ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕೇಳಬೇಕಿತ್ತು..!

ಕವಿತೆ ಕೇಳಬೇಕಿತ್ತು..! ಮುತ್ತು ಬಳ್ಳಾ ಕಮತಪುರ ಸಾವಿನ ಮುನ್ನ ನನ್ನಹೇಳಿಕೆ ದಾಖಲಿಸಿಬೇಕಿತ್ತು …..ತಿರುವು ಮುರು ಮಾಡಿನನ್ನ ಸಾವನ್ನೇ ದಾಖಲಿಸಿದರು ..!ಅವರ ಪೆನ್ನಿನ ನಿಬ್ಬು ಮುರಿದಿತ್ತು… ಕೇಳಬೇಕಿತ್ತುಆಗ ನನ್ನ ಮಾತುಗಳುತೊದಲು ನುಡಿಯಾಗಿ ಕಂಡಿತ್ತುಏನು ಹೇಳಬೇಕಿತ್ತು …?ಅಲ್ಲಿ ಮೊದಲೇ ಹೊಂದಾಣಿಕೆಮಾಡಿಕೊಂಡು ಸಾವಿನೊಂದಿಗೆಅಂತ್ಯಗೊಂಡಿತು….. ಸತ್ತವಳು ನಾನಲ್ಲ ,ಸತ್ತವರು ವ್ಯವಸ್ಥೆಯಲ್ಲಿಇದ್ದು ಮಾತನಾಡದ ನೀವುಗಳುಅಸಹಾಯಕಳ ಮೊರೆ ಆಲಿಸಲುಸರ್ವಸಂಗ ಪರಿತ್ಯಾಗಿಗೂ ಮನಸಿಲ್ಲ…ಇನ್ನೂ ಎಲ್ಲಿಯ ರಾಮರಾಜ್ಯ….. ಸತ್ತ ಮೇಲೆ ಆದರೂಅರಿಸಿಣವಾದರೂ ಹಚ್ಚಿದಫನ್ ಮಾಡಬೇಕಿತ್ತುಹಂಚಿ ತಿಂದ ನನ್ನ ದೇಹಸಾಕ್ಷಿ ನೆಪದಲಿ ಮುಟ್ಟಿದಕೈಗಳು ನಂಜಾಗಬಾರದುಅಲ್ಲವೇ….! ಮೊಂಬತ್ತಿ ಹಚ್ಚಬೇಡಿಕರಗಿದಂತೆ ..!ನಾಳೆ‌ ದಿನ ದೀಪ‌ ಹಚ್ಚುವಕೈ ಬಳೆಗಳಸದ್ದು ಕೇಳದಾಗುತ್ತದೆ… ************************************

ಕೇಳಬೇಕಿತ್ತು..! Read Post »

ಕಾವ್ಯಯಾನ

ನನ್ನಪ್ಪ

ಕವಿತೆ ನನ್ನಪ್ಪ ಕಾವ್ಯ ಎಸ್. ಹಂಗಿಲ್ಲದ ಅಪ್ಪನ ಗುಡಿಸಲಿನ ಅರಮನೆಯಲ್ಲಿನನ್ನಪ್ಪ ಮಲಗಿ ಏದುಸಿರು ಬಿಡುತ್ತಿದ್ದಮಂಚವಿಂದು ಒಂಟಿಕಾಲ ಕೊಕ್ಕರೆಯಾಗಿದೆಅಪ್ಪನ ಉಸಿರಂತೆ ಇಂದು ಸೊಳ್ಳೆಗಳು ಸುಯ್ಗುಡುತ್ತಿವೆಮೂಗಿಗೆ ಆಗಾಗ್ಗೆ ಬಡಿಯುತ್ತಿದ್ದ ಮೋಟು ಬೀಡಿಯಘಾಟು ಹೊಗೆಯ ರೂಪ ಕಳಚಿ, ಹೊಸಬಟ್ಟೆ ಧರಿಸಿಊರು ಸುತ್ತಲು ಹೋಗಿದೆ.ಚರ್ಮ ಸವೆದು ಸವಕಳಿಯಾಗಿ, ಜಗತ್ತಿಗೆ ಅನ್ನನೀಡುವನಾಡ ಬೆನ್ನೆಲುಬಿನ, ಅಸ್ಥಿಪಂಜರದ ಸಾಹುಕಾರ ನನ್ನಪ್ಪ.ಕೆನ್ನೀರ ಹನಿಗಳನ್ನು ಬೆವರಾಗಿಸಿ ಬಸಿದುಜಳಕ ಮಾಡಿ ನುಣುಪಾಗಿ ನರಳುತ್ತಿದ್ದ ನನ್ನಪ್ಪ.ಹೊಟ್ಟೆಯಲ್ಲಿ ಗಾಳಿಚೀಲ ಹೊಕ್ಕಿಸಿ ವಿಚಾರ -ಪ್ರಚಾರಗಳಬಾಗಿಲು ಕಿಟಕಿಗಳ ಕದ ಮುಚ್ಚಿ ಬಿಟ್ಟಿದ್ದ ನನ್ನಪ್ಪ.ತನ್ನ ಜಿಡ್ಡಿಲ್ಲದ ರಕ್ತದಿಂದ ಗುಳ್ಳೆನರಿಗಳನ್ನು ಕೊಬ್ಬಿಸಿಮಲಗಿಸಿ, ಹರಕು -ಮುರುಕಿನ ಧೋತರ ಪೇಟವಾಗಿಸಿಜೈ ಜವಾನ್, ಜೈ ಕಿಸಾನ್ ನಂತೆ ಮಿಂದೇಳುತ್ತಿದ್ದ ನನ್ನಪ್ಪ.ತಾಳ್ಮೆ -ಶಾಂತಿಗಳ ಸಸಿ ಬಿತ್ತಿ ಹೊತ್ತಿದ್ದ ಭಾವ ಮೂರ್ತಿ ನನ್ನಪ್ಪಅದೆಷ್ಟು ತಾಳ್ಮೆ ಅಪ್ಪನಿಗೆ..?ಜಿಗಣೆಗಳುಉಸಿರಾಡುತ್ತಿದ್ದದ್ದು ಅಪ್ಪನಿಂದ,ಅಪ್ಪನ ಮುದ್ದಿನ ರಕ್ತ ಬೀಜಾಸುರಗಳುಅಸಲಿಯೆಂದರೆ ಈಗೀಗ ಅವುಗಳಿಗೂ ಅಪ್ಪನಬತ್ತಿದ ದೇಹದ ಮೇಲೆ ವೈರಾಗ್ಯದ ಮುನಿಸುಎತ್ತುಗಳಂತೆ ನೇಗಿಲು ಹೊರುವ ಅಪ್ಪನಿಗೆಕಪಟ, ಕುಟಿಲ ಕುಯುಕ್ತಿಯ ತೇರು -ಬೇರಿನಅರ್ಬುತ ರೋಗಗಳ ಅರಿವಿಲ್ಲತನ್ನ ಛಲ -ಬಲದ ಬೇರು ಬತ್ತಿದ್ದರು ನಗುತ್ತಿದ್ದ,ಅಮಾವಾಸ್ಯೆಯ ಹೂವಂತೆಸಾಲವೆಂಬುದು ಅವನ ಜೇಬಿನಲ್ಲಿರುವ ತೂತುಗಳಹಾಹಾಕಾರದ ಹಾಲಿನ ಸಮಾಧಿಯಮೇಲೆ ತೂಗುತ್ತಿರುವ ನೇಣುಗತ್ತಿದಿನ ಅಂಗಳದಲ್ಲಿ ಬಣಗುಡುತ್ತಿದ್ದ ನನ್ನಪ್ಪಇಂದು ಯಾವ ದಾರಿ ಹಿಡಿದ್ದಿದ್ದಾನೋ?ತನ್ನ ಶ್ರಮದ ಭಾರದ ಫಲಗಳ ಹೊರಲಾರದೇಯಾವ ತಾಯಿ ನೆಟ್ಟ ಮರದ ರೆಂಬೆಗೆತನ್ನ ನೊಗದ ಕೊರಳ ಕೊಟ್ಟಿದ್ದಾನೋ?ನನ್ನಪ್ಪನಂತೆ ಅದೆಷ್ಟೋ ಅಪ್ಪಂದಿರಕರುಳ ರೋದನಕ್ಕೆ ಬಲಿಯಾಗಿದ್ದಾನೋ..?ಶೃಂಗರಿಸುತ್ತಿದ್ದ ಭೂತಾಯಿಯನ್ನೇ ಎಲ್ಲಿಹೊದ್ದು ನೆಮ್ಮದಿಯ ನಿದ್ದೆಯ ಕನಸು ಅರಸಿಅಂಗಾತ ಮಲಗಿರುವನೋ ತಿಳಿದಿಲ್ಲಆದರೆ ಅಪ್ಪ ಹೆಮ್ಮೆಯ ಬೀಜ ಬಿತ್ತಿದ್ದಾನೆಅದೀಗ ಮೊಳಕೆಯೊಡೆದು ನೆರಳಿನ ಅರಳಿ ಮರವಾಗಿದೆನಾನು ರೈತ ಪುತ್ರಿ, ಅನ್ನದಾತನ ಹೆಮ್ಮೆಯ ಜೀವ ಪುತ್ರಿ. *******************************************

ನನ್ನಪ್ಪ Read Post »

ಕಾವ್ಯಯಾನ

ಖಾಲಿಕೈ ಫಕೀರ

ಕವಿತೆ ಖಾಲಿಕೈ ಫಕೀರ. ಅಬ್ಳಿ,ಹೆಗಡೆ ನನಗರಿವಿಲ್ಲದೇ…..ಕಾಣದಲೋಕದ ಕದ ತಟ್ಟಿದೆಬೆಳಕ ಬಾಗಿಲು ತೆರೆಯಲೇ ಇಲ್ಲ.ಕತ್ತಲ ಕೂಪ ಕಳೆಯಲೇ ಇಲ್ಲ.ಬದುಕಲ್ಲಿ ಕಂಡಸಂಖ್ಯ ಕನಸುಗಳಿಗೆಲ್ಲಒಂದು ಅನಿರೀಕ್ಷಿತ ಹ್ರದಯ ಸ್ಪರ್ಶಿವಿದಾಯ ಘೋಷಿಸಿ,ಒಮ್ಮೆಯಾದರೂ ಆತ್ಮೀಯರಕಣ್ಣಂಚ ಒದ್ದೆಯಾಗಿಸಿಆಟ ನಿಲ್ಲಿಸಬೇಕೆಂದರೆ ಅದೂಸಫಲವಾಗಲಿಲ್ಲ.ಕೊನೇ ಬಿಂದುವಿನಲ್ಲಾದರೂಸಾರ್ಥಕ ಬದುಕಿನ ಸಣ್ಣ ತ್ರಪ್ತಿಯೊಂದಿಗಾದರೂ ವಿರಮಿಸಬೇಕೆಂದರೆ ಅದೂ ಕೈಗೂಡಲಿಲ್ಲ. ಸಧ್ಯ ನಾ ಮೊದಲಿನಂತೇ..ಭಾವದ ಭಿಕಾ಼ಪಾತ್ರೆ ಹಿಡಿದುಅಲೆದಾಡುವ ಏಕಾಂಗಿ,ಪ್ರಾರಬ್ಧಕ್ಕೆ ಪಕ್ಕಾದ ಖಾಲಿಕೈಫಕೀರ ಅಷ್ಟೆ….!!!! ************************

ಖಾಲಿಕೈ ಫಕೀರ Read Post »

ಕಾವ್ಯಯಾನ

ಮಗಳು ಬಂದಳು ಮನೆಗೆ

ಮಗಳು ಬಂದಳು ಮನೆಗೆ ಅರುಣ್ ಕೊಪ್ಪ ಒಡಲಾಳದ ಅಳುವನ್ನು ಜಗದೆಡೆಗೆ ಪಸರಿಸಿದಳು ,ಅಮ್ಮನ ಕಂಕುಳದಲಿ ಕಸವು ಹಚ್ಚಿ, ಬೇನೆ ಸೋನೆಗಳ ಸುಮ್ಮನಿರಿಸಿಮಿಡುಕಾಡಿದಳು ಹೊರಗೂ ಒಳಗೂಜಗದ ಕಣ್ಣಾಗುವಳು ಇಂದು ಮುಂದೂ ಎಂದೆಂದೂ ಆರತಿಗೊಬ್ಬಳು ಆಸರೆ ಇವಳು ಹುಸಿಯನ್ನೆಲ್ಲ ಹೊಸೆತಳುಕೀರ್ತಿಗೊಬ್ಬನ ಕಿವಿಯಲ್ಲೇ ಧೈರ್ಯದುಂಬಿ ಬಂಧ ಬೆಸೆವಳುನನ್ನವಳ ಉದರದಲ್ಲೇ ನನ್ನವಳ ಆಗಮನ ಹೆಣ್ಣು ಇವಳುಧೈರ್ಯದಲಿ ಮಿಗಿಲು ಸಂಭ್ರಮಿಸುವದು ಕೂಡ ಮುಗಿಲು ಗುರುವಾರದ ಅಧಿಕ ಸೀಗಿ ಹುಣ್ಣಿಮೆಯ ಪವಿತ್ರ ಗಳಿಗೆಪುಣ್ಯ ದಿನವೂ ಸಿಕ್ಕಿ ಆನಂದ ಭಾಷ್ಪ ಉಕ್ಕಿ ನಮಗೆಹೆಣ್ಣಿಲ್ಲದ ಮನೆಯಿಲ್ಲ ಇದ್ದೂ ಸಿರಿಯಿಲ್ಲಜಗ ಜನಿಸಿ ಯುಗವಾಗಿದ್ದೇ ಹೆಣ್ಣು ಎಂಬ ಮಾಯೆಯಿಂದ ***************************

ಮಗಳು ಬಂದಳು ಮನೆಗೆ Read Post »

ಕಾವ್ಯಯಾನ

ಸಾಮಗಾನ

ಕವಿತೆ ಸಾಮಗಾನ ಪವಿತ್ರ. ಎಂ ಕವಲೊಡೆದ ಗಳಿಗೆಧನಿ ಕಳೆದು ದಾರಿ ಕಾಣದಾಗಿಕಾಯುತಿದೆ ಸಹಯಾತ್ರಿಗಾಗಿಸಹನೆ ಕೈಜಾರಿ ಜರಿಯುವ ಜಗದಜಂಜಡಕಂಜಿ ಕಮರಿಬಿರಿಯುವ ಕಮಲ ಮಡುವಲೇ ಮುದುಡಿ. ಬಾನಾಡಿ ಹಾಡುತಲಿತ್ತುಬಾನಸವಿಸ್ತಾರದ ನಾದ ಗುನುಗಿಗಳಗಳನೆ ಸುರಿವ ಮಳೆಅಶ್ರುವದ ಮರೆಮಾಚಿ ತೋಯ್ದುದಿಟದ ಗಟ್ಟಿತನವ ಪಣಕಿಟ್ಟು ಕುಹಕವಾಡಿಗಹಗಹಿಸಿ ನಕ್ಕವರ ನೆಲಕುರುಳಿಸಿ. ಮೊಳೆತ ಜೀವ ಜಾತು ಮರೆತಿಹಸಾಮರಸ್ಯಕೆಳೆಸಲೆಂದೇಜೀವ ನಿಯಮವನೆಂದು ಮೀರಿಪೆಅಣಕಿಸಲು ಅಡಿಯಿಟ್ಟ ಕರೋನಅಹಮಿಕೆಯ ಅಜ್ಙಾನದಂಧಕಾರಅರಗಿನರಮನೆ ಬರಿಯ ಭ್ರಮೆ. ಭಾನ ಸ್ಪರುಷದ ಸುಖವತರುತೀಡ್ವ ಗಾಳಿಗಂಧಅವಳೊದ್ದ ಪಚ್ಚಹಸಿರ ಸಖವಉಲಿದು ನಲಿವ ಆ ಗಾನದಿಂಚರಕೆಕಿವಿಯಾಗಿ,ಕಣ್ಣಾಗಿ ಅವರಲ್ಲೊಂದಾಗಿಸಾಮಗಾನದ ಚೆಲುವಾಗು ಬಾ. ***********************************

ಸಾಮಗಾನ Read Post »

ಕಾವ್ಯಯಾನ

ನವರಾತ್ರಿ ಶಕ್ತಿ

ಕವಿತೆ ನವರಾತ್ರಿ ಶಕ್ತಿ ಶಾಂತಲಾ ಮಧು ಚಿತ್ರ ಕೃಪೆ- ಶಾಂತಲಾ ಮಧು ಬಿರುಕು ಬಿಟ್ಟಗೋಡೆಗಳುಶಿಥಿಲ ಗೊಂಡಕಿಟಕಿ ಬಾಗಿಲುಮಾನವೀಯ ಮನುಷ್ಯತ್ವದಅಂತಕರಣದ ಒಂದೊಂದುಕಲ್ಲುಗಳು ಪುಡಿಪುಡಿಯಾಗಿಬಟಂಬಯಲಾಗಿಬಯಲ ನಡುವೆಚೀತ್ಕಾರ ರಕ್ತ ಬಸಿಯುವಕಣ್ಣಿನಲಿ ಅದೊಂದೆೇ ಆಸೆ ದಯತೋರಿ ದಯತೋರಿರಕ್ಷಿಸೀ ಈ ರಾಕ್ಷಸರಿಂದಅಮ್ಮಗಳಿರ ಅಕ್ಕಗಳಿರನನ್ನೀ ಸಬಲ ಅಣ್ಣ ತಮ್ಮಗಳಿರರಕ್ಷಿಸೀ ಅಬಲೆಯರಬೆಟ್ಟದಷ್ಟು ಆಕಾಶ ಭೂಮಿಯಷ್ಟುಕನಸ ಕಂಡಿಹೆ ನಾನುಬಿಟ್ಟು ಬಿಡಿ ಎನ್ನ ದಮ್ಮಯ್ಯ ಪುತ್ರಿಯಾಗಿ ತಾಯಿ ತಂಗಿಸಖಿಯಾಗಿ ಪತ್ನಿಯಾಗಿಬಂಧುಬಳಗವಾಗಿದೀಪವಾಗಿಮನ ಮನೆಗಳಬೆಳಗುವೆ ನಾಹೊಸಕಿ ಹಾಕದಿರು ಎನ್ನನಿನ್ನೀ ಕ್ಷಣಿಕ ಕಾಮತೃಷೆಗೆಅಂಗಲಾಚಿ ಬೇಡುವೆನುಬಿಟ್ಟುಬಿಡು ದಮ್ಮಯ್ಯ ಮಾನಸಿಕ ರೋಗ ಎನಲೆರಾಕ್ಷಸೀ ದ್ವೇಷ ಎನಲೆತುತ್ತಿಟ್ಟ ತಾಯಿ ತಂಗಿಮರೆತ ನೀಚ ನೀ ಎನಲೆ ಕರೆದರೀ ಪುಣ್ಯಭೂಮಿಯಭಾರತಾಂಬೇ ಎಂದುಹೆಣ್ಣೆಂದು ಸ್ತ್ರೀ ಶಕ್ತಿ ನೀನೆಂದು ನಿನ್ನಮಡಿಲಲ್ಲಿ ಉಸಿರಾಡಿಹಸಿರಾಗಿ ಭಯಭಕ್ತಿ ಸೃಷ್ಟಿಸಿದಅಷ್ಟಲಕ್ಷೀಯರುಸಂಸ್ಕೃತಿ ಸಂಸ್ಕಾರದ ತಿಲಕಸ್ತ್ರೀ ಶಕ್ತಿ ಸಂಪನ್ನತೆಗೆಅರ್ಥಗರ್ಭಿತನವರಾತ್ರಿ ಆಡಂಬರ ಹೆಮ್ಮೆ ಎನಿಸಿತ್ತೆನಗೆಪೂಜ್ಯ ಶಿವನ ಸಂವೇದನೆಸತಿಗಾಗಿಸಕಾಲದಲಿ ದೌಪಧಿಯಮಾನರಕ್ಷಿಸಿದ ಶ್ರೀ ಕೃಷ್ಣಪರಮಾತ್ಮದುಷ್ಟರ ಸಂಹಾರಈ ಪುಣ್ಯ ಭೂಮಿಯಲಿವಚನ ಶ್ರೇಷ್ಟರುಅಲ್ಲಮ ಬಸವಣ್ಣಅಕ್ಕಮಾಹಾದೇವಿನಡೆದಾಡಿದಪುಣ್ಯ ಭೂಮಿ ಇದುಮರೆಯಾಯಿತೆ…?ಕಾವ್ಯ ಪುಾರಾಣಗಳುದಾಖಲೆಯ ಪುಟಗಳಾದವೆ?ಅರ್ಥ ವಿಲ್ಲದಾಯಿತೆನವರಾತ್ರಿ?ಬಿರುಕು ಬಿಟ್ಟ ಬಾಗಿಲುಶಿಥಿಲ ಗೋಡೆಗೆ ರಕ್ಷಕರಿಲ್ಲವೆ?ಪ್ರತಿ ಶೋಧವೆ,ನೇಣುಗಂಬವೆ,ಬಿಸಿಲ ಬಯಲಲಿಬತ್ತಲಾಗಿಸಿ ಕಲ್ಲು ತೂರುವುದೆಶಿಕ್ಷಿಸುವ ಮಹನೀಯನಾರು? ಕತ್ತಲು ಬೆಳಕು ತಿಕ್ಕಾಟಗಳ ನಡುವೆಅವಿತ ನ್ಯಾಯದ ಹುಡುಕಾಟಕೆಮುಷ್ಕರ ಕಲ್ಲು ತೂರಾಟಮೌನ ಮೆರವಣಿಗೆಮೊಸಳೆ ಕಣ್ಣೀರುಕಣ್ಣು ಒರೆಸುವರಾಜಿಕೀಯ ಜೂಜಾಟ ಪಾಪಿ ಮೂಲವಹುಡುಕು ಹುಡುಕಿಹೊರಹಾಕುಅನುಜ ಅಗ್ರಜನಿರಲಿಬಂಧು ಬಳಗವೆ ಇರಲಿ ಮನಸ್ಸಿನ ಅಂಧಕಾರಪರಿವರ್ತನೆ ಇಲ್ಲದೆಅಬಲೆ ನಾನಲ್ಲಸ್ರೀ ಶಕ್ತಿನಾನುನವ ಯುಗದ ನವ ಶಕ್ತಿಭಕ್ತಿ ವಿಶ್ವಾಸ ನನ್ನಲ್ಲಿನನಗೆ ನಾನವರಾತ್ರಿಶಕ್ತಿ ***************

ನವರಾತ್ರಿ ಶಕ್ತಿ Read Post »

ಕಾವ್ಯಯಾನ

ಮೌನ’ದ್ವನಿ’

ಕವಿತೆ ಮೌನ’ದ್ವನಿ’ ರೇಖಾ ಭಟ್ ರಕ್ಕಸರು ಸುತ್ತುವರೆದುಕತ್ತಲಾಗಿದೆಹೆಜ್ಜೆ ಹೊರಗಿಡಲೂ ಭಯವಿಕೃತಿಗೆ ಸಜ್ಜಾಗಿ ನಿಂತಿದೆದುಶ್ಯಾಸನನ ಸಂತತಿ ಬರೀ ಸೀರೆ ಸೆಳೆಯುವುದಿಲ್ಲ ಈಗಮೌನದೇವಿಯನಾಲಿಗೆಯೂ ಬೇಕುಮಾಂಸ ಮಜ್ಜೆಯ ಹರಿದು ತಿನ್ನುವವರಿಗೆ ಕೇವಲ ಕಾಮುಕರೆನ್ನಲಾಗದುಇವರಧರಿಸಲು ಹೇಗೆ ಬಂದಾವುಅರ್ಥಕೋಶದ ಪದಗಳುಹೇಸಿಕೊಳ್ಳುತ್ತಿವೆ ಸ್ತ್ರೀ ಅಸ್ಮಿತೆ ನರನಾಡಿಗಳುಒಳಗೊಳಗೆ ಕುದಿಯುತ್ತಿವೆರೋಷದ ಲಾವಾಗ್ನಿಚಿಮ್ಮಿದರೆದೂಷಿಸಬೇಡಿ ನೀವು ****************

ಮೌನ’ದ್ವನಿ’ Read Post »

ಕಾವ್ಯಯಾನ

ಬೀಜಕ್ಕೊಂದು ಮಾತು

ಕವಿತೆ ಬೀಜಕ್ಕೊಂದು ಮಾತು ರಜಿಯಾ ಬಳಬಟ್ಟಿ ಎಲೆ ಬೀಜವೇನೀ ಹೆಣ್ಣೋ ಗಂಡೋ ಹೀಗೇಕೆ ಕೇಳುವಳೀ ಅಮ್ಮಎಂದು ಆಶ್ಚರ್ಯ ವೇನು ಕಂದಾ , ಹೌದು ಕೇಳುವ ಸ್ಧಿತಿ ಈಗ. ಒಂದು ಕಾಲವಿತ್ತುಸುತ್ತೆಲ್ಲ ಗುಲಾಬಿ ತೋಟನಡುವೆ ಕೆಂಗುಲಾಬಿನನ್ನ ಮಗಳೆಂದುಖುಷಿ ಪಡುವದು. ಈಗಿಲ್ಲವಮ್ಮ. ಗುಲಾಬಿಯ ತೋಟದಲ್ಲೆಲ್ಲಹೊಂಚು ಹಾಕಿದ ಕಾಮದ ಕಂಗಳುಕ್ಷಣ ಕ್ಷಣವೂ ಅಭದ್ರತೆಕೀಚಕ – ದುಶ್ಯಾಸನರವಂಶಾವಳಿಯಲ್ಲಿಅದೆಂತು ರಕ್ಷಿಸಲಿ ಮಗಳೆ,ಭೀತಿಯ ಬಾಹುಗಳಲಿನನ್ನನ್ನೇ ನಾ ಉಳಿಸಿಕೊಂಡುಗೂಡು ಸೇರುವದೇದುಸ್ಸಾಹಸವಾಗಿರುವಾಗ,ನೀ ಮೊಳಕೆಯೊಡೆಯಬೇಡತಿಳಿ, ಈ ಅಸಹಾಯಕತೆಯ. ಅಪ್ಪಾ ಮಗಾ ರಾಜಕುಮಾರಾವಂಶಕ್ಕೆ ಹೆಸರು ತಂದುದೃಷ್ಟಿ ತುಂಬ ಸಹಾಯ ಭಾವದಿಆದರ್ಶದಿ ಬದುಕುವದಿದ್ದರೆ ಬಾ.ಇಲ್ಲದಿರೆ ಚಿಗುರೊಡೆಯಬೇಡ.ಬಂಜೆ ಎಂದು ಸಹಿಸಬಹುದು.ಆ ಕಾಮುಕನ,ಪಾಪಿಯ ತಾಯಿಇವಳೆಂದು ಜನ ದಿಟ್ಟಿಸಿದಾಗ,ಆ ಕೆಂಗಣ್ಣಿನಲ್ಲಿಯೇ ನಾಕರಕಾಗುವೆ ಕಂದಾತಿಳಿ ನೀ ಜವಾಬ್ದಾರಿಯ. *************************************** ರಜಿಯಾ ಬಳಬಟ್ಟಿ

ಬೀಜಕ್ಕೊಂದು ಮಾತು Read Post »

ಕಾವ್ಯಯಾನ

ಕತ್ತಲಿನಲಿ ನ್ಯಾಯ

ಕವಿತೆ ಕತ್ತಲಿನಲಿ ನ್ಯಾಯ ಸಾಯಬಣ್ಣ ಮಾದರ ಎಳೆಯ ಬಾರದೆಕ್ಕೆಅವರ ಕರಳು ಬಳ್ಳಿಗಳನ್ನುಕ್ರೀಯಗೆ ಪ್ರತಿಕ್ರೀಯೇ ?ಆಗುವದ್ಯಾವಾಗಿನ್ನುಎಷ್ಟು ದಿನವಂತೆಕೂಗುವಿರಿ ದಿಕ್ಕಾರಮೇಲಿನವರ ಕುರ್ಚಿಗಳಿಗೆಕಿವಿ ಕುರುಡಮನಿಷಾಗೆ ಸಿಗುವುದೇಕತ್ತಲಿನಲ್ಲಿರುವನ್ಯಾಯ ಬೆಳಕು !! ಜೋಳದ ಹೊಲದ ದಂಟುಗಳೆಕಣ್ಣೀರುಗೈದವುಯೋನಿಯಿಂದರಿದ ರಕ್ತಮಡುಗಟ್ಟಿತ್ತಲಕೂಗಲು ಬಾರದಂತೆನಾಲಿಗೆ ಸೀಳಿಅಟ್ಟಹಾಸ ಗೈದರಲ್ಲಸಬಲರುಆಗಬೇಕಲ್ಲವೇ ಅವರಿಗೂಆ ನೋವು ಜಾತಿ ಬಲವಿದ್ದರೆಮಾಡುವರು ಎನ್ಕೌಂಟರ್ಸುಡುವರು ದಮನಿತರನ್ನುನಡುರಾತ್ರೀ ಹಗಲು !! ನಾಟ್ಯದವರು ಬಸಿರಾದರುದೇಶದ ದೊರೆಕುಣಿದಾಡುವನು ಹಿರಿ ಹಿರಿ ಹಿಗ್ಗಿಬೆನ್ನು ಮೂಳೆ ಮುರಿದುಯೋನಿ ಹರಿದರುಇವರಿಗೆಕನಿಕರಿಸದವನು !! ಭಯಭರವಸೆ ಕಳೆದುಕೊಂಡರೆಹಾವೇ ಹಗ್ಗಭಯ ಬುಗ್ಗೆಯಚಿಲುಮೆ ಹುಟ್ಟಿಸಿನ್ಯಾಯ ದೀಪಕ್ಕೆಬತ್ತಿ ಹತ್ತಿಸಿಕಣ್ಣಿಗೆ ಕಣ್ಣು ಕಳೆಯಲುಸಿದ್ದರಾಗ ಬೇಕಲ್ಲವೆನಾವು !! *********************************

ಕತ್ತಲಿನಲಿ ನ್ಯಾಯ Read Post »

ಕಾವ್ಯಯಾನ, ಗಝಲ್

ಮನಿಷಾಗೊಂದು ಗಝಲ್

ಮನಿಷಾಗೊಂದು ಗಝಲ್ ಅರುಣಾ ನರೇಂದ್ರ ನಾನಿಲ್ಲಿ ಮೂಕಳಾಗಿರಬೇಕು ಮಾತನಾಡಿದರೆ ನಾಲಿಗೆ ಕತ್ತರಿಸುತ್ತಾರೆನೀನಿಲ್ಲಿ ಜೀವಂತ ಶವವಾಗಿರಬೇಕು ಪ್ರತಿಭಟಿಸಿದರೆ ಗುಂಡಿ ತೋಡಿಸುತ್ತಾರೆ ರಾಮನಾಳಿದ ಈ ನೆಲದಲ್ಲಿ ನಾನು ಮತ್ತೆ ಹೆಣ್ಣಾಗಿ ಹುಟ್ಟಿದ್ದೇನೆ ಗೆಳತಿಹೊಸಿಲು ದಾಟಿ ಲಕ್ಷ್ಮಣ ರೇಖೆಯನ್ನೂ ದಾಟುತ್ತೇನೆಂದರೆ ವನವಾಸ ಕಳಿಸುತ್ತಾರೆ ನಿರ್ಭಯಾ ಮಧು ದಿಶಾ ಮತ್ತೆಲ್ಲರ ಆರ್ತನಾದ ಇನ್ನೂ ಕೇಳಿಸಿದರೂ ಮತ್ತೆ ಎಂಥ ನಿರ್ಲಕ್ಷ್ಯಇಂದು ಮನಿಶಾ ನಾಳೆ ನನ್ನ ಸರದಿ ಬೇಡವೆಂದರೆ ಮಸಣದ ಮನೆ ತೋರಿಸುತ್ತಾರೆ ಯುಗ ಯುಗಗಳು ಅಳಿದರೂ ಇನ್ನೆಷ್ಟು ಹೆಣ್ಣು ಬಲಿಯಾಗಬೇಕು ಇವರ ಕಾಮದ ತೀಟೆಗೆಅಂಗಾಂಗಗಳ ಹರಿದು ತಿನ್ನುವ ಹೃದಯ ಹೀನರು ಪ್ರಶ್ನಿಸಿದರೆ ಪ್ರಾಣ ತಗೆಯುತ್ತಾರೆ ಭದ್ರತೆ ಬೇಡಿದರೆ ಹೇಗೆ ಸಿಕ್ಕೀತು ಅರುಣಾಗೆ ಕಡತದಲ್ಲೇ ಕಾನೂನಿಗೆ ಕೈ ಕಾಲು ಕಟ್ಟಿದ್ದಾರೆಬೇಲಿ ಇಲ್ಲದ ಹೊಲವ ಗೂಳಿಯಂತೆ ತಿಂದು ಹೆಣ ಮಾಡಿ ಸುಟ್ಟು ಕತೆ ಮುಗಿಸುತ್ತಾರೆ ******************************

ಮನಿಷಾಗೊಂದು ಗಝಲ್ Read Post »

You cannot copy content of this page

Scroll to Top