ಮನದ ರಂಗಮಂಟಪ
ರಮೇಶ್ ಬಾಬು ಚಂದಕ ಚರ್ಲ
ಹೊಸ ಕಥೆ
ಮನದ ರಂಗ ಮಂಟಪ
ಕಥಾ ಸಂಗಾತಿ ವಾಡಿಕೆ ಶ್ರಮ ಕುಮಾರ್ ಇದುವರೆಗು ನೋಡಿದ ಇಪ್ಪತ್ತು ಹುಡುಗಿಯರನ್ನು ಸಾರಾಸಗಟ್ಟಾಗಿ ಯಾವುದೇ ಕಾರಣ ನೀಡದೆ ತಿರಸ್ಕಾರ ಮಾಡಿದ್ದ ಮಗನ ಮೇಲೆ ನರಸಯ್ಯನಿಗೆ ತಡೆಯಿಡಿಯಲಾರದಷ್ಟು ಕೋಪ್ವ ತರಿಸಿದ್ದರು ಹಲ್ಲು ಕಚ್ಚಿ ದೂರದ ಸಂಭಂದದಲ್ಲಿ ಸರಿಯೊಂದುವ ಒಂದು ಹುಡುಗಿ ನೋಡಿ ಬಂದಿದ್ದರು ‘ನಾಳೆ ಹೋರಡೋಕ್ ಹೇಳು ಒಳ್ಳೆಯ ಸಂಬಂಧ ಬಿಟ್ರೆ ಮೂರ್ ವರ್ಷ ಕಂಕಣಬಲ ಇಲ್ವಂತೆ ಬತ್ತ ಅಯ್ನೋರ್ನು ಮಾತಾಡ್ಸಿ ಬಂದಿವ್ನಿ ತಿದ್ದೇಳು ಅವ್ನ್ಗೆ’ ಎಂದೇಳಿ ನರಸಯ್ಯ ಹೊರಡುವಾಗ ಎಷ್ಟು ಹೇಳಿದರು ಕಿವಿಗಾಕಿಕೊಳ್ಳುವ ಜಯಮಾನ ಮಾದೇವನದಲ್ಲವೆಂದು ಗೊತ್ತಿದ್ದರೂ ತಲೆದೂಗಿದಳು ಲಕ್ಷಮ್ಮ ಎಮ್ಮೆಕೊಪ್ಪಲಿನಿಂದ ಪಾದಯಾತ್ರೆಯಲ್ಲೇ ಮಾದಪ್ಪನ ಬೆಟ್ಟವ ಅತ್ತಿಬಂದಮೇಲೆ ಮಾದೇಶ್ವರನ ವರಪ್ರಸಾದದಿಂದ ಹುಟ್ಟಿದ್ದನೆಂದು ಹುಟ್ಟಿ ಅಳುವ ಧ್ವನಿಯಲ್ಲೇ ಗಂಡು ಮಗು ನನಗೆಂದು ನರಸಯ್ಯ ಮನಸಲ್ಲೇ ಚೀರಿ ಮೂರುಬಾರಿ ಮಾದೇವ ಮಾದೇವ ಮಾದೇವನೆಂದು ಊರ ದಿಕ್ಕುಗಳಿಗು ಕೇಳುವ ಹಾಗೆ ಕೂಗಿದ್ದಾಗಿನಿಂದ ಮಾದೇವ,ಮಾದು,ಮಾದನಾಗಿ ಕರೆಸಿಕೊಳ್ಳುತ್ತಿದ್ದ ಮಾದೇವನದ್ದು ಒಣಕು ದೇಹವಾದರು ನರಸಯ್ಯ ಹೊಡೆದು ಬಡಿದು ಹೊಲ ಮನೆಯಲ್ಲಿ ಮಾಡಿಸುತ್ತಿದ್ದ ಗ್ಯೈಮೆಯ ದೆಸೆಯಿಂದ ಗಟ್ಟಿಮುಟ್ಟಾಗಿ ಕಾಣುತ್ತಿದ್ದ ಮೆಕ್ಕೆ ಜೋಳದ ಸಾಲಿನಂತಿದ್ದ ಹಲ್ಲು,ಕಪ್ಪು ಬಿಳಿ ತಿಕ್ಕಾಡುವ ಬಣ್ಣ, ಎಡಕ್ಕೆ ಬಾಚುವ ಕೂದಲಿನ ತುದಿಯಲ್ಲಿ ಮಿಂಚುತಿದ್ದ ಕೆಂಚು ಅವನಂದವನ್ನ ಹೆಚ್ಚಿಸಿದ್ದರು ಅವನಿಗದು ನಗಣ್ಯ ಅಪ್ಪನಿಗೆ ಹೆಚ್ಚುಗೆಯೇ ಎದರಿ ಅಮ್ಮನ ಸೆರಗೊಳಗೆ ಕವುಚುತಿದ್ದ ಮಾದೇವನಿಗೆ ಅದ್ಯಾವ ಗರ ಬಡಿದಿತ್ತೊ ಅವತ್ತು ಅಪ್ಪನಿಗೇ ತಿರುಗಿ ಮಾತಾಡಿ ಅವರ ಮಾತನ್ನು ಕೇಳದೇ ಇದ್ದದ್ದು ನರಸಯ್ಯನಿಗೆ ಸಹಿಸದೇ ಹೋಗಿ ಅವತ್ತಿನಿಂದು ಅವನೊಟ್ಟಿಗೆ ಮಾತು ಬಿಟ್ಟವರು ಇವತ್ತಿನ ವರೆಗೂ ಮಾತಾಡಿಲ್ಲದ ಬಗೆಯನ್ನು ಬಟ್ಟೆ ಹೋಗೆಯುವಾಗ ಪಕ್ಕದ ಮನೆಯ ಶಾಂತನೊಂದಿಗೋ ಹಾಚೆ ಬೀದಿಯ ಕಪ್ಪೆಚನ್ನಿಯೊಂದಿಗೋ ಹೇಳುವುದು ಲಕ್ಷಮ್ಮನಿಗೆ ದಿನದ ಮಾತಿನಲ್ಲಿ ಬೆರೆಯುತ್ತಿತ್ತು, ಮಾದೇವ ಹೆಚ್ಚಿಗೆ ಮಾತನಾಡುವವನಲ್ಲ ಲಕ್ಷಮ್ಮ ಒಂದೋ ಎರಡೋ ಮಾತು ಅವನೊಂದಿಗಾಡಿದರೆ ಹೆಚ್ಚು ಅಂಗೂ ಅವನನ್ನು ತಡೆದು ನಿಲ್ಲಿಸಿಕೊಂಡು’ಮಗ ಮಾದು ನೀನು ಪಿಯುಸಿ ಆದ್ಮೇಲೆ ಮುಂದಿಕ್ಕೆ ಓದಲ್ಲ ಅಂದೆ ಅಪ್ಪ ಬಡಿದರೂ ಓದ್ಲಿಲ್ಲ ಬೇಸಾಯ ಮಾಡ್ತೀನಿ ಅಂದೆ ಮಾಡ್ದೆ ಒಳ್ಳೆದಾಗಿ ಬೆಳ್ದೆ ಒಳ್ಳೆ ಮಗ ನೀನು ಅಪ್ಪ ನೋಡೋ ಹುಡ್ಗೀನ ಮದುವೆ ಹಾಗಿ ಅಪ್ಪನ ನೆಮ್ದಿ ಉಳ್ಸು ಮಾದು’ಎಂದೇಳಿದ ಲಕ್ಷಮ್ಮನ ಮಾತಿಗೆ ಸಬ್ಯಸ್ತನಂತೆ ‘ಆಗ್ಲಿ’ ಎಂದೇಳಿ ಹಾಗದೇ ಹೋಗಿದ್ದ. ‘ಹಳೆ ಕಾಲಾನೆಲ್ಲ ಶಪಿಸ್ಕೊಂಡು ಮೂರೊತ್ತು ಚಿಂತೆಯೊಳಗೇ ಇದ್ಬುಡಕೇಳು ನಿನ್ಮಗಂಗೆ ಹೆಣ್ಗಿಣ್ಣೆಲ್ಲ ಯಾಕೆ’ ನರಸಯ್ಯನ ಆಪ್ತ ಜಲ್ಲ ಮಾದೇವನ ಮದುವೆಯ ಮಾತು ಬಂದಾಗಲೆಲ್ಲ ಕೆಣಕಿದರೆ ‘ಊ ಕನಂತ್ ಹೋಲ ನಮ್ಮಯ್ದ ಗೊಡ್ಡಸ ಹಾಗಿದ್ರೆ ನೀನೆಲ್ದಂಗೆ ಮಾಡುವೆ’ ಅನ್ನುತ್ತ ಹೋಗೆಸೊಪ್ಪನ್ನು ಬೋರ್ಡಿಗಾಕುವುದರ ಇಲ್ಲ ಬಿತ್ತನೆ ತರುವುದರ ವಿಚಾರಗಳ ತೆಗೆದು ಮಾತು ಬದಲಾಯಿಸಿ ಜಮೀನನ್ನು ಎಳೆದು ತರುತ್ತಿದ್ದ. ಮಾದೇವ ತೋರಿಸುವ ಯಾವೊಂದು ಹುಡುಗಿಯರ ಒಪ್ಪದೇ ಇರುವುದ ತಿಳಿಯಲೇ ಬೇಕೆಂದು ಒಂದುಪಾಯ ಮಾಡಿ ನರಸಯ್ಯ ಮಾದೇವನ ಸ್ನೇಹಿತ ಚಂದ್ರುನನ್ನು ಬಿಟ್ಟು ಅವನ ಮನಸ್ಸಲ್ಲಿ ಯ್ಯಾರಾದರು ಇದ್ದಾರ ಕೇಳಿ ಏಳಪ್ಪ ಅಂದರು ‘ಕೇಳಿ ಹೇಳ್ತೀನಪ್ಪ’ ಎಂದ ಚಂದ್ರು ಕೊಟ್ಟ ಮಾತಿನಂತೆ ಅವನೊಳಗಿನ ಹುಡುಗಿಯನ್ನು ಕೆಣಕಿ ಕೆಣಕಿ ತೆಗೆಯಲು ನೋಡಿದ ಹುಹೂ ಅಳ್ಳಾಡದ ಮಾದೇವ ಇದೆ ಅಥವ ಇಲ್ಲ ಯಾವುದೂ ತೋರಗೊಡಲಿಲ್ಲ ಚಂದ್ರುವಿಗೆ ಗೆಲುವಾಗದೆ ‘ಇಲ್ಲ ಅವ್ನು ಏನನ್ನು ಹೇಳ್ತಾ ಇಲ್ಲ’ ಎಂದೇಳಿ ನರಸಯ್ಯನ ಮುಂದೆ ತಲಾಬಾಗಿ ಸಪ್ಪಗಾದ ‘ಚಂದ್ರು ಅದ್ಬುಡಪ್ಪ ನಿಮ್ನಪ್ಪ ಹೊಲ್ತಾಕ್ ಬರಕ್ ಹೇಳ್ದ ಹೋಗಿ ಅದೇನು ಕೇಳೋಗು’ ಎಂದೇಳಿ ಚಂದ್ರುನನ್ನು ಕಳುಹಿಸಿ ಜಲ್ಲಯ್ಯನಿಗಾಗಿ ಊರ ಕುರ್ಜಿನ ಬಳಿ ಕಾಯುತ್ತ ಅವನು ಬಂದೊಡನೆ ‘ಇವತ್ತು ಎರಡ್ರಲೊಂದು ತಿರ್ಮಾನ ಮಾಡ್ಲಾ ಜಲ್ಲ ಅವ್ನು ನಮ್ಮ್ ಕೈಗೆ ಸಿಗಂಗ್ ಕಾಣ್ತಾ ಇಲ್ಲ ಯಾರೇನೆ ಹೇಳುದ್ರು ಕೇಳ್ದಿದ್ಮೇಲೆ ಏನ್ಮಾಡದು ಹೇಳು’ ಮುಂತಾಗಿ ಹೇಳುತ್ತ ಮನೆಯ ದಾರಿಯಲ್ಲಿ ನಡೆಯುತ್ತಿದ್ದವರಿಗೆ ಮದುವೆಯಾಗದ ಚೆಂದುಳ್ಳಿ ಹೆಣ್ಣುಗಳು ಬಗೆ ಬಗೆಯಾಗಿ ಕಾಣುತ್ತಿದ್ದವು. ನರಸಯ್ಯನನೊಂದಿಗೆ ಜಲ್ಲಯ್ಯ ಬಂದದ್ದನ್ನು ಹರೆಗಣ್ಣಲ್ಲಿ ಕಂಡೊಡನೆ ಹಳೆಯ ಟೀವಿಯೊಳಗೆ ಮೂಡಿದ್ದ ತನ್ನ ಮುಖವನ್ನೇ ನೋಡುತ್ತ ಕುಂತಲ್ಲಿಂದ ಎದ್ದುನಿಂತ ಮಾದೇವ. ಲಕ್ಷಮ್ಮನನ್ನು ಹುಣಸೇಕುಪ್ಪೆಯಿಂದ ಮದುವೆಯಾಗಿ ಕರಕೊಂಡು ಬರುವ ದಿನವನ್ನು ಗುರುಹಿರಿಯರು ಗೊತ್ತುಮಾಡುವ ದಿನ ಗೊತ್ತಾದಾಗ ನರಸಯ್ಯನು ಎತ್ತಿನಗಾಡಿಯಲ್ಲಿ ಕೆಮ್ಮಣ್ಣೊಡೆದು ಎಮ್ಮೆಕೊಪ್ಪಲಲ್ಲಿದ್ದ ಎರಡೊಕ್ಕುಲು ಕುಂಬಾರರನ್ನು ಮೀರಿಸುವವನಂತೆ ಗುಡ್ಡೆಮಾಡಿ ನೀರಿನಲ್ಲಿ ಉನಿಸಿ ಚೆನ್ನಾಗಿ ತುಳಿದು ಅದಮಾಡಿ ಒಂದಿಬ್ಬರು ಕೈಯಾಳುಗಳೊಂದಿಗೆ ಕಟ್ಟಿದ ಮನೆ ಬೆಳಕಲ್ಲು ಗೌ ಗುಡುವುದು ಅದಿದ್ದ ಎತ್ತರದ ಕಾರಣಕ್ಕೊ ಅಥವ ಉದ್ದ ಅಗಲ ಜಾಸ್ತಿಯಾದ ಕಾರಣಕ್ಕೋ ನರಸಯ್ಯನಿಗೂ ತಿಳಿಯದು. ಸಮವಿಲ್ಲದ ಮಣ್ಣಿನ ಗೋಡೆಗೆ ಬಳಿದ ಗುಲಾಬಿ ಬಣ್ಣದ ನೇರಕ್ಕೆ ತಿದ್ದಿದ್ದ ಪೋಟೋಗಳ ಸಾಲಿನಲ್ಲಿ ಈಶ್ವರ ಪಾರ್ವತಿಯರು ಮುಗುಳ್ನಗುತ್ತ ನೋಡುವ ಕಡೆಯಲ್ಲಿ ಇದ್ದ ಮರದ ಕುರ್ಚಿಯಲ್ಲ ಜಲ್ಲ,ನರಸ ಕೂತವರು ಮಾತು ಶುರುಮಾಡಲು ತಡವರಿಸುವವರಂತೆ ಬೀಡಿ ಕಚ್ಚಿ ಬೆಂಕಿ ತಾಕಿಸಿದರು, ಕಳ್ಳುಗಳನ್ನ ಬಳಸಿ ಹೊಗೆ ಹೋರಗೆ ಬರುತಿದ್ದರು ಮಾತಾಡಲೊಲ್ಲದೆ ಅಲ್ಲಿ ಎಲ್ಲವು ಶಬ್ದದಿಂದ ದೂರವಾದಂತಿದ್ದವು. ಇಬ್ಬರೂ ಮಾತಾಡಲೂ ಮಾತಿಲ್ಲದವರಂತೆ ಇದ್ದದ್ದನ್ನು ಕಾಣಲಾಗದೆ ಮಾತುಮುರಿದ ಲಕ್ಷ್ಮಮ್ಮ ‘ಮಾದು, ಅಪ್ಪ ಸರಿಯಾಗಿ ಊಟ ಮಾಡ್ತಾ ಇಲ್ಲಪ್ಪ ನಿಂದೇ ಯೋಚ್ನೆ ಮೂರೊತ್ತು,ಮೇಲಷ್ಟೇ ನಿನ್ಕಂಡ್ರೆ ಅಂಗಾಡೋದು ಒಳಗೊಳಗೆ ನೀನಂದ್ರೆ ಜೀವನಪ್ಪ ಅವ್ರ್ಗೆ ,ಮನ್ಸ ನೋಯಿಸ್ದೆ ಅವ್ರೇಳೋ ಹಾಗ್ ಕೇಳಿ ತಲೆಬಾಗಪ್ಪ ನಿನ್ನ್ದಮ್ಮಯ್ಯ ಅಂತೀನಿ ‘ಎರಡನಿ ಕಣ್ಣೀರ ತಂದುಕೊಂಡ ಅಂಗಲಾಚಿದಳು. ಬಂಡೆಯಂತೆ ಅಲ್ಲಾಡದೆ ನಿಂತವನು ‘ನನ್ಗಾಗಿ ಅಳ್ಬೇಡ ನೀನು ಅಪ್ಪನ್ಗು ಹೇಳು ನನ್ಗಾಗಿ ಕೊರ್ಗೊದು ಬೇಡ ಅಂತ’ಮಾದೇವನ ಮಾತು ಕನಿಕರದ ಬದಲು ಕಡ್ಡಿ ತುಂಡಾಗುವಂತಿದ್ದವು ಅದ ಕೇಳಿ ಲಕ್ಷಮ್ಮನು ಬಾಯಿ ಕಟ್ಟಿದವಳಂತಾದಳು ನರಸಯ್ಯನು ಸೇದುತಿದ್ದ ಬೀಡಿಯ ಹೊಗೆಯ ಜೊತೆಗೆ ಕೊಪವನ್ನು ತುಂಬಿಕೊಂಡು ಬುಸುಗುಟ್ಟಿದಾಗ ಮೂಗಿನೆಳ್ಳೆಯಿಂದ ಕೋಪವು ಹೊಗೆಯನ್ನು ಹೊರಗೆ ತಂದು ಕರಗಿಸಿತ್ತು. ಮಾವನ ಮಗಳು ಬೇಡವಾದ್ಲು,ನಿನ್ನಪ್ಪನ ಸಂಬಂದಿಗಳ ಮಕ್ಳು ಬೇಡವಾದ್ರು,ಬೇರೆ ಊರಿನ ಹೆಣ್ಣುಗಳು ಸುದ ಬೇಡವಾದ್ರು ನಿನ್ಗೆ ಇನ್ನೆಲ್ಲಿಂದಪ್ಪ ತರುವ ಹೇಳು’ಜಲ್ಲಯ್ಯ ಕೇಳಲು ಮಾದೇವ ಉಸ್ರಾಡಲಿಲ್ಲ ‘ಮಾದು ನಿನ್ನ್ ಮನ್ಸಲ್ಲಿ ಅದೆನದೆ ಹೇಳು ಇಂಗೆ ಮೂಖ್ನಂಗೆ ನಿಂತ್ಕಂಡ್ರೆ ನಾವು ಏನ್ ತಿಳ್ಕಳಾದು’ಎಂದು ಬೇಸರದಲ್ಲಿ ಹೇಳಿದಾಗಲು ಅಲ್ಲಾಡಲಿಲ್ಲ ಮಾದೇವ ‘ನಿನ್ಗೆ ಬುದ್ದಿ ತಿಳ್ದಂಗೆ ಮಾಡಪ್ಪ’ಕೂತಲ್ಲಿಂದ ಮೇಲೇಳುತ್ತ ಕೊನೆಯದಾಗಿ ಹೇಳಿ ಹೊರಟನು ಜಲ್ಲಯ್ಯ ಬೀಡಿ ಎಳೆಯುತ್ತ ಹೊಗೆಯ ಬಿಡುತ್ತ ಮೌನವನ್ನೇ ದ್ಯಾನಿಸಿದ ನರಸಯ್ಯ. ‘ಮಾದೇವಂಗೆ ಗಾಳಿ ತಾಕಿರಬೇಕು’ ‘ಯಾವ್ ಮಾದೇವನ್ಲ’ ‘ಅದೇ ಕೆಳಮನೆ ನರಸಯ್ಯನ ಮಗ’ ‘ಒಬ್ನೇ ಮಗ ಕುಂತಲ್ಲೇ ಕುರೋದಂತೆ ನಿಂತಲ್ಲೇ ನಿಲ್ಲೊದಂತೆ’ ‘ಹೊಲ್ದಲ್ ಮಾತ್ರ ಚುರ್ಕು ಬಡ್ದಿದು ಆದ್ರೆ ಯಾವ್ ಹುಡ್ಗೀರ್ನು ಒಪ್ತಿಲ್ವಂತೆ’ ಊರಲ್ಲೆಲ್ಲ ಮಾದೇವನದ್ದೆ ಸುದ್ದಿಯಾಗಿದ್ದು ನರಸಯ್ಯನಿಗೆ ಹೌಹಾರಿ ಬಂತು ‘ಜನ್ರೆಲ್ಲ ಇಲ್ಲಸಲ್ಲದ್ದು ಮಾತಾಡೋಕ್ ಸುರುಮಾಡೋರೆ ಇವನ್ಗೆ ಇನ್ನ ಹೆಣ್ಣು ಕೊಟ್ಟಂಗೆ ಎತ್ತೋರು,ಹಾಳಾದೋನು ಇದ್ದು ನಮ್ಮ್ ಹೊಟ್ಟೆ ಉರ್ಸೊಬದ್ಲು ಕಟ್ಟೆಹಾರಿ ಜೀವಹೋದ್ರೆ …’ ಮುಂದೇನು ಆಡದೆ ಗೋಡೆ ಹೊರಗಿ ಚಿಂತಿಸ ಹತ್ತಿದನು ಲಕ್ಷ್ಮಮ್ಮ ಮಲಗಿದಲ್ಲೇ ಬಿಕ್ಕಿ ಬಿಕ್ಕಿ ಅತ್ತಳು ಮಗನ ನಡವಳಿಕೆ ಒಗಟಿನ ರೀತಿಯಾಗಿ ಕಾಣತೊಡಗಿತವರಿಗೆ ತುಂಬಾ ಚುರುಕಿನ ಹುಡುಗ ಒಂದಲ್ಲ ಒಂದು ಕ್ಯಾತೆ ಮಾಡದೇ ನಿದ್ದೆಮಾಡಿದವನಲ್ಲ ಅಪ್ಪನಿಗೆ ಹೆದರಿದಷ್ಟು ಅವನು ಬೇರ್ಯಾರಿಗು ಹೆದರಿದವನಲ್ಲ ಅಂತ ಮಗ ಬಿಡಿಸಲಾಗದವನಂತೆ ಆಡುತ್ತಿದ್ದದ್ದು ಲಕ್ಷಮ್ಮನಿಗೆ ಕಣ್ಣೀರ ನಿಲ್ಲಿಸುತ್ತಿರಲಿಲ್ಲ. ರಾಗಿಕೂಯ್ಲಿನಲ್ಲಿ ಜಯಳೊಂದಿಗೆ ಮಾದೇವನು ನಗ್ನಾಟವಾಡುತಿದ್ದದ್ದು ನರಸಯ್ಯನಿಗೆ ಎಲ್ಲಿಲ್ಲದಷ್ಟು ಕೋಪ ತರಿಸಿತ್ತು,ಅವಳಿಗೆ ಆದಷ್ಟು ಬೈದು ಅವಳು ಕ್ಯುಯ್ಲು ಕೂಯ್ಯವುದನ್ನೆ ನಿಲ್ಲಿಸಿದ್ದನು,ಅವಳೊಬ್ಬಳೇ ಅಲ್ಲ ಊರಿನ ಯಾವ ಹೆಣ್ಣುಮಕ್ಕಳು ಅವನೊಂದಿಗೆ ಮಾತನಾಡುವುದು ನಿಷಿದ್ಧವಾಗಿತ್ತು ಮಾತಾಡಿಸುವ ಹೆಣ್ಣನ್ನ ಮಾದೇವ ಮಾಡ್ಕೊತಾನೆ ಎಂಬುದೊಂದಿತ್ತು ದಿಗಿಲು ನರಸಯ್ಯನಿಗೆ,ಈಗವನೇ ಅಕ್ಕಪಕ್ಕದ ಹುಡುಗಿಯರ ಬಿಟ್ಟು ಮಾತ್ನಾಡಿಸಿ ನಗ್ನಾಡಿಸಿ ಅವನೊಳಗೇನಿದೆ ತಿಳ್ಕೊಳ್ಳಿ ಇವೇ ಮುಂತಾದ ಸೂಚನೆ ಕೊಟ್ಟು ಕಳುಹಿಸುತ್ತಿದ್ದರು ತಿಳಿಯಗೊಡುತ್ತಿಲ್ಲ ಮಾದೇವ,ರಾತ್ರೆಯಲ್ಲ ಎದ್ದೇ ಇದ್ದು ಬೆಳಗೆಲ್ಲ ಮಲಗೇ ಇರುತಿದ್ದ ಅವನ ವರ್ತನೆಗಳ ಗಮನಿಸಿ ಬೈಲಿನಲ್ಲಿ ಗಾಳಿ ಬಡಿದಿರಬೇಕೆಂದು ಜಲ್ಲ ಹೇಳಿದ್ದು ನಿಜವೆಂದು ನಂಬಿದನು,ಮನೆದೇವರಾದ ಮಾದೇಶ್ವರರ ಮುಂತಾಗಿ ಯಾವ ದೇವರನ್ನು ಬಿಡದೆ ಎಲ್ಲ ದೇವರಿಗು ಅರಕೆ ಕಟ್ಟಿ ನನ್ಮಗ ಮೊದಲಿನಂತಾದರೆ ಅರ್ದ ಎಕ್ಕರೆ ಜಮೀನನ್ನೆ ಬಿಡುವುದಾಗಿ ಕುರ್ಜಿನ ಮಧ್ಯ ಮೂಡಿದ್ದ ಗ್ರಾಮ ದೇವತೆಯ ಬೇಡಿಕೊಂಡರು ಜಗ್ಗುತ್ತಿಲ್ಲ ಮಾದೇವ ಹಿಂದಿಗಿಂತಲೂ ಹೆಚ್ಚಾಗೇ ಬದಲಾಗುತ್ತಲೇ ಇದ್ದ. ಒಂದು ರಾತ್ರಿ ವೊಲದಲ್ಲಿ ಮುಳ್ಳಿನ ಮೇಲೆ ಕೂತವನಂತೆ ಕೂತು ಭಾರವಾಗಿದ್ದ ಅಲ್ಲಿನ ಶಬ್ದವನ್ನೇಲ್ಲ ಕೇಳುತ್ತಿದ್ದ ಮಾದೇವ,ತಂಗಾಳಿಯಲ್ಲಿ ಸಂಕ್ರಾಂತಿಯ ಚಳಿಗೂ ನಡುಗುತ್ತಿಲ್ಲ ಅವನ ಮೈಯ್ಯಿ ಗಟ್ಟಿಯಾಗಿ ಬೇರು ಬಿಟ್ಟವನಂತೆ ಭೂಮಿಯಲ್ಲಿ ಕೂಡಿಕೊಂಡು ಉತ್ತು ಬಿತ್ತ ಕ್ಷಣವನ್ನು ನೆನೆದ, ಇದ್ದಕ್ಕಿದ್ದಂತೆ ನರಸಯ್ಯನು ಲಕ್ಷಮ್ಮನ ಕೈಯಿಡಿದೆಳೆದು ತಂದು ಗೆರೆ ಮೂಡಿಸಿ ಒಂದಷ್ಟು ಹುಡುಗಿಯರನ್ನು ಸಾಲಾಗಿ ನಿಲ್ಲಿಸಿದನು ಅವರೆಲ್ಲರ ಕೈಯ್ಗಳಿಗೆ ಕಡಕತ್ತಿ ಕೊಟ್ಟು ಕಿವಿಯಲ್ಲಿ ಏನನ್ನೋ ಹೇಳಿದೊಡನೆ ಮಾದೇವನ ಬುಡದಲ್ಲಿನ ಬೇರನ್ನು ಕತ್ತಿರಿಸಲು ಮುಂದಾದರು ‘ನೀವು ಕೂಯ್ದಾಕುದ್ರು ನಾನು ಚಿಗ್ರುತೀನಿ ಸಾವಿಲ್ಲ ನನ್ನ ಬುಡಕ್ಕೆ’ಎಂದು ಮಾದೇವ ಒಂದೇ ಉಸಿರಿನಲ್ಲಿ ಹೇಳಿದಾಗ ಅವರೆಲ್ಲರು ಸಾಲಾಗಿ ನರಸಯ್ಯನ ಮುಂದಾಗಿ ಒಬ್ಬೊಬ್ಬರಾಗೇ ಕಡಕತ್ತಿಯ ತೂಗುತ್ತ ಮಾದೇವನ ಮುಂದೆ ಹಾದು ಹೋದರು ಅವೆಲ್ಲಕ್ಕು ಕದಡಿ ಹೋದವನಂತೆ ಅಲ್ಲಿಂದೆದ್ದು ಕಟ್ಟೆಯ ಮೇಲೊಗಿ ಕೂತು ಕೈ ಉಜ್ಜಿದ ಶಾಕದಲ್ಲಿ ಕೆನ್ನೆಗಳಿಗೆ ತಾಕಿಸಿದ ಚಳಿ ಹೆಚ್ಚುತ್ತಿತ್ತು ಗಾಳಿಯು ಇನ್ನಷ್ಟು ತಂಪಾಯಿತು ಸಣ್ಣ ಮಂಜಿನನಿಗಳು ಬೀಳತೊಡಗಿದವು ಅವನ್ನು ಸರಿಸುತ್ತ ಊರ ಹೆಂಗಸರೆಲ್ಲರು ಕಟ್ಟೆಯ ನೀರಿನಲ್ಲಿ ಈಜಿಬಂದರು ಅವರಲ್ಲೊಬ್ಬ ಹೆಂಗಸು ಮಾದೇವನೊಂದಿಗೆ ಮಾತಿಗಿಳಿದಳು ‘ಏನಾಯ್ತು ನಿಂಗೆ ಮಾದ’ ‘ನನ್ಗೆ ದೆವ್ವ ಹಿಡ್ದದೆ’ ‘ದೆವ್ವನಾ’ ‘ಹೂ ಅದಕ್ಕೆ ನಾನು ಯಾವ್ ಹುಡ್ಗೀನು ಒಪ್ತಿಲ್ಲ,ಅದಕ್ಕೆ ನಾನು ಯಾರ್ನು ಸರಿಯಾಗಿ ಮಾತಾಡ್ಸ್ತ ಇಲ್ಲ’ ‘ಅಂಗಾದ್ರೆ ನೀನು ಮದ್ವೆ ಆಗಲ್ವ’ ‘ನಾನಾಗಲೇ ಮದ್ವೆ ಆಗಿದ್ದು ಗೊತ್ತಾಗಿಲ್ವ ನಿಂಗೆ ಅವರ್ಗೇನೋ ಗೊತ್ತಿಲ್ಲ ಅಂತ ಅನ್ಕೊಂಡಿದ್ದೆ ನಿನ್ಗು ಗೊತ್ತಿಲ್ವ’ ಎಂದೇಳಿ ಮಾದೇವ ಜೋರಾಗಿ ನಕ್ಕ ತಕ್ಷಣವೇ ಅವಳು ಮೊಕ ಸಿಂಡರಿಸಿಕೊಂಡದ್ದ ನೋಡಲಾಗದವನಂತೆ ‘ ಹೇಳ್ತೀನಿ ಕೇಳು,ಅವರು ತೋರುವ ಹುಡುಗಿಯರಂತಲ್ಲ ಅವ್ಳು ನಾಚಲ್ಲ ಹೆದ್ರಲ್ಲ ಎದುರು ನಿಂತು ಕಣ್ಣಲ್ಲಿ ಕಣ್ಣಿಟ್ಟು ಮಾತಾಡ್ತಾಳೆ,ಅವರಿಗೆ ಅವ್ಳ ಬಗ್ಗೆ ಗೊತ್ತಾಗೋದಿಲ್ಲ ಯಾಕಂದ್ರೆ ನಿನ್ನಂತೆ ಅವ್ರು ಕೇಳ್ಸ್ಕೊಳ್ಳೋ ಮನುಷ್ರಲ್ಲ ಒಂದ್ವೇಳೆ ಕೇಳಿಸ್ಕೊಂಡ್ರು ಅವರ್ಯಾರ್ಗು ಅವ್ಳು ಇಡ್ಸೊದಿಲ್ಲ,ಇಡಿಸುದ್ರು ಒಪ್ಪೋದೂ ಇಲ್ಲ , ಇನ್ನೊಂದ್ ತಿಳ್ಕೊ ಅವಳಂತ ಅವಳು ಇನ್ನೆಲ್ಲಿದಾಳು ಅವ್ರು ನಂಗೆ ಕಟ್ಟಾಕೆ’ಪ್ರತೀ ಮಾತನ್ನು ಹಿಡಿದೇಳಿ ಸುಮ್ಮನಾದ. ‘ಮುಂದೇನ್ಮಾಡ್ತೀಯ’ ಅವಳು ಕೇಳಿದಳು, ‘ಮುಂದೇನ್ಮಾಡ್ತೀಯಾ….ಕೇಳುತ್ತಲೇ ಇದ್ದವಳು ಅವನು ಏನನ್ನು ಹೇಳದ್ದ ಕಂಡು’ನೀನ್ ಹೇಳ್ದಿದ್ರೆ ಅಷ್ಟಾಯ್ತು ಹೋಗು’ಎಂದು ಮಿಕ್ಕ ಹೆಂಗಸರ ಕೂಡಿ ಈಜಿಹೋದಳು. ಅತ್ತು ಅತ್ತು ಲಕ್ಷಮ್ಮನ ಕಣ್ಣುಗಳು ಬತ್ತಿವೆ ಸರಿಯಾಗಿ ಊಟಮಾಡದೆ ನರಸಯ್ಯನ ಮಯ್ಯಿ ಒಣಗಿದೆ ಇದೆಲ್ಲವನ್ನ ನೋಡಲಾಗದೆ ನೆರೆಹೊರೆಯವರೆಲ್ಲ ಮಾದೇವನಿಗೆ ಬುದ್ದಿಹೇಳಲು ಮುಂದಾದರು ಒಂದು ವಾರವಾಗಿತ್ತು ಅವನು ಮನೆಬಿಟ್ಟು ಹೊಲದಲ್ಲೇ ಗುಡಿಸಲಾಕಿ ಅಲ್ಲೇ ಮಲಗುತ್ತಿದ್ದ ಊಟ ಎಲ್ಲಿ ಮಾಡಿತ್ತಿದನೋ ಅವನಿಗೇ ತಿಳಿಯದು, ಅಕ್ಕ ಪಕ್ಕದ ಜಮೀನಿನವರು ಕರೆದು ಕೊಟ್ಟರೆ ಸ್ವಲ್ಪ ತಿಂದು ಅವರು ಹೇಳುವ ಬುದ್ದಿಮಾತಿಗೆ ಪ್ರತಿಕ್ರಿಯಿಸದೇ ಅಲ್ಲಿಂದೆದ್ದು ಮತ್ತೆಲ್ಲಿಗೋ ಹೊರಟು ಬಿಡುತ್ತಿದ್ದ ಅದಾಗೇ ನಡೆಯುವಾಗ ಸಂಜೆ ಇಳಿಯುವ ಹೊತ್ತಿಗೆ ಮನೆಗೆ ಬಂದ ಮಾದೇವ ತೊಳೆಯದೇ ಇದ್ದ ಗುಡ್ಡೆ ಪಾತ್ರೆಗಳ ತೊಳೆದು ತೊಡೆಯದೇ ಇದ್ದ ರಾಸಿ ನಂಜ್ಗಸ ತೊಡೆದು ಒಲೆ ಅಚ್ಚಿದ, ಕನ್ಸಲ್ಲಿದ್ದೀನ ಅಂದುಕೊಂಡ ಲಕ್ಷಮ್ಮನಿಗೆ ನನಸೆಂದು ತೋರಿದಾಗ ಅಷ್ಟಿಷ್ಟಲ್ಲ ಅವಳು ಖುಷಿಪಟ್ಟಿದ್ದು, ನರಸಯ್ಯ ನೆಮ್ಮದಿಯ ಉಸಿರ ಬಿಟ್ಟಿದ್ದು ಕಾಲಿಯಂತಿದ್ದ ಮನೆಯ ಹಂಚಿನ ಸಂದಿಯಿಂದ ತೂರಿಬಂದಿದ್ದ ಬೇಳಕಲ್ಲಿ
ಕಥಾ ಸಂಗಾತಿ ನಿರ್ಧಾರ ವಿಜಯಾಮೋಹನ್ ನಿರ್ಧಾರ ಮನೇಲಿ ಇಂಗೆ ನನ್ನ ತಾಯಿಯ ಸಲುವಾಗಿ,ಒಬ್ಬರಿಂದ ಒಬ್ಬರಿಗೆ ಹುಟ್ಟಿಕೊಂಡಿದ್ದ ಮಾತುಗಳು, ಅವು ಬರೀ ಮಾತಾಗಿರದೆ, ನನ್ನ ಹೃದಯವನ್ನ ಘಾಸಿ ಮಾಡುವಂತೆ ಮಸಿಯುತ್ತಿದ್ದವು. ಅವು ಇಷ್ಟೊಂದು ವಿಕೋಪಕ್ಕೆ ತಿರುಗುತ್ತವೆ ಎಂದು, ನಾನು ಕೂಡ ಯಾವತ್ತು ಎಣಿಸಿರಲಿಲ್ಲ. ಇಂಗೆ ಬದುಕಿನ ಸಂದರ್ಭಗಳು ಒಂದೆ ಸಮವಾಗಿರುವುದಿಲ್ಲ, ಅಥವ ನಾವಂದುಕೊಂಡಂತೆ ಸುಲಭವಾಗೂ ಇರುವುದಿಲ್ಲ, ಈಗ ಮೂರು ದಿವಸದಿಂದ ಮನೇಲಿ, ನನ್ನ ಮತ್ತು ಅಮ್ಮನ ವಿರುದ್ದ ಮಾತನಾಡುತ್ತಿರುವ ದ್ವನಿಗಳು.ಎಗ್ಗು ಸಿಗ್ಗಿಲ್ಲದೆ ನನ್ನ ವಿರುದ್ದ ಎದ್ದು ನಿಂತಿರುವುದರಿಂದ. ನಾನು ಯಾರ ಜೊತೆ ಮಾತಾಡ್ದಂಗೆ ಇದ್ದು ಬಿಟ್ಟಿದ್ದೆ, ನೆನ್ನೆ ಸಂಜೇಲಿ ಮನೆಯ ಡೈನಿಂಗ್ ಟೇಬಲ್ಲಿನ ಮ್ಯಾಲಿದ್ದ. ನಾಕು ತುತ್ತು ಅನ್ನ ತಿಂದಿದ್ದು ಬಿಟ್ಟರೆ. ಬೆಳಿಗ್ಗೆಯಿಂದ ಒಂದು ತೊಟ್ಟು ರಸಾ ಅನ್ನೋದು ಇಳಿದಿರಲಿಲ್ಲ, ನೀನು ತಿನ್ನು ಬಾ ಅನ್ನುವವರೆಲ್ಲ, ಬಿಂಕವಾದ ಮುಷ್ಕರಕ್ಕೆ ತಿರುಗಿಕೊಂಡಿದ್ದರು. ಅಂಗಾಗೆ ನನ್ನೊಳಗೆ ನಾನಿರಲಾಗದೆ, ಕಾರು ತಗೊಂಡು ಸೀದ ಊರಿನ ಕಡೆ ಹೊರಟೆ, ಮೊದಲಿನಿಂದಲು ನಾನು ಹಸಿವು ತಡಕೊಂಡವನಲ್ಲ. ಒಂತರಾ ಹಾಳೂರ ದೆವ್ವಿನಂಗೆ ಉಂಡವನು,ಅಂತ ಹಸಿವನ್ನು ಅದುಮಿಕೊಂಡು. ಕಾರಿನಲ್ಲಿ ಬರುತ್ತಿದ್ದವನಿಗೆ.ನಮ್ಮೂರ ಹೋಬಳಿ ಹೆಡ್ಕ್ವಾರ್ಟರ್ ಸಿಕ್ಕಿತ್ತು, ಕೂಡ್ಲೆ ಬಸ್ಟಾಪಿನ ಪಕ್ಕ ಎರಡು ದೊಡ್ಡ ವಿಶಾಲವಾದ, ಕೆಂಖೇಸರಿ ಮರದ ಕೆಳಗೆ. ನನ್ನ ಕಾರನ್ನು ನಿಲ್ಲಿಸಿದೆ, ಸೀದಾ ಹೋಟೆಲ್ ಶಾರದಾ ಎಂಬಲ್ಲಿಗೆ ಹೋಗಿ ಕುಂತು ಕೊಂಡೆ, ಹೋಟೆಲ್ ಸರ್ವರ್ನತ್ತಿರ ಅಲ್ಲಿರುವ ತಿಂಡಿಗಳ ವಿವರವನ್ನು ತಿಳುಕೊಂಡು, ಒಳ್ಳೆದೊಂದು ದೋಸೆ ಕೊಡಪ್ಪ ಎಂದೇಳಿ ಕಾಯುತ್ತ ಕುಂತು ಕೊಂಡೆ. ಒಳಗೆ ಹೋದ ಸರ್ವರ್ ಎಷ್ಟೊತ್ತಾದರು ಬರಲೇ ಇಲ್ಲ, ನನಗೆ ಬರಬೇಕಿರುವ ದೋಸೆಗೋಸ್ಕರ ಕಾಯ್ತಾ ಕೂತಿದ್ದೆ, ಅಷ್ಟೊತ್ತಿಗಾಗಲೆ ನಮ್ಮೂರಿನ ವಾಡೆ ಮನೆಯ ನಾಗನೆಂಬೋನು ಬಂದು, ನನ್ನ ಪಕ್ಕಕ್ಕೆ ಕುಂತುಕೊೊಡು. ಯಣ ಯಾಕಣ ಇಂಗ್ ಬಡವಾಗಿದ್ದೀಯ? ಅಂದ, ಅವನ ಕೆನ್ನೆಗಳ ಮೇಲಿದ್ದ ಕಣ್ಣುಗಳು ರೋಡು ಪಕ್ಕದಲ್ಲಿನ ಗುಂಡಿಗಳಂತೆ ಒಳಕ್ಕೋಗಿದ್ದವು. ತಲೆ ಅಲ್ಲಲ್ಲಿ ಬಿಳಿ ಪುಕ್ಕದಂತೆ ತರಕಲಾಗಿ ಬೆಳ್ಳಗಾಗಿತ್ತು, ನನಗೊಂದು ಗಳಿಗೆ ಇವನ್ಯಾರಪ್ಪ ಅಂಬೊ ತಬ್ಬಿಬ್ಬಿನಲ್ಲಿ. ಅವನನ್ನೆ ಬಿಟ್ಟ ಕಣ್ಣು ಬಿಟ್ಟಂತೆ ದಿಟ್ಟಿಸಿ ನೋಡಿದೆ. ಯಾಕಣ ನನ್ ಗುರುತ್ ಸಿಗಲಿಲ್ಲವೆ? ನಾನ್ ಕಣಣ ವಾಡೆ ಮನೆ ನಾಗ ಅಂದ, ತಟಕ್ಕನೆ ನನ್ನ ಮನಸ್ಸಿಗೆ ಅರಿವಾಯಿತು, ನಾಗ ಚೆನ್ನಾಗಿದ್ದೀಯೇನೊ ಅಂದೆ ಕಕ್ಕುಲಾತಿಯಿಂದ. ಏನ್ ಚಂದ್ವೊ ಏನ್ ಚಾರ್ವೊ? ನಿಮ್ಮಂಗೆ ನೆರಳು ಮರೇಲಿ ನಾವು ಬದುಕೋರಲ್ಲ, ಸುಖುವಾಗಿ ಉಣ್ಣೋರಲ್ಲ, ಬೆಳಗೆದ್ರೆ ಬಿಸಿಲು ಬ್ಯಾಗೆ ಅನ್ನದಂಗೆ ಕೂಲಿ ಕೆರೀಬೇಕು ಹಿಟ್ಟುಣ್ಣಬೇಕು. ತಗಿಯಣ ನನ್ ಚೆಂದಾನ ಏನಂತ ಕೇಳ್ತ್ತಿಯಾ? ಎಂದು ಮುಖ ಕಿವುಚಿಕೊಂಡು ಹೇಳ್ದ. ನನಗು ಅವನನ್ನು ನೋಡಿ ಪೆಚ್ಚೆನಿಸಿತು, ಎಂಗೊ ಮನೇಲೆಲ್ಲಾ ಚೆನ್ನಾಗವರೇನಪ್ಪ ಅಂದೆ. ಊನಣ ಎಲ್ಲಾ ಚೆನ್ನಾಗವರೆ ಅಂದವನು ಬಾಯಿಗೆ ಬಿಡುವು ಕೊಡದೆ. ನಿಮ್ಮನೇಲಿ ಗಂಗಮ್ಮಜ್ಜಿ ಎಂಗ್ಯೆತಣ? ಅಂದ ಅವನು ತಟ್ಟೆಂದು ಕೇಳಿದ ಪ್ರಶ್ನೆಗೆ. ಯಾವುದನ್ನು ಸಲೀಸಾಗಿ ಹೇಳಲಾಗಲಿಲ್ಲ. ಯಾಕೆಂದರೆ ನನ್ನ ಮಾತಿಗೆ ಅವನು ಅವಕಾಶ ಕೊಡದಂಗೆ, ಕೂಡಲೆ ನೀವೆಂಗಾ ಇರ್ರಪ್ಪ, ಗಂಗಮ್ಮಜ್ಜೀನ್ ಮಾತ್ರ ಸೆಂದಾಕ್ ನೋಡ್ಕಳಪ್ಪ. ನಿಮಗೆಲ್ಲಾ ಹಿಟ್ಟು-ಬಟ್ಟೆ ಹೊಂಚಾಕಾಗಿ, ನೀವು ಈ ಮಟ್ಟಕ್ಕೆ ಬರಾಕಾಗಿ, ಆವಮ್ಮ ಬಾಳಾ ಕಷ್ಟ ಬಿದ್ದೈತೆ ಕಣ್ರಪ್ಪ. ಅವಮ್ಮನೆ ಇಲ್ಲದಿದ್ರೆ ನೀವು ಇಷ್ಟು ಮಾತ್ರಕ್ಕೆ ಬರ್ತಿರಲಿಲ್ಲ ಕಣಪ್ಪ, ಅಂತ ಅವನ ಜೇಬಲ್ಲಿದ್ದ ಮೋಟು ಬೀಡಿಯೊಂದನ್ನ ತಡಕಿ ತಡಕಿ ತಗದ, ಪಕ್ಕದ ಟೇಬಲ್ಲಿನವನ ಕಡೆಗೆ ತಿರುಗಿ. ಯಣ ಬೆಂಕಿ ಪಟ್ನ ಇದ್ರೆ ಕೊಡು ಅಂದ, ಇರೊ ನಾಗ ತಿಂಡಿ ತಿನ್ನಿವಂತೆ,ಬೀಡಿ ಆಮೇಲ್ ಸೇದೀವಿ ಅಂದೆ ಉನ್ನಾರವಾಗಿ. ಬ್ಯಾಡ್ ಕಣಣ ಮನೆಯಾಗೆ ಸಪ್ಪೆಸರು, ಬಿಸಿ ಮುದ್ದೆ ಉಂಡು ಬಂದಿದ್ದೀನಿ. ನನಗೆ ತಿಂಡಿ ಬ್ಯಾಡ ಕಣಪ್ಪ, ಒಂದ್ ಲೋಟ ಟೀ ಕುಡಿಯಾನ ಅಂತ ಒಳಕ್ ಬಂದೆ ನಿರ್ವಿಕಾರವಾಗಿ ಮಾತಾಡದ. ಅವನ ಆ ಮಾತಿಗೆ ನಾನು ಏನೊಂದು ಉತ್ತರಿಸಲಿಲ್ಲ, ಎಂಗೋ ನೀನ್ ಸಿಕ್ಕಿದ್ದಕ್ಕೆ ಬಾಳ ಖುಷಿಯಾತು ಅಂದ, ಯಾಕಪ್ಪ ನನ್ ಬಗ್ಗೆ ನಿನಗೆ ಅಂತಾ ಖುಷಿ ಮನಸ್ಸು ಉಬ್ಬಿಸಿಕೊಂಡು ಕೇಳಿದೆ, ಇನ್ನೇನಪ್ಪ ಎಲ್ಲೊ ಹೋಗಿ ಆ ಮಾಯಾ ನಗರದಲ್ಲಿ ಸೇರ್ಕಂಡಿದ್ದಿರಾ. ನಿಮ್ಮಂತವರ ಮುಖಾನ ನಾವು ವರ್ಷಾನುಗಟ್ಲೆ ನೋಡಾಕಾಗಲ್ಲ. ಯಾಕಂದ್ರೆ ನಮ್ಮವರು, ತಮ್ಮವರು, ಕುಲೊಸ್ತರು, ಅಣ್ಣತಮ್ಮಂದ್ರು, ಹಬ್ಬ ಹರಿದಿನಗಳು, ಅನ್ನುವಂತ ಕಕ್ಕುಲಾತಿ ಅಂಬೋದು. ನಮ್ಮನ್ನ ಬಾದ್ಸಂಗೆ ನಿಮ್ಮುನ್ನ ಬಾದ್ಸಲ್ಲ ಕಣಣ್ಣ, ಅದಿಕ್ಕೆ ನಾನು ಈ ಮಾತೇಳ್ದೆ. ನೀವೆಲ್ಲ ನೆರಳು ಮರೇಲಿರೋರು ಸುಖಪುತ್ರರು, ನಿಮಗೆ ದುಡ್ಡೊಂದಿದ್ರೆ ಸಾಕು, ನಿಮ್ಮನ್ನ ಯಾವುದು ಬಾದ್ಸಲ್ಲ ಅಂದ. ಇಷ್ಟು ಮಾತುಗಳನ್ನ ನನಗೆ ಅವಕಾಶವಿಲ್ಲದಂಗೆ. ಅವನೊಬ್ಬನೆ ಲೇವಡಿ ಮಾಡುತ್ತ ಮಾತಾಡ್ ಬುಟ್ಟ . ಮುಖ ಕಿವುಚಿಕೊಂಡಿತ್ತು. ನಾನು ಏನೊಂದು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅವನ ಹರಿತವಾದ ಮಾತುಗಳಿಗಾಗಿ, ನನ್ನ ಮುಖವು ನನಗರಿವಿಲ್ಲದಂಗೆ ಕಳಾ ಹೀನವಾಗಿತ್ತು. ಮುಂದಿದ್ದ ತಟ್ಟೆಯೊಳಗಿನ ದೋಸೆಯು ಕೂಡ, ಕಾವು ಕಳೆದುಕೊಂಡು ತಣ್ಣಗೆ ಮೈ ಚಾಚಿಕೊಂಡಿತ್ತು.ಅವನು ಸುತಾರಾಂ ನನಗೆ ತಿಂಡಿ ಬ್ಯಾಡವೇ ಬ್ಯಾಡಂದ, ನಾನು ದೋಸೆಯ ಚೂರನ್ನ ಮುರಿದು ಬಾಯಿಗಿಟ್ಟು ಕೊಂಡಾಗ. ಅದರ ರುಚಿಯೆ ಸರಿಯಾಗ್ಲಿಲ್ಲವೊ? ನನ್ ಬಾಯೆ ರುಚಿಕಳಕಂತೊ? ನಾಗನ ಬಾಯಿಂದ ಬಂದ ಎಲ್ಲ ಮಾತುಗಳು, ನನ್ನ ಮನಸ್ಸನ್ನ ಅಪ್ಪಟವಾಗಿ ಕುಕ್ಕಿದವು. ಅದು ಯಾಕೆಂದರೆ ಊರಲ್ಲಿ ನಮ್ಮ ದೊಡ್ಡಣ್ಣಯ್ಯನ ಹೊಲವೊಂದನ್ನ, ಈ ನಾಕೈದು ವರ್ಷದಿಂದ ಇದೇ ನಾಗನೆ ಕೋರಿಗೆ ಮಾಡುತ್ತಿದ್ದ. ಮೈಸೂರಿನಲ್ಲಿದ್ದ ನಮ್ಮಣ್ಣ, ಸರಿಯಾಗಿ ಬೆಳೆಯ ಖರ್ಚು ಕೊಡಲಾರದೆ, ಕಿತಾಪತಿ ಮಾಡ್ತ್ತಿದ್ನಂತೆ. ನೀನಿಷ್ಟೇನೆ ಬೆಳೆಯೋದು? ನಮಗಿಷ್ಟೇನೆ ಕೊಡೊದು? ಯಾಕೋ ಈಗೀಗ ಗಾಂಚಾಲಿ ಜಾಸ್ತಿ ಮಾಡ್ತ್ತೀಯ? ಎಂದು ಸಿಕ್ಕಾಗಲೆಲ್ಲ, ಏನಾದ್ರು ಒಂದನ್ನು ಕೊಂಕಿಸಿಕೊಂಡು ಬೈಯ್ಯುತ್ತಿರುತ್ತಾನಂತೆ. ನಾಗನಿಗು ಕೇಳಾತಂಕ ಕೇಳಿ ಬೇಜಾರಾಗಿತ್ತೆಂದು, ನಮ್ಮೂರಿನ ಜನ ಅಂಗು ಇಂಗು, ಇವನ ಮತ್ತು ನಮ್ಮಣ್ಣಯ್ಯನ ವಿಚಾರವನ್ನ ಹೇಳ್ತ್ತಾನೆ ಇದ್ರು. ಈ ಸಲವಂತು ನಾಗ ಮುಂಗಾರಿಗೂ ಮುಂಚೆಯೆ ಕಲ್ಲು ಮುಳ್ಳು ಹಾಯಿದು. ಹಸನು ಮಾಡಿಕೊಂಡಿದ್ದ ಹೊಲವನ್ನ, ನಮ್ಮಣ್ಣ ನಿಷ್ಟುರವಾಗಿ ಬಿಡಿಸಿ, ಬೇರೆಯವರಿಗೆ ಕೊಡಿಸಿದನೆಂದು, ನಾಗನಿಗೆ ಬಾಳ ಸಂಕಟವಾಗಿತ್ತು. ಇಂತದ್ದೊಂದು ವಿಷಯವನ್ನ, ನಮ್ಮೂರಿನ ಮನೆ ಪಕ್ಕದ ಎಂಕಟೇಶಿ ಎಂಬೋನು ಫೋನು ಮಾಡಿ. ಯಣ ನಿಮ್ಮಣ್ಣಯ್ಯ ವಾಡೆ ನಾಗನಿಗೆ. ಬಾರಿ ಅನ್ಯಾಯ ಮಾಡ್ಬುಟ್ಟ ಕಣಣ. ಅಂತ ಊರಲ್ಲಿ ನಡೆದ ವಿದ್ಯಮಾನವನ್ನೆಲ್ಲ. ಈಗ ಆರು ತಿಂಗಳ ಮುಂಚೆಯೆ ಹೇಳಿದ್ದು ನೆನಪಾಯಿತು. ಜೊತೆಗೆ ಇವತ್ತು ನನ್ನನ್ನ ಚುಚ್ಚಿ ಮಾತಾಡುತ್ತಿರುವ. ಮರ್ಮದ ಬಗ್ಗೆಯು ಅರಿವಾಗತೊಡಗಿತು. ಯಣ ಟೀ ಹೇಳಾನೊ? ಕಾಫಿ ಹೇಳಾನೊ? ಇನ್ನೊಂದು ಸಲ ವಾಡೆನಾಗನ ದ್ವನಿಗೆ, ನನ್ನ ತಟ್ಟೇಲಿದ್ದ ದೋಸೆ ಖಾಲಿಯಾಗಿ, ಕೊನೆ ಚೂರೊಂದು ಉಳುಕಂಡಿದ್ದು. ನನ್ನ ನಿಗಕ್ಕೆ ಬಂತು. ನಾನು ಅವನ ಪ್ರಶ್ನೆಗೆ ಉತ್ರ ಹೇಳಾಕ್ ಮುಂಚೆಯೆ. ಏ ರಾಜ ಒಳ್ಳೆವೆರೆಡು ಗಟ್ಟಿ ಟೀ ತಗಂಬಾರಲ, ಅನುತ ಕೂಗಿ ಅವನೆ ಆಡ್ರು ಮಾಡ್ ಬುಟ್ಟ. ನಾನೀಗ ಊರಿಗೆ ಬರುತ್ತಿರುವ ವಿಚಾರವನ್ನಾಗಲಿ. ಇವನ ಮತ್ತು ನಮ್ಮಣ್ಣಯ್ಯನ ಮದ್ಯೆ ನಡೆದಿರುವ ವಿಚಾರವನ್ನಾಗಲಿ. ಕೆದಕಲು ತಯಾರಿಲ್ಲದವನಾದೆ. ಕಳ್ಳನ ಮನಸ್ಸು ಉಳ್ಳುಳ್ಳಗೆ ಎಂಬಂತೆ, ಮತ್ತೆ ಮಾತಿಗೆ ಮಾತಿನ ಚರ್ಚೆ ಯಾಕೆಂದು. ಇಬ್ಬರು ಮೌನವಾಗಿ ಟೀ ಕುಡುದ್ವಿ. ಕೊನೆಗೆ ನನಗಿಂತ ಮುಂಚೆ ಎದ್ದೋಗಿ, ದೋಸೆಯ ಬಿಲ್ಲನ್ನು ಸೇರಿಸಿ, ಅವನೆ ದುಡ್ಡು ಕೊಟ್ಟು ಬಂದ. ಯಾಕೊ ನಾನ್ ಕೊಡುತ್ತಿರ್ಲಿಲ್ಲವೇನೊ, ನಿನ್ ಋಣ ನನಗ್ಯಾಕಪ್ಪ ಅಂದೆ. ಓ ಬಾರಪ್ಪ ಇದೇನ್ ಋಣ? ನೀವು ಬೆಂಗಳೂರಿನ್ ಜನವೆ ಇಂಗೆ, ಎಂಜಲು ಕೈಯ್ಯಲ್ಲಿ ಕಾಗೆ ಓಡುಸೊ ಜನ, ಎಂದು ಮುಖಕ್ಕೊಡದಂತೆ ಮಾತಾಡ್ಬುಟ್ಟ. ಅಲ್ಲು ಮೌನವಾಗಿದ್ದೆ, ಸರಿ ಊರಾಕ್ ಬರ್ತ್ತೀಯ ಕಾರ್ ತಂದಿದ್ದೀಯ? ಎಂದು ಮತ್ತೊಮ್ಮೆ ಮಾತು, ಕೆದಕಿದ ಹೌದೆಂದು ಮೌನವಾಗಿ ಗೋಣಾಡಿಸಿದೆ, ಸರಿ ಇರು ನಾನು ಬರ್ತ್ತೀನಿ, ಡಿಬ್ಬಯ್ಯನ ಅಂಗಡೀಲಿ ಎರಡು ಗೊಬ್ಬರದ ಚೀಲ ಮಡಗಿದ್ದೀನಿ, ತಗಂಡೋಗಾನ ಅನುತ, ಬಿರ ಬಿರನೆ ಕೆಳಗಡೆ, ಬೀದಿಯ ಕಡೆಗೆ ಇಳಿದು ಹೋದ. ನಾನು ಒಂದೆರೆಡೆಜ್ಜೆ ಮುಂದೆಯಿದ್ದ, ಕೆಂಕೇಸರಿ ಮರದ ಕೆಳಗೆ, ವಿಶಾಲವಾದ ನೆರಳಲ್ಲಿ ನಿಂತುಕೊಂಡು. ಜೇಬಲ್ಲಿದ್ದ ಸಿಗರೇಟೊಂದನ್ನ ಹಚ್ಚಿದೆ. ನಾನು ಓದಿದ, ಹಳೆಯ ಹೈಸ್ಕೂಲೊಂದರ ಗಾಯಗೊಂಡ ಗೋಡೆಗಳು, ಪಕ್ಕದಲ್ಲೆ ಹೊಸ ಕಟ್ಟಡಗಳ ಕೊಠಡಿಗಳು. ಅಪ್ಪನಿಗೆ ನಾನು ಐಸ್ಕೂಲು ಸೇರಲು ಇಷ್ಟವಿರಲಿಲ್ಲ, ಇದ್ದೂರಲ್ಲಿ ಓದಿದ್ದು ಸಾಕು ಬಿಡೊ, ಬೇರೂರಿನ ಇಸ್ಕೂಲಿನಲ್ಲಿ ಓದಿ, ಬೂದಿ ಉಯ್ಯಾದೇನು ಬ್ಯಾಡ ಬಿಡೊ?ಸುಮ್ಮನತ್ತ ಮನೇಲಿರೊ ಕುರಿಗಳನ್ನ ಮೇಯಿಸ್ ಬಾರಲ, ಅನುತ ಬೆಳಗ ಸಂಜೆ ಸಿಕ್ಕಾ ಪಟ್ಟೆ ತಕರಾರು ಮಾಡುತ್ತಿದ್ದ, ಓದ್ಲಿ ಬಿಡು ಓದಾ ಹುಡುಗರಿಗ್ಯಾಕೆ ಬಾದೆ ಇಕ್ತ್ತೀಯಾ? ನಿನ್ ಕುರಿ ಬೇಕಾದ್ರೆ ನಾನ್ ಮೇಸ್ತ್ತೀನಿ. ನಾವಂತು ಓದ್ಲಿಲ್ಲ, ಅವರಾದ್ರು ಓದ್ಲಿ ಅಂತೇಳಿದ ಅವ್ವ. ಅಪ್ಪ ನೆಚ್ಚಿಕೊಂಡಿದ್ದ ಹತ್ತು ಹದಿನೈದು ಕುರಿಗಳನ್ನ ಹೊಡುಕಂಡು. ಹೊಲಗಳ ಬದುಗಳಲ್ಲಿ ಮೇಯಿಸಿಕೊಂಡು ಬಂದು, ಮನೇಲಿ ಕಸ-ಮುಸುರೆ, ಹಿಟ್ಟು ಸಾರು, ಅಂತ ಸವೆದು-ಸವೆದು ಸೋತವಳು. ಅಪ್ಪ ದಿನವು ಬೆಳಗ್ಗೆ ಎದ್ದೋಗಿ, ಮರಿ ಮೇವು ತರೋದೊಂದು ಬಿಟ್ರೆ. ಇನ್ನು ಯಾವ ಇಳುವು ಬಳುವೆನ್ನುವ, ಬದುಕನ್ನ ಸೋಕಿಸಿಕೊಳ್ಳದಾದ. ಅಮ್ಮ ಹೊತ್ತೊತ್ತಿಗೆ ಮಾಡಿದ್ದು ಉಂಡುಂಡು, ಊರಾಚೆಯ ವಂಗೆ ತೋಪಿನೊಳಗೆ, ಇಸ್ಪಿಟಾಟ ಆಡಿ ಬರುತ್ತಿದ್ದ. ಅಂಗೆ ಸುಮ್ಮನೆ ಬರುತ್ತಿರಲಿಲ್ಲ. ಕೈಲಿದ್ದ ಪುಡಿಗಾಸನ್ನೆಲ್ಲ ಕಳುಕೊಂಡು ಬರುತ್ತಿದ್ದ, ಮನೆಗೆ ಬಂದವನು ತೆಪ್ಪಗೆ ಸುಮ್ಮನಿರಾಕಾಗ್ದೆ. ನಾನೆ ಬದ್ದನೆಂದು, ನಾನೆ ಈಮನೆಗೆ ಗನಂದಾರಿ ಯಜಮಾನನೆಂದು. ನೀವೇ ಅಪರಾದಿಗಳೆಂದು, ಮನೇಲಿ ಅಮ್ಮ ಮತ್ತೆ ನಮ್ಮಗಳ ಮ್ಯಾಲೆಲ್ಲ ಕೂಗಾಡ್ತಾ. ಮೈಮ್ಯಾಲೆ ದೇವ್ರು ಬಂದೋನಂಗೆ ಬಾದೆ ಬೀಳ್ತಿದ್ದ. ಇಂತ ತಾಳ್ಮೆ ಇಲ್ಲದ ಗಂಡನ ಕೂಟೆ. ಕಾಲವರಣೆ ಮಾಡಿದ ಅಮ್ಮನ. ಮತ್ತು ನಮ್ಮ ಮುಂದೆ ಅಪ್ಪ ಅಲ್ಲಿಗೆ ಸುಮ್ಮನಾಗದೆ. ಅಮ್ಮ ಬಾದೆ ಬಿದ್ದು ಮೇಯಿಸುತ್ತಿದ್ದ. ಒಂದೊಂದೆ ಕುರಿಗಳನ್ನು ಕದ್ದು ಮುಚ್ಚಿ ಮಾರಾಟಕ್ಕೆ ನಿಂತು ಬುಟ್ಟ.ಅಷ್ಟಾದರು ಅಮ್ಮ ಕೂಲಿನಾಲಿ ಮಾಡಿ ನಮ್ಮನ್ನು ಚೆನ್ನಾಗಿ ಓದಿಸಿದ್ದಳು. ಅವಳು ಆವತ್ತು ಓದಿಸಿದ ಫಲವೆ, ಅಣ್ಣ ಮೈಸೂರಿನಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದಾನೆ.ಅಲ್ಲೇ ಮನೆ ಗಿನೆ ಕಟ್ಟಿಸಿಕೊಂಡು ನನಗಿಂತ ಚೆನ್ನಾಗಿದ್ದಾನೆ. ನಾನು ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪ್ರಾದ್ಯಾಪಕನಾದೆ. ಇನ್ನೇನು ಬೇಕು ನನಗೆ ಒಳ್ಳೆ ಹೆಂಡತಿ ಮಕ್ಕಳು ಮನೆಯು ಕಟ್ಟಿಸಿದೆ ಮಗ ಈ ವರ್ಷದ ಸೆಮ್ಗಳನ್ನೆಲ್ಲ ಮುಗಿಸಿ, ಒಳ್ಳೆ ಕಂಪನಿಯಲ್ಲಿ ಕೆಲಸಕ್ಕೋಗುತ್ತಿದ್ದಾನೆ.ಮಗಳು ಈಗ ಪಿ ಯು ಸಿ ಗೆಂದು ಕಾಲೇಜಿಗೆ ಸೇರಿಕೊಂಡಳು, ಸದ್ಯಕ್ಕೆ ಯಾವುದೆ ಸಮಸ್ಯೆಯಿಲ್ಲ.ಆದರೆ ನನ್ನ ಹೃದಯಕ್ಕಂಟಿರುವಂತ ನೋವು, ಆ ನೋವನ್ನ ಯಾರು ಬಗೆ ಹರಿಸಲಾರರು. ಅದು ನನಗ್ ನಾನೆ ಪರಿಹರಸ್ಕಳ್ಬೇಕು, ನನ್ನನ್ನ ಹೆತ್ತು ಹೊತ್ತು, ಈ ಭೂಮಿಯೆಂಬ ತತ್ವಗಳ ಮ್ಯಾಲೆ, ಒಬ್ಬ ಮನುಷ್ಯನಾಗುವ ತನಕ ಹಪ-ಹಪಿಸಿದ್ದ ಅಮ್ಮನನ್ನು. ಬೆಂಗಳೂರಲ್ಲೆ ನನ್ನ ಮನೆಗೆ ಕರೆದುಕೊಂಡೋಗಿ ಹತ್ತು ವರ್ಷಗಳಾದವು. ಅಂಗೆ ಕರೆದುಕೊಂಡು ಹೋದ, ಎರಡು ವರ್ಷದ ತನಕ, ಅಮ್ಮ ಮತ್ತು ಹೆಂಡತಿ ಚೆನ್ನಾಗಿದ್ದವರು. ಆಮೇಲಾಮೇಲೆ ಸಣ್ಣ ಪುಟ್ಟದ್ದಕ್ಕೆಲ್ಲಾ, ದೊಡ್ಡ ಅಸಮಾದಾನಗಳ ಗೋಡೆ ಕಟ್ಟಿಕೊಳ್ಳಲಾರಂಬಿಸಿದ್ದರು, ನಾನು ಇಬ್ಬರ ಮಾತುಗಳಿಗು ಕಿವಿ ಕೊಡದಂಗೆ, ಯಾರ ವಿಚಾರವನ್ನು ಅತಿ ಮಾಡ್ಕಳದಂಗೆ ಕಾಲವರಣೆ ಮಾಡುತ್ತಿದ್ದವನು. ಇಷ್ಟುದಿನ ಯಾರಿಗು ಹೇಳ್ದಂಗೆ ಸುಮ್ಮನಿದ್ದೆ, ಯಾಕೆಂದರೆ ಇತ್ತೀಚೆಗಂತು ನಮ್ಮ ಅಮ್ಮನನ್ನು ಮನೆಯ ಸದಸ್ಯರು ವಿಪರೀತ ತಿರಸ್ಕರಿಸುತ್ತಿದ್ದರು. ಅಮ್ಮ ಏನೊಂದು ಮಾತನಾಡದೆ.ಮೌನವಾಗಿ ನುಂಗುತ್ತಿದ್ದಳು. ಇಂತದ್ದೊಂದು ನೋವನ್ನ ನುಂಗಿಕೊಂಡು ಬಂದಿರುವ ನನ್ನ ಮುಂದೆ. ಈ ನಾಗನ ಮುಲಾಜುಗಳಾಚಿಗೆನ ಮಾತುಗಳನ್ನ ಕೇಳುತ್ತಿದ್ದರೆ.ನಾನೆ ಮಹಾ ದೊಡ್ಡ ಅಪರಾಧಿಯೆನ್ನುವಂತಾಯಿತು.ನನ್ನ ಅಮ್ಮ ತಬ್ಬಲಿಯಾಗುವ
ಕಥಾ ಸಂಗಾತಿ ಡೊಂಕು ವಿಜಯಾಮೋಹನ್ : ಅಕ್ಕಯ್ಯನೆದೆಯೊಳಗೆ ಬಗೆ ಬಗೆದು ಬಿತ್ತಿದ್ದ ಚಿಂತೆಗಳೆಂಬ ತರಾವರಿ ಬೀಜಗಳು, ಅವು ಒಂದಲ್ಲ ಎರಡಲ್ಲ, ಮೂರು ಸಂಗತಿಗಳು ಮೊಳಕೆಯೊಡಕೊಂಡು. ಪೈರುಗಳಾಗಿ ಬೆಳೆಯುವಾಗ, ಅವುಗಳನ್ನ ಬುಡ ಸಮೇತ ಕಿತ್ತೆಸೆಯಲಾಗದೆ, ಅವಳೊಳಗವಳು ಖಿನ್ನಳಾಗುತ್ತ ಕುಂತು, ಇಂಗೆ ಗರ ಬಡದೋನಂಗೆ ಕುಂತಿರುವ ಮಗನನ್ನು ನೋಡುತ್ತಿದ್ದರೆ. ಬೆಳಗಾ ಸಂಜೇಲಿ ಆ ಚಿಂತೆಯ ಪೈರುಗಳಿಗೆ ನೋವೆಂಬ ನೀರು ಜಿನುಗುತ್ತಿತ್ತು. ಅವಳ ಮನೇಲಿ ಅವಳಿಗಿದ್ದದ್ದು ಒಂದೇ ಒಂದು ಗಂಡುಡಗ. ನೆಲಕ್ಕೆ ಬಿಟ್ಟರೆ ಎಲ್ಲಿ ಮಣ್ಣಾಗ್ತ್ತಾನೊ? ಅನ್ನುವಂತ ನಯಾ-ನಾಜೋಕಿನೊಳಗೆ ಸಾಕಿದ್ದಳು. ಅವನು ಅಂಗೆ ಅಷ್ಟೇ ಭಯ-ಭಕುತಿಯಿಂದ ಬೆಳೆದು ವಯಸ್ಸಿಗೆ ಬಂದು ನಿಂತ ಹುಡುಗ. ನಾನೆಂದರೆ ನನ್ನ ಇರುವೆಂದರೆ ಎಲ್ಲೂ ಮುಕ್ಕಾಗಬಾರದು. ಅನ್ನುವಂತ ಮಗನನ್ನ ಪಡೀಬೇಕಾದ್ರೆ. ಅಕ್ಕಯ್ಯ ಕೂಡ ಯಾವ ಜನುಮದಲ್ಲಿ? ಯಾವ್ದೇವ್ರಿಗೆ? ಅದೆಂತ ಹೂವ್ವಾ ಮುಡಿಸಿದ್ಲೋ ಏನೊ? ಅಂತ ಮಗನ ಹೆಸರು ಪ್ರಸನ್ನ, ಹೆಸರಿಗೆ ಸರಿಯಾಗಿ ತೂಕವಾದ ಹುಡುಗ, ಅಂತವನು ಕೂಡ ಅವಳ ಜೊತೇಲಿ ಹಿಟ್ಟು ನೀರು, ನಿದ್ದೆ ನಿಲುವು ಅನ್ನುವುದನ್ನೆ ಬಿಟ್ಟು. ಚಿಂತೆಯ ಸಂತೇಲಿ ಕುಂತು- ಮಕನಾಗೆ ಕುಂತು ಬಿಡಂಗಾದ, ಅದು ಯಾಕೆನ್ನುವ ಪ್ರಶ್ನೆಗಳು, ಅಕ್ಕಯ್ಯ ಮತ್ತು ಪ್ರಸನ್ನನ ಎದೆಯೊಳಗೆ ಗುಂಗೆ ಹುಳುವಾಗಿ ಕೊರಿಯಾಕಿಡಿದವು. ಬ್ಯಾರೆಯವರಿಗೆ ಅಷ್ಟಾಗಿ ಗೊತ್ತಾಗ್ಲಿಲ್ಲ, ಪ್ರಸನ್ನ ಹುಟ್ಟಿ-ಬೆಳೆದ ಇಷ್ಟೊರುಷದಲ್ಲಿ, ಯಾರ್ ತಂಟಿಗು ಹೋಗದ ಹುಡುಗ. ಈಗ ಐದಾರು ವರ್ಷದಿಂದ ಈಚೆಗೆ, ಅದು ಯಂತ ಶನಿ ಎಗಲೇರಿಬಿಡತೊ ಏನೊ? ಅವನು ಮಾಡದ ತಪ್ಪುಗಳೆಲ್ಲ ಅವನಿಗೆ ತಿರುಗಿಸಿ ಛಾಟಿಯಂತೆ ಬೀಸಾಕಿಡದ್ವು. ಅಂಗಾಗೆ ಅವನು ಕುಂತು ಮಕನಾಗೆ ಕುಂತಿದ್ದ. ಅವನ ಮುಂದೆ ಬಾಯಿ ಬಿಟ್ಟುಕೊಂಡು ಉರಿಯುತ್ತಿರುವ ಸೂರ್ಯನು ಇದ್ದ. ಕವ-ಕವನೆಂದು ಕಣ್ಣು ಮುಚ್ಚಿಕೊಂಡು ಸುರಿಯುತ್ತಿರುವ ಕತ್ಲೇನು ಇತ್ತು. ಆದರೆ ಇದ್ಯಾವುದುನ್ನು ನಿಗಾ ಮಾಡಲಾರದಂತ ಮನಸ್ಸಿನೊಳಗೆ ಮನಸ್ಸಿಲ್ಲದ ಪ್ರಸನ್ನನೆಂಬುವನನ್ನು.ನೋಡಿದ-ಮಕನಾಗಿ ನೋಡುತ್ತಿರುವ ಅಕ್ಕಯ್ಯನ ಎದೆಯೊಳಗೆ. ಆ ಚಿಂತೆಯ ಪೈರುಗಳು ತರಾವರಿಯಾಗಿ ತೂಗಾಡುತ್ತಿದ್ದವು. ಇದ್ಯಾಕಲ ಪ್ರಸನ್ನ ಕೆಲಸಿಲ್ಲ ಕಾರ್ಯವಿಲ್ಲ, ಬರಿ ಕುಂತು ಮಕನಾಗೆ ಸುಮ್ಮನೆ ಕುಂತಿದ್ದೆ ಆಯಿತಲ್ಲಲೆ? ಎಂದು ಆ ಪಕ್ಕದ ಮನೆ ಮಲ್ಲೇಶನ ಮಾತೆನ್ನುವುದು. ಆಗತಾನೆ ಅವನ ಮೊಣಕಾಲಿನವರೆಗು ಮೊಡಚಿಕೊಂಡಿದ್ದ ಮಾಸಲು ಲುಂಗಿಯನ್ನ. ಕಾಲಿನ ಪಾದದವರೆಗೆ ಇಳಿಯ ಬಿಟ್ಟು, ಅವನ ಎದೆ ತಳ್ಳಿ ಬಂದ ದೊಡ್ಡುಸಿರು ಕಕ್ಕಿ, ಆ ಕಲ್ಲು ಬೆಂಚಿನ ಮ್ಯಾಲೆ ಕುಂಡಿ ಊರಿದ್ದ ಪ್ರಸನ್ನನ ಕಿವಿಗೆ ತಾಕತು. ರಭ-ರಭನೆ ಯಾರೊ ಕೆನ್ನೆಗೆರಡು ಬಾರಿಸಿದಂತಾಯಿತು. ಲೇ ನಾನ್ ನಮ್ಮನೆ ಬಾಗ್ಲಲ್ಲಿ ಕುಂತಿದ್ರೆ ನಿನಗೇನಲ ಇಕ್ಕಟ್ಟು? ಏನ್ ನಿನ್ ಪಂಚೆ ಬಾಗ್ಲಿಗೇನಾರ ಬಂದು ಕುಂತಿದ್ದಿನೇನಲ? ಪ್ರಸನ್ನನ ಬಾಯೊಳಗೆ ಬಂದ ಮಾತು ಅಷ್ಟೇ ಗಡುಸಾಗಿ ಇತ್ತು. ಎಂದು ಯಾವತ್ತು ಅವನ ಬಾಯಲ್ಲಿ ಅಂತ ಗಡುಸಿನ ಮಾತುಗಳೆ ಬರ್ತಿರಲಿಲ್ಲ. ಕೆಲಸಿಲ್ಲ-ಕಾರ್ಯವಿಲ್ಲದಂಗೆ ಕುಂತುಬಿಟ್ಟಲ್ಲೊ? ಎಂದ ಪಕ್ಕದ ಮನೆ ಮಲ್ಲೇಶನ ಮಾತು ದಿಟದಲ್ಲಿ ದಿಟವಾದ ಸುಳ್ಳು. ಯಾಕೆಂದರೆ ಪ್ರಸನ್ನನನ್ನು ಹುಡುಗನಿಂದಲು ಹೆತ್ತು ಹೊತ್ತು ಸಾಕಿರುವ. ನಮ್ಮ ಅಕ್ಕಯ್ಯನಿಗೆ ಗೊತ್ತು. ಯಾವತ್ತು ಅವನು ಕೆಲಸ ಕಾರ್ಯವಿಲ್ಲದೆ ಅಷ್ಟು ಸಲೀಸಾಗಿ ಹಿಟ್ಟುಂಡ ಹುಡುಗನೆ ಅಲ್ಲ. ಅಂತ ಸೊಂಬೇರಿ ಊಟವೆನ್ನುವುದು ನನ್ ಮನಸ್ಸಿಗೆ ಹಿಡಿಯೋದು ಇಲ್ಲ, ನನ್ ಮೈಗೆ ದಕ್ಕೋದು ಇಲ್ಲ, ಎಂದು ಸದಾ ಹೇಳುತ್ತಿದ್ದ ಪ್ರಸನ್ನ. ಬೆಳಕರಿದು ಎದ್ದರೆ ಸಾಕು ಏನಾದರೊಂದು ಕೆಲಸವನ್ನ ಹುಡುಕೇ ಹುಡುಕ್ತ್ತಿದ್ದ. ಅಕಸ್ಮಾತ್ತಾಗಿ ಆವತ್ತೇನು ಕೆಲಸಿಲ್ಲವೆಂದ್ರೆ ನಿಂತಿರೊ ಕಂಬಾನಾದ್ರು ಸುತ್ತುತೀನಿ ಬಿಡಮ್ಮ, ಅನ್ನುವಂತ ಉಮ್ಮಸ್ಸಿನ ಹುಡುಗ. ಅಂತವನು ಇದ್ದೂರಿನ ಏಳನೇ ಕ್ಲಾಸಿನ್ವರೆಗು ಅಷ್ಟೇ ಚೆನ್ನಾಗಿ ಓದಿ, ಪಕ್ಕದೂರಿನ ಮುದ್ದೇನಹಳ್ಳಿ ಐಸ್ಕೂಲಿನಲ್ಲು, ನೂರಕ್ಕೆ ಎಂಬತ್ತು ಪರ್ಸೆಂಟು ನಂಬರ್ ತಗದು. ಎಸ್.ಎಸ್.ಎಲ್.ಸಿ ಪಾಸ್ ಮಾಡಿಕೊಂಡಿದ್ದ. ಜೊತೆಗೆ ಮನೆಯ ದನಕರುಗಳನ್ನ ಮೇಯಿಸುತ್ತಿದ್ದ. ಸೊಪ್ಪು-ಸೌದೆ ಹುಲ್ಲು ನೀರೆನ್ನುವ ಉಸಿರುಳಿಯುವ ಆದಾರಗಳನ್ನು ಆ ಮನೆಗಾಗಿ ಹೊಂಚಿಕೊಡುತ್ತಿದ್ದ. ಅಂಗೆ ಬ್ಯಾಸಿಗೆ ರಜ ದಸರ ರಜೆಯೊಳಗೆಲ್ಲ, ಯಾವ ನೆಂಟ್ರು ಗಿಂಟ್ರು ಊರುಗಳಿಗೆ ಹೋಗ್ದಂಗೆ. ತೆಂಗಿನ ತೋಟಗಳಲ್ಲಿ ಕಾಯಿ ಕೀಳುವ ನಿಪುಣನಾಗಿದ್ದ. ಯಾರು ಎಷ್ಟೊತ್ತಿನಲ್ಲಿ ಕರದ್ರು ಹೋಗಿ,ಕಾಯಿಗಳನ್ನು ಕಿತ್ತುಕೊಡುತ್ತಿದ್ದ ಮಗನನ್ನು ಕಂಡು. ಲೇ ನೀನು ಬರಿ ಕಾಯಿ ಕೀಳದ್ರಲ್ಲೆ ಕಾಲ ನೂಕ್ಬ್ಯಾಡವೊ? ಮುಂದಕ್ಕೆ ಇನ್ನೇನಾದ್ರು ದೊಡ್ದಾಗಿ ಓದ್ಬೇಕ್ ಕಣಪ್ಪ ಎಂದು ಕೊರಗುತ್ತಿದ್ದ. ಅಮ್ಮನ ಮಾತನ್ನು ಅಂಗೆ ಮನಸ್ಸಿಗಾಕಿಕೊಂಡ. ಅವನ ಜೊತೆಗಾರರು ಮೇಷ್ಟುç ಟ್ರೆöನಿಂಗ್ ಮುಗಿಸಿಕೊಂಡಿದ್ದವರು ಕೆಲಸಕ್ಕು ಸೇರ್ ಕಂಡ್ರು, ನಾನು ಸುಮ್ಮನಿದ್ರೆ ಆಗಲ್ಲ? ಇಂತಾ ಮೇಷ್ಟ್ರು ಆಗ್ಬೇಕೆಂಬ ಛಲ ಅವನಲ್ಲು ಬಂತು, ಎರಡೊರುಷ ಸಿ.ಪಿ.ಎಡ್ ಟ್ರೈನಿಂಗ್ ಅನ್ನೊದನ್ನ ಮುಗಿಸಿಕೊಂಡು ಬಂದ, ಬರಿ ಒಂದರಿಂದೆ ಒಂದು ಮೂರು ಹೆಣ್ಣುಮಕ್ಕಳನ್ನೆ ಸಾಕಿ ಬೆಳಸಿದ್ದ. ಅವನ ಸ್ವಾದ್ರಮಾವ ಸರ್ವೆ ಅಪೀಸೊಂದರಲ್ಲಿ ಕೆಲಸದಲ್ಲಿದ್ದವನು. ಅವನ ಕಣ್ಣೇಂಬೋವು ಜನವನ್ನಾಗ್ಲಿ-ನೆಲವನ್ನಾಗ್ಲಿ ಅಷ್ಟಾಗಿ ನೋಡ್ತಿರಲಿಲ್ಲ. ಅಂತ ದಿಮಾಕಿನ ಮಾವನ ಮುಂದೆ, ಅಣ್ಣಯ್ಯ ನಿಮ್ಮುಡುಗುರು ಮಾತ್ರ ಜಾಸ್ತಿ-ಜಾಸ್ತಿ ಓದ್ಕಂತಾ ಅವರೆ. ನನ್ನುಡುಗನ ಬದುಕು ಬರಿ ಕೂಲಿ ನಾಲಿ ಅನ್ನೋದರಲ್ಲೆ ಮುಗಿಬೇಕಾ? ಎಂದು ಯಾವಾಗ್ಲು ಮುಖಾ ಕಿವುಚಿಕೊಂಡು ಮಾತಾಡ್ತಿದ್ದ. ಪ್ರಸನ್ನನ ಅಮ್ಮನ ಮಾತಿಗೆ. ಅಣ್ಣನೆಂಬೋನು ಕಟ್ಟು ಬಿದ್ದು. ಒಳ್ಳೆ ಪ್ರವೇಟ್ ಇಸ್ಕೂಲಿಗೆ ಪ್ರಸನ್ನನನ್ನು ಪಿ.ಟಿ ಮೇಷ್ಟ್ರಾಗಿ ಕೆಲಸಕ್ಕೆ ಸೇರಿಸಿಬಿಟ್ಟಿದ್ದ. ಅಂತ ಇಸ್ಕೂಲು ಮುಂದೊಂದು ದಿನ ಪರಮ್ನೆಂಟು ಸಂಬಳ ಕೊಡುತ್ತೆ ಕಣಮ್ಮ, ಎಂದು ನೆಚ್ಚಿಕೊಂಡಿದ್ದ ಪ್ರಸನ್ನನ ಭರವಸೆಯ ಮಾತಿಗೆ. ಅವಳು ನಮ್ಮಕ್ಕಯ್ಯನಿಗಿದ್ದ ಬಂಗಾರ್ದಂತ ಅರ್ದ ಎಕರೆ ಹೊಲಾನು ಮಾರಿ. ಲಕ್ಷದ ಇಪ್ಪತ್ತು ಸಾವಿರ ದುಡ್ಡು ಕಟ್ಟೀಳು. ಇನ್ನೂರರಿಂದ ಇನ್ನೂರೆಂಬತ್ತರವರೆಗು ಸ್ಟ್ರೆಂತ್ ಇದ್ದ ಮಕ್ಕಳ ಇಸ್ಕೂಲಿನೊಳಗೆ. ಮೇಷ್ಟ್ರು ಮೇಡಮ್ಗಳು ಇವನಿಗಿಂತ ಒಂದು ನಾಕೆಜ್ಜೆ ಲೆವಲ್ಲಾಗಿದ್ದವರು. ಇವನು ದಿನಾ ತೊಡೊ ಬಟ್ಟೆಯಿಂದ ಹಿಡುಕೊಂಡು, ಅವನು ಮಧ್ಯಾಹ್ನ ತಿನ್ನೊ ಊಟದ್ವರ್ಗು, ಒಂತರ ವಿಚಿತ್ರವಾಗಿ ನೋಡ್ತಿದ್ರು. ಪ್ರಸನ್ನ ಇಂತೊರ್ ಬಗ್ಗೆ ಯಾವತ್ತು ತಲೆ ಕೆಡಸಿಕೊಂಬೊ ಹುಡುಗನಾಗಿರಲಿಲ್ಲ, ಅವನಾಯಿತು ಅವನ ಇಸ್ಕೂಲಿನ ಬದುಕಾಯಿತು ಅನ್ನಂಗಿದ್ದವನು. ಇವನು ಅಲ್ಲಿ ಕೆಲಸಕ್ಕೆ ಸೇರಿಕೊಂಡ ಮೇಲೆ ಇಸ್ಕೂಲಿನ ಕಾಂಪೋಂಡು, ಬಾತ್ರೂಮುಗಳು, ತರಗತಿ ರೂಮುಗಳನ್ನ ನಿಗಿ ನಿಗಿಯನ್ನಂಗೆ ಸ್ವಚ್ಚವಾಗಿಟ್ಟುಕೊಂಡ. ಬರಿ ಡ್ರಿಲ್ಲು, ಕಬ್ಬಡಿ, ಕೊಕ್ಕೊ, ಎಂಬ ಆಟಗಳಲ್ಲಿ ಕಾಲ ಕಳೆಯದೆ. ಅವುಗಳ ಜೊತೆಗೆ ಎಂಟರಿಂದ ಹತ್ತನೆ ತರಗತಿ ಹುಡುಗುರುಗೆ, ಹಿಂದಿ ಪಾಠವನ್ನ ಮಾಡ್ತಿದ್ದ. ಹುಡುಗುರು ತೊಡೊ ಯೂನಿ ಫಾರಮ್ಮಿನಿಂದ ಹಿಡುಕೊಂಡು. ಇಡಿ ಹುಡುಗರ ನಯಾ-ನಾಜೋಕು, ಶಿಸ್ತು ಅನ್ನೋದನ್ನ ಕಣ್ಣಾಗೆ ಕಣ್ಣಿಟ್ಟು ನೋಡ್ಕಳತಿದ್ದ. ಅವತ್ತೇನಾದ್ರು ರೀತಿ ನೀತಿಯ ಬದುಕು, ಭೋದನೆ, ಅನ್ನೋದು ದಕ್ಕಿದರೆ ಅಪಾರ್ವಾಗಿ ಆನಂದ ಪಡತಿದ್ದ. ಒಟ್ಟಿನಲ್ಲಿ ಪ್ರಸನ್ಮೇಷ್ಟ್ರಿಗೆ ಇಸ್ಕೂಲೆ ಸರ್ವಸ್ವವಾಗಿತ್ತು,ಮ್ಯಾನೇಜ್ಮೆಂಟಿನವರು ಕೂಡ ಇವನ್ ಕಂಡ್ರೆ ಒಳ್ಳೇ ಮೇಷ್ಟ್ರು ಸಿಕ್ಕೀರು ಅನ್ನೊ ಖುಷಿಯಲ್ಲಿದ್ರು. ಇಂಗಾಗೆ ಇರ್ಬೇಕು, ಆ ಇಸ್ಕೂಲಿನಲ್ಲಿದ್ದ ಒಂದಿಬ್ರು ಮೇಷ್ಟ್ಗರುಗಳಿಗೆ ಇವನ್ ಮ್ಯಾಲೆ ಯಾವಾಗ್ಲು ಒಂದು ವಕ್ರದ ಕಣ್ಣು ಬಿಟ್ಟಿದ್ದರು, ಅವರು ಕನ್ನಡ ಮತ್ತೆ ಸಮಾಜ ಪಾಠ ಮಾಡೊ ಮೇಷ್ಟ್ರುಗಳು, ಬೆಲ್ಲಿಗೆ ಸರಿಯಾಗಿ ಬರ್ತ್ತಿದ್ದವರು,ಬಿಲ್ಲುಗಳು ಯಾವಾಗ ಆಗ್ತ್ತಾವಂತೊ? ಎಂದು ಲೆಕ್ಕಾಚಾರದಲ್ಲಿದ್ದ ಆ ಇಬ್ಬರಿಗು. ಪ್ರಸನ್ನನನ್ನು ಕಂಡರೆ ಮೈಯ್ಯಿ ಮನಸ್ಸುಗಳು ನವೆಯಾಗತೊಡಗಿದವು. ಪ್ರಸನ್ನ ಇಸ್ಕೂಲನ್ನ ಕುರುತು, ಪ್ರಗತಿಯನ್ನ ಕುರುತು, ಮಕ್ಕಳನ್ನ ಕುರುತು,ಮಾತಾಡಕಂತೇನಾರ ಬಾಯಿತಗದ್ರೆ, ಓಹೊ ಇವನೊಬ್ನೆ ದೇಶ ಉದ್ದಾರ ಮಾಡಂಗ್ ಕಾಣ್ತಾನಲ, ಓಹೊ ಇವನಿಂದಾನೆ ಇಸ್ಕೂಲ್ ನಡಿತಾದೇನೊ? ಇವನಿಲ್ಲದಿದ್ರೆ ಸ್ಕೂಲೇ ಇಲ್ಲವೇನೊ? ಅಂಬಂಗಾಡ್ತಾನ್ ಕಣ್ರಿ. ಎಂದು ಸದಾ ಪ್ರಸನ್ನನ ಬೆನ್ನಿಂದೆ ಬೈಕಳತಿದ್ರು. ಈ ಕಾಲ ಈ ಜನ ಇರೋದೆ ಇಂಗೆ, ಮುಂದುವರಿಯೋರನ್ನ ಕಂಡ್ರೆ ಮೂಗು ಮುರಿತಾರೆ. ಪ್ರಸನ್ನ ಇಂತ ಯಾವ ಅಸೂಯೆಗಳಿಗು ತಲೆ ಕೆಡಿಸಿಕೊಂಡವನಲ್ಲ. ಅವರ ಇಸ್ಕೂಲಿನೊಳಗೆ ಕನ್ನಡ ಪಾಠ ಮಾಡ್ತಿರೊ ಮೇಷ್ಟ್ರು ಹರೀಶನೆನ್ನುವವನು, ದಿನ ಸಂಜೆ ಸ್ಪೆಷಲ್ ಕ್ಲಾಸ್ ಮಾಡ್ತಿದ್ದ. ಅಲ್ಲಿ ರಮ್ಯ ಎಂಬೊ ಒಂಬತ್ತನೇ ತರಗತಿ ಹುಡುಗಿ ಜೊತೆ, ಕದ್ದು ಮುಚ್ಚಿ ಚೆಲ್ಲಾಟ್ವಾಡ್ತ್ತಾನೆ ಅನ್ನುವ ಸುದ್ದಿ ಗೊತ್ತಾಗಿ. ಸುಮ್ಮನಿರಲಾರ್ದ ಪ್ರಸನ್ನ ಒಂದಿನ ಆ ಹುಡುಗೀನ ಪ್ರವೇಟಾಗಿ ಕರ್ದು ಬುದ್ದಿ ಮಾತೇಳ್ದ. ಅಲ್ಲೆ ನೋಡ್ರಿ ಪ್ರಸನ್ನನಿಗೆ ಬಲವಾದ ಪರ್ಪಾಟಾಗಿದ್ದು, ಮಾರ್ನೆ ದಿನ ಹುಡುಗಿಯ ಅಪ್ಪ ಅಮ್ಮ, ಊರಿನ್ ಜನವೆಲ್ಲ ಇಸ್ಕೂಲಿನ್ ಕಾಂಪೋಂಡಿನ ತುಂಬ ಜಮಾಯಿಸಿ ಬುಟ್ರು. ಹುಡುಗಿಯ ಅಪ್ಪ ಪ್ರಾಣಿ ಕುಲದವನಿರ್ಬೇಕು. ಪ್ರಸನ್ನನ ಕೊಳ್ಳು ಪಟ್ಟಿ ಹಿಡುಕೊಂಡು, ಏನಲೇ ಮುಠ್ಠಾಳ, ನನ ಮಗಳನ್ನ ರೂಮಿಗೆ ಕರದು ಕೈ ಮೈ ಮುಟ್ಟಿಕೊಂಡು, ಕೆಡಸಾಕ್ ನೋಡ್ದಂತಲ್ಲಲೇ? ಎಂದು ಹಿಗ್ಗಾ-ಮುಗ್ಗಾ ಚಚ್ಚಿ ಬಿಟ್ಟ,ಯವ್ವ ಯವ್ವ ಇಂತ ಸುಳ್ಳೇಳಿರುವ ಮೊಗುವಿನ ಮಾತನ್ನೇ ಇಸ್ಕೂಲಿನವರು, ಊರ್ನವರು, ಅಧಿಕಾರಿಗಳು, ಎಲ್ಲಾರು ನಂಬಿಬಿಟ್ಟ್ರು. ಅವನು ಯಾರ್ ಕಡೆ ಕೈ ಮುಗುದು ಎಂಗ್ ಬೇಡ್ಕಂಡ್ರು ಯಾರು ನಂಬಲಿಲ್ಲ. ಅದೇ ದಿವಸ ಬಿ.ಇ.ಓ ಸಾಯಬ್ರು ಮ್ಯಾನೇಜ್ ಮೆಂಟಿನವರು ಸೇರ್ಕಂಡು. ಪ್ರಸನ್ನನ್ನು ಕೆಲಸದಿಂದ ಕಿತ್ತೇ ಬುಟ್ರು. ಪೇಪರ್ನವರು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ. ಮೇಷ್ಟ್ತಿಗೆ ಗೂಸ ಅಂತ ವರ್ಣನೆಯಾಗಿ ಬರ್ದೇ ಬುಟ್ರು. ಅವನು ಮಾಡದೇ ಇರೋ ತಪ್ಪಿಗೆ ಅಪಾರ್ವಾದ ಅವಮಾನ ಸೋಲು, ಯಾರಿಗೆ ತಾನೆ ಮನಸ್ಸಿನೊಳಗೆ ಮನಸಿದ್ದಾತು? ಅಂಗಾಗೆ ಹಿಟ್ಟು ನೀರು ಬಿಟ್ಟು ಮಕ್ಕೊಂದು ಬಟ್ಟೆ ಹೊದ್ದುಕೊಂಡು ಕುಂತುಬುಟ್ಟ. ಆವತ್ತು ಅಕ್ಕಯ್ಯನ ದುಃಖ ಕೇಳೊವರಿರಲಿಲ್ಲ. ಯಾವ್ ಬಂದು ಬಳಗವು ಹತ್ತಿರಕ್ಕೆ ಬಂದಿರ್ಲಿಲ್ಲ. ಅದೇ ನೆಲ ಕಾಣ್ದಿರೊ ಸ್ವಾದ್ರ ಮಾವನ ಮುಂದೆ. ಅನ್ಯಾಯವಾದ ಇಂತ ಕಥೆನ ಹೇಳ್ಕಂಡು, ಅಮ್ಮ-ಮಗ ಗಳ-ಗಳನೆ ಅತ್ತು ಬುಟ್ರು. ಇನ್ನು ಕುಂತು-ಕಡೇನೆ ಕುಂತು ಬುಟ್ಟು, ತಲೆ ಕೆಡಿಸಿಕೊಂಡ ಪ್ರಸನ್ನ ನನ್ನ ಕೈಯಿಗೆ ಸಿಗದಂಗಾಗ್ ಬುಡತ್ತಾನೆ. ಎಂದ ಅಕ್ಕಯ್ಯನ ಸಂಕಟವನ್ನ ಅರ್ಥೈಸಿಕೊಂಡ ಅವಳ ಅಣ್ಣನಾದವನು. ಬೆಂಗಳೂರಿನ ಯಾವುದೊ ಪ್ಯಾಕ್ಟ್ರೀಲಿ ಲೆಕ್ಕ ಬರೆಯೊ ಕೆಲಸ ಕೊಡಿಸಿದ್ದ. ಅವನ ಹೆಂಡತಿ ಕಡೆಯ ನೆಂಟರ ಮನೇಲಿ ವಾಸವಿರಲಿ ಅಂತ ಬಿಟ್ಟುಬಂದ. ಅಕ್ಕಯ್ಯನಿಗು ನಿರಾಳವಾಗಿತ್ತು, ಅವಳು ಎಂಗಾದ್ರು ಮಾಡಿ ಅವನನ್ನು ಒಂದು ದಡಾ ಸೇರಿಸುವ ಹಂಬಲದವಳು. ಅಂತದ್ದೊಂದು ಪ್ಯಾಕ್ಟ್ರಿ ಕೆಲಸಕ್ಕೆ ಸೇರ್ಕಂಡ ಮ್ಯಾಲೆ, ಪ್ರಸನ್ನ ದಿನ ಕಳದಂಗ್ ಕಳದಂಗೆ ದುಃಖವೆಂಬ ದೂಳಿಡುಕೊಂಡಿದ್ದ ಮನಸನ್ನ, ಕಾಲವೆಂಬ ಕಡ್ಡಿಯೊಳಗೆ ಕೊಡವಿ ಕೊಂಡ. ಹೊಸ ಬೆಂಗಳೂರು, ಹೊಸ ಕೆಲಸ, ಹೊಸ ಅಕ್ಕ ಬಾವನ ಮನೆ, ಹೊಸ ಹೊಸ ನೂರಾರು ತರಾವರಿ ಮಖಗಳು, ಊರಿಂದ ಬರುವಾಗ ಬಸ್ಸಿನೊಳಗೆ ಜೊತೇಲಿ ಕುಂತಿದ್ದ ಮಾವ, ಅಲ್ಲವಲ ನಿನ್ ಮಖ ನೀನ್ ತೊಳಕಳಾದ್ ಬುಟ್ಟು, ಆ ಹುಡುಗಿ ಮಖ ಯಾಕ್ ತೊಳಿಯಾಕೋಗಿದ್ದಲ? ಇದು ಬ್ಯಾರೆಯವರಿಗೆ ಬುದ್ದಿ ಹೇಳೊಂತ ಕಾಲ್ವಲ್ಲ ಕಣೊ? ಎಂದ ಮಾವನ ಮಾತಿಗೆ. ಇನ್ನೊಂದ್ಸಲ ಯಾರೊ ಕೆನ್ನೆಗೆರೆಡು ಪಟ-ಪಟನೆ ಹೊಡೆದಂತಾಯಿತು. ಅದಿಕ್ಕೆ ಇರ್ಬೇಕು ಹನ್ನೆರಡನೇ ಶತಮಾನದ ಬಸವಣ್ಣನೆಂಬ ಪುಣಾತುಮ. ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ-ನಿಮ್ಮ ಮನವ ಸಂತೈಸಿಕೊಳ್ಳಿ, ಅಂತ ಘಂಟೆ ಬಾರ್ಸ್ದಂಗೆ ಹೇಳವರೆ. ಆದ್ರು ನಮಗೆ ಬುದ್ದಿ ಬರ್ಲಿಲ್ಲ, ಅವನ ಕಣ್ಣಂಚಲ್ಲಿ ಉದುರಿದ ಬೆಚ್ಚಗಿನ ಕಣ್ಣೀರು. ಇನ್ನೆಂದು ತೊಟ್ಟಿಕ್ಕಬಾರದು, ಅಂಬೊ ಭರವಸೇನ ಭದ್ರವಾಗಿಡುಕೊಂಡು. ಮಾವ ತೋರಿಸಿದ ಕೆಲಸಕ್ಕೋದವನು, ಅಚ್ಕಟ್ಟಾಗಿ ನೆಂಟರ ಮನೇಲಿ ಇರಂಗಾದ. ಜೊತಿಗೆ ಯಾರ್ ಯಾವೋಳ್ ಕತ್ತನ್ನಾರ ಇಸಗಲಿ, ನಾನಿನ್ನು ಕಣ್ಣೆತ್ತಿಯು ನೋಡಲ್ಲ ಅಂದುಕೊಂಡು ಅವನೊಳಗವನು ಶಪತ ಮಾಡ್ಕಂಡ. ಪ್ಯಾಕ್ಟ್ಯರಿಯ ಲೆಕ್ಕ ಪತ್ರಗಳ ಜವಾಬ್ದಾರಿ ಕೆಲಸವನ್ನ ಹಸನಾಗಿ ಮಾಡ್ತಿದ್ದ. ಅವನಿಗೆ ಆಶ್ರಯ ಕೊಟ್ಟಿರುವ ಅಕ್ಕ ಬಾವನ ಜೊತೇಲಿ ಆನಂದ್ವಾಗಿ ಹೊಂದಿಕೊಂಡ. ಅವರು ಪ್ರಸನ್ನನಿಗು ದೂರದ ಸಂಬಂದಿಕರು, ಆದ್ರು ಈ ಹುಡುಗನ್ನ ಅಕ್ಕರೆಯಿಂದಾನೆ ನೋಡ್ಕಳತಿದ್ರು, ಅವನು ಅಷ್ಟೇ ಪುಗಸಟ್ಟೆ ಉಣುತ್ತಿರ್ಲಿಲ್ಲ. ಅವನಿಗೆ ಬರೊ
ಕಥೆ ಶಾರದ ಭಾಗ-3 ಅನಸೂಯ ಎಂ.ಆರ್ ವಾಣಿ ಕೆಲಸಕ್ಕೆ ಸೇರಿ ವರ್ಷವಾದ ಮೇಲೆ ಶಾರದ ತಮ್ಮಮಂಜುನಾಥನಿಗೆ ವಾಣಿಗೆ ಮದುವೆ ಮಾಡಲು ಗಂಡುಹುಡುಕುವಂತೆ ಹೇಳಿದ್ದನ್ನು ಕೇಳಿಸಿಕೊಂಡ ವಾಣಿ “ಅತ್ತೆಒಂದೆರಡು ವರ್ಷ ನಾನು ಆರಾಮಾಗಿ ಕೆಲಸ ಮಾಡ್ಬೇಕುಅಂತ ಆಸೆ. ಆಮೇಲೆ ಮದ್ವೆ ಆಗೋದು ಇದ್ದೆ ಇದೆಯಲ್ಲ’ಎಂದು ಎಲ್ಲರ ಬಾಯಿ ಮುಚ್ಚಿಸಿದಳು.” ಇವತ್ತು ನಾವುಶುರು ಮಾಡಿದ ತಕ್ಷಣ ಸಿಗಲ್ಲ. ಒಳ್ಳೆ ಹುಡುಗ ಸಿಗೋದುಅಷ್ಟು ಸುಲಭ ಅಲ್ಲ.ನಾವು ಹುಡುಕಿ ಮಾಡೊ ಹೊತ್ತಿಗೆಒಂದು ವರ್ಷವಾದ್ರು ಆಗ್ಬಹುದು, ಎರಡು ವರ್ಷ ಆದ್ರುಆಗ್ಬಹುದು.ನಿಧಾನವಾಗಿ ಹುಡುಕುತ್ತಿರಬೇಕು” ಎಂದನು ಮಂಗಳನ ತಾಯಿಯ ದೂರದ ಸಂಬಂಧಿಕರಿಂದ ಒಂದುಗಂಡಿನ ಪ್ರಸ್ತಾಪ ಬಂದಿತು.ಎಲ್ಲವು ಅನುಕೂಲವಾಗಿಯೆಕಂಡು ಬಂದಿದ್ದರಿಂದ ಗಂಡಿನವರು ಹೆಣ್ಣನ್ನು ನೋಡಲುಬಂದರು. ಗಂಡಿನ ದೊಡ್ಡಪ್ಪ ದೊಡ್ಡಮ್ಮ, ಅವರ ಮಗಳುಮತ್ತು ಗಂಡು ಬಂದರು. ವಾಣಿಯನ್ನು ನೋಡಿ ಒಪ್ಪಿದ ಗಂಡಿನ ಕಡೆಯವರು ತಮ್ಮ ಒಪ್ಪಿಗೆಯನ್ನು ತಿಳಿಸಿದರು “ನಮ್ಮ ಮೋಹನ 8 ನೇ ತರಗತಿ ಓದುವಾಗ ಅವನಪ್ಪಅಮ್ಮಇಬ್ಬರೂ ಬಸ್ ಅಪಘಾತದಲ್ಲಿ ತೀರಿಕೊಂಡರು. ನಂತರ ನಮ್ಮಆಶ್ರಯದಲ್ಲೇ ಬೆಳೆದು ವಿದ್ಯಾವಂತನಾಗಿ ಉಪನ್ಯಾಸಕನಾಗಿರುವುದು ನಮಗೆಲ್ಲ ನೆಮ್ಮದಿಯನ್ನು ತಂದಿದೆ. ಅವರಪ್ಪನ ಆಸ್ತಿಯಿಂದ ಬಂದ ಹಣದಿಂದಲೇಅವನ ವಿದ್ಯಾಭ್ಯಾಸವೂ ಮುಗಿಯಿತು. ನಾವೂ ಅವನ ಕಡೆಯಿಂದ ಏನನ್ನು ನಿರೀಕ್ಷಣೆ ಮಾಡಲ್ಲ. ಅವನ ಸುಖ ಮತ್ತು ನೆಮ್ಮದಿಯಷ್ಟೆ ನಮಗೆ ಮುಖ್ಯ. ನಮ್ಮಿಂದ್ಯಾವುದೆ ಬೇಡಿಕೆಗಳಿಲ್ಲ. ಅವರಮ್ಮನ ಒಡವೆಗಳನ್ನೇ ಹುಡುಗಿಗೆ ಕೊಡುತ್ತೇವೆ.ನಿಮ್ಮಅನುಕೂಲವಿದ್ದಂತೆ ಮದುವೆ ಮಾಡಿ ಕೊಡಿರಿ” ಎಂದು ನೇರವಾಗಿಯೆ ಹೇಳಿದರು.ಅವರ ನೇರ ಮಾತುಗಳು ಎಲ್ಲರಿಗೂ ಇಷ್ಟವಾಯ್ತು. ಎರಡು ಕಡೆಯ ಹಿರಿಯರಿಗೂ ಒಪ್ಪಿಗೆಯಾದ್ದರಿಂದ ವಿವಾಹದ ಮಾತು ಕತೆಗಳು ಹೂವೆತ್ತಿದಷ್ಟು ಸಲೀಸಾಗಿ ಯಶಸ್ವಿಯಾಯಿತು ವಾಣಿಯೊಡನೆ ಮಾತಾಡಬೇಕೆಂದು ಮೋಹನ ತನ್ನಕ್ಕನ ಮೂಲಕ ಹೇಳಿಸಿದಾಗ ಎಲ್ಲರೂ ಒಪ್ಪಿದರು. ಮನೆಯ ಮುಂದಿನ ಕೈ ತೋಟಕ್ಕೆ ಬಂದಾಗ ಮೋಹನ್ “ನಿಮ್ಮ ಸರಳತೆ ನನಗೆ ಇಷ್ಟವಾಯ್ತು. ಮದ್ವೆ ಆದ ಮೇಲೆ ನಾನು ದಾವಣಗೆರೆಯಲ್ಲಿ ಮನೆ ಮಾಡುವೆ. ನಮ್ಮಮ್ಮನ ಒಡವೆ ಹಳೆಕಾಲದ್ದೆಂದು ಕರಗಿಸಿ ಹೊಸ ರೀತಿ ಮಾಡಿಸುವುದು ನನಗಿಷ್ಟವಿಲ್ಲ. ನಮ್ಮಮ್ಮನ ನೆನಪಾಗಿ ಹಾಗೇ ಇರಲೆಂದು ನನ್ನಾಸೆ.ಇದಕ್ಕೆನಿನ್ನ ಒಪ್ಪಿಗೆ ಇದೆಯೇ”ಎಂದಾಗ ವಾಣಿ “ಹಳೆ ವಿನ್ಯಾಸದ ಒಡವೆಗಳು ನನಗೂ ಇಷ್ಟ’ ಎಂದಳು “ನೀವೇನಾದರು ಕೇಳುವುದಿದ್ದರೆ ಕೇಳಿರಿ” ಮೋಹನ್ ಕೇಳಿದಾಗ ‘ನಮ್ಮಿಬ್ಬರ ವೃತ್ತಿ ಒಂದೇ ಆಗಿರುವುದರಿಂದ ಸಮಾನ ಮನಸ್ಕರಾಗಿ ನಮ್ಮ ಜೀವನ ನೆಮ್ಮದಿಯಿಂದ ಕೂಡಿರುತ್ತದೆಂದು ತಿಳಿದಿದ್ದೇನೆ”ಎಂದು ಹೇಳಿದಾಗ “ನನ್ನಆಸೆಯೂ ಅದೇ” ಎಂದು “ಬನ್ನಿ ಒಳಗೆ ಹೋಗೋಣ” ಎನ್ನುತ್ತ ಒಳನಡೆದ ಅವನನ್ನು ವಾಣಿ ಅನುಸರಿಸಿದಳು.ಮದುವೆ ದಿನಾಂಕ ಹಾಗೂ ಛತ್ರದ ಹೊಂದಾಣಿಕೆಯನ್ನುನೋಡಿಕೊಂಡು ಮದುವೆ ದಿನಾಂಕ ನಿರ್ಧಾರ ಮಾಡಲುಮಂಜುನಾಥನಿಗೆ ಹೇಳಿ ಹೊರಟರು. ವರುಣ್ ಮೂಲಕಮೋಹನ್ ವಾಣಿಯ ಮೊ. ನಂ.ಅನ್ನು ಪಡೆದನು.ಎಲ್ಲಾಹೊಂದಾಣಿಕೆಯಾಗುವ ದಿನ ಎರಡು ತಿಂಗಳಾದ ಮೇಲೆಇದ್ದಿದ್ದರಿಂದ ಮದುವೆ ಸಿದ್ಧತೆಗಳು ಚುರುಕಾಗಿ ನಡೆಯತೊಡಗಿದವು. ವಾಣಿ ಮತ್ತು ಮೋಹನ್ ಮೊಬೈಲ್ ನಲ್ಲಿಮಾತಾಡಿಕೊಂಡು ಭವಿಷ್ಯದ ಹೊಂಗನಸು ಕಾಣುತ್ತಲೇಹೊಸ ಸಂಸಾರಕ್ಕೆ ಅಚ್ಚುಕಟ್ಟಾದ ಬಾಡಿಗೆ ಮನೆಯನ್ನುವ್ಯವಸ್ಥೆ ಮಾಡಿದರು. ವಾಣಿ ಕೆಲಸ ಮಾಡುತ್ತಿದ್ದ ಜಿಲ್ಲಾಕೇಂದ್ರಕ್ಕೆ ದಾವಣಗೆರೆ ಹತ್ತಿರವಿರುವುದರಿಂದ ಮೋಹನ್ದಾವಣಗೆರೆಗೆ ಹೋಗಿ ಬರಬಹುದೆಂದು ತೀರ್ಮಾನಿಸಿವಾಣಿ ಕೆಲಸ ಮಾಡುತ್ತಿದ್ದ ಊರಿನಲ್ಲೆ ಮನೆ ಮಾಡಿದರು.ಮುಂದೆ ಮೋಹನ್ ವಾಣಿ ಕೆಲಸ ಮಾಡುತ್ತಿರುವ ಸ್ಥಳಕ್ಕೆವರ್ಗಾವಣೆ ಮಾಡಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು.ಮೋಹನನ ಇಷ್ಟದಂತೆ ಮದುವೆಯು ಸರಳವಾಗಿ ಮತ್ತುಸಾಂಗವಾಗಿ ನೆರವೇರಿತು. ಗಂಡನ ಮನೆಗೆ ಹೋಗುವ ಹಿಂದಿನ ದಿನ “ಅತ್ತೆ. ನೀನುಯಾಕೆ ನಮ್ಮ ಮನೆಗೆ ಬರಬಾರದು. ನಿನ್ನ ಸರ್ವಿಸ್ ಎಲ್ಲಇದೇ ಊರಲ್ಲಿ ಕಳೆದಿದೀಯಾ. ನಾವಿರೋ ಜಾಗದಲ್ಲೇವರ್ಗಾವಣೆ ಮಾಡಿಸಿದರಾಯ್ತು”ಎಂದಳು. “ಏ ಹುಡುಗಿ ಸುಮ್ಮನಿರೆ. ಗಂಡನ ಜೊತೆ ಆರಾಮಾಗಿರು. ಎಲ್ಲದಕ್ಕುತಲೆ ಕೆಡಿಸಿಕೊಳ್ಳ ಬೇಡ” ” ಹೋಗತ್ತೆ ನೀನು ಯಾವಾಗ್ಲು ಹಿಂಗೆ ” ಅಲ್ಲಿಗೆ ಬಂದ ಮಂಗಳ ” ಅತ್ತೆ ಎಲ್ಲೂ ಹೋಗಲ್ಲ ಹೋಗ್ತಿರೋಳು ನೀನು ಗಂಡನ ಮನೆಗೆ “ಆಗ ಮೂವರು ನಕ್ಕರು. ವಾಣಿ ಗಂಡನ ಮನೆಗೆ ಹೋದ ಮೇಲೆ ಇಡೀ ಮನೆಯೇ ಬಿಕೋ ಅನ್ನಿಸತೊಡಗಿತು.ಚುರುಕು ಮಾತುಗಳನ್ನಾಡುತ್ತಪ್ರಶ್ನಿಸುತ್ತ ಸದಾ ಚಟುವಟಿಕೆಯಿಂದಿರುತ್ತಿದ್ದ ವಾಣಿಯು ಮನೆಯ ಕೇಂದ್ರ ಬಿಂದುವಾಗಿದ್ದಳು.ಮಲಗುವಾಗ ನಿದ್ದೆಬರುವ ತನಕ ತನ್ನ ಗೆಳತಿಯರ, ವಿದ್ಯಾರ್ಥಿಗಳ ಹಾಗೂಸಹೋದ್ಯೋಗಿಗಳ ಕುರಿತು ಮಾತನಾಡುತ್ತಿದ್ದ ವಾಣಿಯ ಒಡನಾಟವಿಲ್ಲದೆ ಶಾರದಳಿಗೆ ಬೇಸರವಾಗುತ್ತಿತ್ತು. ಈಗ ಶಾರದ ಹತ್ತನೆ ತರಗತಿಯಲ್ಲಿ ಓದಿನಲ್ಲಿ ಹಿಂದುಳಿದಿರುವ ಮಕ್ಕಳಿಗಾಗಿ ಶಾಲೆ ಮುಗಿದ ಮೇಲೆ ಒಂದು ಗಂಟೆ ಪಾಠಮಾಡಿ ಮನೆಗೆ ಬರುತ್ತಿದ್ದಳು.ಮೊದಲಿಗಿಂತ ಹೆಚ್ಚಾಗಿಯೆ ಅವಳನ್ನು ಒಂಟಿತನ ಕಾಡತೊಡಗಿತ್ತು.ಅವಳು ನಿವೃತ್ತಿಹೊಂದಲು ಇನ್ನು ಒಂದು ವರ್ಷವಷ್ಟೆ ಬಾಕಿ. ಈ ನಡುವೆ ವಾಣಿ ತಾನು ತಾಯಿಯಾಗಲಿರುವ ಶುಭ ಸಮಾಚಾರತಿಳಿಸಿದಳು. ಒಂದು ವಾರ ರಜೆ ಹಾಕಿ ತವರಿಗೆ ಬಂದಳು.ಬಂದ ದಿನವೆ ರಾತ್ರಿ ಮಲಗುವಾಗ “ಅತ್ತೆ, ನೀನು ರಿಟೈರ್ಆದ ಮೇಲೆ ನಮ್ಮ ಮನೆಗೆ ಬಂದು ಬಿಡು. ನಮ್ಮ ಮನೆಗೆಹಿರಿಯಳಾಗಿ ನೀನಿರುವುದು ನಮ್ಮಿಬ್ರುಗೂ’ಇಷ್ಟ’ ಎಂದುಹೇಳಿದಾಗ ಆ ಪ್ರಸ್ತಾಪ ಶಾರದಳಿಗೆ ಇಷ್ಟವಾದರೂ ಸಹಅದನ್ನು ತೋರಗೊಡದೆ ನೋಡೋಣ”ಎಂದಳು.ವಾರದನಂತರ ವಾಣಿ ಊರಿಗೆ ಹೊರಟಳು.ಅಂದು ಶಾರದಾಳಿಗೆ ತುಂಬ ತಲೆನೋವಿದ್ದುದರ ಕಾರಣಮಧ್ಯಾಹ್ನ ಶಾಲೆಗೆ ರಜೆ ಹಾಕಿ ಮನೆಗೆ ಬಂದವಳೇ ಕಾಫಿಕುಡಿದು ಮಲಗಿದಳು. ವರುಣ್ ಅಂಗಡಿ ಕೆಲಸದ ಮೇಲೆ ಬೆಂಗಳೂರಿಗೆ ಹೋಗಿದ್ದ.ಸಂಜೆಯ ವೇಳೆಗೆ ಜ್ವರ ಸಹಾ ಬಂದಿತು.ಮಂಜುನಾಥನಿಗೆ ಫೋನ್ ಮಾಡಿ ಬೇಕಾಗಿದ್ದ ಮಾತ್ರೆಗಳನ್ನು ತರಿಸಿಕೊಂಡಳು. ರಾತ್ರಿ ಹಾಲು ಕುಡಿದುಮಾತ್ರೆ ನುಂಗಿದ್ದಷ್ಟೆ ಗೊತ್ತು.ಚೆನ್ನಾಗಿ ಬೆವರು ಬಂದು ಜ್ವರಬಿಟ್ಟಿತ್ತು. ಒಂದು ಹೊತ್ತಿನಲ್ಲಿ ಎಚ್ಚರವಾಗಿ ಟಾಯ್ಲೆಟ್ ಗೆಹೋಗಲು ಎದ್ದು ನಿಂತಾಗ ರೂಮಿನಿಂದ ಮಂಜುನಾಥಮಂಗಳ ಮಾತನಾಡುವ ಧ್ವನಿ ಕೇಳಿಸಿತು.‘ಶಾರದಕ್ಕನ್ನ ವಾಣಿ ಕರ್ಕೊಂಡು ಹೋಗ್ತಾಳಂತೆ. ನೀನೂಅತ್ತೆಯನ್ನು ಒಪ್ಪಿಸಮ್ಮ ಅಂತ ನನಗು ಹೇಳಿ ಹೋದಳು” ಎಂದಳು. ಆಗ ಮಂಜು ‘ ಅಕ್ಕ ಎಲ್ಲೂ ಹೋಗೋದಿಲ್ಲ ನಮ್ಮನೆಯಲ್ಲೆ ಇರಬೇಕು’‘ನಮ್ಮ ವಾಣಿ ಮನೆ ಏನು ಬೇರೆಯವರ ಮನೆ ಅಲ್ಲವಲ್ಲ ಅದ್ಯಾಕೆ ಹಿಂಗೆ ಮಾತಾಡ್ತೀರಾ.ಅಕ್ಕನಿಗೆ ವಾಣಿ ಮಗಳಿದ್ದಹಾಗೆ. ಅವಳನ್ನು ಕಂಡ್ರೆ ಜೀವಬಿಡ್ತಾರೆ’“ಇಷ್ಟ ಇರೋದಕ್ಕೆ ಹೇಳ್ತೀರೋದು. ಅಕ್ಕ ಅವ್ರು ಮನೇಲಿಇದ್ಕಂಡು ಈ ಮನೆ ಎಲ್ಲ ಅವಳ ಹೆಸರಿಗೆ ಬರೆದು ಬಿಟ್ರೆಆಮೇಲೆ ಏನ್ಮಾಡ್ತೀಯ. ಅಕ್ಕ ನಮ್ಮ ಮನೆ ಬಿಟ್ಟು ಬೇರೆಕಡೆ ಎಲ್ಲೂ ಹೋಗ್ಬಾರದು’‘ನಂ ಶಾರದಕ್ಕ ಯಾವತ್ತೂ ಹಂಗ್ಮಾಡಕ್ಕೆ ಸಾಧ್ಯನೇ ಇಲ್ಲ ಅಕ್ಕನ ಬುದ್ಧಿ ನನಗೆ ಚೆನ್ನಾಗಿ ಗೊತ್ತು.ಸುಮ್ಮನೆ ಇಲ್ಲದ್ದೆಲ್ಲ ಹೇಳಬೇಡ್ರಿ.’‘ನಮ್ಮಕ್ಕ ನಮ್ಮನೆಗಿರ್ತಾಳೆ ಅಷ್ಟೆ. ಮುಂದಕ್ಕೆ ಮಾತ್ಬೇಡ’ಒಂದು ನಿಮಿಷ ನಿಂತ ನೆಲವೇ ಕುಸಿದ ಅನುಭವ.ಹಾಗೇಕತ್ತಲಲ್ಲೇ ಹಾಸಿಗೆ ಮೇಲೆ ಕೂತಳು. ಸಾವರಿಸಿಕೊಳ್ಳುತ್ತಲೆಎದ್ದು ಲೈಟ್ ಹಾಕಿದಳು. ಎದ್ದು ಬಂದ ಮಂಗಳ ” ಜ್ವರಕಡಿಮೆಯಾಯ್ತೇನಕ್ಕ’‘ಹೂಂ ಕಣೆ ಮಾತ್ರೆ ನುಂಗಿದ ಮಲಗಿದ್ದಷ್ಟೇಗೊತ್ತು. ಈಗಎಚ್ಚರ ಆಯ್ತು. ನೀನ್ಯಾಕೆ ಎದ್ದು ಬಂದೆ.ಹೋಗಿ ಮಲಗು’ಲೈಟ್ ಆಫ್ ಮಾಡಿ ಮಲಗಲು ಎಂದೂ ಇಲ್ಲದ ಅನಾಥಭಾವ ಆವರಿಸಿ ವರ್ತುಲದಲ್ಲಿ ಒಂಟಿಯಾಗಿ ಸಿಲುಕಿದಂತೆಹೊರಬರಲಾಗದ ಅನುಭವ. ಮಂಜುನಾಥನಿಗ್ಯಾಕೆ ಈ ಅನುಮಾನ ಬಂತು. ವಾಣಿ ಮೇಲೆ ನನಗೆ ಪ್ರೀತಿಯಿದ್ದರುಸಹ ಮಂಜುವನ್ನು ಬಿಟ್ಟು ಬಿಡುತ್ತೀನಾ? ಮಂಗಳನಿಗೇಅರ್ಥವಾಗಿದ್ದು ತನ್ನ ತಮ್ಮನಿಗೇಕೆ ಅರ್ಥವಾಗಲಿಲ್ಲ.ಎಲ್ಲಸಂಬಂಧಗಳು ಹಣ,ಆಸ್ತಿಯ ಮೇಲೆ ನಿಂತಿದ್ಯಾ? ನನಗೆತಮ್ಮನನ್ನು ಬಿಟ್ಟರೆ ಇನ್ಯಾರಿದ್ದಾರೆ? ತನಗರಿವಿಲ್ಲದೆಯೇಒಂದು ರೀತಿ ಬಿಡಿಸಿಕೊಳ್ಳಲಾರದ ವ್ಯೂಹದಲ್ಲಿ ಸಿಲುಕಿಬಿಟ್ಟೆನಾ? ಇದನ್ನು ಬಿಟ್ಟರೆ ಗತ್ಯಂತರವಿಲ್ಲದಾಗಿದೆ.ತಾನು ಮಂಜುನಾಥನ ಜಾಗದಲ್ಲಿ ನಿಂತು ನೋಡಿದರೂ ಅವನಮಾತುಗಳಿಗೆ ಸಮರ್ಥನೆ ದೊರಕುತ್ತಿಲ್ಲ.ಅವನಿಗಿರುವ ಕಡಿಮೆ ಆದಾಯ ಹೀಗೆ ಮಾತನಾಡಿಸಿತ? ಜೀವನವೆಲ್ಲಾಒಡಹುಟ್ಟಿದ ತಮ್ಮನೊಂದಿಗೆ ಬದುಕಿ ಅವನನ್ನು ಬಿಟ್ಟು ಬೇರೆಯವರಿಗೇ ಮನೆಯನ್ನು ಕೊಡಲು ಹೇಗೆ ಸಾಧ್ಯ.ವಾಣಿಯ ಮೇಲೆ ನನಗೆ ಹೆಚ್ಚು ಪ್ರೀತಿಯಿರುವುದರಿಂದ ಅವಳಿಗೂ ಸಹಾ ನನ್ನ ದುಡಿಮೆಯ ಪಾಲಲ್ಲಿ ಒಂದಿಷ್ಟು ಕೊಟ್ಟರೆ ಏನು ತಪ್ಪು? ಅವಳೂ ಅವನ ಮಗಳಲ್ಲವೇ ?ಅಕ್ಕನದೆಲ್ಲಾ ತನ್ನ ಮಗನಿಗೆ ಮಾತ್ರ ಸೇರಬೇಕೆಂಬ ಆಸೆಇರಬಹುದೇ? ಅವನ ಜಾಗದಲ್ಲಿ ನಿಂತು ನೋಡಿದಾಗಅದು ಸರಿಯಿರಬಹುದು. ಒಂದು ದಿನವಾದರೂ ನನಗೆಅಗೌರವ ತೋರದೆ ಮನೆಯ ಹಿರಿಯಳೆಂಬ ಸ್ಥಾನವನ್ನುಕೊಟ್ಟಿಲ್ಲವೇ ? ನನಗಾದರೂ ತಮ್ಮನ ಕುಟುಂಬ ಬಿಟ್ಟರೆ ಇನ್ಯಾರಿದ್ದಾರೆ ? ಈ ಸಮಸ್ಯೆಗೆ ಪರಿಹಾರವೇನು ಎಂದುಚಿಂತಿಸುತ್ತಲೇ ಶಾರದಳಿಗೆ ಯಾವ ಮಾಯದಲ್ಲಿ ನಿದ್ದೆ ಆವರಿಸಿತೆಂಬುದೆ ಅರಿವಾಗಿಲ್ಲ.‘ಅಕ್ಕ,ಅಕ್ಕ”ಎನ್ನುತ್ತ ಮಂಗಳ ಮುಟ್ಟಿದಾಗಲೇ ಎಚ್ಚರ‘ಯಾಕಕ್ಕ,ರಾತ್ರಿ ನಿದ್ದೆ ಬರಲಿಲ್ವೆ’‘ಚೆನ್ನಾಗೇ ನಿದ್ದೆ ಬಂತು” ಎಂದು ಸುಳ್ಳು ಹೇಳಿದಳು.‘ಶಾರದಕ್ಕ ಇವತ್ತು ರಜಾ ಹಾಕಿ ರೆಸ್ಟ್ ತಗೊಳ್ರಿ’‘ರಜಾ ಹಾಕುವಂತದ್ದೇನೂ ಆಗಿಲ್ಲ. ಹೋಗಿ ಬರ್ತೀನಿ’. ಕಾಫಿ ಕುಡಿದು ಸ್ನಾನಕ್ಕೆ ಹೋದಳು. ತನಗೆ ಗಂಡ ಹೆಂಡತಿಮಾತಾಡಿದ ಮಾತುಗಳು ಕೇಳಿಸಿವೆಯೆಂಬುದು ಅವರಿಗೆಗೊತ್ತಾಗದಂತೆ ಎಚ್ಚರ ವಹಿಸಬೇಕೆಂದು ಕೊಂಡಳು. ಎಂದಿನಂತೆ ಮಾಮೂಲಿಯಾಗಿದ್ದು ಶಾಲೆಗೆ ಹೊರಟಳು.ಸ್ಟಾಫ್ ರೂಂಗೆ ಬಂದು ತನ್ನ ಜಾಗದಲ್ಲಿ ಕೂತಾಗ ಪಕ್ಕದ ಚೇರ್ ನಲ್ಲಿದ್ದ ಗೀತಾ ಮೇಡಂ ‘ ಶಾರದ, ಮಲ್ಲಪ್ಪ ಸರ್ ಗೆಹಾರ್ಟ್ ಅಟ್ಯಾಕ್ ಆಗಿ ದಾವಣಗೆರೆಯ ಹಾಸ್ಪಿಟಲ್ ಗೆಸೇರಿಸಿದ್ದಾರೆ. ಐಸಿಯು ನಲ್ಲಿದಾರಂತೆ ‘” ಹೌದಾ,ಎಂಥಾ ಕೆಲ್ಸ ಆಯ್ತು.ಮಗಳಿಗೆ ಮದುವೆ ಮಾಡಬೇಕೆಂದು ಗಂಡು ನೋಡುತ್ತಿದ್ದರು ಅಲ್ವಾ”.ಎಲ್ಲರಲ್ಲೂ ಅದೇ ಮಾತು. ಸೆಕೆಂಡ್ ಪಿರಿಯಡ್ ಮುಗಿಸಿಬಂದಾಗ ಸಾವಿನ ಸುದ್ದಿ ಕೇಳಿ ಬಂತು. ಶಾಲಾ ಮಕ್ಕಳನ್ನು ಸೇರಿಸಿ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಿಶಾಲೆಗೆ ರಜೆ ಘೋಷಿಸಲಾಯಿತು. ಮನೆಗೆ ಬಂದು ಅದೇಬೇಸರದಲ್ಲಿ ಏನನ್ನೋ ಯೋಚಿಸುತ್ತಾ ಸುಮ್ಮನೆ ಮಲಗಿ ಬಿಟ್ಟಳು. ಎದ್ದ ಮೇಲೆ ನಿರಾಳವಾಗಿ ಟಿ.ವಿ.ಯಲ್ಲಿ ಫಿಲಂನೋಡುತ್ತಾ ಕುಳಿತಳು.ಊಟದ ನಂತರ ಮಂಜುನಾಥಹಾಗೂ ಮಂಗಳ ಇಬ್ಬರನ್ನು ಕರೆದಳು.‘ಮಂಜು,ನಾಳೆ ಸಂಜೆ ಲಾಯರ್ ನ ಮನೆಗೆ ಕರ್ಕೊಂಡುಬಾ. ನಾನು ವಿಲ್ ಬರೆಸಬೇಕು’‘ಅದೇನಕ್ಕ ಇದ್ದಕ್ಕಿದ್ದಂತೆ’ ಎಂದು ಮಂಜು ಹೆಂಡತಿಯ ಮುಖ ನೋಡುತ್ತ. ರಾತ್ರಿ ಆಡಿದ ಮಾತುಗಳನ್ನು ಕೇಳಿಸಿಕೊಂಡಳಾ ಎಂಬಂತೆ.“ಇಲ್ಲ ಕಣೋ ನನಗ್ಯಾಕೋ ಮಧ್ಯಾಹ್ನದಿಂದ ಮನಸ್ಸಿಗೆಬಂದಿದೆ. ನೋಡು ಮಲ್ಲಪ್ಪ ಮೇಷ್ಟ್ರುಗೆ ಹೆಂಗಾಯ್ತು. ಈ ಕೆಲಸ ಆಗ್ಲೇಬೇಕು”‘ ನೋಡು ಮಂಜು, ನನ್ನ ಮನಸ್ನಲ್ಲಿರೋದನ್ನ ಹೇಳ್ತೀನಿ.ನನ್ನ ನಂತರ ಈ ಮನೆ ನಿನಗೆ ಸೇರುತ್ತೆ. ಮಂಗಳ , ವಾಣಿ ಇಬ್ಬರೂ ನನ್ನ ಒಡವೆಗಳನ್ನು ಸಮನಾಗಿ ಹಂಚಿಕೊಳ್ಳಲಿನನ್ನ ಹೆಸರಿನಲ್ಲಿರೋ ಹಣವನ್ನು ವಾಣಿ ಮತ್ತು ವರುಣ್ ಇಬ್ಬರೂ ಸಮನಾಗಿ ಹಂಚಿಕೊಳ್ಳಲಿ. ಏನಾದರೂ ನೀನುಹೇಳದಿದ್ದರೆ ಹೇಳು’ ಎಂದು ಹೇಳಿದಾಗ ಒಂದು ರೀತಿಯಸಮಾಧಾನ ಭಾವದಿಂದ ‘ ನಿನ್ನಿಷ್ಟ. ನಿನಗೆ ತಿಳಿದ ಹಾಗೆಮಾಡಕ್ಕ. ನನ್ನದೇನೂ ಇಲ್ಲ’‘ಸರಿ, ನನಗೆ ನಿದ್ದೆ ಬರ್ತಿದೆ. ಮಲಗಬೇಕು ‘ಎನ್ನುತ್ತ ರೂಂಕಡೆ ಹೊರಟಳು.
ಕಥೆ ಶಾರದ ಭಾಗ-2 ಅನಸೂಯ ಎಂ.ಆರ್ ವಾಣಿ ದ್ವಿತೀಯ ಪಿ.ಯು.ಸಿ.ಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾದಾಗ ಶಾರದ” ವಾಣಿ ಇಂಜಿನೀಯರಿಂಗ್ ಅಥವಾ ಮೆಡಿಕಲ್ ಸೇರು. ನಾನು ಓದಿಸ್ತೇನೆ” ಎಂದಳು “ನನಗಿಷ್ಟವಿಲ್ಲ ಅತ್ತೆ. ನಾನು ನಿನ್ನ ಹಾಗೆ ಟೀಚರ್ ಅಥವ ಲೆಕ್ಚರರ್ ಆಗ್ತೀನಿ”ಎಂದು ಹೇಳಿ B.SC ಗೆ ಸೇರಿ ಪದವಿ ಪಡೆದಳು ಮುಂದೆ ಸ್ನಾತಕೋತ್ತರ ಪದವಿಯಲ್ಲೂ ಅಧಿಕ ಅಂಕಗಳನ್ನು ಪಡೆದಿದ್ದರಿಂದ ಸುಲಭವಾಗಿ ಸರ್ಕಾರಿ ಪ. ಪೂ. ಕಾಲೇಜಿನ ಉಪನ್ಯಾಸಕಿಯಾದಳು. ಊರಿನಿಂದ ನಲ್ವತ್ತು ಕಿ. ಮೀ. ದೂರವಿದ್ದ ಜಿಲ್ಲಾ ಕೇಂದ್ರದ ಸರ್ಕಾರಿ ಕಾಲೇಜಿನಲ್ಲೆ ಸಿಕ್ಕಿದ್ದರಿಂದ ಬಸ್ ಪಾಸ್ ಮಾಡಿಸಿ ಮನೆ ಯಿಂದಲೆ ದಿನವೂ ಹೋಗಿ ಬರುತ್ತಿದ್ದಳು. ಅಂದು ವಾಣಿ ಕಾಲೇಜಿನಿಂದ ಬಂದವಳೆ”ಅತ್ತೆ, ಅಮ್ಮ ಎಲ್ಲರು ಇವತ್ತು ಹೊರಗಡೆ ಹೋಗಿ ಹೋಟೆಲ್ನಲ್ಲಿ ಊಟ ಮಾಡಿಕೊಂಡು ಬರೋಣ. ಅಪ್ಪಂಗೂ,ವರುಣ್ಗೂ ಪೋನ್ ಮಾಡಿದೀನಿ ಸೀದಾ ಅಲ್ಲಿಗೆ ಬರೋಕೆ. ನೀವಿಬ್ಬರೂ ಬೇಗ ರೆಡಿ ಆಗ್ರಿ” ಆಗ ಮಂಗಳಾ”ಯಾಕೆ? ಏನು ಇವತ್ತು”ಎಂದಾಗ “ಅಮ್ಮ ಅಲ್ಲೇ ಹೇಳ್ತೀನಿ” ಎಂದಳು. ಆಟೋ ಹತ್ತಿ ಕುಳಿತ ಮೇಲೆ “ಶ್ರೀ ಜ್ಯುಯಲರಿ” ಶಾಪ್ ಎಂದಳು. ಒಳಗೆ ಹೋದಾಗ “ಓಲೆಗಳನ್ನು ತೋರಿಸಿ ಎಂದಳು. ಇಬ್ಬರಿಗೂ ನನಗೆರಡು ಜೊತೆ ಮುತ್ತಿನ ಓಲೆಗಳನ್ನು ಆಯ್ಕೆ ಮಾಡಿರಿ “ಎಂದಳು. ಇಬ್ಬರೂ ಸೇರಿ ಆಯ್ಕೆ ಮಾಡಿದ ದೊಡ್ಡ ಮುತ್ತಿನ ಹಸಿರು ಮತ್ತು ಬಿಳಿಯ ಬಣ್ಣದ ಮುತ್ತಿನೋಲೆಗಳನ್ನು ಕೊಂಡು ಕೊಂಡಳು. ಅಲ್ಲಿಂದ ಸಾಗರ್ ಹೋಟೆಲ್ ಬಳಿ ಕಾದಿದ್ದ ಮಂಜುನಾಥ ಮತ್ತು ವರುಣ್ ಅವರನ್ನು ಸೇರಿಕೊಂಡ ಮೇಲೆ ಎಲ್ಲರೂ ಊಟ ಮಾಡಿ ಮನೆ ಸೇರಿದರು.ಆಗ ವಾಣಿ “ಅತ್ತೆ,ಅಮ್ಮ ಇಬ್ರೂ ಬನ್ರಿ ಇಲ್ಲಿ”ಎಂದು ಕರೆದಳು ಬಂದಾಗ ಓಲೆಗಳ ಬಾಕ್ಸ್ ತೆಗೆದು “ಇದರಲ್ಲಿ ಯಾವುದು ನಿಮಗಿಷ್ಟ ಆಗುತ್ತೊ ಅದನ್ನು ತಗೊಳ್ರಿ. ಇದು ನನ್ನ ಸ್ವಂತ ದುಡಿಮೆಯ ಮೊದಲ ಸಂಬಳದಿಂದ ತಂದಿದೀನಿ. ಬೇಡ ಅನ್ನಬಾರದು”ಅಂದಾಗ ಶಾರದ ಬಿಳಿಯ ಮುತ್ತಿನೋಲೆ, ಹಸಿರು ಮುತ್ತಿನೋಲೆ ತೆಗೆದುಕೊಂಡ ಮಂಗಳ ಮಗಳ ತಲೆಯನ್ನು ನೇವರಿಸಿದರೆ, ಶಾರದ”ಅಂತೂ ನಮ್ಮ ವಾಣಿ ದುಡಿದು ಸಂಬಳ ತರೋ ಹಂಗಾದ್ಲು. ಯಾವಾಗ್ಲೂ ಹೀಗೆ ಖುಷಿ ಖುಷಿಯಾಗಿ ಇರಮ್ಮ”ಎಂದಾಗ ವರುಣ್ “ಅಪ್ಪನ್ನ ನನ್ನನ್ನ ಮರೆತ್ಬಿಟ್ಟೇನಕ್ಕ” “ಹಂಗನ್ಬೇಡಪ್ಪ, ತಡ್ಕೋ ಸ್ವಲ್ಪ” ಅನ್ನುತ್ತ ಇಬ್ಬರಿಗೂ ಎರಡೆರಡು ಸಾವಿರ ಕೊಟ್ಟು ನಿಮಗೆ ಇಷ್ಟವಾದ ಬಟ್ಟೆ ತಗೊಳ್ರಿ” ಎಂದು ಕೊಟ್ಟಳು.”ಇಷ್ಟುದಿನ ನಾವು ನಿನಗೆ ಬಟ್ಟೆ ಕೊಡಿಸಿದ್ರೆ ಈಗ ನೀನು ನಮಗೆ ಬಟ್ಟೆ ಕೊಡಿಸಂಗಾಯ್ತು. ಆಯ್ತಮ್ಮ ಇನ್ಮುಂದೆ ನಿನ್ನ ಸಂಬಳದ ಹಣವನ್ನೆಲ್ಲ ಬ್ಯಾಂಕ್ನಲ್ಲಿ ಕೂಡಿಡು”ಎಂದು ಮಂಜುನಾಥ ಹೇಳಲು ಶಾರದ ಮತ್ತು ಮಂಗಳ ಇಬ್ಬರೂ ಆ ಮಾತಿಗೆ ಧ್ವನಿಗೂಡಿಸಿದರು. ಯಾಕೋ ಏನೋ ನಮ್ಮ ಮನೆ ಗಂಡು ಮಕ್ಕಳಿಗೆ ವಿದ್ಯೆ ಅಷ್ಟಾಗಿ ಒಲಿಯಲಿಲ್ಲ. ವರುಣ್ SSLC ಪರೀಕ್ಷೆಯಲ್ಲಿ ಸಾಧಾರಣ ಅಂಕಗಳನ್ನು ಪಡೆದು ಉತ್ತೀರ್ಣನಾದನು “ಅತ್ತೆ, ನಾನು ಎಲೆಕ್ಟ್ರಿಕಲ್ ಡಿಪ್ಲೋಮೊಗೆ ಸೇರ್ಕಂತಿನಿ” ಎಂದು ಹೇಳಿದಾಗ “ಆಯ್ತು ಅದಕ್ಕೇ ಸೇರಪ್ಪ. ಒಂದು ವೇಳೆ ಕೆಲಸ ಸಿಗದಿದ್ರು ಸ್ವಂತವಾಗಿ ವ್ಯವಹಾರ ಮಾಡ್ಕ ಬಹುದು”ಎಂದು ಮಂಜುನಾಥನು ಒಪ್ಪಿಗೆ ಸೂಚಿಸಿದ. ವಾಣಿ M.SC.ಗೆ ಸೇರಿದಾಗ ವರುಣ್ ಮೂರು ವರ್ಷದ ಡಿಪ್ಲಮೋ ಮುಗಿಸಿದ ನಂತರ ಒಂದು ವರ್ಷ ಕೆಲಸಕ್ಕಾಗಿ ಪ್ರಯತ್ನಿಸಿದರೂ ಸಫಲವಾಗದಿದ್ದಾಗ ಮಂಜುನಾಥ ತನ್ನ ಸ್ನೇಹಿತನ ಸಹಾಯದಿಂದ ತುಮಕೂರಿನಲ್ಲಿದ್ದ ಖಾಸಗಿ ಎಲಕ್ಟ್ರಿಕಲ್ ಕಂಟ್ರಾಕ್ಟ್ ದಾರರೊಬ್ಬರ ಹತ್ತಿರ ಅನುಭವ ಪಡೆಯಲೆಂದೇ ಒಂದೆರಡು ವರ್ಷ ಕೆಲಸಕ್ಕೆ ಸೇರಿಸಿದ್ದನು ತನ್ನ ಚುರುಕಾದ ವ್ಯವಹಾರ ಜ್ಞಾನ ಹಾಗೂ ಕೆಲಸದಲ್ಲಿನ ಆಸಕ್ತಿಯ ಮೂಲಕವೇ ಮಾಲೀಕರ ಮೆಚ್ಚುಗೆ ಹಾಗೂ ನಂಬಿಕೆಗೆ ಪಾತ್ರನಾಗಿದ್ದನು.ಇದರಿಂದ ಅವನ ಭವಿಷ್ಯದ ಕುರಿತಾಗಿ ಯಾರಿಗೂ ಆತಂಕವಿರಲಿಲ್ಲ. ಆ ದಿನ ಶಾರದ ಶಾಲೆಯಿಂದ ಬಂದು ಕಾಫಿ ಕುಡಿಯುವಾವಾಗ ಮಂಗಳ “ಅಕ್ಕ ನಮ್ಮವರುಣನಿಗೆ ಸ್ವಂತ ಬಿಸಿನೆಸ್ ಮಾಡೋ ಆಸೆ ಈಗ ಹೇಗಿದ್ರೂ ನಮ್ಮ ಅಂಗಡಿ ಪಕ್ಕದ ಮಳಿಗೆ ಖಾಲೀನೆ ಇದೆ. ಬಾಡಿಗೆಗೆ ಕೊಡದೆ ಎಲೆಕ್ಟ್ರಿಕಲ್ ಶಾಪ್ ಇಡೋಣ. ಅತ್ತೇನ ಕೇಳ್ತೀನಿ ಅಂತಿದ್ದ.ನಿಮಗೇನು ಅನ್ಸುತ್ತೆ”ಎಂದಳು “ಮಂಜುನು ಬರಲಿ ರಾತ್ರಿ ಮಾತಾಡೋಣ. ವಾಣಿದೇನು ಲೈಫ್ ಸೆಟ್ಲಾಗಿ ಬಿಡ್ತು.ಇವನಿಗೂಂದು ವ್ಯವಸ್ಥೆಯಾಗ್ಬೇಕು “ಇವನು ವಾಣಿಯಂಗೆ ಓದ್ಲಿಲ್ಲನೋಡಕ್ಕ ಇವನಿಗೊಂದು ಉದ್ಯೋಗ ಅಂತ ಆಗ್ಬಿಟ್ರೆ ನನಗಿನ್ಯಾವ ಚಿಂತೆಯಿರಲ್ಲ” “ಅದಕ್ಯಾಕೆ ಚಿಂತೆ ಮಾಡ್ಬೇಕು.ಎಲ್ಲರು ಓದೀನೇ ಉದ್ಧಾರ ಆಗ್ಬಿಟ್ಟಿದಾರಾ? ಬುದ್ಧಿ ಮತ್ತು ಶ್ರಮಗಳಿದ್ದರೆ ಸಾಕು ಈಗ ಮುಂದುವರಿಬಹುದು.ನೀನೇನು ಚಿಂತೆ ಮಾಡ್ಬೇಡ” ಅಂದು ರಾತ್ರಿ ಎಲ್ಲರ ಊಟವಾದ ನಂತರ ಶಾರದಳೇ “ವರುಣ್, ಎಲೆಕ್ಟ್ರಿಕಲ್ ಶಾಪ್ ಇಡೋಕ್ಕೆ ಬಂಡವಾಳನ ಎಲ್ಲಿಂದ ಹೇಗೆ ವ್ಯವಸ್ಥೆ ಮಾಡ್ಬೇಕು ಅಂತ ಪ್ಲಾನ್ ಏನು ಮಾಡಿದೀಯಾ?”ಎಂದು ಕೇಳಿದಳು”ಅತ್ತೆ ಅಪ್ಪ ಒಂದು ಸ್ಟಲ್ಪ ಬಂಡವಾಳ ಕೊಡಲಿ.ಅಂಗಡಿಗೆ ಹೇಗೂ ಬಾಡಿಗೆನ ಕೊಡಬೇಕಾಗಿಲ್ಲ ಆದ್ದರಿಂದ ಬ್ಯಾಂಕ್ ನಲ್ಲಿ ಸಾಲವನ್ನು ಕೊಡಿಸಲಿ. ಸಾಲ ತೀರಿಸೊ ಜವಾಬ್ದಾರಿನೂ ನಂದೆ” ಆಗ ಮಂಜುನಾಥ “ಅಕ್ಕ ಇನ್ನು ವಾಣಿದು ಮದ್ವೆ ಆಗಿಲ್ಲ. ಇನ್ನ ಒಂದೆರಡು ವರ್ಷ ಅವರತ್ರನೇ ಕೆಲ್ಸ ಮಾಡಿ ಅನುಭವ ಆಗಲಿ ವಾಣಿ ಮದ್ವೆ ಆದ ಮೇಲೆ ಅವನು ಹೇಳಿದಂಗೆ ಮಾಡಿಕೊಡ್ತೀನಿ”ಎಂದು ಹೇಳಿದ.”ಈಗಾಗಲೇ ಮೂರು ವರ್ಷದ ಅನುಭವ ಆಯ್ತು ಕಣಪ್ಪ ನಾನೇ ಸ್ವಂತ ಶಾಪ್ ಇಟ್ಟು ನಡಿಸೋ ಅಷ್ಟು ಜವಾಬ್ದಾರಿ ಬಂದಿದೆ. ನಾನೇನೂ ಇನ್ನು ಚಿಕ್ಕಹುಡುಗ ಅಲ್ಲ. ಎಲ್ಲರೂ ಸಪೋರ್ಟ್ ಮಾಡ್ರಿ” ಎಂದನು. “ಆಯ್ತು ಮಂಜು, ನೀನು ನಿನ್ನ ಕೈಲಾದಷ್ಟು ಕೊಡು ನನ್ನ ಕೈಲಾದಷ್ಟು ನಾನು ಕೊಡ್ತೀನಿ. ಉಳಿದಿದ್ದಕ್ಕೆ ಬ್ಯಾಂಕ್ ಲ್ಲಿ ಸಾಲ ತೆಗೆದುಕೊಡು. ಸಾಲದ ಹಣ ಅವನೇ ಕಟ್ಟಬೇಕು”ಎಂದು ತೀರ್ಮಾನವಾದ ಖುಷಿಯಲ್ಲಿ ತಮ್ಮ ವರುಣನ ಮುಖ ಅರಳಿದಾಗ ವಾಣಿ “ಅಂಗಡಿಗೆ ಏನಂತ ಹೆಸರಿಡ್ತೀಯಾ ವರುಣ” ಮಂಜು ತಕ್ಷಣವೇ “ಶಾರದಾ ಎಲೆಕ್ಟ್ರಿಕಲ್ಸ್”ಎನ್ನುತ್ತಿದ್ದಂತೆ ಎಲ್ಲರು ಚಪ್ಪಾಳೆ ಹಾಕಿದರು. ಎರಡು ತಿಂಗಳೊಳಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡ ಹಾಗೆ ತಿರುಗಾಡುತ್ತ ವರುಣ್ ಎಲ್ಲ ಕೆಲಸಗಳನ್ನು ಮುಗಿಸಿದನು ಶುಭ ಮುಹೂರ್ತದಲ್ಲಿ ಅಂಗಡಿಯನ್ನು ಪ್ರಾರಂಭಿಸಿದನು ಕೆಲವು ದಿನಗಳಾದ ಮೇಲೆ “ಅತ್ತೆ,ಇದು ನನ್ನ ಮೊದಲನೆ ಲಾಭ. ನೀನು ಅಮ್ಮ ನಿಮಗೇನು ಇಷ್ಟಾನೋ ತಗೊಳ್ಳಿ” ಹಣವನ್ನು ಕೊಡುತ್ತ ಹೇಳಿದ.” ನಮಗೇನು ಬೇಡ ಕಣಪ್ಪ ಮೊದಲು ಬ್ಯಾಂಕ್ ಸಾಲ ತೀರ್ಸು.ಆಮೇಲೆ ಕೊಡೋದು ಇದ್ದೇ ಇದೆ” ಶಾರದ ಹೇಳಿದಳು.ಆಗ ಮಂಗಳ ” ಹೌದು ಬ್ಯಾಂಕಿಗೆ ಕಟ್ಟಪ್ಪ”ಎಂದಳು. ಎಲ್ಲರೂ ಆ ರಾತ್ರಿ ಊಟಕ್ಕೆ ಕುಳಿತಾಗ ಶಾರದ ವರುಣ್ ಹಣ ತಂದುಕೊಟ್ಟ ವಿಷಯ ಹೇಳಿ ಬ್ಯಾಂಕ್ ಸಾಲ ತೀರ್ಸಲು ತಿಳಿಸಿದೆ ಎಂದಳು. ಆಗ ಮಂಜುನಾಥ ಹೆಮ್ಮೆಯಿಂದ “ನಮ್ಮ ಮನೇಲಿರೊ ಐದು ಜನ ಇದೀವಿ ಅದ್ರಲ್ಲಿ ನಾಲ್ಕು ಜನ ದುಡಿತೀವಿ” ಹೇಳಿದ ಕೂಡಲೆ ವಾಣಿ ” ಅಪ್ಪ, ನಾವು ಐದು ಜನರು ದುಡೀತಾ ಇದೀವಿ ಕಣಪ್ಪ. ನಾವು ನಾಲ್ಕು ಜನ ಹೊರಗಡೆ ದುಡಿದ್ರೆ ಅಮ್ಮ ಮನೆಯೊಳಗೆ ದುಡೀತಾಳೆ.”ತಕ್ಷಣವೇ ಶಾರದ “ಸರ್ಯಾಗಿ ಹೇಳಿದೆ ಕಣೆ”ಎಂದು ಅವಳ ಬೆನ್ನು ತಟ್ಟಲು “ಆಯ್ತು ಮಗಳೆ ಒಪ್ಕಂಡೆ. ಅದಕ್ಕೆ ಹೇಳೋದು ನಾನು ನನ್ನ ಮಗಳು ಜಾಣೆ ಅಂತ” ಎಂದು ಹೇಳಿದವನು ತಕ್ಷಣ ಹೆಂಡತಿ ಕಡೆ ನೋಡುತ್ತಾ” ತಪ್ಪಾಯ್ತು ನಮ್ಮ ಮಗಳು” ಎನ್ನಲು ಎಲ್ಲರೂ ನಕ್ಕು ಬಿಟ್ಟರು. ವಾಣಿ ದ್ವಿತೀಯ ಪಿ.ಯು.ಸಿ.ಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾದಾಗ ಶಾರದ” ವಾಣಿ ಇಂಜಿನೀಯರಿಂಗ್ ಅಥವಾ ಮೆಡಿಕಲ್ ಸೇರು. ನಾನು ಓದಿಸ್ತೇನೆ” ಎಂದಳು “ನನಗಿಷ್ಟವಿಲ್ಲ ಅತ್ತೆ. ನಾನು ನಿನ್ನ ಹಾಗೆ ಟೀಚರ್ ಅಥವ ಲೆಕ್ಚರರ್ ಆಗ್ತೀನಿ”ಎಂದು ಹೇಳಿ B.SC ಗೆ ಸೇರಿ ಪದವಿ ಪಡೆದಳು ಮುಂದೆ ಸ್ನಾತಕೋತ್ತರ ಪದವಿಯಲ್ಲೂ ಅಧಿಕ ಅಂಕಗಳನ್ನು ಪಡೆದಿದ್ದರಿಂದ ಸುಲಭವಾಗಿ ಸರ್ಕಾರಿ ಪ. ಪೂ. ಕಾಲೇಜಿನ ಉಪನ್ಯಾಸಕಿಯಾದಳು. ಊರಿನಿಂದ ನಲ್ವತ್ತು ಕಿ. ಮೀ. ದೂರವಿದ್ದ ಜಿಲ್ಲಾ ಕೇಂದ್ರದ ಸರ್ಕಾರಿ ಕಾಲೇಜಿನಲ್ಲೆ ಸಿಕ್ಕಿದ್ದರಿಂದ ಬಸ್ ಪಾಸ್ ಮಾಡಿಸಿ ಮನೆ ಯಿಂದಲೆ ದಿನವೂ ಹೋಗಿ ಬರುತ್ತಿದ್ದಳು. ಅಂದು ವಾಣಿ ಕಾಲೇಜಿನಿಂದ ಬಂದವಳೆ”ಅತ್ತೆ, ಅಮ್ಮ ಎಲ್ಲರು ಇವತ್ತು ಹೊರಗಡೆ ಹೋಗಿ ಹೋಟೆಲ್ನಲ್ಲಿ ಊಟ ಮಾಡಿಕೊಂಡು ಬರೋಣ. ಅಪ್ಪಂಗೂ,ವರುಣ್ಗೂ ಪೋನ್ ಮಾಡಿದೀನಿ ಸೀದಾ ಅಲ್ಲಿಗೆ ಬರೋಕೆ. ನೀವಿಬ್ಬರೂ ಬೇಗ ರೆಡಿ ಆಗ್ರಿ” ಆಗ ಮಂಗಳಾ”ಯಾಕೆ? ಏನು ಇವತ್ತು”ಎಂದಾಗ “ಅಮ್ಮ ಅಲ್ಲೇ ಹೇಳ್ತೀನಿ” ಎಂದಳು. ಆಟೋ ಹತ್ತಿ ಕುಳಿತ ಮೇಲೆ “ಶ್ರೀ ಜ್ಯುಯಲರಿ” ಶಾಪ್ ಎಂದಳು. ಒಳಗೆ ಹೋದಾಗ “ಓಲೆಗಳನ್ನು ತೋರಿಸಿ ಎಂದಳು. ಇಬ್ಬರಿಗೂ ನನಗೆರಡು ಜೊತೆ ಮುತ್ತಿನ ಓಲೆಗಳನ್ನು ಆಯ್ಕೆ ಮಾಡಿರಿ “ಎಂದಳು. ಇಬ್ಬರೂ ಸೇರಿ ಆಯ್ಕೆ ಮಾಡಿದ ದೊಡ್ಡ ಮುತ್ತಿನ ಹಸಿರು ಮತ್ತು ಬಿಳಿಯ ಬಣ್ಣದ ಮುತ್ತಿನೋಲೆಗಳನ್ನು ಕೊಂಡು ಕೊಂಡಳು. ಅಲ್ಲಿಂದ ಸಾಗರ್ ಹೋಟೆಲ್ ಬಳಿ ಕಾದಿದ್ದ ಮಂಜುನಾಥ ಮತ್ತು ವರುಣ್ ಅವರನ್ನು ಸೇರಿಕೊಂಡ ಮೇಲೆ ಎಲ್ಲರೂ ಊಟ ಮಾಡಿ ಮನೆ ಸೇರಿದರು.ಆಗ ವಾಣಿ “ಅತ್ತೆ,ಅಮ್ಮ ಇಬ್ರೂ ಬನ್ರಿ ಇಲ್ಲಿ”ಎಂದು ಕರೆದಳು ಬಂದಾಗ ಓಲೆಗಳ ಬಾಕ್ಸ್ ತೆಗೆದು “ಇದರಲ್ಲಿ ಯಾವುದು ನಿಮಗಿಷ್ಟ ಆಗುತ್ತೊ ಅದನ್ನು ತಗೊಳ್ರಿ. ಇದು ನನ್ನ ಸ್ವಂತ ದುಡಿಮೆಯ ಮೊದಲ ಸಂಬಳದಿಂದ ತಂದಿದೀನಿ. ಬೇಡ ಅನ್ನಬಾರದು”ಅಂದಾಗ ಶಾರದ ಬಿಳಿಯ ಮುತ್ತಿನೋಲೆ, ಹಸಿರು ಮುತ್ತಿನೋಲೆ ತೆಗೆದುಕೊಂಡ ಮಂಗಳ ಮಗಳ ತಲೆಯನ್ನು ನೇವರಿಸಿದರೆ, ಶಾರದ”ಅಂತೂ ನಮ್ಮ ವಾಣಿ ದುಡಿದು ಸಂಬಳ ತರೋ ಹಂಗಾದ್ಲು. ಯಾವಾಗ್ಲೂ ಹೀಗೆ ಖುಷಿ ಖುಷಿಯಾಗಿ ಇರಮ್ಮ”ಎಂದಾಗ ವರುಣ್ “ಅಪ್ಪನ್ನ ನನ್ನನ್ನ ಮರೆತ್ಬಿಟ್ಟೇನಕ್ಕ” “ಹಂಗನ್ಬೇಡಪ್ಪ, ತಡ್ಕೋ ಸ್ವಲ್ಪ” ಅನ್ನುತ್ತ ಇಬ್ಬರಿಗೂ ಎರಡೆರಡು ಸಾವಿರ ಕೊಟ್ಟು ನಿಮಗೆ ಇಷ್ಟವಾದ ಬಟ್ಟೆ ತಗೊಳ್ರಿ” ಎಂದು ಕೊಟ್ಟಳು.”ಇಷ್ಟುದಿನ ನಾವು ನಿನಗೆ ಬಟ್ಟೆ ಕೊಡಿಸಿದ್ರೆ ಈಗ ನೀನು ನಮಗೆ ಬಟ್ಟೆ ಕೊಡಿಸಂಗಾಯ್ತು. ಆಯ್ತಮ್ಮ ಇನ್ಮುಂದೆ ನಿನ್ನ ಸಂಬಳದ ಹಣವನ್ನೆಲ್ಲ ಬ್ಯಾಂಕ್ನಲ್ಲಿ ಕೂಡಿಡು”ಎಂದು ಮಂಜುನಾಥ ಹೇಳಲು ಶಾರದ ಮತ್ತು ಮಂಗಳ ಇಬ್ಬರೂ ಆ ಮಾತಿಗೆ ಧ್ವನಿಗೂಡಿಸಿದರು. ಯಾಕೋ ಏನೋ ನಮ್ಮ ಮನೆ ಗಂಡು ಮಕ್ಕಳಿಗೆ ವಿದ್ಯೆ ಅಷ್ಟಾಗಿ ಒಲಿಯಲಿಲ್ಲ. ವರುಣ್ SSLC ಪರೀಕ್ಷೆಯಲ್ಲಿ ಸಾಧಾರಣ ಅಂಕಗಳನ್ನು ಪಡೆದು ಉತ್ತೀರ್ಣನಾದನು “ಅತ್ತೆ, ನಾನು ಎಲೆಕ್ಟ್ರಿಕಲ್ ಡಿಪ್ಲೋಮೊಗೆ ಸೇರ್ಕಂತಿನಿ” ಎಂದು ಹೇಳಿದಾಗ “ಆಯ್ತು ಅದಕ್ಕೇ ಸೇರಪ್ಪ. ಒಂದು ವೇಳೆ ಕೆಲಸ ಸಿಗದಿದ್ರು ಸ್ವಂತವಾಗಿ ವ್ಯವಹಾರ ಮಾಡ್ಕ ಬಹುದು”ಎಂದು ಮಂಜುನಾಥನು ಒಪ್ಪಿಗೆ ಸೂಚಿಸಿದ. ವಾಣಿ M.SC.ಗೆ ಸೇರಿದಾಗ ವರುಣ್ ಮೂರು ವರ್ಷದ ಡಿಪ್ಲಮೋ ಮುಗಿಸಿದ ನಂತರ ಒಂದು ವರ್ಷ ಕೆಲಸಕ್ಕಾಗಿ ಪ್ರಯತ್ನಿಸಿದರೂ ಸಫಲವಾಗದಿದ್ದಾಗ ಮಂಜುನಾಥ ತನ್ನ ಸ್ನೇಹಿತನ ಸಹಾಯದಿಂದ ತುಮಕೂರಿನಲ್ಲಿದ್ದ ಖಾಸಗಿ ಎಲಕ್ಟ್ರಿಕಲ್ ಕಂಟ್ರಾಕ್ಟ್ ದಾರರೊಬ್ಬರ ಹತ್ತಿರ ಅನುಭವ ಪಡೆಯಲೆಂದೇ ಒಂದೆರಡು ವರ್ಷ ಕೆಲಸಕ್ಕೆ ಸೇರಿಸಿದ್ದನು ತನ್ನ ಚುರುಕಾದ ವ್ಯವಹಾರ ಜ್ಞಾನ ಹಾಗೂ ಕೆಲಸದಲ್ಲಿನ ಆಸಕ್ತಿಯ ಮೂಲಕವೇ ಮಾಲೀಕರ ಮೆಚ್ಚುಗೆ ಹಾಗೂ ನಂಬಿಕೆಗೆ ಪಾತ್ರನಾಗಿದ್ದನು.ಇದರಿಂದ ಅವನ ಭವಿಷ್ಯದ ಕುರಿತಾಗಿ ಯಾರಿಗೂ ಆತಂಕವಿರಲಿಲ್ಲ. ಆ ದಿನ ಶಾರದ ಶಾಲೆಯಿಂದ ಬಂದು ಕಾಫಿ ಕುಡಿಯುವಾವಾಗ ಮಂಗಳ “ಅಕ್ಕ ನಮ್ಮವರುಣನಿಗೆ ಸ್ವಂತ ಬಿಸಿನೆಸ್ ಮಾಡೋ ಆಸೆ ಈಗ ಹೇಗಿದ್ರೂ ನಮ್ಮ ಅಂಗಡಿ ಪಕ್ಕದ ಮಳಿಗೆ ಖಾಲೀನೆ ಇದೆ. ಬಾಡಿಗೆಗೆ ಕೊಡದೆ ಎಲೆಕ್ಟ್ರಿಕಲ್ ಶಾಪ್ ಇಡೋಣ. ಅತ್ತೇನ ಕೇಳ್ತೀನಿ ಅಂತಿದ್ದ.ನಿಮಗೇನು ಅನ್ಸುತ್ತೆ”ಎಂದಳು “ಮಂಜುನು ಬರಲಿ ರಾತ್ರಿ ಮಾತಾಡೋಣ. ವಾಣಿದೇನು ಲೈಫ್ ಸೆಟ್ಲಾಗಿ ಬಿಡ್ತು.ಇವನಿಗೂಂದು ವ್ಯವಸ್ಥೆಯಾಗ್ಬೇಕು “ಇವನು ವಾಣಿಯಂಗೆ ಓದ್ಲಿಲ್ಲನೋಡಕ್ಕ ಇವನಿಗೊಂದು ಉದ್ಯೋಗ ಅಂತ ಆಗ್ಬಿಟ್ರೆ ನನಗಿನ್ಯಾವ ಚಿಂತೆಯಿರಲ್ಲ” “ಅದಕ್ಯಾಕೆ ಚಿಂತೆ ಮಾಡ್ಬೇಕು.ಎಲ್ಲರು ಓದೀನೇ ಉದ್ಧಾರ ಆಗ್ಬಿಟ್ಟಿದಾರಾ? ಬುದ್ಧಿ ಮತ್ತು
ಕಥೆ ಶಾರದ ಭಾಗ-1 ಅನಸೂಯ ಎಂ.ಆರ್ “ವಾಣಿ ಪುಟ್ಟಿ” ಎಂದು ಕರೆಯುತ್ತಲೇ ಮನೆಯೊಳಗೆ ಬಂದಳು ಶಾರದ.”ಅಕ್ಕ, ವಾಣಿಗೆ ಇನ್ನೂ ಜ್ವರ ಬಿಟ್ಟಿಲ್ಲ. ನೀವು ಸ್ಕೂಲಿಗೆ ಹೋದ ಮೇಲೆ ಅವರಪ್ಪ ಡಾಕ್ಟರ್ ಹತ್ರ ಹೋಗಿ ತೋರಿಸ್ಕಂಡು ಬರೋಣ ಅಂತ ಎಷ್ಟು ಕರೆದ್ರೂ ಹೋಗಿಲ್ಲ ನಾನು ಅತ್ತೆ ಜೊತೆಗೆ ಹೋಗ್ತೀನಿ ಅಂತ ಹೇಳಿ ಹೋಗಲೇ ಇಲ್ಲ ಹಠ ಮಾಡ್ತಿದಾಳೆ ನೋಡಕ್ಕಾ” ಎಂದು ತಮ್ಮನ ಹೆಂಡತಿ ಮಂಗಳಾ ಹೇಳಿದಾಗ ” ಹೌದ” ಎನ್ನುತ್ತ ವಾಣಿಯ ಹತ್ತಿರ ಹೋಗಿ ಹಣೆ ಮುಟ್ಟಿದಾಗ ಸುಡುತ್ತಿತ್ತು. “ಯಾಕೋ ಪುಟ್ಟ ಹಠ ಮಾಡ್ತೀಯಾ? ಅಪ್ಪನ ಜೊತೆಗೇ ಹೋಗಿದ್ರೆ ಏನಾಗ್ತಿತ್ತು ಸರಿ ಬಾ ಹೋಗೋಣ “ಮಂಗಳಾ “ಇರಿ ಅಕ್ಕಾ ಕಾಫಿ ಮಾಡ್ತೀನಿ ಕುಡಿದು ಹೋಗ್ರಿ ಅತ್ತೇನೇ ಬೇಕು ಈ ಹುಡ್ಗಿಗೆ ಎಲ್ಲದಕ್ಕೂ” ಎನ್ನುತ್ತ ಕಾಫಿ ಮಾಡಲು ಹೋದಳು. ಮುಖ ತೊಳೆದು ಸಿದ್ಧಳಾದ ಶಾರದ ಕಾಫಿ ಕುಡಿದು ವಾಣಿಯನ್ನು ಕರೆದುಕೊಂಡು ಆಟೋದಲ್ಲಿಯೆ ಹೊರಟಳು.ಡಾಕ್ಟರ್ ಗೆ ತೋರಿಸಿ ಅವರು ಬರೆದು ಕೊಟ್ಟ ಔಷದಿ.ಬ್ರೆಡ್,ಹಣ್ಣನ್ನು ತೆಗೆದುಕೊಂಡು ಮನೆಗೆ ಬಂದರು ಅವಳನ್ನು ಮಲಗಿಸಿ ಶಾರದ ಟಿ.ವಿ.ನೋಡುತ್ತ ಕುಳಿತಳು ಆಗ “ಅತ್ತೈ ಅಕ್ಕ ಅಬ್ಬು” ಎಂದು ತೊದಲು ಮಾತಾಡುತ್ತ ಪುಟ್ಟ ವರುಣ್ ಬಂದಾಗ ಪಕ್ಕದಲ್ಲಿ ಕುಳ್ಳಿರಿಸುತ್ತ ಬ್ರೆಡ್ ಹಣ್ಣನ್ನು ತಿನ್ನಿಸಿ ಅವನನ್ನು ಕರೆದುಕೊಂಡು ರೂಂ ನಲ್ಲಿ ಆಟವಾಡಲು ಆಟಿಗೆಗಳನ್ನು ಹಾಕಿ,ಟೆಸ್ಟ್ ಪೇಪರಗಳನ್ನು ಮೌಲ್ಯಮಾಪನದಲ್ಲಿ ತೊಡಗಿದಳು.ಆಗ ರೂಂಗೆ ಬಂದ ಮಂಗಳ “ವಾಣಿ ಗಂಜಿ ಮಾಡ್ತೀನಿ ಕುಡಿದುಬಿಡು ಪುಟ್ಟ” “ಬೇಡ ಕಣಮ್ಮ” ಹೋಗ್ಲಿ ಸ್ವಲ್ಪ ಬ್ರೆಡ್ ತಿಂದು ಹಾರ್ಲಿಕ್ಸ್ ಆದರೂ ಕುಡಿತೀಯ” ಶಾರದ ಕೇಳಿದಳು.”ಆಯ್ತು ಅತ್ತೆ” ಮಾತ್ರೆ ನುಂಗುತ್ತಿರುವಾಗ ಬಂದ ಮಂಜುನಾಥ “ಡಾಕ್ಟತ್ರ ಹೋಗ್ಬರೋಣ ಬಾರಮ್ಮ ಅಂತ ಎಷ್ಟು ಕರೆದ್ರು ಬರಲಿಲ್ಲ ಕಣಕ್ಕ. ಅತ್ತೆ ಒಬ್ಬಳಿದ್ರೆ ಸಾಕು ಇನ್ಯಾರು ಬೇಡ.”ಎನ್ನುತ್ತಾ ಮಗಳ ತಲೆ ಸವರಿದ. ಮಂಗಳ,ಮಂಜುನಾಥ, ಶಾರದ ಒಟ್ಟಿಗೆ ಕುಳಿತು ಊಟ ಮಾಡಿದರು ಬೆಳಿಗ್ಗೆ ತಿಂಡಿಗಾಗಿ ತರಕಾರಿಗಳನ್ನು ಹೆಚ್ಚಿಟ್ಟಳು. ರೂಂಗೆ ಬಂದು ಉಳಿದಿದ್ದ ಟೆಸ್ಟ್ ಪೇಪರ್ ಗಳ ಮೌಲ್ಯಮಾಪನ ಮಾಡುತ್ತಿರುವಾಗ ಮಂಗಳ “ಅಕ್ಕ ಸ್ಕೂಲಿನ ಕೆಲ್ಸ ಅಲ್ಲೇ ಮಾಡದೆ ಮನೆಗೆ ಬಂದು ಮೇಲೂ ಮಾಡ್ತೀರಾ.ಈಗ ಆರಾಮಾಗಿ ಮಲಗ್ರಿ” ಎಂದಳು.”ಈ ಕೆಲ್ಸ ಮುಗಿಸಿದರೇನೇ ನಿದ್ದೆ ಆರಾಮಾಗಿ ಬರುತ್ತೆ. ಅದೇನೋ ಗೊತ್ತಿಲ್ಲ ಕಣೆ ಸ್ಕೂಲಿಗೆ ಹೋಗ್ಬಿಟ್ರೆ ಅಲ್ಲಿರತನಕ ಮನೆಯ ಜ್ಞಾಪಕನೇ ಬರಲ್ಲ.ಆದ್ರೆ ಮನೆಗೆ ಬಂದ್ರೂ ಶಾಲೆಯ ಕೆಲಸ ಮಾತ್ರ ಮನಸ್ಸಿನಲ್ಲೇ ಇರುತ್ತೆ.” ಆಗ ಮಂಗಳ ” ನಿಮಗೆ ಎಲ್ಲಾ ಕೆಲ್ಸನೂ ಅಚ್ಚುಕಟ್ಟಾಗಿ ಮುಗಿಸಬೇಕು.”ಎಂದಳು.”ನೀನೇನೇ ಹೇಳು ಮಂಗಳ. ಈ ಮನೆ ಕೆಲ್ಸ, ಅಡುಗೆ ಎಲ್ಲಾನೂ ನೀನು ನಿಭಾಯಿಸ್ತಾ ಇದೀಯ ನೋಡು ಅದಕ್ಕೆನಾನುನಿರಾಳವಾಗಿರೋದು” ಶಾರದಾ ಹೇಳಿದಾಗ “ನೀವು ತಾನೇ ಇನ್ನೇನಕ್ಕ. ನೀವು ದುಡಿದಿದ್ದೆಲ್ಲನೂ ನಮಗೋಸ್ಕರ ಖರ್ಚು ಮಾಡ್ತಿಲ್ವಾ” ಎಂದು ಮನತುಂಬಿ ಹೇಳಲು” ನೀವು ಬೇರೆ ನಾನು ಬೇರೆ ಅಂತ ನನ್ನ ಮನಸ್ಸಿಗೆ ಯಾವತ್ತೂ ಬಂದಿಲ್ಲ ಮಂಗಳ” “ಅದನ್ನು ನೀನು ಬಾಯ್ಬಿಟ್ಟು ಹೇಳಬೇಕೇ ನಂಗೆ ಅರ್ಥ ಆಗಲ್ಪೇನಕ್ಕ ನೀವಿನ್ನು ಮಲಗ್ರಿ” ಎಂದವಳ ಮಾತನ್ನು ಕೇಳಿ ನೆಮ್ಮದಿಯೆನಿಸಿತು. ನಿದ್ದೆ ಮಾಡುತ್ತಿದ್ದ ವಾಣಿಯ ತಲೆಯನ್ನು ನೇವರಿಸುವಾಗ ಮಂಜುನಾಥ ಹೇಳಿದಂತೆ ವಾಣಿ ತನ್ನನ್ನು ಬಹಳ ಹಚ್ಚಿಕೊಂಡಿರುವುದು ನಿಜವೇ. ನನಗೂ ಆಷ್ಟೆ ವಾಣಿ ಅಂದ್ರೆ ಒಂದು ರೀತಿಯ ಮೋಹ ಮಮಕಾರ ಅಪ್ಪ ಅಮ್ಮನ ಏಕಮಾತ್ರ ಪುತ್ರಿಯಾದ ಶಾರದಾ ಹುಟ್ಟು ಅಂಗವಿಕಲೆ. ಕಾಲು ಊನವಾಗಿಯೇ ಹುಟ್ಟಿದ್ದ ಶಾರದ ನಡೆಯುವಾಗ ಕುಂಟುತ್ತಿದ್ದಳು ಮಗಳ ಅಂಗವೈಕಲ್ಯವು ಅವಳ ತಂದೆತಾಯಿಗಳನ್ನು ಚಿಂತೆಗೀಡು ಮಾಡಿದ್ದು ನಿಜ ಹೆಸರಿಗೆ ತಕ್ಕಂತೆ ಅವಳು ವಿದ್ಯೆಯಲ್ಲಿ ಶಾರದಾ ದೇವಿಯ ವರಪುತ್ರಿಯೇ ಆಗಿ ಓದಿನಲ್ಲಿ ಜಾಣೆಯಾಗಿದ್ದಳು.ಇದು ತಂದೆತಾಯಿಗಳಿಗೆ ಒಂದಿಷ್ಟು ನೆಮ್ಮದಿಗೆ ಕಾರಣವಾಗಿತ್ತು ಮುಂದೆ B.sc.ಹಾಗೂ B.Ed. ನಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ನೇಮಕಗೊಂಡಿದ್ದಳು. ನೋಡಲು ಲಕ್ಷಣವಾಗಿದ್ದು ಶಿಕ್ಷಕ ವೃತ್ತಿಯಲ್ಲಿದ್ದರೂ ಅಂಗವಿಕಲತೆಯಿಂದ ಅವಳ ವಿವಾಹ ಪ್ರಸ್ತಾಪಗಳು ನಿಂತು ಹೋಗುತ್ತಿದ್ದವು. ಹಲವಾರು ಬಾರಿ ಇದು ಪುನರಾವರ್ತನೆಯಾದಾಗ ಶಾರದ ಮನನೊಂದು ಅಪ್ಪ ಅಮ್ಮನ ಹತ್ತಿರ ಗಟ್ಟಿ ನಿರ್ಧಾರ ಮಾಡಿ ಹೇಳಿದ್ದಳು “ಇನ್ನು ಮುಂದೆ ನನ್ನ ಮದುವೆಯ ಪ್ರಯತ್ನ ಮಾಡಬೇಡ್ರಿ ನಾನು ಯಾರ ಹಂಗೂ ಇಲ್ಲದೆ ಜೀವನ ಮಾಡಲು ನನಗೆ ಉದ್ಯೋಗವಿದೆ. ನಾನು ನನ್ನ ತಮ್ಮಇಬ್ರು ಒಬ್ಬರಿಗೊಬ್ರು ಆಸರೆಯಾಗಿ ಬದುಕುತ್ತೇವೆ. ನನ್ನ ಬಗ್ಗೆ ಚಿಂತೆ ಮಾಡದೆ ನೀವು ಧೈರ್ಯವಾಗಿರಿ” ಅಲ್ಲಿಗೆ ಅವಳ ಮದ್ವೆ ವಿಷಯಕ್ಕೆ ಪೂರ್ಣವಿರಾಮ ಬಿತ್ತು. ಅಮ್ಮ ತನ್ನ ತವರೂರಿನಲ್ಲಿ ತನ್ನ ಪಾಲಿನ ನಿವೇಶನವನ್ನು ಮಾರಿ ಆ ಹಣದಲ್ಲಿ ತಾವಿರುವ ಮನೆ ಪಕ್ಕದಲ್ಲೆ ಮಾರಾಟಕ್ಕಿದ್ದ ನಿವೇಶನವನ್ನು ಕೊಂಡು ಕೊಂಡು ಶಾರದೆಯ ಹೆಸರಿಗೆ ಬರೆದಿದ್ದರು. ಅದರ ಜೊತೆ ಅವಳ ಮದುವೆಗೆ ಕೂಡಿಟ್ಟ ಹಣವನ್ನು ಅವಳ ಹೆಸರಲ್ಲಿ ಬ್ಯಾಂಕ್ ನಲ್ಲಿಟ್ಟರು.ತಮ್ಮಮಂಜುನಾಥ ಪಿ.ಯು.ಸಿ.ನಲ್ಲಿ ಫೇಲಾದ ಮೇಲೆ ಅಪ್ಪನ ಜೊತೆಯಲ್ಲಿ ಕಿರಾಣಿ ಅಂಗಡಿ ನೋಡಿಕೊಳ್ಳ ತೊಡಗಿದ. ಅಮ್ಮ ತನ್ನ ತಮ್ಮನ ಮಗಳು ಮಂಗಳಳನ್ನು ಸೊಸೆಯನ್ನಾಗಿ ಮಾಡಿಕೊಂಡಳು.ಇದೆಲ್ಲ ಆಗಿ ಎರಡು ವರ್ಷಗಳು ಆಗುವಷ್ಟರಲ್ಲಿ ಅಪ್ಪ ಪ್ರಯಾಣ ಮಾಡುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಅಸು ನೀಗಿದ್ದರು. ಅಪ್ಪನ ಸಾವಿನಿಂದಾಗಿ ಮಂಕಾಗಿದ್ದ ಅಮ್ಮಮೊಮ್ಮಗಳು ಹುಟ್ಟಿದ ಮೇಲೆ ಮಗುವಿನ ಪಾಲನೆಯಲ್ಲಿ ತೊಡಗುತ್ತಾ ದುಃಖದಿಂದ ಹೊರ ಬಂದಳು. ಮಂಗಳಾ ಎಲ್ಲರೊಂದಿಗೆ ಹೊಂದಿಕೊಳ್ಳುವ ಸ್ವಭಾವದಿಂದಾಗಿ ಎಲ್ಲರ ಮನಸ್ಸನ್ನು ಗೆದ್ದಿದ್ದಳು. ಆಗಲೇ ಶಾರದಾ ಅಮ್ಮನ ಒಪ್ಪಿಗೆಯೊಂದಿಗೆ ತನ್ನ ಹೆಸರಿನಲ್ಲಿದ್ದ ನಿವೇಶನದಲ್ಲಿ ತನ್ನ ಮದುವೆಯ ಹಣ ಮತ್ತು ಬ್ಯಾಂಕ್ ನಲ್ಲಿ ಸಾಲ ತೆಗೆದು ತಾವೆಲ್ಲರೂ ಇರಲು ಕೆಳಗಿನ ಮನೆ ಹಾಗೂ ಬಾಡಿಗೆ ಕೊಡಲು ಮೇಲೊಂದು ಮನೆಯನ್ನು ಕಟ್ಟಿಸಿದಳು. ಹಳೆಯ ಮನೆಯನ್ನು ಬಾಡಿಗೆ ಕೊಟ್ಟು ಹೊಸ ಮನೆಯಲ್ಲಿದ್ದರು. ಎಲ್ಲವೂ ಸರಾಗವಾಗಿ ನಡೆಯುತ್ತಿರುವಾಗಲೇ ಅಮ್ಮನು ಹೃದಯಾಘಾತದಿಂದ ಎಲ್ಲರನ್ನು ಅಗಲಿದ್ದಳು. ಆಗ ವರುಣನಿಗೆ ಇನ್ನೂ ಒಂದು ವರ್ಷವೂ ಆಗಿರಲಿಲ್ಲ. ಈಗ ಮಂಜುನಾಥ, ಮಂಗಳಾ ಇಬ್ಬರೂ ಅಕ್ಕನಾದ ಶಾರದಳಿಗೆ ಮನೆಯ ಹಿರಿಯಳೆಂಬ ಗೌರವದೊಂದಿಗೆ ಪ್ರೀತಿಯಿಂದ ನೋಡುತ್ತಿದ್ದರು.ಅವಳ ಒಪ್ಪಿಗೆಯಿಲ್ಲದೆ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ ಶಾರದ ಸಹ ತಮ್ಮನ ಸಂಸಾರವೇ ತನ್ನ ಸರ್ವಸ್ವವೆಂದು ತಿಳಿದಿದ್ದಳು. ಎರಡನೆ ಮಗು ವರುಣನ ಪಾಲನೆಯಲ್ಲೇ ಮಂಗಳಾಳ ಬಹುಪಾಲು ಸಮಯ ಕಳೆದುಹೋಗುತ್ತಿದ್ದ ಕಾರಣ ಸಹಜವಾಗಿಯೇ ಶಾರದ ವಾಣಿಯ ಜವಾಬ್ದಾರಿ ಹೊತ್ತುಕೊಂಡಳು. ವಾಣಿಯ ತುಂಟಾಟದ ಮಾತುಗಳು ಶಾರದಾಳ ಒಂಟಿತನದ ಬೇಸರವನ್ನು ಮರೆಸಿ ಬಿಟ್ಟಿದ್ದವು ವಾಣಿಯಂತೂ ಊಟ ತಿಂಡಿಗೆ ಮಾತ್ರ ಅವಳಮ್ಮನನ್ನು ಕೇಳುತ್ತಿದ್ದಳು. ಉಳಿದ ಎಲ್ಲದಕ್ಕು ಅತ್ತೆಯ ಹಿಂದೆ ಸುತ್ತು ಹೊಡೆಯುತ್ತಿದ್ದಳು. ವಾಣಿಯನ್ನು ಶಾಲೆಗೆ ಕಳಿಸುವುದು. ಊಟದ ಬಾಕ್ಸ್ ರೆಡಿ ಮಾಡುವುದು, ಶಾಲೆಗೆ ಹೋಗಲು ತಾನೂ ರೆಡಿಯಾಗುವುದು, ಸಂಜೆಯ ವೇಳೆ ಅವಳನ್ನು ಓದಿಸುವುದು ಹಾಗೂ ಶಾಲೆಯ ಕೆಲಸಗಳಲ್ಲಿ ಸಮಯ ಕಳೆದುಹೋಗುತ್ತಿದ್ದುದೇ ಅರಿವಾಗುತ್ತಿರಲಿಲ್ಲ. ಆಗೆಲ್ಲಾ ಮಂಗಳ “ಶಾರದಕ್ಕ, ವಾಣಿನ ನೀವು, ವರುಣನ ನಾನು ಹಂಚಿಕೊಂಡಂಗಾಯ್ತು ಅಲ್ವಾ” ಎನ್ನುತ್ತಿರುತ್ತಾಳೆ. ತನ್ನೆಲ್ಲ ಪ್ರೀತಿ ಮಮತೆಯನ್ನು ಹಂಚಲು ದೇವರು ಕೊಟ್ಟ ವರವೆ ವಾಣಿಯ ರೂಪದಲ್ಲಿ ಬಂದಿದೆಯೇನೋ ಅನ್ನಿಸುತ್ತಿತ್ತು ಶಾರದಳಿಗೆ. ವಾಣಿಯ ಮೇಲೊಂದು ರೀತಿ ವ್ಯಾಮೋಹ ಆವರಿಸಿಬಿಟ್ಟಿತ್ತು. ಒಮ್ಮೊಮ್ಮೆ ಮಂಜು ” ಅಕ್ಕ, ವಾಣಿಗೆ ನೀನೊಬ್ಬಳಿದ್ರೆ ಸಾಕು. ನಾವ್ಯಾರೂ ಬೇಡ. ನಿನ್ನನ್ನು ಬಲು ಹಚ್ಕಂಡು ಬಿಟ್ಟಿದಾಳೆ” ಎಂದಾಗ ಶಾರದ “ಇರ್ಲಿ ಬಿಡು ನಿಮ್ಮನ್ನಲ್ಲದೆ ಇನ್ಯಾರನ್ನ ಹಚ್ಕೋಣಲಿ ಹೇಳು. ನಾವೆಲ್ಲ ಒಂದೇ ತಾನೆ” ಎಂದಾಗ ಓಡಿಬಂದ ವಾಣಿ “ಹೌದು ನಂಗೆ ಅತ್ತೇನೇ ಬೇಕು”ಎನ್ನುತ್ತಾ ಶಾರದಳನ್ನು ಅಪ್ಪಿಕೊಂಡರೆ ಶಾರದಳಿಗೆ ಖುಷಿ.ಎಲ್ಲದಕ್ಕಿಂತ ಹೆಚ್ಚಾಗಿ ಶಾರದಳಿಗಿಷ್ಟ ಆದದ್ದು ವಾಣಿಯ ದಿಟ್ಟತನ ಮತ್ತು ಪ್ರಶ್ನೆಯನ್ನು ಕೇಳದೆ ಸರಿಯಾಗಿ ತಿಳಿಯದೆ ಯಾವುದನ್ನೂ ಒಪ್ಪುವ ಪ್ರಶ್ನೆಯೇ ಇಲ್ಲ.ಹಬ್ಬದ ದಿನ ಮಂಜುನಾಥ ಮಾವಿನೆಲೆ ತೋರಣ ಕಟ್ಟುತ್ತಿರುವಾಗ “ಅಪ್ಪಾ ತೋರಣ ಕಟ್ಟಕ್ಕೆ ಈ ಮಾವಿನ ಎಲೆಯೇ ಯಾಕೆ ಬೇಕು” ಅವರಪ್ಪ ನಿರುತ್ತರನಾಗಿ” ಬರೀ ಇಂಥ ತರ್ಲೆ ಪ್ರಶ್ನೆಗಳನ್ನೆ ಕೇಳೋದು ನೀನು”ಎನ್ನುತ್ತಲೇ ಗದರಿದಾಗ ಮುಖ ಉದಿಸಿ ಕೊಂಡು ಶಾರದೆಯ ಬಳಿ ಬಂದು “ನಿನಗೆ ಗೊತ್ತಾ ಅತ್ತೆ” “ಮಾವಿನ ಎಲೆಗಳು ಬೇರೆ ಗಿಡದ ಎಲೆಗಳಿಗಿಂತ ಹೆಚ್ಚು ಅಮ್ಲಜನಕ ಕೊಡುವುದೇ ಇದಕ್ಕೆ ಕಾರಣ” ಎಂದು ಶಾರದ ಹೇಳಲು ಮತ್ತೇ ಅವಳ ಅಪ್ಪನ ಬಳಿ ಹೋಗಿ ಮಾವಿನಲೆಗಳ ತೋರಣ ಕಟ್ಟುವ ಕಾರಣವನ್ನು ತಿಳಿಸುತ್ತಿದ್ದಳು. ವಾಣಿಯಿನ್ನು ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಅವಳ ನೇರ ದಿಟ್ಟತನ ಎದ್ದು ಕಾಣುತ್ತಿತ್ತು. ಒಮ್ಮೆ”ನಮ್ಮಲ್ಲಿ ಮದುವೆ ಆಗುವಾಗ ಬರೀ ಹೆಣ್ಣಿಗೆ ಮಾತ್ರ ತಾಳಿ ಕಟ್ತಾರೆ ಗಂಡಿಗೆ ಮಾತ್ರ ಏನನ್ನೂ ಕಟ್ಟಲ್ಲ ಯಾಕೆ” ಎಂದು ಕೇಳಿದಳು.ಮಂಗಳ”ಹಿಂದಿನಿಂದ ಬಂದಿರುವ ಸಂಪ್ರದಾಯ ಕಣೆ”ಎಂದರೆ ತಕ್ಷಣ” ಅದನ್ನೇ ಯಾಕೆ” ಅಂತ ಕೇಳಿದರೆ ಏನೇನೋ ಹೇಳ್ತೀಯ ಕಣಮ್ಮ” “ಅತ್ತೆ ನೀನಾದ್ರು ಹೇಳು. ಹೆಣ್ಣಿಗಿದ್ದ ಹಾಗೆಯೆ ಗಂಡಿಗೂ ಮದುವೆ ಆಗಿರೊ ಗುರುತು ಇರಬೇಕಿತ್ತು ಅಲ್ಲವೇನತ್ತೆ” ಎನ್ನುವಳು. ಆಗ ಶಾರದ “ಹೌದು ನೀನು ಕೇಳ್ತಿರೋದು ಸರಿ ಆದ್ರೆ ನಮ್ಮ ಸಮಾಜದಲ್ಲಿ ಎಲ್ಲಾ ನಿಯಮಗಳು ಕೇವಲ ಹೆಣ್ಣಿಗೆ ಮಾತ್ರ ಇದಾವೆ ಹೊರತು ಗಂಡಿಗಂತು ಇಲ್ಲಮ್ಮ”ಎಂದಳು “ಹೌದತ್ತೆ ನೀನು ಹೇಳಿದ್ದನ್ನು ಒಪ್ಕಳ್ಳ ಬಹುದು “.ಓದಿನಲ್ಲಿ ತನ್ನಂತೆಯೆ ಕಡುಜಾಣೆಯಾಗಿರುವ ವಾಣಿಯು ಶಾರದಳ ಹೆಮ್ಮೆಯ ಸೊಸೆ. ಅವಳ ಊಟ ತಿಂಡಿ, ಬಟ್ಟೆಗಳಿಂದ ಹಿಡಿದು ಓದಿಸುವವರೆಗೂ ಎಲ್ಲಾ ಕೆಲಸಗಳಲ್ಲು ಮುತುವರ್ಜಿ ಮತ್ತು ಕಾಳಜಿ ಮಾಡದಿದ್ದರೆ ಶಾರದಳಿಗೆ ನೆಮ್ಮದಿಯಿರುತ್ತಿರಲಿಲ್ಲ.ವಾಣಿ ನೋಡಲು ತನ್ನ ತಾಯಿಯನ್ನೆ ಹೋಲುತ್ತಿದ್ದುದು ಶಾರದಳಿಗೊಂದು ವಿಶೇಷವಾಗಿತ್ತು. ವಾಣಿಗಂತೂ ಅತ್ತೆ ಎಲ್ಲದಕ್ಕೂ ಬೇಕು. ಅತ್ತೆಯಿದ್ದರೆ ಸಾಕು ಅಮ್ಮನೂ ಬೇಡ ವರುಣ ಹುಟ್ಟಿದ ಮೇಲೆ ಅತ್ತೆಯ ಜೊತೆಯೆ ಮಲಗುವುದು ರೂಢಿಯಾಗಿ ಈಗಲೂ ಮುಂದುವರಿದಿದೆ. ಅತ್ತೆಯ ರೂಂನಲ್ಲೇ ಅವಳ ಕಾರುಬಾರು. ಮನೆ ಕಟ್ಟಿಸುವಾಗ ಬ್ಯಾಂಕ್ ನಲ್ಲಿ ತೆಗೆದ ಸಾಲವೆಲ್ಲ ತೀರಿದ ಮೇಲೆ ಮಹಡಿ ಮನೆ ಬಾಡಿಗೆಯನ್ನು ಸಹ ಶಾರದ ಮಂಗಳನ ಕೈಗೆ ಮನೆ ಖರ್ಚಿಗೆಂದು ಕೊಟ್ಟು ಬಿಡುತ್ತಿದ್ದಳು.ತಮ್ಮನ ವ್ಯಾಪಾರದ ಸ್ಥಿತಿಯು ಆರಕ್ಕೇರದ ಮೂರಕ್ಕಿಳಿಯದ ರೀತಿಯಲ್ಲಿತ್ತು ತಮ್ಮನ ಮಕ್ಕಳಿಬ್ಬರ ವಿದ್ಯಾಭ್ಯಾಸದ ಜವಾಬ್ಧಾರಿಯನ್ನೆಲ್ಲ ಶಾರದಳೇ ವಹಿಸಿ ಕೊಂಡಿದ್ದಳು. ಅಪ್ಪಿತಪ್ಪಿ ಒಂದು ದಿನವಾದರೂ ಮಂಗಳ ಶಾರದಳ ಮನ ನೋಯುವಂಥ ಮಾತನ್ನಾಡಿಲ್ಲ. ಒಂದು ರೀತಿಯಲ್ಲಿ ಶಾರದ ತಮ್ಮನ ಸಂಸಾರಕ್ಕೆ ಆಧಾರ ಸ್ತಂಭ. (ಮುಂದಿನ ಭಾಗ ಶನಿವಾರದಂದು)
ನಮ್ಮ ಬಾಳಿನ ಕೆಟ್ಟ ದಿನಗಳ ನಂತರ “ಜವಾನ್ ಬಂದ ಜೀವನ ಪ್ರೀತಿ ತಂದ ಎಂದು ಹರ್ಷ ಪಟ್ಟಿದ್ವಿ”.ಆಮ್ಯಾಲ ನಮಗ ಹರ್ಷದ ಹೊನಲು,ಎಂದು ಅಜ್ಜ ತನ್ನ ಜೀವನದ ಕಥೆ ಹೇಳಿ ಮುಗಿಸಿದ್ದ. ಆ ಅಜ್ಜನ ಕಣ್ಣಲ್ಲಿ ಜಿನುಗಿದ ನೀರು,ದೇಶದ ಹೆಮ್ಮೆಯ ಭಾವ ನಮ್ಮಲ್ಲಿ ಇಂದು ಯಾವ ಮಟ್ಟದಲ್ಲಿದೆ ಎಂದು ಪ್ರಶ್ನೆ ಮೂಡಿತು
ವಿಮೋಚನಾ ದಿನ – ನನ್ನ ಪತಾಕೆ Read Post »
You cannot copy content of this page