ಗಝಲ್
ನೀ ಮೌನವಾದರೆ ಏನೆಂದು ತಿಳಿಯಲಿ ನಾನು
ಹೇಳಿಬಿಡು ನಿನ್ನ ಮನಸಿಗೆ ಏನಾಯಿತು ಮೈಲಿಗೆ ಸಖಾ
ಪ್ರಶ್ನೆಗಳು ಭಾಗ್ಯ ಸಿ. ಕಾಣದ ವಿಧಿಯು ಸೂತ್ರದಾರನಾಗಿಹಿಡಿದಿಟ್ಟಿರುವನು ಜೀವನವನು ಎನ್ನುವರುಯೋಜನೆ ಮೇಲೊಂದು ಯೋಜನೆ ಮಾಡಿದರೂಅಣತಿಯಂತೆ ಸಾಗಿತ್ತಿಲ್ಲ ಬದುಕು ಕ್ರಮಿಸಬೇಕಾದ ಹಾದಿ ಬಹಳ ದೂರವಿದೆಏಕಾಂಗಿಯಾಗಿ ದಾರಿ ಸವಿಸಬೇಕಿದೆಕಿತ್ತೆಸೆಯಬೇಕಿದೆ ಸುತ್ತಲಿನ ಮುಳ್ಳನುಇರಿಸಬೇಕಿದೆ ಅಂತರಾಳದಲಿ ಕಲ್ಲನುನೊಯದಿರಲಿ ಅಪಹಾಸ್ಯದಿಂದಲಿ ಒಂದು ಹೆಜ್ಜೆ ಗುರಿಯಡೆಗೆಜಗ್ಗುತ್ತಿದೆ ಎರಡೆಜ್ಜೆ ಹಿಂದುಗಡೆಗೆಹಿಡಿದೆಳೆಯುತ್ತಿರುವವರ ನಾ ಅರಿಯೆವಿಧಿಯಾಟವೆನ್ನುತ್ತಿದೆ ಪ್ರಪಂಚಶಿಕ್ಷೆಯಾಗಬೇಕು ತಪ್ಪಿಗೆ ಅರಿವಿದೆತಿಳಿಯದೆ ಪ್ರತಿಕೂಲ ಪರಿಣಾಮವೇಕೆ? ಶಿಸ್ತಿನ ಯೋಜನೆಗೆ ಜಯ ಬೇಕಿದೆಪ್ರಶ್ನೆ ಎದ್ದಿದೆ ಮನಸ್ಸಿನಲಿಕಾಣದ ವಿಧಿಯೇಕೆ ಅಡ್ಡಗಾಲುಭವಿಷ್ಯ ನಿರ್ಮಾಣದಲಿ *********************
ಒಂದು ವೈರಸ್ ಮುಂದಿಟ್ಟು ಕೊಂಡು ನಾಗರಾಜ ಹರಪನಹಳ್ಳಿ ಅಬ್ಬಾ ಮೊನ್ನೆ ಸ್ವಾತಂತ್ರ್ಯ ಆಚರಸಿದೆವುಅದೆಷ್ಟು ಬಿಗಿ, ಅದೆಷ್ಟು ಭಯಗಳನ್ನಿಟ್ಟುಕೊಂಡುಎಲ್ಲಿಯ ಗಾಂಧೀ, ಎಲ್ಲಿಯ ಬ್ರಿಟಿಷರು, ಎಲ್ಲಿಯ ಸುಭಾಷ್ ಚಂದ್ರ …ಯಾರ ಹಂಗು ಇರಲಿಲ್ಲಒಂದು ವೈರಸ್ ಕಾರಣವಾಗಿ ನಗುವಿಲ್ಲ ಮೊಗವಿಲ್ಲ, ಮಕ್ಕಳಿಲ್ಲ, ಘೋಷಣೆಯಿಲ್ಲ, ಪೋಷಣೆಯಿಲ್ಲಎಲ್ಲವೂ ಕಳೆದುಕೊಂಡ ಭೂಮಿಮಕ್ಕಳನು ಕಳೆದು ಕೊಂಡ ತಾಯಿಏನೂ ಉಸಿರೆತ್ತುವಂತಿಲ್ಲವೈರಸ್ ಕಾರಣವಾಗಿ ಏನಿತ್ತು ಅಲ್ಲಿ , ಭಯ ಬಿಟ್ಟುಮುಖ ಗುರುತು ಸಿಗದಂತೆ ಹಾಕಿದ ಬಾಯಿಪಟ್ಟಿಉಸಿರೆತ್ತದಂತೆ ಕಾಡಿದ ವೈರಸ್ಕಾರಣವಾಗಿ ಹೌದು, ಈಗೀಗ ಎಲ್ಲೆಲ್ಲೂ ಫತ್ವಾಗಳ ಹೊರಡಿಸುವುದೇ ಆಗಿದೆ;ಮನುಷ್ಯನಿಂದ ಮನುಷ್ಯನ ಇಬ್ಬಾಗವಾದರೂಕಸಿದ ಸ್ವಾತಂತ್ರ್ಯ ಪಕ್ಕದಲ್ಲಿ ಇದ್ದವಗೆ ಗೊತ್ತಾಗದಂತೆ ಕಸಿದರೂಮಾತಾಡುವಂತಿಲ್ಲವೈರಸ್ ಕಾರಣವಾಗಿ ಭೂಮಿಯನ್ನು ಮಾತೆ ಎನ್ನುತ್ತಲೇ , ಎದೆಯ ಮೇಲೆ ಕಾಲಿಟ್ಟು ತುಳಿದವರುಅವಳ ಕಾಲಿಗೆ ಕಾಲಬಂಧಿ ಹಾಕಿದರೂ ; ಮಾತಾಡುವಂತಿಲ್ಲಕಾಣದ ವೈರಸ್ ಕಾರಣವಾಗಿ ಸ್ವಾತಂತ್ರ್ಯದ ದಿನ ಸ್ವಾತಂತ್ರ್ಯ ಕಳೆದುಕೊಂಡವರು ,ಕಸಿದುಕೊಂಡವರು, ಇನ್ನೂ ಏನೇನೋ ಬಸಿದುಕೊಂಡವರುಮಾತಾಡುವಂತಿಲ್ಲವೈರಸ್ ಕಾರಣವಾಗಿ ಕಾಣದ ಕೇಳದಕಂಡೂ ಕಾಣದ ವೈರಸ್ ಕೊಲ್ಲಲು ಹಾಗೂಜನರ ಬದುಕಿಸಲು ಕವಿದಾರಿಯಿಲ್ಲದ , ಚಾವಿಯಿಲ್ಲದಮನೆ ಮನದಲ್ಲಿ ಅವಿತಿರುವ ಔಷಧಿ ಹುಡುಕಲು ಹೋಗಿದ್ದಾನೆ ಕವಿ ದೇಶಾಂತರ ಅಲೆದಾಟಕೆ ************************
ಗಝಲ್ ಅಕ್ಷತಾ ಕೃಷ್ಣಮೂರ್ತಿ. ನಿನ್ನ ಮುಂಗೈ ಮೇಲೆ ನನ್ನ ಹೆಸರು ಹೇಗೆ ಬರೆಯಲಿ ನೀನೇ ಹೇಳುನಿನ್ನ ಗಲ್ಲ ಕುಕ್ಕುವ ಮುಂಗುರುಳು ಹೇಗೆ ಮುಟ್ಟಲಿ ನೀನೇ ಹೇಳು. ಆ ಒಂದು ದಿನದ ಸವಿ ನೆನಪು ಕಣ್ಣ ತುಂಬ ಹಾಗೆಯೇ ಉಳಿದಿದೆನಿನ್ನ ಕನಸಿನ ಬಾಗಿಲು ತೆರೆದೆ ಇದೆ ಹೇಗೆ ಮುಚ್ಚಲಿ ನೀನೇ ಹೇಳು. ಮನದ ಅಂಗಳದಲ್ಲಿ ನಿನ್ನ ಹೆಸರಿನ ರಂಗೋಲಿ ಹೂ ನಗುವಿನಂತೆನಿನ್ನ ಮೌನ ಧ್ಯಾನ ಇನ್ನು ಇದೆ ಹೇಗೆ ಎಬ್ಬಿಸಲಿ ನೀನೇ ಹೇಳು. ನೆರಳಿನೊಳಗಿನ ನೆರವಾಗಬೇಕು ನೆನಪಲಿ ನಾನು ನೀನು ಕೈ ಕೈ ಹಿಡಿದುನಿನ್ನ ನಗುವಿನೊಳಗೆ ಇನ್ನೂ ಸಲುಗೆ ಇದೆ ಹೇಗೆ ಮರೆಯಲಿ ನೀನೇ ಹೇಳು. ಉದುರಿದ ಎಲೆಯೊಂದು ನಗುತ ಸ್ವರ್ಗ ಸುಖ ಅನುಭವಿಸುತ್ತಿದೆ ಎನ್ನ ಮುಂದೆನಿನ್ನ ನೆನಪಿನೊಳಗೆ ನೆನಪಾಗದೇ “ಅಕ್ಷತಾ” ಹೇಗೆ ಇರಲಿ ನೀನೇ ಹೇಳು. **********************
ಅವನು.. ಸುಜಾತ ಲಕ್ಷ್ಮೀಪುರ. ಅವನು ಸುಳಿಯುತ್ತಿಲ್ಲ.ಈ ನೀರವ ಸಂಜೆಯಲಿ..ಬರೀ ಮಂಕು ಮಗ್ಗುಲಾಗುತ್ತಿದೆಕತ್ತಲಾವರಿಸಿ ಆಗಸವೂ ಬಿಕ್ಕುತ್ತಿದೆ . ಚಿಕ್ಕಿ ಚಂದ್ರಮರೂ ನಾಪತ್ತೆಪಯಣ ಬೆಳೆಸಿರಬೇಕುಅವನ ಊರಿನ ಕಡೆಗೇ..ಕಿಟಕಿಯಾಚೆ ಮಳೆಮೋಡವೂಕಣ್ಣಂಚಲಿ ತೊಟ್ಟಿಕ್ಕಲುಹವಣಿಸುತಿದೆ ಅರೆಗಳಿಗೆ ಅತ್ತುಬಿಡಲು ಅವಸರಿಸಿವೆ ನಯನಗಳುತಂಗಾಳಿಯೂ ತಂಪೀಯದೆಸುಟ್ಟು ಬೂದಿಯೂ ಆಗಿಸದೆಕಿಡಿ ತಾಗಿಸಿ ಮರೆಯಲಿ ಇಣುಕಿದೆ. ನಿಟ್ಟುಸಿರ ಮೈದಡವಿಮುದ್ದು ಮಾತುಗಳಲಿ ಒಲಿಸಿಜೇನು ಸುರಿಸುವ ಕಣ್ಣಂಚಿನ ಪಿಸುಮಾತೂ ಕಾಣೆಯಾಗಿದೆ ಬರಿದೆ ಹಂಬಲಿಕೆ ಚಡಪಡಿಕೆಮುಗಿಯದಾ ಕಾಲದ ಸಂಚುಸುಕ್ಕಾಗುತ್ತಿದೆ ನಿರೀಕ್ಷೆ.ಅವನು ಸುಳಿಯುತ್ತಿಲ್ಲಾ..ಬೆಳಗು ಬೈಗು ನೆನಪಿನ ಗಾಯಒಳಗೊಳಗೇ ಹಸಿರಾಡುತ್ತಿದೆ. ಬೇಸರದಿ ಆಸರೆಗೆಕತ್ತಲಲ್ಲಿ ಕೈಚಾಚಿದ್ದೇನೆಏಕಾಂತವೆಲ್ಲಾ ಲೋಕಾಂತಆಗಿಸುವ ಬಯಕೆ ಅವನುಮಾಯವಾಗಿದ್ದಾನೆ *****************************
ಸಾಹಿತ್ಯದ ಒಳಸುಳಿಗಳ ಜೊತೆ ಒಂದು ಸುತ್ತು!! ಸುಜಾತಾ ಲಕ್ಮನೆ ಅರೆಚಣವೂಅತ್ತಿತ್ತ ಅಲುಗದೇಮಗ್ಗುಲಲ್ಲೇ ಕೂತು ಕಚಗುಳಿಯಿಟ್ಟು ನಗಿಸುವಮನದನ್ನೆಯಂತೆ ಇದು –“ಸಾಮಾಜಿಕ ಜಾಲತಾಣ” !ನಾವೂ ನೀವೂ ಎಲ್ಲರೂ ಜಾಲಿಯಾಗಿ ಜಾಲಾಡಿಈಜಾಡುವ ಸುಂದರ ತಾಣ!ಮೆರೆಸಬಹುದಿಲ್ಲಿಸ್ವ-ಪ್ರತಿಷ್ಠೆ, ಸ್ವ-ಪ್ರಶಂಸೆ, ಬೊಗಳೆ ಒಂದಷ್ಟು, ವೈಯಕ್ತಿಕ ಬಿನ್ನಾಣ..!ಅಷ್ಟಷ್ಟು ಸಾಧನೆ ಸನ್ಮಾನಗಳ ಲಿಸ್ಟಿನ ಅನಾವರಣ!ಹಾಗೋ ಹೀಗೋ ಗೀಚಿ, ಬೀಗಿ,, ಎದೆ ಸೆಟೆಸಿಮೈ ಮನ ಮ(ಮೆ)ರೆಯಲು ಇದೊಂದು ಚಂದದ ನಿಲ್ದಾಣ!ಬರೆದದು ಜೊಳ್ಳೋ, ಸುಳ್ಳೋ, ಕಾವ್ಯವೋ, ವಾಚ್ಯವೋ,ನಿಯಮಬದ್ಧ ಗಜ಼ಲ್ಲೋ, ಅಪಭ್ರಂಶವೋ,ಸ್ವಂತವೋ, ಸಂಗತವೋ, ಅನೂಹ್ಯವೋಒಟ್ಟಾರೆ–ದೊಪ್ಪೆಂದು ರಾಶಿ ರಾಶಿ ಸುರುವಿಸಾಕಷ್ಟು ಲೈಕ್ ಗಿಟ್ಟಿಸಿದರೆಅಲ್ಲಿಗೆ ಸಾರ್ಥಕ್ಯ ಆ ದಿನ!!“ನೀನು ನನಗೆ ಲೈಕ್ ಕೊಡು, ನಾನೂ ಕೊಡುವೆ”“ಮತ್ತೆ ನೋಡು- ವಿರುದ್ಧ ಕಮೆಂಟ್ ಮಾಡಬೇಡ” ಒಳ ಒಪ್ಪಂದ!!ತರಾತುರಿಯಲಿ ಅಂತೂ ಗೀಚಿಹೊಗಳಿಕೆಗಷ್ಟೇ ಹಾತೊರೆದುಕಸದ ತೊಪ್ಪೆಯಂತೆ ಎಲ್ಲ ತಂದು ಸುರಿದಂತೆಲ್ಲಕೆಲವಕ್ಕೆ ಲೈಕುಗಳ ಜಡಿಮಳೆ;ಇನ್ನು ಕೆಲವಕ್ಕೆ ಜಡಿದು ಜಡಿದಂತೆ ಕೊನೆಯ ಮೊಳೆ!!ಹೆಂಗಸರು ಹೆತ್ತ ಕವನಗಳಲ್ಲಿ ಮೈ ಕಾಯಿಸಿಕೊಳ್ಳುವಜೊಲ್ಲುಬುರುಕ ಪುರುಷ ಸಿಂಹಗಳು!ಇವರು ಫ್ರೀಯಾಗಿ ಕೊಡುವ ಗುಲಾಬಿ ಗುಚ್ಛ,ತುಟಿಯಂಚಲೊತ್ತಿದ ಮುತ್ತು;ಕಣ್ಣಲ್ಲೆರಡು ಲವ್ ಸಿಂಬಾಲ್ಗಳ ಇಮೋಜಿಗಳಲಿ ಕಣ್ಣರಳಿಸಿಚಪ್ಪರಿಸಿ ಬವಳಿ ಬಂದು ಕಳೆದುಹೋಗುತ್ತಾರೆಕವಯಿತ್ರಿ ಲಲನಾ ಮಣಿಗಳು!! ಕೊಂಡಾಟ ಅಟ್ಟಕ್ಕೇರಿದಂತೆಲ್ಲಾಜಿರಲೆ ಮೀಸೆಯ ಕೆಳಗಿನ ತನ್ನ ತುಟಿಗಳ ಮೇಲೆ ನಗು ತೇಲಿಸಿತನ್ನೊಳಗೇ ಖುಷಿ ಪಟ್ಟು ಬೀಗುವವನಿಗೆತಾನು ಬರೆದುದೇ ಪರಮ ಶ್ರೇಷ್ಠವೆಂಬ ಭಾವ!!ತಪ್ಪು ಒಪ್ಪುಗಳ ಪರಾಮರ್ಶೆಯ ಉಸಾಬರಿಯೇ ಸಲ್ಲದೆಂದುಆಗಸಕೆ ಮುಖ ಮಾಡಿದ ಹೆಬ್ಬೆರಳ ಚಿತ್ರ ಒತ್ತಿ ಓದುಗಜೈ ಕಾರ ಹಾಕುತ್ತಾನೆ ನೋಡ!!“ಕೇಳಿ ಕೇಳಿ” ಲೈಕ್ ಒತ್ತಿಸಿಕೊಳ್ಳುವವರ ಪರಿಪಾಟಲಂತೂ“ಅಯ್ಯೋ ಪಾಪ” ಏನಕ್ಕೂ ಬೇಡ!! ಇಲ್ಲಿ ಮಣಗಟ್ಟಲೆ ಪ್ರಶಂಸೆಗಳ ಹೊಳೆ;ನಾಲ್ಕಾರು ಡಜನ್ ದ್ವೇಷ, ಅರ್ಧ ಕೆಜಿ ಹತಾಶೆ,ಟನ್ ಗಟ್ಟಲೆ ಹೆಸರು ಮಾಡುವ ಹಪಹಪಿ;ಗ್ರಾಂಗಟ್ಟಲೆ ಕೆಸರೆರಚಾಟ,ತಮಾಷೆಯೋಪಾದಿಯಲಿ ಎದೆಗೇ ಒದೆದಂತಿರುವ ತೇಜೋವಧೆ!ಚೂರು ಪಾರು ಒಳಗೊಳಗೇ ಗುಂಪುಗಾರಿಕೆಮೀಟರ್ ಗಟ್ಟಲೆ ಸಣ್ಣತನಗಳುಲೀಟರ್ ಗಟ್ಟಲೆ ಒಳಸುಳಿಗಳು!!ಮೂಲೆ ಮೂಲೆಯಿಂದ ಹಿನ್ನೆಲೆಯಲಿ ಪಿಸುಗುಡುವ ಕಿಸುರುಮನಸಿನ ಒಳಧ್ವನಿಗಳು!!ಸಂಕಲನ ತಂದವರದೇ ಒಂದು ಪಟಾಲಂತರದೇ ಇರುವವರು ಅಕಟಕಟಾ ಅಕ್ಷರಶಃ ಅಸ್ಪೃಶ್ಯರು!!ಪ್ರಶಸ್ತಿ, ಫಲಕ, ಹಾರ ತುರಾಯಿ, ಲೋಕಾರ್ಪಣೆಯಾದ ಪುಸ್ತಕಗಳ ಲೆಕ್ಕ!ಕ್ವಾಲಿಟಿಗಿಂತ ಕ್ವಾಂಟಿಟಿಗೇ ಪ್ರಾಶಸ್ತ್ಯ!!ಪ್ರಬುದ್ಧ ನೂರು ಗಜಲ್-ಕವನ ಬರೆದವನಿಗಿಂತ ಹಾಳೋ ಮೂಳೋಸಾವಿರ ಸಾವಿರ ಬರೆದವನೇ “ಅಂತೆ” ಗ್ರೇಟು!!ಹಾಗಂತ ಸಾಹಿತ್ಯದ ಪಡಸಾಲೆಯಲಿ ನೇತುಹಾಕುವ ನೇಮ್ ಪ್ಲೇಟು!!ಆಸ್ತಿ, ಅಂತಸ್ತುಗಳ ಪಟ್ಟಿಯೂ ಅಕ್ಕ ಪಕ್ಕ!!ಸಾರಸ್ವತ ಲೋಕದ ತುಂಬ ಬರಿ ರೇಷ್ಮೆ ಶಾಲು ಹೊದ್ದ ಟೊಳ್ಳುಬರಹಗಳ ಸದ್ದು!!ಮುತ್ತು ರತ್ನದಂಥ ಸಾಹಿತ್ಯವೆಲ್ಲ ಮೂಲೆ ಸೇರಿದವೇ ಬೇಸರದಲಿ ಎದ್ದು ಬಿದ್ದು!?ಕೈ ಚೀಲ ಹಿಡಿದು ಹಲ್ಗಿಂಜಬೇಕುವೇದಿಕೆಯ ಮೇಲೂ ರಾರಾಜಿಸಲು!!“ಅಕ್ಷರ ಮಾಧ್ಯಮಗಳಲೂ” ಇಂಥದಕ್ಕೇ ಕುಮ್ಮಕ್ಕುಗೆಲ್ಲಬೇಕೇ- ಮಾಡಲೇಬೇಕು ಅಲ್ಲಿಯೂ ಗಿಮಿಕ್ಕು!! ಎಷ್ಟು ಬರೆದರೇನು ಬಿಡಿ-ಈಗ ಮಾಮರದಲ್ಲಿ ಕೋಗಿಲೆಗಳು ಕೂಗುವುದಿಲ್ಲ!!ಕಾಣಿಸದೇ…ಬೋಳು ಮರಕೆ ಜೋತು ಬೀಳುವ ಬಾವಲಿಗಳೇಮೆರೆಯುತಿವೆಯಲ್ಲ!? ***********************************
ನದಿ ಈಗ ದಿಕ್ಕು ಬದಲಿಸಿದೆ ಸ್ಮಿತಾ ಅಮೃತರಾಜ್.ಸಂಪಾಜೆ. ಜುಳು ಜುಳೆಂದು ಹರಿಯುವನನ್ನೂರಿನ ತಿಳಿನೀರಿನ ನದಿಈಗ ಕೆನ್ನೀರ ಕಡಲು. ತಪ್ಪನ್ನೆಲ್ಲಾ ಒಪ್ಪಿಕೊಂಡಂತೆತೆಪ್ಪಗೆ ಹರಿಯುತ್ತಿದ್ದ ನದಿ.. ಒಣಗಿದೆದೆಯ ಮೇಲೆ ಮೊಗೆದುತಣಿಯುವಷ್ಟು ತೇವವನ್ನುನಮಗಾಗಿಯೇ ಕಾಪಿಡುತ್ತಿದ್ದ ನದಿ.. ಅಂಗಳದ ತುದಿಯವರೆಗೂ ಬಂದುಗಲಗಲಿಸಿ ನಕ್ಕು ನೇವರಿಸಿ ಹರಿಯುತ್ತಿದ್ದ ನದಿ.. ಹೌದು! ಇದುವೇ ನದಿಮೊನ್ನೆ ಹುಚ್ಚೆದ್ದು ಕೆರಳಿದ್ದಕ್ಕೆನೆಲದ ಎದೆಯೊಡೆದು ಸೆಲೆ ಸಿಡಿದುಸಾವಿರ ನದಿಯಾಗಿ ಒಸರಿ ಹರಿದವುರಕ್ತ ಕಣ್ಣೀರ ಕೋಡಿ. ದಿಕ್ಕಾಗಿದ್ದ ನದಿ ತಾನೇದಿಕ್ಕು ಬದಲಿಸಿ ಕೆಂಪಗೆ ಹರಿಯುವಾಗನಾನೋ ದಿಕ್ಕು ಕಾಣದೆ ದಿಕ್ಕೆಟ್ಟುನದಿ ಹರಿಯುವ ದಿಕ್ಕಿಗೆ ಮುಖ ಮಾಡುವುದನಿಲ್ಲಿಸಿದ್ದೇನೆ. ಈಗ ನದಿ ತಿಳಿಯಾಗಿದೆಮುಖ ನೋಡಿಕೊಳ್ಳಬಹುದು ಎನ್ನುತ್ತಾರೆಮುಖವಾಡ ಹಾಕಲು ನದಿಗೂ ಸಾಧ್ಯವಾ..?ನನಗೆ ದಿಗಿಲಾಗುತ್ತಿದೆ. ************************************
ನಂದಿನಿ ಹೆದ್ದುರ್ಗರವರ ಕವಿತೆ ಅವನ ಅದ್ದಿ ಬರೆದ ಪದ್ಯಗಳುಈಗಲೂ ಹೊಸದಾಗಿಯೇ ಇವೆ… ನಾಜೂಕು ಅಕ್ಷರಗಳ ನೇವರಿಸಿಒಳಗೊಳ್ಳುತ್ತೇನೆ ಹೊಸದೆಂಬಂತೆಪ್ರತಿ ಬಾರಿಯೂ… ತೆರೆದ ಬಾಗಿಲಿನ ಪಂಜರದಿಂದಹಾರಿ ಹೋದ ಹಕ್ಕಿಯೊಂದುಇಳಿಸಂಜೆಗೆ ಮರಳಿದಿನದ ಕಥೆ ಹೇಳುತ್ತದೆ. ಕೆಲವು ಹಳತುಗಳುಹೊಸತಾಗಬಹುದೆಂಬ ಪುಳಕಉಳಿದೇಹೋಗಿದೆ ಇಲ್ಲಿ…! ಹೊಳಪು ಮತ್ತು ಬೆಳಕುಬಚ್ಚಿಡುವುದೂ ಎಂಥಹರಸಾಹಸ ಪ್ರಭುವೇ…!!! ****************
ಪ್ರಕೃತಿ ಪಾರ್ವತಿ ಸಪ್ನಾ ಶತಮಾನಗಳ ಲೆಕ್ಕವಿಲ್ಲದೇಇದ್ದಲ್ಲೇ ಇದ್ದು ಸತತವಾಗಿಮಾನವನ ಕೈಯಲ್ಲಿನಾಶವಾಗುತ್ತಿರುವ ಪ್ರಕೃತಿಕೇಳಲಿಲ್ಲನಾನು ಯಾರೆಂದು ! ಕರಿಮೋಡ ಸುತ್ತುತ್ತಲೇ ಇದೆನೀಲಿ ಬಾನು ಇದ್ದಲ್ಲೇ ಇದೆಸೂರ್ಯ ಚಂದ್ರರಿಗೇ ಪುರಸೊತ್ತಿಲ್ಲಆದರೂ ನಮ್ಮನೆಂದು ಕೇಳಲಿಲ್ಲ.ನಾನು ಯಾರೆಂದು ! ಕೋಟಿ ಜೀವ ರಾಶಿಗೆಜಲವೇ ಬೇಕು ಭೂಮಿಗೆದಾಹ ನೀಗಿ ಬದುಕ ಕೊಟ್ಟುಕಡಲ ಸೇರುವ ನೀರಿಗೆಈಗಲೂ ಅರಿವಿಲ್ಲ ನೋಡುನಾನು ಯಾರೆಂದು ! ಏನೇನೂ ಅಲ್ಲದತನ್ನ ಮೂಲ ತಿಳಿಯದಮಾನವೀಯತೆ ಮರೆತುಯಾರೊಂದಿಗೂ ಬೆರೆಯದಮಾನವ ಜನ್ಮವೇಒಮ್ಮೆ ನಿನ್ನನ್ನೇ ಪ್ರಶ್ನೆ ಮಾಡಿಕೋ ನಾನು ಯಾರೆಂದು ! *********************
ಹುಡುಗ ನೀ ಸಾಯಬೇಕಿತ್ತು ಲಕ್ಷ್ಮೀ ಪಾಟೀಲ್ (ಶ್ರೀ ಕೆ ವಿ ಅಯ್ಯರ್ ಬರೆದಿರುವ “ರೂಪದರ್ಶಿ “ಕಾದಂಬರಿಯಲ್ಲಿ ಬರುವ ” ಆರ್ನೆಸ್ಟ್” ನನ್ನು ಕುರಿತ ಕವಿತೆಯಿದು) ಹೊಟ್ಟೆಯಲ್ಲೇ ಅಪ್ಪ ಅಮ್ಮರಿಗಾಗಿಗೋರಿಗರಸ ಎಬ್ಬುವಾಗ ಹಾಳಮಣ್ಣ ಹಾಸಿನಲ್ಲಿಭ್ರಮೆಯ ಬದುಕು ಬಿಕ್ಕುವ ಮುನ್ನಹುಡುಗ ನೀ ಸಾಯಬೇಕಿತ್ತು ಅಜ್ಜಿಯ ಪೊರೆವ ಬಾಂಧವ್ಯದಲ್ಲಿಬದುಕನ್ನು ಒದ್ದೆಯಾಗಿಸಿಕೊಳ್ಳುವಾಗಅವಳ ನೋವಿಗೆ ಬಾಲ ಕನಸುಗಳತೇಪೆ ಜೋಡಿಸುವಾಗ ದೂರ ದುರಂತ ಕಾಣದ ಮುನ್ನಹುಡುಗ ನೀ ಸಾಯಬೇಕಿತ್ತು ಕೈಯಾಡಿಸಿದ ಕೈಗೆ ಬಾಲ ಭಾವದ ಹಾಲು ಗೆಣ್ಣೆಅಪರೂಪದ ಬಾಲ ಯೇಸುವಿನ ವಿರಾಜತೆಮೈಕಲ್ ಏಂಜಲೋನ ದಿವ್ಯ ಅಪ್ಪುಗೆಯ ತಂಪೇಅಮರ ಶಿಲ್ಪಿಯ ನಿರೀಕ್ಷೆಯ ಕಕ್ಷೆ ಯಲ್ಲಿ ಅಪರಂಜಿಯಾದ ಪ್ಲಾರೆನ್ಸ್ ಪಟ್ಟಣದ ಜಾಜಿಯೇಸಂದ ಭಾಗ್ಯ ಸರಿದು ಹೋಗುವ ಮುನ್ನಹುಡುಗ ನೀ ಸಾಯಬೇಕಿತ್ತು ಒಡೆಯನರಮನೆಯಲ್ಲಿ ಸರ್ಪ ಪೀಠದ ಉತ್ತರಾದಿಕಾರ ವಿಸಂಚಿನ ಮಜಭೂತ ಅಮಲಿನಲ್ಲಿ ನಿನ್ನ ಕೌಮಾರ್ಯಯೌವ್ವನವೆಲ್ಲ ಜಾದುವಾಗುವ ಮುನ್ನಹುಡುಗ ನೀ ಸಾಯಬೇಕಿತ್ತು ಲೀಸಾ ನನ್ನೆಟ್ಟಿ ದಂಪತಿಗಳ ಆಸರೆಯಲ್ಲಿಹದುಳಿದ್ದೆ ಆ ಕ್ಷಣ ಕಾಲೋಂದು ಕೈಯೊಂದು ಕಡೆಎಳೆದು ಭೀಕರ ಆವಾಂತರಗಳಲ್ಲಿ ಸಿಗಿತಅದೇ ದಿವಾಳಿಯನ್ನು ಪಥ್ಯವೆಂದು ನುಂಗುವ ಮುನ್ನ ಹುಡುಗ ನೀ ಸಾಯಬೇಕಿತ್ತು ಹೆಗ್ಹೇಗೋ ತಿರುಗಾಡಿ ಗ್ಯಾರಿಬಾಲ್ಡಿಯ ವ್ಯಂಗ್ಯನಾಗಿ ಬದುಕ ಪರದೇಶಿಯಾದ ಹುಡುಗಜಗತ್ತು ಪ್ರೀತಿಸದ ನತದೃಷ್ಟ ತಲೆ ಎದೆ ಸೀಳಿದಜುದಾಸನ ಭಂಗಿಯಲ್ಲಿ ಮತ್ತದೇ ಮೈಕಲ್ ನಅಪೇಕ್ಷಿತ ಅನುವರ್ತಿ ಬಾಲಯೇಸುವಿಗೆ ರೂಪದರ್ಶಿ ಅರ್ನೆಸ್ಟ ಈಗ ಜುದಾಸನತಲೆಹಿಡುಕಕ್ಕೂ ಮಾದರಿ !ಜುದಾಸ್ ಅಲ್ಲನೆಂಬ ನಿರ್ಲಿಪ್ತತೆಮತ್ತದೇ ಹಸುಗೂಸಿನ ಮುಗ್ಧತೆನಿಂತ ನೆಲ ಬಿರಿದಂತೆ ಅಟ್ಟವೇ ಕುಸಿದಂತೆದೇವಶಿಲ್ಪಿಯ ಅಂಗೈಯಲ್ಲಿ ಜೀವಬಿಟ್ಟ ಮಗು“ಪಾಪದಿಂದ ದೂರವಿರು ಪಾಪಿಯಿಂದಲ್ಲ “ಏಸುವಿನ ದಿವ್ಯಧ್ವನಿ ಮೊಳಗುವ ಕಾಲ“ತಂದೆಯೇ ಈತ ಪಾಪದಿಂದ ದೂರ ನಿಷ್ಪಾಪಿ ಮುಗ್ದ ನಿನ್ನದೇ ರೂಪ ” ಅಮರಶಿಲ್ಪಿಯ ಪ್ರಾರ್ಥನೆ ಮೈಕಲ್ ತೊಡೆಯಲ್ಲೀಗ” ಶಿಲುಬೆಯ ಯೇಸು” ಸಮಾನರು ಸಾವಿನಲ್ಲೀಗಅದೆಂತಹುದೋ ಅಮರತ್ವ ದಿವ್ಯತ್ವದ ಸೆಳೆತ ಇತ್ತಿತ್ತಲಾಗಿ ಸಾಯಬಾರದೆಂದುಕೊಂಡಿದ್ದಹುಡುಗ ನೀ ಏನೇ ಹೇಳು…..ಸಾಯುವುದಕ್ಕಾಗಿಯೇ ಹುಟ್ಟಿದ್ದ ನೀನು ಸಾಯಲೇಬೇಕಾಗಿತ್ತು ಹುಡುಗ ನೀಸಾಯಲೇ ಬೇಕಾಗಿತ್ತುಘನಘೋರ ಬದುಕಿನಿದಿರಲ್ಲಿಸಾವೆಂಬುದೆಷ್ಟು ಘನ ಅರ್ನೆಸ್ಟ್ಏಸುವಿನಂತೆ ಮೈಕಲ್ ನಂತೆ ದಿವ್ಯಾತ್ಮನಾಗಲಿಲ್ಲಿಸಾಯಬೇಕಾಗಿತ್ತು ನೀನೀಗಅಮರನಾಗಬೇಕಾಗಿತ್ತು ************************
You cannot copy content of this page