ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಿನ್ನ ನೆನಪು

ಕವಿತೆ ಮಾಲತಿ ಶಶಿಧರ್  ನಿನ್ನ ನೆನಪೊಂದು ಉತ್ತರಗೋಳಾರ್ಧದ ಬೇಸಿಗೆದಿನದಂತೆಎಷ್ಟು ಮುದ ಅಷ್ಟೇ ತಾಪ ಗಾಳಿಯ ಒರಟುಸ್ಪರ್ಶಕ್ಕೆ ಹಿತ್ತಲಿನಚಂಗುಲಾಬಿಯೊಂದುಉದುರಿದಂತೆಹಿತ್ತಿಲ ತುಂಬೆಲ್ಲಾಚದುರಿದಂತೆ.. ಸಣ್ಣ ಇರುಳೊಂದಗುತ್ತಿಗೆ ಪಡೆದಿರುವೆ,ಅಧಿಕ ದಿನಯೊಂದಕ್ಕೆಬಾಡಿಗೆ ಇಟ್ಟಿರುವೆಎರಡೂ ನನ್ನದ್ದೇಆದರೂ ಖಾಸಾ ಅಲ್ಲಾ. ಸಂಜೆ ವೇಳೆಗೆ ರಸ್ತೆಬದಿಯಲ್ಲಿ ಸೆರಗೊಡ್ಡಿ ನಿಂತೆಮುಗಿಲ್ಗಲ್ಲಿನ ನಿರೀಕ್ಷೆಯಲ್ಲಿಸೆರಗು ತುಂಬಿದ್ದು ಮಾತ್ರಕಟು ತಾಪ.. ತೊಟ್ಟ ಚಿನ್ನದ ಬೆಂಡೋಲೆಮಂಕಾಯಿತೆ ಹೊರೆತುಕಾವು ಮಾತ್ರಹೆಚ್ಚುತ್ತಲೇ ಇತ್ತು ನೆನಪಿನಕುಲುಮೆಯಲ್ಲಿ.. ಹಸಿರು ಮರದ ರೆಂಬೆಯೊಂದನೀ ಕತ್ತರಿಸಿದಷ್ಟುಸುಲಭವಾಗಿನೆನಪಿನ ಕೊಂಬೆಯಛೇದಿಸಲಾಗದು,ನ್ಯಾಯೋಚಿತ ಸ್ವಾಧೀನದಕ್ಲೇಶವನು ಸಹಿಸಲಾಗದು. ***********************

ನಿನ್ನ ನೆನಪು Read Post »

ಕಾವ್ಯಯಾನ

ಬೇರುಗಳು

ಕವಿತೆ ಪೂರ್ಣಿಮಾ ಸುರೇಶ್ ನಸುಕಿನ ಮೌನಹಳೆಯ ಹಾದಿಗೆಹೆಜ್ಜೆ ಜೋಡಿಸಿದೆ ಅದೇಆಚೆ ಬದಿ ಅಶ್ವತ್ಥ ಈ ಬದಿ ಆಲ ಆಲದ ಜಟಿಲ ಬಿಳಲುಗಳುನೇತಾಡಿದ್ದುಮಣ್ಣ ಪಾದಗಳು ತೇಲಿ ಅಗಸವಸ್ಪರ್ಶಿಸಿಮುದಗೊಂಡಿದ್ದುಎಲೆ ಮರೆಯ ಗೂಡಿನ ಹಕ್ಕಿಗಳಗಂದರ್ವವಾಣಿಗೆ ಪ್ರತಿಧ್ವನಿಸಿದ್ದೂಗುಲಾಬಿ ಅಂಗೈ ದೊರಗು ಸೆಳೆತಕೆಕೆಂಪಾಗಿದ್ದುಪುಟ್ಟ ಉರಿ ಸುಡುತ್ತಿದ್ದರೂ ಆಕರ್ಷಣೆ ! ಮತ್ತೆಮತ್ತೆತೂಗಿ ಬಿದ್ದದ್ದುತರಚಿದ್ದು.. ಈ ಅಶ್ವತ್ಥ!ಪುಟ್ಟ ಮನಸಿಗೆ ನಿಲುಕದದೊರಗು ದೇಹಆಗಸದ ಅಖಂಡ ಮೌನಕೆತನ್ನ ಧ್ಯಾನ ತುಣುಕುಗಳ ಸಿಲುಕಿಸಿಅನುಸಂಧಾನಗೈವಎಲೆಗಳು ಸುತ್ತು ಸುತ್ತಿದ್ದುಹತ್ತಿರದ ಪುಟ್ಟಗಿಡದ ಹಸಿರಪರಪರ ಎಳೆದುಹರಿದುಮನೆಯಾಟಕೆ ಅಡುಗೆತಯಾರಾಗಿದ್ದು.. ಕೈಗೆ ಹಸಿರು ರಸಕಾಲಲ್ಲಿ ಮಣ್ಣು ತೇವ ಆಲ-ಅಶ್ವತ್ಥಆಳಕ್ಕಿಳಿಸುತ್ತವೆಬೇರುಒಳಕೂಗುಅಕ್ಷರವಾಗಲು ತುಡಿಯುತ್ತವೆ.ಬೆಳಕಾಗಿ ಪೊರೆಯುತ್ತದೆಜೀವಂತಿಕೆಯ ಜಗದಗಲ ತೆರೆಯುತ್ತದೆ. ************************************

ಬೇರುಗಳು Read Post »

ಕಾವ್ಯಯಾನ

ಧ್ಯಾನ

ಕವಿತೆ ಸುನೀತ ಕುಶಾಲನಗರ ಎಲ್ಲೆಡೆ ಗವ್ ಎನ್ನುವಾಗಲೂಅದೇನೋ ಧ್ಯಾನಮನೆಯೊಳಗಿದ್ದರೂ ನುಗ್ಗಿಬರುವ ಕವಿತೆ ಆಕಾಶದಂತೆ ಆವರಿಸಿನಿತ್ಯ ಬೆಳದಿಂಗಳುಋತುಚಕ್ರ ಉರುಳಿದಂತೆಋತುಸ್ರಾವ ವ್ಯತ್ಯಾಸಬಣ್ಣದ ಕನಸುಗಳಿಗೆಅದೆಷ್ಟು ಕೂಸುಗಳ ಕೇಕೆಜತೆಯಾದ ಕ್ಷಣ ಕ್ಷಣವೂಕಣ ಕಣಕೂ ಹಿತಮತ್ತೊಮ್ಮೆ ಬದುಕಿಬಿಡೆಂದುಚಾಚುವ ಕೈಕಣ್ಣ ಸುತ್ತಿದ ಬಳೆಯಾಕಾರದಕಪ್ಪನೂ ನೇವರಿಸುವಕೂದಲ ಬಣ್ಣದ ಲೇಪನಕೆಹೊಸ ಹೊಳಪುಭೂತ ಭವಿಷ್ಯದಹಂಗ ತೊರೆವ ವರ್ತಮಾನತೀರಾ ಖಾಸಗಿ ಬದುಕೇಆದರೂ ಸದ್ದಿಲ್ಲದೆಮುಟ್ಟುಗೋಲಾಗುವ ಮುಟ್ಟಿಗೂಹುಟ್ಟುತ್ತಿದೆ ಹೊಸಹುರುಪುದಿನ,ದಿನಾಂಕಗಳಗಡಿದಾಟಿ ಬರುವಲವಲವಿಕೆಯ ಮತ್ತು. ******************

ಧ್ಯಾನ Read Post »

ಕಾವ್ಯಯಾನ

ಕೊನೆಯಲ್ಲಿ

ಕವಿತೆ ನಂದಿನಿ ಹೆದ್ದುರ್ಗ ಕಳಚಿಕ್ಕೊಳ್ಳುತ್ತಲೆ ಹೋಗುತ್ತದೆಹೀಗೇಒಂದೊಂದೇ ಒಂದೊಂದೇ ಬಂಧ. ಬಿಡಿಸಲಾಗದ್ದು ಎನ್ನುವಾಗಲೇಹೊರಡುತ್ತದೆ ಬಿಟ್ಟು ಕಣ್ಮರೆಯಾಗುವುದೋಕಣ್ಣಳತೆಯಲ್ಲೇ ಇದ್ದೂಬೇಕೆನಿಸದೆ ಹೋಗುವುದೊಕಣ್ಣು ಕೈಯಿಗೆ ನಿಲುಕಿದರೂಎದೆಗೆ ಇಳಿಯದೇ ಹೋಗುವುದೊಬೇಕೆನಿಸಿದರೂ ಝಾಡಿಸಿಹೊರಡುವುದೊ.. ಕಳಚುತ್ತಲೇ ಹೋಗುತ್ತದೆ…ಇದ್ದಿತೆಂಬುದರ ಕುರುಹುಕ್ರಮೇಣ ಇಲ್ಲವಾಗಿ.. ಒಂಟಿ ಕೊಂಡಿಯೊಂದುಕೊರಳೆತ್ತಿ‌ ನೋಡುತ್ತಿದೆಈಗಸುತ್ತೆಲ್ಲಾ ಕ್ಷೀಣವಾಗಿ *************************

ಕೊನೆಯಲ್ಲಿ Read Post »

ಕಾವ್ಯಯಾನ

ಕನಸು

ಕವಿತೆ ಅರುಣಾ ರಾವ್ ಸ್ವಪ್ನದಲ್ಲಿ ಕಂಡೆ ಸುಂದರ ಲೋಕ ಮನೆಗಳು ಮಹಲು ಮಾಲು ಮಂದಿರ ರಸ್ತೆ ಸೇತುವೆ ಮಾರುಕಟ್ಟೆ ಜನ ನೋಡುತ ನಡೆದೆ ಬೀದಿಯ ಗುಂಟ ಸಿನಿಮಾ ನೋಡಲು ನೆರೆದ ತರುಣರು ವಸ್ತ್ರಭಂಡಾರದಿ ಸೀರೆ ಬಳೆಗಳು ಪುಸ್ತಕ ಭಾರವ ಬೆನ್ನಲ್ಲಿ ಹೊತ್ತು ನಗುತ ಸಾಗುವ ಪುಟ್ಟ ಮಕ್ಕಳು ಕಚೇರಿಗಳಿಗೆ ಸಾಗುವ ಜನರು ದೇಗುಲಗಳಲಿ ನೆರೆದ ಭಕ್ತರು ಮದುವೆ, ಮುಂಜಿ ಸಮಾರಂಭಗಳು ಚರ್ಚು ಮಸೀದಿ ಪ್ರಾರ್ಥನೆ ಮೊಳಗು ರಸ್ತೆಯಂಚಿನಲ್ಲಿ ವ್ಯಾಪಾರ ಜೋರು ಹೋಟೆಲುಗಳಲ್ಲಿ ತಿಂಡಿಗೆ ಸಾಲು ಎಲ್ಲರ ಮುಖದಲ್ಲಿ ಸಂತಸ ಹೊನಲು ಕಾಣುತ ಸಾಗುತ ಹೋಯಿತು ಹೊತ್ತು ದೂರದಲ್ಲೆಲ್ಲೋ ಕೋಲಾಹಲವು ಓಡುತ ನಡೆದು ನೋಡುತ ನಿಂತೆ ನಡೆದು ಬರುವಂತೆ ಆಕಾರವೊಂದು ಕಣ್ಣಿಗೆ ಕಾಣದು ಇದೆ ಆದರದು ಮಂದಿ ಆತಂಕದಲ್ಲಿ ಸೇರಿ ಮನೆಯನು  ಬಾಗಿಲು ಮುಚ್ಚಿ ಅಂಗಡಿ ಮುಂಗಟ್ಟು ಶಾಲೆಯ ಬಾಗಿಲು ತೆರೆವುದು ಯಾವತ್ತು ಮೊದಲಿನ ದಿನಗಳ ಕಾಣುವೆವೆಂತು ಕಾಣದ ಆಕಾರವದು ಮೆರೆಯಿತು ಜೋರು ಅವನಿಗೆ  ಎಂದಿಗೆ ಬಂದೀತು ಸಾವು ಹೆಂಗಸು ಗಂಡಸು ಮಕ್ಕಳು ಮರಿಗಳು ಭೇದವೆ ಇಲ್ಲದೆ ಬಲಿಯ ಪಡೆದನು ನೋಡುತ ನಿಂತ ಕಾಲದು ನಡುಗಿತು ಓಡುತ ಓಡುತ ಸೇರಿ ಮನೆಯನು ಕದವನು ಇಕ್ಕಿ ಹಾಕಿ ಚಿಲಕವನು ಹೊರಹಾಕಿದೆನು ನಿಟ್ಟುಸಿರೊಂದನು ರಾವಣ ಕೀಚಕ ಭಸ್ಮಾಸುರರು ಕಾಲನ ಬಲೆಗೆ ಜಾರಿ ಬಿದ್ದರು ಪ್ಣೇಗು ಕಾಲರಾ ಮಸಣ ಸೇರಿದರು ಕೊರೊನಾಗೆಂದು ನಿಜದಲ್ಲಿ ಸಾವು  ********************************

ಕನಸು Read Post »

ಕಾವ್ಯಯಾನ

ನಡುಮನೆಯ ಕತ್ತಲಲ್ಲಿ

ಕವಿತೆ ಅಬ್ಳಿ,ಹೆಗಡೆ         ನಾನು ಮತ್ತು ದೇವರು         ಇಬ್ಬರೇ ಕುಳಿತಿದ್ದೇವೆ         ನಡುಮನೆಯ ಕತ್ತಲಲ್ಲಿ.         ನನಗಿಷ್ಟ ಇಲ್ಲಿಯ ಕತ್ತಲು.         ಕಾರಣವಿಷ್ಟೇ…..         ಇಲ್ಲಿ ಬೆತ್ತಲಾದರೂ         ಗೊತ್ತಾಗುವದಿಲ್ಲ ಹೊರಗೆ.         ದಟ್ಟ ಕತ್ತಲು-         ಯಾವಾಗಲೂ ರಾತ್ರಿಯೆ.         ಇಲ್ಲಿ ಹಗಲಿನೆಚ್ಚರದಲ್ಲೂ         ಕನಸು ಕಾಣಬಹುದು.         ವಿಹರಿಸಬಹುದು-         ನೀಲಾಕಾಶದಲ್ಲಿ         ಚುಕ್ಕಿ,ಚಂದ್ರಮರೊಟ್ಟಿಗೆ.         ಇಲ್ಲಿ ಯಾವಾಗಲೋ         ಅಪರೂಪಕ್ಕೊಮ್ಮೆ         ತೆರೆದುಕೊಳ್ಳುವದೂ-         ಉಂಟು,ವರ್ಣಮಯ         ಹೊರ ಜಗತ್ತು.         ಇಲ್ಲಿ ಕಿಟಕಿ,ಬಾಗಿಲುಗಳ         ಇರುವಿಕೆಯೂ ಕೂಡ         ಗೊತ್ತಾಗುತ್ತಿಲ್ಲ.         ಮುಚ್ಚಿರಬಹುದು…         ಹೆಗ್ಗಣ,ಕ್ರಿಮಿ ಕೀಟಗಳ         ಹೆದರಿಕೆಗೆ ಯಾರೋ….!         ಯಾವಾಗಲೋ ಒಮ್ಮೆ         ಮುಚ್ಚಿದ ಕದ         ತೆರೆದಾಗಷ್ಟೇ ಒಳಬರುವ         ಮಬ್ಬು ಬೆಳಕಲ್ಲಿ,         ಒಳಗಿನ ಸೋಜಿಗಗಳೆಲ್ಲ         ಅಸ್ಪಷ್ಟ ಕಣ್ಣೆದುರು.-         ನೇತಾಡುವ ‘ಗಳು’ವಿಗೆ         ನೇತಾಡುವ ಬಣ್ಣ,ಬಣ್ಣದ         ಹಳೆ,ಹೊಸ ಬಟ್ಟೆಗಳು,         ‘ಗಿಳಿಗುಟ್ಟ’ಕ್ಕೆ ನೇತಾಡಿಸಿದ         ಖಾಲಿ ಚೀಲಗಳು,         ಮುರಿದ,ಮುರಿಯದ         ಹಳೆ,ಹೊಸಕೊಡೆಗಳು,         ನೆಲಕ್ಕೆ ಗೋಡೆಗೆತಾಗಿ,         ಬೆಂಚಿನ ಮೇಲೆ,ತುಂಬಿದ         ಖಾಲಿ ಡಬ್ಬಗಳು…         ಇನ್ನೂ ಏನೇನೋ……!         ಇನ್ನು ಇಲ್ಲಿ..         ಕಠೋರ ವಾಸ್ತವದ         ಬಿಸಿಲ ಝಳವಿಲ್ಲ,         ಜಂಜಡವಿಲ್ಲ,ಹೊರಗಿನ-         ಗೌಜಿ,ಗಲಾಟೆಗಳಿಲ್ಲ.         ಎಲ್ಲ,,ಸ್ತಬ್ಧ,ಧ್ಯಾನಸ್ಥ-         ಮೌನ,ತಾನೇ ತಾನಾಗಿದೆ.         ಇನ್ನು…ನಾ ಹುಟ್ಟಿದ್ದು,         ಮೊದಲು ಅತ್ತಿದ್ದು ಕೂಡ         ಇಲ್ಲೇ ಆಗಿರಬಹುದು.         ನನ್ನಂತೆ ಎಷ್ಟೊ ಹುಟ್ಟುಗಳು         ನನಗಿಂತ ಮೊದಲು         ಹುಟ್ಟಿ,ಅತ್ತು,ಗುಟ್ಟಾಗಿ-         ಸತ್ತಿರಲೂ ಬಹುದು.         ಎಷ್ಟೋ ಸಂತಸ,ಉನ್ಮಾದದ         ಮೊದಲ ರಾತ್ರಿಗಳು,         ಕೊನೆಯಾಗಿರಲೂ ಬಹುದು         ನೋವಿನಲ್ಲಿ…..!         ಈ ನಡುಮನೆಯಲ್ಲಿ..         ದೇವರೆದುರು ಹಚ್ಚಿಟ್ಟ         ನಂದಾದೀಪವೂ..         ಎಂದೋ…ಎಣ್ಣೆಮುಗಿದು,         ಬತ್ತಿಸುಟ್ಟು,ಕರಕಲಾಗಿ,         ಆರಿಹೋಗಿದೆ-         ಯಾವಾಗಲೋ….!?         ದೇವರು ಕೂಡ         ಕತ್ತಲಲ್ಲಿ,ನನ್ನೊಟ್ಟಿಗೆ.         ಆತನಿಗೂ ಬೆಳಕಿನ         ಅನಿವಾರ್ಯತೆ ಇದ್ದಂತೆ         ಕಾಣುತ್ತಿಲ್ಲ ನನ್ನಂತೆ…!         ಸುತ್ತಲೂ ನಮ್ಮಿಷ್ಟದ         ಕತ್ತಲ ನಡುಮನೆ–         ನಮಗೆಂದಿಗೂ……..!!!         ************************************

ನಡುಮನೆಯ ಕತ್ತಲಲ್ಲಿ Read Post »

ಕಾವ್ಯಯಾನ

ಇರುವುದನ್ನು ಕಾಣಲಾಗದೆ

ಕವಿತೆ ರಜಿಯಾ ಕೆ ಭಾವಿಕಟ್ಟಿ ನಿಮ್ಮಂತೆ ಇರಲಾಗದೆ ನನ್ನಂತೆ ನಾನುಇರಲಾಗದೆ.ಪರರ ಚಿಂತೆಗೆ ಚಡಪಡಿಸುತಿರೆಮನದ ದುಗುಢ ಇಮ್ಮಡಿಯಾಗುತಲಿ.ದಿನದೂಡುವಂತಾಗಿದೆ. ಇರುವುದನ್ನು ಇಲ್ಲದಂತೆ ಕಂಡು ಇಲ್ಲದನ್ನುಇರುವುದೆಂಬ ಭಾವದಲಿ ಬದುಕು ಬರುಡಾಗಲುಸಿದ್ಧಸ್ಥವಾಗುತಲಿ ದೂರವೇ ನಿಂತು ದಡ ಸೇರಲುಆತುರದ ದೋಣಿ ತವಕಿಸುತಿದೆ. ಜಗದೊಡಲಲಿ ತೆನೆ ಚಿಗುರಿದ ಕ್ಷಣದಲಿಉತ್ತವರು ಯಾರೋ ಬಿತ್ತವರೂ ಯಾರೋಉತ್ತಮರನು ಹುಡುಕುವ ಬರದಲಿ ಮಧ್ಯಸ್ಥಉಳಿದವನೇ ಉಳ್ಳವನಾಗುವ ಇದ್ದವ ಇಲ್ಲದವನಾದ . ಪರಮ ವೈರಿಯನು ಗುರುವೆಂದು ತಿಳಿದವಮುಂದಾದ ಅವಸಾನಕೆ ವಶವಾಗಿ ಮತಿ ಇನವನಾದಒಳಿತಿಗಾಗಿ ಹೊರಟು ಕೆಡಕುಗಳು ಬಲೆಗೆಅವನೇ ವರವಾದ ದುರಂತಗಳ ಸೆಲೆಗೆ ಬದುಕಾದ. ಸಿರಿಗಾಗಿ ಸಮರಗೈದು ಸಂಧಾನದಲಿ ಪಶುವಾದಧನಕನವನು ದೂರಮಾಡಿ ದಯೇಯಿಂದ ಅವಬುದ್ಧನಾದ ಬದುಕಿನ ಉದ್ದಕೂ ಹೆಸರಾದಮತಿಗೆಟ್ಟ ಅಂಗುಲಿಯ ಪಾಲಿಗೆ ದೈವವಾದ ಅಂದವನು ತೆರೆದಿಟ್ಟು ಆಸೆಗಳನು ತೆರೆದಿಟ್ಟುಕೂಡಿಟ್ಟ ಹೊಸತನದ ಕನಸುಗಳನು ಹೊರಬಿಟ್ಟುಬಂಡರಿಗೆ ಲಜ್ಜೆಗೆಟ್ಟು ಸೂಗಿನ ಕವಚಕ್ಕೆ ನಗಾರಿಯಬಿಗಿದಿಟ್ಟು ಸರಿತೂಕದವನೆನಲು ಸಮ್ಮತಕೆ ಸಲ್ಲದವ.ಅವ ಇರುವುದನ್ನು ಕಾಣಲಾಗದವ . ************************************

ಇರುವುದನ್ನು ಕಾಣಲಾಗದೆ Read Post »

ಕಾವ್ಯಯಾನ

ಸ್ನೇಹದ ಫಸಲು

ಗೆಳೆತನದ ದಿನಕ್ಕೊಂದು ಕವಿತೆ ರೇಶ್ಮಾಗುಳೇದಗುಡ್ಡಾಕರ್ ಗೆಳೆತನವಿದು ಪ್ರೀತಿ ,ಸ್ನೇಹದಆಗರವಿದು ಗೆಳೆತನವಿದು ನಂಬಿಕೆ ,ವಿಶ್ವಾಸಗಳಚಿನ್ನದ ಗಣಿಯಿದು ಗೆಳೆತನವಿದು ನೋವು,ನಲಿವಿಗೆಭಾಗಿಯಾಗಿ ಜೊತೆ ನಡೆವುದು ಗೆಳೆತನವಿದು ತಪ್ಪುಗಳ ತಿದ್ದಿತೀಡಿ ಬದುಕಿಗೆ ಸರಿದಾರಿ ತೋರುವದು ಗೆಳೆತನವಿದು ಹೆಣ್ಣು-ಗಂಡು ಎಂಬಭೇದವಿಲ್ಲದೆ ಸ್ನೇಹದ ಕೊಂಡಿಯಾಗುವದು ಗೆಳೆತನವಿದು ಜಾತಿ-ವಿಜಾತಿ ಎನದೆಗಡಿಗಡಿಗಳಾಚೆ ನಮಗಾಗಿ ಮಿಡಿಯುವದು ಗೆಳೆತನವಿದು ಸಂಬಂಧದ ಹಂಗಿಲ್ಲದೆಸಿರಿತನದ ಬೇರುಇಲ್ಲದೆ ಚಿಗುರುವದು ಗೆಳತೆನವಿದು ಹಿರಿಯರು ಕಿರಿಯರುಎನದೆ ಕೈಹಿಡಿದು ಮುನ್ನಡೆಸುವದು ಗೆಳೆತನವಿದು ಬಾಳಿನ ಹೊಸ ಮಗ್ಗಿಲಿಗೆಆರದ ದೀವಿಗೆಯಾಗುವದು ಗೆಳೆತನವಿದು ಪ್ರತಿಫಲ ಬಯಸದೆಫಸಲು ನೀಡುವದು ಎಂದಿಗೋ ನಿಜವಾದ ಸ್ನೇಹವಿದು *********************

ಸ್ನೇಹದ ಫಸಲು Read Post »

ಕಾವ್ಯಯಾನ

ಕೆಂಪು ಐರಾವತ

ಕವಿತೆ ಡಾ.ಪ್ರೇಮಲತ ಬಿ.  ರೆಕ್ಕೆಬಿಚ್ಚಿ ಉಡ್ಡಯನಗೈಯ್ಯುವ ಮುನ್ನವೇ ಹಿಡಿಯಬೇಕೆಂದು ಓಡಿದೆ ಒರೆಸುತ್ತ ಹಣೆಯ ಮೇಲಿನ ಬೆವರು ಒಡಲ ತುಂಬುತ್ತ, ಹರಟೆಯೊಡೆಯುತ್ತ ಪುಕ್ಕವರಡಿ ವಿರಮಿಸಿ ನಿಂತಿತ್ತು ದೇದೀಪ್ಯಮಾನವಾದ  ಕೆಂಪು ಐರಾವತ ಏನೋ ಸಂಕಟ, ಬಿಟ್ಟು ಹೊರಟ ತವಕ ನನ್ನದಲ್ಲದ ಊರ, ಮೂರ್ತವಲ್ಲದ ಭಾವ ದಿನಕೊಂದು ಕೊನೆಕಟ್ಟಿ ಗಟ್ಟಿಯಾಗಿರದ ಅಳ್ಳಕ   ಒಂದೇ ಗಂಟೆ ಊರ ತಲುಪಲು ಒಂದೆರಡೇ ದಿನದ ಗಡುವು ಮತ್ತೆ ಮರಳಲು ನಿಟ್ಟುಸಿರಿಟ್ಟೆ ನಕ್ಕು..” ಎಲ್ಲ ಮರುಳು” ಯಾರೋ ಬಂದರು, ಯಾರೋ ಇಳಿದರು ಕಣ್ಣ ಮುಚ್ಚಿ ಕಿಟಗಿಗೊರಗಿ ಗುನುಗಿ ಹಾಡು ವಿದಾಯಗಳ ಮಾತು,ಬೈ ಬೈ ಟಾ..ಟಾ ಪ್ಲಾಸ್ಟಿಕ್ಕಿನ ಸರಬರ ನನ್ನದೇ ಸನಿಹ ಕಣ್ಬಿಟ್ಟರೆ ಸೇಬು ,ಕಿತ್ತಳೆ ,ಬಾಳೆ ಹಿಡಿದು  ಬಂದಿದ್ದೆ ಏನಚ್ಚರಿ ನಿನ್ನ ಆ ಕಕ್ಕುಲಾತಿ.. ಮಾತು ಹೊರಡದ ನಿನ್ನ ಅಮಾಯಕತೆ ಮಾಗಿದ ಪ್ರೀತಿ ಹಣ್ಣಾಗಿ ಹೊಳೆದು ಕಣ್ಣಲ್ಲಿ ಕೂತಿದ್ದವು ನನ್ನ ಉಡಿಯ ತುಂಬಿ…. ************************************************************************ .

ಕೆಂಪು ಐರಾವತ Read Post »

ಕಾವ್ಯಯಾನ

ಮಾತು – ಮಳೆ ಹಾಡು

ಕವಿತೆ ಬಾಲಕೃಷ್ಣ ದೇವನಮನೆ ಚಿತ್ರ ಕಟ್ಟಿದ ಚೌಕಟ್ಟು      ಮಾತು ಮಳೆಯಂತೆ      ಧೋ… ಎಂದು ಸುರಿಯುತ್ತಿರುತ್ತದೆ ನಿಲ್ಲುವುದಿಲ್ಲ      ಒಮ್ಮೊಮ್ಮೆ ಮಳೆ ನಿಂತರೂ      ಮಾತು ನಿಲ್ಲುವುದಿಲ್ಲ…      ಮೌನವೂ ಮಾತಾದಂತೆ      ಮಳೆ ನಿಂತ ಮೇಲಿನ ಮರದ ಹನಿಯಂತೆ…      ಚೌಕಟ್ಟಿನೊಳಗೆ ಮಾತು ಮಳೆ ಹಾಡು. ದೃಶ್ಯ ಒಂದು      ಆಕಸ್ಮಿಕದ ಭೇಟಿ      ಎಷ್ಟೋ ಕಾಲದ ಮೇಲೆ      ಮರು ಮಿಳಿತವಾದ ಗೆಳೆತನ      ಮುಗಿಯುತ್ತಿಲ್ಲ ಕ್ಷೇಮ ಕುಶಲೋಪರಿ      ಕೂಡಿ ಆಡಿದ ಹಳೆ ನೆನಪು      ಹೊಸ ಕೆಲಸ, ನೆಲೆ ನಿಂತ ಬದುಕು      ಒಳಗೊಳಗೆ ತಳಮಳದ ಕನಸು      ಎಲ್ಲವೂ… ಮೊಗೆದರೂ ಮುಗಿಯದ ಮಾತು      ಸೇರಿಸಿ ಕೊಟ್ಟಿದೆ ಈ ಮಳೆ      ಒಂದೇ ಕೊಡೆಯ ಕೆಳಗೆ ದೃಶ್ಯ ಎರಡು      ಎಷ್ಟು ಬೆಚ್ಚಗೆ ಬೆಸೆದಿದೆ      ಹಲ ದಿನದ ಸಲ್ಲಾಪಕೆ ಅನಿರೀಕ್ಷಿತವಾಗಿ      ಎದೆಯ ದನಿಯಾಗಿ      ಪಿಸು ನುಡಿಗಳು ಬಿಸಿ ಮಿಡಿತಗಳು      ಜಗವೇ ನಾಚಿ ಕಣ್ಮುಚ್ಚುವಂತೆ      ಯಾರ ಹಂಗೂ ಇರದ ತಮ್ಮದೇ ಪ್ರಪಂಚದಲ್ಲಿ      ಮೈಮರೆವಂತೆ ಸೇರಿಸಿ      ಸುರಿಯುತ್ತಲೇ ಇದೆ ಮಳೆ      ಒಂದೇ ಕೊಡೆಯ ಮರೆಗೆ ದೃಶ್ಯ ಮೂರು      ಸುರಿ ಮಳೆ ನೀ ಸುರಿಯುತ್ತಿರು      ನಾ ನೆನೆವೆ ನಿನ್ನೊಳಗೆ      ನನ್ನ ಸುತ್ತಲ ಜಗವು ಅಣಕಿಸಿ ನಗುತಿರಲು      ನನ್ನೊಳಗಿನ ನೋವು ಹರಿಯಲಿ      ಕಂಬನಿಯಾಗಿ ನಿನ್ನ ಜೊತೆಗೆ      ಬೆನ್ನಲಿ ಕಟ್ಟಿಕೊಂಡ ಉರಿ-      -ಯುವ ಹತಾಶೆಯ ಮೂಟೆ      ತಂಪಾಗಲಿ, ಮೊಳೆಯಲಿ ಒಳಗೊಂದು      ಚೈತನ್ಯದ ಓಟೆ      ಚಿಗುರಿ ಹಸುರಾಗಿ      ಮೋಡ ಮುಸುಕಿದ ಬಾಳ ಕ್ಷಿತಿಜದಲ್ಲಿ      ಕತ್ತಲು ಕರಗಿ ಭರವಸೆಯ ಬೆಳಕಾಗಿ      ಸುರಿ ಮಳೆಯೇ ಮೌನಕ್ಕೆ ಮಾತಾಗುವಂತೆ      ಕೊಡೆಯಿಲ್ಲದೇ ನೆನೆವೆ ನಾ ನಿನ್ನೊಳಗೆ      ಮಳೆಯೇ ಹಾಡಾಗುವಂತೆ…!! *************************

ಮಾತು – ಮಳೆ ಹಾಡು Read Post »

You cannot copy content of this page

Scroll to Top