ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸಂಕ್ರಾಂತಿ ಕಾವ್ಯ ಸುಗ್ಗಿ ಹಳೆಮನೆ ಮತ್ತು ಗೋಡೆ ಗಡಿಯಾರ ವಿಭಾ ಪುರೋಹಿತ ಮೂರ್ನಾಲ್ಕು ತಲೆಮಾರಿನವರುಚಿರಪರಿಚಿತರೇ,ಅನಾದಿ…..ಅದೇ ಗೋಡೆ ಅದೇ ಜೀವಅದೇ ಭಾವ ಅದೇ ಬಡಿತನಿರ್ಲಿಪ್ತ….. ನಿನ್ನಾತ್ಮ ಸಾಂಗತ್ಯ….ಇನ್ನೂ ಬಸಿರ ಬಯಕೆ ತೀರಿಲ್ಲಹೆಣ್ಣೋ ಗಂಡೋನೋವೋ ನಲಿವೋ ಹಡಿಯುತ್ತಲಿರುವೆ !ವಿಧಿಯ ಕೈವಾಡಗಳು ನಿನ್ನಾಡಿಸುತ್ತವೆಬಿಕ್ಕಿ ನರಳಾಡಿಸುತ್ತವೆನಕ್ಕು ನಲಿಸುತ್ತವೆಹಿಂಡು ಹಿಂಡಾಗಿ ಕಷ್ಟಗಳಒಂದೊಂದಾಗಿ ಸುಖಗಳಹೆರುತ್ತ…. ಅದೆಷ್ಟುಪಾಠ ಕಲಿಸಿರುವೆ !ಸಂಯಮ ಪರೀಕ್ಷಿಸಿರುವೆ !ದಾಯಾದಿ ಬಂಧುಗಳ ಬಿರುಕುಹೆಣ್ಮಕ್ಕಳ ಅಳುಕುದೇಶದ ವಿದ್ಯಮಾನಸ್ವಾತಂತ್ರ್ಯ ಹೋರಾಟದ ಭಯಾನಕವಿಕೋಪಗಳ ವಿಪತ್ತೂ ಕಂಡಿರುವೆಹಾಹಾ….ಆದರೀಗ….ಏನೂ ಗೊತ್ತಿಲ್ಲದವರಂತೆಹೊಸತಲೆಮಾರಿನವರೆದಿರು‘ ಆಂಟಿಕ್ ಪೀಸ್ ‘ ನಂತೆ .ಹಳೇ ಟಿಕ್ ಟಿಕ್ ನಲಿಹೊಸ ಕಾಳಜಿಯೊಂದುಮಿಡಿಯುತ್ತಿದೆ.

Read Post »

ಕಾವ್ಯಯಾನ

ಕವಡೆಗಳು

ಕವಿತೆ ಕವಡೆಗಳು ವಿಭಾ ಪುರೋಹಿತ್ ಪಬ್ ಜಿ ವಿಡಿಯೋ ಗೇಮ್ ಬೇಜಾರಾಗಿಚೌಕಾಬಾರಾ ಪಗಡೆ ಅಳೆಗುಳಿಮನೆಝಾಡಿಸಿಕೊಂಡು ಮೇಲೆದ್ದಿವೆಚರಿತ್ರೆಯ ಮು‌ಷ್ಟಿಯೊಳಗಿಂದತಂದಾಣಿಪಿಲ್ಲೆ ಹಾವುಏಣಿಯಾಟ ಹುಣಸೆಬೀಜಗಳು ಕಾಶಿಯಿಂದ ತಂದ ಕವಡೆಗಳು ಕಣ್ಬಿಟ್ಟಿವೆ ಲಾಕ್ಡೌನಿನಲ್ಲಿ ! ಬೊಗಸೆಯಲ್ಲಿಟ್ಟು ಕುಲುಕಿಸಿ ಎಸೆದಾಗಬೇಕಾಗುವ ಅಂಕೆ ದೊರೆತರೆ ಅದೃಷ್ಟಅಂಗಾತ ಬಿದ್ದಕವಡೆ ಕುದುರಿಯೇಳುವ ಭಾಗ್ಯಡಬ್ಬು ಮಲಗಿದ ಕವಡೆ ನಿತಾಂತಬಾಳಭವಿತವ್ಯಕ್ಕೆ ಕವಡೆ ಸಂಖ್ಯೆ ಗಳಪಾರಾಯಣವಂತೆ ಜೋತಿಷ್ಯಾಲಯದಲ್ಲಿಸಾಲುಗಟ್ಟಿ ನಿಂತಿದ್ದಾರೆ ಕವಡೆವಾಣಿಗಾಗಿಅರ್ಧಸತ್ಯವಿದ್ದರೂ ನಂಬುವ ಅನಿವಾರ್ಯಮನದೊಳಗೆಹೂತಿಟ್ಟ ಪ್ರಶ್ನೆ ಗಳಿಗೆರಾಮಬಾಣವಂತೆ ಕವಡೆಗಳು ಅದೇನೋ ನೂರೆಂಟು ಕಗ್ಗಂಟುಲೆಕ್ಕಾಚಾರದ ಸೂತ್ರಗಳುನೌಕೆ ಓಡುವುದಕ್ಕೂ ನಿಲ್ಲುವದಕ್ಕೂಕಾರಣಿಸುವ ಲಂಗರು ಕವಡೆಉತ್ತರ ಹೇಳಬೇಕಂತೆ……ಅಂತೆ ಕಂತೆಗಳ ಉಡ್ಡಯನಪ್ಯಾಶ್ಚರೀಕರಿಸಿದ ಧೂತರಿಂದ

ಕವಡೆಗಳು Read Post »

ಕಾವ್ಯಯಾನ

ಈಗ ಅವಳು

ಕವಿತೆ ಈಗ ಅವಳು ವಾಯ್.ವ್ಹಿ.ಕಂಬಾರ ಬಣ್ಣದ ಬಟ್ಟೆಗೆ ಕಣ್ಣಾಗುವ ಅವಳುಬಿಳಿಯ ಹೊಳಪಿಗೆ – ಬಾಯಾಗುವಳುಹೊಲ , ಮನೆ ಕದನ – ಕಲಾಪಗಳಲ್ಲಿಕಥೆಯಾದವರು – ಬಿಲ್ಲಿಗೆ ಕಲ್ಲಾಗುವರು !! ದಪ್ಪ ಮೀಸೆಗಳಲ್ಲಿಬರವಸೆಯ ಕಣ್ಣಿರಿಸಿದವಳಿಗೆಸಂಕಟ ತಿಳಿಯದ ಬೆಳಕ ಕಂಡು – ಕುಬ್ಜಳಾಗುವಳು !! ಹೆಜ್ಜೆ ಹೆಜ್ಜೆಗೂ ಅನ್ನ ಅರಸುವ ಅವಳುಅವಮಾನದ ವಿಷ ತುಳಿದುಹಸಿವೆಯ ಹರಾಜಿಗೆ – ತ ಲೆಬಾಗುವಳು !! ರಕ್ತ ಸಂಭಂದಗಳು , ಸ್ನೇಹಗಳುಬಾಲ್ಯದ ಆಟಗಳು , ತೊಟ್ಟಿಲದಜೋಗುಳಗಳು – ಸುಟ್ಟುಹೋದಸುಡುಗಾಡದಲ್ಲಿ ಈಗ ಅವಳು !! ಎಲ್ಲ ಬಿಟ್ಟು ಬಂದ ಗಾಳಿಕಾಲಕ್ಕೆ ತಲೆ ಬಾಗುವ ನೆಲಛಳಿಯೊಂದಿಗೆ ಛಳಿಯಾಗಿಬಿಸಿಲಿಗೆ ಮೈಯಾದ ಗೋಡೆಗಳೊಂದಿಗೆ ಈಗ ಅವಳು !! **************************

ಈಗ ಅವಳು Read Post »

ಕಾವ್ಯಯಾನ

ಕ್ಷೌರಿಕ

ಕವಿತೆ ಕ್ಷೌರಿಕ ಮಾಲತಿ ಶಶಿಧರ್ ಪಾಪ ಕ್ಷೌರಿಕ ಕವಿಯಂತಲ್ಲಕವಿ ಬರೆದ ಸಾಲುಗಳ ತಿದ್ದಬಹುದುಬೇಡವೆನಿಸಿದರೆ ಅಳಿಸಿಬಿಡಬಹುದು ಪಾಪ ಕ್ಷೌರಿಕ ಗೋಡೆ ತುಂಬಾವಿಧ ವಿಧ ಹೇರ್ ಕಟ್ಗಳ ಚಿತ್ರಅಂಟಿಸಿ ಕೇಳಿದ ಹಾಗೆ ಕೆರೆಯಬೇಕುಒಮ್ಮೆ ಕತ್ತರಿ ಕಚಕ್ ಎಂದರೆಅಲ್ಲಿಗೇ ಮುಗಿಯಿತು ಕವಿತೆ ಬರೆವ ನನ್ನ ಬೆರಳಿಗಿಂತಲೂನನ್ನ ಕೂದಲು ಬಹಳಾ ವಿಧೇಯಿಪದಗಳು ಸಿಗದೆ ಬೆರಳು ಪರದಾಟನಡೆಸ ಬಹುದೇನೋ ಆದರೆಕೂದಲು ಎಳೆದತ್ತ ಸುಮ್ಮನೆಹೋರಡುತ್ತದೆಬಾಚಣಿಗೆಯಾಗಲಿ ಬ್ಲೆಡ್ ಆಗಲಿ ಅದಕ್ಕೆ ಪೆನ್ನಿಗೆ ಬೆರಳು ಕೊಡುವಷ್ಟುಸುಲಭವಾಗಿ ಅವನ ಕೈಗೆತಲೆ ಕೊಡುವುದಿಲ್ಲಕೊಡಲೇ ಬೇಕಾದಾಗನಡುಗುತ್ತಲೇ ಕೊಡುತ್ತೇನೆಅದೂ ಎರಡೂ ಕಂಗಳಬಿಗಿಯಾಗಿ ಮುಚ್ಚುತ್ತಾ… ******************************

ಕ್ಷೌರಿಕ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ವಾಯ್.ಜೆ.ಮಹಿಬೂಬ ಹೃದಯದಲಿ ಪ್ರೀತಿ ಅಂಕುರಿಸಿದೆ ಸಸಿಯಾಗಿಸಲು ಬಾ ಸಖಿಹದವಾಗಿ ಮನಬೆರೆಸಿ ಉದಯರಾಗದಿ ನೀರೆರೆಯಲು ಬಾಸಖಿ ಅನುಮಾನ ಸಂಶಯದ ಶೆಕೆ ಬಡಿಯದಿರಲಿ ಎಲ್ಲಿಯೂ ಇದಕೆನಂಬುಗೆ ವಿಶ್ವಾಸಗಳ ರೆಕ್ಕೆ-ಪುಕ್ಕಗಳಾಗಿ ವಿಹರಿಸಲು ಬಾ ಸಖಿ ಅನುವು-ತನುವುಗಳೆ ದಿನಮಂತ್ರಗಳಾಗಲಿ ನಮ್ಮಿಬ್ಬರ‌ ಬಾಳ್ಗೆನೀನಿರುವಾಗ ಹಂಗ್ಯಾತರದು ಸತ್ಕಾಲಕೆ ಹಿತವಾಗಲು ಬಾ ಸಖಿ ಹರಾಮಿನ ಅರಮನೆ ತೊರೆದುಬಿಡು,ಕಂಬಳಿ-ದಿನದಂಬಲಿ ಸಾಕುತಮಕೆ ಬೆಳಕು-ಅಹಂಗೆ ವಿರಾಮ,ನಾನು ಸಂಭ್ರಮಿಸಲು ಬಾಸಖಿ ‘ಅಜಾದ್’ಬಯಸುವುದೇನಿದೆ,ಬಯಕೆಯೂ ಅರಾಮಿನಲ್ಲಿದೆಸತ್ಕರಿಸಿದವನೇ ಜಗದೊಡೆಯನಿಗೆ ಕರಮುಗಿಯಲು ಬಾಸಖಿ ***********************************************************

ಗಜಲ್ Read Post »

ಕಾವ್ಯಯಾನ

ರಾಜು ಹೆಗಡೆಯವರ ಕವಿತೆಗಳು

ಕವಿತೆ ರಾಜು ಹೆಗಡೆಯವರ ಕವಿತೆಗಳು ಸಂಜೆಯ ವಾಕಿಂಗ್        ಇನ್ನೂ ಚುಕ್ಕಿಗಳು ಚಿಗುರದ ಆಕಾಶ ತೆಳುವಾಗಿ ಬೆಳಕು ಕತ್ತಲೆ ಬೆರೆತು ಉರಿಯುವ ಸಮಯ. ಆಗಲೇ ಲೈಟನ್ನು ಹೊತ್ತು ಓಡುವ ಕಾರು, ಮೋಟಾರು. ನಡೆಯಲಾರದೆ ನಿಂತ ಬೀದಿ ದೀಪಗಳು ಕೂಗಿದರೆ ಮಾತ್ರ ಕೇಳುವ ದೂರದ ಸಾಲು ಮರಗಳಲ್ಲಿ ಮೊರೆವ ಹಕ್ಕಿಗಳ ಮೌನ ಈಗಷ್ಟೇ ಬಿಟ್ಟು ಹೋದ ಪ್ರೇಮಿಗಳ ಪಿಸು ಮಾತಿನ ಬಿಸಿಯ ಹೀರುತ್ತ, ಸಾವಕಾಶವಾಗಿ ಒಂದೊಂದೆ ಹೆಜ್ಜೆಯಲ್ಲಿ ದಾಟುತ್ತಿದ್ದೇನೆ ಮರಗಳನ್ನು ದೀಪಗಳನ್ನು….. ———— ೨ ತಿರುಮಲೇಶರ….. ಅವರೀಗ ಹೈದರಾಬಾದನಲ್ಲಿದ್ದಾರೆ ಕಾರಡ್ಕದಿಂದ ಬಂದವರು ಕಾಸರಗೋಡು, ಕೇರಳ, ತಿರುವ— ನಂvಪುರಗಳಲ್ಲಿ ಇದ್ದು ಹೋಗಿದ್ದಾರೆ ಹೆಗ್ಗೋಡಿನ ‘ಶಿಬಿರ’ದಲ್ಲಿ ಕುಳಿತಿದ್ದನ್ನು ಸ್ವತ: ನೋಡಿದ್ದೇನೆ ಎಷ್ಟೋ ಕೈಗಳಲ್ಲಿ, ಕಪಾಟಿನಲ್ಲಿ, ಮನಸ್ಸಿನಲ್ಲಿ…..ಯೆಮೆನ್! ಒಮ್ಮೆ ಸಾಲಾರ್‌ಜಂಗ್ ಮ್ಯೂಸಿಯಂಗೆ ಹೋದಾಗ ನನಗೆ ಫಸ್ಟಿಗೆ ಹಂಬಲಾದದ್ದು ಅವರ ಪದ್ಯವೇ. ಸದ್ಯದಲ್ಲಿ ಕುಣಿದವರು ಸದ್ದಿಲ್ಲದೇ ಹೋಗಿದ್ದಾರೆ ಹುಗಿದ ನಿಧಿಯನ್ನು ಹಾವಾದರೇನು, ಸುತ್ತಿರುಗಿ ಸುಳಿದು ತೋರಿಸಿದ ಕತೆ ನಿಮಗೆ ಗೊತ್ತಿದೆ ನಾವುಂಡ ಗಾಳಿಯನ್ನೂ ಕನಸನ್ನೂ ಮೊದಲೇ ಕಂಡವರು ‘ಅವ್ಯಯ’ ವಾಗಿ ‘ಅಕ್ಷಯ’ವಾಗಿರುವವರು ಕುಂಡೆ ತೊರಿಸುತ್ತಾ ಕಲಾಯಿ ಹಾಕುವವರು ಎಲ್ಲೋ ಹೋದ ಖತೀಜಾ ಹೀಗೇ…. ’ಆಮೆ’ಯಿಂದ ‘ಆನೆ’ಯವರೆಗೆ, ಸಿಟ್ಟಿಲ್ಲದೆ ಕೂತವರು ಅದೆಷ್ಟು ಮಂದಿ ಬೆಳಗಿದ್ದಾರೆ ಎಷ್ಟೊಂದು ದೊಂದಿ! ‘ಇರುವುದು ಇಲ್ಲವಾಗುವುದಿಲ್ಲ ಇಲ್ಲದಿರುವುದು ಇರುವುದಿಲ್ಲ’ ಅಲ್ಲವೆ ಸರ್ ಅಥವ ಇಲ್ಲವೇ. ************************************

ರಾಜು ಹೆಗಡೆಯವರ ಕವಿತೆಗಳು Read Post »

ಕಾವ್ಯಯಾನ

ಹಕ್ಕು

ಕವಿತೆ ಹಕ್ಕು ರಜನಿ ತೋಳಾರ್ ನಿನ್ನನೆನಪುಗಳ ಶಿಖರದಮೇಲೆಮನೆಯಕಟ್ಟಿರುವೆನೀಚೂರುಚೂರುಮಾಡಿದಕನಸುಗಳಚೂರುಗಳ ಮೆಟ್ಟಿಲುನೋಡಿದಾಗಲೆಲ್ಲಾಪಾದಗಳಲ್ಲಿನೆತ್ತರು! ಮಂದಹಾಸದಮರೆಯಲ್ಲಿಬಚ್ಚಿಡುವಹನಿಗಳಕತ್ತಲಲ್ಲಿಬಿಚ್ಚಿದಾಗಹೊತ್ತಿಕೊಳ್ಳುವಹಣತೆಯಪ್ರತಿಉಸಿರಿನಲ್ಲೂನಿನ್ನದೇನಗುವಿನನೆರಳು! ನಿನ್ನಬರುವಿನಹಂಬಲವೇನಿಲ್ಲ…ಈನೆನಪುಗಳಮೇಲೆಹಕ್ಕುಕೇವಲನನ್ನದಾಗಿರಲಿಎಂಬುದೊಂದೇಛಲವು! ಹಕ್ಕುಕಾಯಿದೆಗಳಜಾತ್ರೆಗೆಜೊತೆಗೊಯ್ದುಕೊಡಿಸಿಹಾಳೆತುಂಬಾಪದಗಳಕ್ಷಣದಲ್ಲೇಕಣ್ಮರೆಯಾದೆಅಂದುಉಡುಗೊರೆಯಕೊಟ್ಟು! ಪದಗಳಬೇಡಿಯಿಂದಅಕ್ಷರಗಳಬಿಡಿಸಿಬಿತ್ತಿರುವೆಬೇಲಿಸುತ್ತಲೂನಿನ್ನನೆನಪಿನಲ್ಲಿಚಿಗುರಿಕವನವಾಗಲು!

ಹಕ್ಕು Read Post »

ಕಾವ್ಯಯಾನ

ಸಂಕ್ರಾಂತಿ ಕಾವ್ಯ ಸುಗ್ಗಿ ಸಂಕ್ರಾಂತಿ. ಜ್ಯೋತಿ ಡಿ.ಬೊಮ್ಮಾ ಎಳ್ಳು ಬೆಲ್ಲ ಜೊತೆಗೆ ಬೆಸೆದುಸಮರಸದಲ್ಲಿ ಬಾಳು ಹೊಸೆದುನೀಗಲಿ ಮನದ ಮತ್ಸರಬರುವ ಹತ್ತಿರ ಹತ್ತಿರ. ಸುಗ್ಗಿಯ ಸೊಬಗಲಿ ಹಿಗ್ಗಿನಾಭರಣಕಟ್ಟಿ ಮನೆ ಮನೆಗೂ ತಳಿರು ತೋರಣಹಾಕಿ ಮನೆ ಮುಂದೆ ರಂಗವಲ್ಲಿ ಶ್ರೀಕಾರಬಂತು ಬಂತು ಊರಿಗೆ ಹಿಗ್ಗಿನ ಹರಿಕಾರ. ನವಯುಗದ ಪಥವ ಹಿಡಿದುಉತ್ತರಾಯಣ ಪಣ್ಯಕಾಲವ ಸೇರಲುಹೊಸ ಲಯಕ್ಕೆ ಬದಲಾಯಿಸಿತು ಬದುಕು ಪಥಲಭಿಸಲಿ ಸಕಲರಿಗೂ ನೆಮ್ಮದಿ ಅನವರತ. ಎಳ್ಳು ಬೆಲ್ಲ ತಿಂದು ದೂರಾಗಲಿಮನಮನದಲ್ಲೂ ಬತ್ತಿದೊಡಕುಶಾಂತಿಯಲ್ಲಿ ನೆಟ್ಟ ಹಗೆಯ ಕನಸೂಓ ಸಂಕ್ರಾಂತಿಯೆ..ನೀ ಎಂದೆಂದಿಗೂ ಶುಭವ ಒಲಿಸು. ***************************************

Read Post »

ಕಾವ್ಯಯಾನ

ನಂಟಿನ ಗುಟ್ಟು..

ಕವಿತೆ ನಂಟಿನ ಗುಟ್ಟು.. ಜ್ಯೋತಿ ಡಿ.ಬೊಮ್ಮಾ. ನೀರೆಗೂ ಸೀರೆಗೂ ಅಂಟಿದನಂಟನ್ನು ಬಲ್ಲಿರಾ..ಪಡೆದಷ್ಟು ಹೆಚ್ಚಾಗುವ ಹಂಬಲದಗುಟ್ಟೆನು ಗಮನಿಸಿದ್ದಿರಾ.. ಅಂಚು ಸೆರಗಿನ ವರ್ಣನೆಬಣ್ಣಿಸುವದೆ ಒಂದು ಕಲೆ.ಆ ವರ್ಣ ನೆ ಮುಂದೆ ಎಷ್ಟಿದ್ದರೇನುಸೀರೆಯ ಬೆಲೆ. ಎಷ್ಟು ಕೊಂಡರು ತೀರದಮನದ ಹಂಬಲ.ಇನ್ನೊಂದು ಮತ್ತೊಂದು ಎಂದುಬಯಸುವದು ಮನ ಚಂಚಲ. ಕಂಚಿ ಪಿತಾಂಬರ ರೇಷ್ಮೆಹೆಸರಿರುವವು ಅನೇಕ.ಕೆಂಪು ಹಳದಿ ಗುಲಾಬಿಗಳಲ್ಲಿಕಂಗೊಳಿಸುವದನ್ನು ನೋಡುವದೆ ಪುಳಕ. ಮೈಗೆ ಒಪ್ಪುವಂತೆ ಉಟ್ಟುಗತ್ತಿನ ಕುಪ್ಪಸ ತೊಟ್ಟುಚಿಮ್ಮುವ ನೀರಿಗೆಗಳನ್ನೆತ್ತಿಗಾಳಿಗೆ ಹಾರುವ ಸೆರಗಿಗೆ ಪಿನ್ನಿನ ಹೂ ಮುಡಿಸಿಹಂಸ ನಡಿಗೆಯಲ್ಲಿ ನಡೆವ ನೀರೆಯೆ.. ನಿನಗೂ ಸೀರೆಗೂ ಅಂಟಿದನಂಟಿನ ಗುಟ್ಟು..ಎಂಟೆದೆ ಭಂಟರಿಗೂಬಿಡಿಸಲಾರದ ಕಗ್ಗಂಟು. ***********************

ನಂಟಿನ ಗುಟ್ಟು.. Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಪ್ರಭಾವತಿ ಎಸ್ ದೇಸಾಯಿ ಮಲ್ಲಿಗೆಯಿಲ್ಲ ಮುಡಿಯಲಿ ಘಮವಾದರೂ ಇರುಳಿಗೆ ಇರಲಿಶಶಿಯಿಲ್ಲ ನಭದಲಿ ನಕ್ಷತ್ರ ವಾದರೂ ಇರುಳಿಗೆ ಇರಲಿ ಬತ್ತಿ ಎಣ್ಣೆ ಕುಡಿದು ಖುಷಿಯಲಿ ಹರಡಿತು ಬೆಳಕು ಕೋಣೆಯಲಿಅಮಲೇರಲು ಪ್ರೀತಿಯ ಮಧುವಾದರೂ ಇರುಳಿಗೆ ಇರಲಿ ಮೌನ ಚೂರಿಯಿಂದ ಇರಿದು ಗಾಯಗೊಳಿಸಿದೆ ಒಲಿದ ಹೃದಯಎದೆಯ ಉರಿ ಆರಲು ಲಾಲಿ ಹಾಡಾದರೂ ಇರುಳಿಗೆ ಇರಲಿ ಬಯಕೆಯ ಮೃಗಜಲದ ಬೆನ್ನಹಿಂದೆ ಓಡಿ ಓಡಿ ಬಳಲಿದೆಅನುರಾಗದ ಬದುಕಾಗಲು ಕನಸಾದರೂ ಇರುಳಿಗೆ ಇರಲಿ ಏಕಾಂಗಿಯ ಬೇಸರದ ಉಸಿರು ಎಣಿಸುತಿದೆ ತಾರೆಗಳನೊಂದ ಜೀವಿಗೆ ಸುಖದ “ಪ್ರಭೆ” ಯಾದರೂ ಇರುಳಿಗೆ ಇರಲಿ ******************************************************

ಗಜಲ್ Read Post »

You cannot copy content of this page

Scroll to Top