ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಗಾಂಧಿ ವಿಶೇಷ

ಮಹಾತ್ಮಾ ಗಾಂಧೀಜಿ ಮತ್ತು ರಾಷ್ಟ್ರಧ್ವಜ

ಗಾಂಧಿ ವಿಶೇಷ ಮಹಾತ್ಮಾ ಗಾಂಧೀಜಿ ಮತ್ತು ರಾಷ್ಟ್ರಧ್ವಜ ಮೋಹನ್‌ದಾಸ್ ಕರಮಚಂದ ಗಾಂಧಿ ರಾಷ್ಟ್ರೀಯ  ಚಳುವಳಿಯ ನಾಯಕರಾಗಿ ಮಾನ್ಯತೆ ಪಡೆದಾಗ, ೧೯೧೬ರ ಸುಮಾರಿಗೆ ಆಂಧ್ರದ ಮುಸಲಿಪಟ್ಟಣಂನ ಪಿಂಗ್ಲೆ ವೆಂಕಯ್ಯ, ಗಾಂಧೀಜಿಯವರಲ್ಲಿ ತಮ್ಮ ಕಾರ್ಯದ ಬಗ್ಗೆ ಉತ್ಸಾಹ ಮೂಡಿಸಲು ಯತ್ನಿಸಿದರು ಹಾಗೂ ಒಂದು ವಿನ್ಯಾಸ ಸೂಚಿಸಿದರು. ಆದರೆ ಅದು ಗಾಂಧೀಜಿಯವರಿಗೆ ಇಷ್ಟವಾಗಲಿಲ್ಲ. ಅವರು ರಾಷ್ಟ್ರ ಧ್ವಜ ಹೊಂದುವ ಅಭಿಪ್ರಾಯಕ್ಕೆ ವಿರುದ್ಧವಾಗಿರಲಿಲ್ಲ. ಆದರೆ ಅವರಿಗೆ ವೆಂಕಯ್ಯನವರ ಧ್ವಜ ವಿನ್ಯಾಸದಲ್ಲಿ ಸಂಪೂರ್ಣ ದೇಶದ ಅಂತರಾತ್ಮ ಕಲಕುವ ವೈಶಿಷ್ಟ್ಯವೇನೂ ಕಾಣಲಿಲ್ಲ.             ಒಮ್ಮೆ ಗಾಂಧೀಜಿಯವರ ಜೊತೆ ಮಾತನಾಡುತ್ತಿದ್ದಾಗ, ಗುರುದಾಸ್‌ಪುರ್‌ನ ಲಾಲಾಹನ್ಸ್ ರಾಜ್‌ಸೋಂಧಿ ಅವರು ನಮ್ಮ ಸ್ವಾವಲಂಬನೆಯ ಪ್ರತೀಕವಾಗಿ, ಭಾರತದ ರಾಷ್ಟçಧ್ವಜದಲ್ಲಿ ಚರಕ ಇರಬೇಕೆಂದು ಸಲಹೆ ಮಾಡಿದರು. ಈ ಪ್ರಸ್ತಾವ ಗಾಂಧೀಜಿಯವರಿಗೆ ಬಹಳ ಇಷ್ಟವಾಯಿತು. ಗಾಂಧೀಜಿ ೧೯೨೧ರ ಏಪ್ರಿಲ್‌ನಲ್ಲಿ ವಿಜಯವಾಡದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಗೆ ವೆಂಕಯ್ಯ ಅವರನ್ನು ಕರೆಸಿ, ಹಿಂದೂ ಧರ್ಮವನ್ನು ಸಂಕೇತಿಸುವ ಕೇಸರಿ ಬಣ್ಣದಲ್ಲಿ ಚರಕವನ್ನು ಚಿತ್ರಿಸುವಂತೆಯೆ ಹಾಗೂ ಇಸ್ಲಾಂ ಧರ್ಮವನ್ನು ಸಂಕೇತಿಸುವ  ಹಸಿರು ಬಣ್ಣದ ಪಟ್ಟಿಯನ್ನೊಳಗೊಂಡ ರಾಷ್ಟ್ರೀಯ  ಧ್ವಜ ರಚಿಸಬೇಕೆಂದು ತಿಳಿಸಿದರು.             ಗಾಂಧೀಜಿಯವರ ಮುಂದೆ ಮೂರುತಾಸಿನೊಳಗೆ ವೆಂಕಯ್ಯ ಒಂದು ಧ್ವಜ ತಯಾರಿಸಿ ಇಟ್ಟರು. ಅದರಲ್ಲಿ ಕೇಸರಿ ಮತ್ತು ಹಸಿರಿನ ಎರಡು ಪಟ್ಟಿಗಳ ಮೇಲೆ ಸಮಾನವಾಗಿ ಮೂಡುವಂತೆ ದೊಡ್ಡ ಚರಕವಿತ್ತು. ಆದರೆ ಅದು ಗಾಂಧೀಜಿಯವರ ಕೈ ಸೇರುವಾಗ ಸ್ವಲ್ಪ ತಡವಾದುದರಿಂದ, ಅದನ್ನು ಕಾಂಗ್ರೆಸ್ ಸಮಿತಿಯ ಅನುಮೋದನೆಗಾಗಿ ಸಲ್ಲಿಸಲಾಗಲಿಲ್ಲ. ಆದರೆ ಅದರಿಂದ ಒಳ್ಳೆಯದೇ ಆಯಿತು. ದ್ವಿವರ್ಣದ ಧ್ವಜದಲ್ಲಿ ಇತರೆ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವ ಸಂಕೇತ ಇಲ್ಲದಿರುವುದು ಸಮಸ್ಯೆಗೀಡು ಮಾಡುತ್ತಿತ್ತು.             ಧ್ವಜವನ್ನು ಪಕ್ಷ ಪರಿಶೀಲಿಸಿದ ನಂತರ ಅದರಲ್ಲಿ ಹಿಂದು, ಮುಸ್ಲಿಂ ಮತ್ತು ಇತರ ಧರ್ಮಗಳನ್ನು ಪ್ರತಿನಿಧಿಸುವ ಮೂರು ವರ್ಣಗಳಿರಬೇಕೆಂದು ಗಾಂಧೀಜಿ ಕಂಡುಕೊಂಡರು. ಆದ್ದರಿಂದ ಧ್ವಜಕ್ಕಾಗಿ ಅವರು ಬಿಳಿ, ಹಸಿರು ಮತ್ತು ಕೇಸರಿ ಬಣ್ಣಗಳನ್ನು ಪರಿಗಣಿಸಿದ್ದರು.             ಭಾರತೀಯ ಧ್ವಜದ ಹಿಂದಿನ ತತ್ವವನ್ನು ಮತ್ತು ಅದರ ವಿನ್ಯಾಸವನ್ನು ಕಂಡುಕೊಂಡ ಮೇಲೆ, ಗಾಂಧೀಜಿಯವರು ಮತ್ತೆ ವೆಂಕಯ್ಯ ಅವರನ್ನು ಕರೆಸಿ, ಮುಂಚಿನ ಧ್ವಜದ ವಿನ್ಯಾಸದಲ್ಲಿ ಬಿಳಿ ಪಟ್ಟಿಯನ್ನು ಸೇರಿಸಿ ಧ್ವಜ ನಿರ್ಮಿಸುವಂತೆ ತಿಳಿಸಿದರು. ಧ್ವಜದಲ್ಲಿ ಮೇಲಿನಿಂದ ಅನುಕ್ರಮವಾಗಿ ಬಿಳಿ, ಹಸಿರು ಮತ್ತು ಕೇಸರಿ ಬಣ್ಣಗಳಿದ್ದು ಮೂರು ಪಟ್ಟೆಗಳ ಮೇಲೂ ಬರುವಂತೆ ಮಧ್ಯದಲ್ಲಿ ಚರಕವಿರಬೇಕೆಂದು ಅವರು ನಿರ್ದೇಶನವಿತ್ತರು. ಗಾಂಧೀಜಿಯವರ ಇಚ್ಛೆಯಂತೆಯೇ ವೆಂಕಯ್ಯನವರು ಒಟ್ಟು ೩೦ ದೇಶಗಳ ರಾಷ್ಟ್ರ ಧ್ವಜಗಳನ್ನು ೫ ವರ್ಷಗಳ ಕಾಲ ಅಭ್ಯಸಿಸಿ, ಕೊನೆಗೆ ತ್ಯಾಗ, ಶಾಂತಿ ಸಮೃದ್ಧಿಯ ಸಂಕೇತವಾದ ಕೇಸರಿ, ಬಿಳಿ, ಹಸಿರಿನ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದರು. ಈ ರೀತಿ ಅಖಿಲ ಭಾರತ ಕಾಂಗ್ರೆಸ್‌ನ ಪ್ರಥಮ ಧ್ವಜ ರೂಪುಗೊಂಡಿತು.             ಧ್ವಜದಲ್ಲಿ ಎಲ್ಲಾ ವರ್ಗಗಳ ಪ್ರಾತಿನಿಧ್ಯ ತೋರಿ, ಗಾಂಧೀಜಿ ವಿವಿಧ ಧರ್ಮಗಳ ನಡುವೆ ವಿಭಜನೆ ಉಂಟುಮಾಡಲಿಲ್ಲ. ಮೊದಲಬಾರಿಗೆ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಮುಸ್ಲಿಮರು ಮತ್ತು ಪಾರ್ಸಿಗಳೆನ್ನದೆ ಪ್ರಾಣತ್ಯಾಗ ಮಾಡಲು ಪ್ರೇರೇಪಿಸುವಂತಹ ಧ್ವಜವನ್ನು ಅವರು ನೀಡಿದರು. ಗಾಂಧೀಜಿಯವರೇ (ಎಂ.ಕೆ.ಗಾಂಧಿ, ಯಂಗ್ ಇಂಡಿಯಾ, ದಿ ನ್ಯಾಶನಲ್ ಫ್ಲಾಗ್, ೧೩ ಎಪ್ರಿಲ್ ,೧೯೨೧)  ಹೇಳಿದಂತೆ:             “ದೀರ್ಘವಾಗಿ ಪರಿಶೀಲನೆ ನಡೆಸಿದ ನಂತರ, ಹಿನ್ನೆಲೆಯಲ್ಲಿ ಇತರ ಧರ್ಮಗಳಿಗೂ ಪ್ರಾತಿನಿಧ್ಯ ಇರಬೇಕೆಂದು ನಾನು ಕಂಡುಕೊಂಡೆ. ಹಿಂದೂ, ಮುಸ್ಲಿಂ ಏಕತೆ ಕೇವಲ ಅವರಿಗೆ ಮಾತ್ರವಲ್ಲ. ಎಲ್ಲರಿಗೂ ಅನ್ವಯವಾಗುವಂತಹುದು. ಭಾರತದಲ್ಲಿ ವಾಸವಾಗುವ ಎಲ್ಲಾ ಧರ್ಮಗಳವರ ಏಕತೆಯ ಪ್ರತೀಕ ಹಿಂದೂ ಮತ್ತು ಮುಸ್ಲಿಂಮರು ಪರಸ್ಪರ ಸಹಿಷ್ಣುತೆ ತೋರಿದರೆ, ಅವರಿಬ್ಬರೂ ಇತರ ಧರ್ಮಗಳ ಬಗ್ಗೆಯೂ ಸಹಿಷ್ಣುತೆ ತೋರಬಹುದು. ಅವರ ಏಕತೆ ಭಾರತದಲ್ಲಿನ ಅಥವಾ ವಿಶ್ವದಲ್ಲಿನ ಇತರ ಧರ್ಮಗಳಿಗೆ ಭಾದಕವಾಗಲಾರದು. ಆದ್ದರಿಂದ ಧ್ವಜದ ಹಿನ್ನೆಲೆಯಲ್ಲಿ ಬಿಳಿ, ಹಸಿರು ಮತ್ತು ಕೇಸರಿ ಬಣ್ಣಗಳಿರಬೇಕೆಂದು ನನ್ನ ಅಭಿಪ್ರಾಯ.        ಬಣ್ಣಗಳನ್ನು ವ್ಯವಸ್ಥೆಗೊಳಿಸಿದ ಕ್ರಮವೂ ಅರ್ಥಪೂರ್ಣವಾಗಿತ್ತು. ಗಾಂಧೀಜಿ ಹೀಗೆ ಹೇಳಿದ್ದರು:             “ದುರ್ಬಲರು ಎಲ್ಲರಿಗಿಂತ ಮೇಲೆ ಇರುತ್ತಾರೆ. ನಂತರ ಮುಸ್ಲಿಮರು ಮತ್ತು ಕೊನೆಯಲ್ಲಿ ಹಿಂದುಗಳ ಬಣ್ಣ ಎಲ್ಲಕ್ಕಿಂತ ಶಕ್ತಿಶಾಲಿ ದುರ್ಬಲರಿಗೆ ಆಧಾರವಾಗಿ ಕೆಳಗಿರಬೇಕು”. ಪ್ರತಿಯೊಂದು ಬಣ್ಣದ ಪಟ್ಟಿಯ ಗಾತ್ರವೂ ಸಮಾನವಾಗಿತ್ತು. ಅದರ ಮಹತ್ವವೇನೆಂದರೆ :             “ದುರ್ಬಲರೂ ಅತ್ಯಂತ ಶಕ್ತಿಶಾಲಿಗಳೂ ಸಮಾನರೆಂದು ತೋರಿಸಲು ಎಲ್ಲಾ ವರ್ಣಗಳಿಗೂ ಸಮಾನ ಗಾತ್ರ ನೀಡಲಾಯಿತು.” ರಾಷ್ಟ್ರೀಯ  ಧ್ವಜದಲ್ಲಿ ಪೂರ್ಣ ಪ್ರಮಾಣದ ಚರಕ ಇರಬೇಕೆಂದು ನಿಗದಿಯಾಗಿತ್ತು.             ಗಾಂಧೀಜಿಯವರ ಧ್ವಜವನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯಲ್ಲಿ ಅಂಗೀಕರಿಸದಿದ್ದರೂ ಗಾಂಧೀಜಿಯವರು ಅದನ್ನು ಅನುಮೋದಿಸಿದ್ದರಿಂದ ಅದು ಎಲ್ಲರಿಗೂ ಒಪ್ಪಿಗೆಯಾಯಿತು. ಅದನ್ನು ಕಾಂಗ್ರೆಸ್‌ನ ಎಲ್ಲಾ ಸಮಾರಂಭಗಳಲ್ಲಿ ಹಾರಿಸಲಾಗುತ್ತಿತ್ತು. ಸಮಯ ಕಳೆದಂತೆ ಅದು ರಾಷ್ಟ್ರೀಯ  ಧ್ವಜವೆಂದು ಪ್ರಸಿದ್ಧವಾಯಿತು. ೧೯೨೧ ರಲ್ಲಿ ಅಹ್ಮದಾಬಾದಿನಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಮೊದಲಬಾರಿಗೆ ದೊಡ್ಡ ಗಾತ್ರದ ಈ ಚರಕ ಧ್ವಜದ ಆರೋಹಣೆ ನಡೆಯಿತು. ಆನಂತರ ಅದು, ಬೇರೆ ಯಾವುದೇ ಅಧಿಕೃತ ನಿರ್ಣಯವಿಲ್ಲದೇ ಭಾರತದ ರಾಷ್ಟ್ರೀಯ  ಧ್ವಜವೆಂದು ಮಾನ್ಯತೆ ಪಡೆಯಿತು. ೧೯೨೯ರ ಡಿಸೆಂಬರ್ ೩೧ ರಂದು ರಾವಿ ನದಿ ತಟದಲ್ಲಿ ನಡೆದ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ಮಧ್ಯರಾತ್ರಿ ಈ ಧ್ವಜದ ಆರೋಹಣೆ ನಡೆಯಿತು. ಈ ಅಧಿವೇಶನ ಪೂರ್ಣ ಸ್ವರಾಜ್ಯ ಕಾಂಗ್ರೆಸ್‌ನ ಗುರಿಯೆಂದು ಸಾರಿತು. ೨೬ ಜನವರಿ ೧೯೩೦ ರಂದು, ಇದೇ ಧ್ವಜದ ನೆರಳಿನಲ್ಲಿ ಸಾವಿರಗಟ್ಟಲೇ ಭಾರತೀಯರು ಪ್ರತಿಜ್ಞೆ ತೊಟ್ಟರು. ಅಸಹಕಾರ ಚಳುವಳಿಯೊಂದಿಗೆ ಚರಕಧ್ವಜ ನಿಧಾನವಾಗಿ ಜನಪ್ರಿಯವಾಯಿತು.             ೧೯೩೦ ರ ಮಾರ್ಚ್ ೧೨ ರಂದು ಗಾಂಧೀಜಿ, ಅಸಹಕಾರ ಚಳುವಳಿ ಆರಂಭಿಸಿದರು. ಅವರು ೭೮ ಅನುಯಾಯಿಗಳೊಂದಿಗೆ ಸಾಬರ್‌ಮತಿಯಿಂದ ಗುಜರಾತ್‌ನ ಕರಾವಳಿಯಲ್ಲಿರುವ ದಾಂಡಿ ಎಂಬ ಒಂದು ಹಳ್ಳಿಗೆ ಉಪ್ಪಿನ ಕಾಯ್ದೆ ಮುರಿಯಲು ಯಾತ್ರೆ ನಡೆಸಿದರು. ತಂಡ ೨೫ ದಿನಗಳಲ್ಲಿ ೨೦೦ ಮೈಲು ದೂರ ಕ್ರಮಿಸಿ, ಏಪ್ರಿಲ್ ೫, ೧೯೩೦ ರಂದು ದಾಂಡಿ ತಲುಪಿತು. ಏಪ್ರಿಲ್ ೬ ರಂದು ಉಪ್ಪಿನ ಕಾಯ್ದೆಗೆ ವಿರುದ್ಧವಾಗಿ ಉಪ್ಪು ತಯಾರಿಸಿದರು. ಗುಜರಾತ್‌ನ ಧರಸಾನದಲ್ಲಿರುವ, ಸರ್ಕಾರದ ಉಪ್ಪಿನ ಗೋದಾಮುಗಳ ಮೇಲೆ ದಾಳಿ ಮಾಡುವುದು ಅವರ ಮುಂದಿನ ಹೆಜ್ಜೆಯಾಗಿತ್ತು. ಆದರೆ ಅವರು ಈ ರೀತಿ ಮಾಡುವ ಮುಂಚೆಯೇ ಅವರನ್ನು ಸೆರೆ ಹಿಡಿಯಲಾಯಿತು.             ಅಗಷ್ಟ ೧೪ ರ ಮಧ್ಯರಾತ್ರಿ ಬ್ರಿಟಿಷ್ ಧ್ವಜ ಕೆಳಗಿಳಿಯುತ್ತಲೇ ಕೆಂಪುಕೋಟೆಯಲ್ಲಿ ಮೇಲೆರಿದ್ದು ಭಾರತದ ತ್ರಿವರ್ಣ ಧ್ವಜ. ಈ ಧ್ವಜ ಸ್ವಾತಂತ್ರö್ಯಕ್ಕೆ ಮುನ್ನ ಭಾರತೀಯ ರಾಷ್ಟಿçÃಯ ಚಳುವಳಿಯ ಅರ್ಥಾತ್ ಭಾರತೀಯ ರಾಷ್ಟ್ರೀಯ  ಕಾಂಗ್ರೆಸ್ಸಿನ ಧ್ವಜದ ಪರಿಷ್ಕೃತ ರೂಪ. ಮೂಲ ಧ್ವಜದಲ್ಲಿ ಆದ ಬಹುಮುಖ್ಯ ಪರಿಷ್ಕರಣೆ ಅಂದರೆ ಅದರ ಮಧ್ಯಭಾಗದಲ್ಲಿ ಅಶೋಕಚಕ್ರವನ್ನು ಸೇರಿಸಿದ್ದು. ಮೂಲ ಧ್ವಜದಲ್ಲಿ ಇದ್ದದ್ದು ಚರಕದ ಚಿತ್ರ. ಮಹಾತ್ಮ ಗಾಂಧಿ ಇಡೀ ರಾಷ್ಟ್ರೀಯ  ಚಳುವಳಿಯಲ್ಲಿ ಬಳಸಿದ ಬಹುಮುಖ್ಯ ದೇಶಿಯ ಸಂಕೇತವಾಗಿದ್ದು, ಚರಕವನ್ನು ರಾಷ್ಟ್ರಧ್ವಜದಲ್ಲಿ ಮುಂದುವರಿಸುವುದಕ್ಕೆ ಸಂವಿಧಾನ ಸಭೆಯಲ್ಲಿ ಹಲವಾರು ಸದಸ್ಯರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಅದಕ್ಕೆ ಒಂದು ಕಾರಣ-ರಾಜಕೀಯ ಪಕ್ಷದ ಧ್ವಜವನ್ನು ಇದ್ದಕ್ಕಿದ್ದ ಹಾಗೆ ರಾಷ್ಟ್ರ  ಧ್ವಜವನ್ನಾಗಿ ಒಪ್ಪಿಕೊಳ್ಳುವುದು ಸರಿಯಲ್ಲ ಎನ್ನುವುದು. ಅದಕ್ಕಿಂತಲೂ ಮುಖ್ಯವಾಗಿ ಅಂದಿನ ಕಾಂಗ್ರೆಸ್ಸಿಗರೂ ಸೇರಿದಂತೆ ಹಲವರಿಗೆ ಚರಕ ಪ್ರಾಚೀನತೆಯ, ಅವೈಜ್ಞಾನಿಕತೆಯ, ಸ್ತ್ರೀಯರ ಕೆಲಸದ ಸಂಕೇತವಾಗಿ ಕಂಡುಬಂದಿತು. ಸ್ವಾತಂತ್ರಕ್ಕೆ ಮೂಹೂರ್ತ ನಿರ್ಣಯವಾದ ವೇಳೆ ಮುನ್ನೆಲೆಗೆ ಬಂದ ವೈಜ್ಞಾನಿಕತೆಯ ಪ್ರಶ್ನೆ ಚರಕದ ವಿಷಯವಾಗಿ ಪ್ರಶ್ನೆಯೆತ್ತಿದ್ದು ಕುತೂಹಲದ ವಿಷಯ.             ಕೊನೆಗೆ ಸಾರಾನಾಥದಲ್ಲಿ ಅಶೋಕ ಸ್ತಂಭದಲ್ಲಿ ಕೆತ್ತಲಾದ ಚಕ್ರವರ್ತಿ ಅಶೋಕನ ಧರ್ಮಚಕ್ರವನ್ನೇ ಧ್ವಜದಲ್ಲಿ ಸೇರಿಸುವುದು ಎಂದು ಸಂವಿಧಾನ ಸಭೆ ೧೯೪೭ ರ ಜುಲೈ ೨೨ ರಂದು ನಿರ್ಣಯಿಸುತ್ತದೆ.  ರಾಷ್ಟ್ರ ಧ್ವಜದ ಕುರಿತು ಒಂದೆರಡು ವಿಷಯ ಪಂಡಿತ ಜವಾಹರಲಾಲ್ ನೆಹರು ಹೇಳ ಬಯಸುತ್ತಾರೆ: “ನಾವು ಕಳೆದ ಕೆಲವು ವರ್ಷಗಳಲ್ಲಿ ಬಳಸಿದ ಧ್ವಜದಲ್ಲಿ ಮತ್ತು ಇದರಲ್ಲಿ ಕೆಲವು ವ್ಯತ್ಯಾಸಗಳಿರುವುದನ್ನು ನೀವು ಕಾಣಬಹುದು. ಬಣ್ಣಗಳು ಅವೇ ಕಡು ಕೇಸರಿ, ಬಿಳಿ ಮತ್ತು ಕಡು ಹಸಿರು. ಬಿಳಿಯ ಬಣ್ಣದಲ್ಲಿ ಹಿಂದೆ ಭಾರತದ ಜನಸಾಮಾನ್ಯನ ಪ್ರತೀಕವಾದ ಅವರ ಪರಿಶ್ರಮದ ಪ್ರತೀಕವಾದ ಮತ್ತು ಗಾಂಧೀಜಿಯವರು ನಮಗೆ ಸಂದೇಶದ ಮೂಲಕ ತಿಳಿಸಿದ ಚರಕವೊಂದಿತ್ತು. ಈಗಿನ ಧ್ವಜದಲ್ಲಿ ಈ ಚರಕದ ಲಾಂಛನವನ್ನು ಸ್ವಲ್ಪ ಬದಲಾಯಿಸಲಾಗಿದೆ. ಸಂಪೂರ್ಣ ತೆಗೆದಿಲ್ಲ. ಅದನ್ನು ಏಕೆ ಬದಲಾಯಿಸಲಾಗಿದೆ? ಸಾಧಾರಣವಾಗಿ ಧ್ವಜದ ಒಂದು ಬದಿಯಲ್ಲಿ ಇರುವ ವಿನ್ಯಾಸವೇ ಇನ್ನೊಂದು ಬದಿಯಲ್ಲೂ ಇರಬೇಕು. ಇಲ್ಲವಾದರೆ ಅದು ಪರಂಪರೆಗೆ ವಿರುದ್ಧವಾಗುತ್ತದೆ. ಧ್ವಜದ ಮೇಲಿರುವ ಚರಕದ  ಎರಡು ತುದಿಗಳು, ಇಬ್ಬದಿಗಳಲ್ಲಿ ಬೇರೆ ಬೇರೆಯಾಗಿ ಕಾಣುತ್ತವೆ. ಇದು ಒಂದು ಸಮಸ್ಯೆಯಾಗಿತ್ತು. ಆದ್ದರಿಂದ ಬಹಳಷ್ಟು ಗಹನವಾಗಿ ಪರಿಶೀಲಿಸಿದ ನಂತರ, ಜನಸಾಮಾನ್ಯನ ಭಾವನೆಗಳನ್ನು ಬಿಂಬಿಸುವ ಈ ಲಾಂಛನದಲ್ಲಿ ಬದಲಾವಣೆ ಮಾಡಬೇಕಾಯಿತು. ಅದರ ಚಕ್ರ ಮುಖ್ಯ ಭಾಗವನ್ನು ಉಳಿಸಿಕೊಂಡು, ಇತರ ಭಾಗವನ್ನು ತ್ಯಜಿಸಬೇಕಾಯಿತು. ಚರಕದ ಮುಖ್ಯ ಭಾಗವಾದ ಚಕ್ರ ಇರಿಸಿಕೊಂಡೆವು. ಈ ರೀತಿ ಚರಕದ ಪರಂಪರೆಯನ್ನು ಚಕ್ರವನ್ನು ಉಳಿಸಿಕೊಳ್ಳಲಾಯಿತ…”             ಈ ವಿಷಯ ಗಾಂಧೀಜಿ ಗಮನಕ್ಕೆ ಬರುತ್ತಲೇ ಅವರಿಗೆ ಅಸಮಾಧಾನ ಉಂಟಾಗುತ್ತದೆ. `ಚರಕವಿಲ್ಲದ ಧ್ವಜಕ್ಕೆ ನಾನು ವಂದಿಸಲಾರೆ’ ಎನ್ನುತ್ತಾರೆ. ಚರಕ ಅವರ ಪಾಲಿಗೆ ಬರೀ ನೂಲುವ ಸಾಧನವಾಗಿರಲಿಲ್ಲ. ಅವರ ಕಲ್ಪನೆಯ ಭಾರತದ ಅಸದೃಶ ಸಂಕೇತವಾಗಿತ್ತು. ಗಾಂಧೀಜಿಯನ್ನು ಸಮಾಧಾನಪಡಿಸಲು ನೆಹರೂ ಯತ್ನಿಸುತ್ತಾರೆ. ಚರಕದ ಚಕ್ರವೂ ಚಕ್ರ, ಅಶೋಕಚಕ್ರವೂ ಚಕ್ರ. ಈ ಚಕ್ರವನ್ನು ಚರಕದ ಚಕ್ರ ಅಂತಲೇ ತಾವು ಭಾವಿಸಬೇಕು ಎಂದು ಗಾಂಧೀಜಿಯವರಲ್ಲಿ ಕೇಳಿಕೊಳ್ಳುತ್ತಾರೆ. ಇದನ್ನು ಮನಸ್ಸಿಲ್ಲದೆ ಗಾಂಧೀಜಿ ಒಪ್ಪಿಕೊಳ್ಳುತ್ತಾರೆ. ಧ್ವಜದ ವಿಷಯದಲ್ಲಿ ವಾದಿಸುವ ಸಮಯ ಅದಾಗಿರಲಿಲ್ಲ. ವಿಭಜನೆಯ ಕಾರ್ಮೋಡ ದೇಶವನ್ನು ಮತ್ತು ಅವರ ಮನಸ್ಸನ್ನು ಆವರಿಸಿತ್ತು. ಎಲ್ಲೆಡೆ ರಕ್ತ ಹರಿಯುತ್ತಿತ್ತು.             ಮುಂದಿನ ದಿನಗಳಲ್ಲಿ ಧ್ವಜ ವಿನ್ಯಾಸದ ಕುರಿತಾದ ತನ್ನ ಬಿಗಿನಿಲುವನ್ನು ಗಾಂಧೀಜಿ ಸಡಿಲಿಸುತ್ತಾರೆ. ೧೯೪೭ ರ ಅಗಸ್ಟ್ ೩ ರಂದು `ಹರಿಜನ ಬಂಧು’ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಗಾಂಧೀಜಿ ಧ್ವಜದ ಕುರಿತು ಹೀಗೆ ಬರೆಯುತ್ತಾರೆ. “… ಧ್ವಜದ ನಡುವಣ ಆ ಚಕ್ರವನ್ನು ನೋಡಿ ಕೆಲವರಾದರೂ ಅಶೋಕ ಚಕ್ರವರ್ತಿ ಅಧಿಕಾರ ತ್ಯಜಿಸಿ ಶಾಂತಿ ದೂತನಾದದ್ದನ್ನು ನೆನಪಿಸಿಕೊಳ್ಳಬಹುದು.  ಕೆಲವರಾದರೂ ಅಶೋಕನ ದಯಾಮಯ ಹೃದಯವನ್ನು ನೆನಪಿಸಿಕೊಳ್ಳಬಹುದು. ಆ ಚಕ್ರದಲ್ಲಿ ಚರಕವನ್ನು ಕಾಣುತ್ತಿದ್ದರೆ ಚರಕದ ಮಹಿಮೆ ಇನ್ನೂ ಒಂದು ತೂಕ ಹೆಚ್ಚಿಗೆ ಅಂತ ನಾನು ಭಾವಿಸುತ್ತೇನೆ.”             ಆದರೆ ಧ್ವಜಕ್ಕೆ ವಂದಿಸುವ ವಿಷಯದಲ್ಲಿ ಗಾಂಧೀಜಿ ಬಯಸಿದಂತೆಯೇ ಆಯಿತು. ಕೆಂಪುಕೋಟೆಯಲ್ಲಿ ಮೇಲೇರಿದ ತ್ರಿವರ್ಣ ಪತಾಕೆಗೆ ಧ್ವಜವಂದನೆ ಮಾಡುವ ಪ್ರಮೇಯ ಅವರಿಗೆ ಬರಲಿಲ್ಲ. ಆ ರಾತ್ರಿ ಅವರು ಕಲ್ಕತ್ತದಲ್ಲಿದ್ದರು. `ಇಡೀ ಜಗತ್ತು ಮಲಗಿ ನಿದ್ರಿಸುತ್ತಿರುವ ಈ ಹೊತ್ತು ಭಾರತದ ಜೀವಸ್ವಾತಂತ್ರ್ಯ ಎಚ್ಚೆತ್ತುಕೊಳ್ಳುತ್ತಿದೆ’ ಎಂದು ಧ್ವಜಾರೋಹಣ ಸಂದರ್ಭದಲ್ಲಿ ಮಾಡಿದ ಐತಿಹಾಸಿಕ ಭಾಷಣದಲ್ಲಿ ನೆಹರೂ ಭಾವಾವೇಶದಿಂದ ಹೇಳುತ್ತಾರೆ. ಆದರೆ ಅಷ್ಟೊತ್ತಿಗೆ ಜಗತ್ತು ಮಲಗಿರುವುದಿಲ್ಲ. ನಿಜಕ್ಕೂ ಆ ಹೊತ್ತಿಗೆ ಮಲಗಿ ನಿದ್ರಿಸುತ್ತಿದ್ದದ್ದು ಭಾರತ. ಸ್ವಾತಂತ್ರಕ್ಕಾಗಿ ಹೋರಾಡಿ ದಣಿದ ದೇಶ ಬಾಂಧವರು ಲಕ್ಷ ಲಕ್ಷ ಹಳ್ಳಿಗಳಲ್ಲಿ ಗಾಢ ನಿದ್ದೆಯಲ್ಲಿದ್ದಾಗ ನಾಯಕರ ಗಣ ದೆಹಲಿಯಲ್ಲಿ ಸ್ವಾತಂತ್ರ್ಯ ಆಚರಿಸಿತು. ದೇಶದ ಜನರೊಂದಿಗೆ ಗಾಂಧೀಜಿ ಕೂಡಾ ಮಲಗಿ ನಿದ್ರಿಸುತ್ತಿದ್ದರು.             ಆ ಚಾರಿತ್ರಿಕ ರಾತ್ರಿ ಗಾಂಧೀಜಿ ಮಾಮೂಲಿಗಿಂತ ಒಂದು ತಾಸು ಮುಂಚಿತವಾಗಿ ಅಂದರೆ ರಾತ್ರಿ ಸುಮಾರು ಎರಡು ಗಂಟೆಗೆ ಎದ್ದೇಳುತ್ತಾರೆ. ಅದೇನು ಕಾಕತಾಳಿಯವೋ ಸ್ವಾತಂತ್ರದ ಅದೇ ದಿನ ಗಾಂಧೀಜಿ ಪಾಲಿಗೆ ತನ್ನ ಪರಮಾಪ್ತರೊಬ್ಬರನ್ನು ಕಳೆದುಕೊಂಡ ದಿನವೂ ಆಗಿತ್ತು. ಬಹುಕಾಲ ಗಾಂಧಿಯವರ ಕಾರ್ಯದರ್ಶಿ ಮತ್ತು

ಮಹಾತ್ಮಾ ಗಾಂಧೀಜಿ ಮತ್ತು ರಾಷ್ಟ್ರಧ್ವಜ Read Post »

ಇತರೆ, ಗಾಂಧಿ ವಿಶೇಷ

ಗಾಂಧಿ ಮತ್ತಷ್ಟು ಕಾಲ ಇರಬೇಕಿತ್ತು

ಗಾಂಧಿ ವಿಶೇಷ ಗಾಂಧಿ ಮತ್ತಷ್ಟು ಕಾಲ  ಇರಬೇಕಿತ್ತು ಬುದ್ಧ , ಬಸವ ಗಾಂಧಿ ಎಮದು ಮಹಾತ್ಮರ ಸಾಲಿಗೆ ಸೇರಿರುವ ನಮ್ಮ ನಾಯಕರು  ನಿತ್ಯವೂ ನೆನಪಾಗುತ್ತಾರೆಯೇ? ಖಂಡಿತಾ ಇಲ್ಲ! ಕೆಲವರಿಗೆ ಮಾತ್ರನೆನಪಾಗುತ್ತಾರೆ.ಆದರೆ ಎಲ್ಲರಿಗೂ ನೆನಪಾಗುವುದು ಅವರ ಜನ್ಮದಿನಗಳಂದು ಮಾತ್ರ.  ಇದೊಂದು ಅಪಸವ್ಯ ಕಾರಣ ನಮ್ಮಲ್ಲಿ ಮಹಾತ್ಮರ ಜಯಂತಿಗೆ ಸರ್ಕಾರಿ ರಜೆಗಳಿವೆ.  ಮಹಾತ್ಮರ ಸಾಲಿಗೆ ಸೇರಿರುವ ಗಾಂಧಿ ಸ್ವಾತಂತ್ರ್ಯ ಬಂದು ಕೆಲವೇ  ದಿನಗಳಲ್ಲಿ ಇಲ್ಲವಾದರು. ಛೇ! ಹೀಗಾಗಬಾರದಿತ್ತು ಇನ್ನೂ ಇರಬೇಕಿತ್ತು ಅಲ್ವೇ! ಜಗತ್ತಿನಲ್ಲಿ ಕಾಲಕಾಲಕ್ಕೆ ಜಗದ ಕೊಳೆ ತೆಗೆಯಲು ಮಹಾನ್ ಪುರುಷರ ಅವತಾರವಾಗಿದೆ. ಅವರು ಇರುವಷ್ಟು ಕಾಲ ಜಗತ್ತಿನಲ್ಲಿ ಕ್ರಾಂತಿಯೋಪಾದಿಯಲ್ಲಿ ಬದಲಾವಣೆಗಳಾಗುತ್ತಿರುತ್ತವೆ.  ಅವರು ಅಳಿದ ನಂತರ ಕ್ರಾಂತಿಯ ಗತಿ ಅಧೋಗತಿಯೇ ಸರಿ!  ಗುಜರಾತ್ನ ಪೋರ್ಬಂದರ್ನಲ್ಲಿ ಅಕ್ಟೋಬರ್ 2,1869 ರಲ್ಲಿ ಜನಿಸಿದ  ಮೋಹನ್ ದಾಸ್ ಕರಮ್ಚಂಧ್ ಗಾಂಧಿ ಪೋರ್ಬಂದರಿನ ದಿವಾನರಾಗಿರುತ್ತಾರೆ.  ತಾಯಿ ಪುಥಲೀಬಾಯಿ ಧಾರ್ಮಿಕ ಚಿಂತನೆಯನ್ನು ಗಾಂಧಿಯಲ್ಲಿ ಮೂಡಿಸಿರುತ್ತಾರೆ.ನಮಗೆ ಸ್ವರಾಜ್ಯ, ಸ್ವಾತಂತ್ರ್ಯ ಬೇಕಾಗಿತ್ತು  ಹಿರಿಯರ ಪರಿಶ್ರಮದಿಂದ ಅದು ಸಿಕ್ಕಿದೆ..ಆಂಗ್ಲರ ಹೊಡೆತ, ಜೈಲು,ಕಿರುಕುಳಸಹಿಸಿದವರು ನಮಗೆ ಸ್ವಾತಂತ್ರ್ಯ ಎಂಬ ಸಿಹಿಯನ್ನು ಬಿಟ್ಟು ಹೋಗಿದ್ದಾರೆ.ಸ್ವಾತಂತ್ರ್ಯ ದೊರಕಿಸಿಕೊಳ್ಳುವುದು ಸುಲಭವಲ್ಲ. ಆ ಸ್ವಾತಂತ್ರ್ವನ್ನು ನಿಭಾಯಿಸುವುದು  ನಿಜವಾದ ಜವಾಬ್ದಾರಿ ಅಲ್ಲವೇ? ಸ್ವಾತ್ಂತ್ರ್ಯ ಪೂರ್ವದಲ್ಲಿ ನಮ್ಮಲ್ಲಿದ್ದ ಒಗ್ಗಟ್ಟು ಇಂದು ನಮ್ಮಲ್ಲಿ ಇಲ್ಲವಾಗಿದೆ. ನಾವಿಕನಿಲ್ಲದ ಹಡಗು ಹೇಗೆ ಬಿರುಗಾಳಿಗೆ ತೊನೆದಾಡುತ್ತದೆಯೋ ಹಾಗೆ ದಕ್ಷ ನಾಯಕನಿಲ್ಲದ ದೇಶ ಕೂಡ ಹಾಗೆ ಹೊಯ್ದಾಡುತ್ತದೆ. ಅರಾಜಕತೆ, ಅನಿಶ್ಚಿತತೆ ಅಸಹಿಷ್ಣುತೆಗಳಂಥ ಬಿರುಗಾಳಿಗೆ ನಮ್ಮ ದೇಶ ಸಿಲುಕಿದೆ. ಹಾಗಾಗಿ ಯುವಜನತೆಗೆ ಮಾರ್ಗದರ್ಶನ  ಮಾಡುವಂಥ ನಾಯಕರ ಅವಶ್ಯಕತೆ ಇದೆ. ಅಹಿಂಸೆ, ಸತ್ಯಾಗ್ರಹ, ಸ್ವದೇಶಿ ಅಸಹಕಾರ, ಗ್ರಾಮ  ರಾಜ್ಯ, ಹರಿಜನೋದ್ಧಾರ ಇತ್ಯಾದಿ ಪದಗಳು ಗಾಂಧೀಯಿಂದಲೆ ಹುಟ್ಟಿಕೊಂಡವು. ಉದನ್ನೆ “ಗಾಂಧಿಗಿರಿ’’ ಎಂದು ಕರೆಯುವುದು. ಆದರೆ ಗಾಂಧಿ ಪದವೇ ವ್ಯಂಗ್ಯಕ್ಕೆ   ಪರ್ಯಾಯವಾಗಿ ಬಳಕೆಯಾಗುತ್ತಿದೆ.  ಯಾವ  ಊರಿನಲ್ಲಿ ನೋಡಿದರೂ ಗಾಂದಿ ವೃತ್ತಗಳು ಇರುತ್ತವೆ. ಗಾಂಧಿ ಬಜಾರ್ ಹೆಸರಿನ ವಾಣಿಜ್ಯ ಕೇಂದ್ರಗಳನ್ನು ಕಾಣಬಹುದು.ಎಂ.ಜಿ ರಸ್ತೆಗಳನ್ನು ಕಾಣಬಹುದು. ಆದರೆ ಆ ರಸ್ತೆ ಗಾಂಧಿಯ ತತ್ವಗಲಿಗೆ ಬಹುಪಾಲು  ಇರುತ್ತದೆ. ಗಾಂಧಿನಗರ ಎಂಬ ಜನವಸತಿ ಪ್ರದೇಶಗಳನ್ನೂ ಕಾಣಬಹುದು. ಆದರೆ ಅವೆಲ್ಲ ಹೆಸರಿಗಷ್ಟೇ. ಅವರ ಆದರ್ಶಗಳನ್ನು ಸ್ವೀಕರಿಸುವುದಿರಲಿ, ಅಲ್ಲ್ಲಲ್ಲಿ ಹಾಕಿದ ಅವರ ಫೊಟೋಗಳಿಗೂ ಅವಮಾನ ಮಾಡುತ್ತೇವೆ. ಯಾವಾಗಲೋ ಹಾಕಿದ ಹೂವಿನ ಹಾರ ಬಾಡಿ ಹೂವಿನ ಎಸಳುಗಳೆಲ್ಲಾ ಉದುರಿ ಕೇವಲ ದಾರ ಮಾತ್ರ ನೇತಾಡುತ್ತಿರುತ್ತದೆ.  ಅದನ್ನೇ ನೋಡಿಕೊಂಡು ನಾವುಗಳು  ಓಡಾಡುವುದು. ಇನ್ನು ಕೆಲವು ತಿಳಿಗೇಡಿಗಳು ಮೂಲ ಫೊಟೊವನ್ನೇ ವಿಕಾರ ಮಾಡಿರುತ್ತಾರೆ.  ದೇಶದ ಬಗ್ಗೆ ಗಾಂಧಿಗಿದ್ದ ಕನಸು, ನಂಬಿಕೆ ಭವಿಷ್ಯದ ಬಾಳ್ನೋಟ ನಮ್ಮಲ್ಲಿ   ಈಗ ಇಲ್ಲ. ಮೃಗಿಯ ನಡೆವಳಿಕೆಗಳೇ ವೈಭವಿಕರಣಗೊಂಡಿವೆ. ಉಪಕಾರ ಮಾಡುವವರಿಗೆ ಉಪದ್ರವ  ಕೊಡುವ ಜನ ನಾವು. ಗಾಂಧಿಯ ಕನಸುಗಳು  ಸಾಕಾರಗೊಳ್ಳಬೇಕಾದರೆ ಅವರ ತತ್ವಗಳೇ ಕಾನೂನುಗಳಾಗಬೇಕಿದೆ. ಗಾಂಧಿಗೆ  ನಾವು ಕೊಟ್ಟಿರುವ ಗೌರವೆಂದರೆ  ಬರಿ ಹೆಸರಿನ ಕಡೆಗೆ”ಜಿ”(ಗಾಂಧೀಜಿ) ಎಂಬ ಗೌರವ ಸಂಭೋಧನೆಯಷ್ಟೇ, ನೋಟುಗಳಲ್ಲಿ ಅವರ ನಗುವಿನ ಚಿತ್ರವನ್ನು ಮತ್ತು ಸ್ವಚ್ಛ ಭಾರತ ಅಭಿಯಾನಕ್ಕೆ ಸಂಖೇತವಾಗಿ ಅವರು ಧರಿಸುತ್ತಿದಸ್ದ ಉರುಟು ಕನ್ನಡಕದ ಮಾದರಿಯನ್ನು ಅಚ್ಚು ಹಾಕಿದ್ದೇವೆ ಅಷ್ಟೇ.   ರಾಷ್ಟ್ರೀಯ ನಾಯಕರ ಪಟ್ಟಿಯನ್ನು ಮಕ್ಕಳಿಗೆ ಹೇಳಿಕೊಡುವಾಗ ಗಾಂಧೀಜಿ”ಫಾದರ್ ಆಫ್ ನೇಷನ್” ಎಮದು ಹೇಳಿಕೊಟ್ಟು, ಫೊಟೊ ತರಿಸಿ ತೋರಿಸಿ ಸುಮ್ಮನಾಗುತ್ತೇವೆ.. ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ದಲಿ ಗಾಂಧಿವೇಷಧಾರಿಗಳು ಬಣ್ನ ಹಾಕಿಕೊಂಡು ಮೆರವಣಭಿಗೆಯಲ್ಲಿ ಮುನ್ನಡೆಯುತ್ತಾರೆ. ಗಾಂಧಿ ತತ್ವ, GANDHISM ಎಂದು ದೊಡ್ಡದಾಗಿ ಕೊಚ್ಚಿಕೊಳ್ಲುವ ನಮಗೆ ಇಷ್ಟು ಸಾಕೇ/  ನಮ್ಮ ಸರ್ಕಾರಿ ಗಾಂಧಿ ಜಯಂತಿಯಂದು ಹಿಂಸಾಚಾರ ಬೇಡ ಎಂದು ಮಾಂಸ, ಮದ್ಯಮಾರಾಟ ನಿಷೇಧ  ಮಾಡಿ ಫರ್ಮಾನು ಹೊರಡಿಸುತ್ತದೆ. ಆ ಒಂದು ದಿನಕ್ಕೆ ಮಾತ್ರ  ಈ ಕಾನೂನು ಸಾಕೆ? ಗಾಂಧೀಜಿಯ ಆಶ್ರಮದಲ್ಲಿದ್ದ ಮೂರು ಕೋತಿಗಳ ಕತೆ ಗೊತ್ತಿರುವಂಥದ್ದೆ.  ಆ ಮೂರೂ ಗೊಂಬೆಗಳನ್ನು ತಂದು ಶೋಕೇಸ್ನಲ್ಲಿ ಇಟ್ಟುಕೊಂಡು ಧೂಳೂ ತೆಗೆಯುತ್ತೇವೆಯೇ ವಿನಃ ಗೊಂಬೆಗಳು ಬಿಂಬಿಸುವ ಆಶಯಗಳನ್ನು ಖಂಡಿತಾ ಪಾಲನೆ ಮಾಡುವುದಿಲ್ಲ. “ಹೇರಾಮ್” ಎಂಬ ಶಬ್ದ “ವೈಷ್ಣವೋ ಜನತೊ”ಗೀ ತೆ ಕೇವಲ ಆಚರಣೆಯ ಒಂದು ಭಾಗವೇ. ಗಾಂಧಿ ಜಯಂತಿಯಂದು  ಸರ್ವಧರ್ಮ ಸಮ್ಮೇಳನ ಮಾಡುತ್ತೇವೆ. ಅಕ್ಷರಶಃ ಆಚರಣೆಯಲ್ಲಿ ಯವ್ಯಾವುದೂ ಇರುವುದಿಲ್ಲ.  ಗಾಂದೀಜಿಯನ್ನು ಸಬರಮತಿ ಆಶ್ರಮದಲ್ಲಿ ಯಾರೋ ಭೇಟಿಯಾಗಬೇಕೆಂದು ಬೆಳಗ್ಗೆ 5.30ಕ್ಕೆ ಸಮಯ ನಿಗದಿ ಮಾಡಿಕೊಂಡು ಅದೇ ಸಮಯಕ್ಕೆ ಬರುತ್ತಾರೆ. ಅಲ್ಲೆ ಕಸ ತೆಗೆಯುತ್ತಿದ್ದವರನ್ನು ಗಾಂಧಿ ಯಾವಾಗ ಬರುತ್ತಾರೆ ಎಂದು ಕೇಳುತ್ತಾನೆ. ಇನ್ನು ಸ್ವಲ್ಪ ಹೊತ್ತಿನಲ್ಲಿ ಬರುತ್ತಾರೆ ಎಂಬ ಉತ್ತರ ಸಿಗುತ್ತದೆ.  ಭೇಟಿಗೆಂದು ತೆರಳಿದ ವ್ಯಕ್ತಿಗೆ ಇಷ್ಟು ಹೊತ್ತಾದರೂ ಗಾಂಧಿ ಬರಲಿಲ್ಲವಲ್ಲ ಹೇಳೋಕೆ ಅಷ್ಟು ದೊಡ್ಡ ವ್ಯಕ್ತಿ   ಹೀಗೆ  ತಡಮಾಡುವುದೇ ಎಂದು ತಿಳಿಯುತ್ತಿರಬೇಕಾದರೆ ಎಲ್ಲಾ ಕೆಲಸ ಮುಗಿಸಿ ಬಂದ ಗಾಂಧಿ  ನಾನೆ ಏನಾಗಬೇಕೆಂದು ಕೇಳುತ್ತಾರೆ. ಆಗ ಸಮಯ ನಿಗದಿ ಮಾಡಿಕೊಂಡು ಹೋಗಿದ್ದ ವ್ಯಕ್ತಿಗೆ ದಿಗ್ಭ್ರಮೆಯಾಗುತ್ತದೆ. ಇಂತಹ ಸರಳತೆ ಮಾಹಾತ್ಮರಿಗೆ ಮಾತ್ರ ಬರುತ್ತದೆ.  ಇಂತಹ ಸರಳತೆ ಮಹಾತ್ಮರಿಗೆಡ ಮಾತ್ರ ಬರುತ್ತದೆ.  ಹಿಂಬಾಲಕರೊಂದಿಗೆ  ಮುಂಚೂಣಿಯಲ್ಲಿ ಹೆಜ್ಜೆ ಹಾಕುವ ಗಾಂಧಿಯ ಚಿತ್ರ ನಮ್ಮನ್ನು ಬಹುವಾಗಿ ಕಾಡುತ್ತದೆ. ಸಭೆ ಸಮಾರಂಭಗಳಲ್ಲಿ ಆಯೋಜಕರು ಅತಿಥಿಗಳು” ಸತ್ಯಾನ್ವೇಷಣೆಯ ಹೆಸರಿನ ಪುಸ್ತಕಗಳನ್ನು ಕಾಣಿಕೆಯಾಗಿ ಕೊಡುತ್ತಾರೆ ಅಷ್ಟಕ್ಕೆ ಅದು ಸೀಮಿತವಾಗಬಾರದು. ಗಾಂಧಿ ಎಂಬುದೇ ತತ್ವವಾದರೆ, ಒಂದು ಧರ್ಮವಾದರೆ ಅವರ ಪರಿಶ್ರಮಕ್ಕೆ  ನ್ಯಾಯ ಒದಗಿಸಿದಂತೆ ಎಂಬ ಅನಿಸಿಕೆಯನ್ನು ಕಂಠೋಷ್ಟಿತವಾಗಿ ವ್ಯಕ್ತಪಡಿಸಬಹುದು. ******************************   ಸುಮಾವೀಣಾ

ಗಾಂಧಿ ಮತ್ತಷ್ಟು ಕಾಲ ಇರಬೇಕಿತ್ತು Read Post »

ಇತರೆ, ಗಾಂಧಿ ವಿಶೇಷ

ಗಾಂಧಿ ಬೀಜ

ಗಾಂಧಿ ವಿಶೇಷ ಗಾಂಧಿ ಬೀಜ ಸರ್ಕಲ್ ಗಳಲಿ ನಿಲ್ಲಿಸಿದ ಪಂಚಲೋಹದ ಪುತ್ಥಳಿ ಕಂಡು ಧೂಳು ಮೆತ್ತಿದ ಕೋಲು ಕನ್ನಡಕ ಊದಲು ಉಸಿರಿಲ್ಲದೆನಿತ್ರಾಣಗೊಂಡ ಮುದುಕ ಮಮ್ಮಲ ಮರುಗಿದ್ದಾನೆ ಶತಮಾನದ ಹಿಂದೆ ಉಪವಾಸ ಸತ್ಯಾಗ್ರಹ ಕೈಗೊಂಡರೂ ದೇಶವಾಸಿಗಳನೆತ್ತಿಗೆ ನೆರಳು ಹೊಟ್ಟಿಗೆ ಕೂಳು ಸಿಗದಿದ್ದಕ್ಕಾಗಿ ಲೊಚಗುಡುತ್ತಿದ್ದಾನೆ ಗಲ್ಲಿ ಗಲ್ಲಿಗಳಲ್ಲಿ ಮಚ್ಚು-ಲಾಂಗುಗಸ್ತು ತಿರುಗುವುದನ್ನು ಕಂಡು ಬೊಚ್ಚು ಬಾಯಿಯ ಮುದುಕ ಬೆಚ್ಚಿಬಿದ್ದಿದ್ದಾನೆ ಅರಮನೆ ಗುರುಮನೆ ಸೆರೆಮನೆಗಳಲೂಕಿಡಿನುಡಿ ಕೆನ್ನಾಲಿಗೆ ಚಾಚಿ ಝೇಂಕಾರ ವಾಡುತ್ತಿರುವು ದನು ಕಂಡು ದಿಗ್ಭ್ರಾಂತರಾಗಿದ್ದಾನೆ ಅಗಸಿ ಬಾಗಿಲಲ್ಲಿ ಜಾತಿಯತೆಯ ಹೆಬ್ಬಾವು ಬಾಯಿ ತೆರೆದಿರುವುದನ್ನು ಕಂಡು ಪೆಚ್ಚುಮೋರೆ ಮಾಡಿ ಸೌಹಾರ್ದತೆಯ ಓಣಿಗೆ ಹೆಜ್ಜೆ ಇಡಲು ನಡುಗುತ್ತಿದ್ದಾನೆ ಮೂರಕ್ಕೆ ಮೂರು ಬಿಟ್ಟು ಆರನೇರಿ ಗುಬ್ಬಿಯ ಉದರದಲ್ಲಿ ಬಂದೂಕಿನ ಬೀಜ ಬಿತ್ತಿದಹೊಲದೊಡೆಯನ ಕಂಡು ಕಸಿವಿಸಿ ಗೊಂಡಿದ್ದಾನೆ ಖಾದಿ ಕೇಂದ್ರ ಘೋಷಿಸಿದ ರಿಬೇಟಿನಲ್ಲಿ ಮಾರ್ಕೆಟ್ ಮಾಲ್ ಗಳಲ್ಲಿ ಗಾಂಧಿಗಿರಿ ಕೊಳ್ಳಲು ಮುಗೆಬಿದ್ದ ಗ್ರಾಹಕರಿಗೆ ಕಂಡು ತಬ್ಬಿಬ್ಬು ಗೊಂಡಿದ್ದಾನೆ ನಗ್ನ ಫಕೀರನ ಬೆತ್ತಕೆ ಪಶ್ಚಿಮದ ಬೆಟ್ಟವೂಅದುರಿರಲು ನೂಲಿಲ್ಲದ ಚರಕ ತಿರುಗಿಸಲುಪೈಪೋಟಿಗಿಳಿದ ಸೆಲ್ಫಿಗಳ ಕಂಡು ಕನಿಕರ ಪಡುತ್ತಿದ್ದಾನೆ ರಕ್ತಸಿಕ್ತ ಕರಗಳಲಿ ಹಿಡಿದ ಪೊರಕೆಯಿಂದ ಸ್ವಚ್ಛ ಭಾರತ ಘೋಷಣೆ ಕೋಗಿದರೆಮನೆ ಮನದ ಅಂಗಳದಲ್ಲೂ ನೆತ್ತರದ ರಂಗೋಲಿ ಕಂಡು ಚಿಂತಾಕ್ರಾಂತನಾಗಿದ್ದಾನೆ ಮೂರು ಕೋತಿಗಳ ಜಾಗೆಯಲ್ಲಿ ಮತ್ತೊಂದು ಕೋತಿ ಸೇರಿದೆ ಉರಿಯುವ ಮನೆಗಳ ಗಳ ಹಿರಿಯುವವರನು ಕಂಡು ಕಣ್ ಕಣ್ ಪಿಳಿಕಿಸುತ್ತಿದ್ದಾನೆ ಗುಂಡಿಗೆಗುಂಡಿಗೆಯೊಡ್ಡುತ್ತಲೇ ತಿಂಗಳ ತಿಳಿವು ಮನೆ ಅಂಗಳಕೆ ಬರಲೆಂದುಗಾಂಧಿ ಸರ್ಕಲ್ ನಲ್ಲಿ ನಿಂತ ಭೈರಾಗಿಗೆ ಕಂಡು ಮುದುಕ ಮೌನವಾಗಿದ್ದಾನೆ ಕವಿ ಸತ್ತು ಕವಿತೆ ಉಳಿಯಬೇಕು ಇದು ಲೋಕದ ನಿಯಮಗಾಂಧಿ ಸತ್ತು ಗಾಂಧಿ ತತ್ವ ಗಳು ಉಳಿಯದಿರುವದಕೆಶಾಂತಿಯ ಪಾರಿವಾಳ ಗೊಣಗುತ್ತಿವೆ ಬಡಕಲು ಶರೀರದಲ್ಲೂ ಸಾವಿರ ವಿದ್ಯುತ್ ಬಲ್ಬುಗಳ ಬೆಳಕಿನ ಶಕ್ತಿಅಂಬರದೆತ್ತರದ ನಿಲುವಿನ ಉಕ್ಕಿನೆದೆಯ ವೀರನಿಗೆ ಭಾರತ ಮಾತೆ ಅಶ್ರುತರ್ಪಣ ಗೈದು ಮತ್ತೊಂದು ಕರ್ಬಲಾ ಕ್ಕಾಗಿ ಕಾಯುತಿಹಳು ಆತ್ಮ ಸಾಕ್ಷಿಯ ಸಾಕ್ಷಾತ್ಕಾರಪ್ರೇಮದ ಹಾದಿಯ ಪಥಿಕನಬರುವಿಕೆಗಾಗಿ ಸತ್ಯ ಮಾರ್ಗದ ದಂಡಕ ಹಿಡಿದುಗಾಂಧಿ ಬೀಜ ಬಿತ್ತುತ್ತಿದ್ದೇನೆ ರಾಮ ರಹೀಮ್ ಹೇ ರಾಮ್ಬಂದು ಒಕ್ಕಲು ಮಾಡಿ ನನ್ನ ಜೊತೆಗೂಡಿಅವರು ಇವರು ಎಲ್ಲರೂ ಬರಲಿ ರಾಶಿ ಕಣದಲ್ಲಿ ಫಸಲು ತುಂಬಲು ************************************************** ಎ ಎಸ್. ಮಕಾನದಾರ

ಗಾಂಧಿ ಬೀಜ Read Post »

ಇತರೆ, ಗಾಂಧಿ ವಿಶೇಷ

ನಮ್ಮ ಭಾಪು

ಗಾಂಧಿ ವಿಶೇಷ ನಮ್ಮ ಭಾಪು ಮುಟ್ಟದವರ ಅಪ್ಪಿಮೇಲು ಕೀಳು ಎಂಬದನ್ನುಕಾಲಡಿಯಲಿ ಮೆಟ್ಟಿಮೌನದಲೇ ಸಂವಹನಮಾಡಿ ಮಹಾತ್ಮರಾದರು ಗಡಿಗಡಿಗಳ ದಾಟಿಮನಮನಗಳ ತಲುಪಿಸರಳತೆಯಲಿ ಬದುಕಿಅಹಿಂಸೆಯ ಹಾದಿಯಲ್ಲಿ ನಡೆದರುದೀನರಿಗೆ ದೀವಿಗೆಯಾದರು ಜನನಾಯಕರಾದರುಅಧಿಕಾರದ ಹತ್ತಿರ ಸುಳಿಯದೆಉಳಿದರು , ಉಚ್ಚ ಪಂಥದವಾರದರೂತಳಸಮುದಾಯದವರಿಗಾಗಿ ಬಾಳಿದರು ಹಗಲು ಇರುಳು ಸತ್ಯವನ್ನೇಪ್ರತಿಪಾದಿಸಿದರುತಮ್ಮ ಬದುಕನ್ನೆ ಒರೆಹಚ್ಚಿತಾವೇ ನೋಡಿದರುಮಾಡು ಇಲ್ಲವೇ ಮಡಿ ಎಂದರುಅನ್ಯರ ದೋಷಿಸುವ ಬದಲುನಿನ್ನ ನೀ ಅರಿ ಎಂದರು ಆದರ್ಶ ತತ್ವಗಳು ಪಠಣದಮಂತ್ರವಲ್ಲ ಎಂದುಜೀವಿಸಿ ತೋರಿಸಿದರುಬಹುತ್ವ ಭಾರತಕ್ಕೆ ಭಾತೃತ್ವದಮಡಿಲು ನೀಡಿದರು ಅನೇಕತೆಯಲ್ಲಿ ಏಕತೆಯಭಾರತವ ಕನಸ ಕಂಡರುನಮ್ಮ ರಾಷ್ಟ್ರ ಪಿತ ಎಂಬಹೆಮ್ಮೆ ಇವರುಇಂದಿಗೂ ಅವರು ಜನಮನಗಳಲ್ಲಿಅಳಿಯದೇ ಉಳಿದಿರುವರು …… ****************************** ರೇಶ್ಮಾಗುಳೇದಗುಡ್ಡಾಕರ್

ನಮ್ಮ ಭಾಪು Read Post »

ಇತರೆ, ಗಾಂಧಿ ವಿಶೇಷ

ಗಾಂಧೀಜಿಯವರ ‘ಹಿಂದ್ ಸ್ವರಾಜ್’ನ ಶತಮಾನೋತ್ತರ ಪ್ರಸ್ತುತತೆ

ಗಾಂಧಿ ವಿಶೇಷ ಗಾಂಧೀಜಿಯವರ ‘ಹಿಂದ್ ಸ್ವರಾಜ್’ನ ಶತಮಾನೋತ್ತರ ಪ್ರಸ್ತುತತೆ “ಈ ಭೂಮಿ ಪ್ರತಿಯೊಬ್ಬ ಮಾನವನ ಅಗತ್ಯಗಳನ್ನು ಪೂರೈಸುವಷ್ಟು ಸಂಪನ್ಮೂಲಗಳನ್ನು ಒದಗಿಸುತ್ತದೆ.  ಆದರೆ ಆತನ ಆಸೆಗಳನ್ನು ಪೂರೈಸುವಷ್ಟಲ್ಲ” –           ಎಂ.ಕೆ. ಗಾಂಧೀ ಗಾಂಧೀಜಿಯವರ ‘ಹಿಂದ್ ಸ್ವರಾಜ್’ಗೆ ನೂರಾ ಹನ್ನೊಂದು ವರ್ಷಗಳಾದರೂ ಅದರ ಪ್ರಸ್ತುತತೆ ಕುರಿತಂತೆ ಜಿಜ್ಞಾಸೆ ಇದೆ. ೧೯೦೮ ರಲ್ಲಿ ಬರೆದ “ಹಿಂದ್ ಸ್ವರಾಜ್” ಮೇಲ್ನೋಟಕ್ಕೆ ಸಣ್ಣ ಪುಸ್ತಕ. ಹಿಂದ್ ಸ್ವರಾಜ್ ಕೃತಿಯನ್ನು ಅಂದಿನ ಸಂದರ್ಭಕ್ಕನುಗುಣವಾಗಿ ವಿಶ್ಲೇಷಿಸಬೇಕೇ ಅಥವಾ ಇಂದಿನ ಸಂದರ್ಭದಲ್ಲೂ ಅದು ಸುಸಂಗತವೇ ಎಂಬ ಕುರಿತು ಜಿಜ್ಞಾಸೆ ಇದೆ. ಗಾಂಧೀಜಿ ಪುಸ್ತಕ ರಚನೆ ಮಾಡಿದ ಸಂದರ್ಭ ಹಾಗೂ ಇಂದಿನ ಸಂದರ್ಭಗಳು ಬೇರೆ ಬೇರೆಯಾದರೂ ವಾಸ್ತವವಾಗಿ ವಸ್ತುಸ್ಥಿತಿಯಲ್ಲಿರುವ ಸಾಮ್ಯತೆಯನ್ನು ಅಲ್ಲಗಳೆಯಲಾಗದು. ಕಳೆದ ಹಲವಾರು ರಾಜಕೀಯ ಸಂದರ್ಭಗಳಲ್ಲಿ, ವಿಶ್ಲೇಷಣೆಗಳಲ್ಲಿ, ಸಾಮಾಜಿಕ ಚಳುವಳಿಗಳಲ್ಲಿ, ಜಾಗತೀಕರಣ ವಿರೋಧಿ ಚಳುವಳಿಗಳಲ್ಲಿ ಗಾಂಧೀಜಿಯವರ ಈ ಕೃತಿಯ ಉಲ್ಲೇಖ ಬರುತ್ತಿರುವುದನ್ನು ನಾವು ಗಮನಿಸಬೇಕು. ಇಲ್ಲಿ ಗಾಂಧೀ ಒಬ್ಬ ದಾರ್ಶನಿಕರಾಗಿ ಹೊರಹೊಮ್ಮುತ್ತಿರುವುದೂ ಅಷ್ಟೇ ಸತ್ಯ. ಗಾಂಧೀ ಬರೆಯಲೇಬೇಕೆಂದು ಬರೆದ ಪುಸ್ತಕಗಳ ಸಂಖ್ಯೆ ಬಹಳ ಕಡಿಮೆ.  ಗಾಂಧೀ ಬರೆದ  ಮೂರು ಪುಸ್ತಕಗಳಲ್ಲಿ ಅತೀ ಹೆಚ್ಚು ಗಮನ ಸೆಳೆಯುವುದು ‘ಹಿಂದ್ ಸ್ವರಾಜ್’. ಇನ್ನಿತರ ಪುಸ್ತಕಗಳೆಂದರೆ : ಅವರ ಆತ್ಮಕಥೆ ‘ನನ್ನ ಸತ್ಯಾನ್ವೇಷಣೆ’ ಹಾಗೂ ‘ದಕ್ಷಿಣ ಆಫ್ರಿಕೆಯಲ್ಲಿ ಸತ್ಯಾಗ್ರಹ’.  ಹಿಂದ್ ಸ್ವರಾಜ್ ಗಾಂಧಿಯವರ ಮಹತ್ವದ ಕೃತಿ ಹೌದೋ ಅಲ್ಲವೋ ಎಂಬುದರ ಕುರಿತೂ ಸಾಕಷ್ಟು ಜಿಜ್ಞಾಸೆ ಇದೆ.  ಕೆಲ ಪಾಶ್ಚಾತ್ಯ ಚಿಂತಕರ ಪ್ರಕಾರ ಅದೊಂದು ಮಹತ್ವದ ಕೃತಿಯಲ್ಲ. ಈ ರೀತಿಯ ಆಪಾದನೆ ಮಾಡಿದವರಲ್ಲಿ ಭಾರತೀಯ ಚಿಂತಕರು ಇಲ್ಲವೆಂದಿಲ್ಲ.  ಖ್ಯಾತ ಇತಿಹಾಸ ತಜ್ಞ ರಾಮಚಂದ್ರ ಗುಹ ಇದರಿಂದ ಹೊರತಾಗಿಲ್ಲ. ಗ್ರಂಥವನ್ನು ರಚಿಸಲೇಬೇಕೆಂಬ ಉದ್ದೇಶದಿಂದ ಮಹಾತ್ಮ ಗಾಂಧೀಜಿಯವರು ಪೂರ್ಣ ತೊಡಗಿಸಿಕೊಂಡು ಬರೆದ ಒಂದೇ ಒಂದು ಗ್ರಂಥವೆಂದರೆ ‘ಹಿಂದ್ ಸ್ವರಾಜ್’. ಇದು ಅವರು ಬರೆದ ಅತ್ಯಂತ ಚರ್ಚೆಗೊಳಗಾದ ಗ್ರಂಥ. ಲಂಡನ್ನಿನಿಂದ ಆಫ್ರಿಕಾಗೆ ಹಿಂದಿರುಗಿ ಬರುವಾಗ ಹಡಗಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಹಗಲು ರಾತ್ರಿ ಕುಳಿತು ಇದನ್ನು ಬರೆದು ಮುಗಿಸಿದರು (೧೩ ರಿಂದ ೨೨ರ ನವ್ಹೆಂಬರ್ ೧೯೦೮). ಆದ ಕಾರಣ “ಹಿಂದ್ ಸ್ವರಾಜ್” ಅನ್ನು “ಸಮುದ್ರದ ಮೇಲಿನ ಸುವಾರ್ತೆ” ಎಂದು ಕರೆಯುವ ವಾಡಿಕೆಯು ಇದೆ.  ಇದನ್ನು ಬರೆಯುವಾಗ ಬಲಗೈಯಲ್ಲಿ ಬರೆದು ಕೈಸೋತಾಗ ಎಡಗೈಯಲ್ಲಿ ಅದನ್ನು ಗಾಂಧೀಜಿ ರಚಿಸಿರುವದು ವಿಶೇಷವೇ ಸರಿ. ಹಿಂದ್ ಸ್ವರಾಜ್ ಅನ್ನು ‘ರಾಷ್ಟೀಯ ಹೋರಾಟದ ಪ್ರಣಾಳಿಕೆ’, ‘ಬೈಬಲ್’, ‘ಗಾಂಧೀ ಚಿಂತನೆಯ ಹೆಮ್ಮರ’, ‘ಪಾಶ್ಚಿಮಾತ್ಯ ಆಧುನಿಕತೆಯ ಕಟು ವಿಮರ್ಶೆ’ ಎಂದೆಲ್ಲಾ ವ್ಯಾಖ್ಯಾನಿಸಲಾಗುತ್ತದೆ. ಇದನ್ನು ಹತ್ತು ದಿನಗಳಲ್ಲಿ ಬರೆದು ಮುಗಿಸಿದ್ದು ಒಂದು ದಾಖಲೆ ಎನ್ನಬಹುದು.  ಇದನ್ನು ಬರೆದಾಗ ಗಾಂಧೀಜಿಗೆ ೪೦ ವರ್ಷ. ತಾವೇ ಸಂಪಾದಕರಾಗಿದ್ದ ‘ಇಂಡಿಯನ್ ಒಪಿನಿಯನ್’ನಲ್ಲಿ ಕ್ರಮವಾಗಿ ಈ ಗ್ರಂಥದಲ್ಲಿ ಬಂದ ತಮ್ಮ ಅಭಿಪ್ರಾಯಗಳನ್ನು ಮೊದಲೇ ಪ್ರಕಟಿಸಿದರು. ಹಿಂಸೆಯಲ್ಲಿ ನಂಬಿಕೆ ಇದ್ದ ಭಾರತೀಯ ಕ್ರಾಂತಿವಾದಿಗಳಿಗೆ ಉತ್ತರವಾಗಿ ಈ ಗ್ರಂಥ ಬಂತು.  ಆ ಮೇಲೆ ಅವರೆಲ್ಲ ವಿಚಾರಗಳಿಗೆ ನಿಖರ ಗ್ರಂಥ ರೂಪ ಕೊಟ್ಟರು. ಹಿಂದ್ ಸ್ವರಾಜ್ ಕೃತಿಯನ್ನು ಮೊದಲು ಗಾಂಧೀಜಿ ಗುಜರಾತಿ ಭಾಷೆಯಲ್ಲಿ ಬರೆದು ತಿದ್ದಿ ಪ್ರಕಟ ಮಾಡಿದರು. ಅದನ್ನು ಪ್ರಕಟಿಸುತ್ತಿದ್ದಂತೆಯೇ ಬ್ರಿಟೀಷ್ ಸಾಮ್ರಾಜ್ಯಶಾಹಿ, ಇದು ಪ್ರಭುತ್ವದ ವಿರುದ್ಧ ದಂಗೆಯನ್ನು ಪ್ರಚೋದಿಸುವ ಕೃತಿ ಎಂದು ತೀರ್ಮಾನ ಮಾಡಿ, ಪುಸ್ತಕವನ್ನು ನಿಷೇಧಿಸಿತ್ತು. ಗಾಂಧೀಜಿಗೆ ವಾಸ್ತವವಾಗಿ ಬ್ರಿಟೀಷರು ಯಾವ ಕಾರಣಕ್ಕಾಗಿ ಪುಸ್ತಕವನ್ನು ನಿಷೇಧಿಸಿದ್ದರು ಎಂದು ತಿಳಿದಿರಲಿಲ್ಲ. ಗಾಂಧಿ ಸ್ವತಃ ಈ ಪುಸ್ತಕವನ್ನು ಇಂಗ್ಲೀಷಿಗೆ ಭಾಷಾಂತರಿಸಿದ್ದರು. ಅವರು ತಮ್ಮ  ಜೀವಮಾನದಲ್ಲಿ ಭಾಷಾಂತರಿಸಿದ್ದು ಇದೊಂದು ಪುಸ್ತಕ ಮಾತ್ರ.  ‘ಹಿಂದ್ ಸ್ವರಾಜ್’ ಬರೆಯುವ ಸಂದರ್ಭದಲ್ಲಿ ಗಾಂಧೀಜಿಗೆ ಭಾರತದ ಕುರಿತು ಹೆಚ್ಚು ತಿಳುವಳಿಕೆ ಇರಲಿಲ್ಲ; ಆಳವಾದ ಅನುಭವಗಳಿರಲಿಲ್ಲ. ೧೯೦೮ರ ತನಕ ಅವರ ರಾಜಕೀಯ ಜೀವನ ಕೇಂದ್ರೀಕೃತವಾದದ್ದು ದಕ್ಷಿಣಾ ಆಫ್ರಿಕಾದಲ್ಲಿ. ಅದೇ ಸುಮಾರಿಗೆ ಭಾರತದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಹೋರಾಟಕ್ಕೂ ಒಂದು ನಿರ್ದಿಷ್ಟತೆ ಇರಲಿಲ್ಲ. ಅದು ಹಿಂಸೆಯನ್ನೇ ಪ್ರಧಾನವಾಗಿರಿಸಿ ವಸಾಹತುಶಾಹಿಯ ಆಧುನಿಕತೆಗೆ ಪ್ರತಿರೋಧವನ್ನೊಡ್ಡದೇ ನಡೆದ ಹೋರಾಟ ರಾಷ್ಟ್ರೀಯ ಹೋರಾಟಕ್ಕೆ ಹಿಂಸೆಯ ಚೌಕಟ್ಟನ್ನು ನೀಡುತ್ತಿರುವುದನ್ನು ಗಾಂಧೀಯವರು ಗಮನಿಸಿದ್ದರು. “ಹಿಂದ್ ಸ್ವರಾಜ್” ವಸಾಹತುಶಾಹಿ ವ್ಯವಸ್ಥೆಗೆ, ಕ್ರಾಂತಿಕಾರರಿಗೆ, ಹಿಂಸೆಗೆ, ಆಧುನಿಕತೆಗೆ, ಪಾಶ್ಚಾತ್ಯ ನಾಗರೀಕತೆಗೆ, ಹಾಗೂ ರಾಜಕೀಯ ಚೌಕಟ್ಟಿಗೆ ಒಂದು ಪ್ರತಿರೋಧವಾಗಿ, ಹುಟ್ಟಿಕೊಂಡಿತ್ತು.  ಗಾಂಧೀಜಿಯವರ ‘ಹಿಂದ್ ಸ್ವರಾಜ್’ ನಮ್ಮನ್ನೆಲ್ಲ ವೈಚಾರಿಕವಾಗಿ, ತಾರ್ಕಿಕವಾಗಿ ಚಿಂತನೆಗೆ ಒಳಪಡಿಸಿದ ಗ್ರಂಥ. ಆದಕಾರಣ ಗಾಂಧೀಜಿಯವರ ಈ ಕೃತಿಯನ್ನು ವಸಾಹತುಶಾಹಿ ಸಂದರ್ಭ ಹಾಗೂ ಜಾಗತೀಕರಣದ  ಪ್ರಸ್ತುತ ಸಂದರ್ಭಗಳೆರಡರಲ್ಲಿಯೂ ಇಟ್ಟು ನೋಡಬೇಕಾದದ್ದು ಇಂದಿನ ಅಗತ್ಯವಾಗಿದೆ. ಗೋಖಲೆಯವರು ೧೯೧೨ ರಲ್ಲಿ ದಕ್ಷಿಣ ಆಫ್ರೀಕಾಗೆ ಹೋಗಿದ್ದಾಗ ಈ ಕೃತಿಯ ಭಾಷಾಂತರವನ್ನು ನೋಡಿ, ಎಲ್ಲಾ ಆಪಕ್ವ ವಿಚಾರಗಳಿವೆ. ಇದು ಅವಸರದಲ್ಲಿ ಹೆಣೆದ ಕೃತಿ. ಹಿಂದೂಸ್ಥಾನದಲ್ಲಿ ಒಂದು ವರ್ಷಕಾಲ ಇದ್ದರೆ ಗಾಂಧೀಜಿ ತಾವೇ ಅದನ್ನು ಸುಟ್ಟು ಹಾಕಿಯಾರು ಎಂದಿದ್ದರು.  ಆ ಶ್ರೇಷ್ಠ ಗುರುವಿನ ವಚನ ನಿಜವಾಗಲಿಲ್ಲ. ಆದರೆ ೧೯೨೧ ರಲ್ಲಿ ಗಾಂಧೀಜಿಯವರು ಅದರ ಬಗ್ಗೆ ಬರೆಯುತ್ತ “ಈ ಪುಸ್ತಕವನ್ನು ಎಳೆಯ ಮಗುವಿಗೂ ಕೊಡಬಹುದು. ಅದು ದ್ವೇಷದ ಬದಲು ಪ್ರೀತಿಯನ್ನು ಬೋಧಿಸುತ್ತದೆ. ಹಿಂಸೆಗೆ ಬದಲು ಪ್ರೀತಿಯನ್ನು ಬೋಧಿಸುತ್ತದೆ.  ಹಿಂಸೆಗೆ ಬದಲು ಆತ್ಮತ್ಯಾಗವನ್ನು ಕಲಿಸುತ್ತದೆ.  ಪಶುಬಲಕ್ಕೆ ವಿರುದ್ಧವಾಗಿ ಆತ್ಮಬಲವನ್ನು ನಿಲ್ಲಿಸುತ್ತದೆ. ಎಷ್ಟೋ ಸಲ ಅಚ್ಚಾಗಿದೆ. ಈ ಪುಸ್ತಕ ಓದಬಯಸುವವರಿಗೆಲ್ಲ ಇದು ಓದಲು ಯೋಗ್ಯವೆಂದು ಸೂಚಿಸುತ್ತೇನೆ.  ಇದರಲ್ಲಿ ಒಂದು ಪದವನ್ನಾದರೂ ಬದಲಿಸಲಾರೆ.  ಒಂದೇ ಒಂದನ್ನು ಒಬ್ಬ ಗೆಳತಿಯ ತೃಪ್ತಿಗಾಗಿ ತೆಗೆದು ಹಾಕಿದ್ದೇನೆ.  ಈ ಗ್ರಂಥ ‘ಆಧುನಿಕ’ ನಾಗರಿಕತೆಯ ಮೇಲೆ ತೀವ್ರ ವಿಮರ್ಶೆ, ಖಂಡನೆ. ೧೯೦೮ ರಲ್ಲಿ ಬರೆದುದಾದರೂ ಅಂದಿಗಿಂತ ಇಂದು ನನಗೆ ಅದರಲ್ಲಿ ಹೆಚ್ಚು ನಂಬಿಕೆಯಾಗಿದೆ….. ಆದರೆ ಇದರಲ್ಲಿ ಹೇಳಿರುವ ಸ್ವರಾಜ್ಯವನ್ನು ನಾನಿವತ್ತು ಕೇಳುತ್ತಿಲ್ಲ.  ಹಿಂದೂಸ್ಥಾನ ಅದಕ್ಕೆ ಸಾಕಷ್ಟು ಮಾಗಿ ಬಂದಿಲ್ಲ.  ಹೀಗೆ ಹೇಳಿದರೆ ಅಧಿಕ ಪ್ರಸಂಗವೆನಿಸಿತೇನೋ; ನನ್ನ ಅಭಿಪ್ರಾಯವೇನೋ ಅದೇ. ಅದರಲ್ಲಿ ವರ್ಣಿಸಿರುವ ಸ್ವರಾಜ್ಯಕ್ಕಾಗಿ ವ್ಯಕ್ತಿಶಃ ನಾನು ಯತ್ನಿಸುತ್ತಿದ್ದೇನೆ. ನನ್ನ ಸಾಮೂಹಿಕ ಪ್ರಯತ್ನವೇನೋ ಭಾರತೀಯರ ಅಭಿಮತದಂತೆ ಶಾಸನ ಸಮ್ಮತ ಪ್ರಜಾತಂತ್ರಕ್ಕಾಗಿ ನಡೆದಿದೆ” ಎಂದಿದ್ದಾರೆ.  ೧೯೩೮ ರಲ್ಲಿ ಕೂಡ ಗಾಂಧೀಜಿ ಈ ಪುಸ್ತಕದಲ್ಲಿ ಏನೂ ಬದಲಿಸಲಿಲ್ಲ. ಅಲ್ಲಲ್ಲಿ ಭಾಷೆಯನ್ನು ಕೊಂಚ ತಿದ್ದಿದರು ಅಷ್ಟೇ. ಖ್ಯಾತ ಗಾಂಧೀ ಚಿಂತಕ ಆಂಟನಿ ಪರೇಲ್ ಪ್ರಕಾರ ಹಿಂದ್ ಸ್ವರಾಜ್ಯ ಗಾಂಧೀಯವರ ಮೂಲಭೂತ  ಹಾಗೂ ಮಹತ್ತರವಾದ ಕೃತಿ ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಿ ಇದೊಂದು ಮಹತ್ವದ ಕೃತಿಯಾಯಿತಲ್ಲದೆ, ಹೋರಾಟಕ್ಕೆ ಹೊಸ ಆಯಾಮವನ್ನು ಹಾಗೂ ದೃಷ್ಟಿಕೋನವನ್ನು ನೀಡಿತ್ತು. ಬಹಳಷ್ಟು ಪಾಶ್ಚಾತ್ಯರಿಗೆ ಈ ಕೃತಿ ಒಂದು ಕಬ್ಬಿಣದ ಕಡಲೆ. ಭಾಷೆ ದೃಷ್ಟಿಯಲ್ಲಿ ಹಿಂದ್ ಸ್ವರಾಜ್‌ನ ಭಾಷೆ ಅತ್ಯಂತ ಸರಳವಾಗಿದ್ದರೂ, ಕೆಲವೊಮ್ಮೆ ‘ಸಂಪಾದಕ’ ಹಾಗೂ ‘ಓದುಗ’ನ ನಡುವೆ ಇರುವ ಗಲಿಬಿಲಿ ಇದಕ್ಕೆ ಕಾರಣ. ಕೆಲವೊಮ್ಮೆ ಸಂಪಾದಕ ಹಾಗೂ ಓದುಗನ್ಯಾರು ಎಂಬ ವ್ಯತ್ಯಾಸವೇ ಕಂಡು ಬರುವುದಿಲ್ಲ. ಹಿಂದ್ ಸ್ವರಾಜ್‌ನಲ್ಲಿ ಇಪ್ಪತ್ತು ಅಧ್ಯಾಯಗಳಿವೆ. ಹಿಂದ್ ಸ್ವರಾಜ್ ಕೃತಿಯಲ್ಲಿ ಉಪಯೋಗಿಸುವ ತಂತ್ರ ಹೊಸದೇನಲ್ಲ. ಅಲ್ಲಿರುವ  ವಿಧಾನ ಮೂಲತಃ ಗ್ರೀಕ್ ದಾರ್ಶನಿಕ ಸಾಕ್ರಟೀಸ್ ಉಪಯೋಗಿಸಿದ ಸಂವಾದ ಅಥವಾ ಡಯಲೆಕ್ಟಿಕಲ್ ಮೇಥಡ್‌ನಿಂದ ಬಂದಿದೆ.  ಇದನ್ನು ಪ್ಲೇಟೋ ಅನುಸರಿಸಿದ್ದರು. ಇಲ್ಲಿ ಎರಡು ಪ್ರಮುಖ ಪಾತ್ರಧಾರಿಗಳನ್ನು ಗುರುತಿಸಬೇಕು. ‘ಓದುಗ’ ಹಾಗೂ ‘ಸಂಪಾದಕ’. ಈ ರೀತಿಯ ಪ್ರಯೋಗ ಗಾಂಧೀಜಿಯಲ್ಲಿ ಹೊಸದೇನಲ್ಲ. ಗಾಂಧೀ ಈ ತಂತ್ರವನ್ನು ಉಪಯೋಗಿಸಲು ಕಾರಣವಿದೆ. ಇದರ ಮುಖಾಂತರ ತಮ್ಮ ವಾದಗಳನ್ನು ಸಮರ್ಥವಾಗಿ ಮಂಡಿಸಬಹುದೆAಬ ತರ್ಕವನ್ನು ಗಾಂಧಿ ಈ ಸಂದರ್ಭದಲ್ಲಿ ಮುಂದಿಡುತ್ತಾರೆ. ಈ ಕೃತಿಯ ಮೂಲ ಆಶಯಗಳು ಸ್ವಾತಂತ್ರ್ಯ ಸ್ವಾತಂತ್ರೊ್ಯೋತ್ತರ ಭಾರತದ ಸ್ವರೂಪ, ಆಧುನಿಕ ನಾಗರಿಕತೆ-ಯಂತ್ರ ನಾಗರಿಕತೆಗಳ ತೀವ್ರ ವಿಮರ್ಶೆ ಮತ್ತು ಪ್ರಭುತ್ವದ ವಿರುದ್ಧ ನಡೆಯಬಹುದಾದ ಪ್ರಜಾಂದೋನಲಗಳ ಸ್ವರೂಪವನ್ನು ಕುರಿತದ್ದಾಗಿದ್ದವು.  ಹಿಂಸಾತ್ಮಕ ಮಾರ್ಗದಿಂದಾದರೂ ದೇಶವನ್ನು ಮುಕ್ತಗೊಳಿಸುವ ಕ್ರಾಂತಿಕಾರಿ ಹೋರಾಟಗಳ ಆಶಯಗಳಿಗೆ ಪರ್ಯಾಯವಾಗಿ ಅಹಿಂಸೆ, ಸತ್ಯಾಗ್ರಹ ಮತ್ತು ಆತ್ಮ ನಿಗ್ರಹದ ಮೂಲಕ ಗುರಿ ಸಾಧಿಸುವ ಉದ್ದೇಶ ಹಿಂದ್ ಸ್ವರಾಜ್‌ನ ಮೂಲ ಅಡಿಪಾಯ. “ಭಾರತೀಯ ಕ್ರಾಂತಿಕಾರಿಗಳಿಗೆ ಮತ್ತು ದಕ್ಷಿಣ ಆಫ್ರಿಕಾದಲ್ಲಿನ ಅದೇ ಪಂಥಿಗಳಿಗೆ ಉತ್ತರವಾಗಿ ಇದನ್ನು ಬರೆದೆ” ಎಂದು ಗಾಂಧೀಜಿಯವರೇ ಹೇಳಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.  ಹಿಂದ್ ಸ್ವರಾಜ ಕೃತಿಯಲ್ಲಿ ಕಾಂಗ್ರೆಸ್ಸು ಮತ್ತು ಅದರ ಅಧಿಕಾರಿಗಳು, ಬಂಗಾಳ ವಿಭಜನೆ, ಅಶಾಂತಿ ಮತ್ತು ಅಸಂತೋಷ, ಸ್ವರಾಜ್ಯ ಎಂದರೇನು? ಅಂದಿನ ಇಂಗ್ಲೆಂಡಿನ ಸ್ಥಿತಿ, ನಾಗರಿಕತೆ, ಹಿಂದೂಸ್ಥಾನ ಪರಾಧೀನವಾದ ಬಗೆ. ಇಂದಿನ ಹಿಂದೂಸ್ಥಾನದ ಸ್ಥಿತಿ, ರೈಲು ಬಂದ ಬಗೆ, ಹಿಂದೂ ಮುಸಲ್ಮಾನರ ಸಂಬಂಧದ ಸ್ವರೂಪ, ವಕೀಲರ ಬಗ್ಗೆ, ವೈದ್ಯರ ಬಗ್ಗೆ, ಹಿಂದೂಸ್ಥಾನ ಹೇಗೆ ಸ್ವತಂತ್ರ  ವಾದೀತು ಎಂಬುದರ ಕುರಿತು, ಸತ್ಯಾಗ್ರಹ, ಶಿಕ್ಷಣ, ಯಂತ್ರ ಮತ್ತು ಕಾರ್ಖಾನೆ ಎಂಬೆಲ್ಲ ವಿಷಯಗಳ ಕುರಿತು ಪ್ರಶ್ನೋತ್ತರ ರೂಪದಲ್ಲಿ ಪ್ರಸ್ತುತ ಪಡಿಸಿದ್ದಾರೆ. ಸಮಕಾಲೀನ ಸಾಮಾಜಿಕ ಸಂದರ್ಭದಲ್ಲಿ ಗಾಂಧೀಜಿಯವರ ಈ ಚಿಂತನೆಯನ್ನು ಅಗತ್ಯವಾಗಿ ಅರ್ಥೈಸಬೇಕಾಗಿದೆ.  ಇಂದು ನಮ್ಮ ಕಣ್ಣೆದುರಿಗೆ ಹಲವಾರು ಹಿಂಸಾತ್ಮಕ ಚಳುವಳಿಗಳು ನಡೆಯುತ್ತಿವೆ. ಇವು ರಕ್ತ ಕ್ರಾಂತಿಯಿಂದಲೇ ಬದಲಾವಣೆ ಸಾಧ್ಯ ಎಂದು ಬಿಂಬಿಸುವುದರ ಮೂಲಕ ಹಿಂಸೆಯನ್ನೇ ಪ್ರಚೋದಿಸುತ್ತಿವೆ. ನಕ್ಸಲೀಯ ಚಳುವಳಿ, ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಮುಂತಾದ ಉದಾಹರಣೆಗಳು ನಮ್ಮ ಮುಂದಿವೆ. ಇಂದು ಕೆಲವೇ ಜನರ ಹಿತಾಸಕ್ತಿ ಸಾರ್ವಜನಿಕ ಹಿತಾಸಕ್ತಿ ಎಂದು ಬಿಂಬಿತವಾಗುತ್ತಿವೆ.  ಪಟ್ಟಭದ್ರ ಹಿತಾಸಕ್ತಿಗಳು ಇಂದು ದೇಶದ ಸಂಪತ್ತನ್ನು ಲೂಟಿ ಮಾಡುತ್ತಿವೆ. ಉನ್ನತ ಹಂತದ ರಾಜಕಾರಣಿಗಳಿಂದ ಹಿಡಿದು ಕೆಳ ಮಟ್ಟದ ನೌಕರರವರೆಗೆ ಭ್ರಷ್ಟಾಚಾರ ತನ್ನ ಕೆನ್ನಾಲಿಗೆ ಚಾಚಿದೆ. ಪರಿಸ್ಥಿತಿ ಹೀಗಿರುವಾಗ ನಿಜವಾದ ಶೋಷಿತರ ಧ್ವನಿಗೆ ಬೆಲೆ ಎಲ್ಲಿದೆ? ಇದಕ್ಕೆ ಪರಿಹಾರವೇನು? ಈ ಪಟ್ಟಭದ್ರ ಗುಂಪುಗಳ ವಿರುದ್ಧ ಹೋರಾಡಲು ಶೋಷಿತನಿಗೆ ಇರುವ ದಾರಿ ಯಾವುದು? ಎಂಬ ಪ್ರಶ್ನೆಗಳಿಗೆ ‘ಹಿಂದ್ ಸ್ವರಾಜ್’ನಿಂದ ಉತ್ತರ ಪಡೆಯಬಹುದು. ಮಹಾತ್ಮಾ ಗಾಂಧೀಜಿ ಕಂಡ ಸ್ವತಂತ್ರ ಭವ್ಯ ಭಾರತದ ಕನಸಿನ ಕೂಸಾದ ಈ ಕೃತಿ ಜಾತಿ, ಜನಾಂಗ, ಧರ್ಮ, ಭಾಷೆ, ಉಡುಗೆ ತೊಡಿಗೆ, ಲಿಂಗಗಳ ಭೇದಭಾವ ತೊರೆದು ಎಲ್ಲರೂ ಸಮಾನರು ಎಂದು ಸಾರಿತು. ಈ ಕೃತಿಯಲ್ಲಿ ಅಡಕವಾಗಿರುವ ವಿಚಾರಧಾರೆಗಳನ್ನು ಇಂದೂ ನಾವು ಅಳವಡಿಸಿಕೊಂಡಲ್ಲಿ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗಬಲ್ಲದು. ಆಧುನಿಕ ನಾಗರಿಕತೆ ಸೃಷ್ಟಿಸಿದ ಹಲವಾರು ಸಮಸ್ಯೆಗಳಿಗೆ ಸಮಾಧಾನ ಈ ಕೃತಿಯಲ್ಲಿ ಧಾರಾಳವಾಗಿ ಲಭ್ಯವಿದೆ.ಅಂತಿಮವಾಗಿ ಗಾಂಧೀಜಿಯವರೇ ಹೇಳಿದ ಹಾಗೆ ಹಿಂದ್ ಸ್ವರಾಜ್ ದ್ವೇಷಕ್ಕೆ ಬದಲು ಆತ್ಮತ್ಯಾಗವನ್ನು ಕಲಿಸುತ್ತದೆ. ಪಶುಬಲಕ್ಕೆ ಇದಿರಾಗಿ ಆತ್ಮಬಲವನ್ನು ನಿಲ್ಲಿಸುತ್ತದೆ. ಯಾಕೊ . . . . . ಗಾಂಧೀಜಿ ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ. ***********************************

ಗಾಂಧೀಜಿಯವರ ‘ಹಿಂದ್ ಸ್ವರಾಜ್’ನ ಶತಮಾನೋತ್ತರ ಪ್ರಸ್ತುತತೆ Read Post »

ಇತರೆ, ಗಾಂಧಿ ವಿಶೇಷ

ಮನೋಗತ

ಗಾಂಧಿ ವಿಶೇಷ ಮನೋಗತ ಗಾಂಧೀ,ನೀನು ಮಹಾತ್ಮನಂತೆ ನಿಜ –ವಿರಬಹುದು ನೂರಕ್ಕೆ ನೂರುಅದಕ್ಕೆಂದು ಎಲ್ಲರಂತೆ ನಾನೂಆಳೆತ್ತರದ ಕಲ್ಲು ಕಂಬದ ಮೇಲೆನಿನ್ನ ಪ್ರತಿಮೆಯನಿಟ್ಟು;‘ಗಾಂಧೀ ಚೌಕ’ ಎಂಬ ನಾಮಫಲಕ ಕಟ್ಟಿನಿನ್ನ ಜಯಂತಿ – ಪುಣ್ಯ ತಿಥಿಗಳಿಗೊಮ್ಮೆಆಡಂಬರ ಮಾಡಿ,ನಿನ್ನ ನೀತಿ – ತತ್ವಾದರ್ಶಗಳನ್ನುಪೊಳ್ಳು ಭರವಸೆ ಭಾಷಣದಲಿ ತುರುಕಿಆಚರಣೆಯನು ಗಾಳಿಯಲಿ ತೂರಿಚಪ್ಪಾಳೆ ಗಿಟ್ಟಿಸುವ ವ್ಯಕ್ತಿಯಾಗಲಾರೆ!ಯಾಕೆಂದರೆ,ಬೀದಿ ನಾಯಿ, ಬಿಡಾಡಿ ದನ, ಭಿಕಾರಿ ಮಂದಿಹಸಿವಿನಿಂದ ನರಳುತ್ತಾ…ನಿನ್ನ ಪ್ರತಿಮೆಯ ಕೆಳಗೇನೆರಳ ಬಯಸಿ ಅಂಗಾತ ಬಿದ್ದಿರುವಾಗನಾನ್ಹೇಗೆ ನಿನ್ನ ಹಾಡಿ ಹೊಗಳಿ ಷೋಕಿ ಮಾಡಲಿ? ******************************** ಬಾಲಕೃಷ್ಣ ದೇವನಮನೆ

ಮನೋಗತ Read Post »

ಇತರೆ, ಗಾಂಧಿ ವಿಶೇಷ

ಕವಿತೆ ಬಾಪೂಜಿ ಮಮತೆಯ ಬಾಪೂಜಿಸತ್ಯಾಗ್ರಹಕೆ ನೀನಾದೆ ರಾಜಿ ಧೀಮಂತ ನೇತಾರಸತ್ಯ ಶಾಂತಿಯ ಮೂರ್ತಿವರ್ಣಾತೀತ ನಿಲುವುಸ್ವಾತಂತ್ರ್ಯದ ಉಷಾಕಿರಣ ದೇಶ ಪ್ರೇಮ ಹುರಿದುಂಬಿಸಿಬ್ರಿಟಿಷರಿಗಾದೆ ಕಂಟಕಬರೆದೆ ನವಯುಗದ ಭಾಷ್ಯನ್ಯಾಯ ಪರತೆಗೆ ಸ್ಪೂರ್ತಿ ದಾಸ್ಯದಿಂದ ಬಿಡುಗಡೆಗೆ ನಿನ್ನ ಕರೆತ್ಯಾಗ ಬಲಿದಾನಕೆ ವರದಾನಮೂಲಶಿಕ್ಷಣದ ಪರತೆಸ್ವಚ್ಛತಾ ಆಂದೋಲನಕೆ ರುವಾರಿ ಮೂಡಿಸಿದೆ ಸಂಚಲನಭಾರತಾಂಬೆಯ ಕುಡಿಯಲಿಬಡವನ ಅಂತಃಕರಣದ ಪ್ರತಿಇದೋ ಮಹಾತ್ಮ ನಿನಗೆ ಒಂದನ‌. ******************************

Read Post »

ಇತರೆ, ಗಾಂಧಿ ವಿಶೇಷ

ಗಾಂಧಿ ವಿಶೇಷ ಮಹಾತ್ಮನಿಗೆರಡು ಕವಿತೆಗಳು ಕವಿತೆ-ಒಂದು ನಿನ್ನ ಜಯಂತಿಯ ದಿನನಿನ್ನ ನೆನೆಸುವುದು ಕಮ್ಮಿಯಾಗಿಚರ್ಚೆಗಳೇ ಜಾಸ್ತಿಯಾಗಿದ್ದರುಬೇಸರಿಸಬೇಡ ಮಹಾತ್ಮಾಸತ್ಯ ಅಹಿಂಸೆಗಳ ಜೊತೆಉಪವಾಸವೂ ಆಯುಧವಾಗಿಸಿದ್ದುಹೊರಗಿನವರಿಗೆ ಸ್ಫೂರ್ತಿಯಾದರೂನಮಗದು ಹಿಡಿಸಲಿಲ್ಲನಿನ್ನ ಹುಟ್ಟು ಹಬ್ಬದ ದಿನಕಕ್ಕಸುಗಳ ಉದ್ಘಾಟನೆಕಡ್ಡಾಯವಾಗಿ ಹೆಂಡ ನಿಷೇಧಮಕ್ಕಳ ಕಿವಿ ಹಿಂಡಿ ಆಚರಣೆ ಇಷ್ಟೇನಿನ್ನ ’ಅರ್ಧರಾತ್ರಿಯ ಹೆಣ್ಣೊಬ್ಬಳ’ ಹೇಳಿಕೆಯನ್ನುಪರೀಕ್ಷಿಸಲು ಹೋಗಿಬೀದಿ ಕಾಮುಕರ ತೆಕ್ಕೆಯಲ್ಲಿಅದೆಷ್ಟು ಹೆಣ್ಣುಗಳು ಸತ್ತಿರುವರೋಎಪ್ಪತ್ಮೂರು ವರ್ಷವಾಯಿತುಎರಡು ಹೊಸ ತಲೆಮಾರು ಬಂತುಪಡೆಪಾಟಲು ಇವರಿಗೇನು ಗೊತ್ತುವಿಪರೀತ ಸ್ವತಂತ್ರ ಇವರ ಸ್ವತ್ತುಈಗಲೂ ಸರಕಾರ ಕೊಡುವ ರಜೆಟಿವಿಗಳಲ್ಲಿ ಪತ್ರಿಕೆಗಳಲ್ಲಿ ಬರುವ ಸುದ್ದಿನಿನ್ನನ್ನು ನೆನಪಿಸುತ್ತವೇ ಆಗಲಿಸವಲೆನಿಸುತ್ತಿರುವ ನಿನ್ನ ಸೂಕ್ತಿಗಳಲ್ಲನಾವಿಷ್ಟೇ ಮಹನೀಯರನ್ನುಅತಿ ಬೇಗ ಮರೆಯುತ್ತೇವೆಖಳನಾಯಕ ಮನಸ್ಸಿನಲ್ಲದ್ದಷ್ಟುನಾಯಕನು ಉಳಿಯುವುದಿಲ್ಲ ಕವಿತೆ-ಎರಡು ನಿನ್ನ ಜನರ ಬಿಡುಗಡೆಗಾಗಿನೀನು ಜೀವ ಕೊಟ್ಟೆನಿರಾಳವಾಗಿ ಉಸಿರಾಡುವವರುದಾಸ್ಯದ ಕರಾಳತೆಯಆಳ ತಿಳಿಯದೇನಿನ್ನ ನಿಧನದ ಹಲವಾರುವರ್ಷಗಳ ನಂತರನಿನ್ನನ್ನು ಪ್ರಶ್ನಿಸುವಾಗಕೂಡಲಿಗಳಲಿ ಕೂತುಮುಗುಳ್ನಗು ಹೊತ್ತುಶಿಲಾಮೂರ್ತಿಯಾಗಿ ಉಳಿದೆನಿತ್ಯವೂ ಕೈಗಳಲ್ಲಿ ಕುಣಿಯುವನೋಟುಗಳಲ್ಲಿ ಇಣುಕಿದೆಕೆಲಸವೇ ಮುಂದುವರೆಯದಮಂದಗತಿಯ ಕಚೇರಿಗಳಗೋಡೆಗಳ ಮೇಲೆಬೊಚ್ಚು ನಗೆಯ ಸೂಸುತ್ತ ಕಂಡೆನಿನ್ನ ಜನ್ಮದಿನವನ್ನುಒಣದಿನವೆಂದಾಗಹುಬ್ಬು ಗಂಟಿಕ್ಕಿದವರಗೊಣಗಾಟವೂ ಸಹಿಸಿದೆಕೀರ್ತಿಸಿದರೂಕಿರೀಟ ತೊಡಿಸಿದರೂಬಯ್ದರೂಬೇಡದವನೆಂದರೂನಿನ್ನ ನೆನೆಯದೆದಿನ ಕಳೆಯಲಾರದಾಗಿದೆಅದಕ್ಕೆ ನೀನುಮಹಾತ್ಮನಾಗಿ ಉಳಿದೆ ******************************************** ಚಂದಕಚರ್ಲ ರಮೇಶ ಬಾಬು

Read Post »

ಇತರೆ, ಗಾಂಧಿ ವಿಶೇಷ

ಗಾಂಧಿ ವಿಶೇಷ ಆಶಯ ಪಾಪು ಅಲ್ಲಿದೆ ಬಾಪುವಿನ ಚಿತ್ರ ಅದರ ಕಣ್ಣ ಹೊಳಪು ನಿನ್ನದಾಗಲಿ ಅದರಲ್ಲಿದೆ ಶ್ವೇತ ಬಣ್ಣ, ಹತ್ತಿರ ಹೋಗು ನಿನಗೂ ಸಿಗಬಹುದು… ಆಪ್ತತೆಯ ಮೃದು ಹೃದಯ ಅದು ನಿನ್ನದೂ ಆಗಲಿ… ಒಂದಿಷ್ಟು ಹೊತ್ತು ಅಲ್ಲೇ ಕುಳಿತಿರು ಆಲೋಚಿಸು… ಬೆಳಕು ಆವರಿಸಿ ಕಣ್ಣು ತುಂಬೀತು ಬಂದೀತು ಹೊಸ ದೃಷ್ಟಿ ಅಳಿಯಬಹುದು ಪಾಪ ಸೃಷ್ಟಿ. ************************************ ಚಿತ್ರ-ಕವಿತೆ ತಮ್ಮಣ್ಣ ಬೀಗಾರ.

Read Post »

ಇತರೆ, ಗಾಂಧಿ ವಿಶೇಷ

ಗಾಂಧಿ ವಿಶೇಷ ಬಾಪೂ ಸತ್ಯಸಂಧ ಸರಳ ಗಾಂಧಿ ಮೋಹನಸತ್ಯಾಗ್ರಹದಿಂದ ಜಯವ ತಂದವನಅತಿಮೋಸದಿಂದ ಕೊಂದರಲ್ಲ ಬಾಪೂ ಗುಂಡು ತುಂಡುಗಳ ಮುಟ್ಟದವನಗುಂಡಿನಿಂದಲೇ ನಿನ್ನ ದೇಹವನುತುಂಡುಮಾಡಿ ಕೊಂದರಲ್ಲ ಬಾಪೂ ಅಹಿಂಸೆಯೇ ಪರಮಧರ್ಮವೆಂದವನರಕ್ತಪಾತವಿಲ್ಲದೆ ಸ್ವಾತಂತ್ರ್ಯ ತಂದವನಹಿಂಸೆಯಿಂದಲೇ ಕೊಂದರಲ್ಲ ಬಾಪೂ ಸಾಟಿಯಿಲ್ಲದ ಪ್ರಾಮಾಣಿಕ ಅವಧೂತನನೋಟಿಗಳ ಮೇಲೆ ಹಾಕಿ ನಿನ್ನ ಚಿತ್ರಣಅಟ್ಟಹಾಸದ ಭ್ರಷ್ಟಾಚಾರಗೈದರಲ್ಲ ಬಾಪೂ ದೇವದೂತನಂತ ಶಾಂತ ಜೀವನದ ಸಂತನಜೀವಂತವಿರುವಾಗ ಕಡೆಗಣಿಸಿ ರಾಮಭಕ್ತನಸಾವಿನ ನಂತರ ನಿನ್ನ ಪೂಜಿಸಿದರಲ್ಲ ಬಾಪೂ ಸ್ವಚ್ಛತಾ ಅಭಿಯಾನದ ಸುಳ್ಳು ಹೆಸರಿನಲಿನಿಶ್ಚಲ ನಿರ್ಮಲ ನಿನ್ನ ಸಾತ್ವಿಕ ತತ್ವಗಳನೆಲ್ಲಕೊಚ್ಚೆಯಂತೆ ಗುಡಿಸಿ ಒಗೆದರಲ್ಲ ಬಾಪೂ ರಾಮರಾಜ್ಯದ ಸಿಹಿ ಕನಸು ಕಂಡವನನಾಮ ಸ್ಮರಣೆಯನು ಮನಸಿನಿಂದಲೇಸುಮ್ಮನೆ ತೆಗೆದು ಒಗೆದರಲ್ಲ ಬಾಪೂ ******************************** ವಿನುತಾ ಹಂಚಿನಮನಿ

Read Post »

You cannot copy content of this page

Scroll to Top