ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮಾಯಾಮೃಗ

ಕವಿತೆ ಮಾಯಾಮೃಗ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಸುಡು ಬಿಸಿಲಲ್ಲಿ ಅಲೆದಾಡಿದಧೂಳು ಮೈಯ ಗಾಳಿಗೆ ಜ್ವರವೇರಿಇಳಿದಿದೆ ಹರಿವ ನೀರಿನಲೆಗೆ ಗಾಳಿ ಮೈಕೊಡವಿದಲ್ಲಿಉದುರಿದ ಬಕುಳ ಹೂವಿಗೆ ವಿರಹ ಬೆಂಕಿಹಾ! ಹಾ! ಎನುತ ತುಂಬಿಯ ಚುಂಬನದ ನೆನಪಲ್ಲಿ ಮೈನೆನೆದುಅಲೆಗಳಿಗೆ ಮೈಯೊಡ್ಡಿ ತೇಲಿ ಹೋಗಿದೆ. ಮರಗಿಡ ಬಳ್ಳಿಗಳ ಮೈತುಂಬಮದನಶರ ನಾಟಿ ನೇಸರಗೆ ಬಸಿರಾಗಿಮೊಗ್ಗುಗಳ ಹೆತ್ತು ತೊಟ್ಟುಗಳ ತೊಟ್ಟಿಲಲಿ ತೂಗಿಕೆಂಪು ಚಿಗುರು ಬೆರಳುಗಳಹಸಿಮೈ ಬಾಣಂತಿಕೇಶಗಳ ಬಿಚ್ಚಿ ಮಳೆನೀರ ಕಾದಿದೆ ಚಿತ್ರಗಳು ತಮ್ಮನ್ನು ತಾವೆಬರೆದುಕೊಂಡಂತೆಹಕ್ಕಿಗಳು ರೆಕ್ಕೆ ಬಿಡಿಸಿ ಚಿಮ್ಮಿಬಾಂದಳವ ಬಿಳಿ ಹಾಳೆ ಮಾಡಿವೆಅವನು ಬಿಡಿಸಿದ ಚಿತ್ರದಂಥಪ್ರಕೃತಿಗೆ ಜೀವ ಬಂದುಬಿಟ್ಟ ಕಣ್ಣಲಿ ಆಗಸದ ಕನ್ನಡಿಯಲಿತನ್ನ ಬಿಂಬ ಹುಡುಕಿದೆ ಸೀತೆಯ ಮನವುಜಿಂಕೆಯ ಹಿಂದೆ ಜಿಗಿಜಿಗಿದು ಚಿಮ್ಮಿದಂತೆನನ್ನ ಹೃದಯವಿಂದು ನಿನ್ನ ಹಿಂದೆಯೇ ಅಲೆದುಮಾಯವಾಗಿದೆ ಮಾಯಾಮೃಗಸಿಕ್ಕರೆ ಮೂಗುದಾರಹಾಕಬೇಕು ***************************

ಮಾಯಾಮೃಗ Read Post »

ಕಾವ್ಯಯಾನ

ಕವಿತೆಯೇ ಎಚ್ಚರ, ಇದು ಅತ್ಯಾಚಾರಿಗಳ ಕಾಲ..

ತಾಯೇ,
ಎದೆಗೆ ತಟ್ಟಿದ ನೋವ
ತುದಿ ಬೆರಳಿಗಂಟಿಸಿಕೊಂಡು ಬದುಕಿ ಬಿಡು
ನಿಜದ ಕೆಂಡವ ಉಡಿಯೊಳಗಲ್ಲಲ್ಲ
ಅಂಗೈಯೊಳಗಿಟ್ಟುಕೊಂಡು ಉಸಿರಾಡು

ಕವಿತೆಯೇ ಎಚ್ಚರ, ಇದು ಅತ್ಯಾಚಾರಿಗಳ ಕಾಲ.. Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ರತ್ನರಾಯಮಲ್ಲ ಅಳಬೇಕು ಎಂದಾಗಲೆಲ್ಲ ಕನ್ನಡಿಯ ಮುಂದೆ ನಿಲ್ಲುವೆನಗಬೇಕು ಅನಿಸಿದಾಗಲೆಲ್ಲ ಸಮಾಧಿಯ ಮುಂದೆ ನಿಲ್ಲುವೆ ಎಲ್ಲರೂ ಬೇಕೆನಿಸಿದಾಗಲೆ ಯಾರೂ ಬೇಡವೆನಿಸುತ್ತಾರೆಶಾಂತಿ ಬಯಸಿದಾಗಲೆಲ್ಲ ಮಸಂಟಿಗೆಯ ಮುಂದೆ ನಿಲ್ಲುವೆ ಬದುಕು ಆಟವಾಡುತಿದೆ ಹೆಜ್ಜೆ ಹೆಜ್ಜೆಗೂ ನನ್ನ ಜೊತೆಯಲ್ಲಿಬಾಳು ಬೇಡವೆನಿಸಿದಾಗಲೆಲ್ಲ ಗೋರಿಯ ಮುಂದೆ ನಿಲ್ಲುವೆ ಉಸಿರಾಡಲು ನನ್ನ ಗಾಳಿಗಾಗಿ ನಾನು ಹುಡುಕುತಿರುವೆ ಇಲ್ಲಿಪ್ರೀತಿ ಬೇಕೆನಿಸಿದಾಗಲೆಲ್ಲ ನಿನ್ನ ಮನೆಯ ಮುಂದೆ ನಿಲ್ಲುವೆ ಜೀವನವು ತೂಗುಯ್ಯಾಲೆಯಲ್ಲಿ ಕಣ್ಣಾಮುಚ್ಚಾಲೆ ಆಡುತಿದೆಸಾಯಬೇಕು ಎನಿಸಿದಾಗಲೆಲ್ಲ ‘ಮಲ್ಲಿ’ಯ ಮುಂದೆ ನಿಲ್ಲುವೆ ************************************

ಗಜಲ್ Read Post »

You cannot copy content of this page

Scroll to Top