ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನನಗೂ ನಿನ್ನಂತಾಗ ಬೇಕಿತ್ತು!

ಕವಿತೆ ಅನಿತಾ ಪಿ. ತಾಕೊಡೆ ನನಗೂ ನಿನ್ನಂತಾಗಬೇಕಿತ್ತುಅದೆಷ್ಟೋ ಸಲ ನಾನೂ ನಿನ್ನಂತಾಗಲು…ಎದೆಯಾಳದ ಕನಸಿನ ಕಣ್ಣಿಗೆಕಪ್ಪು ಪಟ್ಟಿ ಬಿಗಿಯುತಿದ್ದೆತೀವ್ರವಾದ ಭಾವಗಳು ಎಲ್ಲೆ ಮೀರದಂತೆಇತಿಮಿತಿಯ ರೇಖೆಯನೆಳೆಯುತಿದ್ದೆ ಕೆಲವೊಮ್ಮೆ ಮಾತುಗಳು ಹಳಿ ತಪ್ಪಿದಾಗಕರಾಳ ಮೌನ ಎದೆಯನ್ನು ಸುಡುತಿತ್ತುಅಭದ್ರತೆಯ ನೆಲೆಯೊಳಗೆ ಓಲಾಡಿಸುತಿತ್ತು ಅಂದುಕೊಂಡಂತೆ ಇರಲಾಗದೆಸಣ್ಣ ತಪ್ಪು ವಿರಾಟ ರೂಪ ತಳೆದುಮೂರ್ತರೂಪಕ್ಕಿಳಿಸುವ ಛಲದಿನಕಳೆದಂತೆ ಇಳಿಯುತ್ತಲೇ ಇತ್ತು ನಿನ್ನ ಸಖ್ಯವಾದ ಮೇಲೆನಾನೆನುವ ಅಹಂಭಾವ ಬಿಗುಮಾನಎಲ್ಲವೂ ದೂರ ಸರಿದುನಿನ್ನ ಅನುನಯದೊಳು ಹೂವಾಗಿದ್ದು ಸುಳ್ಳಲ್ಲ ಬೇಕು ಬೇಡಗಳ ನಡುವಿನ ಒಳಪಂಥದಲಿಅದೆಷ್ಟೋ ಬಾರಿ ನಾನೂ ನೀನೂಸೋತು ಗೆಲ್ಲುತಿದ್ದೆವು ಕೆಲವೊಮ್ಮೆ ಮಾತು ಮೌನಗಳ ಮಥನದಲಿವಿರಹದ ಅಲೆಗಳೆದ್ದು ನಲುಗಿ ಸುಸ್ತಾದಾಗನನಗೂ ನಿನ್ನಂತಾಗುವ ಹಂಬಲ ದಿನ ಕಳೆದಂತೆ ನೋಯಿಸುವ ಭಾವಗಳನ್ನೆಲ್ಲನಿರಾಕಾರಕ್ಕಿಳಿಸಿದೆನನಗೂ ನಿನ್ನಂತಾಗಬೇಕಿತ್ತುನನ್ನತನವನ್ನಾದರೂ ಉಳಿಸಿಕೊಳ್ಳುವಷ್ಟು ಈಗ ಕಳವಳವಿಲ್ಲಕಳುವಾಗುವ ಭಯವೂ ಇಲ್ಲಬಂದಂತೆ ಬದುಕನೊಪ್ಪಿಕೊಳ್ಳುವದಿಟ್ಟನಡೆ ನಿನ್ನಂತೆ… ನಾನಂದುಕೊಂಡಂತೆ *******************************

ನನಗೂ ನಿನ್ನಂತಾಗ ಬೇಕಿತ್ತು! Read Post »

ಕಾವ್ಯಯಾನ

ಕಲಿಗಾಲದ ಫಲ

ಕವಿತೆ ಅರುಣ್ ಕೊಪ್ಪ ಅಂದು ಖುಷಿಯನ್ನೆಲ್ಲ ಉಸುರಿಹಿಡಿದು ಮುಟ್ಟಿದ್ದಕ್ಕೂತಂತ್ರಜ್ಞಾನದ ಗುಲಾಬು ಜಾಮೂನಿನ ಚಪಲದಲ್ಲಿದ್ದೆವು.ಸ್ವಾರ್ಥದ ಕುದುರೆಯನ್ನೇ ಏರಿ ಸವಾರಿಕಾಂಚಾಣದ ಕರವಸ್ತ್ರವನ್ನೇ ಬಳಸುತ್ತಿದ್ದೆವು. ಪಾದ ಊರದ ನೆಲ ಮೌನದಲ್ಲಿಕಾಲು ದಾರಿಗಳನ್ನು ನುಂಗಿ ಹಾಕಿತ್ತುಬೀದಿ ದೀಪದಲ್ಲೂ ಕಣ್ಣು ಕಾಣದಮೋಜು ಮಸ್ತಿಯಲಿ ರಾತ್ರಿಯನ್ನುಹಗಲಿನಂತೆ ಅನುಭವಿಸುತ್ತಿದ್ದೆವು.ಸಮಯವನ್ನು ಹರಾಜು ಮಾಡಿಅಹಂ ಅಂಗಡಿಯಲ್ಲಿ ಮಾರಾಟಮಾಡುತ್ತಿದೆವು. ಹುಟ್ಟಿದ ಕಿಮ್ಮತ್ತಿಗೆ ಬೀದಿ ವಾಪಾರಿಗಳಮಂತ ಉರಿಸುತ್ತಿದ್ದೆವು.ನಾವೇ ಅನುಭೋಗಿಗಳುಎಂಬ ಸರ್ವ ಜಂಬದಲಿವೃದ್ಧರನ್ನು ಹೇಸಿಗೆಯಾಗಿ ನೋಡುತ್ತಿದ್ದೆವು. ವ್ಯಾಪಾರ ಜಗತ್ತಿನಲ್ಲಿಸಂಬಂಧಕ್ಕೂ ಮಾಪು ಹಿಡಿದುತಾವೇ ಸರಿ ಎಂದೆನುತಕಾಣುವ ಸೊಗದೊಳಗೆಭೂತಗನ್ನಡಿಯ ಹಿಡಿದುಮೊಸರಲ್ಲಿ ಕಲ್ಲು ಹುಡುಕುತ್ತಿದ್ದೆವು ಆದರೆ ಇಂದು ಎಲ್ಲಕಲಿಗಾಲದ ಫಲ ***********************

ಕಲಿಗಾಲದ ಫಲ Read Post »

ಕಾವ್ಯಯಾನ

ಜ್ಞಾನೋದಯದ ನಿದ್ದೆ

ಕವಿತೆ ವಸುಂಧರಾ ಕದಲೂರು ನಡುರಾತ್ರಿಗಳಲಿ ಒಮ್ಮೊಮ್ಮೆ ನಿದ್ದೆಸುಳಿಯದೇ ನರಳಿ,ನರಳಾಡಿಹೊರಳಾಡುವಾಗ ಮನಕೆ ಜಗದಚಿಂತೆಯೂ ಹಿಡಿದು ಚಿಂತನೆಗೆಶುರುವಾಗುತ್ತದೆ. ಇಂತಿಪ್ಪ ಅಶಾಂತಿಗೆ ಶಾಂತಿಯಹುಡುಕುವ ಮನಸ್ಸಾಗುತ್ತದೆ. ಜ್ಞಾನೋದಯಕ್ಕೆ ಮನೆಬಿಟ್ಟುಹೋದವ ನೆನಪಾಗಿ, ನಾನೂ ಎದ್ದುಹೊರಡಿಬಿಡಬೇಕೆಂಬ ತುಡಿತ ಹೆಚ್ಚಾಗಿಪರಿತ್ಯಾಗದ ವೇದಿಕೆ ಹತ್ತಲು ಮನಇನ್ನಿಲ್ಲದಂತೆ ಸಿದ್ಧವಾಗುತ್ತದೆ. ಏಳಬೇಕೆಂದವಳ ನಡು ಬಳಸಿ,ಕೊರಳ ಸುತ್ತಿ ಅಪ್ಪಿರುವ ‘ನಾಲ್ಕುಕೈಗಳ ಬಂಧನ ಬಿಡಿಸಿಕೊಳ್ಳುವುದುಹೇಗೆ?’ ಪ್ರಶ್ನೆ ಧುತ್ತೆಂದು ಕಾಡುತ್ತದೆ. ಲೋಕೋದ್ಧಾರಕ್ಕೆ ಹೊರಡಲಾಗದೆಭವಬಂಧನಕೆ ಸಿಲುಕಿರುವ ನಾನು,ಬದ್ಧತೆಯೇ ಇಲ್ಲದ ಬುದ್ಧಿಗೇಡಿಯೇ?!ಭಯವೂ ಸುಳಿದಾಡುತ್ತದೆ. ‘ಛೇ, ಬಿಡು ಇದನ್ನೆಲ್ಲಾ ಎದ್ದು ನಡೆ’……ಕಳ್ಳ ಮನಸ್ಸಿನ ಚಿತಾವಣೆ. ನಾನೇನೋ ಹೋಗಿಬಿಡುವೆ. ನಾಳೆಇವರೆಲ್ಲಾ ಹುಡುಕಾಡಿದರೆ, ಸ್ನಾನದಲಿಬಿಸಿನೀರಿಗೆ, ಹಸಿವಿನಲಿ ಅನ್ನಕೆ… ನನ್ನ ಸಮಸ್ತ ಗೆಳೆಯರ ಪಟ್ಟಿಹಿಡಿದು ‘ಯಾರೊಡನೆ ಹೋದಳುಇವಳೆಂದು?!’ ಉಳಿದ ಮಿತ್ರಜನಪರಿವಾರ ಕುಹಕವಾಡಿ ನಕ್ಕರೆ… ಲೋಕೋದ್ಧಾರಕ್ಕೆ ತೊಡಗಲೂ ನನಗೆ ಭಯವಾಗುತ್ತದೆ; ಇದನ್ನೆಲ್ಲಾ ನೆನೆದರೆ.. ಚಿಂತೆಗಳ ಸುಳಿವಲ್ಲಿ ನಡುರಾತ್ರಿಯಲಿಎದ್ದವಳು ಮತ್ತೆ ಹಾಗೆಯೇ ಬಿದ್ದುಕೊಳ್ಳುವೆ.ಅಪ್ಪಿಕೊಂಡವರೊಡನೆ ಮಲಗಿದರೆ ನನಗೆಜಗದೋದ್ಧಾರದ ಚಿಂತೆ ಮರೆತ ಗಾಢ ನಿದ್ದೆ *********************

ಜ್ಞಾನೋದಯದ ನಿದ್ದೆ Read Post »

ಕಾವ್ಯಯಾನ

ತುಟಿಗಳ ಮೇಲೆ ನಿನ್ನಿಯದೇ ಹೆಸರು

ಕವಿತೆ ನಾಗರಾಜ ಹರಪನಹಳ್ಳಿ ತಲೆಗೂದಲ ಮುದ್ದಿಸಬೇಕುಅವುಗಳ ಒಂದೊಂದೇ ಎಣೆಸುತಪ್ರೀತಿಸಬೇಕು ನಿನಗೆ ಊಹಿಸಲು ಅಸಾಧ್ಯಉಸಿರಲ್ಲಿ ಹೆಸರು ಬೆರೆಸುವಕಲೆ ನನಗೆ ಮಾತ್ರ ಗೊತ್ತು ಪ್ರೀತಿ ಅಂದರೆ ಹುಡುಗಾಟವಲ್ಲಅದು ಕಣ್ಬೆಳಕುಹಾಗಾಗಿಪ್ರತಿನೋಟದಲ್ಲಿ ನನ್ನ ಬಿಂಬ ದೂರ ತಳ್ಳಲಾಗದು ಒಲವುಅದು ಹಠಮಾರಿನಿನ್ನ ತುಟಿಗಳ ಮೇಲೆನಿನ್ನಿನಿಯದೇ ಹೆಸರು ಯಾರು ಏನೇ ಹೇಳಲಿಎಷ್ಟೇ ಹತ್ತಿರದವರಿರಲಿಪ್ರೇಮದ ಮುಂದೆಅವು ನಿಲ್ಲಲಾರವು ಹೃದಯದ ಬಡಿತವೇ ನಿಲ್ಲುವಕ್ಷಣ ಬಂದರೂಕೊನೆಯಲ್ಲಿ ನೆನಪಾಗುವುದುಇನಿಯ ದನಿಯೇ ಒಲವು ಮಳೆಅದನ್ನೆಂದೂ ಭೂಮಿ ನಿರಾಕರಿಸದುನದಿಯ ಎಷ್ಟೇ ಹಿಡಿದಿಟ್ಟರು ಅದರ ಚಲನೆ ಕಡಲಕಡೆಗೆ ನೀ ನಿನ್ನ ಮನಸ ಜೊತೆ ಮಾತಾಡುವುದೇ ಇನಿಯಎದುರಿಟ್ಟುಅದೇ ಬದುಕಿನ ಗುಟ್ಟು ಮನಸು ಬಂಡೇಳುತಿದೆನದಿಗೆ ಕಟ್ಟಿದ ಕಟ್ಟುಪಾಡುಗಳಮುರಿಯಲುತಲೆಯ ಮುಡಿ ಸಿಕ್ಕುಗಳಹೆಣಿಗೆಯಿಂದ ಬಿಡಿಸಿದಂತೆಬಂಧನಗಳ ಕಳಚಿಇನಿದಾರಿಯ ಕಡೆ ನಡೆಯಲುಅಕ್ಕ ಕದಳಿಯ ಕಡೆಗೆ ನಡೆದಂತೆ ಮಾತಾಡು ; ಎದೆಬಿಚ್ಚಿ ಮಾತಾಡುಮನಕೆ ಸಮಧಾನವಾಗುವತನಕಭವ ಬಂಧನದ ಚಾಡಿ ರಾಕ್ಷಸರ ಮಾತಿನಲಗಿನಿಂದ ಇರಿದು ಹಾಕುಆ ರಕ್ತದಲ್ಲಿ ಪ್ರೇಮದ ಓಘಜಗಕೆ ತಿಳಿಯಲಿಪ್ರೇಮ ವ್ಯಭಿಚಾರವಲ್ಲಅದು ಬೆಳಕೆಂದು ಒಲವೇ ಬಂದು ಬಿಡುನದಿಯಾಗಿ, ಸುಳಿವಗಾಳಿಯಾಗಿ,ಪ್ರೇಮದ ಕಡಲಾಗಿ**********************************************

ತುಟಿಗಳ ಮೇಲೆ ನಿನ್ನಿಯದೇ ಹೆಸರು Read Post »

ಕಾವ್ಯಯಾನ

ಪಾಕ

ಕವಿತೆ ಡಾ . ಅಜಿತ್ ಹರೀಶಿ. ಎದೆಯೊಳಗೆ ಸಿಕ್ಕಿಬಿದ್ದಪದಗಳು ಸೀಳಿಹೊರಬಂದು ಘೀಳಿಡುತ್ತವೆನಮ್ಮನು ಕಟ್ಟಿಹಾಕಲುನಿನಗಾವ ಹಕ್ಕಿದೆಯೆಂದು…? ಈ ಮುರಿಯದ ಮೌನಆ ಅಕಾಲ ಪ್ರಸವಈ ಮುದವಿಲ್ಲದ ಮನಆ ಕಳೆಗೆಟ್ಟ ಮಳೆಹದ ಬಿದ್ದು ಮೊಳೆಯಲಿ ಅರ್ಧ ಗೀಚಿದ ಕವಿತೆಅಂತ್ಯ ಕಾಣದ ಕತೆಮಧ್ಯೆ ನಿಂತ ಬದುಕಿನಂತೆಮುಂದೇನೆಂಬ ಚಿಂತೆ ಅವಸರಕ್ಕೆ ಬಿದ್ದುಮುಗಿಸುವ ದಾರಿಅದಿಲ್ಲವೋ ಸದ್ದಿಲ್ಲದೆಮಾಡಬೇಕು ತಯಾರಿ…!********************

ಪಾಕ Read Post »

ಕಾವ್ಯಯಾನ

ಎದೆಯ ಬೆಂಕಿ

ಕವಿತೆ ವೀಣಾ ನಿರಂಜನ ನನ್ನ ಎದೆಯೊಳಗೆ ಬೆಂಕಿಯಿದೆಈ ಬೆಂಕಿಯೇನನ್ನ ಸುಡದಂತೆ ಎಚ್ಚರದಿಂದದಾಟಬೇಕಿದೆ ಹೊರಗೆನಿರೂಪಾಯಳಾದ ನನಗೆನಿರುಪದ್ರವಿ ಕವಿತೆಯೇಉತ್ತರ ಹೇಳಬೇಕುಅಕ್ಷರಗಳು ಬೇಯದಂತೆಶಬ್ದಗಳು ಬೂದಿಯಾಗದಂತೆಈ ಬೆಂಕಿಯಿಂದಲೇಬೆಳಕ ಹೊತ್ತಿಸ ಬೇಕಿದೆ ಕತ್ತಲು ಮಗ್ಗುಲು ಬದಲಾಯಿಸಿನಾಳೆ –ಬೆಳಗಾಗುವುದು ಮತ್ತೆಸುಡುವ ಸೂರ್ಯ ಹೊತ್ತು ತರುತ್ತಾನೆಬೆಳಕಿನ ಪುಂಜ ಎಂದಿನಂತೆ ಎದೆಯ ಬೆಂಕಿಗೆ ನೆರಳಿಲ್ಲ ಎಂದಾದರೆಕವಿತೆ –ನೀನೇಕೆ ಮರವಾಗಿ ನಿಲ್ಲ ಬಾರದುಸುಡುವಾಗ್ನಿ ತಣ್ಣಗಾದೀತುನಿನ್ನ ತಂಗಾಳಿಯ ಸ್ಪರ್ಶದಿಂದಗಾಳಿ, ಬೆಳಕು ಮತ್ತು ಕವಿತೆಈ ಬೆಂಕಿಯೆದುರುಎದೆ ಸೆಟೆಸಿ ನಿಲ್ಲುವುದಾದರೆಪುಟಗೊಂಡ ಆತ್ಮ ಪರಿಶುದ್ಧವಾಗುತ್ತದೆಮತ್ತುಸತ್ಯವಾಗಿಯೂ ಅಲ್ಲಿ ಹೊಸತೊಂದುಕವಿತೆ ಬದುಕನ್ನು ಚುಂಬಿಸುತ್ತದೆಬದುಕಿಗಾಗಿ ಹಂಬಲಿಸುತ್ತದೆ.                    **********************

ಎದೆಯ ಬೆಂಕಿ Read Post »

ಕಾವ್ಯಯಾನ

ಪಟ್ಟಣಕ್ಕೆ ಬುದ್ಧ ಬರಬೇಕಿತ್ತು

ಕವಿತೆ ಪ್ಯಾರಿಸುತ ಅದು ಒಂದು ದಾರಿಬುದ್ಧ ಹೋಗುತ್ತಿದ್ದ ದಾರಿಯದುಅವನು ಎದ್ದು ಹೋದ ಸಮಯಕ್ಕೆನಾನೂ ಎದ್ದು ಯಾರಿಗೂ ಹೇಳದೆಹೋಗಿಬಿಟ್ಟೆ;ಅವನಿಗೆ ಕಂಡಂತೆ ನನಗೆ ಯಾವಹೆಣವಾಗಲಿ,ಮುದಿಯನಾಗಲಿಯಾರೂ ಒಬ್ಬರೂ ಸಿಗಲೇ ಇಲ್ಲಅಥವಾನನ್ನ ಕಣ್ಣೇ ಕಾಣಲಿಲ್ಲವೋ ಗೊತ್ತಿಲ್ಲನಾನು ಮಾತ್ರ ಅವನು ಸಿಗುವಭರವಸೆಯ ಭರದಲ್ಲಿ ಹೆಜ್ಜೆಗಳನ್ನುಹಾಕುತ್ತಲೇ ಹೋಗುತ್ತಿದ್ದೆನನ್ನ ಚಪ್ಪಲಿಗಳೂ ಅದೇ ಭರವಸೆಯನ್ನುಹುಟ್ಟು ಹಾಕಿದ್ದವುಒಳಗೊಳಗೆ ಬುದ್ಧನಾಗುವ ಜಂಬಕಾರಂಜಿಯಂತೆ ರಂಜಿಸುತ್ತಿತ್ತುನಾನು ರಾಜನ ಮಗನಲ್ಲದಕ್ಕೋ,ಗುಡಿಸಲು ಹೊರತು ಬೇರೇನೂಇಲ್ಲದಕ್ಕೋತಿಳಿಯಲಿಲ್ಲ ಮತ್ತೆ ಮುಂದೆ ಹೆಜ್ಜೆ ಹಾಕಿದೆಕಾಡೆಲ್ಲ ಅಲೆದರೂ ಯಾವ ಪಾಪಪ್ರಜ್ಞೆಯುಕಾಡದಿರುವದುನನ್ನಲ್ಲೂ ಆಶ್ಚರ್ಯ ಉಂಟು ಮಾಡಿತ್ತುಅಲ್ಲಿಂದ ನೇರವಾಗಿ ಪಟ್ಟಣದ ಎದೆಯ ಮೇಲೆನಡೆಯುತ್ತಿದ್ದೆಗುಡಿಯ ಪಕ್ಕ ಹಸಿವಿಗಾಗಿ ಹಂಬಲಿಸುವಮಾಸ್ಕು ಧರಿಸಿದ,ಕೊಳಕು ಬಟ್ಟೆಯುಟ್ಟಬಲಗೈಯನ್ನು ಮುಂದೆ ಚಾಚಿರುವಒಬ್ಬ ಸುಂದರ ಯುವತಿ ಕಂಡಳುಅವಳಲ್ಲಿ ಸೌಂದರ್ಯವಿತ್ತು,ಸಾಕ್ಷಾತ್ ಭಗವಂತನಿದ್ದ ಆದರೆ ಅದಕ್ಕಿಂತಅವಳ ಹಸಿವು ಕಾಣುತ್ತಿತ್ತುಹಸಿವನ್ನು ನಿಗಿಸಿದ್ದರೆ ಭಗವಂತ ಹೊರಬರುತ್ತಿದ್ದನೇನೋಈ ದಾರಿಯಲ್ಲಿ ನಾ ಬರುವ ಬದಲು ಬುದ್ಧನೇಬರಬೇಕಿತ್ತುಕಾಡನ್ನು ಬಿಟ್ಟು ಪಟ್ಟಣವನ್ನೆಲ್ಲ ಸುತ್ತಬೇಕಿತ್ತುಅಲ್ಲಿ ಕಾಣುತ್ತಿದ್ದ ಹೆಣ,ಒಂಟಿ ಮುದಿ ಜೀವಇಲ್ಲಿ ಎಲ್ಲವೂ ಬಹುವಾಗಿ ಕಾಣುತ್ತಿದ್ದವು ************************************

ಪಟ್ಟಣಕ್ಕೆ ಬುದ್ಧ ಬರಬೇಕಿತ್ತು Read Post »

ಕಾವ್ಯಯಾನ

ಕರೆ ಮಾಡಬೇಡಿ…ಪ್ಲೀಸ್

ಕವಿತೆ ಸುಜಾತ ಲಕ್ಷ್ಮೀಪುರ. ಒಂದೇ ಸಮನೆ ಎಡಬಿಡದೆಝಣಗುಟ್ಟುವ ಪೋನುಕೋಪ ನೆತ್ತಿಗೇರಿಸಿ ಸಿಟ್ಟು ಮತ್ತು ಅಳುಒತ್ತರಿಸಿಕೊಂಡು ಬಂದುಕಣ್ಣೀರಾಗಿ ಹರಿದರೂಬಿಕ್ಕಳಿಕೆ ಹಾಗೇ ಉಳಿದಿದೆ. ದಯವಿಟ್ಟು ಕರೆ ಮಾಡಬೇಡಿನಾನು ಎಷ್ಟು ಬಾರಿ ಹೇಳಲಿಹೌದು ನಾನು ಕರೋನಾ ಸೋಂಕಿತಳು.ಸೋಂಕಿತಳೆ. ಮತ್ತೆ ಮತ್ತೆ ವಿಳಾಸ ಖಾತರಿಆಗಬೇಕೇಕೆ!??‌ಹೊರಟಿಲ್ಲಾ ಇನ್ನೂ ವಿಳಾಸವಿಲ್ಲದ ಊರಿಗೆ. ದೇಹದ‌ ನೋವಿಗೇನೋಗುಳಿಗೆಗಳಿವೆ…ಯಾರಾದರೂ ಕಳಿಸಿಕೊಡಿವಿಳಾಸ ತಿಳಿಸುವೆಸೋಂಕಿತಳೆಂಬ ಹೆಸರು ಕಿತ್ತಾಕುವ ಗುಳಿಗೆ. ಹಾಲು,ತರಕಾರಿ,ದಿನಸಿತಂದು ಕೊಡುವವರಿಲ್ಲದೆಕಿಟಕಿ ಸರಳುಗಳ ಆಚೆ ಸತ್ತ ಮನಸ್ಸಿನ ಮಂದಿ ನೋಡುತ್ತಾ ಕಾಲದೂಡುತ್ತಿದ್ದೇನೆ. ನಾನೀಗ ವೈರಾಣುವಿನ ವಿರುದ್ದಗಟ್ಟಿಯಾಗಿ ನಿಂತಿದ್ದೇನೆ.ಪದೇ ಪದೇ ಕರೆಮಾಡಿಪ್ರಶ್ನಿಸಬೇಡಿ ನಿರುಮ್ಮಳವಾಗಿರಲು ಬಿಟ್ಟುಬಿಡಿ. ಸದ್ಯಕ್ಕೆ ಇದೇ ವಿಳಾಸ..ಸದ್ಯಕ್ಕೆ ನಾನು ಸೋಂಕಿತಳೆಸದ್ಯಕ್ಕೆ ಪೋನಿಡಿಕರೋನಾ ಬಂದವರೆಲ್ಲಾ ಸಾಯುವುದಿಲ್ಲಾ.ಕೊಂಚ ಮಾನವೀಯತೆ ತೋರಬೇಡವೇ!?ಪ್ರಶ್ನಿಸಿಕೊಳ್ಳಿ ನಿಮ್ಮನ್ನೆ. ************************************

ಕರೆ ಮಾಡಬೇಡಿ…ಪ್ಲೀಸ್ Read Post »

ಕಾವ್ಯಯಾನ

ಜಂಜಾಟದ ಬದುಕು

ಕವಿತೆ ಪೂಜಾ ನಾರಾಯಣ ನಾಯಕ ಬೆಳಗೆದ್ದು ಎತ್ತೆತ್ತ ನೋಡಿದರೂ ಕಾಣದಾ ದಿಕ್ಕುಕಂಡರೇನಂತೆ, ಅತ್ತ ಪೋದರೆ ಸಿಗದಾ ಹಕ್ಕುಕಡಿವಾಣವಿಲ್ಲದೇ ಕಡಲಂತೆ ಬೋರ್ಗರೆವ ಆಸೆಗಳ ಈಡೇರಿಕೆಗೋಸುಗನಿತ್ಯವೂ ದಿನಪೂರ್ತಿ ಜಂಜಾಟಮತ್ತದೇ ವಿಫಲ ಯತ್ನ. ತಲೆಪೂರ್ತಿ ತುಂಬಿದಾ ನಿಬಿಡ ಹಗಲುಗನಸುಗಳುನಿಬ್ಬಣದಂತೆ ಸಾಗುತಿವೆಕಂಡೆಲ್ಲ ಕನಸುಗಳು ದೀಪ ನಂದಿದಂತೆ ನಂದಿಹೋಗುತಿವೆಸಹಿಸಲಾಗದ ಸಂಕಟಎತ್ತೆತ್ತಲಿಂದಲೋ ಕುಠಾರದ ಮೊನಚಂತೆ,ಕುಹಕ ಮಾತುಗಳೇಳುತಿವೆಸುಡುತಿಹುದು ನನ್ನೆದೆಯ ವಾರಿಧಿಯು ಬೆಂಕಿಯಾಜ್ವಾಲೆಯಂತೆ.ತಪ್ತ ಹೃದಯಕೆ ತಿರಸ್ಕಾರಎಲ್ಲೆಲ್ಲೂ, ಮತ್ತೆಲ್ಲ ಯತ್ನ ನೆಲಕಚ್ಚಿಹೋದಾಗ ಕೊನೆಗೇಗೋ ಹೋಗುವುದು ಮುಂದಕ್ಕೆ ಬದುಕು ಹುರುಪು-ಗಿರುಪುಗಳಿಲ್ಲ ಬದುಕಲ್ಲಿನಶ್ವರವೇ ಕೊನೆಗೂ ಎಂಬ ಸಾರಕ್ಕೆ ಶಿರಬಾಗಿದಿಕ್ಕು-ಹಕ್ಕುಗಳಿಲ್ಲದೇಕಡಿವಾಣ-ಗಿಡಿವಾಣಗಳಿಲ್ಲದೇ ಬೋರ್ಗರೆವ ಆಸೆಗಳ ಈಡೇರಿಕೆಗೆನಿತ್ಯವೂ ದಿನಪೂರ್ತಿ ಜಂಜಾಡುತ್ತಾಮತ್ತದೇ ವಿಫಲ ಯತ್ನದತ್ತ ಚಿತ್ತ ಹರಿಸುತ್ತ. ********

ಜಂಜಾಟದ ಬದುಕು Read Post »

ಕಾವ್ಯಯಾನ

ಅಸಹಾಯಕತೆ

ಕವಿತೆ ಎನ್. ಶೈಲಜಾ ಹಾಸನ ಅವೀರ್ಭವಿಸಿದೆ ಮೂರ್ತಅಮೂರ್ತಗಳ ನಡುವಿನ ಸ್ವರೂಪಮುಂದಕ್ಕಿಡುವ ಹಾದಿಹಿಂದಕ್ಕೋಡುತಿದೆ ಅಲ್ಲೊಂದು ಕಡಲುಮೇಲೊಂದು ಮುಗಿಲುದಾಟಿ ನದಿ ತಟವಕಾಡು ಗಿರಿಯ ಹಾದು,ಮುಗಿಲಂಚನು ಮುಟ್ಟುವಾಗಿನ ಸಂಭ್ರಮಗೆಲುವ ಮೀಟಿಪಿಸು ಪಿಸು ಧ್ವನಿಎಲ್ಲಿ? ಎಲ್ಲಿ? ಬೆನ್ನ ಹಿಂದೆ!ಹಿಂತಿರುಗಿದರೆ ಧ್ವನಿ ಮಾಯಮುನ್ನಡೆದರೆಮತ್ತೆ ಧ್ವನಿ, ಮತ್ತೂನಡೆದರೆ ಗಹಗಹಿಸುವವಿಕಟನಗೆಸೋಲೋ ಗೆಲುವೋಮೂರ್ತವೋಅಮೂರ್ತವೋ? *********************

ಅಸಹಾಯಕತೆ Read Post »

You cannot copy content of this page

Scroll to Top