ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಪ್ರಸ್ತುತ

ಹೋಮ್ ಕೇರ್ ಹಗರಣ. ಮಾಲತಿಶ್ರೀನಿವಾಸನ್. ಇತ್ತೀಚೆಗೆ ನಗರಗಳಲ್ಲಿ ವೃದ್ಧರ,ರೋಗಿಗಳ,ಮತ್ತು ಮಕ್ಕಳ ಆರೈಕೆಗೆ ಮನೆಯಲ್ಲಿದ್ದು ಮನೆಯವರೊಡನೆ ಸಹಕರಿಸಿಸಹಾಯಮಾಡಲು ಜನರನ್ನುಒದಗಿಸುವ ಸಂಘಗಳುಹೆಚ್ಚಳವಾಗಿವೆ ,ಹಿಂದೆ, ಒಂದೋ ಎರಡೋ nightingale,Red cross,ನಂತಹ ಸಂಸ್ಥೆಗಳು ಈ ಜವಾಬ್ದಾರಿ ಹೊರುತ್ತಿದ್ದವು,ಈಗ ಪ್ರತಿ ಸರ್ಕಾರಿ/ಹಾಗೂಖಾಸಗಿ ಅಸ್ಪತ್ರೆಯಲ್ಲೂಇಂತಹ ಸಂಸ್ಥೆಗಳ ಸಂಚಾಲಕರು ಈ ಕೆಲಸ ಒಪ್ಪಿಕೊಂಡು, ನುರಿತ ಜನರನ್ನು ಒದಗಿಸುತ್ತಿರುವುದು ಶ್ಲಾಘನೀಯವಾದ ಸಮಾಜಸೇವ.     ಅವರ ಶುಲ್ಕ ,ಮುಂಗಡ ಹಣ ದುಬಾರಿ ಅನಿಸಿದರೂತುರ್ತುಪರಿಸ್ಥಿತಿಯಲ್ಲಿ ಅವಶ್ಯಕತೆ ಇದ್ದಾಗ ಸಿಗುವ ನೆರವುಅಪ್ಯಾಯಮಾನ ಹಾಗೂ ಉಪಯುಕ್ತ.      ಇಂತಹ ಸಂಸ್ಥೆಗಳು ಕಳುಹಿಸಿದ ಅಪರಿಚಿತ ಸಹಾಯಕರನ್ನುತಿಂಗಳುಗಳು ಒಮೊಮ್ಮೆವರುಷಗಳುಜೊತೆಯಲ್ಲಿಟ್ಟುಕೊಂಡು,ವೃದ್ಧರ ,ರೋಗಿಗಳ ಆರೈಕೆಯ ಜೊತೆಗೆ ಇವರ ಅವಶ್ಯಕತೆಗಳನ್ನು ಪೂರೈಸುವುದು ಸುಲುಬದ ಕೆಲಸವಲ್ಲ. ಅನುಭವಕ್ಕೆ ಬಂದಾಗಮಾತ್ರಅದರ ಒಳಿತು ಕೆಡುಕು ಮುಜುಗರಗಳ ಅರಿವಾಗುವುದು.    ಹತ್ತಿರದವರು,ತಾಯಿ ತಂದೆ ,ಅತ್ತೆ ಮಾವ,ಖಾಯಿಲೆ ಮಲಗಿದಾಗ,ಅವರ ಆರೈಕೆ ಮತ್ತು ದೈನಂದಿನ, ಒಳಗಿನ ಮತ್ತು ಹೊರಗಿನ ಕೆಲಸಗಳ ಒತ್ತಡ, ಸಹಾಯಕ್ಕೆ ಜನ ಬೇಕೆನಿಸುವುದು ಸಹಜ.     ಎಪ್ಪತ್ತುದಾಟಿರುವ ನಮ್ಮಿಬ್ಬರಿಗೂ ಇಂತಹ ಸಂಧರ್ಭಎದುರಾಗಿದ್ದು ಸ್ವಂತ ತಂಗಿಯನ್ನು (65ವಯಸ್ಸು,) ಬಿದ್ದು ತೊಡೆಮೂಲೆ ಮುರಿದುಕೊಂಡು ಶಸ್ತ್ರ ಚಿಕಿತ್ಸೆಯನಂತರಅವಳನ್ನು ನನ್ನ ಮನೆಗೆ ಆರೈಕೆಗಾಗಿ ಕರೆದುಕೊಂಡು ಬಂದಾಗ.  ಸಹಾಯಕ್ಕೆ ಬಂದವರ ರೀತಿ ರಿವಾಜು ನೆನೆಸಿಕೊಂಡರೆ ಈಗ ನಗುಬರುತ್ತೆ.    ಅಸ್ಪತ್ರೆಯವರೆ ಸಂಪರ್ಕಿಸಲು ಹೇಳಿದ “ಹೋಮ್ ಕೇರ್”ಸಂಸ್ಥೆಯೊಡನೆ ಮಾತಾಡಿದಾಗ,ಸಹಾಯಕ್ಕೆ ಬಂದದ್ದು ಮಧ್ಯವಯಸ್ಸಿನ ಹೆಂಗಸು. ನಾನುಅನುಭವಸ್ಥೆ ರೋಗಿಗಳ ಎಲ್ಲ ರೀತಿಯ ಆರೈಕೆ ನನಗೆ ಗೊತ್ತು ಅಂತ ಹೇಳಿಕೊಂಡು ಬಂದ ಹೆಂಗಸು.    ತಂಗಿಗೆ ಸ್ನಾನ,ಓಡಾಟಕ್ಕೆ ಸಹಾಯ ಮಾಡುವುದರ ಜೊತೆಗೆ ಚರವಾಣಿಯಲ್ಲಿ ಸೀರಿಯಲ್ ನೋಡುವ ಹವ್ಯಾಸ,ಮೊದಲು ಸರಿ ಎನಿಸಿದರೂ,ವೈಫೈ ಪಾಸ್ವರ್ಡ್ಕೊಡಿ ಅಂತ ದಿನಕ್ಕೆ ಹತ್ತು ಸರಿ ಕೇಳುತ್ತಿದದ್ದು ಮುಜುಗರವೆನ್ನಿ ಸುತ್ತಿತ್ತು.ಇಳೆವಯಸ್ಸಿನಲ್ಲಿ ಮಕ್ಕಳು ದೂರದ ಪರದೇಶದಲ್ಲಿ, ಇಬ್ಬರೇಮನೆಲಿ ಬಿಟ್ಟಿಬಿಡೆಯಾಗಿ ಇದ್ದು ರೂಢಿ ಯಾದನಮಗೆ 24 ಘಂಟೆ ಅಪರಿಚಿತರೊಡನೆ ಇರುವಂತಹ ಸ್ಸನ್ನಿವೇಶ,ಜೊತೆಯಲ್ಲಿ ಊಟ ಉಪಚಾರಬೇಕು ಬೇಡಿಕೆಗಳ ಜವಾಬ್ದಾರಿ.   ನಮ್ಮ ಸಹಾಯಕ್ಕೆ ತಮ್ಮ ಮನೆ ಮನೆಯವರನ್ನು ಬಿಟ್ಟುಬಂದಿರುವುದರ ಅರಿವು ಸಹಜವಾಗೆ ನಮ್ಮಲ್ಲಿ ಅವರ ಬಗ್ಗೆ ದಯೆ ಮೂಡಿಸಿದರು,ನಮ್ಮಮನೆಯ ಊಟ ತಿಂಡಿ ವಿಚಾರಗಳಿಗೆ ಹೊಂದಿಕೊಳ್ಳದೆ ತಮ್ಮದೇ ಬೇಕು ,ಬೇಡದ ಅಭ್ಯಾಸಗಳನ್ನು ಹೇರಿದಾಗ ಸಹಜವಾಗಿ ಮುಜುಗರ ಅನಿಸಿತ್ತು.   “ಅಮ್ಮನಾವು ಕಾಫಿಕುಡಿಯೋಲ್ಲ,ಟೀ ನೆ ಅಭ್ಯಾಸ ,ಜೊತೆಗೆ Marie ಬಿಸ್ಕುಟ್ ಬೇಕು,ಬರಿ ಟೀಕುಡಿದ್ರೆ gaastrikku”.ಅಂತ ಹೇಳಿದಾಗ,“ಮಾರೀ ಬಿಸ್ಕುತ್ತು ನಾಯಿ ಇದ್ದಾಗ ತರ್ತಾ ಇದ್ದಿವಿ,ಈಗ ಇದ್ಯೆನೆ?” ಪತಿದೇವರ ನಗಾಡ್ತಾ ಒಗ್ಗರಣೆ.ನೀವ್ ಸುಮ್ನಿರಿ ಅಂತ ಕೂಗಿ,ಕೆಲಸದ ಹುಡುಗನ್ನ ಟೀಪಟ್ನಾ ಬಿಸ್ಕುತ್ ತರೋದಕ್ಕೆ ಓಡಿಸಿದೆ.  ಮುಂದಿನ ಬೇಡಿಕೆ ಕೇಳಿ ಸುಸ್ತಾದೆ ನಾನು,”ಆಂಟಿನಂಗೆ ತಂಗಳಪೆಟ್ಟಿಗೆ ಇಂದ ತೆಗದ ತಣ್ಣಗಿನ ಪದಾರ್ಥ್ಮೈಗಾಗೋಲ್ಲ,ಮೊಸರು ಹೊರಗೆಇಟ್ಟು ಹಾಕಿ ಅಂದುತಂಗಿ ಕೋಣೆ ಸೇರಿದ್ಲು.ಅಯ್ಯೋ ದೇವರೇ ಬೇಸಿಗೆ ಸೆಕೆಲಿ ಮೊಸರು ಫ್ರಿಡ್ಜ್ ನಿಂದ ಹೊರಗೆ,  ದುಬಾರಿ ಬೆಲೆಗಳ ಕಾಲದಲ್ಲಿ ಉಳಿದದ್ದನ್ನುಮಾರನೆದಿನ ಬಿಸಿಮಾಡಿನಾವೆ ತಿನ್ನೋವಾಗ,4-5ಜನ ತಿನ್ನೋಮನೆಯಲ್ಲಿ ಸರಿಯಾಗೇ ಅಳತೆ ಮಾಡಿ ಮಾಡೋದ್ ಹೇಗೆ?,ಮಂಡೆ ಬಿಸಿಯಾಯ್ತು.ಈ ಮನೇಲಿಕದ್ದು ಮುಚ್ಚಿ ಮಾಡೋ ಛಾನ್ಸೆ ಇಲ್ಲ,open kitchenಎಲ್ಲ ಒಪೆನ್ನೇ,ತಂಗಿಗಾಗಿ ಹಾಲು,ಜ್ಯುಸು ಅಂತ ಅವಳುಒಳಗು ಹೊರಗೂ ಓಡಾಡ್ತಾ ಒಂದ್ ಕಣ್ ನನ್ಮೇಲೆ.   ಇದೊಂದು ರೀತಿ  “camel in the camp”ತರ ಆಯ್ತುತಂಗಿ ನಿದ್ದೆ ಮಾಡ್ತಾಯಿದ್ರೆ ಜೋರಾಗಿ ವೂಟ್ನಲ್ಲಿ ಸಿರಿಯಲ್ನೋಡೋದು.,ಗಳಿಗೆ ಒಂದುಸಲ ಇಂಟರ್ನೆಟ್ ಇಲ್ವ ಅಕ್ಕ ಅಂತ ಕೇಳೋದು, ತಾಳ್ಮೆ ಪರೀಕ್ಷೆ ನಡೆದಿತ್ತು.ಇನ್ನು ರೋಗಿಗೆ ಕೊಡೋ ಔಷಧಿಗಳನ್ನು ಪರಕಿಸಿ ಇದು ಸರಿ ಅದು ಸರಿಇಲ್ಲ ಅಂತ ,ವೈದ್ಯರಿಗಿಂತ ತನಗೆ ಗೊತ್ತುಅನ್ನೋಜೋರು.  ಒಂದು ಸಂಜೆ ನೋವು ಜಾಸ್ತಿ ಅಂತ ತಂಗಿ ಹೇಳಿದಾಗ ಅವಳ ವೈದ್ಯರು ಹೇಳಿದ್ದ ಮಾತ್ರೆ ಕೊಡಲು ಹೋದಾಗ“ಅಯ್ಯೋ ಇದೇನ್ ಕೊಡ್ತಿದ್ದೀರ ನೋವಿಗೆ ಎನೂ ಕೆಲಸ ಮಾಡಲ್ಲ,ಬೇರೆ ಹೇಳ್ತೀನಿ ಕೊಡಿ,ಇದರಲ್ಲಿ 10 ವರುಷದ ಅನುಭವ ನಂದು”ಅಂತ ವರಸೆ ತೆಗೆದ್ಲು ,ಮಾನಸಿಕವಾಗಿ ನೋವಿನಿಂದ ಕುಗ್ಗಿದ ತಂಗಿ ಅವಳ ಹೇಳಿದ ಮಾತ್ರೆನೆ ಬೇಕು ಅಂತ ರಾತ್ರಿ ಶುರು ,ನಗರದ ಹೊರಾವಲಯದಲ್ಲಿಮನೆ, ಔಷದಿ ಅಂಗಡಿ ಹತ್ತಿರಿಲ್ಲ ,ಪತಿರಾಯರ ಸಿಟ್ಟುನೆತ್ತಿಗೇರಿತ್ತು.  ಇಂತಹ ಎಡಬಿಡಂಗಿ ಸಹಾಯಕರನ್ನು ಕಳುಹಿಸಿದ ಸಂಸ್ಥೆಗೆ ದೂರಿತ್ತರೆ, ಮುಂಗಡ ಹಣದ ಜೊತೆಗೆ 15ದಿನದ ಒಪ್ಪಂದದ ಪತ್ರ ನೆನಪಿಸಿ,ಬೇರೆಯವರನ್ನು ಕಳುಹಿಸಲು ಒಪ್ಪಿದಾಗ ಸರಿ ಎನಿಸಿತು.   15ದಿನದ ನಂತರ ಇವಳು ಹೊರಟುನಿಂತಾಗ ಪಾಪ ಎನಿಸದಿರಲಿಲ್ಲ, ಕೆಲಸ ಸರಿಯಿದ್ದರು ದಾಷ್ಟೀಕತೆ,ತಲೆಹರಟೆ ತಡೆಯುವುದು ಕಷ್ಟವಾಗಿತ್ತು,ಕಾಂಚಾನಮ್ ಕರ್ಮ ವಿಮೋಚನಮ್ ,ಅಂತ ಮನ ಹಗುರಮಾಡಿಕೊಳ್ಳಲುಕೈಗಿಷ್ಟು ಹಣ ಕೊಟ್ಟು ಕಳುಹಿಸಿ,,ಮಾರನೇ ದಿನ ಬರುವವಳ ಬಗ್ಗೆ ಯೋಚನೆ ಆರಂಭ.    ಮಾರನೇ ದಿನ ಬಂದ ಹುಡುಗಿ ಧಾರವಾಡದ ಪುಟ್ಟಗೌರಿ.”ಇವಲಿಂದ್ದ ಏನು ತೊಂದರೆ ಆಗೋಲ್ಲ ಅಮ್ಮ ಅಂತ ವ್ಯವಸ್ಥಾಪಕ ಭರವಸೆ ಕೊಟ್ಟು ಹೊರಟ.ಎರಡನೇ ಅಂಕ ಪ್ರಾರಂಭವಾಯಿತು,ರಾತ್ರಿ ಮಲಗೊಕ್ಕೆಅಂತ ಕೊಟ್ಟ ಹಾಸಿಗೆ ಮೇಲ್ ಕೂತು”ಅಮ್ಮವರೆ ಇದರಮೇಲ್ ಹಾಸ್ಕೊಳ್ಳೋಕ್ಕೆ ಒಂದ್ ದುಪಟ್ಟಿ ಕೋಡ್ರಲ್ಲ,  “ಬೀರುಯಿಂದ ಹಳೆ ಬೆಡ್ಶೀಟ್ ಹೊರ ತೆಗೆದು ಕೊಟ್ಟಿದ್ದಾಯ್ತು.  ಏಪ್ರಿಲ್  ಬಿಸಿಲು ಶೆಕೆಕಾಲ,ಕಿಟಕಿತೆಗದ್ರೆ ಸೊಳ್ಳೆ,ಫ್ಯಾನ್ ಹಾಕೋದು ಅನಿವಾರ್ಯ, ಹೀಗಿರಲು,ಎಲ್ಲರೂಮಲಗಿದ ನಂತರ ಮಧ್ಯರಾತ್ರಿ ತಂಗಿ ಕೂಗು,”ಫ್ಯಾನ್ ಹಾಕು ಶೆಕೆ, ಎಸ್ಟುಸಲಾ ಹೇಳೊದು,” ಎದ್ದು ನೋಡಿದರೆ ಪುಟ್ಟಗೌರಿ ಪಂಕ ಬಂದ್ ಮಾಡಿ ಕೂತಿದ್ಲು,ಯಾಕ್ ಪಂಕ ಬಂದ್ ಮಾಡ್ದೆ ಗೌರಮ್ಮ,ಅಂದ್ರೆ,”ಪಂಕ ಚಾಲು ಮಾಡಿದ್ರೆ ನಂಗ್ ತಲೀ ನೋಯ್ತದ್ರಿ ನಿದ್ದಿ ಬರಹಂಗಿಲ್ಲ,ಪಂಕದ್ ಗಾಳಿ ಆಗೋಹಂಗಿಲ್ಲ, ನಿದ್ದಿ ಕೆಟ್ಟರೆ ನ ಮುಂಜಾನ್ ಕೆಲಸ ಮಾಡೋಹಂಗೇ ಇಲ್ ನೋಡ್ರಿ”ಅಂದ್ಲು ಪುಟ್ಟಗೌರಿಖಡಕ್ ಭಾಷೆಲಿ. ಅರೆ ಬೇಸಿಗೆ ಕಾಲ ಶೆಕೆ ಪಂಕ ಇಲ್ಲದಿದ್ರೆ ಹೇಗೆ ಗೌರಿ ಅಂದ್ರೆ”ಹಂಗಾರ್ ನಾ ಹೊರಗ್ ಮಲಗ್ ಲೇನು,ನೀವೇ ಇಲ್ ಮಲಾಗ್ರಿ ಅಕಿ ಕೂಡ”ಅಂದ್ಲು ಗೌರಮ್ಮ ,”ಅರೆ ನಿನ್ನ ಕರೆಸಿದ್ ಯಾಕೆ”ಅಂತ ಸ್ವಲ್ಪ ಜೋರ್ ಮಾಡಿದಾಗ,ಸರಿ ಪಂಕ ಹಾಕ್ರಿ ನಾ ಮುಸುಖ್ ಹಾಕ್ಕೊಂಡ ಮಲಗ್ತೇನೆ ಅಂತ ಮುಸುಕೆಳದಳು.ಮತ್ತೆ ಮಧ್ಯ ರಾತ್ರಿ ತಂಗಿ ಕೂಗು,ನೀಡಗನ್ನಲಿ ಎದ್ದು ಬಂದು ನೋಡಿದ್ರೆ,ಫ್ಯಾನ್ ಬಂದ್,ಕೂಗಿದ್ದು ಕೇಳಿಸಲಿಲ್ಲಾರಿ,ಚಳಿ ಆಯ್ತು,ತಿಳೀದೆ ಪಂಕ ಬಂಧ್ಮಾಡಿದೆ ನೋಡ್ರಿ ಅಂತ ಮತ್ತೆ ಸ್ವಿಚ್ ತಿರುಗಿಸಿದಳು.ಮಲಗೊಕ್ಕೆ ಕೊನೆಗ್ ಬಂದಾಗ”ಖಾತ್ರಿ ಹೋಯ್ತು ಚಾಕು ಬಂತು ಡುಂ ಡುಂ ಅಂತ ಪತಿರಾಯರು ಕಿಚಾಯಿಸದಾಗ,ಮೌನವಾಗಿ ಮುಸುಕೆಳೆದು ಬೆಳಗಾಗೋದನ್ನೇ ಕಾಯೋ ಹಾಗಾಯ್ತು.   ಅಂತೂ ಒಂದು ತಿಂಗಳು ಇಂತಹ ಇಟ್ಟುಕೊಂಡು ತಂಗಿವಾಳ್ಕರ್ ಇಟ್ಟುಕೊಂಡು ನಡೆಯೋಷ್ಟು ಆದಾಗ ಪುಟ್ಟುಗೌರಿಗೂ ವಿದಾಯ ಹೇಳೋ ಸಮಯಬಂತು.      ಹೊರತು ನಿಂತ ಪುಟ್ಟಗೌರಿ ಆಡಿದ ಮಾತು ಕೇಳಿಮನಸ್ಸು ಬೆಚ್ಚಗಾಯ್ತು.”ಅಕ್ಕಾವ್ರೆ ನಿಮ್ಮ ಮನಿಸಾರು ತಿಂಡಿ ಹೊಟ್ಟಿಗ್ ಚಂದ್ ಆತು,ಕೈತುಂಬಾ ತಾಟಲ್ಲಿ ,ತಟ್ಟಿ ತುಂಬಾ ಬಡಿಸ್ತಿರಿ ,ಬೇರೆ ಕಡಿ ಮಂದಿ ಹಾಂಗ್ ಇರೋಹಂಗಿಲ್ರಿ, ಲೆಕ್ಕಮಾಡಿ ಉಣಲಿಕ್ಕೆ ಕೊಡತ್ತರ್ರಿ,ನೀವ್ ಉಡೋದು ಒಂದೆರಡು ಕಾಟನ್ ಸೀರೆ ಕೋಡ್ರಲ್ಲಒಂದ್ ನಾಉಟ್ಟು ಇನ್ನೊಂದ್ ನನ್ ಅವ್ವನ್ಗೆ ಕೊಡ್ತೀನಿ,ನೋಡುತ್ಲು ಕೇಳ್ತಾಳ ಆಕಿ ಎನ್ ತಂದಿ ಅಂತ” ಅಂದ್ಲು   ಒಗದು ಇಟ್ಟಿದ್ದ ಎರಡು ಕಾಟನ್ ಸೀರೆ ಜೊತೆಗೆಸ್ವಲ್ಪ ಹಣ ಕೈಲಿಟ್ಟಾಗ,ಖುಷಿಯಾಗ್ ಕಾಲಹಿಡ್ಕೊಂಡ್ “ಆಶೀರ್ವಾದ ಮಾಡ್ರಿ ಅಕ್ಕಾವ್ರೆ ಒಳ್ಳಿ ದಾಗ್ಲಿ ಅಂತ”ನಮಸ್ಕಾರ ಮಾಡಿದಾಗ,ಈ ಸಂಸ್ಕಾರ ,ಮುಗ್ದತೆಈ ಪಟ್ಟಣದಲ್ಲಿ ಬೆಳೆದ ಹೆಣ್ಣು ಮಕ್ಕಳಲ್ಲಿ ಯಾಕೆಮರೆಯಾಗ್ತಿದೆ ಅನಿಸಿ ಮನಸ್ಸಿಗೆ ಕಸಿವಿಸಿಯಾಯಿತು.    ತಮ್ಮ ಸಂಸಾರ ,ಮನೆಯವರನ್ನು ಬಿಟ್ಟು ಸಂಪಾದನೆಗಾಗಿ ಬೇರೊಬ್ಬರ ಮನೆಯಲ್ಲಿದ್ದುವೃದ್ಧರ ಮಕ್ಕಳ ರೋಗಿಗಳ ಆರೈಕೆ ಮಾಡುವಈ ಸಹಾಯಕರ ಸೇವೆ ಕರ್ತವ್ಯ ನಿಷ್ಠೆಯ ಎರಡು ಮುಖಗಳು ಕಾಣುತ್ತೇವೆ ಸಮಾಜದಲ್ಲಿ.   ಮಗ ಸೊಸೆ ಕೆಲಸಕ್ಕೆ ಹೊರಡುತ್ತಲೇ ಮೇಲೆಳಲಾರದವಯೋವೃದ್ಧೆಯ ಸಹಾಯಕರು,ಹಿರಿಯರ ಮೇಲೆ ಒಮ್ಮೊಮ್ಮೆ ಮಕ್ಕಳ ಮೇಲೆ ನಡೆಸುವ ದೌರ್ಜನ್ಯ ಅಸಹನೀಯ.ಊಟ ತಿಂಡಿ ಎಲ್ಲ ವ್ಯವಸ್ಥೆ ಮಾಡಿದ್ದರುಹೊತ್ತುಹೊತ್ತಿಗೆ ಕೊಡುವತಾಳ್ಮೆತೋರಿಸದೆ ,ಚರವಾಣಿ ಸಂಭಾಷಣೆ,ದೂರದರ್ಶನದ ಸೀರಿಯಲ್ ಆಕರ್ಷಣೆ,ಇವರನ್ನುಸೆಳೆಯುತ್ತವೆ.ಇಷ್ಟ ಬಂದಾಗ ಊಟ ತಿಂಡಿಕೊಡುವ ದೋರಣೆ,ಕೆಟ್ಟ ಭಾಷೆಯ ಪ್ರಯೋಗ.ಎಲ್ಲೆಡೆ ಹೀಗೆ ಅಂತ ಹೇಳಲಾಗುವುದಿಲ್ಲ,ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಪ್ರೀತಿ ಕಾಳಜಿಯಿಂದನೋಡಿಕೊಳ್ಳುವವರು ಇದ್ದಾರೆ,ಅವರ ಸೇವಾಭಾವ ದುಡ್ಡಿನಲ್ಲಿ ಅಳೆಯಲಾಗುವುದಿಲ್ಲ.   ಹಿಂದಿನ ಅವಿಭಕ್ತ ಕುಟುಂಬಗಳಲ್ಲಿ ಈ ರೀತಿಯ ಸಮಸ್ಯೆಗಳಿಗೆ ಅಷ್ಟು ಅವಕಾಶವಿರುತ್ತಿರಲಿಲ್ಲ,ಮನೆತುಂಬಾ ಜನ, ಬಾಣಂತಿಯರ ,ರೋಗಿಗಳ ಆರೈಕೆ,ವೃದ್ಧರ ಸೇವೆ,ಮಕ್ಕಳಲಾಲನೆ-ಪಾಲನೆ,ಸಾಮೂಹಿಕ ಕ್ರಿಯೆಗಳಾಗಿಭಾರವೆನಿಸುತ್ತಿರಲಿಲ್ಲ.ಇಂದುಚಿಕ್ಕ ಒಮ್ಮೊಮ್ಮೆ ಚೊಕ್ಕವಲ್ಲದ ಸಂಸಾರಗಳ ವ್ಯವಸ್ಥೆ,ಸ್ವಾರ್ಥ,ಸಿಟ್ಟು,ಅಸಹನೆ,ಅಹಮಿಕೆಯಂತಹನಕಾರಾತ್ಮಕ ಭಾವಗಳ ನರ್ತನ,ಪರಿಣಾಮ ಒತ್ತಡಹಾಗೂ ಖಿನ್ನತೆ ಸಮಸ್ಯೆಗಳು.   ನಾ ಕಂಡ ರೀತಿಯ ರ್ಹೊಂಕೇರ್ ವ್ಯವಸ್ಥೆಯ ಬಗ್ಗೆಸಣ್ಣ ನೋಟ.ಈ ವ್ಯವಸ್ಥೆ ಹಲವಾರು ಕುಟುಂಬಗಳಿಗೆಜೀವನಾಧಾರ.  ಇವರಸೇವೆ ಅವಶ್ಯಕತೆ ಬಿದ್ದಾಗ ಅನಿವಾರ್ಯ ಸಂಸಾರಗಳಿಗೆ/ಸಮಾಜಕ್ಕೆ. ಈ ವ್ಯವಸ್ಥೆ ಯ ರೂವಾರಿಗಳು ತಮ್ಮ ಕಾರ್ಯ ಮತ್ತಷ್ಟು ದಕ್ಷತೆಯಿಂದ ನಡೆಸಿದರೆ ಜನಸೇವೆಗೆ ಒಳಿತು. ಕ

ಪ್ರಸ್ತುತ Read Post »

ಇತರೆ

ಹರಟೆ

ಇಲಿ ಪುರಾಣ ಶೀಲಾ ಭಂಡಾರ್ಕರ್ “ಇಲಿಗಳ ಸಂಸಾರದಲ್ಲೂ ಅಜ್ಜಿಯರು ಇರ್ತಾರಾ? ರಾತ್ರಿ ಮಲಗುವಾಗ ಒಳ್ಳೊಳ್ಳೆ ನೀತಿ ಕತೆಗಳನ್ನು ಹೇಳಿ ಮಲಗಿಸ್ತಾರಾ? ಹೇಗೆ ತಪ್ಪಿಸಿಕೊಳ್ಳುವುದು ಅನ್ನುವ ಟಿಪ್ಸ್ ಹೇಳಿ ಕೊಡ್ತಾರಾ?” ಗೊಣಗ್ತಾ ಇದ್ದೆ ನಾನು. ಮಕ್ಕಳಿಬ್ಬರೂ ಮುಖ ಮುಖ ನೋಡಿಕೊಂಡು “ಅಮ್ಮ ಶಶಿಕಪೂರ್” ಅಂತ ಮುಸಿ ಮುಸಿ ನಗ್ತಾ ಇದ್ರು. ನಮ್ಮನೇಲಿದ್ದ ಗೊಣಗುವ ಶೇಷಿಯ ಕತೆ ಹೇಳಿದ್ನಲ್ಲ. ಶೇಷಿಗೆ ದಿನ್ನು, ಶಶಿಕಪೂರ್ ಅಂತ ಹೆಸರಿಟ್ಟಿದ್ದನ್ನೂ ಹೇಳಿದ್ದೇನೆ. ನಿಮಗೆ ಮರೆತಿರಬಹುದು. ನನಗೆ ಕೋಪ ಬಂತು. “ನಿಮಗೇನು ಗೊತ್ತು? ನಗ್ತಿದಿರಲ್ಲ ನೀವು!” ಅಂತ ಬೈದೆ. ದೊಡ್ಡವಳು ಕೂಡಲೇ ಕೂತಲ್ಲಿಂದ ಎದ್ದು ಅಡುಗೆ ಮನೆಗೆ ಬಂದು ನನ್ನ ಭುಜ ಹಿಡಿದು ಪ್ರೀತಿಯಿಂದ “ಏನಾಯ್ತಮ್ಮ?” ಅಂದಾಗ.. ಚಿಕ್ಕವಳೂ ಬಂದು ನಿಂತಳು. “ಏನಿಲ್ವೆ… ಇಷ್ಟು ವರ್ಷದಲ್ಲಿ ಮೊದಲ ಸಲ ನಮ್ಮನೇಲಿ ಇಲಿ ಸೇರಿಕೊಂಡಿದೆ. ಒಂದೆರಡು ಸಲ ನೋಡಿದೆ” ಅನ್ನುವುದರೊಳಗೆ, … ಚಿಕ್ಕವಳು “ಅಬಾ….” ಅಂದವಳೇ ಒಂದೇ ಉಸಿರಿಗೆ ಓಡಿ ಡೈನಿಂಗ್ ಟೇಬಲ್ ಚೇರ್ ಹತ್ತಿ ನಿಂತು ಬಿಟ್ಟಳು. ದೊಡ್ಡವಳು ಸ್ವಲ್ಪ ಧೈರ್ಯದಿಂದ “ಎಲ್ಲಿ!?” ಅಂತ ಕೇಳಿದಳು. “ಇಲ್ಲೇ ಈಗ ನೋಡಿದೆ. ಆದರೆ ಪಕ್ಕದ ಮನೆಯವರ ಹತ್ತಿರ ಇಲಿ ಹಿಡಿಯುವ ಬೋನು ತಂದು ಇಟ್ಟು ಮೂರು ದಿನ ಆಯ್ತು. ಬೋನ್ ಹತ್ರ ಮಾತ್ರ ಹೋಗ್ತಿಲ್ಲ. ಜಾಗ ಬದಲಿಸಿ ಬದಲಿಸಿ ಇಟ್ಟು ನೋಡಿದೆ.” ಅಂದೆ. ಅಡುಗೆ ಮನೆಯ ಒಳಗಿದ್ದವಳು ಮೆಲ್ಲ ಮೆಲ್ಲ ಹೊರಗೆ ಹೋಗುತ್ತಾ.. “ಇರು ಗೂಗಲ್ ಮಾಡ್ತೇನೆ. ಮೌಸ್ ಹೇಗೆ ಹಿಡಿಯುವುದು ಅಂತ” ಅನ್ನುತ್ತಾ ಮೊಬೈಲ್ ತಗೊಂಡು ಕೂತಳು. “ಅದಕ್ಕೆಲ್ಲ ಗೂಗಲ್ ಯಾಕೆ? ಬೋನಿನೊಳಗೆ ಬೀಳುತ್ತೆ. ಆದರೆ ನನಗೆ ಡೌಟ್ ಅದರಜ್ಜಿ ಎಲ್ಲೋ ಹೇಳಿಕೊಟ್ಟಿರಬೇಕು.” ಅನ್ನುತ್ತಾ ದೋಸೆ ತಟ್ಟೆಗೆ ಹಾಕಿ ಚಟ್ನಿ ಬೆಣ್ಣೆ ಡೈನಿಂಗ್ ಟೇಬಲ್ ಮೇಲಿದೆ ತಗೊಂಡು ತಿನ್ನು ಅಂತ ಚಿಕ್ಕವಳನ್ನು ಕರೆದರೆ. ಅಲ್ಲಿಂದಲೇ “ನೀನೇ ಹಾಕಿ ಕೊಡು ನಾನಿಲ್ಲಿ ನಿಂತೇ ತಿನ್ನುತ್ತೇನೆ.” ದೊಡ್ಡವಳು ಮೊಬೈಲಿಂದ ತಲೆ ಎತ್ತದೆ “ಇಷ್ಟು ಡುಮ್ಮಿ ಇದಿಯಾ. ನಿನ್ನ ಒಂದು ಬೆರಳಿನಷ್ಟಿರೋ ಇಲಿಗೆ ಹೆದರ್ತಿಯಲ್ಲ” ಅಂತ ಛೇಡಿಸಿದಾಗ, ಫಕ್ಕನೆ ಕುರ್ಚಿಯಿಂದ ನೆಗೆದು, ನಂಗೆ ಡುಮ್ಮಿ ಅಂತಿಯಾ ಅಂತ ಅವಳಿಗೆ ಹೊಡೆಯಲು ಹೋದಳು. “ಅಮ್ಮಾ…. ಇಲಿ” ಅಂತ ದೊಡ್ಡವಳು ಕಿರುಚಿದಾಗ ಡುಮ್ಮಿ ಒಂದೇ ನೆಗೆತಕ್ಕೆ ಕುರ್ಚಿಯ ಮೇಲೆ ಕಣ್ಣು ಮುಚ್ಚಿ ನಿಂತಾಯ್ತು. ಪಾಪ ಅಂತ ಅಲ್ಲಿಯೇ ತಟ್ಟೆ ಕೈಗೆ ಕೊಟ್ರೆ ತಿನ್ನುತ್ತಾ ” ಬೋನಿನೊಳಗೆ ಹೇಗೆ ಹೋಗುತ್ತೆ?”  ಅವಳು ಹಾಗೆಯೇ. “ಅಬ್ಬಾ!! ಶುರುವಾಯ್ತು ಇನ್ನು ಪ್ರಶ್ನೆಗಳ ಸರಮಾಲೆ. ಅಮ್ಮ ನೀನೇ ಹೇಳ್ತಾ ಹೋಗು. ಇವಳಿಗೆ ಪ್ರಶ್ನೆ ಕೇಳಲಿಕ್ಕೆ ಬಿಡಬೇಡ.”  ದೊಡ್ಡವಳು ಅಂದಾಗ. ಕುರ್ಚಿಯ ಮೇಲಿನವಳು ” ಇರು ನಿಂಗೆ. ಇಲಿ ಹೋಗ್ಲಿ. ಆಮೇಲೆ ಮಾಡ್ತಿನಿ”. “ದೇವರೇ… ಇಲಿ ಇಲ್ಲೇ ಇರಲಿ.” ದೊಡ್ಡವಳಿಗೆ ಆಟ. ಚಿಕ್ಕವಳಿಗೆ ಸಂಕಟ. ಹೊಟ್ಟೆ ತುಂಬಿತೇನೋ ಚಿಕ್ಕವಳಿಗೆ ಯೋಚನೆ ಶುರುವಾಯ್ತು. “ನಾನು.. ಶಾಲೆಗೆ, ಟ್ಯೂಷನ್ ಗೆ ಹೇಗೆ ಹೋಗ್ಲಿ” “ಮೊದಲು ಇಳಿದು ಕೈ ತೊಳೆಯಲು ಹೋಗು” ಅಂದೆ. “ಅಯ್ಮಮ್ಮಾ…… ಆಗಲ್ಲ. ನಂಗೆ ಭಯ” ನಾನು ಹೇಳಿದೆ, “ಪಕ್ಕದ ಮನೆಯವರ  ಇಲಿ ಬೋನು ತಂದು ಇಟ್ಟಿದ್ದೇನೆ. ಅವರಂದ್ರು, ಕಾಯಿ ಚೂರಾಗಲಿ, ವಡೆ ಬೋಂಡ ಅಂತಾದ್ದು ಏನಾದರೂ ಆ ತಂತಿಗೆ ಸಿಕ್ಕಿಸಿಡಿ ಅಂತ. ಈ ನಿಮ್ಮಪ್ಪ, ಒಂದು ಈರುಳ್ಳಿ ಹೆಚ್ಚಿ ನಾಲ್ಕು ಬೋಂಡ ಮಾಡು ಮೂರು ನನಗಿರಲಿ, ಒಂದು ಇಲಿಗೆ ಇಡು. ಪಾಪ ನಮ್ಮನೆಗೆ ಬಂದಿದೆ ಅಷ್ಟಾದರೂ ನೋಡಿಕೊಳ್ಳಬೇಕಲ್ವಾ. ಅಂತೆ. ಈರುಳ್ಳಿ ಬೋಂಡ ಇಟ್ಟು ಮೂರು ದಿನ ಆಯ್ತು, ಇನ್ನೂ ಬಿದ್ದಿಲ್ಲ” ಅಂದೆ. ” ಏನೂ… ಮೂರು ದಿನ ಆಯ್ತಾ? ಯೆಬ್ಬೇ. ದಿನಾ ಫ್ರೆಶ್ ಆಗಿ ಇಡಬೇಕಮ್ಮ. ಪಾಪ.” ಅಂದ ದೊಡ್ಡವಳ ತಲೆಯ ಮೇಲೊಂದು ಮೊಟಕಿ ಹೇಳಿದೆ, ” ಅಥವಾ ನಿಮ್ ತರ ಈಗಿನ ಜಮಾನಾದ ಇಲಿಗೂ ಪಿಜ಼ಾ, ಬರ್ಗರ್ ಬೇಕೇನೋ ಯಾರಿಗ್ಗೊತ್ತು.” ಇದೊಳ್ಳೆ ಮಾಡರ್ನ್ ಇಲಿ ಆಯ್ತಲ್ಲ. ಏನು ಮಾಡುವುದೀಗ? ಪಕ್ಕದ ಮನೆಯವರ ಬಳಿ ಹೇಳಿದಾಗ ಅವರಂದರು ಈವಾಗ ಏನೋ ಮ್ಯಾಟ್ ತರ ಬಂದಿದೆಯಂತೆ ಅದನ್ನು ಬಿಡಿಸಿಟ್ಟರೆ ಅದರಲ್ಲಿರೋ ಜೆಲ್ ಗೆ ಇಲಿ ಅಂಟಿ ಕೊಳ್ಳುತ್ತಂತೆ ಅಂತ. ಅದನ್ನು ತಂದಿಟ್ಟು ನೋಡೋಣ ಅಂದೆ. “ನಿನ್ನ ಮಾಡರ್ನ್ ಇಲಿ ಮರಿ ಅದನ್ನೂ ಗೂಗಲ್ ಮಾಡಿ ನೋಡಿರಬಹುದು, ಅದನ್ನು ದಾಟೋದಕ್ಕೆ ಉಪಾಯವನ್ನು ಕೂಡ ಕಂಡು ಹಿಡಿದಿರಬಹುದು” ಅಂದಳು ನಮ್ಮ ಗೂಗಲ್ ರಾಜಕುಮಾರಿ. ನಮ್ಮಜ್ಜಿ, ನಮ್ಮಮ್ಮ ಎಲ್ಲಾ ಹೇಳ್ತಿದ್ರು, ಗಣಪತಿಗೇನಾದರೂ ಹರಕೆ ಹೇಳಿದ್ದು ಮರೆತು ಹೋಗಿದ್ದರೆ ನೆನಪಿಸಲು ಇಲಿಯನ್ನು ಕಳಿಸ್ತಾನೆ ಅಂತ. ಮರೆತಿರಬಹುದಾದ ಎಲ್ಲ ಹರಕೆಗಳನ್ನು ತೀರಿಸುತಿದ್ದೇನೆ. ನೋಡೋಣ ಯಾವಾಗ ಹೋಗುತ್ತೋ. ಅದರ ಬಾಯಿಗೆ ಯಾವುದೂ ಸಿಗದ ಹಾಗೆ ಇಡುವ ಕೆಲಸವೇ ಇಡೀ ದಿನ. ಅಥವಾ ಹೊಸ ಬಜ್ಜಿ ಬೋಂಡದ ಆಸೆಗೆ ಕಾಯ್ತಾ ಇದೆಯೋ. ಇವಳು ಈ ಜನ್ಮದಲ್ಲಿ ಫ್ರೆಶ್ ಬೋಂಡ ಇಡಲ್ಲ ಅಂತ ಗೊತ್ತಾಗ್ಲಿ. ಮತ್ತೆ ಯಾವತ್ತೂ ನಮ್ಮನೆ ದಾರಿಲಿ ಬರಕೂಡದು. ಹಾಗಂದುಕೊಂಡಿದ್ದೇನೆ ***********************

ಹರಟೆ Read Post »

ಇತರೆ

ಬುದ್ಧ ಪೂರ್ಣಿಮಾ ವಿಶೇಷ

ಆಸೆಯೇ ದು:ಖಕ್ಕೆ ಮೂಲ ಚಂದ್ರು ಪಿ.ಹಾಸನ ಆಸೆಯೇ ದುಃಖಕ್ಕೆ ಮೂಲ ಎಂಬುದೇ ಜ್ಞಾನ಻ಯೋಗಿಯ ಪ್ರಸಿದ್ಧ ತತ್ವ ಏಕತೆಯು ನಿಸ್ವಾರ್ಥ ಗುಣಗಳನ್ನು ಎತ್ತಿ ಹಿಡಿಯುತ್ತದೆ. ಆಗ ಸ್ವಾರ್ಥತೆ ಕಡಿಮೆಯಾಗಿ ಮಾನವೀಯ ಮೌಲ್ಯಗಳು ಹೊರಹೊಮ್ಮುತ್ತದೆ. ಒಟ್ಟಾರೆಯಾಗಿ ಮಾನವ ತನ್ನ ಜೀವನದಲ್ಲಿ ಸ್ವಾರ್ಥತೆಯ ಬಿಟ್ಟು ನಿಸ್ವಾರ್ಥ ಸೇವೆ ಮಾಡುವುದಲ್ಲಾ ಮಾನವೀಯ ಮೌಲ್ಯಗಳಾಗುತ್ತವೆ. ಅದಕ್ಕಾಗಿ ಮಾನವ ಬೆಳೆಸಿಕೊಳ್ಳಬೇಕಾದ ಒಳ್ಳೆಯ ಗುಣಗಳೇ  ಮೌಲ್ಯಗಳು. ನಮ್ಮ ಸಮಾಜದಲ್ಲಿ ಅಂಧಕಾರ, ದಾರಿದ್ರ್ಯ, ಅನಾಚಾರಗಳು ತಾಂಡವ ಮಾಡುತ್ತಿದ್ದಾಗ ಈ ಮಾನವೀಯ ಮೌಲ್ಯಗಳು ತಲೆಎತ್ತಿದರೆ ಈ ಸಮಸ್ಯೆಗಳಿಗೆ ಭಹುಶಃ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಬಹುದು. ಈ ನಿಟ್ಟಿನಲ್ಲಿ ಮಾನವೀಯ ಮೌಲ್ಯಗಳ ತನ್ನಲ್ಲಿ ಅಡಗಿಸಿಕೊಂಡು, ಅಹಿಂಸೆಯ ಮಾರ್ಗ ಹಿಡಿದು,ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ, ಬೌದ್ಧ ಧರ್ಮದ ಸಂಸ್ಥಾಪಕ ಶ್ರೀ ಭಗವಾನ್ ಗೌತಮ ಬುದ್ಧರು.  ಜನನ (ಕ್ರಿ ಪೂ ೫೫೭) ಗೌತಮ ಬುದ್ಧರ ಹುಟ್ಟಿದ ಸ್ಥಳ ಲುಂಬಿನಿ ಗ್ರಾಮ. ತಂದೆ ಶುದ್ಧೋಧನ ತಾಯಿ ಮಾಯದೇವಿ. ಮೊದಲ ಹೆಸರು ಸಿದ್ದಾರ್ಥ. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ಬುದ್ಧನನ್ನು ಗೌತಮಿ ಎಂಬ ಸ್ತ್ರೀಯೊಬ್ಬಳು ಸಾಕುತ್ತಾಳೆ. ಆದುದರಿಂದ ಸಿದ್ದಾರ್ಥ ‘ಗೌತಮ’ನೆಂದು ಕರೆಯಲ್ಪಡುತ್ತಾರೆ. ತಂದೆ ಶುದ್ಧೋಧನ ಮಗ ಚಕ್ರವರ್ತಿಯಾಗಬೇಕೆಂಬ ಆಶಯದಿಂದ ಅವನಿಗೆ ದುಃಖದ ಸನ್ನಿವೇಶಗಳೇ ಕಾಣದಂತಹ ಕೃತಕ ವಾತಾವರಣವನ್ನು ಸೃಷ್ಟಿಸಿ, ಅವನನ್ನು ಬೆಳೆಸುತ್ತಾರೆ. ಯಶೋಧರೆ ಎಂಬ ಸುಂದರ ಕನ್ಯೆಯೊಂದಿಗೆ ಅವನ ವಿವಾಹವನ್ನು ಮಾಡುತ್ತಾರೆ. ಗೌತಮನಿಗೆ ‘ರಾಹುಲ’ ಎಂಬ ಮಗನು ಹುಟ್ಟುತ್ತಾನೆ. ಮಗುವಿಗೆ ವರ್ಷ ತುಂಬುವುದರೊಳಗೆ ಸಿದ್ದಾರ್ಥನಿಗೆ ದುಃಖದ ‘ದಿವ್ಯದರ್ಶನ’ವಾಗುತ್ತದೆ. ಇಡೀ ಜಗತ್ತಿನ ಘೋರ ದುಃಖವನ್ನು ಕಂಡು ಬೆಚ್ಚಿಬಿದ್ದ ಸಿದ್ದಾರ್ಥ, ಸೇವಕ ಚೆನ್ನನೊಡನೆ ಜಗವೆಲ್ಲಾ ಮಲಗಿರುವಾಗ ಬುದ್ದನಾಗಲೂ ಹೊರಟು, ದುಃಖಕ್ಕೆ ಶಾಶ್ವತ ಪರಿಹಾರವನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಾರೆ.  ಸನ್ಯಾಸಿ ಜೀವನ ಮತ್ತು ಬೋಧನೆ ವಿವಿಧ ಪಂಥಗಳ ಗುರುಗಳ ಹತ್ತಿರ ಸತತವಾಗಿ ೬ ವರ್ಷಗಳ ಕಾಲ ಅವರು ಹೇಳಿದಂತೆ ದೇಹ ದಂಡನೆ ಮಾಡಿ ಇದರಿಂದ ಯಾವುದೇ ಪ್ರತಿ ಫಲ ಮತ್ತು ಶಾಂತಿ ಸಿಗದೆ ಅಂತಿಮವಾಗಿ ಪರಮ ಸತ್ಯ ಕಾಣಲು ಮುಂದಿನ ೬ ವರ್ಷಗಳು ಬೋಧಿ ವೃಕ್ಷದ ಕೆಳಗೆ ನಿರಂತರ ಧ್ಯಾನ ತಪಸ್ಸು ಮಾಡುವುದರ ಮೂಲಕ ಪರಿಪೂರ್ಣ ಜ್ನಾನೋದಯ ಪಡೆದುಕೊಂಡರು. ಗೌತಮ ಬುದ್ಧರು ಮುಂದಿನ ೪೫ ವರ್ಷಗಳು ನಿರಂತರವಾಗಿ ಧಮ್ಮೋಪದೇಶಗಳನ್ನು ಜನಸಾಮಾನ್ಯರಿಗೆ ನೀಡುವ ಮೂಲಕ ಮಾನವನ ದುಖ ನಿವಾರಣೆಗೆ ತ್ರಿಸರಣ ಬೋಧನೆ ಮಾಡಿದರು. ಈ ಮೂರು ಬೌದ್ಧ ಧಮ್ಮದ ಮೂಲ ಸಂಕೇತಗಳು.ಇವುಗಳನ್ನು ಪ್ರತಿಯೋಬ್ಬರ ಜೀವನ ಧ್ಯೇಯಗಳಾಗಿ ಒಪ್ಪಿಕೊಂಡು ಸಂತೋಷವಾಗಿರುವುದು. ಅವುಗಳೆಂದರೆ, ಬುದ್ಧಂ ಶರಣಂ ಗಚ್ಚಾಮಿ(ನಾನು ಬುದ್ಧನಿಗೆ ಶರಣಾಗುತ್ತೆನೆ.) ಧಮ್ಮಂ ಶರಣಂ ಗಚ್ಚಾಮಿ(ನಾನು ಧಮ್ಮಕ್ಕೆ ಶರಣಾಗುತ್ತೆನೆ.) ಸಂಘಂ ಶರಣಂ ಗಚ್ಚಾಮಿ(ನಾನು ಸಂಘಕ್ಕೆ ಶರಣಾಗುತ್ತೆನೆ.) ಗಚ್ಚಾಮಿ ಎಂದರೆ, ಸತ್ಯದಿಂದ ಬೌದ್ಧ ಧಮ್ಮ ಸ್ವೀಕರಿಸುತ್ತೆನೆ ಎಂದು ಅರ್ಥೈಸುತ್ತದೆ. ಈ ಮೂರು ಶರಣ್ಯಗಳನ್ನು ಉಪಾಸಕರು ಮೂರು ಬಾರಿ ಉಚ್ಚರಿಸುವ ಮೂಲಕ ತಾವು ಬೌದ್ಧ ಧಮ್ಮಾಚಾರಿಗಳೆಂದು ಘೋಷಿಸುತ್ತಾರೆ.  ಸಂರ್ಪೂರ್ಣ ಮುಕ್ತಿ ಮಾರ್ಗ ಸಿದ್ಧಿಗೆ ಭಿಕ್ಕುಗಳ ಮತ್ತು ಸಂಘಗಳು ಜೀವನ ನಡವಳಿಕೆಗೆ ಸಂಬಂಧಿಸಿದಂತೆ ತ್ರಿಪಿಠಕಗಳನ್ನು ಭೋಧಿಸಿದ್ದಾರೆ. ಅವುಗಳೆಂದರೆ: ೧.ವಿನಯ ಪಿಟಕ: ಭಿಕ್ಕು ಮತ್ತು ಭಿಕ್ಕು ಸಂಘಗಳ ನಡವಳಿಕೆಗಳಿದೆ ಸಂಬಂಧಿಸಿದ ನಿಯಮಗಳನ್ನು ಕ್ರೋಢೀಕರಿಸಲಾಗಿದ ಗ್ರಂಥವಾಗಿದೆ. ೨.ಸುತ್ತ ಪಿಟಕ: ನಾಲ್ಕು ಆರ್ಯ ಸತ್ಯಗಳಿಗೆ ಸಂಬಂಧಿಸಿದಂತೆ ಅನೇಕ ಸಂಭಾಷಣೆಗಳು, ಗೀತೆಗಳು, ಕಥೆ ಉಪಕಥೆಗಳು ಮುಂತಾದವುಗಳನ್ನು ಸಂಗ್ರಹಿಸಿದ ಗ್ರಂಥವಾಗಿದೆ. ೩. ಅಭಿಧಮ್ಮ ಪಿಟಕ : ಸುತ್ತ ಪಿಟಕದಲ್ಲಿನ ಬೋಧನೆಗಳನ್ನು ಮೂಲ ತತ್ವಗಳನ್ನು ವಿಶಾದೀಕರಿಸಿದ ಗ್ರಂಥವಾಗಿದೆ. ಈಗೆ ತನ್ನ ಸ್ವಸಾಮಾರ್ಥ್ಯದಿಂದ , ಅತ್ಯುನ್ನತ ಜ್ಞಾನ ಪಡೆದು ಜಗತ್ತಿನ ಪರಮ ಸತ್ಯವನ್ನು ಬೋಧಿಸಿದ ಮಹಾಗುರು.ಮದ್ಯಮ ಮಾರ್ಗದ ಮೂಲಕ ಮೈತ್ರಿ, ಕರುಣೆ,ದಯೇ , ಸಮತೆ, ಪ್ರೀತಿ, ಅನುಕಂಪ, ಮತ್ತು ಜ್ಞಾನದೊಂದಿಗೆ ಅಷ್ಠಾಂಗ ಮಾರ್ಗಗಳನ್ನು ತೋರಿಸಿಕೊಟ್ಟರು. ಈ ಸತ್ಯ ವನ್ನು ನಾವು ಪರಿಪಾಲಿಸಿದರೆ ನಮ್ಮ ಜೀವನದಲ್ಲಿ ಬುದ್ಧತ್ವವನ್ನು ಪಡೆಯಬಹುದು. ಪರಿಶುದ್ದವಾದ ಜೀವನ ನಡೆಸುವುದು ಪ್ರತಿಯೋಬ್ಬರ ಕರ್ತವ್ಯವಾಗಿದೆ. ಇದರಿಂದ ದುಃಖ ನಿವಾರಣೆ ಸಾದ್ಯ. ಧರ್ಮವೆಂದರೆ  ಸತ್ಯದ ಬೆಳಕು ಇದರಿಂದ ಜೀವನ ಸಾಕ್ಷಾತ್ಕಾರವನ್ನು ಪಡೆಯ ಬಹುದು. ಮನುಷ್ಯರು ಮನಸ್ಸಿನ ಶುದ್ಧಿ ಮತ್ತು ಅಂತರ್ ದೃಷ್ಟಿಯಿಂದ ಅಂತಿಮವಾಗಿ ನಿಬ್ಬಾಣ ಹೊಂದಬಹುದು ಎಂದಿದ್ದಾರೆ. ಬುದ್ಧರ ಉಪದೇಶಗಳು ಜ್ಞಾನ ಮಾರ್ಗವನ್ನು ಬೋಧಿಸಿದೆ. ಅದರೊಂದಿಗೆ  ಅಹಿಂಸಾ ಮಾರ್ಗ ಕರುಣೆ, ಅನುಕಂಪಗಳ ದಾರಿ ಹಿಡಿದು ಸಮಾಜ ಸುಧಾರಣೆಗಳನ್ನು ಮಾಡಿದ್ದರು. ಇಂತಹ ದಿವ್ಯ ಮಾರ್ಗ ದರ್ಶಕರು ಪ್ರತೀ ಸಹಸ್ರ ವರ್ಷಗಳಿಗೊಮ್ಮೆ ಉದಯವಾಗತಿದ್ದರೇ ಬಹುಶಃ ನೈತಿಕತೆ ಸಾತ್ವಿಕತೆ ಹೆಚ್ಚಿ ಅಪರಾಧ ಗಂಟು ಕಡಿತಗೊಳಿಸಬಹುದು. *********

ಬುದ್ಧ ಪೂರ್ಣಿಮಾ ವಿಶೇಷ Read Post »

ಇತರೆ

ಬುದ್ಧ ಪೂರ್ಣಿಮಾ ವಿಶೇಷ

  ‘ಮುಟ್ಟಿದರೆ ಕೆಡುಕಿಲ್ಲ ಮುಟ್ಟದಿರೆ ಒಳಿತು’  ವಸುಂಧರಾ ಕದಲೂರು   ‘ಮುಟ್ಟಿದರೆ ಕೆಡುಕಿಲ್ಲ ಮುಟ್ಟದಿರೆ ಒಳಿತು’              ಈ ಸಾಲುಗಳು ಮಾಸ್ತಿಯವರ ‘ಯಶೋಧರ’ ನಾಟಕದಲ್ಲಿದೆ ಎಂಬ ನೆನಪು.            ರಾಜಕುಮಾರನಾಗಿದ್ದ ಸಿದ್ಧಾರ್ಥನು ಬುದ್ಧನಾಗಿ, ಜೀವನದ ಪರಮಸತ್ಯವನ್ನು ಕಂಡು, ಅದನ್ನು ಜಗತ್ತಿಗೆ ಬೋಧಿಸಿದ. ತನ್ನ ಉಪದೇಶ ಮಾತ್ರದಿಂದಲೇ ಲೋಕದ ಕಣ್ತೆರೆಸಿದವನು, ಜನರ ದುಃಖ ಮರೆಸಿದವನು, ಕಣ್ಣೀರನು ಒರೆಸಿದವನು ಹೀಗೆಲ್ಲಾ ಹೇಳುತ್ತಾರೆೆ. ಬುದ್ಧನ ವಿಚಾರದಲ್ಲಿ ಇದೆಲ್ಲಾ ನಿಜವಿರಬಹುದು.        ಮುಂದೆ ಯಾವಾಗಲೋ ಸಿದ್ಧಾರ್ಥನಿಂದ ಬುದ್ಧನಾಗಿ ಪರಿವರ್ತಿತನಾದ ಮಹಾನುಭಾವನು  ಒಮ್ಮೆ ಮರಳಿ ತನ್ನೂರಿಗೆ ಬಂದಿರುತ್ತಾನೆ. ಆತನಿಂದ ಆಶೀರ್ವಚನ ಪಡೆಯಲು ಗುಂಪುಗಟ್ಟುವ ಮಂದಿಯಲ್ಲಿ  ಪೂರ್ವಾಶ್ರಮದ ಪತ್ನಿ ‘ಯಶೋಧರಾ’ ಸಹ ತನ್ನ ಮಗ ರಾಹುಲನೊಡನೆ ನಿಂತಿರುತ್ತಾಳೆ.     ಒಂದು ಕಾಲದ ತನ್ನ ಪ್ರಿಯ ಪತಿ ಈಗ ಜಗತ್ತಿನ ಮಹತ್ತಿನ ಧರ್ಮಶ್ರೇಷ್ಠನಾಗಿದ್ದಾನೆ. ಆತನನ್ನು ಇದಿರುಗೊಂಡಿರುವ ತಾನು ಆತನನ್ನು ಮುಟ್ಟಿ ಆಶೀರ್ವಾದ ಪಡೆಯಬಹುದೇ? ಮುಟ್ಟುವುದು ತಪ್ಪೇ..? ಮುಟ್ಟದಿರುವುದು ಸರಿಯೇ..? ಹೀಗೆ ಜಿಜ್ಞಾಸೆಯಲಿ ಮುಳುಗಿರುವ ಯಶೋಧರಾ ತನ್ನ ಈ ಗೊಂದಲ ನಿವಾರಿಸುವಂತೆ ಬುದ್ಧನನ್ನೇ ಕೇಳಿಕೊಂಡಾಗ ಆ ಮಹಾನುಭಾವ “ಮುಟ್ಟಿದರೆ ಕೆಡುಕಿಲ್ಲ ಮುಟ್ಟದಿರೆ ಒಳಿತು” ಎಂದನಂತೆ..!       ಇದು ಮಾಸ್ತಿಯಂತಹ ಮಹಾನ್ ಮಾನವತಾವಾದಿ ಬರಹಗಾರರ ಕಲ್ಪನಾ ಮೂಸೆಯಿಂದ ಮೂಡಿ ಬಂದಿರುವ ಪರಮಾದ್ಭುತ ಸಾಲು!           ಈ ಸಾಲಿನಲ್ಲಿ ನಮಗೆ, ಬಿಟ್ಟು ಹೋದ ಗಂಡ ಮರಳಿ ಬಂದಾಗ ಆತನ ರೂಪಾಂತರವನ್ನು ಒಪ್ಪುವ ಯಶೋಧರೆ ಒಂದೆಡೆ ಕಂಡರೆ, ಪತ್ನಿ ಪರಿತ್ಯಜಿಸಿ ಪರಿವ್ರಾಜಕನಾಗಿ ಬಂದರೂ ಸಹ ಪೂರ್ವಾಶ್ರಮದ ವಾಸನೆಗೆ ಪುನಃ ಸಿಲುಕುವ ಅಭದ್ರತೆಯ ಭಾವ ಕಾಡಿರಬಹುದಾದ ಬುದ್ಧನನ್ನು ಮತ್ತೊಂದೆಡೆ ಕಾಣದಿರಲಾಗದು.  ಇರಲಿ, ಇದೆಲ್ಲಾ ಓದುಗರ ಊಹೆಗೆ ಬಿಟ್ಟ ವಿಚಾರಗಳು.       ಬುದ್ಧನನ್ನು ‘ಏಷ್ಯಾದ ಜ್ಯೋತಿ’ ಎನ್ನುತ್ತಾರೆ. ಅದರ ಬಗ್ಗೆ ಸ್ವತಃ ಯಶೋಧರೆಗೂ ತಕರಾರಿರಲಾರದು. ಆದರೆ ಆತ ಕೆಲವು ನಿರ್ವಹಿಸಲೇಬೇಕಾದ ಕರ್ತವ್ಯಗಳನ್ನು ಮರೆತುದಕ್ಕೆ, ನಿರ್ವಹಿಸದೇ ಇದ್ದುದಕ್ಕೆ ಹೆಣ್ಣಾಗಿ ಆಕೆ ಒಮ್ಮೆಯಾದರೂ ಆಕ್ಷೇಪಿಸದಿರಲಾರಳೇ?! ಅಂದು ಯಶೋಧರೆಯ ಮನಸ್ಥಿತಿ ಹೇಗಿತ್ತೋ ಗೊತ್ತಿಲ್ಲ. ಆದರೆ ಹೆಣ್ಣಾಗಿ ನಮ್ಮ ಭಾವಕೋಶದ ಆದ್ಯತೆಯನ್ನು ನಾವು ಊಹಿಸಲಾರೆವೆ?             ನನ್ನ ಹೆರಿಗೆಯ ದಿನ ವೈದ್ಯರೊಡನೆ ಚರ್ಚೆ, ನಿಗದಿತ ಫಾರ್ಮ ಭರ್ತಿ ಮಾಡುವುದು, ಶುಲ್ಕ ತುಂಬುವುದು, ಆಸ್ಪತ್ರೆ- ಮನೆಯ ನಡುವಿನ ಓಡಾಟ, ಆಪರೇಷನ್ ಥಿಯೇಟರಿನ ಮುಂದೆ ಚಡಪಡಿಕೆಯಲ್ಲಿ ಕಾಯುವುದು ಹೀಗೆ ಇಡೀ ದಿನ ಅವಿಶ್ರಾಂತರಾಗಿದ್ದ ನನ್ನ ಗಂಡ, ಮಗುವನ್ನೂ ನನ್ನನ್ನೂ ವಾರ್ಡ್ ಗೆ ಸ್ಥಳಾಂತರಿಸಿದ ಮೇಲೆ ತಡರಾತ್ರಿಯವರೆಗೂ ಜೊತೆಯಲ್ಲಿದ್ದರು. ಆಸ್ಪತ್ರೆಯ ಸಮಯ ಮೀರಿದಂತೆ, ಬಾಣಂತಿ ಹಾಗೂ ಮಗುವಿನೊಡನೆ ಒಬ್ಬರಿಗೆ ಮಾತ್ರ ಆಸ್ಪತ್ರೆಯಲ್ಲಿ ಇರಬಹುದಾದ ಅವಕಾಶ ಇದ್ದುದರಿಂದ ಸಹಜವಾಗಿ ನನ್ನ ತಾಯಿ ನನ್ನೊಡನೆ ಉಳಿದರು. ಗಂಡ, ಅತ್ತೆ-ನಾದಿನಿ, ಅಕ್ಕ- ಭಾವ ಮೊದಲಾದ ಸಕಲ ಬಂಧುಗಳು ಅನಿವಾರ್ಯ ಮನೆಗೆ ಮರಳಿದರು.        ನನಗೋ ಹೆರಿಗೆಯ ಅನಂತರ ಮುದ್ದು ಮಗುವಿನ ಮುಖ ನೋಡಿದ ಸಂಭ್ರಮ ಒಂದೆಡೆಯಾದರೆ, ಸಿಸೇರಿಯನ್ನಿನ ನೋವು, ಹಾಲು ಕುಡಿಯಲೂ ಬಾರದ ಮಗುವಿನ ಅಸಹಾಯಕತೆ, ಹೊಟ್ಟೆ ಹಸಿವಿನಿಂದಲೋ ಅಥವಾ ಸುರಕ್ಷಿತವಾಗಿದ್ದ ಗರ್ಭದಿಂದ ಈಗ ಎಲ್ಲಿಗೆ ಬಂದಿರುವೆ ಎಂಬ ಅಭದ್ರತೆಯ ಭಾವದಿಂದಲೋ ಅಳುವ ಮಗುವನ್ನು ನೋಡಿ ನನಗೂ ಅಳು. ವಾಸ್ತವ ಹಾಗೂ ಕಲ್ಪನೆಯ ಸಮ್ಮಿಶ್ರಭಾವದಲ್ಲಿ, ಸುಖದುಃಖಗಳ  ಮೇಳೈಸುವಿಕೆಯಲ್ಲಿ ಮುಳುಗೇಳುತ್ತಿದ್ದೆ. ನನಗೆ ಯಾವಾಗ ನಿದ್ದೆ ಬಂತೋ…         ಬೆಳಗಾದುದೇ ತಡ ಮಗುವಿನ ಅಪ್ಪ ಯಾವಾಗ ಬಂದಾರೋ ಎಂಬ ಕಾತರ. ಆಗಲೇ ಗಂಡನ ಸ್ಥಾನದಿಂದ ಅಪ್ಪನ ಸ್ಥಾನದಲ್ಲಿಟ್ಟು ನೋಡಬಯಸಿದ ನನ್ನ ಮನಸ್ಥಿತಿಯ ಬಗ್ಗೆ ನನಗೇ ಅಚ್ಚರಿಯಾಗಿತ್ತು. ಡ್ಯೂಟಿ ಡಾಕ್ಟರ್ ಬಂದು ನನ್ನ ಆರೋಗ್ಯ ವಿಚಾರಿಸಿಕೊಂಡರು, ಮಕ್ಕಳ ತಜ್ಞರು ಬಂದು ಮಗುವಿನ ಆರೋಗ್ಯ ಪರೀಕ್ಷಿಸಿದರು, ಆಸ್ಪತ್ರೆಯ ನರ್ಸ್ ಮಗುವನ್ನು ಶುಚಿಗೊಳಿಸಿ ತಂದುಕೊಟ್ಟರು, ಗಂಟೆ ಅಂತೂ ಇಂತು ಒಂಬತ್ತೂವರೆ ದಾಟಿ ಹತ್ತರ ಬಳಿ ಸಾಗುತ್ತಿತ್ತು. ನಾನೂ ಸಹ ಅಮ್ಮ ಹಾಗೂ ಆಸ್ಪತ್ರೆಯ ಸಹಾಯಕರ ಸಹಕಾರದಿಂದ ಶುಚಿಯಾಗಿ, ಬೇರೆ ಬಟ್ಟೆ ಧರಿಸಿದೆ. ಆಸ್ಪತ್ರೆಯವರೇ ಕೊಟ್ಟ ಕಾಫಿ- ತಿಂಡಿ ಮುಗಿಸಿದೆ.. ಆದರೆ ಇನ್ನೂ ‘ಅವರು’ ಬಂದಿರಲಿಲ್ಲ…     ಇಷ್ಟು ಬೇಗ ನನ್ನನ್ನೂ ಮಗುವನ್ನೂ ಮರೆತು ಬಿಟ್ಟರೇ…? ಎಂದು ತಳಮಳಿಸಿದೆ. ಮಗುವಿನ ಅಳುವನ್ನು ನೆಪವನ್ನಾಗಿ ಇಟ್ಟುಕೊಂಡು ನಾನೂ ಅಳಲು ಶುರುಮಾಡಿದ್ದೆ. ಅಷ್ಟರಲ್ಲಿ ‘ಇವರು’ ಬಂದರು.        ಛೇ, ನೆನ್ನೆ ಇಡೀ ದಿನ ಒಬ್ಬರೇ ಓಡಾಡಿ ದಣಿದಿರುತ್ತಾರೆ. ತಡ ರಾತ್ರಿ ಮನೆ ತಲುಪಿದ್ದರಿಂದ ಮಲಗುವುದೂ ತಡವಾಗಿರುತ್ತದೆ. ಹಾಗಾಗಿ ಆಯಾಸದಿಂದ ಬೆಳಿಗ್ಗೆ ಬೇಗನೆ ಎದ್ದಿಲ್ಲ ಎಂದು ಆ ದಿನ ಅವರು ತಡವಾಗಿ ಬಂದುದೇಕೆ ಎಂಬುದರ ಸತ್ಯ ನನಗೆ ಬಹಳ ದಿನಗಳಾದ ಮೇಲೆ ಹೊಳೆಯಿತು.         ’ಇವರು‘ ಬಂದದ್ದೇ ಅಮ್ಮ ಎದ್ದು ಹೊರಗೆ ಹೋದರು.  ಯಾರೂ ಇಲ್ಲದ್ದರಿಂದ ನನ್ನ ಹತ್ತಿರ ಬಂದವರೇ ಹೂಮುತ್ತನಿತ್ತು, ಮೃದುವಾಗಿ ಕೆನ್ನೆಚಿವುಟಿ, ಮಗು ಮಲಗಿದ್ದ ತೊಟ್ಟಿಲಿನತ್ತ ಬಾಗಿದಾಗ ನನ್ನ ಅಳು ಮಾಯವಾಗಿ ಹೃದಯ ಒಲವಿನ ನಗಾರಿ ಬಾರಿಸಿತ್ತು.        ಆ ಯಶೋಧರೆ ಕೂಡ ಸಾವಿರಾರು ವರ್ಷಗಳ ಹಿಂದೆ ಹೀಗೇ ಹಡೆದು ಮಲಗಿದ್ದಳಲ್ಲವೇ? ಮಗುವಿನ ಬಳಿ ಅದರ ಅಪ್ಪ ಎಂದು ಬಂದಾನೆಂದು ಕಾದಿದ್ದಳಲ್ಲವೇ? ಅವಳ ಕಾಯುವಿಕೆ ಕೊನೆಗೊಂಡದ್ದು ಯಾವಾಗ? ಆ ಯಶೋಧರೆ ಬಯಸಿದ್ದು ಅಥವಾ ಕಳೆದುಕೊಂಡದ್ದು ಏನು? ಹೆಣ್ಣೊಬ್ಬಳ ಮನಸ್ಸಿನ ವಿಚಾರಗಳು ಜಗತ್ತಿನ ಉದ್ಧಾರದ ವಿಷಯ ಬಂದಾಗ ಮಹತ್ತಿನದ್ದು ಎನಿಸುವುದೇ ಇಲ್ಲವಲ್ಲ…!      ಏಕೋ ಬುದ್ಧನ ವಿಷಯ ಪ್ರಸ್ತಾಪವಾದಾಗೆಲ್ಲಾ ಹಡೆದು ಮಲಗಿದ ಯಶೋಧರೆ ; ಅಪ್ಪನಿಗಾಗಿ ಅರಸಿದ ರಾಹುಲ ನೆನಪಾಗುತ್ತಾರೆ…. ಬುದ್ಧ ನನಗೆ ಮರೆಯಾಗುತ್ತಾನೆ. *******

ಬುದ್ಧ ಪೂರ್ಣಿಮಾ ವಿಶೇಷ Read Post »

ಇತರೆ

ಬುದ್ಧ ಪೂರ್ಣಿಮಾ ವಿಶೇಷ

ಜ್ಞಾನದ ದಿವ್ಯ ಬೆಳಕು ಚೆಲ್ಲುವ ‘ಬುದ್ಧ ಪೌರ್ಣಿಮೆ’ ಜ್ಞಾನದ ದಿವ್ಯ ಬೆಳಕು ಚೆಲ್ಲುವ ‘ಬುದ್ಧ ಪೌರ್ಣಿಮೆ’..! ಬುದ್ಧ ಪೌರ್ಣಿಮೆಯ ದಿನ ಇದೇ ದಿನಾಂಕ 7 ರಂದು ಇದೆ. ಆ ನೆಪದಲ್ಲಿ ಈ ಬುದ್ಧನ ನೆನೆದು ಈ ಲೇಖನ… ಬೆಳದಿಂಗಳ ತಂಪು, ಆಹ್ಲಾದ, ನಿರ್ಲಿಪ್ತತೆ, ಶಾಂತಿ, ಏಕಾಂತ, ಪ್ರೇಮ, ಪ್ರಶಾಂತತೆ, ತೇಜಸ್ಸು- ಇವೆಲ್ಲಕ್ಕೂ ಸಂಕೇತವಾಗಿದೆ ಬುದ್ಧ ಪೌರ್ಣಿಮೆ. ತನ್ನ ಅಂಗಳದಲ್ಲಿ ಚೆಲ್ಲಿರುವ ಬೆಳದಿಂಗಳು ತನ್ನದೆಂಬಂತೆ ಕಂಡರೂ ಅದು ತನ್ನದಲ್ಲ ಎಂಬುದು ಮನುಷ್ಯರಲ್ಲಿ ಅಂತರ್ಗತವಾದ ಎಚ್ಚರ. ಬದುಕಿನ ಪ್ರತಿ ಹೆಜ್ಜೆಯಲ್ಲೂ ಈ ಎಚ್ಚರವನ್ನೂ ಕಾಪಿಟ್ಟುಕೊಳ್ಳುವುದೇ ಗುರು ಗೌತಮನ ಉಪದೇಶಗಳಲ್ಲಿ ಮಹತ್ವದ್ದಾಗಿದೆ..! ಬುದ್ಧ ಹೇಳುವಂತೆ ಬದುಕೆಂಬುದು ಶುದ್ಧ ಬೆಳಕು. ಇಲ್ಲಿ ಯಾವುದೂ ಯಾರ ಸ್ವತ್ತೂ ಅಲ್ಲ. ಸುಖವನ್ನು ವಸ್ತುಗಳಲ್ಲಿ ಅರಸಲು ಹೋಗುವುದರಿಂದಲೇ ಮನುಷ್ಯ ದುಃಖಕ್ಕೀಡಾಗುತ್ತಾನೆ ಎಂದು ಗೌತಮ ಬುದ್ಧ ಹೇಳಿದ್ದರು. ಯಾವುದನ್ನೂ ಸ್ವಂತವೆಂದು ಪರಿಗಣಿಸದವನಿಗೆ ನೋವೂ ಇಲ್ಲ, ನಲಿವೂ ಇಲ್ಲ… ಅಂತಹ ನಿರ್ಲಿಪ್ತ ಸಮಚಿತ್ತ ಮಾತ್ರ ಬುದ್ಧನ ನಗೆಯಂತಹ ಕಿರು ನಗೆಯನ್ನು ಹೊಳೆಯಬಹುದು. ಆ ನಿರ್ಮಲ ಧ್ಯಾನಸ್ಥ ಮಂದಹಾಸದಲ್ಲಿ ಆತ ಪೂರ್ಣಚಂದ್ರನಷ್ಟು ಶಾಂತ, ದೇದೀಪ್ಯಮಾನ. ತನ್ನ ಮಾತುಗಳು ಮನುಷ್ಯನ ಆಂತರಿಕ ಗುಣವನ್ನು ಕುರಿತು ಹೇಳುವುದರಿಂದ ಅವನ್ನು ಗ್ರಹಿಸುವುದು ಲೌಕಿಕದ ಲಾಲಸೆಗಳಲ್ಲಿ ಮುಳುಗಿರುವವರಿಗೆ ಸುಲಭವಲ್ಲ ಎಂದು ಗೌತಮನಿಗೆ ತಿಳಿದಿತ್ತು… ಬಯಕೆಗಳ ಗಾಢಾಂಧಕಾರದಲ್ಲಿ ದಾರಿತಪ್ಪಿದವರಿಗೆ ತನ್ನ ಮಾತು ಪಥ್ಯವಾಗುವುದೆ? ಅಂಥವರಿಗೆ ಉಪದೇಶ ನೀಡಲು ಹೋಗಿ ತಾನು ದಣಿಯಲಾರೆನೆ? ಪ್ರಶ್ನೆಗಳು ಎದುರಾಗಿದ್ದವು. ಅದು ತರ್ಕದ ನಿಲುಕಿಗೆ ಮೀರಿದ್ದು. ಒಳಗಣ್ಣಿಗೆ ಮಾತ್ರ ಸ್ವಷ್ಟವಾಗುವಂಥದ್ದು ಅಂತ ತಿಳಿದಿದ್ದರೂ ಸಹಜೀವಿಗಳ ಬಗ್ಗೆ ಅಮಿತ ಕರುಣೆಯ ಬುದ್ಧ ಯಾರ ಆತ್ಮಗಳು ಸತ್ಯವನ್ನು ಕಾಣಲು ತೆರೆದಿರುತ್ತವೋ ಅಂಥವರಿಗೆ ನಾನು ಹೇಳುವುದು ಅರ್ಥವಾದೀತು ಎಂಬ ನಂಬಿಕೆಯಿಂದ ಜನರಲ್ಲಿ ಆತ್ಮಜ್ಞಾನದ ಬಗ್ಗೆ ಒಲವು ಮೂಡಿಸಿದ… ಒಮ್ಮೆ ಝೆನ್ ಗುರು ಲಿಂಜಿ ಭಿಕ್ಷುಗಳನ್ನುದ್ದೇಶಿಸಿ ಮಾತನಾಡುತ್ತ, ನಾವು ಯಾವುದೇ ಧಾರ್ಮಿಕ ರೀತಿಯಲ್ಲಿ ವರ್ತಿಸಬೇಕಾದ ಅಗತ್ಯವಿಲ್ಲ. ಸಹಜವಾಗಿದ್ದರಷ್ಟೇ ಸಾಕು. ಯಾವುದನ್ನೂ ಹುಡುಕುವ ಅಗತ್ಯವೂ ಇಲ್ಲ. ಕಡೆಗೆ ಬುದ್ಧನನ್ನೂ ಕೂಡ. ಎಷ್ಟೆಂದರೂ ಬುದ್ಧ ಎನ್ನುವುದು ಕೇವಲ ಒಂದು ಶಬ್ದ ಅಷ್ಟೆ, ಸಂಕೇತವಷ್ಟೇ ಎನ್ನುತ್ತಾನೆ… ಬುದ್ಧ ವ್ಯಕ್ತಿ ಪೂಜೆಯನ್ನು ಪ್ರೋತ್ಸಾಹಿಸಲಿಲ್ಲ ಎಂಬುದರ ನಿರ್ದಿಷ್ಟ ಸಾಕ್ಷಿ ಇದು. ಪೂರ್ಣಚಂದ್ರ ತೇಜಸ್ಸಿನ ಬುದ್ಧ ಅರಮನೆ, ಗುಡಿಸಲು ಎನ್ನದೆ ಎಲ್ಲರ ಅಂಗಳದಲ್ಲೂ ಯಥೇಚ್ಛ ಬೆಳದಿಂಗಳು ಹರಿಸುತ್ತ ನಡೆದ. ರಾಜ ಬಿಂಬಸಾರನೂ, ಕೊಲೆಗಡುಕ ಅಂಗುಲೀಮಾಲನೂ ಅವನ ಕರುಣೆಗೆ ಸಮಾನ ಪಾತ್ರರು… ಬೆಳದಿಂಗಳನ್ನು ನೋಡಿ ದಣಿವ ಚೇತನ ಪ್ರಾಯಶಃ ಇರಲಾರದು. ಮನಸ್ಸು ಸಂಪೂರ್ಣ ಶಾಂತವಾದಾಗ. ಯೋಗಸೂತ್ರದಲ್ಲಿ ಹೇಳಿರುವಂತೆ ಉಂಟಾಗುವ ಕೇವಲ ಕುಂಭಕ ಅಥವಾ ಕೆಲ ಗಳಿಗೆಗಷ್ಟೆ ಉಸಿರು ಸ್ತಂಭಿತಗೊಳಿಸುವ ಅನುಭವ ಕೊಡುವಂಥದು ಪೌರ್ಣಮಿಯ ಚಂದಿರನ ಬೆಳ್ಳಿ ಕಿರಣಗಳು. ಕ್ಷಣಾರ್ಧದಲ್ಲಿ ಒಳಗಣ್ಣನ್ನು ತೆರೆಸಿ, ಬದುಕಿನ ಕ್ಷಣಭಂಗುರತೆ, ಪ್ರಕೃತಿಯ ಅಗಾಧತೆಗಳ ಕುರಿತು ಧ್ಯಾನಿಸುವಂತೆ ಮಾಡುವಂಥದು… ವೈಶಾಖ ಶುದ್ಧ ಪೌರ್ಣಿಮಿಯ ರಾತ್ರಿ ಸಿದ್ಧಾರ್ಥ ಬಿಟ್ಟು ಹೊರಟಿದ್ದು ಅರಮನೆಯನ್ನಲ್ಲ. ಸಹಜೀವಿಗಳೊಂದಿಗೆ ಬೆರೆಯಲಾಗದಂತೆ ಮೇಲು-ಕೀಳು ಎಂಬುದನ್ನು ಸೃಷ್ಟಿಸುವ ಅಧಿಕಾರದ ಗದ್ದುಗೆಯನ್ನು; ಪದವಿ, ಐಶ್ವರ್ಯಗಳಿಂದ ಸುಖ ಸಿಗುತ್ತದೆ ಎಂಬ ಭ್ರಾಂತಿಯನ್ನು ಮನುಷ್ಯನ ಮೂಲಭೂತ ಕೊರತೆಗಳನ್ನು ಅರಸೊತ್ತಿಗೆಯಿಂದ ನೀಗಿಸಲು ಸಾಧ್ಯವಿಲ್ಲ ಎಂಬುದನ್ನು ಸಿದ್ಧಾರ್ಥ ಗಮನಿಸುತ್ತಾನೆ..! ರಾಜಕುಮಾರನೆಂಬ ಭ್ರಮಾಕೋಶ ಕಳಚಿ ಜನರಲ್ಲಿಗೆ ಹೋದಾಗ ಮಾತ್ರ ಅವರ ದುಃಖವನ್ನು ತಾನು ಅರ್ಥಮಾಡಿಕೊಳ್ಳಬಲ್ಲೆ. ಮನುಕುಲಕ್ಕೆ ಸುಖ-ಸಂತೃಪ್ತಿ ದೊರಕುವ ಮಾರ್ಗ ಯಾವುದು ಎಂಬುದಕ್ಕೆ ಉತ್ತರವನ್ನು ಕಂಡುಕೊಳ್ಳಬಲ್ಲೆ ಎಂದು ಬೆಳದಿಂಗಳ ಆ ಇರುಳಿನಲ್ಲಿ ರಾಜ ಪದವಿ ತೊರೆದು ಜನರ ನಡುವೆಯೇ ಹುಡುಕಹೊರಟವನು ಸಿದ್ಧಾರ್ಥ… ಮಾನವರ ದುಃಖವನ್ನು ದೂರಮಾಡುವ ಮುನ್ನ ಅದರ ಮೂಲವನ್ನು ಆತ ಅರಿಯ ಬೇಕಿತ್ತು. ಆ ಅರಿವಿನ ಹಾದಿ ಹುಡುಕುತ್ತ ಆತ ಮೊದಲು ದೇಹ ದಂಡಿಸಿಕೊಳ್ಳುತ್ತಾನೆ. ಎಷ್ಟೋ ದಿನ ಅನ್ನ, ನೀರು ತೊರೆದು ಪ್ರಕೃತಿಯ ಸರ್ವ ಕಾಠಿಣ್ಯವನ್ನು ತನ್ನನ್ನು ತೆರೆದುಕೊಂಡು ಸತ್ಯ ಅರಿಯಲು ಯತ್ನಿಸುತ್ತಾನೆ… ಮೂಲತಃ ಪ್ರಜ್ಞಾವಂತನಾದ ಆತ, ದೇಹ ದಂಡನೆಯಿಂದ ಹೆಚ್ಚಿನ ಲಾಭವಿಲ್ಲವೆಂದು ಬೇಗ ಕಂಡುಕೊಳ್ಳುತ್ತಾನೆ. ಸುಜÁತಳಿಂದ ಆಹಾರ ಸ್ವೀಕರಿಸಿ ತನ್ನ ಉಪವಾಸ ಅಂತ್ಯಗೊಳಿಸುತ್ತಾನೆ. ಮೋಕ್ಷವನ್ನರಸುತ್ತಿದ್ದಾನೆ ಎಂದು ನಂಬಿ ಅವನೊಂದಿಗೆ ತಪಶ್ಚರ್ಯೆ ಪಾಲಿಸುತ್ತಿದ್ದ ಐದು ಮಂದಿ ಅನುಯಾಯಿಗಳು ಆತ ಕಷ್ಟಗಳಿಗೆ ಮಣಿದು ಲೌಕಿಕಕ್ಕೆ ಮರಳಿದನೆಂದು ಭ್ರಮಿಸಿ ಆತನ ಸಖ್ಯ ತೊರೆದು ಬಿಡುತ್ತಾರೆ..! ಇಷ್ಟರಲ್ಲಿ ಬುದ್ಧನಿಗೆ ತಾನು ನಡೆಯಬೇಕಾದ ಹಾದಿ ಧ್ಯಾನ ಮಾರ್ಗವೆಂದು ಮನವರಿಕೆಯಾಗುತ್ತದೆ. ಜಗತ್ತಿನ ಆಗುಹೋಗುಗಳಿಗೆ, ಮನುಷ್ಯನ ತುಮುಲಗಳಿಗೆ ಕಾರ್ಯಕಾರಣ ಸಂಬಂಧದ ಎಳೆ ಹಿಡಿದು ಧ್ಯಾನಿಸಿ ಆತ ಕಂಡುಕೊಂಡದ್ದು ಅತ್ಯಂತ ಸರಳವೆಂದು ಕಾಣುವ ಆಸೆಯೇ ದುಃಖಕ್ಕೆ ಮೂಲ-ಎಂಬ ಸತ್ಯವನ್ನು. ತನ್ನ ಹುಟ್ಟಿದ ದಿನವೂ ಆದ ಒಂದು ಪೌರ್ಣಮಿಯ ದಿನ ಬೋಧಿವೃಕ್ಷದ ಕೆಳಗೆ, ಜಗತ್ತು ಜ್ಞಾನೋದಯ ಎಂತ ಕರೆಯುವ ಅರಿವಿನ ಬೆಳದಿಂಗಳಿನಲ್ಲಿ ಮಿಂದು ಸಿದ್ದಾರ್ಥ ನಿರ್ಮೋಹಿ ಬುದ್ಧನಾದ..! ಹೀಗೆ ಬುದ್ಧ ಅರಿವಿನ ಪರಮಾನಂದವನ್ನು ಸವಿಯುತ್ತಿದ್ದಾಗ ಒಬ್ಬ ಗರ್ವಿಷ್ಟ ಪಂಡಿತನೊಬ್ಬ ನಿಜವಾದ ಪಂಡಿತನ ಗುಣವಿಶೇಷಗಳೇನು ಎಂದು ಸವಾಲೆಸೆದ. ಅಹಂಕಾರದಿಂದ ಮುಕ್ತನಾದವನು, ಶುದ್ಧನಾಗಿದ್ದು ಆತ್ಮ ನಿಗ್ರಹವುಳ್ಳವನು, ತಿಳಿದವನೂ ಜ್ಞಾನಿಯೂ ಆದವನು. ಪಾಪಕೃತ್ಯಗಳನ್ನು ತೊರೆದವನು, ತನ್ನ ವರ್ತನೆಯಿಂದ ಇತರ ಜೀವಿಗಳಿಗೆ ಹಾನಿಯುಂಟು ಮಾಡದವನು ಮತ್ತು ಈ ಎಲ್ಲ ಕಾರಣಗಳಿಂದಾಗಿ ಪೂಜ್ಯನಾದವನು ಮಾತ್ರ ನಿಜವಾದ ಪಂಡಿತ ಎಂದ ಬುದ್ಧ… ಒಮ್ಮೆ ಟೊಕುಸಾನ್ ಎಂಬ ಭಿಕ್ಷು ರುಟಾನ್ ಎಂಬ ಹಿರಿಯ ಭೀಕ್ಷುವನ್ನು ಭೇಟಿಯಾದ. ಆದಾಗಲೇ ಮುಸ್ಸಂಜೆಯಾಗಿತ್ತು. ಟೊಕುಸಾನ್ ತನ್ನನ್ನು ಕಾಡುತ್ತಿದ್ದ ಹಲವಾರು ಪ್ರಶ್ನೆಗಳನ್ನು ಕೇಳುತ್ತಲೇ ಇದ್ದ. ಕೆಲ ಸಮಯದ ಬಳಿಕ, ಈಗ ರಾತ್ರಿ ಬಹಳವಾಗಿದೆ. ಮಲಗಿ ವಿಶ್ರಾಂತಿ ತೆಗೆದುಕೋ ಹೋಗು ಅಂತ ರುಟಾನ್ ಅವನನ್ನೆಬ್ಬಿಸಿದ. ಟೊಕುಸಾನ್ ತಲೆಬಾಗಿ, ತೆರಳುವುದಕ್ಕೆಂದು ಬಾಗಿಲ ಬಳಿ ಹೋದವನು, ಹೊರಗೆ ಬಹಳ ಕತ್ತಲೆ ಎಂದು ನಿಂತುಕೊಂಡ… ದೀಪವೊಂದನ್ನು ಹಚ್ಚಿ ಅದನ್ನು ಟೊಕುಸಾನ್‍ಗೆ ಕೊಡಲು ಹೋದ ರುಟಾನ್, ಇನ್ನೇನು ಟೊಕುಸಾನ್ ಅವನ ಕೈಯಿಂದ ದೀಪ ತೆಗೆದುಕೊಳ್ಳಬೇಕು ಎನ್ನುವಾಗ ಅದನ್ನು ಊದಿ ಆರಿಸಿಬಿಟ್ಟ ಒಡನೆಯೇ ಜ್ಞಾನೋದಯವಾದ ಟೊಕುಸಾನ್ ಬೆಳಿಗ್ಗೆ ಎದ್ದವನೇ ರುಟಾನ್ ಬಳಿ ಬಂದು, ಕೇಳಲು ನನ್ನಲ್ಲಿ ಯಾವ ಪ್ರಶ್ನೆಯೂ ಉಳಿದಿಲ್ಲ. ಬರುತ್ತೇನೆ ಎಂದು ಹೇಳುತ್ತಾ ಹೊರಟೇಬಿಟ್ಟ. ಇದು ಝೇನ್ ಕತೆ. ಎಷ್ಟೋ ಬಾರಿ ಅನೇಕ ಪ್ರಶ್ನೆ, ತರ್ಕ, ಜಿಜ್ಞಾಸೆಗಳಿಂದ ದೊರಕದ ಉತ್ತರ ಯಾವುದೋ ಪುಟ್ಟ ಘಟನೆಯಿಂದ ಕ್ಷಣಮಾತ್ರದಲ್ಲಿ ಹೊಳೆದುಬಿಡುತ್ತದೆ..! ಝೇನ್ ಗುರುವೊಬ್ಬ ಹೇಳುವಂತೆ ಸಂಪೂರ್ಣ ಜ್ಞಾನವನ್ನು ಒಂದು ಕ್ಷಣಮಾತ್ರ, ಒಂದು ಕ್ಷಣ ಮಾತ್ರವೇ, ಸಾಕ್ಷಾತ್ಕರಿಸಿಕೊಳ್ಳಬಹುದು. ಮೋಡ ಕವಿದ ಒಂದು ಹುಣ್ಣಿಮೆಯ ರಾತ್ರಿ ಆಗಸದಲ್ಲಿ ನೋಡ ನೋಡುತ್ತಿರುವಂತೆಯೇ ಮೂಡುವ ದಟ್ಟ ಕಾರ್ಮೋಡಗಳ ನಡುವಿನ ಕಿರು ಅಂತರದಲ್ಲಿ ಪೂರ್ಣ ಚಂದ್ರ ಫಕ್ಕನೆ ಪ್ರತ್ಯಕ್ಷವಾಗಿ ಮತ್ತೆ ಮೋಡದ ಮರೆಗೆ ತೆರಳಿದರೆ ಹೇಗೋ ಹಾಗೆ… ನೋಡುಗನ ಮನಸ್ಸಿನಲ್ಲಿ ಉಳಿಯುವುದು ಕಾರ್ಮೋಡವಲ್ಲ. ಹಾಗೆ ಚಕ್ಕನೆ ದರ್ಶನ ನೀಡಿದ ಪೌರ್ಣಮಿಯ ಚಂದಿರ. ಅರಿವಿಲ್ಲದೇನೇ ಆ ಕ್ಷಣದಲ್ಲಿ ಆಹ್ ಎಂಬ ಉದ್ಗಾರ ಹೊರಟು ಸ್ತಬ್ಧವಾಗಿ ನಿಲ್ಲಬಹುದು… ಜಗತ್ತಿನ ಮತ್ತು ತನ್ನ ನಡುವಿನ ಸಂಬಂಧದ ಗೂಢವನ್ನು ಮನುಷ್ಯ ಅರ್ಥಮಾಡಿಕೊಂಡಾಗಲೂ ಇದೇ ಬಗೆಯ ದಿವ್ಯ ಆನಂದದ ಅನುಭವವಾಗುತ್ತದೆ ಎನ್ನುತ್ತಾನೆ ಗೌತಮ… ಮಾನವ ಜೀವಿತದಲ್ಲಿ ಬರುವ ಹುಣ್ಣಿಮೆಗಳು ಅವೆಷ್ಟೋ. ಎಷ್ಟೆಷ್ಟೊ ಬೆಳದಿಂಗಳ ರಾತ್ರಿಗಳಲ್ಲಿ ಆತ ಅನುಭವಿಸಿದ ನೋವು, ಅಪಮಾನ, ಹತಾಶೆ, ಕ್ರೌರ್ಯಗಳ ನೆರಳಿನಲ್ಲಿ ಬೆಳದಿಂಗಳ ತಂತ್ರ ಕಿರಣಗಳೂ ಆತನಿಗೆ ನೋವು ತರಲು ಸಾಧ್ಯವಿದೆ… ಪ್ರಕ್ಷುಬ್ಧ ಮನಸ್ಸಿನ ಎಲ್ಲ ನೇತ್ಯಾತ್ಮಕ ಭಾವನೆಗಳನ್ನು ಬಡಿದೆಬ್ಬಿಸಿ ನಿಟ್ಟುಸಿರಿಡುವಂತೆ ಮಾಡುವ ಆ ಎಲ್ಲ ಧಗೆಯ ಬೆಳದಿಂಗಳ ರಾತ್ರಿಗಳಲ್ಲಿ ಮತ್ತದೇ ಬುದ್ಧನ ಸ್ನೇಹಮಯಿ, ಪ್ರಶಾಂತ ಬೆಳದಿಂಗಳಿನಂತಹ ಅರಿವಿನ ನಗೆಯಷ್ಟೆ ಸಾಂತ್ವನ, ಸ್ಥೈರ್ಯ ನೀಡಬಲ್ಲದು. ಅಂತಹ ಪ್ರತಿ ಬೆಳದಿಂಗಳ ಜ್ಞಾನಿಗೆ, ಗುರುವಿಗೆ ಶರಣೋ ಶರಣು..! ************************** ಕೆ.ಶಿವು. ಲಕ್ಕಣ್ಣವರ

ಬುದ್ಧ ಪೂರ್ಣಿಮಾ ವಿಶೇಷ Read Post »

ಇತರೆ

ನಿತ್ಯೋತ್ಸವ ಕವಿ

ಬದುಕು-ಬರಹ ನಿತ್ಯೋತ್ಸವ ಕವಿ ಹಾಗೂ ವಿಮರ್ಶಕ ಮತ್ತು ವೈಚಾರಿಕ ಬರಹಗಾರ ಪ್ರೊ.ಕೆ.ಎಸ್. ನಿಸಾರ್ ಮಹಮದ್..! ಕರ್ನಾಟಕದಾದ್ಯಂತ ಕವಿಗಳಾಗಿ, ವಿಮರ್ಶಕರಾಗಿ ಮತ್ತು ವೈಚಾರಿಕ ಬರಹಗಾರರಾಗಿ ಪ್ರಸಿದ್ಧರಾದ ಪ್ರೊ. ಕೆ. ಎಸ್. ನಿಸಾರ್ ಅಹಮದ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನ ಹಳ್ಳಿಯಲ್ಲಿ 05-02-1936ರಂದು ಕೆ. ಎಸ್. ಹೈದರ್ ಮತ್ತು ಹಮೀದಾ ಬೇಗಂ ಅವರ ಪುತ್ರರಾಗಿ ಜನಿಸಿದರು… ತಂದೆ ಸರಕಾರಿ ನೌಕರಿಯಲ್ಲಿದ್ದು ಕನ್ನಡ, ಇಂಗ್ಲಿಷ್, ಸಂಸ್ಕೃತ ಬಲ್ಲ ಸುಸಂಸ್ಕೃತರು. ನಿಸಾರರು ಪ್ರಾಥಮಿಕ, ಮಾಧ್ಯಮಿಕ ಶಾಲೆ ಓದಿದ್ದು ದೇವನಹಳ್ಳಿಯಲ್ಲಾದರೆ, ಪ್ರೌಢಶಾಲೆಗೆ ಹೊಸಕೋಟೆ ಹೈಸ್ಕೂಲು ಸೇರಿಕೊಂಡರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ಭೂಗರ್ಭ ಶಾಸ್ತ್ರದಲ್ಲಿ ಆನರ್ಸ್‌ ಪದವಿ ಪಡೆದರು. ಹೀಗೆ ಬೆಂಗಳೂರಿನಲ್ಲಿ ಭೂವಿಜ್ಞಾನದಲ್ಲಿ ಎಂ.ಎಸ್ಸಿ. ವರೆಗಿನ ಅಧ್ಯಯನವನ್ನು ಮುಗಿಸಿ 1958ರಲ್ಲಿ ಗುಲ್ಬರ್ಗದಲ್ಲಿ ಸಹಾಯಕ ಭೂವಿಜ್ಞಾನಿಯಾಗಿ ಸರಕಾರಿ ಸೇವೆಯನ್ನು ಆರಂಭಿಸಿದರು.ಆದರೆ ತಾನು ಮಾಡುತ್ತಿರುವ ಕೆಲಸ ಅವರಿಗೆ ತೃಪ್ತಿ, ಸಂತೋಷವನ್ನು ತಂದುಕೊಡಲಿಲ್ಲ. ಹೀಗಾಗಿ ಆ ಉದ್ಯೋಗವನ್ನು ತೊರೆದು, ಅಧ್ಯಾಪನ ವೃತ್ತಿಗೆ ಸೇರಿಕೊಂಡರು. ಬೆಂಗಳೂರು ಸರಕಾರಿ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭ ಮಾಡಿದ್ದ ನಿಸಾರ್ ಅಹಮದ್ ನಂತರದಲ್ಲಿ ಚಿತ್ರದುರ್ಗ,ಶಿವಮೊಗ್ಗ, ಬೆಂಗಳೂರು ಪುನಃ ಶಿವಮೊಗ್ಗ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಕಾಲೇಜಿನ ಪ್ರಾಧ್ಯಾಪಕರಾಗಿರುವಾಗ ಎನ್.ಸಿ.ಸಿ.ಯಲ್ಲಿ ಲೆಪ್ಟಿನೆಂಟ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವವೂ ಅವರಿಗಿದೆ. ಅವರ ಸಾಹಿತ್ಯಾಸಕ್ತಿ ಎಳವೆಯಲ್ಲೇ ಚಿಗುರಿತ್ತು. ತನ್ನ 10ನೇ ವಯಸ್ಸಿನಲ್ಲೇ ‘ಜಲಪಾತ’ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅನರ್ಸ್ ಅಧ್ಯಯನ ಸಮಯದಲ್ಲಿ ಎಲ್. ಗುಂಡಪ್ಪ, ಎಂ.ವಿ. ಸೀತಾರಾಮಯ್ಯ, ರಾಜರತ್ನಂ, ವಿ.ಸೀ. ಇವರ ಗುರುಗಳಾಗಿದ್ದರು. ಇದರಿಂದ ನಿಸಾರ್ ರವರಿಗೆ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಇನ್ನಷ್ಟು ಹೆಚ್ಚಲು ಸಾಧ್ಯವಾಯಿತು. ಸೇವೆಯಲ್ಲಿದ್ದಾಗಲೇ ರಾಜ್ಯಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಪ್ರಕಟಿಸಿದ ‘ಚಂದನ’ ತ್ರೈಮಾಸಿಕ, ಸಾಹಿತ್ಯದ ಎಲ್ಲ ಪ್ರಕಾರಗಳ ದಶವಾರ್ಷಿಕ ಸಂಚಿಕೆ ಪ್ರಕಟಣೆ ಹೊರತಂದ ನಿಸಾರ್ ದೆಹಲಿಯಲ್ಲಿ CONTEMPORARY INDIAN LITERATURE ಸೆಮಿನಾರ್ ವ್ಯವಸ್ಥೆ ಮಾಡಿದ ಹೆಗ್ಗಳಿಕೆ.ಯನ್ನೂ ಹೊಂದಿದ್ದಾರೆ. ರಾಷ್ಟ್ರೀಯ ಶಿಕ್ಷಣ ಮತ್ತು ಸಂಶೋಧನಾ ಮಂಡಲಿಯ ಸದಸ್ಯರಾಗಿದ್ದರು… ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನ ಒಡನಾಟ, ಅಲ್ಲಿನ ಪ್ರಕೃತಿಯ ಸೊಬಗು, ಕವಿಗಳಿಗೆಂದೇ ಹೇಳಿ ಮಾಡಿಸಿದ ಹವಾಗುಣ, ಇವೆಲ್ಲ ನಿಸಾರ್ ಅಹಮದರ ಕವಿ ಹೃದಯವನ್ನು ಪಕ್ವಗೊಳಿಸಿ ಅವರನ್ನೊಬ್ಬ ಶ್ರೇಷ್ಠ ಕವಿಯನ್ನಾಗಿ ರೂಪಿಸಿತು. 1960ರಲ್ಲಿ ಪ್ರಕಟಗೊಂಡ ‘ಮನಸು ಗಾಂಧಿಬಜಾರು’ ಎಂಬ ಕವಿತಾ ಸಂಕಲನದಿಂದ ತೊಡಗಿ 2013ರ ‘ವ್ಯಕ್ತಿಪರ ಕವನಗಳು’ ಕೃತಿಯವರೆಗೆ 19 ಕವನ ಸಂಕಲನಗಳನ್ನೂ 12 ಗದ್ಯ,ಪ್ರಬಂಧ, ವಿಮರ್ಶೆಯ ಲೇಖನ ಸಂಕಲನಗಳನ್ನೂ, 5 ಮಕ್ಕಳ ಸಾಹಿತ್ಯಗ್ರಂಥಗಳನ್ನೂ, 5 ಅನುವಾದ ಗ್ರಂಥಗಳನ್ನೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಹಿರಿಮೆ ಇವರದು. ಇವರ ಹಲವು ಕವನ ಸಂಕಲನಗಳು ಮೂರು ಮೂರು ಆವೃತ್ತಿಗಳನ್ನು ಕಂಡಿವೆ. ‘ನಿತ್ಯೋತ್ಸವ’ ಎಂಬ ಕವನ ಸಂಕಲನವು 24 ಬಾರಿ ಮುದ್ರಿತವಾಗಿರುವುದು ಇವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಶೇಕ್ಸ್‌ಪಿಯರನ ನಾಟಕಗಳನ್ನೂ, ರಷ್ಯನ್ ಕಥೆಗಳನ್ನೂ , ಸ್ಪಾನಿಷ್ ಕವಿ ಪಾಬ್ಲೊ ನೆರುಡನ ಕವಿತೆಗಳನ್ನೂ ಇವರು ಕನ್ನಡಕ್ಕೆ ತಂದಿದ್ದಾರೆ. 1978ರಲ್ಲಿ ಭಾರತೀಯ ಭಾಷೆಗಳಲ್ಲೇ ಮೊತ್ತಮೊದಲನೆಯದಾಗಿ ಭಾವಗೀತಗಳ ದನಿಸುರುಳಿಯನ್ನು ಹೊರತಂದು ಸುಗಮಸಂಗೀತ ಕ್ಷೇತ್ರದಲ್ಲಿ ಹೊಸ ಹಾದಿಯನ್ನು ನಿರ್ಮಿಸಿದ ಹಿರಿಮೆ ಇವರದು. ‘ನಿತ್ಯೋತ್ಸವ’ ಎಂಬ ಭಾವಗೀತಗಳ ಆ ದ್ವನಿ ಸುರುಳಿಯು ಕನ್ನಡದ ಸುಗಮಸಂಗೀತ ಕ್ಷೇತ್ರದಲ್ಲಿ ಇಂದಿಗೂ ಜನಪ್ರಿಯವಾಗಿ ಉಳಿದಿದೆ… ಇವರ ಯಾವುದೇ ಕವನವು ನಮ್ಮನ್ನು ಕ್ಷೋಭೆಗೀಡು ಮಾಡದೇ, ಯಾವುದೇ ಸಂದರ್ಭದಲ್ಲೂ ಮುದನೀಡುವ ರಸೋನ್ನತಿಯನ್ನೂ ಭಾವಸಂಚಾರವನ್ನೂ ಹೊಂದಿರುತ್ತದೆ. ನಿಸಾರ್ ಅಹಮದರ ಕವಿತೆಗಳು ಬರೀ ಹೆಣ್ಣನ್ನೇ ಅಥವಾ ಬರೀ ಪ್ರೇಮವನ್ನೇ ಮುಖ್ಯ ವಸ್ತುವಾಗಿಸಿಲ್ಲ. ಅವರ ಕವಿತೆಗಳು ಮಾಸ್ತಿಯವರ ವಾಕಿಂಗನ್ನು,ಕಾಲೇಜು ಯೂನಿಯನ್ನು ಪ್ರೆಸಿಡೆಂಟನ ತಳಮಳವನ್ನು, ಬುರ್ಖಾ ಎಂಬ ಸಾಮಾಜಿಕ ಮೌಢ್ಯವನ್ನು, ವಿಮರ್ಶಕರ ಕಿರಿಕಿರಿಯನ್ನು, ರಾಜಕಾರಣಿಗಳ ದೊಂಬರಾಟವನ್ನು, ಸೋಗಲಾಡಿ ಶಿಕ್ಷಣವನ್ನು ಬಿಂಬಿಸುತ್ತದೆ… ಇದೇ ಕಾರಣದಿಂದಾಗಿಯೇ ‘ಉತ್ತನೆಲದ ಗೆರೆ’ ‘ಆಗಷ್ಟೇ ಕೊಂದ ಕುರಿಮರಿಯ ರಕ್ತದ ಬಿಸುಪು’, ‘ಕೊಯ್ದ ಹಸಿಮರದ ಕಂಪು’, ‘ಸಮಾಜವಾದದ ರೊಟ್ಟಿಯ ತುಣುಕು’ ಇಂಥ ಸಾಮಾನ್ಯ ವಿಷಯಗಳ ಮೇಲೆ ಕವನ ಬರೆದ ಪಾಬ್ಲೊ ನೆರೂಡ ಇವರಿಗೆ ಅತ್ಯಂತ ಪ್ರಿಯರಾಗುತ್ತಾರೆ. ನೆರುಡನನ್ನು ಆಳವಾಗಿ ಅಭ್ಯಸಿಸಿರುವ ಇವರು ಅವನನ್ನು ಸುಮ್ಮನೇ ಕೋಟ್ಮಾಡುವವರ ವಿರುದ್ಧ ಸಹಜವಾಗಿ ಕೋಪಗೊಳ್ಳುತ್ತಾರೆ… ನಿಸಾರರ ಕವನಗಳಲ್ಲಿ ಮಷಾಲು, ನಾಚು, ಖುಲ್ಲಾ ಮುಂತಾದ ಅರಬ್ಬೀ ಪದಗಳ ಹಾಸುಹೊಕ್ಕು ಹೇರಳವಾಗಿರುತ್ತದೆ. ‘ಇಪ್ಪತ್ತೆಂಟನಾಡುವುದು ನಡುವೆ ಅದೂ ಇದೂ ಇಪ್ಪತ್ತೆಂಟನಾಡುವುದು’ ಎಂಬಂಥ ಪದಚಮತ್ಕಾರಗಳೂ ಇರುತ್ತದೆ. ‘ನಾಡಿದ್ದು ನಾಳೆಯ, ನಾಳೆ ಇವೊತ್ತಿನ, ಇಂದು ನಿನ್ನೆಯ ಪುನರಾವರ್ತನೆಯ ಏಕತಾನತೆಯಲ್ಲಿ’ ಎಂಬಂಥ ತರ್ಕ ಜಿಜ್ಞಾಸೆಯೂ ಇರುತ್ತದೆ… ಅದೇ ರೀತಿಯಲ್ಲಿ ಇವರ ‘ಇದು ಬರಿ ಬೆಡಗಲ್ಲೋ ಅಣ್ಣ’ ಎಂಬ ವಿಮರ್ಶಾ ಕೃತಿ ಇತರ ವಿಮರ್ಶೆಗಳಂತೆ ಕಹಿಯೂ ಆಗದೆ ತೇಲಿಕೆಯೂ ಆಗದೆ ಅತ್ಯಂತ ಭಾವಪೂರ್ಣವೂ ತೂಕವುಳ್ಳದ್ದೂ ಆಗಿ ವಿಮರ್ಶಾಲೋಕದಲ್ಲಿ ಕುವೆಂಪುರವರ ಸಮಾನರಾಗಿ ನಿಲ್ಲುವ ಶಕ್ತಿಯನ್ನು ಅವರಿಗೆ ದೊರಕಿಸಿದೆ… ತಮ್ಮ ಹಲವು ಕೃತಿಗಳಿಗೆ ರಾಜ್ಯಸಾಹಿತ್ಯ ಅಕಾಡೆಮಿಯ ಬಹುಮಾನಗಳನ್ನು ನಿಸಾರ್ ಅಹಮದ್ ಪಡೆದಿದ್ದಾರೆ. ‘ಹಕ್ಕಿಗಳು’ ಎಂಬ ಕೃತಿಗೆ 1978ರಲ್ಲಿ, ‘ಇದು ಬರಿ ಬೆಡಗಲ್ಲೊ ಅಣ್ಣ’ ಎಂಬ ಕತಿಗೆ 1981ರಲ್ಲಿ ‘ಅನಾಮಿಕ ಆಂಗ್ಲರು’ ಕೃತಿಗೆ 1982ರಲ್ಲಿ, ‘ಹಿರಿಯರು ಹರಸಿದ ಹೆದ್ದಾರಿ’ ಕೃತಿಗೆ 1992ರಲ್ಲಿ ಅಕಾಡೆಮಿ ಪ್ರಶಸ್ತಿಗಳು ಬಂದಿವೆ. 1981ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1996ರಲ್ಲಿ ಕುವೆಂಪು ಹೆಸರಿನ ವಿಶ್ವಮಾನವ ಪ್ರಶಸ್ತಿ, 1992ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, 1993ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ, 2003ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪುರಸ್ಕಾರ, 2006 ರ ಅರಸು ಪ್ರಶಸ್ತಿ, 2006 ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ, ’73ನೇ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷ’ರಾಗಿ ಆಯ್ಕೆಯಾಗಿದ್ದ ನಿಸಾರ್ ರವರಿಗೆ 2012ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ 2014ರಲ್ಲಿ ಮಂಜೇಶ್ವರ ಗೋವಿಂದ ಪೈ ಪ್ರಶಸ್ತಿ ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿ– ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದ ಹಿರಿಮೆ ಇವರದಾಗಿದೆ… ಇದಲ್ಲದೆ ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಸಾಂಸ್ಕೃತಿಕ ಸಂಘಟನೆಗಳು ಹಾಗೂ ದುಬೈ, ಅಬುದಾಬಿ, ಕುವೈತ್, ಇಂಗ್ಲೆಂಡ್, ಸಿಂಗಾಪುರ ಮೊದಲಾದೆಡೆಗಳ ಕನ್ನಡ ಬಳಗಗಳು ಇವರನ್ನು ಸಮ್ಮಾನಿಸಿವೆ. 1967 ಮತ್ತು 1985ರಲ್ಲಿ ಎರಡು ಬಾರಿ ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಕವಿ ಸಮ್ಮೇಳನದಲ್ಲಿ ಕನ್ನಡವನ್ನುಪ್ರತಿನಿಧಿಸಿದ ಹಿರಿಮೆ ಇವರಿಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಮೂರು ವರ್ಷಗಳ ಕಾಲ ದುಡಿದಿದ್ದಾರೆ ಇವರು. ಡಾ.ಕೆ. ಎಸ್. ನಿಸಾರ್ ಅಹಮದ್ ಅವರ ಕವಿತೆಗಳು ಇಂಗ್ಲೀಷ್, ಹಿಂದಿ, ಉರ್ದು, ತೆಲುಗು, ಮಲಯಾಳಂ, ಮರಾಠಿ, ತಮಿಳು ಹಾಗೂ ಚೀನಿ ಭಾಷೆಗಳಿಗೆ ಅನುವಾದಿತವಾಗಿವೆ. ಇವರ ಬದುಕು ಬರವಣಿಗೆಗಳ ಕುರಿತು ಬೆಂಗಳೂರು ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯಗಳಲ್ಲಿ ಪಿ‌ಎಚ್. ಡಿ. ಮಟ್ಟದ ಅಧ್ಯಯನಗಳು ನಡೆದು ಪುಸ್ತಕಗಳು ಹೊರಬಂದಿವೆ. ಕರ್ನಾಟಕ ಸರಕಾರವು ಇವರನ್ನು 2011ರಲ್ಲಿ ರಾಜ್ಯಮಟ್ಟದ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯಕಾರ ಸಮಿತಿಗೆ ಸದಸ್ಯರಾಗಿ ನೇಮಕ ಮಾಡಿತ್ತು… 2006ರಲ್ಲಿ ಡಾ. ಕೆ. ಎಸ್. ನಿಸಾರ್ ಅಹಮದ್ ಅವರಿಗೆ ‘ನಿಸಾರ್ ನಿಮಗಿದೋ ನಮನ’ ಎಂಬ ಬೃಹತ್ ಅಭಿನಂದನ ಗ್ರಂಥವನ್ನು ಸಮರ್ಪಿಸಿ ಗೌರವಿಸಲಾಯಿತು. ಅವರ ಬಗೆಗೆ ಸಾಕ್ಷ್ಯಚಿತ್ರ, ಸಂದರ್ಶನ, ಕವನ ವಾಚನ ಮೊದಲಾದ ಸಿ.ಡಿಗಳು ಹೊರಬಂದಿವೆ. ‘ಕುರಿಗಳು ಸಾರ್ ಕುರಿಗಳು’ ಎಂಬ ಕವಿತೆಯ ಮೂಲಕ ಸಾಹಿತ್ಯಲೋಕಕ್ಕೆ ಆತ್ಮೀಯರಾದ ಡಾ. ಕೆ. ಎಸ್.ನಿಸಾರ್ ಅಹಮದ್ ಅವರು ಇಂದೂ ಆ ಜನಪ್ರಿಯತೆಯನ್ನೂ ವೈಚಾರಿಕತೆಯನ್ನೂ ಉಳಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು… ಇಷ್ಟೆಲ್ಲಾ ಪ್ರಶಸ್ತಿ, ಗೌರವಗಳೊಂದಿಗೆ ಕನ್ನಡಿಗರ ಹೃದಯ ಗೆದ್ದಿರುವ ಇವರು ಒಬ್ಬ ವಿವಾದಾತೀತ ವ್ಯಕ್ತಿ. ಕನ್ನಡ ಸಾಹಿತ್ಯ ಲೋಕದಲ್ಲಿ ಜಾತಿಯ, ರಾಜಕಾರಣದ, ಪ್ರಾದೇಶಿಕತೆಯ ಲಾಬಿಗಳೇ ರಾರಾಜಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಯಾವ ಲಾಬಿಗೂ ಇಳಿಯದೇ ಸ್ವಯಂ ತೇಜೋಮಾನರಾಗಿದ್ದರು. ಯುಗದ ಕವಿಯಾಗಿದ್ದರು. ಅವರೊಮ್ಮೆ ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಜೊತೆಯಲ್ಲಿ ತಮ್ಮ ಪತ್ನಿಯನ್ನೂ ಕರೆದೊಯ್ಯಬೇಕಿತ್ತು. ಸರಿ ಶುರುವಾಯಿತು ಅವರ ಪತ್ನಿಯ ಮೇಕಪ್ಪು. ವಸ್ತ್ರಾಲಂಕಾರ, ಪ್ರಸಾಧನ, ಒಡವೆಗಳ ಭೂಷಣ ಎಲ್ಲವೂ ಆದವು. ನಮ್ಮ ಕವಿಯೂ ಪತ್ನಿಯ ಸರ್ವಾಲಂಕಾರ ಸೊಬಗನ್ನು ಕಣ್ತಣಿಯೆ ನೋಡಿ ಹೆಮ್ಮೆಪಟ್ಟುಕೊಂಡರು. ಇನ್ನೇನು ಹೊರಡಬೇಕು ಆಗ ಅವರ ಪತ್ನಿ ಬುರ್ಖಾತೊಟ್ಟುಕೊಂಡರಂತೆ. ಎಲ್ಲ ಅಲಂಕಾರವನ್ನೂ ಆ ಬುರ್ಖಾ ಮರೆ ಮಾಡಿದ ಬಗೆಯನ್ನು ಕಂಡು ವಿಷಾದಿಸುತ್ತಾ ಅವರು ಕವನ ಬರೆದರು. ನವಿರು ಹಾಸ್ಯ ಮತ್ತು ವಿಚಾರವಂತಿಕೆಯಿಂದ ಕೂಡಿದ ಆ ಕವನಕ್ಕೆ ಮುಸ್ಲಿಂ ಬಾಂಧವರು ಕೋಪಗೊಳ್ಳಲಿಲ್ಲ, ಫತ್ವಾ ಹೊರಡಿಸಲಿಲ್ಲ. ಇದು ಕವಿ ಕೆ ಎಸ್ ನಿಸಾರ್ ಅಹಮದರ ಸರ್ವವಂದ್ಯ ವರ್ಚಸ್ಸಿಗೆ ಸಾಕ್ಷಿಯಾಗಿದೆ..! ಇಂತಹ ಸಹೃದಯ ಕವಿವರ್ಯರು ಇಂದು ನಮನ್ನಗಲಿದ್ದಾರೆ. ಅವರಿಗೆ ನಮಸ್ಕಾರಗಳು… ************************************** ಕೆ.ಶಿವು.ಲಕ್ಕಣ್ಣವರ

ನಿತ್ಯೋತ್ಸವ ಕವಿ Read Post »

ಇತರೆ

ಗುರುವಂದನೆ

ಗುರುವಂದನೆ ಪೂರ್ಣಿಮ ಸುರೇಶ್ ಗೃಹಬಂಧಿಯಾಗಿ ಕರೋನ ಪೊಸಿಟಿವ್,ನೆಗಟಿವ್,ಹಸಿರು,ಹಳದಿ,ಕೆಂಪು ಅನ್ನುವ ಸುದ್ದಿಮಾಯೆಯ ಸೆಳೆತಕ್ಕೆ ಹೊಂದಿಸಿಕೊಂಡು.ಮೌನ ಹೊದ್ದ ದಿನಗಳು ತೆವಳುತ್ತಿದೆ. ಇಂತಹ ಸಮಯದಲ್ಲೇ ಬೆಂಗಳೂರಿನ ಗೆಳೆಯರೊಬ್ಬರು ಕರೆ ಮಾಡಿ ‘ನಿಸಾರ್ ಹೋಗಿಬಿಟ್ರಲ್ವಾ’..ಮನಸ್ಸು ಒಪ್ಪಲಾರದ,ಬುದ್ದಿ ಗ್ರಹಿಸಲಾರದ ಏನನ್ನೋ ಆಡುತ್ತಿದ್ದಾರೆ. ಉತ್ತರಿಸಲಾಗದ ಮಂಕು ಕವಿಯಿತು. ವಾಟ್ಸಫ್ ತೆರೆದರೆ ಆಗಲೇ ಹಲವಾರು ಸ್ನೇಹಿತರು ಸಂದೇಶ ಕಳುಹಿಸಿದ್ರು. ಒಳಹೊರಗೆಲ್ಲ ಸೂತಕ. ಸಾರ್..ಹೋಗಿಬಿಟ್ರೇ..ಸಾಧ್ಯವೇ ಇದು..ಟಿ.ವಿಯಲ್ಲೂ ಅದೇ ಸುದ್ದಿ..ಬಂಧು,ಗುರು,ಮಾರ್ಗದರ್ಶಿ..ಇನ್ನಿಲ್ಲ. ಹೇಗೆ ನಂಬಲಿದನ್ನು..ಸುಳ್ಳಾಗಬಾರದೇ.. ಅಂತರಂಗದಲ್ಲಿ ಕಚ್ಚಿಕೊಂಡ ನೆನಪುಗಳು,ಬರಹಗಳು ಮಾತ್ರ ನಮ್ಮ ಜೊತೆ. ನಿಸಾರ್ ಸಾರ್ ಗೆ ನಮ್ಮ ಉಡುಪಿಯ ಜೊತೆ ಅನನ್ಯವಾದ ನಂಟು. ಅವರೇ ಹೇಳುತ್ತಿದ್ದಂತೆ ದಾಖಲೆ ಎನ್ನುವಷ್ಟು ಕಾರ್ಯಕ್ರಮಗಳಿಗೆ ಉಡುಪಿಯಲ್ಲಿರುವ ಅವರ ಅಭಿಮಾನಿಗಳು ಕರೆಸಿಕೊಂಡಿದ್ದರು. ಅದು 2013 ಇರಬೇಕು ಅರಣ್ಯ ಇಲಾಖೆಯವರು ಪ್ರೊ ನಿಸಾರ್ ಅಹಮದ್ ಅವರನ್ನು ವನಮಹೋತ್ಸವ ಕಾರ್ಯಕ್ರಮ ಕ್ಕೆ ಅತಿಥಿಯಾಗಿ ಆಹ್ವಾನಿಸಿದ್ರು. ಜೊತೆಜೊತೆಗೆ ಅವರ ಒಪ್ಪಿಗೆಯಿಂದ ಬೇರೆ ಎರಡು ಸಾಹಿತ್ಯಕ ಕಾರ್ಯಕ್ರಮಗಳೂ ನಿಗದಿಯಾಗಿದ್ದವು. ಉಡುಪಿಯ ಟಿ.ವಿ. ಚಾನಲ್ ನವರು ಸಾರ್ ಅವರ ಸಂದರ್ಶನ ಮಾಡುವಂತೆ ನನ್ನ ಕೇಳಿಕೊಂಡಿದ್ರು. ನನಗೆ ಒಂದು ಎರಡು ತಾಸಿನ ಸಮಯ. ನಾನು ತಯಾರಾಗಬೇಕಿತ್ತು. ನನಗೋ ಗೊಂದಲ..ಅಷ್ಟಿಷ್ಟು ನಿಸಾರ್ ಅವರ ಕವನ ಓದಿದ್ದು ಅಷ್ಟೆ. ಅದು ಹೊರತುಪಡಿಸಿ ಮತ್ತೇನು ಗೊತ್ತು. ಮಾತಿನ ನಡುವೆ ಅವರು ನನ್ನನ್ನು ಸಾಹಿತ್ಯದ ಬಗ್ಗೆ ಏನಾದ್ರೂ ಪ್ರಶ್ನಿಸಿದರೆ..? ನಾನೋ ಅರೆಬೆಂದ ಕಾಳು. ಏನು ಮಾಡಲಿ. ಓದಿದ್ದೂ ಕೂಡಲೇ ನೆನಪಿಗೂ ಬರುತ್ತಿಲ್ಲ…ಸಂದಿಗ್ಧತೆಯಲ್ಲೇ ಚಾನಲ್ ಹುಡುಗರೊಂದಿಗೆ ಅವರು ಉಳಿದುಕೊಂಡಿದ್ದ ವಸತಿಗೃಹಕ್ಕೆ ಹೋಗಿದ್ದೆ. ಆಗಷ್ಟೆ ಅವರು ನಮ್ಮ ಊರನ್ನು ತಲುಪಿದ್ರು. ಮುಖದಲ್ಲಿ ಆಯಾಸ. ಏನು? ಎನ್ನುವ ಪ್ರಶ್ನೆ ಯೊಂದಿಗೆ ಸರಿದು ಒಳಬರಲು ನಮಗೆ ದಾರಿಕೊಟ್ಟರು. ನಾನು ವಿಷಯವನ್ನು ಅವರಿಗೆ ತಿಳಿಸಿ ಅಂದೆ. “ಸಾರ್,ಸಂದರ್ಶನ ಎನ್ನುವ ಧೈರ್ಯ ನನ್ನೊಳಗಿಲ್ಲ. ನಿಮ್ಮನ್ನ ಮಾತನಾಡಿಸಬೇಕು, ಸಾಹಿತ್ಯದ ಮಾತುಗಳನ್ನು ಕೇಳಬೇಕು . ಮಗುವಿನ ಕುತೂಹಲ. ನಿಮ್ಮನ್ನ ಪೂರ್ತಿ ಓದಿಲ್ಲ. ತಪ್ಪುಗಳಿದ್ದರೆ ಕೋಪಿಸದಿರಿ.” ಸಾರ್,ಒಂದು ತಾಸು ಬರಹದ ಬಗ್ಗೆ,ಕವಿತೆಗಳ ಬಗ್ಗೆ,ಬದುಕಿನ ಬಗ್ಗೆ..ಮಾತನಾಡುತ್ತಲೇ ಹೋದರು. ನಡುನಡುವೆ ನನ್ನ ಪ್ರಶ್ನೆ..ಸಮಯದ ಮಿತಿ ತಿಳಿದು ಮಾತಿಗೆ ಚುಕ್ಕಿ ಇಟ್ಟಿದ್ದೆ. ಗೊತ್ತಿಲ್ಲ ಅಂದವಳು ಅದೆಷ್ಟು ಒಳ್ಳೆಯ ಪ್ರಶ್ನೆಗಳನ್ನು ಕೇಳಿರುವೆ ತಾಯಿ..ಎನ್ನುವ ಸರ್ಟಿಫಿಕೇಟ್ ನೀಡಿದ್ರು. ಮರುದಿನ ಅವರ ಇನ್ನೊಂದು ಕಾರ್ಯಕ್ರಮದಲ್ಲಿ ತನ್ನ ಮಾತಿನ ನಡುವೆ ಈ ಸಂದರ್ಶನದ ನೆನಪು ಮಾಡಿ..ಎಲ್ಲಿ ಆ ಹುಡುಗಿ.. ಇದ್ರೆ ಸ್ವಲ್ಪ ನಿಂತುಬಿಡಮ್ಮಾ. ಬಹಳ ಚೆನ್ನಾಗಿ ಸಂದರ್ಶನ ನಡೆಸಿದೆ ಎನ್ನುತ್ತ ನನ್ನ ಒಳಗೊಂದು ಪುಳಕದ ತೇರನ್ನೇ ಎಳೆದುಬಿಟ್ಟರು. ಸಾರ್..ನನ್ನನ್ನ ಆಶೀರ್ವದಿಸಿದರು. ಇಂತಹ ಆಶೀರ್ವಾದ ನನ್ನಂತಹ ಅದೆಷ್ಟೋ ಜನರಿಗೆ ಮೊಗೆದು ಕೊಡುವ ಸಿರಿವಂತಿಕೆ ಆ ಮೇರು ವ್ಯಕ್ತಿತ್ವಕ್ಕಿತ್ತು. ಮುಂದೆ ಉಡುಪಿಗೆ ಕಾರ್ಯಕ್ರಮಗಳಿಗಾಗಿ ಹಲವಾರು ಬಾರಿ ಸಾರ್ ಬಂದಿದ್ದರು. ನನ್ನ ಕವನ ಸಂಕಲನ ಅವರ ಕೈಗಿಟ್ಟು ಆಶೀರ್ವಾದ ಬೇಡಿದ್ದೆ. ಸಂಘಟಕಿಯಾಗಿ ನನ್ನ ಕೆಲಸದ ಬಗ್ಗೆ ಮೆಚ್ಚುಗೆ,ಹಾರೈಕೆ ನೀಡುತ್ತಲೇ ಉಡುಪಿಯೊಳಗೆ ಕಿರಿಯ ಸ್ನೇಹಿತರ,ಅಭಿಮಾನಿಗಳ ತಂಡವನ್ನೇ ನಿರ್ಮಿಸಿ ಬಿಟ್ಟರು. ಸಾರ್ ಬಂದಾಗಲೆಲ್ಲ ಸಿಹಿ ಕಂಡಾಗ ಮುಗಿ ಬೀಳುವ ಇರುವೆಗಳಂತೆ ಸೇರಿ ಬಿಡುತ್ತಿದ್ದರು . ಇವರಲ್ಲಿ ಗೂಡಂಗಡಿಯವರು, ಅರಣ್ಯ ಇಲಾಖೆಯ ಉದ್ಯೋಗಿಗಳು,ಸಾಹಿತಿಗಳು,ವ್ಯಾಪಾರಸ್ಥರು,ಉಪನ್ಯಾಸಕರು ವಿಧ್ಯಾರ್ಥಿಗಳು, ಎಲ್ಲ ಬಗೆಯ ಮನಸ್ಸುಗಳನ್ನು ಸೇರಿಸಿ ಮಾತು..ಪ್ರೀತಿ, ವಾತ್ಸಲ್ಯ ತುಂಬುತ್ತಿದ್ದರು. ಭೇಟಿಯಾದ ಪ್ರತಿಯೊಬ್ಬರ ಹೆಸರು ಅವರ ಮನಸ್ಸಿನಲ್ಲಿ ದಾಖಲಾಗುತ್ತಿತ್ತು. ಮಾತ್ರವಲ್ಲಅವರವಿಶೇಷತೆಗಳು,ಇಷ್ಟಗಳು,ಆಸಕ್ತಿಗಳ ಬಗ್ಗೆ ಥಟ್ಟಂತ ಹೇಳಿ ಬಿಡುತ್ತಿದ್ದರು. ಅದೊಂದು ಸಲ ಉಡುಪಿಗೆ ಬಂದಾಗ ಅವರ ಆಪ್ತರು ರಾತ್ರಿ ಊಟಕ್ಕೆ ಹೋಟೇಲಿಗೆ ಕರೆದಿದ್ರು. ಊಟ ಮುಗಿಸಿ ಕಾಲ್ನಡಿಗೆಯಲ್ಲಿ ಅವರು ಉಳಿದುಕೊಂಡ ವಸತಿ ಗೃಹ ಕ್ಕೆ ಹೋಗುತ್ತಿದ್ದರು. ದಾರಿಯಲ್ಲಿ ಕುಡುಕನೊಬ್ಬ ಎದುರಾದ. ಇವರನ್ನು ದಾಟಿ ಮುಂದೆ ಹೋಗುವ ಸಮಯದಲ್ಲಿ ಥಟ್ಟಂತ ನಿಂತು ಅವರಿಗೆ ಸೆಲ್ಯೂಟ್ ನೀಡಿದ. ಸಾರ್ ಕೂಡಲೇ ಅವನ ಭುಜ “ಸವರಿ ಎಲ್ಲಿಂದ ಬರುತ್ತಿರೋದು” ಅಂದ್ರು. ಅವನು ಯಾವುದೋ ಕಟ್ಟಡ ಕಾರ್ಮಿಕ. ಅಮಲಿನಲ್ಲೇ ಉತ್ತರಿಸಿದ. ಕೈಯಲ್ಲಿ ಪೊಟ್ಟಣವಿತ್ತು. ಇದೇನು ಎಂದು ಪ್ರಶ್ನಿಸಿದರು. ಪರೋಟ ಅಂದ. ಮನೆಯಲ್ಲಿ ಯಾರಿದ್ದಾರೆ. ಎಷ್ಟು ಮಕ್ಕಳು..ಯಾಕೆ ಕುಡಿತದ ಅಭ್ಯಾಸ.ತಗೋ ಓದುವ ನಿನ್ನ ಮಗಳಿಗೆ ಇರಲಿ ಎಂದು ತಮ್ಮ ಕಿಸೆಯಿಂದ ಹಣವನ್ನ ತೆಗೆದು ಅವನ ಕೈಗಿರಿಸಿದ್ರು. ಉಡುಪಿಯಲ್ಲಿ ಪರಿಚಯವಾದ ಪ್ರತಿಯೊಬ್ಬರ ಮನೆಯ ಸದಸ್ಯರ ಹೆಸರು,ಅವರ ಆಸಕ್ತಿ..ಅದರ ಬಗ್ಗೆ ವಿಚಾರಣೆ ಬಲುಆಸ್ಥೆಯಿಂದ ಮಾಡುತ್ತಿದ್ದವರು. ಒಮ್ಮೆ ಬೈಂದೂರಿನಲ್ಲಿ ಅವರ ಅಧ್ಯಕ್ಷತೆಯಲ್ಲಿ ಅಡಿಗರ ವಿಚಾರಗೋಷ್ಠಿ ನಡೆಯುವುದಿತ್ತು. ಉಡುಪಿಯಿಂದ ನಾವು ಒಂದಷ್ಟು ಜನ ಅವರ ಜೊತೆ ಹೊರಟಿದ್ದೆವು. ದಾರಿ ಮಧ್ಯದಲ್ಲಿ ಶಿವರಾಮ ಕಾರಂತರ ಊರು ಕೋಟ ಬಂದಾಗ ಅಟೋ ನಿಲ್ದಾಣ ..ಕಾರು ಸ್ವಲ್ಪ ನಿಲ್ಲಿಸಪ್ಪ..ಇದು ಕಾರಂತರ ಓಡಾಡಿದ ಪುಣ್ಯಭೂಮಿ ಅಲ್ವಾ.ನಾನು 15 ವರ್ಷಗಳ ಹಿಂದೆ ಇಲ್ಲಿ ಬಂದಾಗ ಒಬ್ಬ ಆಟೋ ಡ್ರೈವರ್ ನನ್ನನ್ನು ಕರೆದುಕೊಂಡು ಹೋಗಿದ್ದ. ಅವನ ಹೆಸರು ಎಂದು ಹೆಸರು ಹೇಳಿ, ಅವನು ಇದ್ರೆ ಮಾತಾಡಿಸಿ ಬರುವೆ ಎನ್ನುತ್ತ ಅಲ್ಲಿ ವಿಚಾರಿಸಿ ಬಂದಿದ್ದರು. ಯಾವುದೇ ಹಮ್ಮುಬಿಮ್ಮುಗಳಿಲ್ಲ,ಜಾತಿ,ಮತ,ಧರ್ಮ ಎಲ್ಲವನ್ನು ಮೀರಿ ಮಾನವತೆಯ ಮಂತ್ರವನ್ನು ತಮ್ಮೊಳಗೆ ತುಂಬಿಕೊಂಡವರು. ತಮ್ಮ ಆಪ್ತರಿಗೆ ಅದನ್ನೇ ಬೋಧಿಸಿದವರು. ಸಾಹಿತ್ಯವೆಂದರೆ ಹೃದಯಗಳನ್ನು ಬೆಸೆಯುವ ಶ್ರೇಷ್ಠ ಮಂತ್ರ ಎನ್ನುತ್ತಿದ್ದರು. ಅವರ ಸಾಹಿತ್ಯ ಹಾಗೂ ಅವರು ಬೇರೆಯಲ್ಲ. ಬರೆದಂತೆ ಬದುಕಿದವರು. ತನ್ಮ ಕಾರ್ಯಕ್ರಮಕ್ಕೆ ಬಂದ ಪರಿಚಿತರ ಹೆಸರನ್ನು ಪ್ರೀತಿಯಿಂದ ಉಲ್ಲೇಖಿಸಿ ಗುರುತಿಸುತ್ತಿದ್ದರು. ಬೆಂಗಳೂರಿನಲ್ಲಿ ನಾಗರಬಾವಿಯ ಅವರ ಮನೆಯಲ್ಲಿ ಪ್ರಕಾಶ್ ಎನ್ನುವ ಒಬ್ಬ ಅನಾಥರಿದ್ದರು. ತನ್ನ ಊಟದಲ್ಲಿ ಅರ್ಧವನ್ನು ಅವನಿಗೆ ನೀಡಿ ಖರ್ಚಿಗೆ ಕೊಟ್ಟು ಸಾಕುತ್ತಿದ್ದರು. ಆ ವ್ಯಕ್ತಿಗೆ ಮಾನಸಿಕ ಸಮಸ್ಯೆ ಇದ್ದಂತಿತ್ತು. ಕೆಲವೊಮ್ಮೆ ಜೋರಾಗಿ ಕಿರುಚಿ ಸಾರ್ ಗೆ ಬಯ್ಯುತ್ತಿದ್ದ. ಅದನ್ನೂ ಮುಗುಳ್ನಗೆಯಿಂದ ಸ್ವೀಕರಿಸಿ ಅನುಕಂಪದಿಂದ ಹೇಳುತ್ತಿದ್ರು. ಪಾಪ,ಅವನಿಗೆ ಯಾರಿದ್ದಾರೆ ? ಲಕ್ಷ್ಮಣ್ ಎಂಬ ಹುಡುಗ ಕೇಬಲ್ ಕೆಲಸದಲ್ಲಿ ತೊಡಗಿಸಿಕೊಂಡವನು. ಸ್ವಂತ ಮಗನಿಗಿಂತ ಹೆಚ್ಚು ಎಂಬಂತೆ ಪ್ರೀತಿಸಿದರು. ಕ್ಯಾಮಾರ ಹಿಡಿದು ಫೋಟೋ ತೆಗೆಯುವ ಗೋವಿಂದರಾಜ್,ಅರಣ್ಯಾಧಿಕಾರಿಯಾಗಿ ನಿವೃತ್ತರಾದ ಯೋಗೇಶ್ವರ ದಂಪತಿಗಳು,ಪ್ರಕಾಶಚಂದ್ರ, ಭಾಸ್ಕರ್,ಕಲಾವಿದರು,ಸಿಹಿತಿಂಡಿ ತಯಾರಿಸುವ ಶ್ರೀಧರ್, ಬರಹಗಾರರಾದ ಪಾರ್ವತಿ ಐತಾಳ್,ಡಾ.ನಿಕೇತನ, ಡಾ.ಪ್ರಶಾಂತ್, ಡಾ.ಧನಂಜಯ್ ಕುಂಬ್ಳೆ, ರಾಜಕೀಯದಲ್ಲಿ ತೊಡಗಿಸಿಕೊಂಡ ಕುಯಿಲಾಡಿ ಸುರೇಶ್ ನಾಯಕ್,ಅಮೃತ್ ಶೆಣೈ,ಯು.ಆರ್,ಸಭಾಪತಿ, ಹೆಸರು ತಿಳಿಯದ ಬೀಡ ಮಾರುವ ಹುಡುಗ ಇನ್ನೂ ನನ್ನ ನೆನಪಿಗೆ ಸಿಗದ ಅದೆಷ್ಟೋ ಹೆಸರುಗಳು.. ಉಡುಪಿ, ಮಂಗಳೂರಿನ ಸ್ನೇಹ ಬಂಧುಗಳು. ಎಲ್ಲರೂ ಅವರಿಂದ ಪ್ರೀತಿಯ ಸವಿ ಉಂಡು ಪುಷ್ಠಿಗೊಂಡವರು. ತಮ್ಮ ಪರಿಧಿಯೊಳಗೆ ಇಣುಕಿದ ಎಲ್ಲ ಮನಸ್ಸುಗಳಿಗೂ ಲಗ್ಗೆ ಇಟ್ಟರು. ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು ಕಂದಾ..ಎತ್ತರಕ್ಕೆ ಬೆಳೆದಷ್ಟು ನಾವು ವಿನೀತರಾಗಬೇಕು. ಕನ್ನಡ ನಮ್ಮ ತಾಯಿ ಆಕೆಯನ್ನು ಪ್ರೀತಿಸಬೇಕು, ಮನುಷ್ಯತ್ವ ಒಂದೇ ನಮ್ಮೆಲ್ಲರನ್ನೂ ಜೊತೆಯಾಗಿ ನಡೆಸಬಲ್ಲದು. ಎನ್ನುತ್ತಿದ್ದ ಸಾರ್ , ಅಂತೆಯೇ ಬದುಕಿದವರು. ಇಂದು ಭೌತಿಕವಾಗಿ ನಮ್ಮೆಲ್ಲರ ನ್ನೂ ಅಗಲಿ ಶೂನ್ಯವೊಂದನ್ನು ಮನಸ್ಸಿನಲ್ಲಿ ನೆಟ್ಟಿದ್ದಾರೆ. ಆ ನಿರ್ವಾತ ದೊಳಗಿಂದ ಅವರ ಆದರ್ಶ,ಆ ಮೇರು ವ್ಯಕ್ತಿತ್ವದ ಪರಿಮಳ ಹೆಕ್ಕುತ್ತ ನಾವು ನಡೆಯಬೇಕಾಗಿದೆ. ನಿಮ್ಮ ಸಾವಿರದ ನೆನಪುಗಳು,ವಿಶಿಷ್ಟ ಭಾಷೆಯ ಬರಹಗಳು,ಚಿಂತನೆ, ಕಾವ್ಯ ನಮ್ಮ ಜೊತೆಗಿದೆ ಸಾರ್. ಅವು ಅಜರಾಮರ. ಮನದಾಳದ ನಮನಗಳು *******

ಗುರುವಂದನೆ Read Post »

ಇತರೆ

ನಿತ್ಯೋತ್ಸವವಿನ್ನು ನೆನಪು

ನಿಂತು ಹೋದ ನಿತ್ಯೋತ್ಸವ ಕೆ.ಎಸ್.ನಿಸಾರ್ ಅಹಮದ್ ನಿತ್ಯೋತ್ಸವ ಕವನ’ ನಿಲ್ಲಿಸಿದ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್..! ನಿತ್ಯೋತ್ಸವದ ಕವಿ ಎಂದೇ ಖ್ಯಾತರಾದ ಕನ್ನಡ ಹಿರಿಯ ಕವಿ ಪ್ರೊ. ಕೆ.ಎಸ್‌ ನಿಸಾರ್ ಅಹಮದ್ ಅವರು ತಮ್ಮ ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು… ಪ್ರೊ. ಕೆ.ಎಸ್.ನಿಸಾರ್ ಅಹಮದ್ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ 1936ರ ಫೆಬ್ರುವರಿ 5ರಂದು ಜನಿಸಿದವರು. 1959ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1994ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗೂ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದವರು… ನಿಸಾರ್ ಅಹಮದ್ ಅವರಲ್ಲಿ 10ನೇ ವಯಸ್ಸಿನಲ್ಲೇ ಸಾಹಿತ್ಯಾಸಕ್ತಿ ಮೂಡಿತು. ‘ಜಲಪಾತ’ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ 21ಕ್ಕೂ ಹೆಚ್ಚು ಕವನ ಸಂಕಲನಗಳು, 14 ವೈಚಾರಿಕೆ ಕೃತಿಗಳು, 5 ಮಕ್ಕಳ ಸಾಹಿತ್ಯ ಕೃತಿಗಳು, 5 ಅನುವಾದ ಕೃತಿಗಳು, 13 ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ… ಅವುಗಳಲ್ಲಿ- ಮನಸು ಗಾಂಧಿ ಬಜಾರು ಹಾಗೂ ನಿತ್ಯೋತ್ಸವ ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ. ನಿಸಾರ್‍ ಅಹಮದ್ ಸಂವೇದನಾಶೀಲ ಹಾಗೂ ಜನಪ್ರಿಯ ಕವಿ ಎಂದೇ ಪ್ರಸಿದ್ಧರಾಗಿದ್ದಾರೆ… 1978ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು, ಕನ್ನಡ ಲಘು ಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು. ಇದು ವರೆಗೂ 13 ಧ್ವನಿಸುರುಳಿಗಳ ಮೂಲಕ ಅವರು ರಚಿಸಿದ ಕವನಗಳು, ಗೀತೆಗಳು ಸಂಗೀತದೊಂದಿಗೆ ಪ್ರಚುರಗೊಂಡಿವೆ… ಕುರಿಗಳು ಸಾರ್‌ ಕುರಿಗಳು, ರಾಜಕೀಯ ವಿಡಂಬನೆ ಕವನವಾಗಿದೆ. ಭಾರತವು ನಮ್ಮ ದೇಶ (ಸರ್‌ ಮೊಹಮದ್ ಇಕ್ಬಾಲ್ ಅವರ ಸಾರೆ ಜಹಾಂ ಸೆ ಅಚ್ಛಾ ಕವನದ ಕನ್ನಡ ಭಾಷಾಂತರ) ‘ಬೆಣ್ಣೆ ಕದ್ದ ನಮ್ಮ ಕೃಷ್ಣ’ ಕವನ ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ… ಅವರ ಕವನ ಸಂಕಲನಗಳು— ಮನಸು ಗಾಂಧಿ ಬಜಾರು, ನೆನೆದವರ ಮನದಲ್ಲಿ, ಸುಮಹೂರ್ತ, ಸಂಜೆ ಐದರ ಮಳೆ, ನಾನೆಂಬ ಪರಕೀಯ (1974), ಆಯ್ದ ಕವಿತೆಗಳು (1974), ನಿತ್ಯೋತ್ಸವ, ಸ್ವಯಂ ಸೇವೆಯ ಗಿಳಿಗಳು, ಅನಾಮಿಕ ಆಂಗ್ಲರು, ಬಹಿರಂತರ, ಸಮಗ್ರ ಕವಿತೆಗಳು, ನವೋಲ್ಲಾಸ, ಆಕಾಶಕ್ಕೆ ಸರಹದ್ದುಗಳಿಲ್ಲ, ಅರವತ್ತೈದರ ಐಸಿರಿ, ಸಮಗ್ರ ಭಾವಗೀತೆಗಳು, ಪ್ರಾತಿನಿಧಿಕ ಕವನಗಳು ಇವರ ಕವನ ಸಂಕಲನಗಳಾಗಿವೆ… ಅವರ ಗದ್ಯ ಸಾಹಿತ್ಯ– ‘ಅಚ್ಚುಮೆಚ್ಚು’, ‘ಇದು ಬರಿ ಬೆಡಗಲ್ಲೊ ಅಣ್ಣ’ ಷೇಕ್ಸ್ ಪಿಯರ್ನ‌ನ ಒಥೆಲ್ಲೊದ ಕನ್ನಡಾನುವಾದ, ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’ ಕೃತಿಯ ಕನ್ನಡಾನುವಾದ. ಅಮ್ಮ ಆಚಾರ ಮತ್ತು ನಾನು- ಇವುಗಳು ನಿಸಾರ್ ಅಹಮದ್ ಅವರ ಗದ್ಯ ಕೃತಿಗಳಾಗಿವೆ… ಅವರಿಗೆ ಸಂದ ಪ್ರಶಸ್ತಿ, ಪುರಸ್ಕಾರಗಳು— 2006 ರ ಮಾಸ್ತಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೊರೂರು ಪ್ರಶಸ್ತಿ, ಅನಕೃ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಪಂಪ ಪ್ರಶಸ್ತಿ, 1981ರ ರಾಜ್ಯೋತ್ಸವ ಪ್ರಶಸ್ತಿ, 2003ರ ನಾಡೋಜ ಪ್ರಶಸ್ತಿ, 2006 ರ ಅರಸು ಪ್ರಶಸ್ತಿಗೆ ಅವರು ಭಾಜನರಾಗಿದ್ದರು… 2006 ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಕೂಡ..! ಇಂತಹ ಕವಿ, ಸಾಹಿತಿ ಕೆ.ಎಸ್‌. ನಿಸಾರ್ ಅಹಮದ್ ರು ಈಗ ನಮ್ಮನ್ನು ಅಗಲಿದ್ದಾರೆ. ಅವರಿಗೆ ಇದೋ ಅನಂತಾನಂತ ನಮನಗಳು… ********** ಕೆ.ಶಿವು.ಲಕ್ಕಣ್ಣವರ

ನಿತ್ಯೋತ್ಸವವಿನ್ನು ನೆನಪು Read Post »

ಇತರೆ

ನುಡಿ ನಮನ

ನುಡಿ ನಮನ ಹೊರಗಣ್ಣ ಮುಚ್ಚಿದರೆ ಒಳಗಣ್ಣು ತೆರೆಯುವುದು ಕಾಣುವುದು ಎಲ್ಲೆಲ್ಲು ವಿಶ್ವರೂಪ_ _ಕೆ.ಎಸ್.ನಿಸ್ಸಾರ ಒಬ್ಬ ಕವಿಯಾಗಿ,ಭಾವ ಜೀವಿಯಾಗಿ,ನಾನೆಂಬ ಪರಕೀಯರೊಳು ಒಂದಾಗಿ,ಪ್ರೇಮ ಕವಿಯಾಗಿ, ನಿತ್ಯೋತ್ಸವದ ಜೀವವಾದ ಕವಿ,ಲೇಖಕನ ಸೇವೆ ಅಗಣಿತವಾದ ಪರಿಧಿಯೋಳು ನೆಲೆನಿಲ್ಲಲು ಇವರ ಕವಿತೆಗಳೇ ಸಾಕ್ಷಿ..! ನಾಡು ನುಡಿಗೆ ಕಹಳೆಯುದಿದ ನಿಷ್ಠಾವಂತ ಯೋಧ… ** “ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ ನೀರೆಂದರೆ ಬರಿ ಜಲವಲ್ಲ ಅದು ಪಾವನತೀರ್ಥ”…. ಇಡೀ ಕರುನಾಡ ಸೊಗಡನ್ನು ಕನ್ನಡಿಗರಿಗೆ ಎಳೆಎಳೆಯಾಗಿ ಕಟ್ಟಿಕೊಟ್ಟಿದ್ದಾರೆ.ಕನ್ನಡ ನಾಡಲ್ಲಿ ಹುಟ್ಟುವುದೇ ಪುಣ್ಯ.ಇದು ಬರಿ ಗಡಿನಾಡಲ್ಲಿ ಗುರುತಿಸಿದ ನಾಡಲ್ಲ..ಕನ್ನಡಿಗರ ಉಸಿರು‌ ಬೆರೆತ ನಾಡು..ಎಂದು ನುಡಿವಲ್ಲಿ ಅವರ ಆಂತರ್ಯದ ಅಭಿಮಾನಕ್ಕೆ ಹಿಡಿದ ಕನ್ನಡಿಯಾಗಿದೆ. ನಿತ್ಯೋತ್ಸವ * *೧೯೭೮ *ರಲ್ಲಿ ಇಡೀ ನಾಡಿನಾದ್ಯಂತ ಕನ್ನಡಿಗರ ತನು ಮನದಲ್ಲಿ ಚಿರಸ್ಥಾಯಿಯಾದ ಕವಿತೆಗಳ ಗುಚ್ಛ. “ಜೋಗದ ಸಿರಿ ಬೆಳಕಿನಲ್ಲಿ,ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯಹರಿದ್ವರ್ಣವನದ ತೇಗ,ಗಂಧ ತರುಗಳಲ್ಲಿ ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ”… ಈ ‌ಕವಿತೆಯ ಸಾಲುಗಳು ನಾವ್ ಪ್ರೀತಿಸುವ ಕನ್ನಡಾಂಬೆಯ ಉಸಿರು ಪ್ರತಿಯೊಬ್ಬ ಕನ್ನಡಿಗನ ನಾಡಿ ಮಿಡಿತವೆಂದರೆ ತಪ್ಪಾಗಲಾದು. ಪ್ರೇಮಕವಿಯ ಅಂತರಂಗದಾ ಸೆಳೆತಗಳು* ನೆನೆದೆ ನೆನೆಯುವೆ. “ಕಂಡ ಸಾವಿರ ಅನ್ಯ ಮೊಗದ ಭಂಗಿಗಳಲ್ಲಿ ನನ್ನ ದೈನ್ಯವ ನೊಂದು ಹೋಲಿಸಿದಾಗ ಕಣ್ಣಂಚ ಹೆದೆಯಲ್ಲಿಬಿಗಿಗೊಂಡ ನೋವೊಂದು ನೇರ ನಿನ್ನೆದೆಯತ್ತ ತೂರಿದಾಗ”. ಎಂಬ ಭಾವ ಕವಿಯ ಮನಸ್ಸಿಗಾದ ಗಾಯವನ್ನು ಸುಲಭವಾಗಿ ಅರ್ಥೈಸುವಂತೆ ನನ್ನ ನೆನಪು ಛಾಯೆಯಂತೆ ನಿನ್ನೆದುರಿಗೆ ನಿಲ್ಲುವಾಗ ನೆನೆಯದೆ ಇರಲಾರೆಯೆಂಬ ಸತ್ಯ ಪ್ರೇಮದ ಸ್ವರೂಪವಾಗಿದೆ. ** ನಾ ನಿನ್ನ ಕಂಡಾಗ… ನಾ ನಿನ್ನ ಕಂಡಾಗ ಎಷ್ಟೊಂದು ನಲಿವಿತ್ತು ಎಷ್ಟೊಂದು ಗೆಲುವಿತ್ತು,ಅಷ್ಟೊಂದು ನಗುವಿತ್ತು ಹಗಲೆಲ್ಲ ನಿನ್ನ ಧ್ಯಾನ,ಇರುಳೆಲ್ಲ ನಿನ್ನ ಸ್ವಪ್ನ ನೀ ನಡೆವ ದಾರಿಯಲ್ಲಿ ಅನುದಿನವು ನನ್ನ ಪಯಣ ನೀ ಸುಳಿದರೆನ್ನ ಬಳಿಗೆ ನೆರೆ ಬಂದ ಹಾಗೆ ಹೊಳೆಗೆ ನನ್ನೆದೆಯ ತೋಟದಲ್ಲಿ ಆಡಾಡು ಓ ನವಿಲೇ.. ನೆನೆದಾಗ ನಿನ್ನ ರೂಪ ಎದೆಗತ್ತಲಲ್ಲಿ ದೀಪ…! ” ಕವಿಯ ಸುಕೋಮಲ ಹೃದಯ ಪ್ರೇಮವೆಂಬ ಆಕಾಶದಲ್ಲಿ ಪ್ರೇಯಸಿಯ ನೆನೆದು ಅಗೋಚರ ಪ್ರೀತಿಯ ಸುಧೆಯ ಹರಿಸಿ ಆರಾಧಿಸುವ ಕಲೆ ಒಬ್ಬ ಪ್ರೇಮಿಗೆ ಮಾತ್ರ ದೇವರು ಕೊಟ್ಟ ವರವೆಂದರೆ ವಿಶೇಷವೆನಿಲ್ಲ..ಆ ಪ್ರೇಮಿ ಕವಿ ನಿಸ್ಸಾರರು. ** ನೆನಪು ಕವಿತೆ ನಿನ್ನ ನಗೆಗಳ ಜಾಹಿರಾತಿಗೊಲವಿನ ಅರ್ಜಿ ಗುಜರಾಯಿಸುತ ಪ್ರತಿಸಲವು ಉತ್ತರಕೆ ತತ್ತರಿಸಿ ಮುಖಭಂಗವಾಗಿರುವ ಹಣೆಬರಹ ಚಿತ್ತದ ‘ನಿರ್ಭಾಗ್ಯ’ ನಿನ್ನಾಸೆಗೆಳ್ಳುನೀರನು ಬಿಟ್ಡು ವರ್ಷಗಳ ಕಳೆದಿವೆ ಚಿಹ್ನೆಗಳು ಉಳಿದಿವೆ ನನ್ನೆದೆಯ ಹಸುರಲ್ಲಿ… ” ಹಿಂದಿನಪಘಾತಕ್ಕೆ ಎಚ್ಚರಿಕೆ ಕೆತ್ತಿಹುದು ನಿನ್ನತ್ತ ಧಾವಿಸುವ ಭಾವಗಳು ಸತ್ತಿಹವು…….. ಪ್ರೇಮದ ಕರಿನೆರಳಿಗೆ ಆಘಾತವಾದ ಮನಸು ಚೇತರಿಸಿಕೊಂಡು ಬದುಕ ಕಟ್ಡಿದರು,ಪ್ರೇಮದ ಅಲೆಯಲಿ ನೋವ ಮರೆತು,ಮತ್ತೆ ಮರಳಲಾರದ ಸ್ಥಿತಿ ಪ್ರತಿಯೊಬ್ಬನದೆಂಬಂತೆ ನೆನಪ ಹಂಚಿರುವುದು.ನೊಂದವರಿಗೆ ಮಾದರಿ. ** ಬೇಸರವಾಗಿದೆ ಮಾತು ಕವಿತೆಯಂತು…… ಭಾರವಾಗಿದೆ ಮೌನ ನೋವು ಕರಗಿದ ಕಣ್ಣಲಿ ಅಡಿಗೆ ಚುಚ್ಚಿದ ಮುಳ್ಳು ಒಳಗಡೆ ಮುರಿದಂತೆ ಭಾವ ಕುಟಿಕಿದೆ ಮನದಲಿ ಮುರಿದ ಪ್ರೀತಿಯ ಮರೆಯೇ ಬಾಳಿನೊಳ ಹೊಕ್ಕಿರಲು ಸಾವ…ಭಯ ತಾನೆರಗಿತೋ ಯಾವ ಗವಿ ಗತ್ತಲಿನಲಿ ಮೌನಭಾರವ ಕನಸಿ‌ ಇದ್ದ ಹಕ್ಕೆಯ ಬಿಟ್ಟಿತೋ…. ಹೃದಯದಲಡಗಿದ ಪ್ರೀತಿ ಕಮರಿ ಕಣ್ಮರೆಯಾದ ಗಳಿಗೆಗಳು ಪುನಃ ಬೇರುರದೇ.ನಶಿಸುವ ಕ್ಷಣಗಳ ಕವಿಯು ಅನುಭವಿಸದೇ ಹೇಳಲಾರನೆಂಬುದಕೆ ಸಾಕ್ಷಿ… ನಿನ್ನ ಮೈತ್ರಿ..ಕವನದ ಸಾಲುಗಳು ಅತ್ಯದ್ಭುತ. ನಿನ್ನೆದೆಯ ಗೆದ್ದಿರುವ ಹೆಮ್ಮೆಯಿಂದೆಷ್ಟೋಸಲ ಎನಿಸುವುದು,ನನಗಿಂತ ಇಲ್ಲ ಧನ್ಯ.ನನಾ ಪಾತ್ರನೋ ಏನೋ ನಿನ್ನಮಲ ಪ್ರೇಮಕ್ಕೆ,ನನಗಂತೂ ದಕ್ಕಿಹುದು ಜೀವದಾನ. ಬಾಳ ದುರ್ಗಮ ಪಥದ ಪಾದಯಾತ್ರೆ ಚಿರರಕ್ಷೆಯಾಗಿರಲಿ ನಿನ್ನ ಮೈತ್ರಿ…… ಕವಿ ನಿಸ್ಸಾರರ ಅಭೂತಪೂರ್ವ ಕವಿತೆಗಳಲ್ಲಿ ಒಂದಾದ ಕವಿತೆ… ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೆ…..ಕವಿಯೆಯಂತೂ ಇಹಪರ ಚಿಂತನೆಗೆ ಒರೆಹಚ್ಚದಿರಲಾರದು. ** ಇನ್ನೊಂದು ಕವನ “ಮತ್ತದೇ ಬೇಸರ”… ಕವಿತೆ ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ ನಿನ್ನ ಜೊತೆಯಿಲ್ಲದೆ ಮಾತಿಲ್ಲದೆ ಮನ ವಿಭ್ರಾಂತ ಆಸೆಗಳ ಹಿಂಡಿನ ತುಳಿತಕ್ಕೆ ಹೋಲನನ್ನೀದೇಹ ಬರುವೆಯೇ,ಬಾರೆಯೇ ನೀ ನೆನಿಸುತಿದೆ ಹಾ.ಸಂದೇಹ.. *ಕವಿ ಬರೆದ ಕವಿತೆ…. ಕವಿ ಬರೆದ ಲೆಕ್ಕಣಿಕೆಯಲ್ಲಿ ತನ್ನ ಎದೆಯನ್ನೆ ಇರಿದಿರಿದು ಆಂತರ್ಯ ಸಂಚಯಿತ ಬಾಧೆಯನೇ ಸುರಿದೆರೆದು.. ಬರೆದಾಗ ಪ್ರೇಮದ ಕುಣಿಕೆ ಆಂತರ್ಯದಲಿ ಚಿಗುರೊಡೆದಿದ್ದು ಆಶ್ಚರ್ಯವೇ… ** ರೂಪ ಕವಿತೆ….ಅಮೂರ್ತದಿಂದ ಮೂರ್ತದೆಡೆಗೆ… ಕವಿತೆಯಲ್ಲಂತೂ ಕವಿಯ ತುಮುಲಗಳು,ತುಡಿತಗಳು, ಮೇಳೈಸಿದಂತೆ ” ಮತ್ತೆ ಆ ರೂಪ ಎದೆಗೆ ಹಾಯುತಿದೆ ಚಿತ್ತ ಸಂತಾಪದಲ್ಲಿ ಬೇಯುತಿದೆ. ಎಂದೋ ಹುಗಿದಂಥ ನೆನಹ ಕೆದಕುತಿದೆ ಮೌನದುತ್ತಾಪದಲ್ಲಿ ಹೊಗೆಯಿತಿದೆ ಇದ್ದಕ್ಕಿದ್ದಂತೆ ಹೃದಯ ಹೌಹಾರಿ ಸದ್ದೆ ಇರದಂತೆ ರೋಧಿಸಿದೆ ಬೇಲಿ ಇಲ್ಲಮೆಯ ಭಾವ ಮುಸುಕಿ ಮಿಡುಕುತಿದೆ ಜೀವ ಏನನ್ನೋ ಬೇಡಿ ದುಡುಕುತಿದೆ ….ಮತ್ತೆ ಆ ರೂಪ.! ಹೇಳುತ್ತಾ ಹೊರಟರೆ ಕವಿಯ ಮನವರಳುತ್ತಾ ಸಾಗುವುದು.ಕಾರಣ ಕನ್ನಡ ನಾಡಿನ ಅಪರೂಪದ ರತ್ನ..ಜಾತಿ ಮತ ಧರ್ಮ ಭೇದಗಳ ಮೆಟ್ಟಿನಿಂತು. ಸಾಗಿದ ಬದುಕು ದಿಗಂತದಂತೆ ಅನಂತ. ಕವಿಯೇ ಹೇಳುವಂತೆ… ಸಂಜೆ ಐದರಮಳೆ ಕವನ ಸಂಕಲನದೊಂದು ಕವಿತೆ… “ನಿಮ್ಮೊಡನಿದ್ದೂ ನಿಮ್ಮಂತಾಗದ ಜಗ್ಗಿದ ಕಡೆ ಬಾಗದೇ ನಾನು ನಾನೆ ಆಗಿ ಈ ನೆಲದಲ್ಲೆ ಬೇರೂತ್ತಿದ್ದರು ಬೀಗಿ ಪರಕೀಯವಾಗಿ ತಲೆಯೆತ್ತುವುದೆದೆ ನೋಡಿ ಅದು ಬಲು ಕಷ್ಟದ ಕೆಲಸ………..ವೆಂದು ನುಡಿಯುವಾಗ ಕವಿಯ ಅಂತರಾತ್ಮ ಎಷ್ಟೊಂದು ಮರುಗಿರಬಹುದು.. ಕವಿಯೆಲ್ಲವನ್ನು ಮೀರಿ ತನ್ನಾತ್ಮದೊಳು ನೆಲೆನಿಂತು ಸಾಗಿ ಮನೆಮನಗಳಲ್ಲಿ ಮನೆಮಾತಾಗಿರುವ ಅಚ್ಚ ಕನ್ನಡಿಗ ನಮ್ಮ ಮೆಚ್ಚಿನ ಕವಿ ನಿತ್ಯೋತ್ಸವದ ಹರಿಕಾರ….ಕೆ.ಎಸ್.ಎನ್…….ಇಂದು ನೆನಪಿನ ಬಿತ್ತಿಯೋಳು ಮಿನುಗುವ ನಕ್ಷತ್ರ. “ನಾದವಿರದ ಬದುಕು ಇದ್ದು ಸತ್ತಂತೆ ಎಂದು ಸಾರುತ್ತಾ”……ಬದುಕಿರುವಷ್ಟು ಗಳಿಗೆ ನಾಡು.ನುಡಿಗೆ ಮಿಸಲಿಟ್ಟು………..” ಬಿಸುಸುಯ್ಯುವ ಹಂಬಲವೋ ಶುಭ ಸಮ್ಮಿಲನದ ಕಾತರವೋ ಬಾ ಇನಿಯ,ಕರೆವ ನೊಂದು ಬರದೆ ಹೋದೆ ನೀನು,ಮರೆತು ಹೋದೆ ನೀನು.” ನೋವಿನಧಾರೆಯ ನಮ್ಮೊಡಲಿಗಿಟ್ಟು ಮತ್ತದೇ ಬೇಸರದ ನಾದವಾಗಿ ಮರೆಯಾದ ಪ್ರೇಮ ಕವಿಗೆ ಕೋಟಿಕೋಟಿ ನಮನಗಳು. ************************** ಶಿವಲೀಲಾ ಹುಣಸಗಿ

ನುಡಿ ನಮನ Read Post »

ಇತರೆ

ನಿತ್ಯೋತ್ಸವದ ಕವಿಗೆ ನಮನ

ನಿತ್ಯೋತ್ಸವದ ಕವಿಗೆ ನಮನ ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ…. ಈ ಹಾಡು ಕೇಳದವರಾರು, ಈ ಹಾಡು ಹಾಡದವರಾರು.ಕನ್ನಡಮ್ಮನಿಗೆ ನಿತ್ಯೋತ್ಸವದ ಹಾಡು ಬರೆದು ಕನ್ನಡದ ಹಿರಿಮೆ ಹೆಚ್ಚಿಸಿದ ಕವಿ ನಿಸಾರ್ ಅಹಮದ್ ಅವರು ನಮ್ಮನ್ನು ಅಗಲಿದ್ದು ಸಾರಸ್ವತ ಲೋಕಕ್ಕೆ ಅಪಾರ ನಷ್ಟವಾಗಿದೆ. ಪ್ರೊ. ನಿಸಾರ್ ಅಹಮದ್ ಎಂದೇ ಖ್ಯಾತರಾದ ಕೊಕ್ಕೆರೆ ಹೊಸಳ್ಳಿ ಹೈದರ ನಿಸಾರ್ ಅಹಮದ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಫೆಬ್ರವರಿ 5, 1936ರಂದು ಜನಿಸಿದರು. 1959ರಲ್ಲಿ ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದವರು. ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತ ಸಾಹಿತ್ಯ ಕೃಷಿ ಆರಂಭಿಸಿದರು. ನಿಸಾರ್ ಅಹಮದ್ ಸುಮಾರು 25 ಕೃತಿಗಳನ್ನು ರಚಿಸಿದ್ದು, ನಿತ್ಯೋತ್ಸವ ಹಾಗೂ ಗಾಂಧಿ ಬಜಾರ್ ಇವರ ಪ್ರಸಿದ್ಧ ಕವನ ಸಂಕಲನಗಳು. ಅಲ್ಲದೇ ಕನ್ನಡದಲ್ಲಿ ಪ್ರಥಮ ಬಾರಿಗೆ ಭಾವಗೀತೆ ಕ್ಯಾಸೆಟ್ ತಂದ ಕೀರ್ತಿ ಕೂಡಾ ಇವರಿಗೆ ಸಲ್ಲುತ್ತದೆ. ರಾಜಕಾರಣಿಗಳನ್ನು ಕುರಿತು ಬರೆದ ಕವಿತೆ ಕುರಿಗಳು ಸಾರ್ ಕುರಿಗಳು ವಿಡಂಬನಾತ್ಮಕ ಗೀತೆಯಾಗಿ ಪ್ರಸಿದ್ಧಿಯಾಗಿ ನಿಸಾರ್ ಅಹಮದ್ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಕವಿತೆ. “ಕೃಷ್ಣನ ತುಂಟತನವನ್ನು ವರ್ಣಿಸುವ ಬೆಣ್ಣೆ ಕದ್ದ ನಮ್ಮ ಕೃಷ್ಣ ಬೆಣ್ಣೆ ಕದ್ದ ನಮ್ಮ, ಬೆಣ್ಣೆ ಕದ್ದು ಜಾರುತ ಬಿದ್ದು “ಈ ಹಾಡಿಗೆ ಮರುಳಾಗದವರಾರು. “ನಾಡದೇವಿಯೆ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ, ಒಂದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಭೇದ ತಾಯಿ “ಎಂದು ಅಸಮಾನತೆ ವಿರುದ್ದ ಬರೆದ, ಕುರಿಗಳು ಸಾರ್ ಎಂದು ವ್ಯವಸ್ಥೆಯ ಬಗ್ಗೆ ವ್ಯಂಗ್ಯವಾಡಿದ ಜೋಗದ ಸಿರಿಯ ಕವಿ ಕೆ ಎಸ್ ನಿಸಾರ್ ಅಹಮದ್ ಈ ನಾಡಿನ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿರುವ ಕವಿ. ಕನ್ನಡಾಂಬೆಯ ತೇರು ಎಳೆದಿರುವ, ಎಳೆಯುತ್ತಾ ಇರುವ ನನ್ನ ಅಚ್ಚುಮೆಚ್ಚಿನ ಅನೇಕ ಕವಿಗಳಲ್ಲಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಕೂಡ ಒಬ್ಬರು. “ಎಲ್ಲಾ ಮರೆತಿರುವಾಗ ಇಲ್ಲಾ ಸಲ್ಲದ ನೆವವಾ ಹೂಡಿ ಬರದಿರು ಮತ್ತೆ ಹಳೆಯ ನೆನಪೇ “ಈ ಕವಿತೆ ನಾನು ಸದಾ ಗುನುಗುನಿಸುತ್ತಿದ್ದ ಅಚ್ಚುಮೆಚ್ಚಿನ ಭಾವಗೀತೆ ಯಾಗಿತ್ತು. ಗಾಂಧಿಬಜಾರು ಮತ್ತು ನಿತ್ಯೋತ್ಸವ ನಿಸಾರ್ ಅಹಮದ್ ಅವರಿಗೆ ಅತಿ ದೊಡ್ಡ ಹೆಸರು ತಂದುಕೊಟ್ಟವು. ನಿತ್ಯೋತ್ಸವ ಗೀತೆ ಕನ್ನಡ ನಾಡಿನಲ್ಲಿ ತನ್ನದೆ ಹೊಸ ಸಂಗೀತ ಮತ್ತು ಸಾಹಿತ್ಯ ಲೋಕ ಸೃಷ್ಟಿಗೆ ಕಾರಣವಾಯಿತು.ಅದರಲ್ಲಿದ್ದ ಅಷ್ಟೂ ಹಾಡುಗಳೂ ಜನರಿಗೆ ಅತ್ಯಂತ ಇಷ್ಟವಾದ ಹಾಡುಗಳಾಗಿದ್ದವು.ಇವತ್ತಿಗೂ ಅಷ್ಟೇ ಜನಪ್ರಿಯತೆ ಉಳಿಸಿಕೊಂಡಿವೆ.ಸುಗಮ ಕ್ಷೇತ್ರದಲ್ಲಿ ಇವತ್ತಿಗೂ ಜನ ಆಸಕ್ತಿ ಮತ್ತು ಇಷ್ಟ ಪಟ್ಟು ಕೇಳುವ ಬಹುಪಾಲು ಗೀತೆಗಳಲ್ಲಿ ನಿಸಾರ್ ಅಹಮದ್ ಅವರ ಕವನಗಳ ಪಾಲು ಬಹುದೊಡ್ಡದು . ಇವರಿಗೂ ಸುಗಮ ಸಂಗೀತ ಕ್ಷೇತ್ರಕ್ಕೂ ಬಿಡಸಲಾರದ ನಂಟು.  ನಿಸಾರ್ ಕವನಗಳನ್ನು ಆಧರಿಸಿದ ಅನೇಕ ಆಲ್ಬಂಗಳು ಸದಭಿರುಚಿಯ ಹೊಸ ಕೇಳುಗ ಲೋಕ ಸೃಷ್ಟಿಗೆ ಕಾರಣವಾಯಿತು . ಸಂವೇದನೆ, ವಿಡಂಬನೆ, ತಿಳಿಹಾಸ್ಯ ನಿಸಾರ್ ಅಹಮದ್ ಅವರ ವಿಶೇಷತೆ. ಚಿಂತನೆ, ಜಾಗೃತಿ, ಮತ್ತು ವೈಚಾರಿಕತೆ ಇವರ ರಚನೆಯಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ರಾಮನ್ ಸತ್ತ ಸುದ್ದಿ’. ಇದು ಕವಿ ಕೆ.ಎಸ್.ನಿಸಾರ್ ಅಹಮದ್ ಅವರ ಅತ್ಯಂತ ಪ್ರಸಿದ್ಧ ಕವನಗಳಲ್ಲೊಂದು. ತಾವು ಬರೆದ ಕವನಗಳ ಪೈಕಿ ತಮಗೆ ಎಲ್ಲಕ್ಕಿಂತ ಹೆಚ್ಚು ಇಷ್ಟವಾದ ಕವನ ಇದೆಂದು ಸ್ವಯಂ ನಿಸಾರರೇ ಹೇಳಿದ್ದಾರೆ. . ನಿತ್ಯೋತ್ಸವ ಕವಿಯೆಂದೇ ಮನೆಮಾತಾಗಿದ್ದ, ನಿಸಾರ್ ಅಹಮದ್ ಅವರು, ಸಾಹಿತ್ಯೋತ್ಸವ ನಿಲ್ಲಿಸಿದರು ಅನ್ನೋ ಸುದ್ದಿ ನಿಜಕ್ಕೂ ಆಘಾತಕಾರಿ ವಿಷಯ.ನಾಡು ನುಡಿಯ ಪ್ರಿಯರಾದ ನಿಸಾರ್ ಅಹಮದ್ ಎಂದರೆ ಎಲ್ಲರಿಗೂಅಚ್ಚುಮೆಚ್ಚು. ಅದ್ಬುತ ವ್ಯಕ್ತಿತ್ವದ ಅಪರೂಪದ ಕವಿ ಶ್ರೀ ನಿಸಾರ್ ಅಹಮದ್ ರವರು.ಅವರ ಅಗಲುವಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ . ನಿತ್ಯೋತ್ಸವದ ಕವಿಗೆ ಭಾವಪೂರ್ಣ ಶ್ರದ್ಧಾಂಜಲಿ ********** ಶೈಲಜ ಹಾಸನ

ನಿತ್ಯೋತ್ಸವದ ಕವಿಗೆ ನಮನ Read Post »

You cannot copy content of this page

Scroll to Top