ಡಾ.ಕಾತ್ಯಾಯಿನಿ ಕುಂಜಿಬೆಟ್ಟುಕವಿತೆಗಳು
ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಕವಿತೆಗಳು ಏಕಾಂತ ನೇಸರ ಮೋಡಗಳ ಹಾಸಿಗೆಯಿಂದ ಎದ್ದುಮೈಮುರಿಯುತ್ತಆಕಾಶದಗಲಕ್ಕೆ ಬಾಯಿ ಆಕಳಿಸುತ್ತಬೆಳಕು ಮೈಯಲ್ಲಿ ನಿಲ್ಲುತ್ತಾನೆತುಂಬಿದ ಬೆಳಕಿನ ಅಕ್ಷಯ ಕೊಡಅವನ ಕಾಯಬೆಳಕು ಹರಿಸುತ್ತಲೇ ಇರುತ್ತಾನೆಸಂಜೆಯವರೆಗೂ…ಮಾತಿಲ್ಲಬರೀ ಮೌನ! ಹೂವುಗಳು ಅರಳುತ್ತವೆಕೆಂಪು ನೀಲಿ ಹಳದಿತುಟಿ ಎಸಳುಗಳಲ್ಲಿ ಬೆಳಕು ಹೀರುತ್ತಮೌನವಾಗಿ ಕಂಪು ಬೀರುತ್ತಜೇನುಗಳು ಮಕರಂಧ ಹೀರಿ ಮಧು ಸಂಗ್ರಹಿಸುತ್ತವೆಮೌನವಾಗಿ ಬೀಜಗಳಲ್ಲಿ ಮೊಳಕೆಯ ತಲೆ ಬೆಳೆದುತೆನೆತೆನೆಗಳಲ್ಲಿ ಹಾಲು ಉಕ್ಕಿಸುತ್ತವೆಇರುವೆಗಳು ಸಾಲು ಸಾಲು ಸರದಿಯಲ್ಲಿಸೂರ್ಯನನ್ನೇ ಹೊತ್ತು ಸಾಗುತ್ತವೆಮೌನವಾಗಿ ಈ ಎರಡು ಕಾಲ ಜೀವಿಗಳಿಗೆ ಮಾತ್ರ ಬರಿದೇಮೂರು ಕಾಲಗಳ ಮಾತು ಮಾತು ಮಾತುಬಾಯಿ ಬ್ರಹ್ಮಾಂಡ!ಎಲ್ಲಿದೆ ಏಕಾಂತ?ಮಾರುದ್ದ ನಾಲಗೆ ಮೈತುಂಬಈ ಮಾತುಗಳ ಸಂತೆಯಲ್ಲಿಓಡಾಡುತ್ತಿವೆ ಒಡಕು ಕೊಡಗಳುಕತ್ತಲನ್ನೇ ಚೆಲ್ಲುತ್ತ! ಕಾಡುವ ಜೀರುಂಡೆಗಳುಜೀರ್ ಜೀರ್ ಜೀರ್ಕರಿಸುವಹರಿತವಾದ ತಂತಿಕೊರಳುಗಳುಕತ್ತಿ ಬಾಯ ಠೇಂಕಾರಓ..ವ್! ಜೀರ್ ಜೀರ್ ಜೀರ್ ಜೀರೋಗುಟ್ಟುತ್ತಚೀತ್ಕಾರವನ್ನೇಓಂಕಾರ ಎಂದುಕೊಳ್ಳುತ್ತಮೈ ಒಡೆದುಜೀವ ರುಂಡದಿಂದ ಬೇರಾಗಿ ಸಾಯುತ್ತವೆ.ಜೀರುಂಡೆ!ಜೀವರುಂಡೆ! ರುಂಡದಲ್ಲೇ ಜೀವ!ಜೀರ್ ಉಂಡೆ! ಜೀರಲ್ಲೇ ಜೀವದುಂಡೆ!ಛೆ! ಇಷ್ಟು ಚಿಕ್ಕ ಜೀವಗಳ ಒಳಗೆಎಲ್ಲಿಟ್ಟುಕೊಂಡಿದ್ದವೋ ಈ ಅಪಸ್ವರ! ಈ ಹಾಂಕಾರ ಹೂಂಕಾರ ಹೇಂಕಾರ!ಕಟ್ಟಕಡೆಗೆ ಅಹಂಕಾರದ ಅಹಂ ಒಡೆದು ಹಾಹಾಕಾರ!ಸಾವಿನ ಗುಮ್ಮನಲ್ಲೇ ಸಾಕ್ಷಾತ್ಕಾರ! ಹೌದು! ಏಕಾಂತದಲ್ಲಿ ನಿದ್ದೆಯಲ್ಲೇ ಮುಳುಗಿ ತೇಲಿಸಾಯಬೇಕು ಒಬ್ಬಳೇ!ಛೆ! ಎಲ್ಲಿ ನೋಡಿದರಲ್ಲಿಎಲುಬಿಲ್ಲದ ಹಾವು ನಾಲಗೆಯ ಹುತ್ತ ಬಾಯಿಗಳು!ಬಾವಿಯೊಳಗೆ ಬಾವಿ ಬಾವಿಯೊಳಗೊಳಗೆ ಬಾವಿ ಬಾವಿಬಾಯಿಯೊಳಗೇ ಹೂತು ಹೋದಕಾಯ ಕೊಡವ ಮೇಲಕ್ಕೆತ್ತುವವರಾರು?…ಚೆನ್ನಪ್ಪ ಚೆನ್ನೇಗೌಡ ಕುಂಬಾರ ಮಾಡಿದ ಕೊಡನವ್ವಾ!ಆ ಕುಂಬಾರ ಈ ಕೊಡಗಳಿಗೆಲ್ಲ ಕಿವಿಯಗಲ ದಳಬಾಯಿ ಇಟ್ಟ! ಹಹ್ಹ! ಮೊದಲು… ನನ್ನ ವಾಚಾಳಿ ಮನಸ್ಸಿನ ಹಳವಂಡದಹಂಡೆ ಬಾಯಿಗೊಂದು ಮುಚ್ಚಳ ಹುಡುಕಬೇಕು!ಮೌನಮುಚ್ಚಳ! ಅಂದುಕೊಂಡಿದ್ದೆ ಇವನುಟೊಂಗೆ ಟೊಂಗೆಗಳಲ್ಲಿ ಮೊಗ್ಗುಗಳಅದುಮಿಟ್ಟುಕೊಂಡ ಮಂದ್ರ ಮಾಮರಕೊರಳೊಳಗೆ ಸ್ವರಗಳನ್ನುಅದುಮಿಟ್ಟುಕೊಂಡ ಕೊಳಲುಅಂದುಕೊಂಡಿದ್ದೆ!ಋತುವಿನ ಕೈಹಿಡಿದಾಗ ಮೈತುಂಬಜೊಂಪೆ ಜೊಂಪೆ ಗೊಂಚಲು ಹೂಬಿಟ್ಟುಕೋಕಿಲದ ಕುಹೂ ಮೊಗೆಮೊಗೆದು ತುಂಬಿಮಿಡಿ ಕಾಯಿ ಹಣ್ಣು ರಸ ಬಾಳುಅಂದುಕೊಂಡೂ ಇದ್ದೆ! ನಾನೋ ಋತು!ಮಿಠಾಯಿ ಲಂಗಧಾವಣಿಕುಪ್ಪಸದಿಂದೆದ್ದ ಗುಲಾಬಿ ಯವ್ವನವುಮದರಂಗಿ ದುಪ್ಪಟ ಹೊದ್ದುಕಪ್ಪು ದ್ರಾಕ್ಷಿ ಕಂಗಳ ಕಣ್ಣಿಂದ ಉದುರಿದನಕ್ಷತ್ರಗಳನ್ನುಕನಸು ಮೈಯ ಜೋಳಿಗೆಯಲ್ಲಿ ತುಂಬಿಎದೆಯ ಬುಲ್ಬುಲ್ ದಿಲ್ತರಂಗವನ್ನುಒಳಗೊಳಗೇ ನುಡಿಸುತ್ತನನ್ನೆದೆಯ ಪುಟಗಳಲ್ಲಿ ಪಿಸುಗುಡುವಪ್ರೇಮಪಾದಗಳಿಗೆ ಗೆಜ್ಜೆಕಟ್ಟುತ್ತ ಮಳೆಬಿಲ್ಲಿನ ಅರ್ಧ ವೃತ್ತದಂತೆ ಮತ್ತೆ ಮತ್ತೆಅವನ ಹಿಂದೆ ಮುಂದೆ ಕುಣಿಯುತ್ತಲೇಬಣ್ಣಗಳ ಮಿಂಚುಗಳ ಮೈಯೊಳಗೇಜುಂಜುಂ ಜುಮುಗುಡುತ್ತಬಿಸಿಲು ಮಳೆಯಲಿ ಕ್ಷಣಗಣನೆ ಮಾಡುತ್ತಬಹುಕಾಲ… ಅಂದುಕೊಂಡಿದ್ದೆ …ಅಂದುಕೊಳ್ಳುತ್ತಲೇ ಇದ್ದೆ ಆದರೆ ಅವನು ಚಲಿಸಲೇ ಇಲ್ಲಸೋತು ಅವನೊಳಗೆ ಒಂದು ದಿನನಾನೇ ಪ್ರವೇಶಿಸಿದೆಪರಕಾಯ ಪ್ರವೇಶವಾಯಿತದುಅರಿತೆ…ಋತು ಋತುಗಳು ನನ್ನೊಳಗೆ ಪ್ರವೇಶಿಸಿಹೊರಹೊರಟರೂಅವನು ಹಾಗೆಯೇಹೂಬಿಡದ ಮಾಮರಉಲಿಯದ ಕೊಳಲುಭುಸುಗುಡುವ ನಾಗರ ಹಾವನ್ನುಎದೆಯೊಳಗೇ ಸುರುಳಿ ಸುತ್ತಿಟ್ಟುಕೊಂಡ ಹುತ್ತಬಿರುಸು ಬಾಣಗಳ ತೊಡದೆ ಬತ್ತಳಿಕೆಯಲ್ಲೇಮುಚ್ಚಿಟ್ಟುಕೊಂಡ ಯೋಧಅರಿತೆ… ಅರಿತವಳೇ ಅವನೊಳಗಿಂದ ಹೊರಬಂದೆನನ್ನೊಳಗಿಂದ ಅವನ ಹೊರದೂಡಿದೆ ಆ ಕ್ಷಣದಿಂದಕಂಗಳ ಬಿಲ್ಲಿನಲ್ಲೇ ಗುರಿಯಿಟ್ಟು ಎಸೆಯುತ್ತಿದ್ದಾನೆಹಿಂದೆ ನಾನಂದುಕೊಂಡಕೋಮಲವಾದ ಹೂವುಗಳನ್ನಲ್ಲಮೈತುಂಬ ಮುತ್ತಿಕ್ಕುತ್ತಿವೆ ಕೆಂಪು ಕೆಂಪು ಕೆಂಡಚೂಪು ತುಟಿಯಲ್ಲಿಕೆಂಡಸಂಪಗೆಯಲ್ಲಮೈ ನಿಗಿನಿಗಿ ಉರಿವ ಬೆಂಕಿಕೊಳ್ಳಿಮನಸ್ಸಿಗೆ ಬೆಂಕಿ ಹಿಡಿಯಿತು ಗಾಳಿಗೆ ತೆರೆದುಕೊಂಡಿತು ಹಾಳೆಯಂತೆ ಮನಬಹುಕಾಲದಿಂದ ಎಡೆಬಿಡದೆ ಬಚ್ಚಿಟ್ಟ ಪ್ರೇಮ ಕವನಗಳುಹತ್ತಿಕೊಂಡು ಧಗಧಗನೆ ಉರಿಉರಿದುಈಗಉಳಿದದ್ದು ಬರೇ ಬೂದಿ ನಾನೀಗಅನಂಗಿ!ನಿರಾತ್ಮ! ನೀರ ಗುಳ್ಳೆ ಬದುಕು ಪಾತ್ರೆಯೊಳಗಿನ ನೀರುನಾನೊಂದು ಹೊಳೆಯುವ ಗುಳ್ಳೆಗುಳ್ಳೆಯಾಗಿಯೇ ಉಳಿಯುವ ಹಾಗಿಲ್ಲಒಡೆದು ನೀರಾಗಲೇಬೇಕು! ಅವನ ನದಿಯಲ್ಲಿಕೋಟಿ ಮಿಲಿಯ ಲೆಕ್ಕವಿಲ್ಲದಷ್ಟುಗುಳ್ಳೆಗಳು ಗುಳುಗುಳು ಹುಟ್ಟಿಒಡೆಒಡೆದು ಒಂದಾಗುತ್ತಲೇ ಇವೆ ಕ್ಷಣಕ್ಷಣವೂನಾನೂ ಹಾಗಾಗಲೇಬೇಕು ಬೇಡವೆಂದರೂ ಬೇಕೆಂದರೂ…ನಶ್ವರವು ಶಾಶ್ವತದಲ್ಲಿ ಒಂದಾಗಲೇಬೇಕು! ನೀರ ಬೊಬ್ಬುಳಿಯಂತೆ ಸ್ಥಿರವಲ್ಲ ಈ ದೇಹಎಂದು ದಾಸರು ಹಾಡಿದ್ದುಹುಟ್ಟಿನ ಜಾತ್ರೆ ಸಾವಿನ ಯಾತ್ರೆಗಳನ್ನು ನೋಡಿಯೇಅವರ ಯಾತ್ರೆಯೂ ಮುಗಿದಾಗಿದೆ! ನನ್ನ ಉಸಿರು ಒಡೆದುಲೀನವಾಗಲಿ ಆ ಗಾಳಿಯಲಿಅಂದು ನನಗೆ ಸಾವುನಿನಗೆ ಬದುಕು ನಿನ್ನ ಸಾವಲ್ಲಿ ನಾನೂ ಸಾಯುತ್ತೇನೆ ನಿನಗೆ!ನಿನ್ನ ಬದುಕಲ್ಲಿ ನಾನೂ ಬದುಕುತ್ತೇನೆ ನನಗೆ!ನಾನು ಬದುಕಿರುವಾಗ ನನಗಿರುತ್ತಾನೆ ನನ್ನ ದೇವರು!ನನ್ನ ಸತ್ತಾಗ ನನ್ನೊಡನೇ ಸಾಯುತ್ತಾನೆ ನನ್ನ ದೇವರು!ಏಕಕಾಲದಲ್ಲೇ… ಬದುಕಿ ಉಳಿದವರಿಗೆಅವನೂ ಬದುಕಿರುತ್ತಾನೆಅವರು ಸತ್ತಾಗ ಅವರಿಗೆ ಇಲ್ಲವಾಗುತ್ತಾನೆನಾನು ಹುಟ್ಟುವಾಗ ಹೊತ್ತು ತರುವುದು ಅವನನ್ನು ಮಾತ್ರ!ಸಾಯುವಾಗ ಕೊಂಡೊಯ್ಯುವುದೂ ಅವನನ್ನು ಮಾತ್ರ! ಬದುಕು ಪಾತ್ರೆಯ ನೀರಲ್ಲಿಹೊಳೆಯುವ ಗುಳ್ಳೆಸೂರ್ಯ ನೆತ್ತಿಗೇರುತ್ತಬೆಳಕು ಬಿಸಿಲಾಗಿ ಬಿಸಿಗೆ ಒಡೆದು ಅಸ್ತಕಡಲ ಪಾತ್ರೆಯೊಳಗೆ ಒಡಲ ಯಾತ್ರೆ! ಕ್ಷಣ ಬಾಳಾದರೂಈ ಗುಳ್ಳೆಗೆ ಹೊಳೆಯುವ ತ್ರಾಣಬಂದುದಾದರೂ ಎಲ್ಲಿಂದ? ನಿನ್ನ ನುಡಿ ನೀನು ನುಡಿಯುವ ಪ್ರತಿಯೊಂದು ಪದವೂನನ್ನ ಇರವನ್ನೇ ಇರಿಯುತ್ತಿದೆಜೀವದ ಕಣಕಣದಲ್ಲುನೆತ್ತರಿನ ಹನಿ ಬಿಕ್ಕುತ್ತಿದೆ ನೀನು ನುಡಿಯುವ ಪ್ರತಿಯೊಂದು ಪದವೂಬೂಟುಪಾದಗಳಾಗಿ ನನ್ನ ತುಳಿಯುತ್ತಿವೆಮಾತು ಮಾತುಗಳೂಲಾಠಿ ಏಟುಗಳಾಗಿ ನನ್ನ ಅಳಿಸುತ್ತಿವೆನಿನ್ನ ದಿಟ್ಟಿಯ ಮೊನಚುಸೂಜಿಸೂಜಿಗಳಾಗಿನನ್ನ ಹೃದಯದ ಕಣ್ಣ ಚುಚ್ಚುತ್ತಿವೆ ನನ್ನ ಆಳಕೆ ನಾನೇ ಇಳಿದುಹುಡುಕುವಾಗ ನನ್ನದೇ ಕರಿಛಾಯೆಕುರಿಯಾಗಿ ಅಣಕಿಸುತ್ತಿದೆನನ್ನದೇ ನನ್ನದಲ್ಲವೇ?ಎಂಬ ಶೋಧದಲ್ಲೇ ಕ್ಷಣಗಳುಕೊಲೆಯಾಗುತ್ತಿವೆ ನೀನು ನನ್ನೆಡೆಗೆ ಬೆಟ್ಟು ತೋರಿದಾಗೆಲ್ಲಬೆಟ್ಟದಿಂದ ಶತಂಪಾತಾಳದಾಳಕ್ಕೆಯಾರೋ ದೂಡಿದಂತಾಗಿಹೊಟ್ಟೆಯಾಳದಲ್ಲಿ ತಳಮಳವಾಗಿಬೆಚ್ಚಿ ಬಿದ್ದಿದ್ದೇನೆಕೊಳದೊಳಗೆ ಕಲ್ಲೆಸೆದಂತೆಮನದ ತಿಳಿಕೊಳ ಕಲಡಿ ಹೋಗಿದೆ ನಿನ್ನ ತಕ್ಕಡಿಯಲ್ಲಿ ಕುಳಿತು ಕುಳಿತುಅವಮಾನಗಳಿಂದ ಮಾನದ ಬೆಲೆ ಕುಸಿದುಹೃದಯ ಭಾರವಾಗಿ ಬಿಟ್ಟಿದೆಅದಕೆ ಸರಿತೂಗುವ ಮಾಪನದ ಅಳತೆಗಲ್ಲುಇಲ್ಲವಾಗಿಬಿಟ್ಟಿದೆತುಳಸಿದಳವೊಂದು ಒಣಗಿಕೃಷ್ಣನ ಪಾದದಲ್ಲಿ ನನ್ನನ್ನೇ ನೋಡುತ್ತಿದೆಒಗ್ಗರಣೆಗೆ ಪರಿಮಳ ತಂದ ಕರಿಬೇವು ಎಲೆಯೊಂದುನಿನ್ನ ತಾತ್ಸಾರಕ್ಕೆತಟ್ಟೆಯ ಪಕ್ಕವೇ ಬಿದ್ದು ನರಳಿದೆಅವನ ನೀಲ ಎದೆಯಲ್ಲಿದ್ದರೂತುಳಸಿದಳವೊಂದುನನ್ನನ್ನೇ ನೋಡುತ್ತ ನಿಟ್ಟುಸಿರಲ್ಲಿಒಣಗುತ್ತಿದೆ! ಅಂತರಂಗದಲ್ಲಿ ಹಂತಕನೊಬ್ಬ ಅಕ್ರಮಮನೆಕಟ್ಟಿಕೊಂಡಿದ್ದಾನೆನನ್ನ ಕತ್ತನ್ನು ನಾನೇ ಕತ್ತರಿಸಿನಿತ್ಯ ಸಾಯುತ್ತಿದ್ದೇನೆಕ್ಷಣ ಕ್ಷಣದ ವಿಲಿವಿಲಿ ಯಾತನೆಯಲ್ಲೇರುಂಡವು ಗಡಿಯಾರವಾಗಿಕಣ್ಣು ಕಿವಿ ಮೂಗು ಮುಳ್ಳುಗಳಾಗಿನಾಲಗೆಯು ನಿನಗೀಗ ತಲೆಯಿಲ್ಲ!ಎಂದು ಕಿರುಚುತ್ತದೆಹೃದಯವು ಆಘಾತದಲ್ಲಿ ರಿಂಗಣಿಸಿದಾಗಧಿಡ್ಕ ಎದ್ದುಮುಂಡದ ಕತ್ತಿಗೆ ಜೋಡಿಸಲುತಲೆಯನ್ನು ಹುಡುಕತೊಡಗುತ್ತೇನೆ! ಹುಡುಕುತ್ತ ಹುಡುಕುತ್ತಲೇ ಸೋತುಇಂದುಜವಳಿ ಅಂಗಡಿಯತಲೆಯಿಲ್ಲದ ಗೊಂಬೆಯ ಬಳಿನಿಂತು ಗೊಂಬೆಯಾಗಿದ್ದೇನೆಹಳೆಯಂಗಿ ಕಳಚಿಹೊಸ ಅಂಗಿ ತೊಡಿಸಲಾಗಿದೆತಲೆಯಿಲ್ಲದ ಅಂಗಿಯೊಳಗೆತಲೆಯಿಲ್ಲದ ಮೈ! ಈಗ ಕಿವಿಯೇ ಇಲ್ಲ ನನಗೆ!ಆದರೂ…ನಿನ್ನ ನುಡಿ ಚೂಪು ಚೂರಿ! **************************************************************
ಡಾ.ಕಾತ್ಯಾಯಿನಿ ಕುಂಜಿಬೆಟ್ಟುಕವಿತೆಗಳು Read Post »




