ಮುನ್ನುಡಿ ಬರೆಯುವೆ
ಕವಿತೆ ಮುನ್ನುಡಿ ಬರೆಯುವೆ ನಾಗರಾಜ್ ಹರಪನಹಳ್ಳಿ ಸೂರ್ಯ ದಿಕ್ಕು ಬದಲಿಸುತ್ತಾನೆಂತೆನಾನು ? ಪ್ರಕೃತಿ ಮೈಮುರಿದು ಮಗ್ಗಲು ಬದಲಿಸುತ್ತಿದೆನಾನು?ನಾನೇನು ಮಾಡಲಿ ?? ಆಧುನಿಕ ಕೌಶಿಕ, ಮುಖವಾಡದ ರಾಮ,ಹೊಸ ನಮೂನಿ ಪಂಜರದೊಳಗೆ ನನ್ನ ಬಂಧಿಸಿರುವಾಗನಾನೇಗೆ ಪಥ ಬದಲಿಸಲಿ ? ಸೂರ್ಯನೇ ನಿನ್ನ ಬೆಳಕುನನಗೆ ಬೆಳಕಾಗಲಿಲ್ಲನದಿಯೇ ನಿನ್ನ ಸ್ವಾತಂತ್ರ್ಯ ನನ್ನದಾಗಲಿಲ್ಲ ಸುಳಿದು ಬೀಸುವ ಗಾಳಿಯೇನಿನ್ನ ಮೈ ನನ್ನ ದಾಗಲಿಲ್ಲನದಿಯೇ ನಿನ್ನ ಕಾಲುಗಳುನನ್ನವಾಗಲಿಲ್ಲ ಆಗ್ನಿಯೇ ನಿನ್ನ ನಾಲಿಗೆಯುನನ್ನದಾಗಲಿಲ್ಲಪ್ರಕೃತಿಯೇ ನಿನ್ನಂತೆ ನಾನುಬದುಕಿ ಬಾಳಲಾಗಲಿಲ್ಲ ಕೊನೆಯ ಪಕ್ಷ ಮರದಂತೆಮೌನಿಯಾಗಲು ಬಿಡಲಿಲ್ಲಚಲಿಸುವ ಚಲನೆಗೂಬಂದ ಬಂಧನ ಬದುಕೇ ಬಂಧನವಾಗಿರಲುನದಿ, ಅಗ್ನಿ, ಗಾಳಿ, ಪ್ರಕೃತಿಯ ಎದುರು ಬೇಡಿಕೊಳ್ಳುವುದಷ್ಟೇ ಉಳಿದದ್ದು …ಹೇಳು ಸೂರ್ಯ ನಿನ್ನಂತೆ ಪಥ ಬದಲಿಸಲಿ ಯಾವಾಗ? ಹರಿವ ನದಿಯೇ ನಿನ್ನಂತೆಸ್ವಚ್ಚಂದವಾಗಿ ಹರಿಯಲಿ ಯಾವಾಗ? ಸುಳಿವ ಗಾಳಿಯೇ ಯಾವಾಗನಿನ್ನಂತೆ ಇತರರಿಗೆ ಕಿವಿಯಾಗಲಿ? ಹೇಳು ಬೆಳಕಿನ ಬೆಳಕೆಕತ್ತಲಿಗೆ ಯಾವಾಗ ದನಿಯಾಗಲಿ? ಪಥಬದಲಿಸಲು ಮನಸ್ಸಿತ್ತುಬಲವೂ ಇತ್ತುಬಂಧನದ ಬೇಲಿಯ ದಾಟಲುಬೇಕಾದ ಹಠ, ಛಲವಕಸಿದುಕೊಳ್ಳಲಾಗಿತ್ತು ; ವ್ಯವಸ್ಥೆಯಚಕ್ರವ್ಯೂಹದಲ್ಲಿ ಸಿಲುಕಿಸಲಾಗಿತ್ತು ;ನದಿಯಾಗಲು, ಗಾಳಿಯಾಗಲೂಕೊನೆಯ ಪಕ್ಷ ಬೆಂಕಿಯಾಗಲೂ ಬಿಡಲಿಲ್ಲ ನನ್ನ ದಾರಿಯೇ ವಿಷಮವಾದೊಡೆಹೇಗೆ ಬದಲಿಸಲಿ ಪಥವ ಸೂರ್ಯದೇವಾ ? ಆದರೂ ….ಕರುಣೆಯ ಆಶಾಕಿರಣ ತಬ್ಬುವ ಆಶಾವಾದ ಚಿಗುರೊಡೆದಿದೆ ನನ್ನೆದೆಯಲಿ *********************************************









