ. ಕಡೆಗೆ ಮತ್ತದೇ ಅಂಧಕಾರ. ಸತ್ಯ, ದೇವರ ಮುಂದೆ ಹಚ್ಚಿದ ನಂದಾದೀಪವಿದ್ದಂತೆ. ಅದು ಕಣ್ಣು ಕುಕ್ಕಿಸುವುದಿಲ್ಲ, ಆದರೆ ಬಹಳ ಕಾಲ ಜೀವಿಸುವಂಥದ್ದು, ನೆಮ್ಮದಿ ನೀಡುವಂಥದ್ದು. ಹಾಗೆಯೇ ಇನ್ನೊಂದು ಬಹು ಮುಖ್ಯವಾದುದೆಂದರೆ ನಾವು ಇನ್ನೊಬ್ಬರಲ್ಲಿ ಮಾತನಾಡುವ ರೀತಿ ಮತ್ತು ಅವರ ಕಷ್ಟವನ್ನು ಅರ್ಥ ಮಾಡಿಕೊಳ್ಳುವಿಕೆ. ಅದಕ್ಕಾಗಿ ಬಹು ದೊಡ್ಡ ತ್ಯಾಗ ಮಾಡುವುದೇನು ಬೇಕಿಲ್ಲ. ನಮ್ಮ ಒಂದಿಷ್ಟು ಗೌರವಯುತ ಸವಿಮಾತು, ಸಹಕಾರ ಸಾಕು ಪಡೆದವರ, ನೀಡಿದವರ ಬದುಕಿಗೆ ಕ್ಷಣಕಾಲದ ಕೃತಾರ್ಥತೆ ಮತ್ತು ಖುಷಿಯನ್ನು ನೀಡುವುದಕ್ಕೆ. ಇದೇ ಅಲ್ಲವೇ ನಮಗೆ ಬೇಕಾದದ್ದು ಕೂಡ? ಬೇಕಾದದ್ದನ್ನು ಪಡೆಯಲು ಎಲ್ಲೆಲ್ಲೋ ಹುಡುಕುತ್ತಾ ಹೋಗಬೇಕೆಂದೇನಿಲ್ಲ.         ಮಾತಿನಲ್ಲಿಯೇ ಇದೆ ಎಲ್ಲವೂ…… ***********************************

ಮಾತಿನಲ್ಲಿಯೇ ಇದೆ ಎಲ್ಲವೂ… Read Post »

ನಿಮ್ಮೊಂದಿಗೆ

ನಿಮ್ಮೊಂದಿಗೆ

ಸಂಪಾದಕೀಯ ಇವತ್ತಿಗೆ ಸಂಗಾತಿಗೆ ವರ್ಷ ತುಂಬಿತು. ಈ ಪಯಣದಲ್ಲಿ ಜೊತೆ ನೀಡಿದ    ನನ್ನೆಲ್ಲ ಓದುಗಮತ್ತು ಬರಹಗಾರ ಮಿತ್ರರುಗಳಿಗೆ ದನ್ಯವಾದಗಳು. ಸಂಗಾತಿಯ ಸಾಧನೆಯೇನು? ಕೇಳಿದವರಿಗೆ ನನ್ನ ಉತ್ತರ: ಒಂದು ವಿನಮ್ರ ಮುಗುಳ್ನಗುವಷ್ಟೆ! ಹೆಚ್ಚೇನು ಹೇಳಲಿ? ಸಾಕ್ಷಿಗೆ ಸಂಗಾತಿಯಬರಹಗಳೇ ಇವೆ. ** ಆದರೂ ಕೆಲವನ್ನು ನಿಮಗಾದರೂ ಹೇಳಲೇಬೇಕು: ಮುನ್ನೂರ ಅರವತ್ತೈದು ದಿನಗಳು, ಮುನ್ನೂರ ಐವತ್ತಕ್ಕೂ ಅಧಿಕ ಲೇಖಕರು, ಮೂರು ಸಾವಿರಕ್ಕೂ ಹೆಚ್ಚಿನ  ಬರಹಗಳು ಹದಿನೈದಕ್ಕೂ ಹೆಚ್ಚು ಅಂಕಣಗಳು ಅಮೇರಿಕಾದ ಅಶ್ವಥ್ ರಿಂದ ಹಿಡಿದು ಚಾಮರಾಜನಗರದ  ಮಾಲತಿ ಯವರವರೆಗು ಹರಡಿದ ವಿಶಾಲ ಬರಹಗಾರರ ದಂಡು ಕನ್ನಡ ಸಾಹಿತ್ಯಕ್ಕೆ    ಸಂಗಾತಿ ನೀಡಿದ ಅಲ್ಪ ಕೊಡುಗೆ. ಇದರಲ್ಲಿ ನಿಮ್ಮ ಪಾಲೇ ಅಧಿಕ.. ಸಂಪಾದಕ ನೆಪ ಮಾತ್ರ! *** ಮುಖ್ಯವಾಗಿ ಸಂಗಾತಿಗೆ——– ಜಾತಿ-ದರ್ಮಗಳಿಲ್ಲ, ಗುಂಪುಗಳ ಗೊಡವೆಯಿಲ್ಲ, ಅರಗಿಸಿಕೊಳ್ಳಲಾಗದಂತಹ ಸಿದ್ದಾಂತಗಳ ಹೆಣಬಾರವಿಲ್ಲ, *** ಸಂಗಾತಿಗಿರುವುದು- ಕನ್ನಡ ಸಾಹಿತ್ಯದ ಜೀವನದಿಗೆ ಸಂಗಾತಿಯ ಪುಟ್ಟಪುಟ್ಟ ಝರಿಗಳು ಸೇರಿ ಸಂಗಾತಿಯ ಸ್ರಮ ಸಾರ್ಥಕವಾಗಬೇಕು *** ಹೆಚ್ಚೇನು ಹೇಳಲಿ? ಮುಂದಿನ ದಿನಗಳಲ್ಲಿಯೂ ಸಂಗಾತಿಯ ಜೊತೆ ನೀವಿರುತ್ತೀರಿ ಎಂಬ ನಂಬಿಕೆ ನನ್ನದು. *** ಇಷ್ಟು ದಿನಗಳ ನಿಮ್ಮ ಪ್ರೀತಿಗೆ ಶರಣು *************************************************

ನಿಮ್ಮೊಂದಿಗೆ Read Post »

ನಿಮ್ಮೊಂದಿಗೆ

ಕಲಿಕೆ ಕಸಿದ ಕರೋನ

ಕವಿತೆ ಕಲಿಕೆ ಕಸಿದ ಕರೋನ ಜಿ.ಎಸ್.ಹೆಗಡೆ ಶಾಲೆಯ ಅಂಗಳದಿ ಬೆಳೆದಿವೆ ಈಗಮುಳ್ಳಿನ ಜೊತೆಗೆ ಕಳ್ಳಿಗಳುಕಲಿಕಾಕೋಣೆಯ ಚಪ್ಪರ ತುಂಬಿದೆಜೇಡರ ಬಲೆಯೊಳು ಕೀಟಗಳುಹಾಜರಿ ವಹಿಗೆ ಮೆತ್ತುತ್ತಿದೆ ಈಗಮಣಗಟ್ಟಲೆ ಧೂಳುಅಡುಗೆ ಮನೆಯಲಿ ಓಡಾಡುತಿವೆಇಲಿ ಜಿರಲೆಗಳು ಜೋರು ಪರಿಮಳವಾದ ಪೆನ್ಸಿಲ್ ರಬ್ಬರ್ಬ್ಯಾಗೊಳು ಹಾಗೆ ಇವೆಹೊಸ ಹೊದಿಕೆಯನು ಧರಿಸಿಹ ಪುಸ್ತಕತೆರೆಯಲು ಕಾಯುತಿವೆಅಪ್ಪನು ಕೊಡಿಸಿಹ ಬಣ್ಣದ ಛತ್ರಿಮಳೆಯೊಳು ಆಡು ಎನ್ನುತಿದೆಮಾವನು ಕೊಡಿಸಿಹ ಹೊಸ ಬಟ್ಟೆಯುಹುಟ್ಟುಹಬ್ಬವನು ನೆನಪಿಸಿವೆ ಶಾಲೆಗೆ ಹೋದರೆ ಗುರುಗಳು ಎಂದರು‘ಬರಬೇಡವೋ ನೀನು ಶಾಲೆ‌ ಕಡೆ,ನೀನಿದ್ದಲ್ಲಿಗೆ ನಾನೇ ಬರುವೆನುನೀಡಿರಿ ಗಮನವ ವಿದ್ಯೆಯೆಡೆ’ಊರಿನ ಗುಡಿಗೋಪುರ ಅಂಗಣದಲ್ಲಿ‌ಮಕ್ಕಳ ಮೊಗಕೆ ಮುಸುಕುಕಲಿಯುವ ಆಸೆಗೆ ಮುಸುಕನು ಹಾಕಿತುಕರೋನದಿ ಮುದುಡಿತು ಕನಸು ಮಕ್ಕಳೇ ಬನ್ನಿರಿ ತನ್ನಿರಿ ನೀವುಹಳೆ ಪುಸ್ತಕಗಳ ಗಂಟುನೆನಪಿಸಿ ಕಲಿಸುವೆ ಮರೆತಿರುವುದನುಹೊಸ ಪಠ್ಯಕೆ ನೀಡುವೆ ನಂಟುಬೇಡ ಗುರುಗಳೆ ಹಳೆಯ ಪಾಠವುಬೇಸರ ತರಿಸುತಿದೆಹೊಸ ಪಾಠಗಳ ದಿನವೂ ಕಲಿಸಿರೆಸಂತಸ ಉಕ್ಕುತಿದೆ *************

ಕಲಿಕೆ ಕಸಿದ ಕರೋನ Read Post »

ನಿಮ್ಮೊಂದಿಗೆ

ಸಂಪಾದಕೀಯ-ಗಾಂಧಿ ವಿಶೇಷ

ಸಂಪಾದಕೀಯ-ಗಾಂಧಿ ವಿಶೇಷ ಗಾಂಧಿ ವಿಶೇಷ ನಿಮ್ಮ ಮುಂದಿದೆಬಹಳಷ್ಟು ಬರಹಗಳುಬಂದ ಸಂತೋಷ ಒಂದೆಡೆಯಾದರೆ, ಗಾಂದಿಯನ್ನು ಹಾಡಿಹೊಗಳುವುದಕ್ಕಷ್ಟೇ ಬಹುತೇಕ ಬರಹಗಳು ಸೀಮಿತವಾದವೆಂಬ ವಿಷಾದವೂ ನನಗಿದೆ.ಗಾಂಧಿ ಪ್ರತಿಪಾದಿಸಿದ ಸಿದ್ದಾಂತಗಳ ಬಗ್ಗೆ ಮತ್ತಷ್ಟ ಗಂಭೀರ ಅದ್ಯಯನ ಚರ್ಚೆ ನಡೆಯಬೇಕಿದೆ. ಗಾಂಧಿಯ ಬಗ್ಗೆತೂಕವಾಗಿ ಬರೆಯುವಷ್ಟು ಓದಿ ಕೊಂಡವರು ಬರೆಯಲಿಲ್ಲವೆಂಬ ಬೇಸರವಿದೆ.ಸಾರ್ವಜನಿಕವಾಗಿ ಗಾಂಧಿಯ ಬಗ್ಗೆಒಳ್ಳೆಯ ಮಾತುಗಳನ್ನಾಡುತ್ತಲೇ ಾಂತರೀಕವಾಗಿ ಅಸಹನೆ ಬೆಳೆಸಿಕೊಂಡ ಬಹುತೇಕರಿಗೆ ಗಾಂದಿ ಅರ್ಥವೇ ಆಗಿಲ್ಲವೆನ್ನಬಹುದು. ಗಾಂಧಿಯನ್ನು ದ್ವೇಷಿಸುವ ಮನಸುಗಳ ಜೊತೆಯೇ ಬದುಕಬೇಕಾದ ಅನಿವಾರ್ಯತೆಯ ಈ ದಿನಗಳಲ್ಲಿ ಸಂಗಾತಿಗೆ ಬರೆಯುವ ಮೂಲಕ ಗಾಂಧಿಯನ್ನು ಸ್ಮರಿಸಿಕೊಂಡನಿಮಗೆ ದನ್ಯವಾದಗಳುಏನೇ ಇರಲಿ-ಬರಹಗಳನ್ನು ಕಳಿಸಿದ ತಮಗೆಲ್ಲರಿಗೂ ದನ್ಯವಾದಗಳು ನಿಮ್ಮವ ಕು.ಸ.ಮಧುಸೂದನ ರಂಗೇನಹಳ್ಳಿ

ಸಂಪಾದಕೀಯ-ಗಾಂಧಿ ವಿಶೇಷ Read Post »

ನಿಮ್ಮೊಂದಿಗೆ

ಅಭಿನಂದನೆಗಳು

ಸಂಗಾತಿ ಪತ್ರಿಕೆಗೆ ಬರೆಯುತ್ತಿರುವನಾಲ್ವರು ಲೇಖಕಿಯರಿಗೆ ಇಂದು ವಿವಿಧ ಪ್ರಶಸ್ತಿಗಳು ದೊರಕಿದ್ದು ಪತ್ರಿಕೆ ಆ ನಾಲ್ವರಿಗೂ ಈ ಮೂಲಕ ಅಭಿನಂದನೆ ಸಲ್ಲಿಸುತ್ತಿದೆ ಅಕ್ಷತಾ ಕೃಷ್ಣಮೂರ್ತಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕೊಡುವ ಮಯೂರ ವರ್ಮ ಪ್ರಶಸ್ತಿ ಪಡೆದಿದ್ದಾರೆ ಶ್ರೀದೇವಿ ಕೆರೆಮನೆ ಕನ್ನಡ ಸಾಹಿತ್ಯ ಪರಿಷತ್ ನೀಡುವಸುಮನ್ ಸೋಮಶೇಖರ ಸೋಮವಾರಪೇಟೆ ದತ್ತಿ ಪ್ರಶಸ್ತಿ ವಿಭಾ ಪುರೋಹಿತ್ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ರೂಪಶ್ರೀ ಎನ್.ಆರ್ ಕನ್ನಡ ಸಾಹಿತ್ಯ ಪರಿಷತ್ತಿನ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ ************************************************************************

ಅಭಿನಂದನೆಗಳು Read Post »

ನಿಮ್ಮೊಂದಿಗೆ

ಕರೋನಾ ಮತ್ತು ಭಯ ಜ್ಯೋತಿ ಡಿ.ಬೊಮ್ಮಾ ಭಯ ಬೇಡ ಎಚ್ಚರಿಕೆ ಇರಲಿ ಎಂದು ಹೇಳುತ್ತಲೆ ಈಗ ಪ್ರತಿಯೊಬ್ಬರ ಮನದಲ್ಲೂ ಕರೋನಾ ಬಗ್ಗೆ ಭಯ ಮನೆಮಾಡಿದೆ. ಮೇಲೆ ಇದೊಂದು ಸಾಮಾನ್ಯ ಕಾಯಿಲೆ ಎಂದುಕೊಂಡರೂ ಒಳಗೋಳಗೆ ಆತಂಕ ಪಡದವರಿಲ್ಲ.ರೋಗಕ್ಕಿಂತಲೂ ಅದರ ಸುತ್ತಲೂ ಇರುವ ಕ್ಲಿಷ್ಟಕರ ಕಾನೂನುಗಳು ಭಯವನ್ನು ಹೆಚ್ಚಿಸುತ್ತಿವೆ. ಸದ್ಯ ಕರೋನಾ ದಿಂದಾಗುವ ಸಾವಿನ ಪ್ರಮಾಣದಲ್ಲಿ ವಯಸ್ಸಾದವರೆ ಹೆಚ್ಚು. ಅವರಿಗೆ ಮತ್ತೆ ಬೇರೆ ಆರೋಗ್ಯ ಸಮಸ್ಯಗಳು ಇರಬಹುದು.ಬಹಳಷ್ಟು ಸಾವು ಆಸ್ಪತ್ರೆಯಲ್ಲಿ ಅಡ್ಮೀಟ್ ಆದ ಮೇಲೆ ಸಂಭವಿಸುತ್ತಿವೆ. ಅಡ್ಮಿಟ್ ಆದ ಮೇಲೆ ರೋಗಿ ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಕರೋನಾ ರೋಗದ ಹೆಸರಿನಿಂದಲೇ ಮನೊಸೈರ್ಯ ಕುಸಿಯುತ್ತಿದೆ. ಹೊರಗೆ ರಾಜಾರೋಷವಾಗಿ ಓಡಾಡುವವರು ಕರೋನಾ ಬಂದ ತಕ್ಷಣ ಭಯಭೀತರಾಗುತ್ತಿದ್ದಾರೆ.Quarantine ಭಯದಿಂದ ಎಷ್ಟೋ ಜನರು ರೋಗ ಲಕ್ಷಣಗಳಿದ್ದರು ಪರಿಕ್ಷೆ ಮಾಡಿಸಿಕೊಳ್ಳದೆ, ರೋಗ ಉಲ್ಫಣಗೊಂಡಮೇಲೆ ಆಸ್ಪತ್ರೆಗೆ ದೌಡಾಯಿಸುತ್ತಾರೆ.ಅಷ್ಟರಲ್ಲಿ ಸೋಂಕು ವ್ಯಾಪಿಸಿ ಮರಣ ಸಂಭವಿಸಬಹುದು. ಭಯಕ್ಕೆ ಮತ್ತೊಂದು ಕಾರಣ ರೋಗದ ಸಂದರ್ಬದಲ್ಲಿ ತಮ್ಮವರಾರು ತಮ್ಮ ಬಳಿ ಇರದೆ ಒಬ್ಬಂಟಿಯಾಗಿ ಆಸ್ಪತ್ರೆಯಲ್ಲಿ ಇರಬೇಕಾದ ಸಂದರ್ಭ ಬಂದಾಗ ರೋಗಿ ತನ್ನ ಆತ್ಮಸೈರ್ಯ ಕಳೆದುಕೊಳ್ಳುತ್ತಾನೆ. ಅನಾಥ ಪ್ರಜ್ಞೆ ಯಿಂದ ಖಿನ್ನತೆಗೊಂಡು ರೋಗ ನೀರೋಧಕ ಶಕ್ತಿ ಕುಂಠಿತಗೊಂಡು ಚಿಕಿತ್ಸೆ ದೇಹಕ್ಕೆ ಪ್ರತಿಕ್ರಿಯಿಸಲಾರದು.ಇನ್ನೊಂದು ಭಯ ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳು ದೂರದಿಂದಲೇ (ತುರ್ತು ಸಂದರ್ಬ ಹೊರತು ಪಡಿಸಿ) ರೋಗಿಗಳೊಂದಿಗೆ ಸ್ಪಂದಿಸುವದರಿಂದ ರೋಗಿ ಕುಗ್ಗುತ್ತಾನೆ.ರೋಗ ಬೃಹದಾಕಾರವಾಗಿ ಕಾಡತೋಡಗುತ್ತದೆ. ಇನ್ನೂ ಕರೋನಾ ರೋಗಿಗಳು ಮನೆಯಲ್ಲಿದ್ದುಕೊಂಡೆ ಆರೈಕೆ ಮಾಡಿಕೊಳ್ಳಲು ಸರ್ಕಾರ ಅನುವು ಮಾಡಿಕೊಟ್ಟಿರುವದು ಸಮಧಾನಕರವೆ. ಆದರೆ ಮನೆಯವರು ರೋಗಿಯೊಂದಿಗೆ ಪ್ರೀತಿಯಿಂದ ಕಾಳಜಿಯಿಂದ ನೊಇಡಿಕೊಳ್ಳಬೇಕು.ಅವರಿಂದ ನಮಗೆಲ್ಲಿ ಹರಡುವದೊ ಎಂದು ರೋಗಿಯನ್ನು ಅನಾದರ ಮಾಡಿದರೆ ರೋಗಿ ನಿರಾಶೆಯಿಂದ ಕುಗ್ಗಬಹುದು.ರೋಗಿಯೊಂದಿಗೆ ಕೆಲದಿನ ದೈಹಿಕ ಅಂತರವಿಟ್ಟುಕೊಂಡು ಅವರನ್ನು ಆರೈಕೆ ಮಾಡಬಹುದು. ತಮ್ಮವರ ಪ್ರೀತಿ ಅಂತಃಕರಣ ದಿಂದಲೇ ರೋಗ ಗುಣಮುಖವಾಗಬಹುದು. ಹಾಗಾದರೆ ಈ ಭಯದ ಮೂಲ ಶುರುವಾದದ್ದು ಎಲ್ಲಿಂದ..? ರೋಗ ಬಂದರೆ ಸಾವು ಖಚಿತ ಎಂದು ನಂಬಿದ್ದರಿಂದ ,ಅಥವಾ ತಾವೇ ಅಂತಹ ಸಂದರ್ಬ ನೋಡಿದ್ದರಿಂದ ಇರಬಹುದು.ಇನ್ನೊಂದು ಈ ರೋಗ ತಮ್ಮವರಿಂದ ಪ್ರತ್ಯಕಗೊಳಿಸುತ್ತದೆ ಎಂಬ ದುಗಡ ..ಆಸ್ಪತ್ರೆಯಲ್ಲಿ ವೈದ್ಯರು ದೂರದಿಂದಲೆ ತಮ್ಮ ಕರ್ತವ್ಯ ನಿರ್ವಹಿಸುವ ರೀತಿಯಿಂದ..ರೋಗ ಬಂದಮೇಲೆ ಗುಣಮುಖ ವಾಗುವದೋ ಇಲ್ವೋ ಎಂಬ ಆತಂಕ..ರೋಗ ಲಕ್ಷಣಗಳು ಕಂಡುಬಂದರೆ ಪರೀಕ್ಷೆ ಮಾಡಿಸಬೇಕೋ ಬೇಡವೂ ಎಂಬ ಇಬ್ಬಂದಿತನ..ರೋಗ ದೃಢ ಪಟ್ಟರೆ ಅಕ್ಕಪಕ್ಕದ ಮನೆಯವರ ನಿರಾದರ..ಇಂತಹ ಎಲ್ಲಾ ಸಂದರ್ಬಗಳು ಭಯ ಹೆಚ್ಚಾಗಲು ಕಾರಣವಾಗುತ್ತಿವೆ. ಉದ್ಯೋಗಸ್ಥರು ಭಯಮುಕ್ತರಾಗಿ ನಿರಾಂತಕವಾಗಿ ಕಾರ್ಯನಿರ್ವಹಿಸದಂತಾಗಿದೆ.ಹೋರಗೆ ಹೋದರೆ ಎಲ್ಲಿ ಸೋಂಕು ತಗಲುವದೋ ಎಂಬ ದುಗುಡದಲ್ಲೆ ಕಾರ್ಯೋನ್ಮುಖರಾಗಬೇಕಾಗಿರುವದು ಅನಿವಾರ್ಯ. ಮಕ್ಕಳಂತೂ ಶಾಲೆಯೆ ಮರೆತಂತಾಗಿದ್ದರೆ.ಎಲ್ಲಿ ನೋಡಿದ್ದರು ರೋಗ ಮತ್ತು ಭಯದ್ದೆ ವಿಜೃಂಬಣೆ.ಎಲ್ಲವೂ ಅಯೋಮಯ. ಒಂದಂತೂ ಸತ್ಯ ,ರೋಗ ಗೆಲ್ಲಬೇಕಾದರೆ ಆತ್ಮಸೈರ್ಯ ಅತ್ಯಂತ ಮುಖ್ಯ.ಆದರೆ ಈ ಸಂದರ್ಬದಲ್ಲಿ ಬಹುತೇಕ ಜನ ಅದನ್ನೇ ಕಳೆದುಕೊಳ್ಳುತ್ತಿದ್ದಾರೆ.ಕರೋನಾ ಬಂದು ಗುಣಮುಖರಾದವರು ಉತ್ಸಾಹ ಭರಿತರಾಗಿರದೆ ಯಾವದೇ ಖಿನ್ನತೆಯಿಂದ ಬಳಲುವರಂತೆ ಕಾಣುತಿದ್ದಾರೆ.ಎಕೆಂದರೆ ರೋಗದ ಭಯ ಅಷ್ಟೊಂದು ಆವರಿಸಿಕೊಂಡಿದೆ. ಈಗ ಇದರೊಂದಿಗೆ ಬದುಕುವದು ಅನಿವಾರ್ಯ. ಯಾವಾಗಾದರೂ ಒಮ್ಮೆ ಬರುತ್ತದೆ ಎಂದಿಟ್ಟುಕೊಳ್ಳೊಣ.ಭಯ ಪಡದೆ ಹಿಂದೆ ಅನೇಕ ಸಲ ಬಂದು ಹೋದ ನೆಗಡಿ ಕೆಮ್ಮನ್ನೆ ನೆನಸಿಕೊಂಡು ಹಗುರವಾಗಿ ತೆಗೆ್ಉಕೊಳ್ಳಬೇಕು.ಭಯ ಪಟ್ಟಷ್ಟು ರೋಗದ ತೀವ್ರತೆ ಹೆಚ್ಚುತ್ತದೆ.ಈಗ ನಮ್ಮ ಮುಂದಿರುವ ದೊಡ್ಡ ಸವಾಲೆಂದರೆ ಕರೋನಾ ರೋಗಕ್ಕೆ ಭಯಪಡದೆ ಇರುವದು.ಆತ್ಮವಿಶ್ವಾಸ ಗಟ್ಟಿಗೋಳಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಆಲೋಚನೆಗಳು ಮತ್ತು ಸ್ವಲ್ಪ ಮಟ್ಟಿನ ಯೋಗ ಮತ್ತು ದ್ಯಾನಗಳು ಅತ್ಯವಶ್ಯಕ. ****************************** .

Read Post »

ನಿಮ್ಮೊಂದಿಗೆ

ಪ್ರಸ್ತುತ

ಹರಪ್ಪ – ಡಿಎನ್ಎ ನುಡಿದ ಸತ್ಯ ನೂತನ ದೋಶೆಟ್ಟಿ ಈ ಶೀರ್ಷಿಕೆಯ ಕೃತಿಯನ್ನು ಲಕ್ಷ್ಮೀಪತಿ ಕೋಲಾರ ಹಾಗೂ ಸುರೇಶ್ ಭಟ್ ಬಾಕ್ರಬೈಲು  ಅವರು ಜೊತೆಯಾಗಿ ಹೊರತಂದಿದ್ದಾರೆ. ಸಾಗರ ತಾಲೂಕು ಕುಗ್ವೆಯ ಓದು ಪ್ರಕಾಶನ  2018ರಲ್ಲಿ  ಇದರ ದ್ವಿತೀಯ ಆವೃತ್ತಿ ಮಾಡಿದೆ.ಮೊದಲ ಮುದ್ರಣದ ಎಲ್ಲ ಪ್ರತಿಗಳು ಎರಡೇ ದಿನಗಳಲ್ಲಿ  ಖಾಲಿಯಾಗಿದ್ದು ಈ ಕೃತಿಯ ಮಹತ್ವವನ್ನು ಹೇಳುತ್ತದೆ. 76 ಪುಟಗಳ ಈ ಕೃತಿಯಲ್ಲಿ  ಇರುವ ಎರಡು ಲೇಖನಗಳಲ್ಲಿ  ಅತ್ಯಂತ ಕುತೂಹಲಕಾರಿ ಸಂಶೋಧನೆಗಳ ಮಾಹಿತಿ ಇದೆ. ವಂಶವಾಹಿಗಳ ಕುರಿತ ಜ್ಞಾನವನ್ನು ಮನುಕುಲದ ಇತಿಹಾಸ ಸಂಶೋಧನೆಗೆ ಬಳಸುವ ಪ್ರಕ್ರಿಯೆ ಎರಡು ದಶಕಗಳಿಂದ ಈಚೆಗೆ ಶುರುವಾದದ್ದು. ಓದು ಬಳಗ ತನ್ನ ಮುನ್ನುಡಿಯಲ್ಲಿ ಹೇಳಿದಂತೆ,                “2001ರಲ್ಲಿ ವಿಜ್ಞಾನಿಗಳು ಮಾನವ ಜಿನೋಂ ಯೋಜನೆಯ ಮೂಲಕ ಅಧ್ಯಯನ ನಡೆಸಲು ತೊಡಗಿ ನಂತರದ ಎರಡು ದಶಕಗಳಲ್ಲಿ ಅಗಾಧ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಕಳೆದ 7-8 ವರ್ಷಗಳಲ್ಲಿ  ಪ್ರಪಂಚದ ಬಹುತೇಕ ಎಲ್ಲಾ ಜನಾಂಗೀಯ ಹಾಗೂ ಪ್ರಾದೇಶಿಕ ಭಿನ್ನತೆಗಳ ಜನರ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನಕ್ಕೆ  ಒಳಪಡಿಸಿದ್ದಾರೆ. ಸದ್ಯದ ಮಟ್ಟಿಗೆ ಇಡೀ ಜಗತ್ತಿನಲ್ಲಿ ಮನುಷ್ಯನ ಚರಿತ್ರೆಯಲ್ಲಿ ನಡೆದಿರುವ ಎಲ್ಲಾ ವಲಸೆಗಳ ಇತಿಹಾಸವನ್ನು, ವಲಸೆಗಳ ಸ್ವರೂಪಗಳನ್ನು, ಜನಾಂಗೀಯ ಸಂಬಂಧಗಳನ್ನು ಸ್ಪಷ್ಟ ರೂಪದಲ್ಲಿ ಮುಂದಿಡಲು ಡಿಎನ್ಎ ಯಶಸ್ವಿಯಾಗಿದೆ ಎನ್ನಬಹುದು.” ನಾನು ಯಾರು? – ಈ ಪ್ರಶ್ನೆ ಅಧ್ಯಾತ್ಮಿಕವಾಗಿಯೂ, ಸಾಮಾಜಿಕವಾಗಿಯೂ ಸತತವಾಗಿ ಕಾಡುವಂಥದ್ದು. ಇದುವರೆಗೂ ಮನುಷ್ಯನಿಗೆ ತನ್ನ ಚರಿತ್ರೆಯ ಕುರಿತು ಇರುವ ನಂಬಿಕೆಯನ್ನು, ಅಹಂ ಅನ್ನು ಈ ಸಂಶೋಧನೆ ಬುಡಮೇಲು ಮಾಡಬಲ್ಲದು. ಜೊತೆಗೆ ವೈಜ್ಞಾನಿಕ ಆಧಾರವನ್ನೂ ಅದು ಒದಗಿಸುವುದರಿಂದ ಮಾಹಿತಿಗೆ ಅಧಿಕೃತತೆಯೂ ಬರುವುದು. ಮನುಷ್ಯನ ಚರಿತ್ರೆಯ ಸತ್ಯದ ಬಗ್ಗೆ ಕರಾರುವಾಕ್ಕಾದ ತಿಳಿವನ್ನೂ ಸಹ ಅದು ನೀಡಬಲ್ಲದು.  ಹರಪ್ಪ, ಮೊಹೆಂಜೊದಾರೊ, ಧೊಲವೀರ, ಇತ್ತೀಚೆಗೆ ಹರಿಯಾಣಾದ ರಾಖಿಗರಿಯ ಉತ್ಖನನದಲ್ಲಿ ದೊರೆತ ಮನುಷ್ಯರ ಪಳೆಯುಳಿಕೆಗಳ ಡಿಎನ್ಎ ಸಂಶೋಧನೆ ನಮ್ಮ ದೇಶದ ಚರಿತ್ರೆಯ ಕುರಿತೂ ಹೊಸ ಹೊಳಹುಗಳನ್ನು ನೀಡಬಲ್ಲದು.  ಕೃತಿಯ ಮೊದಲ ಲೇಖನ — ರಾಖಿಗರಿ ಪಳೆಯುಳಿಕೆಯ ಡಿಎನ್ಎ ನುಡಿದ ಸತ್ಯವೇನು? ಈ ಶೀರ್ಷಿಕೆಯಲ್ಲೇ ಕುತೂಹಲವಿದೆ. ಹರಪ್ಪ-ಮೊಹೆಂಜೊದಾರೋ ಉತ್ಖನನದಲ್ಲಿ ದೊರೆತ ಪಳೆಯುಳಿಕೆಗಳು ಭಾರತ ಉಪಖಂಡದ ಪ್ರಾಚೀನ ನಾಗರಿಕತೆಗೆ ತಳುಕು ಹಾಕಿಕೊಂಡಿದ್ದು ತಿಳಿದಿದೆ. ಆದರೆ ಇಲ್ಲಿಯ ನಿವಾಸಿಗಳ ಕುರಿತು ಎದ್ದ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಲಿಲ್ಲ. ಇದೀಗ ರಾಖಿಗರಿಯಲ್ಲಿ ಸಿಕ್ಕಿರುವ 4500ವರ್ಷಗಳ ಹಿಂದಿನ ಅಸ್ಥಿಪಂಜರ ಈ ಜನ ಯಾರು ಎಂಬುದಕ್ಕೆ ಸ್ಪಷ್ಟ ಉತ್ತರ ನೀಡಬಲ್ಲುದಾಗಿದೆ.  ಈ ಸಂಶೋಧನೆಗಳಲ್ಲಿ ಸಿಂಧೂ ನಾಗರಿಕತೆಯ ಜನ ವಿಕಾಸಗೊಂಡಿರುವುದು ಇರಾನಿನ ಬೇಸಾಯಗಾರರು ಮತ್ತು ಪ್ರಾಚೀನ ಆದಿಯ ದಕ್ಷಿಣ ಭಾರತೀಯರ ಕೂಡುವಿಕೆಯಿಂದ , ಆದಿಯ ಉತ್ತರ ಭಾರತೀಯ ಜನವರ್ಗದ ವಿಕಾಸ, ಆದಿಯ ಉತ್ತರ ಭಾರತೀಯ ಹಾಗೂ ಆದಿಯ ದಕ್ಷಿಣ ಭಾರತೀಯರ ಸಮ್ಮಿಶ್ರಣದ ಫಲವಾಗಿ ಬಹುತೇಕ ಜನವರ್ಗಗಳ ವಿಕಸನ ಮೊದಲಾದ ಅತ್ಯಂತ ರೋಚಕ ವಿಷಯಗಳನ್ನು ಹೇಳುತ್ತ ಇದುವರೆಗೆ ಪ್ರಚಲಿತದಲ್ಲಿದ್ದ ಆರ್ಯ ಸಂಸ್ಕೃತಿಯ ಮೂಲ  ಭಾರತ ಎಂಬ ವಾದವನ್ನೂ ಅಲ್ಲಗಳೆಯುತ್ತದೆ. ರಾಖಿಗರಿ ಸಂಶೋಧನೆ, ಹರಪ್ಪ/ಸಿಂಧೂ ನಾಗರಿಕತೆಯ ಜನರು ಮತ್ತು ಇಂದು ಪಶ್ಚಿಮ ಘಟ್ಟಗಳ ದಕ್ಷಿಣ ತಮಿಳು ನಾಡಿನ ನೀಲಗಿರಿ ಅರಣ್ಯ ಬೆಟ್ಟದಲ್ಲಿ ನೆಲೆಸಿರುವ ಆದಿವಾಸಿ ಇರುಳರು ಮೂಲತಃ ಒಂದೇ ವಂಶದವರು ಎಂದು ಹೇಳುತ್ತದೆ. ಆಧುನಿಕ ಭಾರತೀಯ ಒಂದು ಮಿಶ್ರಣ ತಳಿಯಾಗಿದ್ದು ಅದರಲ್ಲಿ ಗಮನಾರ್ಹ ಪ್ರಮಾಣದಲ್ಲಿ ಇರುವುದು ಹರಪ್ಪ ನಾಗರಿಕತೆಯ ಜನರು ಅಂದರೆ ಆದಿಯ ದಕ್ಷಿಣ ಭಾರತೀಯರ ವಂಶವಾಹಿಗಳು. ಇನ್ನು ವಲಸೆ ಬಗ್ಗೆ ಇವರು ಹೇಳಿರುವುದು-ಆಧುನಿಕ ಲಕ್ಷಣಗಳಿರುವ ಮಾನವರು  ಸುಮಾರು 70000 ವರ್ಷಗಳ ಹಿಂದೆ ಆಫ್ರಿಕಾದಿಂದ ವಲಸೆ ಹೊರಟು ವಿಶ್ವದ ಬೇರೆ ಬೇರೆ ಭಾಗಗಳಿಗೆ ಚದುರಿ ಹೋದರು.ಅವರಲ್ಲಿ ಒಂದು ಗುಂಪು ಸುಮಾರು 50000 ವರ್ಷಗಳ ಹಿಂದೆ ಭಾರತಕ್ಕೆ ಬಂದಿಳಿದಿದೆ.  ಡಿಎನ್ಎ ಅಧ್ಯಯನಗಳೂ ಇದನ್ನು ದೃಢಪಡಿಸಿವೆ.ಮತ್ತೊಂದು ದೊಡ್ಡ ವಲಸೆ 10000 ವರ್ಷಗಳ ಹಿಂದೆ ಪಶ್ಚಿಮ ಏಷಿಯಾದಿಂದ ಕೆಲವು ಗುಂಪು ಯುರೋಪ್ ಕಡೆಗೂ ಕೆಲವು ಇರಾನ್ ಮೂಲಕ ಭಾರತ ಹಾಗೂ ಇತರ ಭಾಗಗಳಲ್ಲೂ ನೆಲೆಸಿದವು. ಇಂಥ ಹಲವಾರು ಆಸಕ್ತಿದಾಯಕ ವಿಷಯಗಳು ಇಲ್ಲಿವೆ.  ಕೆಲವು ನಿಂದನೆಗಳಿವೆ. ಇಂಥ ಪ್ರಯತ್ನಗಳು ಕೂಡ ಇತಿಹಾಸದಲ್ಲಿ ತಮ್ಮ ಮೇಲ್ಲ್ಮೆಯನ್ನು ಸ್ಥಾಪಿಸಿಕೊಳ್ಳುವ ಭಾಗವೇ ಆಗಿರುವುದರಿಂದ ಅವುಗಳನ್ನು ಬಿಟ್ಟು ಮನುಕುಲದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಸಂಶೋಧನೆಗಳ ಬಗ್ಗೆ ಕೇಂದ್ರೀಕರಿಸಿ ಓದುವುದು ಒಳ್ಳೆಯದು. ಎರಡನೇಯ ಲೇಖನ ಲಕ್ಷ್ಮೀಪತಿಯವರದು. ಶೀರ್ಷಿಕೆ–ಸಂಸ್ಕ್ರತಿ  ಇತಿಹಾಸದ ಮಹಾಮರೆವು      ( ರಾಖಿಗರಿ ಡಿಎನ್ಎ ಫಲಿತಾಂಶದ ಜಾಡಿನಲ್ಲಿ).  ಕೆಲ ವರ್ಷಗಳ ಹಿಂದೆ ಇಂಥ ಒಂದು ಮಾಹಿತಿ ಸಂಗ್ರಹಣೆಯನ್ನು ಕಳೆದ 20 ವರ್ಷಗಳಿಂದ  ಮಾಡುತ್ತಿದ್ದೇನೆ ಎಂದು ಅವರು ನನಗೆ ಹೇಳಿದ್ದರು. ಅದರ ಬಗ್ಗೆ 3 ಚಿಂತನಗಳನ್ನು ಅವರ ಹತ್ತಿರ ಬೆಂಗಳೂರು ಆಕಾಶವಾಣಿಗೆ ಆಗ ಮಾಡಿಸಿದ್ದೆ.  8 ವರ್ಷಗಳ ಹಿಂದೆ ನಾನು ಧೊಲವಿರಾಕ್ಕೆ ಹೋದಾಗ ಅಲ್ಲಿಯ ಗೈಡುಗಳು ಬಹಳ ಅಲವತ್ತುಕೊಂಡು ಒಂದು ಮಾತು ಹೇಳಿದ್ದರು. ಒಬ್ಬ ಇತಿಹಾಸಜ್ಞ ಆ ಸ್ಥಳದ ಬಗ್ಗೆ ಸಾಕಷ್ಟು ಹೊಸ ಮಾಹಿತಿ ಸಂಗ್ರಹಿಸಿದ್ದಾರೆ. ಆದರೆ ಸರ್ಕಾರಕ್ಕೆ ಅದನ್ನು  ಸಲ್ಲಿಸುತ್ತಿಲ್ಲ ಎಂದು. ಆಗ ನನಗೇಕೊ ಅನುಮಾನವಾಗಿತ್ತು. ಈಗ ರಾಖಿಗರಿಯ ಸಂಶೋಧನೆಗಳು ಬಂದ ಮೇಲೆ ಅದಕ್ಕೆ ತಾಳೆಯಾಗುತ್ತಿದೆ. ಇಂದು ಭಾರತವೊಂದೇ ಅಲ್ಲ. ಇಡೀ ಜಗತ್ತೇ ಕಕೇಷಿಯನ್ ಜನಾಂಗವಾದಿಗಳ ವಸಾಹತಾಗಿ ಮಾರ್ಪಟ್ಟಿದೆ ಎಂಬ ಅಚ್ಚರಿ ಹುಟ್ಟಿಸುವ ಮಾಹಿತಿಯೊಂದಿಗೆ ಲೇಖನ ಆರಂಭವಾಗುತ್ತದೆ. ಯುರೇಷಿಯಾದ ದಕ್ಷಿಣಕ್ಕಿರುವ ಕಾಕಸಸ್ ಪರ್ವತಾವಳಿಗಳಲ್ಲಿ ವಾಸಿಸುತ್ತಿದ್ದ ಜನರು ಕಕೇಷಿಯನ್ನರು. ಇದರ ಬಗ್ಗೆ ಆಗಿರುವ ನಿಖರ ಸಂಶೋಧನೆಗಳ ಮಾಹಿತಿಯನ್ನು ಇಲ್ಲಿ ಅವರು ಕೊಡುತ್ತಾರೆ. ಮಾನವ ಕುಲದ ಪೂರ್ವಿಕ ಪಿತೃವಿನ ಬಗೆಗಿನ ಜಿಜ್ಞಾಸೆ ಹೊಸ ಹೊಸ ಸಿದ್ಧಾಂತಗಳನ್ನು ರೂಪಿಸಿದೆ. ಆಫ್ರಿಕಾದ ಮೂಲವನ್ನು ಒಪ್ಪಿಕೊಳ್ಳಲಾಗದೆ ಪ್ರತಿಷ್ಠಿತ ಯುರೋಪ್ ತನ್ನದೇ ಸಿದ್ಧಾಂತಗಳನ್ನು ರೂಪಿಸಿಕೊಂಡಿದೆ. ‘ಆರ್ಯ ‘ ಮೂಲದ ಬಗೆಗಿನ ಚರ್ಚೆಗಳನ್ನು ಇಲ್ಲಿ ನೆನಪಿಸಿಕೊಳ್ಳುತ್ತ ಹಿಟ್ಲರ್ ಕೂಡ ‘ತಾನು ಆರ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ‘ಎಂಬ ಮಾತೂ ಇಲ್ಲಿ ಸ್ಮರಣೀಯ. ಬಹುತೇಕ ಅನುವಂಶಿಕ ವಿಜ್ಞಾನಿಗಳು ತಾಯಿಯಿಂದ ಮಕ್ಕಳಿಗೆ ಹರಿದು ಬರುವ X ವರ್ಣತಂತುವಿನ ಮೂಲಕ ವಿಶ್ಲೇಷಣೆಗಳನ್ನು ನಡೆಸಿ ಮಾನವನ ಪೂರ್ವಿಕ ಪಿತೃಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸಿ ವಿಫಲರಾಗಿದ್ದರು.ಆದರೆ ಲಂಡನ್ ಮೂಲದ ವಂಶವಾಹಿ ವಿಜ್ಞಾನಿ ಡಾ. ಸ್ಪೆನ್ಸರ್ ವೆಲ್ಸ್ ತಂದೆಯಿಂದ ಗಂಡು ಮಕ್ಕಳಿಗೆ ಮಾತ್ರವೇ ಹರಿದು ಬರುವ Y ವರ್ಣತಂತುವಿನ ಡಿಎನ್ಎ ವಿಶ್ಲೇಷಣೆಯನ್ನು ನಡೆಸಿದರು. ಒಟ್ಟು22 ಭಿನ್ನ ಭೌಗೋಳಿಕ ಪ್ರದೇಶಗಳ 1062 ಪುರುಷರ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಿ 8 ದೇಶಗಳ ವಿಜ್ಞಾನಿಗಳ ತಂಡದೊಂದಿಗೆ ನಡೆಸಿದ ಅಧ್ಯಯನದ ನಂತರ ಅವರು ನೀಡಿದ ವಿವರ ಅತ್ಯಂತ ಕುತೂಹಲಕಾರಿಯಾದದ್ದು. ನಮೀಬಿಯಾದ ಸ್ಯಾನ್ ಬುಷ್ ಬುಡಕಟ್ಟಿನ Y ವರ್ಣತಂತುವಿನಲ್ಲಿ ದೊರೆತ ಗುರುತು 6000೦ ವರ್ಷಗಳಿಗೂ ಹಿಂದಿನದ್ದು. ಇದೇ ಗುರುತು ಭಾರತದ ಸೌರಾಷ್ಟ್ರ, ಮಧುರೈ, ಮಲೇಷಿಯಾ, ನ್ಯೂಗಿನಿ ಹಾಗೂ ಆಸ್ಟ್ರೇಲಿಯಾ ಮೂಲದ ನಿವಾಸಿಗಳಲ್ಲೂ ಕಂಡು ಬಂದಿದ್ದರಿಂದ ಆಧುನಿಕ ಮಾನವನ ಪೂರ್ವಿಕರ ಮೊದಲ ವಲಸೆಯ ಮಾರ್ಗ ಆಫ್ರಿಕಾದಿಂದ ಭಾರತದ ಕರಾವಳಿ ಮಾರ್ಗವನ್ನೊಳಗೊಂಡಂತೆ ಇಂಡೋನೆಷಿಯಾ, ಮಲೇಷಿಯಾ, ಆಸ್ಟ್ರೇಲಿಯಾದ ವರೆಗೂ ಗುರುತಿಸಲಾಯಿತು. ಈ ಪ್ರಯಾಣದ  ಅವಧಿ 300೦ ವರ್ಷಗಳು ಎಂದು ಅವರು ಅಂದಾಜಿಸುತ್ತಾರೆ. ಎರಡನೆಯ ವಲಸೆಯಲ್ಲಿ 4500೦ ವರ್ಷಗಳ ಹಿಂದೆ ಆಫ್ರಿಕಾದಿಂದ ಹೊರಟ ತಂಡ ಮಧ್ಯಪ್ರಾಚ್ಯ, ಮಧ್ಯ ಏಷ್ಯಾ, ಚೀನಾ, ಯುರೋಪ್ ಹಾಗೂ ದಕ್ಷಿಣ ಏಷ್ಯಾಗಳಲ್ಲಿ ಸಂತತಿ ಹಬ್ಬಿಸಿತು. ಹೀಗೆ ಮೆಡಿಟರೇನಿಯನ್ ಭಾಗದಿಂದ ಭಾರತದ ವಾಯುವ್ಯವನ್ನು ತಲುಪಿದವರೇ ಭಾರತದ ಇಂದಿನ ದ್ರಾವಿಡ ಭಾಷಿಕರು. ಹಾಗೆ ಯುರೇಷಿಯಾದಲ್ಲಿ ನೆಲೆಸಿದವರೇ ಕಕೇಷಿಯನ್ನರು!  ವೆಲ್ಸ್  ನಿಷ್ಕರ್ಷಿಸಿದ ಸಮಯಕ್ಕಿಂತ ಹಿಂದೆಯೇ ಮಾನವ ವಂಶಾವಳಿಗಳು ಚೀನಾ ಹಾಗೂ ಯುರೋಪಿನಲ್ಲಿ ಇದ್ದವು. ಆದರೆ ನೈಸರ್ಗಿಕ ವಿಕೋಪಕ್ಕೆ, ಇನ್ನಿತರ ಕಾರಣಗಳಿಗೆ  ತುತ್ತಾಗಿ  ಅವರೆಲ್ಲ  ನಾಮಾವಶೇಷವಾಗಿರಬೇಕು.  ವೆಲ್ಸ್ ಅವರ ಪ್ರಕಾರ ಇವತ್ತು ಭೂಮಿಯ ಮೇಲಿರುವ ಸಂತತಿಯಲ್ಲಿ ಇನ್ನೂರು ಜನರಲ್ಲಿ ಒಬ್ಬ ನಿಸ್ಸಂಶಯವಾಗಿ ಚೆಂಗೀಸ್ ಖಾನ್ ವಂಶದವನು! ಇಂಥ ಅನೇಕ ಕೌತುಕದ ವಿಷಯಗಳು ಈ ಲೇಖನದಲ್ಲಿವೆ. ಲಕ್ಷ್ಮೀಪತಿಯವರು ರಾಖಿಗರಿಯ ಬಗ್ಗೆ, ಅಲ್ಲಿಯ ಸಂಶೋಧನೆಗಳ ಬಗ್ಗೆ ವಿಸ್ತ್ರತ ಮಾಹಿತಿ ನೀಡುತ್ತಾರೆ.  ಇಡೀ ಜಗತ್ತಿನ ಇಂದಿನ ಜನಸಮುದಾಯಗಳು ವಲಸೆ, ಪಲ್ಲಟಗಳ ಕಾರಣದಿಂದ ಹಲವಾರು ಧಾರೆಗಳ ಮಿಶ್ರಣ ಹೊಂದಿರುವುದರ ಬಗ್ಗೆಯೂ ಅಧ್ಯಯನಗಳು ದೃಢಪಡಿಸಿವೆ. ವೈಜ್ಞಾನಿಕ ತಿಳಿವಿನ ಆಧಾರದ ಮೇಲೆ ಆದಿಪೂರ್ವಿಕ ದಕ್ಷಿಣ ಭಾರತೀಯರು, ಪೂರ್ವಿಕ ದಕ್ಷಿಣ ಭಾರತೀಯರು, ಪೂರ್ವಿಕ ಉತ್ತರ ಭಾರತೀಯರು ಎಂಬ ವಿಂಗಡಣನೆಯನ್ನು ವಿದ್ವಾಂಸರು ಗುರುತಿಸಿಟ್ಟಿದ್ದಾರೆ. ಲೈಂಗಿಕ ಪಕ್ಷಪಾತದಿಂದ ಆದ ಉತ್ಪರಿವರ್ತನೆಗಳನ್ನೂ ಗುರುತಿಸಿದ್ದಾರೆ.  ಲಕ್ಷ್ಮೀಪತಿಯವರು ವೇದಕಾಲವನ್ನೂ ತರ್ಕಿಸಿದ್ದಾರೆ. ಯುರೇಷಿಯಾದ ಯುದ್ಧೋನ್ಮಾದಿಗಳು ಭಾರತಕ್ಕೆ ಬಂದು ಇಲ್ಲಿನ ಉಪ್ಪನ್ನೇ ಉಂಡು …ಛೇ! ಈ ನೆಲದ ಇತಿಹಾಸ ಏಕೆ ವಕ್ರಗತಿ  ಹಿಡಿಯಿತೋ ಎಂದು ಬೇಸರಿಸಿದ್ದಾರೆ. ಕಾಲಕಾಲಕ್ಕೆ ಜರುಗಿದ ಸಾಂಸ್ಕ್ರತಿಕ ರಾಜಕಾರಣದ ಬಗ್ಗೆಯೂ ದೀರ್ಘವಾಗಿ ಹೇಳಿದ್ದಾರೆ. ನಾನು ಕಾಕತಾಳೀಯವೆಂಬಂತೆ  ಈ ಪುಸ್ತಕ, ರವಿ ಹಂಜ್ ಅವರ ಹ್ಯೂಎನ್ ತ್ಸಾಂಗನ ಮಹಾಪಯಣ, ನೇಮಿಚಂದ್ರರ ಯಾದ್ ವಶೇಮ್ ಇವುಗಳನ್ನು ಒಂದರ ಹಿಂದೆ ಒಂದು ಓದಿದೆ. ಮೂರರಲ್ಲೂ ಅದೆಷ್ಟು ಒಂದೇ ಬಗೆಯ ಹೊಳಹುಗಳು ಕಂಡವು ನನಗೆ. ವಸುಧೈವ ಕುಟುಂಬಕಂ- ಎಂಬ ಮಾತಿದೆಯಲ್ಲ. ಇಂಥ ಸಂಶೋಧನೆಗಳು ಹೆಚ್ಚು ನಡೆದು, ಜಗವೆಲ್ಲ ಒಂದೇ ಎಂಬ ಸಿದ್ಧಾಂತ ನಮ್ಮ ಕಾಲದಲ್ಲಿ ಸಿದ್ಧವಾಗದಿದ್ದರೂ ಆ ದಿಸೆಯ ಆಲೋಚನೆ ಆರಂಭವಾಗಿ ಜಗತ್ತಿನಲ್ಲಿ ಜಾತಿ, ಮಾತು, ಪಂಥ, ಧರ್ಮಗಳ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರ, ಯುದ್ಧಗಳು ಕಡಿಮೆಯಾಗಲಿ. ಲಕ್ಷ್ಮೀಪತಿಯಾವರ  ಸತತ ಅಧ್ಯಯನ, ಸುವಿಸ್ತಾರ ಓದಿಗೆ ಶರಣು. ಇತಿಹಾಸ ಎಂದರೆ ಮೂಗು ಮುರಿಯುವವರು ತಿಳಿಯಲೇಬೇಕಾದ ಸತ್ಯವೆಂದರೆ ಅದನ್ನು ಓದದಿದ್ದರೆ ‘ ನಾನು ಯಾರು?’ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳದೇ ಈ ಜಗತ್ತು ಒಂದು ದಿನ ಕೊನೆಯಾಗುತ್ತದೆ ಎಂಬುದು. ಈ ಹಿನ್ನೆಲೆಯಲ್ಲಿ  ಎಲ್ಲರೂ ಓದಲೇಬೇಕಾದ ಪುಸ್ತಕ ಇದು. ( ಪ್ರಕಾಶಕರು- Harshakumar KSKugwe Post, Sagar Taluk, Shimoga District- 577401Rs 50.ಪುಸ್ತಕಗಳಿಗಾಗಿ – 7353712715, 9844252648)***** ****************************************

ಪ್ರಸ್ತುತ Read Post »

ನಿಮ್ಮೊಂದಿಗೆ

ನಿಮ್ಮೊಂದಿಗೆ….

ಮನುಷ್ಯ ಭ್ರಮೆಗಳಲ್ಲಿ ಬದುಕಬಾರದೆಂದು ನಂಬಿದವನು ನಾನು. ಹೀಗಾಗಿಯೇ ಸಂಗಾತಿಬ್ಲಾಗ್ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರವಾದುದೇನೊ ಮಾಡಿಬಿಡುತ್ತದೆ ಮತ್ತು ಅತ್ಯುತ್ತಮ ಸಾಹಿತ್ಯ ಸೃಷ್ಠಿಗೆ ಕಾರಣವಾಗುತ್ತದೆಯೆಂಬ ಹುಸಿಭ್ರಮೆನನ್ನೊಳಗಿರಲಿಲ್ಲ ಮತ್ತು ಮುಂದೆಯೂ ಇರುವುದಿಲ್ಲ

ನಿಮ್ಮೊಂದಿಗೆ…. Read Post »

You cannot copy content of this page

Scroll to Top