ಅಬಲೆಯ ಹಂಬಲ
ಕವಿತೆ ಅಬಲೆಯ ಹಂಬಲ ಅಶೋಕ ಬಾಬು ಟೇಕಲ್ ರಾಮನ ನೆಲವಾದರೂ ಅಷ್ಟೇರಹೀಮನ ನೆಲವಾದರೂ ಅಷ್ಟೇಕಾಮುಕನೆಂಬ ಕೆಂಡದಕಣ್ಣುಗಳ ಅಮಲಿಗರಿಗೆಅಬಲೆಯರ ಹಸಿ ಬಿಸಿ ರಕ್ತಹೀರ ಬೇಕಷ್ಟೇ… ಮನಿಶಾ, ಆಸೀಫಾ ಆದರೇನುನಿರ್ಭಯಾ ರಕ್ಷಿತ, ದಿಶಾಆದರೂ ಸರಿಯೇ ಇವರಿಗೆ ನಡು ರಸ್ತೆಯಲಿಹಾಡ ಹಗಲೇ ಹದ್ದು ಮೀರಿದಗೂಳಿಗಳಂತೆ ಬಂದೆರಗಿಹಾಲುಗಲ್ಲ ಹಸುಳೆಯಎದೆಯ ನಾಯಿಯಂತೆನೆಕ್ಕಿ ಬೆತ್ತಲಾಗಿಸಿಕಾಮ ತೃಷೆ ಮುಗಿಸಿಕಣ್ಣಿಲ್ಲದ ಕಾನೂನಿನಸಾಕ್ಷಿಯ ಕಟಕಟೆ ಒಳಗೂಕಥೆ ಹನಿಸಿ ಕಾಂಚಾಣದಬಿಸಿ ಮುಟ್ಟಿಸಿ ಕ್ಷಮಾದಾನದ ಅರ್ಜಿಯಲಿನಿರ್ದೋಷಿ ಪಟ್ಟ..! ಇನ್ನೆಷ್ಟು ದಿನ ಧರ್ಮಮತ ಪಂಥಗಳ ಕಡೆಬೊಟ್ಟು ಮಾಡಿ ಬೀಗುವಿರಿರಾಮ ರಹೀಮ ಜೀಸಸ್ಏನಾದರೂ ಹೇಳಿಯಾರೆಅತ್ಯಾಚಾರ ಎಸಗಿರೆಂದು !! ಭ್ರಷ್ಟ ದುರುಳ ಗೋಮುಖವ್ಯಾಘ್ರರ ಕೈಯಲ್ಲಿನಅಧಿಕಾರದ ಅಂಕುಶಕಿತ್ತೊಗೆಯ ಬನ್ನಿರಿಕಾನೂನಿನ ಕುಣಿಕೆಗೆಕಾಮುಕರ ಕೊರಳೊಡ್ಡಿರಿನಾನಂದು ನಿರುಮ್ಮಳಳಾಗಿನಡು ಬೀದಿಯಲಿನೆತ್ತರಿಲ್ಲದ ಓಕುಳಿಯಲಿಗೆಜ್ಜೆಯ ಸದ್ದಿನೊಂದಿಗೆನಲಿದಾಡುತಾ ನಡೆದಾಡುವೆನಿಮ್ಮಗಳ ಕಾಯಕಕೆಜೈಯ್ ಘೋಷವಮೊಳಗಿಸುವೆ…!! ***********************************************************************









