ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನೆರಳಿಲ್ಲದ ಜೀವ

ಕವಿತೆ ನೆರಳಿಲ್ಲದ ಜೀವ  ಆನಂದ ಆರ್ ಗೌಡ ಬಿರುಕು ಬಿಟ್ಟ ಅದೇ ಗೋಡೆಯೊಳಗೆಹಸಿದ ಕಣ್ಣುಗಳು ಇಣುಕಿನೋಡುತ್ತಿದ್ದವುಅವ್ವನ ಹೆಜ್ಜೆ ಗುರುತುಗಳನು ಒಡಲೊಳಗಿನ ಬಸಿರಲಿಪಿಸುಮಾತು ಮೇಯ್ದ ಕರುಳ ಕುಡಿಗಳಿಗೆನೊಂದ ಬೇಗೆಯಲಿ ಗಳಿಸಿದ ತುತ್ತುಜೋಗುಳವ ಹಾಡುತ್ತಿತ್ತು ! ಮಾಂಗಲ್ಯ ತೊಡಿಸಿದ ಕೈಯ ಅಗ್ನಿಯಲಿಸುಟ್ಟ ಸೀರೆ ಇನ್ನೂ ಅವಳ ಬಿಟ್ಟಿಲ್ಲತವರು ಅರಸಿ ಬಂದ ಕಣ್ಣವೆಗಳುಹಸುಳೆಗಳ ಪಿಡುಗು ಇಂಗಿಸಿಲ್ಲ ಅನ್ನ ಅರಸಿದ ಪಾದ ಮಾಸದ ಗಾಯಕರುಣೆ ಕನಿಕರ ಕಾಣದ ತನ್ಹಸಿವುಹೊದ್ದು ಮಲಗಿದ ಪರಿಯುಎಲ್ಲವ ಮರೆಸಿ ನಿಶ್ಯಬ್ಧವಾಗಿಸಿದೆ ಘಾಸಿಗೊಂಡ ಮನಸುಹೊನ್ನು ಮಣ್ಣು ಮೋಹಿಸಿಲ್ಲನೆರಳಿಲ್ಲದ ಜೀವ ಕನಸುಗಳನು ಹೊತ್ತುಮತ್ತೆ ಹೆಜ್ಜೆಯಿಟ್ಟಿದೆ ಹೊಟ್ಟೆ ತುಂಬಲು !! ******************************

ನೆರಳಿಲ್ಲದ ಜೀವ Read Post »

ಕಾವ್ಯಯಾನ

ಕನಸುಗಳ ದೊಂಬರಾಟ

ಕವಿತೆ ಕನಸುಗಳ ದೊಂಬರಾಟ ಸುಮನಸ್ವಿನಿ. ಎಂ ನೀ ಮರಳುವೆಯೆಂಬಪವಾಡವೊಂದು ಘಟಿಸಿಯೇತೀರುತ್ತದೆಂದು ನನ್ನ ನಂಬಿಸಲುಹರಸಾಹಸ ಪಡುವಕನಸುಗಳ ದೊಂಬರಾಟಕ್ಕೆನಕ್ಕುಬಿಡುತ್ತೇನೆ ಈಗೀಗ..ಹೊರಳಿ ನೋಡಿದರೂ ಸಹಕಾಣದಷ್ಟು ದೂರದಲ್ಲಿ ನೀನನ್ನಿರಿಸಿಬಿಟ್ಟಿರುವುದರಿಂದ! ದಿನಕ್ಕೆರಡು ಬಾರಿಯಾದರೂಕಣ್ತುಂಬಿ ತುಳುಕಿ ಉರುಳಿಹೋಗಲು ನಿನ್ನ ನೆನಪುಗಳುನನ್ನೊಂದಿಗೆ ಜಿದ್ದಿಗೆ ಬೀಳುತ್ತವೆ..ಎದೆಯೊಳಗೆ ಹನಿಯೊಡೆದುಹರಡಿಕೊಂಡಂತೆಲ್ಲಾ ಜಾಗಸಾಲದಾದಾಗ, ಪಾಪ!ಅಮಾಯಕ ನೆನಪುಗಳುತಾನೇ ಏನು ಮಾಡಿಯಾವು? ಏಳುಸಮುದ್ರಗಳಾಚೆಗಿನಏಳುಸುತ್ತಿನ ಏಕಾಂತ ಕೋಟೆಯತುತ್ತತುದಿಯ ಕೋಣೆಗೂ ನುಗ್ಗಿ‘ರಾಜ’ಕುಮಾರನೊಬ್ಬ ಬರುತ್ತಾನೆಂಬನಿರೀಕ್ಷೆಯ ಅದಮ್ಯ ನಂಬಿಕೆಗೆಬೆರಗಾಗುತ್ತೇನೆ ಬಹಳವೇ,ಮುಗಿದ ದಾರಿಯ ಕಡೆಯಲ್ಲೊಂದುಹೊಸ ತಿರುವು ಸೃಷ್ಟಿಯಾಗುವಭ್ರಮೆಯ ‘ಬಗೆ’ಗೆ ಸೋಜಿಗಪಡುತ್ತಾ! *************************************

ಕನಸುಗಳ ದೊಂಬರಾಟ Read Post »

ಕಾವ್ಯಯಾನ

ಹಾಯ್ಕುಗಳು

ಹಾಯ್ಕುಗಳು ವಿ.ಹರಿನಾಥ ಬಾಬು ಒಲೆಯ ಮುಂದೆಕರುಳ ಸುಟ್ಟ ಅಮ್ಮತಾಯ ಮಮತೆ* ಕುದಿ ಎಸರುತಾಯಿಯ ಎದೆಹಾಲುಕಟ್ಟಿದ ಬಾಯಿ* ಅಳುವ ಮಗುನಿಷ್ಕರುಣಿ ಜಗತ್ತುತಬ್ಬಲಿ ತಾಯಿ* ಕರುಳ‌ ಕುಡಿಭಯ ಭೀತಗೊಂಡಿದೆಕತ್ತಲ ರಾಜ್ಯ* ರಸ್ತೆಯ ಮೇಲೆಎಳೆದು ನಿಂತ ತೇರುಜೀವನ ಮುಕ್ತಿ* ಕಡಲ ನೀರುಸವಿಯಲೊಲ್ಲೆ ಉಪ್ಪುಸಪ್ಪೆ ಬದುಕು* ಓಡಿದ ನದಿಸೇರಿತು ಕಡಲನುಬದುಕು ಅಂತ್ಯ* ಮೇಲೆ ಚಂದಿರಈಕೆ ಬೆಳದಿಂಗಳುಬಾಳು ಹುಣ್ಣಿಮೆ* ಬೀಸುವ ಗಾಳಿಉದುರಿದವು ಎಲೆಅಪ್ಪಿತು ಮುಪ್ಪು* ಗುಡಿಯ ಮುಂದೆಭಿಕ್ಷುಕರದೇ ಸಾಲುಭಕ್ತಿ ಕುರುಡು* ದೇವನಿರದಗುಡಿಯೊಳಗೆ ನಾನುಅನಾಥ ಪ್ರಜ್ಞೆ* ಕೂಗಿತು ಕೋಳಿಹರಿಯಿತು ಬೆಳಕುನಗುವ ಸೂರ್ಯ* ಉರಿವ ಬೆಂಕಿಒಲೆಯ ಮೇಲೆ ಅನ್ನಹಸಿದ ಕಂದ* ಸಿಟ್ಟಾದ ಸೂರ್ಯಭೂಮಿ ಬಳಲಿ ಬೆಂಡುಹಾಳಾದ ರೈತ* ಜೋರಾದ ಮಳೆಕೊಚ್ಚಿಹೋದ ಫಸಲುಹತಾಷ ರೈತ* ತುಂತುರು ಹನಿಪುಲಕಗೊಂಡ ಭೂಮಿಪ್ರಸನ್ನ ಜನ* ಮೌನದ ಕಾಡುಅಲ್ಲಿ‌ ಮನುಷ್ಯರಿಲ್ಲಸುಂದರ‌ ಲೋಕ* ಕಣ್ಣ ಕಂಬನಿಅವಳ ಖಾಲಿ ನೋಟಎದೆಯ ಗಾಯ* ಅವಳ ಅಳುಆಕಾಶದ ಕಾರ್ಮೋಡನನ್ನೆದೆ ನೋವು* ನಕ್ಕಳು ನಲ್ಲೆಅರಳಿದವು ಹೂವುಮನಸು ತೋಟ**********************

ಹಾಯ್ಕುಗಳು Read Post »

ಕಾವ್ಯಯಾನ

ಆಧುನಿಕ ವಚನಗಳು

ಆಧುನಿಕ ವಚನಗಳು ರತ್ನಾ ಕಾಳೇಗೌಡ ಅರಮನೆಯ ರಾಜನಾದರೇನು?ಬಡವ ಭಿಕ್ಷುಕನಾದರೇನು?ಇಬ್ಬರಿಗೂ ಒಂದೇ ರೀತಿಯ ಹಸಿವುಅನ್ನವೇ ಇಬ್ಬರ ಹೊಟ್ಟೆ ತುಂಬಿಸುವುದುಅರಮನೆಯಲ್ಲಿ ಮಲಗುವುದಕ್ಕೆ ಮಂಚಭಿಕ್ಷುಕರಿಗೆ ಪಾರ್ಕಿನ ಕಲ್ಲು ಬೆಂಚೇಮಂಚ:ಇಬ್ಬರೂ ಮಾಡುವುದು ನಿದ್ದೆ ಎಂಬುದತಿಳಿದು ಬಾಳಯ್ಯ — ರತ್ನದೀಪ ನಿರ್ಗತಿಕ ಮಾಡಿ ಬಂಧುಗಳ ಮನೆಗೆಹೋದಾಗ ಗುರುತಿಲ್ಲದವರಂತೆ ಮುಖತಿರುಗಿಸಿಕೊಂಡು ಸೋದರತ್ತೆಧನಿಕಳೆಂದು ತಿಳಿದಾಗ ಮುಗಿ ಬಿದ್ದುಬಂದಿರಯ್ಯಎತ್ತೆತ್ತಲೂ ನನ್ನದೆ ಗುಣಗಾನಮಾಡುತಿಹರಯ್ಯಗುಣ ನಡೆ ನುಡಿಯಿಂದಲೇ ಸಮಾಜದಲ್ಲಿಸ್ಥಾನ ಮಾನ ದೊರೆಯುವುದೆಂದುತಿಳಿಯರಯ್ಯಗುಣ ನಡತೆಯನ್ನು ಮೂಲೆಗೆ ತಳ್ಳಿ ಹಣಕ್ಕೆಬೆಲೆ ಕೊಡುವ ದಾನ ದಾಹಿಗಳನು ಮನೆಗೆಹೇಗೆ ಸೇರಿಸಲಯ್ಯ –ರತ್ನದೀಪ ಗಜನ ಮಣಿಸಿ ದಂತ ಪಡೆಯಬಹುದುವ್ಯಾಘ್ರನ ಒಲಿಸಿ ಉಗುರು ಹಲ್ಲುಪಡೆಯಬಹುದುಮೊಸಳೆಯ ಮರ್ದಿಸಿ ಪಾರಾಗಬಹುದುಉರುಗ ಕಚ್ಚಿದರೆ ಬದುಕಿಸಬಹುದುನೆರೆ ಉಕ್ಕಿದರೆ ಈಜಿ ದಡ ಸೇರಬಹುದುಮನೆಗೆ ಬೆಂಕಿ ಬಿದ್ದರೆ ನುಸುಳಿಬರಬಹುದುಕಾಲು ಕೆರೆದು ನಿಂತ ಗೂಳಿಯನುಬಗ್ಗಿಸಬಹುದುಜ್ಞಾನದ ಬಡತನವಿರಲು ಎಲ್ಲದರಲ್ಲೂಬೋರಯ್ಯ —ರತ್ನದೀಪ ಒಪ್ಪಿ ಭಜಿಸುವ ಮನಸ್ಸಿರಬೇಕುಒಪ್ಪದಿಂದ ಅರಿವ ಗುಣ ಸಂಪತ್ತುಇರಬೇಕುನಿತ್ಯ ಪೂಜೆಗೈಯಲು ನಿರ್ಮಲಚಿತ್ತವಿರಬೇಕುಭಕ್ತನ ಮನಸು ಏಕಾಗ್ರತೆಯಿಂದಿರಬೇಕುಭಕ್ತಿ ತಾನೆಂದು ಹುಂಬಿನಲಿ ಪೂಜೆಗೈಯಲುಒಲಿಯುವನೆ ಶಿವನು ಮುನಿದೋಡುನಾನಯ್ಯ –ರತ್ನದೀಪ ಕನ್ನಡಿಯೊಳಗಿನ ಬಿಂಬ ಕಂಡುಬೀಗದಿರು ತರುಣಿಅಮೂಲ್ಯ ವೇಳೆಯನ್ನು ಕಬಳಿಸುವುದುಕನ್ನಡಿಯೊಳಗಿನ ಬಿಂಬನಿನ್ನ ಗುರಿಯನ್ನು ನುಂಗಿಸೌಂದರ್ಯದ ಹುಚ್ಚು ಹಿಡಿಸಿ.ಅಲಂಕಾರದ ಅಮಲೇರಿಸಿನಿತ್ಯ ಕಾಯಕದ ಕರ್ತವ್ಯ ಮರೆಸಿದುಃಖದ ಮೂಲಕ್ಕೆ ಹೊಯ್ಯುವುದುಎಚ್ಚರವಿರಲಿ —ರತ್ನದೀಪ ಕಾಮ ಕಿಡಿಯಾಗಬಹುದುಕೋಟಿ ಕುರಿತಾಗಿ ಬಹುದುಹರಿಯಬಿಟ್ಟು ಮನಸು ಹಾವಾಗಬಹುದುಮೋಹ ಮನದ ಪರದೆ ಮುಚ್ಚಬಹುದುಕಾಮ ದಾಹಕ್ಕೆ ಕುರುಡಾಗದಿರುವಂದಿಸಿದವಳನುಳಿದು ಉಳಿದವರುತಾಯಂದಿರು ಸೋದರಿಯರೆಂದೆಣಿಸುನಿನ್ನ ಕಣ್ತೆರೆಯುವುದು —ರತ್ನದೀಪ ಅಗಸನಿಗೆ ಯಾರು ಬಟ್ಟೆಯಾದರೇನು?ಒಗೆಯುವುದು ಅವನ ಕಾಯಕಕತ್ತೆಗೆ ಯಾವ ಹೊರೆಯಾದರೇನುಹೊರುವುದು ಅದರ ಕಾಯಕಅಗಸನಿಗಿಲ್ಲ ಅದರ ಚಿಂತೆ ಮೌಢ್ಯ ತುಂಬಿದ ಮನಕೆಜ್ಞಾನ ನೀಡಯ್ಯಕತ್ತಲು ತುಂಬಿದ ಮನಕೆಅರಿವಿನ ಬೆಳಕು ನೀಡಯ್ಯಕತ್ತಲಲ್ಲಿ ಹುದುಗಿರುವ ಭಾವನೆಗಳಿಗೆಬೆಳಕು ನೀಡಯ್ಯಬೆತ್ತಲಾದ ಮನಕೆವಚನದ ಬಟ್ಟೆ ತೊಡಿಸಯ್ಯಬೆತ್ತಲಾದ ಮನದಲ್ಲಿ ವಚನಗಳುಅರಳುವಂತೆ ಮಾಡಯ್ಯ – ರತ್ನದೀಪ ಕಾಯಕ ಮಾಡಿದೆಕೈಲಾಸಂ ಬೇಡಿದರೆಂತಯ್ಯ?ಮೋಹ ತೊರೆಯದೆಮೋಕ್ಷ ಬೇಡಿದರೆಂತಯ್ಯ?ಸೌಹಾರ್ದತೆ ಇಲ್ಲದೆಸಂಭ್ರಮ ಬೇಡಿದರೆಂತಯ್ಯ?ಸಂಬಂಧದ ಮೌಲ್ಯವನರಿಯದೆಸ್ನೇಹ ಬೇಡಿದರೆಂತಯ್ಯ?ಎಲ್ಲರೊಳಗೆ ಒಂದಾಗಿ ಬೆರೆಯದಿರಲುಏನಿದ್ದರೂ ಫಲವಿಲ್ಲಯ್ಯ – ರತ್ನದೀಪ ಅರಗಿನ ಮನೆಯೊಳಗಿದ್ದುಅಗ್ನಿಗೆ ಅಂಜಿದೊಡೆಂತಯ್ಯ?ಅಂದರೆ ಮಡದಿಯನು ಕೂಡಿನಿಂದನೆಗೆ ಅಂಜಿದೊಡೆಂತಯ್ಯ?ಸಾಕುವ ಶಕ್ತಿಯಿಲ್ಲದೆ ಕಂದನ ಪಡೆದುನಾಡಿನ ಮೇಲೆ ಬಿಸುಟರೆಂತಯ್ಯ ?ಕೈಯಲ್ಲಿ ಖಡ್ಗವಿದ್ದರೂ ರಕ್ಷಿಸಿಕೊಳ್ಳಲುಹಿಂಜರಿದರೆಂತಯ್ಯ? – ರತ್ನದೀಪ************************

ಆಧುನಿಕ ವಚನಗಳು Read Post »

ಕಾವ್ಯಯಾನ

ಮುಂಜಾವಿನ ಬೆರಗು

ಕವಿತೆ ಮುಂಜಾವಿನ ಬೆರಗು ಡಾ.ಪ್ರೀತಿ ಕೆ.ಎ. ಅದೊಂದು ತಿಳಿ ಮುಂಜಾವುಎದ್ದಿದ್ದೆ ನಿನ್ನ ನೆನಪುಗಳಿಂದಕಣ್ಣ ಮೇಲಿನ ಮುಂಗುರುಳನ್ನುಹಗೂರಕ್ಕೆ ಹಿಂದೆ ಸರಿಸಿಬೆಚ್ಚಗಿನ ಚಹಾವನ್ನು ಇಷ್ಟಿಷ್ಟೇಹೀರುತ್ತಾ ಬಾಲ್ಕನಿಯಲ್ಲಿ ನಿಂತಿದ್ದೆ ನಿನ್ನೆವರೆಗೆ ಮೊಗ್ಗಾಗಿದ್ದಕೆಲವೇ ಕೆಲವು ಗಳಿಗೆಗಳಹಿಂದಷ್ಟೇ ಹೂವಾಗಿ ಬಿರಿದಆ ಸೇವಂತಿಗೆಯ ಮೃದು ಪಕಳೆಗಳಿಗೆನಿನ್ನದೇ ಮೈಯ ಘಮ ಚೀವ್ ಚೀವ್ ಗುಬ್ಬಿಮರಿಗಳಜೊತೆ ಸೇರಿದ ಹೊಸ ಹಕ್ಕಿಗಳಸಂಗೀತ ಸುಧೆಯಲ್ಲಿನಿನ್ನದೇ ನಾದ ಮೆಲ್ಲನೇ ಬೀಸುತ್ತಿರುವತಂಗಾಳಿಗೆ ಸಾಥ್ ಕೊಡುವಂತೆಅತ್ತಿಂದಿತ್ತ ಓಲಾಡುತ್ತಿರುವಆ ಎಳೇ ಸಂಪಿಗೆ ಗಿಡಕ್ಕೆನಿನ್ನದೇ ಲಯ ನೀಲಾಕಾಶದಲ್ಲಿ ತುಸುವೇಮೊಗವನ್ನು ತೋರುತ್ತಿದ್ದಇದೀಗ ಬಂಗಾರದ ಬಣ್ಣದಿಂದಮಿರಿ ಮಿರಿ ಹೊಳೆಯುತ್ತಿರುವ ಸೂರ್ಯನಿಗೆನಿನ್ನ ಕಣ್ಣುಗಳಲ್ಲಿದ್ದಷ್ಟೇ ಪ್ರಖರತೆ ಅರೇ ! ಇದೇನಿದುನಿನ್ನ ನೆನಪುಗಳ ಬಂಧದಿಂದಬಿಡಿಸಿಕೊಂಡೆ ಎಂಬುವುದುಬರೆಯ ಭ್ರಮೆಯಲ್ಲವಷ್ಟೇ? ನನ್ನನ್ನು ನೀನು ಆವರಿಸಿಕೊಂಡಪರಿಗೆ ಬೆರಗಾಗುತ್ತಿರುವಾಗಹಿತವಾಗಿ ತಬ್ಬಿ ನಿಂತೆಇದು ಕನಸಲ್ಲವೆಂದುಸಾಬೀತು ಪಡಿಸುವನಂತೆ…! **********************

ಮುಂಜಾವಿನ ಬೆರಗು Read Post »

ಕಾವ್ಯಯಾನ

ದ್ವಿಪದಿಗಳು

ದ್ವಿಪದಿಗಳು ಸಿದ್ಧರಾಮ ಕೂಡ್ಲಿಗಿ ಖಾಲಿಯಾದ ಕಣ್ಣುಗಳಲಿ ತೇಲುತ್ತವೆ ಕಂಬನಿದುಂಬಿದ ಮೋಡಗಳು ಒಮ್ಮೊಮ್ಮೆ ಭೋರ್ಗರೆಯುತ್ತವೆ ಒಮ್ಮೊಮ್ಮೆ ಕಣ್ಣಂಚಿನಲೇ ನಿಲ್ಲುತ್ತವೆ – ಬಂಜೆ ನೆಲಕೂ ಆಗಾಗ ಕನವರಿಕೆ ಒಡಲು ತುಂಬುವ ಸರದಾರ ಬರಬಹುದೆಂದು – ಬರಿದಾದ ತಲೆಯಲಿ ಚಿಂತೆಯ ಹದ್ದುಗಳದೇ ಗಲಾಟೆ ಬೇಟೆ ಸಿಕ್ಕರೆ ಭೂರಿ ಭೋಜನ ಇಲ್ಲದಿರೆ ಬರೀ ಗಾನ ಬಜಾನ – ಮತ್ತೊಬ್ಬರ ಬೂಟಿನಲಿ ಮೂಗು ತೂರಿಸುವ ಹೆಜ್ಜೆಗಳು ತಮಗೊಂದು ಅಸ್ತಿತ್ವವಿದೆಯೆಂದು ಎಂದೂ ಯೋಚಿಸವು – ಮುಗುಳ್ನಗೆಗಳು ಹಾರಾಡುತ್ತವೆ ಚಿಟ್ಟೆಯಂತೆ ಪ್ರೀತಿ ಇದ್ದಲ್ಲಿ ಕೂರುತ್ತವೆ ಇಲ್ಲದಿದ್ದಲ್ಲಿ ಮುಂದೆ ಸಾಗುತ್ತವೆ – ಏನು ಪುಣ್ಯವೋ ಹೆಜ್ಜೆಗಳಿಗೆ ಮಾತು ಬರದಿರುವುದು ಇಲ್ಲವಾದರೆ ಅವುಗಳಲ್ಲಿಯೂ ಪ್ರೀತಿ ಜಗಳಗಳಿರುತ್ತಿದ್ದವು – ಕಣ್ಣೊಳಗಿನ ಆಸೆಯೆಂಬ ಧೂಳು ತೊಳೆದರೆ ಎಲ್ಲವೂ ಸ್ಪಷ್ಟ, ದಿಟ್ಟ, ನೇರ, ನಿರಂತರ ***************************************** –

ದ್ವಿಪದಿಗಳು Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಅಕ್ಷತಾ ಜಗದೀಶ ಬಾಳಲ್ಲಿ ಆನಂದದ ಹೊಳೆ ಹರಿಸಿದೆ ನೀ ಕಂದಸಾಗರದ ಆಳದಲಿ ದೊರಕಿದ ಮುತ್ತಿನಂತೆ ಆನಂದ ನೀ ಅತ್ತರು ಅದು ಸಂಗೀತದ ನಾದ ಕಂದನಕ್ಕಾಗ ಅದುವೇ ಮಾತ್ರ ಸ್ವರ್ಗದಾನಂದ ತೊದಲು ನುಡಿಯಲಿ ನುಡಿವೆ ನೀ ಕಂದನಿನ್ನೊಡನಾಟವದುವೇ ಎನಗೆ ಚಂದ ಬಾಳಲ್ಲಿ ನಂದಾದೀಪವಾದೇ ನೀ ಕಂದಸಂತೋಷದ ಅಲೆಯಾಗಲಿ‌ ಈ‌ ಅನುಬಂಧ ಪುಟ್ಟ ಪುಟ್ಟ ಹೆಜ್ಜೆ ನೀ ಇಡುವಾಗ‌ ಕಂದಮನೆ ಆಗಿದೆ ಮಂತ್ರಾಲಯದಂತೆ ಮಹದಾನಂದ. ************************

ಗಜಲ್ Read Post »

ಕಾವ್ಯಯಾನ

ಕ್ಷಮಿಸಿ ಬಿಡು ಬಸವಣ್ಣ

ಕವಿತೆ ಕ್ಷಮಿಸಿ ಬಿಡು ಬಸವಣ್ಣ ಡಾ.ಶಿವಕುಮಾರ್ ಮಾಲಿಪಾಟೀಲ ನೀ ಹಾಕಿದ ಸಮಾನತೆಯಭದ್ರ ಬುನಾದಿ ಮೇಲೊಂದುಅಸಮಾನತೆಯ ಸೋರುವ ಗುಡಿಸಲು ಹಾಕಿದ್ದೇವೆ— ಕ್ಷಮಿಸಿಬಿಡು ಬಸವಣ್ಣ. ನೀನು ಗಳಿಸಿದ ನೈತಿಕಆಸ್ತಿಯ ಮಾರಿಮಹಾಮನೆಯ ಜಂತಿಮುರಿದು ಉರುವಲಾಗಿಬಳಸುತ್ತಿದ್ದೇವೆ— ಕ್ಷಮಿಸಿಬಿಡು ಬಸವಣ್ಣ. ನಿನ್ನ ಜನ್ಮದಿನದಂದೆಆಸ್ತಿ, ಬಂಗಾರ ಖರೀದಿಸಿಅಕ್ಷಯ ನಿಧಿ ತುಂಬಿಸಿಕೃತಕ ಜಗತ್ತು ಕಟ್ಟುತ್ತಿದ್ದೇವೆ–ಕ್ಷಮಿಸಿಬಿಡು ಬಸವಣ್ಣ ದೇಶ ವಿದೇಶಗಳಲಿ ನಿನ್ನ ಮೂರುತಿ ಸ್ಥಾಪಿಸಿ,ನಿನ್ನ ವಚನಗಳನ್ನುಎಲ್ಲಾ ಭಾಷೆಗಿಳಿಸಿ,ಕಲ್ಯಾಣ ನಾಡನ್ನೆಕಟ್ಟುವುದ ಮರೆತಿದ್ದೇವೆ— ಕ್ಷಮಿಸಿಬಿಡು ಬಸವಣ್ಣ ನಿನ್ನ ವಚನಗಳನ್ನು ಹೇಳುತ್ತ ಕೇಳುತ್ತ ವಚನ ಭ್ರಷ್ಟರಾಗಿ,ಕಾಯಕವೇ ಕಷ್ಟವೆಂದುನಿನ್ನನ್ನು ಕೂಡಲಸಂಗಮದಲ್ಲಿ ದಿನವೂ ಮುಳುಗಿಸುತ್ತಿದ್ದೇವೆ–ಕ್ಷಮಿಸಿಬಿಡು ಬಸವಣ್ಣ ಜಾತಿ ಅಳಿಸಲು ನೀನು ಚಳುವಳಿ ರೂಪಿಸಿದಿಜಾತಿ ಉಳಿಸಲು ನಾವು ಪೀಠಗಳನ್ನು ಸ್ಥಾಪಿಸಿಜಾತಿ ಸಮಾವೇಶಗಳ ಧೂಳಿನಲ್ಲಿ ನಿನ್ನನ್ನುಹುಡುಕಲು ಹೊರಟಿದ್ದೇವೆ— ಕ್ಷಮಿಸಿಬಿಡು ಬಸವಣ್ಣ ನಿನ್ನ ಕ್ರಾಂತಿಯ ಕಣಗಳುನಮ್ಮ ರಕ್ತದಲ್ಲಿಂದು ಮಾಯವಾಗಿವೆ“ಬಸವಾ ಮತ್ತೆ ಹುಟ್ಟಿ ಬಾ” ಎಂದ್ಹೇಳಲು ನಾವು ಅರ್ಹತೆ ಕಳೆದುಕೊಂಡಿದ್ದೇವೆ–ಕ್ಷಮಿಸಿಬಿಡು ಬಸವಣ್ಣ.ಕ್ಷಮಿಸಿ ಬಿಡು ….************************

ಕ್ಷಮಿಸಿ ಬಿಡು ಬಸವಣ್ಣ Read Post »

ಕಾವ್ಯಯಾನ

ಹಾಯ್ಕುಗಳು

ಹಾಯ್ಕುಗಳು ಭಾರತಿ ರವೀಂದ್ರ 1) ವಾತ್ಸಲ್ಯ ತಾಯಿ ಸೆರಗುಅಂಬರವು ನಾಚಿತುವಾತ್ಸಲ್ಯ ಸಿರಿ. 2) ವಿಸ್ಮಿತ ಸುಖ ಕನಸು :ಕಂದಮ್ಮನ ಮೊಗದಿ :ದೇವ ವಿಸ್ಮಿತ. 3) ಚೆಲವು ಇಳೆ ಚೆಲವು :ಹಸಿರಿನ ಸಿರಿಯು,ನೆಮ್ಮದಿ ಬಿಡು. 4) ಮಧು ಮುತ್ತಿನ ಮಧು :ಮತ್ತೇರಿತು ದುಂಬಿಗೆ,ಶೃಂಗಾರ ಮಾಸ 5) ಹೃದಯ ಖಾಲಿ ಆಗಿತ್ತು :ಕನಸಿಲ್ಲದ ಮನ,ಬೆಂದ ಹೃದಯ. 6) ಸೀಮಂತ ಧರೆ ಸೀಮಂತ :ಹಕ್ಕಿಯ ಗಾನ ಸಭೆ,ನಾಚಿದ ಪ್ರಭೆ. 7) ಹೊಂಬಿಸಿಲು ಕಿರುನಗೆಯು :ಹೊಂಬಿಸಿಲು ಬಾಳಿಗೆ,ಸ್ವರ್ಗವು ಇಲ್ಲೇ. 8) ಹೂ ಬನ ಕಾವ್ಯದ ಬೀಜ :ಕವಿ ಬಿತ್ತಿ ಮನದಿ,ಹೂ ಬನ ಹಾಗೆ. 9) ಪ್ರೇಮದ ರಾಗ ಒಲವ ರಂಗು :ಮೊಗ್ಗೊಂದು ಅರಳಿತುಪ್ರೇಮದ ರಾಗ. 10) ಬಂಗಾರ ಜೀವನ ಪಾಠ :ಅರಿತು ನಡೆದಲ್ಲಿಬಾಳು ಬಂಗಾರ. *********************************

ಹಾಯ್ಕುಗಳು Read Post »

ಕಾವ್ಯಯಾನ

ಕಾಡುವ ಹಕ್ಕಿ.

ಕಾಡುವ ಹಕ್ಕಿ ಅಬ್ಳಿ,ಹೆಗಡೆ ಹಾಡು ಹಕ್ಕಿಯೊಂದು  ನಿತ್ಯಕಾಡುತಿದೆ  ‘ಹಾಡು ನೀನು’ಎಂದು.          ಗಂಟಲೊಣಗಿದರೆ         ಕಂಠನುಲಿಯದದು         ಹಾಡಲೇಗೆ ಇಂದು..?    ಮರ್ಮವರಿಯದೆ   ಧರ್ಮ,ಕರ್ಮಗಳ   ನಡುವೆ ಬಂಧಿ ನಾನು.          ಹಾರಲಾಗದಿದೆ         ಭಾರ ರೆಕ್ಕೆಯಿದೆ         ಹೊರಗೆ ಬಂದರೂನು.    ನೋವು,ಹಿಂಸೆಗಳು   ಸುತ್ತ ಕುಣಿಯುತಿವೆ   ಕೊಳ್ಳಿ ದೆವ್ವದಂತೆ.           ಹಸಿರು ಪ್ರಕ್ರತಿಯಾ          ತಂಪು,ಸೊಂಪುಗಳು          ಒಡಲ ಬೆಂಕಿಯಂತೆ.    ಹರಿವನದಿಯಂತೆ   ಬದುಕು ಸರಿಯುತಿದೆ   ಸೆಳವು ಈಜಲಾರೆ.            ಖುಷಿಯ ಬಾನಿನಲಿ           ಹಾಡಿ,ತೇಲುವದು           ಎಂತೋ…?ಹೇಳಲಾರೆ.    ಭಾವ ಬತ್ತಿಹುದುಖುಷಿಯು ಸತ್ತಿಹುದು   ಬರದು ಮಧುರಗೀತೆ.            ದುಃಖ ಉಮ್ಮಳಿಸಿ           ಬಿಕ್ಕುತ್ತ ಹಾಡಿದರೆ           ಅದುವೆ ಚರಮಗೀತೆ.     ಹಾಡುಹಕ್ಕಿಯೆ ನಿನ್ನ    ಸ್ವಚ್ಛಂಧ ಬಂಧ    ನನ್ನ ಬದುಕಿಗಿಲ್ಲ.            ಬುವಿಯಂದ ಹೀರಿ           ಬಾನಗಲ ಹಾರಿ      .    ಹಾಡೆ ಖುಷಿಯ ಸೊಲ್ಲ. ***********   

ಕಾಡುವ ಹಕ್ಕಿ. Read Post »

You cannot copy content of this page

Scroll to Top