ತಮಟೆ ಬೇಕಾಗಿದೆ
ಕವಿತೆ ತಮಟೆ ಬೇಕಾಗಿದೆ ಎನ್.ರವಿಕುಮಾರ್ ಟೆಲೆಕ್ಸ್ ನನ್ನ ತಮಟೆ ಹರಿದು ಹೋಗಿದೆ ಎದೆಯಗಲ ಚರ್ಮ ಬೇಕಾಗಿದೆಸತ್ತ ದನದ್ದು…. ತಮಟೆ ಸದ್ದಿನೊಳಗೆದುಃಖ ದೂರುಗಳ ಜಗಕೆಆಡಿ ಹಗುರಗೊಳ್ಳಬೇಕಿದೆ ಜುಂಗು ಕಿತ್ತು ರಂಪಿಗೆ ಆಡಿಸಿಅಡಗಲ್ಲಿನಲ್ಲಿತಟ್ಟಿ ಹದ ಮಾಡಿಹದಿನಾರು ಎಳೆ ಬಿಗಿದುಎಳೆ ಬಿಸಿಲಿಗಿಡಿದುಅಲುಗು ಅಲುಗಿಗೂ…ಕಂಟ ಕಾವು ರಣಬಾಜಿ,ಹುಲಿ ಹೊಡೆತಎರಡೇಟು…ಗಸ್ತಿನೋವು ನೀಗಿಸಿಕೊಳ್ಳಬೇಕಿದೆಶತಮಾನಗಳದ್ದುಈಗೀಗ ವರ್ತಮಾನದ್ದೂ…. ಸತ್ತದನವೊಂದಿದ್ದರೆಕೊಟ್ಟು ಬಿಡಿನನ್ನ ತಮಟೆ ಹರಿದು ಹೋಗಿದೆ.// ಕಾಡುಕತ್ತಲೆಬಿಳಿಯ ತೊಗಲ ದೊರೆ ದೇಶ ತೊಲಗಿದಕರಿಯ ತೊಗಲ ಬಿಳಿಯ ಬಟ್ಟೆದೇಶ ಜನರ ಬಗೆ ಬಗೆದುಸುಲಿತಿದೆ ಹಾಡಹಗಲೆಸುಳ್ಳು ಮಾತು ಕಳ್ಳನಡೆಪೊಳ್ಳು ಧರ್ಮದ ಇಷವಯ್ಯಸತ್ತಂತಿಹರನು ಬಡಿದೆಚ್ಚರಿಸಲುತಮಟೆಯೊಂದು ಬೇಕಾಗಿದೆ// ಹೊಲಗದ್ದೆ ಸುಗ್ಗಿಕಣಊರ ಹುಣಸೆ ಮರವೂಗಂಟುಕಳ್ಳರ ಪಾಲುಅನ್ನದಾತನ ಕೈಗಳಿಗೆ ಭಿಕ್ಷೆ ಚರಿಗೆಕುಂಬಾರ, ಕಮ್ಮಾರ,ಚಮ್ಮಾರ,ಮಡಿವಾಳ,ಬಡಗಿ,ಕೂಲಿಯಾಳು, ಒಕ್ಕಲು ಕಾಡು ಪಾಲುದೇವ್ರು – ಧರ್ಮ ಕರ್ಮಗೆಡಿಸಿನೆರೆಹೊರೆ ನಂಟು ಊರಾಳುಎದೆ ಎದೆಗೂ ಇದ ಸಾರಲುತಮಟೆಯೊಂದು ಬೇಕಾಗಿದೆ. ಮುತ್ತಾತ ಮೆಚ್ಚಿ ಬಾರಿಸಿದ ತಮಟೆತಾತಾ ತಲೆ ಎತ್ತಿ ಬಡಿದ ತಮಟೆಅಪ್ಪ ಕುಣಿ ಕುಣಿದು ಅಬ್ಬರಿಸಿದ ತಮಟೆಸಾವಿನ ಸೂತಕಕ್ಕೂದೇವರ ಒಡ್ಡೋಲಗಕ್ಕೂಒಪ್ಪುಳ್ಳ ತಮಟೆ ಸತ್ತದನವೊಂದಿದ್ದರೆ ಕೊಡಿತಮಟೆ ಬಿಗಿಯಬೇಕಿದೆನಿಮ್ಮ ಮೆರವಣಿಗೆಗೆ!!! ವಲಸೆ ಹೋದ ದಾರಿಯಲ್ಲಿರಕ್ತ ಮಾಸಿಲ್ಲಬಿಮ್ಮನಿಸಿ ಬಾಣಂತಿ ಹಸುಗೂಸುಗಳನಿಟ್ಟುಸಿರು ನಿತ್ರಾಣವಿನ್ನೂ ತಣಿದಿಲ್ಲಹಸಿವು,ಕಣ್ಣೀರ ಅನಾಥ ಮೆರವಣಿಗೆಗೆನೀರಿಲ್ಲ , ನೆಳಲಿಲ್ಲ ದೇವರಿಗೊಂದುಮಹಲು ಕಟ್ಟುವ ಮೋಜು ಮುಗಿದಿಲ್ಲದೊರೆಯನ್ನು ಧ್ಯಾನದಿಂದ ಎಬ್ಬಿಸಲುತಮಟೆಯೊಂದು ಬೇಕಾಗಿದೆ. ದೇವರುನಡುರಸ್ತೆಯಲ್ಲೆ ನಿಂತಿದ್ದಾನೆಹೆಣವೊಂದು ಚಟ್ಟ ಏರಲೊಲ್ಲುತ್ತಿಲ್ಲಸಂಪ್ರದಾಯ ಮುಕ್ಕಾದೀತುತಮಟೆಯೊಂದು ಬೇಕಾಗಿದೆಹೆಣದ ಮೋಕ್ಷಕ್ಕೆದೇವರ ಸುಖ ನಿದ್ರೆಗೆ ದೇಶದಲ್ಲೀಗ ಭಕ್ತರ ಕಾಲಪ್ರಶ್ನಿಸುವವರು ಜೈಲಿಗೆದುಡಿವವರು ಬೀದಿಗೆಉಳಿದವರು ಜೀತಕ್ಕೆತುಂಡು ಬಾಡು ತಿಂದಿದ್ದಕ್ಕೆಕಾಡು ನ್ಯಾಯದ ಸಾವ ಶಿಕ್ಷೆಮತದ ಮತ್ತೇರಿದವರನ್ನೆಲ್ಲಮನುಜಮತದ ಮನುಷ್ಯರೂರಿಗೆಮೆರವಣಿಗೆ ಕರೆದೊಯ್ಯಬೇಕಿದೆ ಸತ್ತದನವೊಂದಿದ್ದರೆ ಕೊಡಿಎದೆಯಗಲ ಚರ್ಮ ಬೇಕಿದೆಎಂದೂ ಹರಿಯದಬುದ್ಧ ಭಾರತ,ಭೀಮ ಭಾರತಬಸವ ಪಥ ಕಟ್ಟಲುತಮಟೆಯೊಂದು ಬಿಗಿಯಬೇಕಿದೆ. *************************************









