ಡಾ.ಪ್ರೇಮಲತ ಬಿ. ಕಾವ್ಯ ಗುಚ್ಚ
ಡಾ.ಪ್ರೇಮಲತ ಬಿ. ಕಾವ್ಯ ಗುಚ್ಚ ನೆನಪುಗಳೇ…… ಬೆಳ್ಳಂಬೆಳಗು ನಸುನಕ್ಕುಮತ್ತೆ ಬಂದಿಹೆನೆಂಬ ಹೊತ್ತಲ್ಲಿಹೊಸ್ತಿಲಲಿ ನಿಂತು ಕಣ್ಣಾಲೆ ತುಂಬಿವರ್ತಮಾನವ ಕದಡದಿರಿಅಂಗಳದ ತುಂಬೆಲ್ಲ ಹಕ್ಕಿಗಳ ಚಿಲಿಪಿಲಿನೋವು ನಲಿವುಗಳ ಚಿತ್ತಾರದ ರಂಗೋಲಿಹಾಲುಕ್ಕಿ ಹರಿದ ಬದುಕಿನಲಿಒಂದೊಂದೇ ಪಾರಿಜಾತಗಳು ಜಾರಿ ಉದುರಿಭೂತದ ನೆರಳುಗಳಿಗೆ ಇಂದುಹೊಸರೆಕ್ಕೆ ಕಟ್ಟಿಅಗಲಿಕೆಯ ನೋವು, ವಿರಹದ ಕಾವುತುಂಬಿಹ ಬೆಂಗಾಡಿನಮಾಯೆ ಮರುಳಿಗೆ ಹೊತ್ತೊಯ್ಯದಿರಿಬರಗಾಲದ ಬಿರು ಬಿಸಿಲಿಗೆನಿಡುಸುಯ್ದ ಈ ಇಹಕ್ಕೆಮರಳಿ ಅರಳುವ ಬಯಕೆನೀರು ಹುಯ್ಯುವವರಿಲ್ಲಒಂಟಿ ಮರಕ್ಕೆಸಂಜೆ ಗಾಳಿಯ ಹಿತಆಳಕ್ಕೆ ಇರಿದ ಕೆಂಪಿನಲಿಮನಸ್ಸರಳಿ ಹಿತವಾಗಿ ನರಳುತ್ತದೆಅವನೆದೆ ಕಾವಿನಲಿ ಕರಗುತ್ತದೆಸೆಟೆದ ನರನಾಡಿಗಳು ಅದುರಿಹಗುರಾಗಿ ಬಿಡುತ್ತವೆಕೂಡಿ ಕಳೆದುಹೋಗುವ ತವಕದಲಿಕಣ್ಣೆವೆ ಭಾರವಾಗುವ ಹೊತ್ತಲ್ಲಿನಿಮ್ಮ ಒತ್ತಾಸೆಯಿರಲಿ ನನಗೆನನ್ನ ಬಿಡದಿರಿ,ಬಿಡದೆ ಕಾಡದಿರಿಅಣಕಿಸದಿರಿ ನೆನಪುಗಳೆ, ಬದುಕಿದುಎಪ್ಪತ್ತರಲಿ ಒಂಟಿ ಮುದುಕಿ. ಭಿಕ್ಷೆಗೆ ಬೀಳದ ಬದ್ಧತೆ… ಬೊಂಬೆಯಂತ ಬೊಂಬೆ ಮಗುವ ಬಟ್ಟೆಯಲಿ ಸುತ್ತಿಸುಡುವ ನೆತ್ತಿ, ಚಪ್ಪಲಿಯಿಲ್ಲದ ಕಾಲಹೆಂಗಸೊಬ್ಬಳುಕಾರ ಕಿಟಕಿಗೆ ಮೈ ತಾಗಿಸಿಭಿಕ್ಷೆಗೆ ಕೈ ಮುಂದೊಡ್ಡೂತ್ತಾಳೆನಿರೀಕ್ಷೆಯಿಲ್ಲದ ಕಣ್ಣುಗಳಆಚೀಚೆ ಸರಿಸುತ್ತ ಮುಂದೆ ಯಾರೆಂದುಮನದಲ್ಲೇ ಲೆಕ್ಕವಿಡುವಾಗ ಎಲ್ಲ ದಿನಗಳುಕೊನೆಯಲಿ ಒಂದೇ ಇರಬೇಕು..ಹೊಟ್ಟೆಪಾಡು, ಕೈ ಗಳ ಜೋಲಿ ಹಾಡುಇಷ್ಟಕ್ಕೇ ಮುಗಿಯುತ್ತಿರಬೇಕು… ದಣಿವಿರದೆ ದುಡಿದ ಇಪ್ಪತ್ತು ವರ್ಷಗಳಕಾಲೇಜಿನಲಿ ಕಳೆದ ಹತ್ತು ವರ್ಷಗಳಮನೆದುಡಿಮೆಯಲಿ ಸುಕ್ಕುಗಟ್ಟಿದ ಕೈಯಲ್ಲಿಹತ್ತು, ನೂರು,ಸಾವಿರದ ನೋಟುಗಳತಡಕುತ್ತ ಅಂಜುತ್ತೇನೆ, ಕೊನೆ ಎಲ್ಲಿಗೆ? “ಬರುತ್ತೀಯೇನು ಕೊಡುತ್ತೇನೆಊಟ, ಬಟ್ಟೆ, ದುಡ್ಡು, ಕೆಲಸಪುಟ್ಟಮಗುವಿಗೆ ಆಟದ ಸಾಮಾನುಶಾಲೆಯ ಜೊತೆ , ತೂಗಲು ಆಶೆಯ ಕಮಾನು? “ಪ್ರಶ್ನೆ ಕೇಳದಂತೆ, ಮುಂದೆ ಮಾತಾಡದಂತೆಮುಖ ತಿರುವಿ ನಡೆಯುತ್ತಾಳೆಇರದಿರುವುದು ಎಂದೋ ಕಳೆದ ನಂಬಿಕೆಯೇ?ಸುಟ್ಟ ಸಂಕಲ್ಪವೆ? ಹಲ್ಲಂಡೆ ಬದುಕಿನಭಾರೀ ಸೆಳೆತವೆ?ತೋರದೆ ಬೆಪ್ಪಾಗುತ್ತೇನೆಮುಂದಿರುವ ಡ್ರೈವರು ಮೀಸೆಯಡಿನಗುವ ತಡೆಹಿಡಿದು ಮುಚ್ಚಿಡುವಾಗಪ್ರಶ್ನೆಗಳು ಮಿನುಗುತ್ತವೆಆದರ್ಶಗಳು ಅಳ್ಳಕವೆ ?ಭಿಕ್ಷೆಯ ಕೈಗಳಿಗೆ ಚಾಚಿದಸಹಾಯ ಹಸ್ತ ಇಷ್ಟು ನಿರರ್ಥಕವೆ?ಬಂಧನಗಳಿಲ್ಲದ ಅವಳ ಬದುಕಿನಲಿಬದ್ಧತೆಯ ಕೇಳಿದ ನನ್ನಭಿಕ್ಷಾ ಪಾತ್ರೆ ಖಾಲಿಯೇ ಉಳಿಯುತ್ತದೆ ! ಗಾಳ ಹಾಕಿ ಕೂತ ಮನಸು…. ಗಾಳ ಹಾಕಿ ಕೂತ ಮನಸಜಾಳು ಜಾಳು ಬಲೆಯ ತುಂಬಸಿಕ್ಕ ನೆನಪುಗಳು ವಿಲ ವಿಲಪರ್ವತಗಳು ಪುಡಿಯಾಗಿ ಸಿಡಿದುಹಡೆದ ಮರುಭೂಮಿಯಲ್ಲಿಸೂರ್ಯ ಉರಿದು ಕರಗಿನಡುಗಿ ಇಳಿಯುತಿರುವಲ್ಲಿಕಡುಗಪ್ಪು ಬಣ್ಣದ ವೃತ್ತಭುವಿಯ ಕುದಿಯೆಲ್ಲ ಉಕ್ಕಿರಂಧ್ರಗನ್ನಡಿ ಕೊರೆದು ಕಣ್ಣೀರಿನಲಿಸೃಷ್ಟಿಸಿದಂತಹ ಪುಟ್ಟ ಕೊಳಸುತ್ತ ಯಾವ ಹೆಜ್ಜೆ ಗುರುತುಗಳಿಲ್ಲದಂಡೆಯಿರದ ತೀರಬೇರೊಂದು ಲೋಕಕ್ಕೆ ಒಯ್ಯಲುತೆರೆದಂತೆ ಬಾಗಿಲಾಗಿ ಕರೆವಲ್ಲಿತಲೆ ಮೇಲೆತ್ತಿ ನೋಡಲುಆಗಸದಲಿ ಮೋಡ, ತಾರೆಗಳಿಲ್ಲಫಳಕ್ಕನೆ ಏನೋ ಮಿಂಚಿ ಹಿಂಡುತ್ತದೆತುಟಿ ಎದೆಗಳಲಿ ವಿದ್ಯುತ್ ಪುಳಕಿಸಿದಂತೆದಶಕಗಳಿಗೂ ಮುಂಚೆಮುಳುಗುವ ಸೂರ್ಯನ ಸಾವಿರ ರಶ್ಮಿಗಳಲಿಒಂದು ಬಾಗಿ ನನ್ನ ತಲೆ ಸವರಿದಂತೆಹಿಡಿದು ಬಿಡಲು ಸೆಣೆಸುತ್ತೇನೆಕಣ್ಣಿಗೆ ಕಂಡಿದ್ದು, ಕೈಗೆ ಸಿಗದಾಯ್ತುಆತಿಡಿದು ಜೋತುಬೀಳಲು ಮನಸಿನಲಿಕನಸುಗಳು ಗೂಡು ಕಟ್ಟಲಾಗಲಿಲ್ಲಮತ್ತೇನೋ ತಡಕುತ್ತದೆ ಬಹುಆಳದ ತಳದಲ್ಲಿ ಭಾರೀ ತೂಕದ ವಸ್ತುಅದರ ನೆನಪೆಲ್ಲ ಹೇಳುವುದು ದುಃಖದಕತೆ, ಅಳಲು, ಅಸಹಾಯಕತೆಕೈ ಚಾಚಿ, ಎದೆ ಚೀಪಿ ಆಳ ಆಳ ಮುಳುಗಿಒಳಗಿಳಿದು ನೋಡಿದರೆ ನನ್ನದೇ ಕಥೆಹೋಗಿ ಸೇರಲು ರಸ್ತೆ ಕಡಿದುಕಣ್ಣೀರಲ್ಲಿ ಕರಗಿದ ನೆನಪುಗಳ ತಲೆ-ಮಾರುಗಳು ಕಳೆದಿವೆ ಮತ್ತೆ ಮರುಕಳಿಸಿಕತ್ತಲು ಸೂರ್ಯನ ಕರಗಿಸಿಬಾನನ್ನು ತಿಂದು ತೇಗಿಪ್ರೇತದಂತಹ ಚಂದ್ರನ ತೂಗುಬಿಟ್ಟಿದೆಗಾಳವನು ಸರಕ್ಕನೆ ಎಳೆದು ತಲೆಯೆತ್ತಿದಕ್ಕಿರದಿದ್ದನ್ನು ಹಿಡಿಯುವ ಚಂಡಿಯಾಗಿಗಾಳವೆಸೆದು ಕೂರುತ್ತೇನೆ ಮತ್ತೆಕೇಳುತ್ತೇನೆ ಕಳೆದುಕೊಳ್ಳಲು ಏನಿದೆ?ಕತ್ತಲ ರಾತ್ರಿ ನುಂಗಲೆಂದು ಕಾಯುತ್ತೇನೆ…. *****************
ಡಾ.ಪ್ರೇಮಲತ ಬಿ. ಕಾವ್ಯ ಗುಚ್ಚ Read Post »









