ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಆರೋಗ್ಯ, ಇತರೆ

“ಬೇಸಿಗೆಯಲ್ಲಿ ಆರೋಗ್ಯ ರಕ್ಷಣೆಯ ಅವಶ್ಯಕತೆ” ವಿಶೇಷಬರಹ ಸಂಗಮೇಶ್ ಜವಾದಿ

ಆರೋಗ್ಯ ಸಂಗಾತಿ ಸಂಗಮೇಶ್ ಜವಾದಿ “ಬೇಸಿಗೆಯಲ್ಲಿ ಆರೋಗ್ಯ ರಕ್ಷಣೆಯ ಅವಶ್ಯಕತೆ”  ಬೇಸಿಗೆಯು ವರ್ಷದ ಅದ್ಭುತ ಸಮಯವಾಗಿದ್ದು, ಬೆಚ್ಚಗಿನ ಹವಾಮಾನ, ದೀರ್ಘ ಹಗಲು ಸಮಯ ಮತ್ತು ಹೊರಾಂಗಣದಲ್ಲಿ ಆನಂದಿಸಲು ಸಾಕಷ್ಟು ಅವಕಾಶಗಳನ್ನು ತರುತ್ತದೆ. ಆದಾಗ್ಯೂ, ಸೂರ್ಯ, ಶಾಖ ಮತ್ತು ಆರ್ದ್ರತೆಯೊಂದಿಗೆ ಸಂಭಾವ್ಯ ಆರೋಗ್ಯ ಅಪಾಯಗಳು ಬರುತ್ತವೆ, ಅವುಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಅವು ಹಾನಿಕಾರಕವಾಗಬಹುದು. ಬೇಸಿಗೆಗೆ ನಾವು ಸಜ್ಜಾಗುತ್ತಿರುವಾಗ, ನಮ್ಮ ಬಗ್ಗೆ ಕಾಳಜಿ ವಹಿಸುವುದು ಪ್ರಮುಖ ಆದ್ಯತೆಯಾಗಿರಬೇಕು ಎಂಬುದನ್ನು ನೆನಪಿಟ್ಟುಕೊಳ್ಳುವುದು ಅಷ್ಟೇ ಮುಖ್ಯ.ಸೂರ್ಯನು ಸುಡುತ್ತಾ ಬಹುಮುಖಿ ದೇಹದ ತೊಂದರೆಗಳನ್ನು ಎದುರಿಸುತ್ತಿರುವಾಗ, ಬೇಸಿಗೆಯ ತಿಂಗಳುಗಳಲ್ಲಿ ಆರೋಗ್ಯವಾಗಿ ಮತ್ತು ಸುರಕ್ಷಿತವಾಗಿರಲು ಕೆಲವು ಸಲಹೆಗಳು ನೀಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ರಾಜ್ಯಾದ್ಯಂತ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗ ಅದರಲ್ಲಿಯೂ ಬೀದರ ಮತ್ತು ಕಲಬುರ್ಗಿಜಿಲ್ಲೆಯಾದ್ಯಂತ ಪ್ರಸ್ತುತ ತಿಂಗಳಿನಿಂದ ಬಿಸಿಲಿನ ಪ್ರಖರತೆ ಮತ್ತು ತೀವ್ರತೆ ಕಂಡುಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು, ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ವಯೋವೃದ್ದರು ತಮ್ಮ ಆರೋಗ್ಯದ ರಕ್ಷಣೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಬಹಳಷ್ಟು ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಬಿಸಿಲಿನ ಪ್ರಖರತೆ ಮತ್ತು ತೀವ್ರತೆ ಸಂದರ್ಭದಲ್ಲಿ ಸಾರ್ವಜನಿಕರು ಕೈಗೊಳ್ಳಬೇಕಾದ ಕ್ರಮಗಳ ಕುರಿತು. ಸರ್ಕಾರದಿಂದ ಸಾರ್ವಜನಿಕರಿಗೆ ಅನೇಕ ಸಲಹೆಗಳನ್ನು ನೀಡಿರುತ್ತಾರೆ. ಅವುಗಳನ್ನು ಖಂಡಿತವಾಗಿಯೂ ಪಾಲಿಸಬೇಕು. ಬೇಸಿಗೆ ಸಮಯದಲ್ಲಿ ಹೆಚ್ಚು ಹೆಚ್ಚು ನೀರನ್ನು ಕುಡಿಯಬೇಕು. ಮಜ್ಜಿಗೆ ಅಥವಾ ಎಳನೀರು, ಹಣ್ಣಿನ ರಸವನ್ನು ಹೆಚ್ಚಾಗಿ ಸೇವಿಸಬೇಕು. ನೀರಿನ ಅಂಶ ಹೆಚ್ಚಾಗಿರುವ ತರಕಾರಿಗಳು, ಹಣ್ಣುಗಳನ್ನು ಸೇವಿಸುವುದು ಆರೋಗ್ಯ ದೃಷ್ಟಿಯಿಂದ ಉತ್ತಮ. ಸಡಿಲವಾದ ತೆಳು ಬಣ್ಣದ ಹತ್ತಿಯ ಬಟ್ಟೆಯನ್ನು ಕಡ್ಡಾಯವಾಗಿ ಧರಿಸಬೇಕು ಹಾಗೂ ಗಾಳಿಯಾಡುವ ಪಾದರಕ್ಷೆ ಧರಿಸುವುದು ಅಷ್ಟೇ ಸುರಕ್ಷಿತ. ಹೊರಗಡೆ ತೆರಳುವ ವೇಳೆ ತಂಪು ಕನ್ನಡಕ, ಛತ್ರಿ, ಟವೆಲ್ ಅಥವಾ ಬಿಸಿಲಿನಿಂದ ಕಾಪಾಡಿಕೊಳ್ಳುವ ಸಾಮಾನ್ಯ ಕ್ರಮಗಳನ್ನು ಪಾಲಿಸಬೇಕು. ರೇಡಿಯೊ, ದೂರದರ್ಶನ ಹಾಗೂ ದಿನಪತ್ರಿಕೆಗಳಲ್ಲಿ ಬಿಸಿಯಾದ ಗಾಳಿ ಅಥವಾ ಶಾಖ ತರಂಗದ ಬಗ್ಗೆ ನೀಡುವ ಮಾಹಿತಿ ಅನುಸಾರ ದೈನಂದಿನ ಚಟುವಟಿಕೆಗಳನ್ನು ಚಾಚೂ ತಪ್ಪದೆ ಪಾಲಿಸಬೇಕು.ಅಲ್ಲದೆ  ವಿಶೇಷವಾಗಿ ಹೇಳಬೇಕೆಂದರೆ ‎ಬಿಸಿಲಿನಲ್ಲಿ  ಕಾರ್ಯನಿರ್ವಹಿಸುವವರು (ಜಮೀನು ಕೆಲಸ, ರಸ್ತೆ ಕಾಮಗಾರಿ ಮುಂತಾದವು) ಆದಷ್ಟು ಬೆಳಗ್ಗೆ 11 ಗಂಟೆಯ ಒಳಗೆ ಮತ್ತು ಸಂಜೆ 4 ಗಂಟೆ ನಂತರ ಕೈಗೊಳ್ಳುವುದು ಉತ್ತಮ. ಈ ಅವಧಿಯಲ್ಲಿ ಶ್ರಮದಾಯಕ ಕೆಲಸಗಳಿಂದ ವಿಶ್ರಾಂತಿ ಪಡೆಯಬೇಕು. ಬಿಸಿಲಿನಲ್ಲಿ ನಡೆಯುವಾಗ ಕಡ್ಡಾಯವಾಗಿ ಚಪ್ಪಲಿ ಧರಿಸಿ. ಟೀ ಅಥವಾ ಕಾಫಿ, ಹೆಚ್ಚು ಸಕ್ಕರೆ ಅಂಶವನ್ನು ಹೊಂದಿರುವ ಕಾರ್ಬೋನೇಟೆಡ್ ಪಾನೀಯ ಹಾಗೂ ಮದ್ಯಪಾನದಿಂದ ದೂರವಿರುವುದು ಆದಷ್ಟು ಒಳ್ಳೆಯದು. ವ್ಯಕ್ತಿ ತೊದಲು ಮಾತು ಅಥವಾ ಅರ್ಥ ರಹಿತವಾಗಿ ಬಡಬಡಿಸಿದಲ್ಲಿ ಕೂಡಲೇ ನೆರಳಿನ ಪ್ರದೇಶಕ್ಕೆ ಸ್ಥಳಾಂತರಿಸಿ. ಕೆಳಗೆ ಮಲಗಿಸಿ ಕಾಲುಗಳನ್ನು ಮೇಲಕ್ಕೆ ಎತ್ತಿ ವಿಶ್ರಾಂತಿ ಪಡೆಯುವುದು ಸೂಕ್ತ ಮತ್ತು ಅವಶ್ಯಕವಾಗಿದೆ.ಇನ್ನು ಆಹಾರವನ್ನು ತೆಗೆದುಕೊಳ್ಳುವಾಗ, ಯಾವಾಗಲೂ  ಕೈಗಳನ್ನು ಚೆನ್ನಾಗಿ ತೊಳೆಯಿರಿ ಮತ್ತು ಮೂಲಭೂತ ನೈರ್ಮಲ್ಯ ಮುನ್ನೆಚ್ಚರಿಕೆಗಳನ್ನು ಗಮನಿಸಿ. ಕಲುಷಿತ ಆಹಾರ ಮತ್ತು ನೀರಿನಿಂದ ಸೋಂಕು ತಗುಲುವುದನ್ನು ತಪ್ಪುತ್ತದೆ.ಪ್ರಯಾಣಿಸುವಾಗ ಅಥವಾ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಾಗ ಸೂರ್ಯನ ಶಾಖದಿಂದ ಕಡ್ಡಾಯವಾಗಿ ರಕ್ಷಿಸಿಕೊಳ್ಳಲು ಕ್ಯಾಪ್ ಮತ್ತು ಸನ್ ಗ್ಲಾಸ್ ಧರಿಸಿ. ಟೋಪಿ ಮತ್ತು ಸನ್ ಗ್ಲಾಸ್ ಧರಿಸುವುದರಿಂದ ಸೂಕ್ಷ್ಮ ಪ್ರದೇಶಗಳು UV ಕಿರಣಗಳಿಗೆ ಹಾನಿಯಾಗದಂತೆ ರಕ್ಷಿಸುತ್ತದೆ.ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ :ಏನು ತಿನ್ನುತ್ತೀರಿ ಮತ್ತು  ದೇಹವನ್ನು ಹೇಗೆ ನಡೆಸಿಕೊಳ್ಳುತ್ತೀರಿ ಎಂಬುದರ ಆಧಾರದ ಮೇಲೆ ಬೇಸಿಗೆಯು ಮಾನವರ ಶಕ್ತಿಯ ಮಟ್ಟಗಳು, ಚರ್ಮ, ರೋಗನಿರೋಧಕ ಶಕ್ತಿ ಮತ್ತು ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಒಂದು ವೇಳೆಬಿಸಿಗಾಳಿ ಮತ್ತು ಅತಿಯಾದ ತಾಪಮಾನದಿಂದ ಆರೋಗ್ಯ ಸಮಸ್ಯೆಗಳು ಉಂಟಾದಲ್ಲಿ ಸಮೀಪದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಅಥವಾ 108/102 ಕ್ಕೆ ಕರೆ ಮಾಡುವುದು ಸೂಕ್ತ.ಕೊನೆಯದಾಗಿ ಹೇಳುವುದಾದರೆ : ಬೇಸಿಗೆಯಲ್ಲಿ ಆರೋಗ್ಯವಾಗಿರಲು, ದಿನಕ್ಕೆ 4-5 ಲೀಟರ್ ನೀರು ಕುಡಿಯುವುದು, ಕಲ್ಲಂಗಡಿ, ಸೌತೆಕಾಯಿಯಂತಹ ನೀರಿನಂಶವಿರುವ ಆಹಾರ ಸೇವಿಸುವುದು, ಮತ್ತು ಮಧ್ಯಾಹ್ನ 11 ರಿಂದ 4 ರವರೆಗೆ ಬಿಸಿಲಿನಲ್ಲಿ ಓಡಾಡುವುದನ್ನು ಕಡಿಮೆ ಮಾಡುವುದು ಮುಖ್ಯ. ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ, ಸನ್‌ಸ್ಕ್ರೀನ್ ಬಳಸಿ ಮತ್ತು ತಾಜಾ ಆಹಾರ ಸೇವಿಸುವ ಮೂಲಕ ನಿರ್ಜಲೀಕರಣ ಹಾಗೂ ಶಾಖದ ಹೊಡೆತವನ್ನು ತಪ್ಪಿಸಬಹುದು.ವಿಶೇಷವಾಗಿ ದಿನವಿಡೀ ಸಾಕಷ್ಟು ನೀರು, ಎಳನೀರು, ನಿಂಬೆ ಪಾನಕ, ಮತ್ತು ಮಜ್ಜಿಗೆ ಕುಡಿಯುವುದು.ಕಲ್ಲಂಗಡಿ, ಸೌತೆಕಾಯಿ, ಕಿತ್ತಳೆ, ದ್ರಾಕ್ಷಿ, ಮತ್ತು ಮಾವಿನಹಣ್ಣಿನಂತಹ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವನೆ ಮಾಡುವುದು ಆರೋಗ್ಯ ಹಿತದೃಷ್ಟಿಯಿಂದ ಅತ್ಯುತ್ತಮ ಕ್ರಮವಾಗಿದೆ.ಅಲ್ಲದೆ ಹಸಿರು ತರಕಾರಿಗಳು, ಕಲರ್ ಫುಲ್ ಹಣ್ಣುಗಳು ಮತ್ತು ಗಿಡಮೂಲಿಕೆಗಳನ್ನು ಸೇವಿಸುವುದು ಒಳ್ಳೆಯದು. ಇವು ದೇಹವು ಅದರ ಹೈಡ್ರೇಶನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ಸಂಪೂರ್ಣವಾಗಿ ರಕ್ಷಿಸುತ್ತದೆ.ಜೊತೆಗೆ ನಿಂಬೆ ನೀರು ಸಹ  ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ.ಅಂದಹಾಗೆ ಬೇಸಿಗೆಯು ವರ್ಷದ ಅದ್ಭುತ ಸಮಯ, ಆದರೆ ಸಂಭಾವ್ಯ ಆರೋಗ್ಯ ಅಪಾಯಗಳನ್ನು ತಪ್ಪಿಸಲು ನಮ್ಮನ್ನು ನಾವು ನೋಡಿಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ. ಈ ಸಲಹೆಗಳನ್ನು ಅನುಸರಿಸುವ ಮೂಲಕ ಬೇಸಿಗೆಯಲ್ಲಿ ದೊರೆಯಬಹುದಾದ ಎಲ್ಲವನ್ನೂ ಆನಂದಿಸುತ್ತಾ ಆರೋಗ್ಯವಾಗಿ ಮತ್ತು ಸುರಕ್ಷಿತವಾಗಿರಲು ಸಾಧ್ಯವಾಗುತ್ತದೆ. ಬೇಸಿಗೆಯ ತಿಂಗಳುಗಳಲ್ಲಿ ಮಾನವರ ಆರೋಗ್ಯದ ಬಗ್ಗೆ ಯಾವುದೇ ಸಮಸ್ಯೆ ಇದ್ದರೆ ಅಥವಾ ಕಾಳಜಿಗಳಿದ್ದರೆ, ಸಮೀಪದ ಆರೋಗ್ಯ ಕೇಂದ್ರಗಳನ್ನು ದಯವಿಟ್ಟು ಸಂಪರ್ಕಿಸಿ. ಸಂಗಮೇಶ ಎನ್ ಜವಾದಿ

“ಬೇಸಿಗೆಯಲ್ಲಿ ಆರೋಗ್ಯ ರಕ್ಷಣೆಯ ಅವಶ್ಯಕತೆ” ವಿಶೇಷಬರಹ ಸಂಗಮೇಶ್ ಜವಾದಿ Read Post »

ಆರೋಗ್ಯ, ಇತರೆ

ಆರುಬಾ ದ್ವೀಪ ರಾಷ್ಟ್ರದ ಅರಿಯಸ್ ವೈದ್ಯಕೀಯ ವಿಶ್ವ ವಿದ್ಯಾಲಯದ ಸಂಪರ್ಕಾಧಿಕಾರಿಗಳಾಗಿ ಡಾ ಪಟ್ಟಣ ದಂಪತಿಗಳ ನೇಮಕ

ಆರುಬಾ ದ್ವೀಪ ರಾಷ್ಟ್ರದ ಅರಿಯಸ್ ವೈದ್ಯಕೀಯ ವಿಶ್ವ ವಿದ್ಯಾಲಯದ ಸಂಪರ್ಕಾಧಿಕಾರಿಗಳಾಗಿ ಡಾ ಪಟ್ಟಣ ದಂಪತಿಗಳ ನೇಮಕ

ಆರುಬಾ ದ್ವೀಪ ರಾಷ್ಟ್ರದ ಅರಿಯಸ್ ವೈದ್ಯಕೀಯ ವಿಶ್ವ ವಿದ್ಯಾಲಯದ ಸಂಪರ್ಕಾಧಿಕಾರಿಗಳಾಗಿ ಡಾ ಪಟ್ಟಣ ದಂಪತಿಗಳ ನೇಮಕ Read Post »

ಆರೋಗ್ಯ, ಇತರೆ

“ವಿಶ್ವ ರೋಗ ನಿರೋಧಕ ದಿನಾಚರಣೆ – ನವೆಂಬರ್ 10” ಅಂಗವಾಗಿ ಒಂದು ಬರಹ ಹನಿಬಿಂದು ಅವರಿಂದ

“ವಿಶ್ವ ರೋಗ ನಿರೋಧಕ ದಿನಾಚರಣೆ – ನವೆಂಬರ್ 10” ಅಂಗವಾಗಿ ಒಂದು ಬರಹ ಹನಿಬಿಂದು ಅವರಿಂದ
ಲಸಿಕೆ ಕೇವಲ ರೋಗದ ವಿರುದ್ಧದ ಶಸ್ತ್ರವಲ್ಲ, ಅದು ಜೀವದ ಉತ್ಸವ, ಮಾನವೀಯತೆಯ ವಿಜಯಗಾಥೆ.
ಲಸಿಕೆಯು ಹಲವರ ಜೀವದ ಕವಚ, ಭವಿಷ್ಯದ ಆಶಾಕಿರಣ. ಸರಿಯಾದ ಸಮಯಕ್ಕೆ ಬೇಕಾದ ಲಸಿಕೆ ಪಡೆಯೋಣ. ಏಕೆಂದರೆ ಆರೋಗ್ಯವೇ ಭಾಗ್ಯ ಅಲ್ಲವೇ?

“ವಿಶ್ವ ರೋಗ ನಿರೋಧಕ ದಿನಾಚರಣೆ – ನವೆಂಬರ್ 10” ಅಂಗವಾಗಿ ಒಂದು ಬರಹ ಹನಿಬಿಂದು ಅವರಿಂದ Read Post »

ಆರೋಗ್ಯ, ಇತರೆ

ಪರವಿನ ಬಾನು ಯಲಿಗಾರ ಅವರ ಲೇಖನ “ನಮ್ಮ ಹೃದಯ”

ಮಾತನಾಡಲು , ನಿರಾಕರಿಸಲು , ಧಿಕ್ಕರಿಸಲು ಹೃದಯಕ್ಕೆ ಬಾಯಿ ಇಲ್ಲ , ಅದು ಮಾತನಾಡುವುದಿಲ್ಲ , ಬದಲಿಗೆ ಮೌನವಾಗಿ ರೋಧಿಸುತ್ತದೆ ,  ಕೊನೆಗೆ ಒಂದು ದಿನ  ಉಸಿರು ಚೆಲ್ಲುತ್ತದೆ .

ವಿಶೇಷ ಸಂಗಾತಿ

ಪರವಿನ ಬಾನು ಯಲಿಗಾರ

“ನಮ್ಮ ಹೃದಯ”

ಪರವಿನ ಬಾನು ಯಲಿಗಾರ ಅವರ ಲೇಖನ “ನಮ್ಮ ಹೃದಯ” Read Post »

ಆರೋಗ್ಯ, ಇತರೆ

“ವೈದ್ಯೋ ನಾರಾಯಣೋ ಹರಿ — ಮಾನವೀಯತೆಯ ಜೀವಂತ ರೂಪ” ಲಿಖಿತ್ ಹೊನ್ನಾಪುರ

ಆರೋಗ್ಯ ಸಂಗಾತಿ

ಲಿಖಿತ್ ಹೊನ್ನಾಪುರ

“ವೈದ್ಯೋ ನಾರಾಯಣೋ ಹರಿ

ಮಾನವೀಯತೆಯ ಜೀವಂತ ರೂಪ
ಶಾಲಾ ಕಾಲೇಜುಗಳಲ್ಲಿ ಆರೋಗ್ಯ ಶಿಕ್ಷಣ, ಔಷಧಿ ಬಗ್ಗೆ ತಿರುಚಿದ ಅರಿವು, ಆರೋಗ್ಯ ನೈತಿಕತೆ, ಆರೋಗ್ಯ ಬದ್ಧತೆಗಳ ಕುರಿತು ಮಾಹಿತಿ ನೀಡಿದರೆ, ವೈದ್ಯಕೀಯ ಕ್ಷೇತ್ರದಲ್ಲಿ ಸಮಸ್ಯೆಗಳೂ ತಗ್ಗುತ್ತವೆ.

“ವೈದ್ಯೋ ನಾರಾಯಣೋ ಹರಿ — ಮಾನವೀಯತೆಯ ಜೀವಂತ ರೂಪ” ಲಿಖಿತ್ ಹೊನ್ನಾಪುರ Read Post »

ಆರೋಗ್ಯ, ಇತರೆ

“ನನ್ನ ತಾಯಿ ನನ್ನ ಮೊದಲ ವೈದ್ಯೆ” ಪ್ರಭಾವತಿ ಹಿರೇಮಠ ಹುಬ್ಬಳ್ಳಿಅವರ ಲೇಖನ

ವಿಶೇಷ ಸಂಗಾತಿ

ಪ್ರಭಾವತಿ ಹಿರೇಮಠ ಹುಬ್ಬಳ್ಳಿ

“ನನ್ನ ತಾಯಿ ನನ್ನ ಮೊದಲ ವೈದ್ಯೆ”
ಪ್ರಾರಂಭದಲ್ಲಿ ವೈದ್ಯನು *ತಾಯಿ* ಯ ಪಾತ್ರವನ್ನು ವಹಿಸಬೇಕಾಗುತ್ತದೆ. ಅನಂತರ ಜವಾಬ್ದಾರಿಯುತವಾದ  *ತಂದೆ*  ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ.

“ನನ್ನ ತಾಯಿ ನನ್ನ ಮೊದಲ ವೈದ್ಯೆ” ಪ್ರಭಾವತಿ ಹಿರೇಮಠ ಹುಬ್ಬಳ್ಳಿಅವರ ಲೇಖನ Read Post »

ಆರೋಗ್ಯ, ಇತರೆ

“ತಂಬಾಕು ಮುಕ್ತ ಬದುಕು ನಮ್ಮದಾಗಲಿ”ತಂಬಾಕು ರಹಿತದಿನದ ಸಾಂದರ್ಭಿಕ ಲೇಖನ – ಶುಭಲಕ್ಷ್ಮಿ ಆರ್ ನಾಯಕ

ಆರೋಗ್ಯ ಸಂಗಾತಿ

ಶುಭಲಕ್ಷ್ಮಿ ಆರ್ ನಾಯಕ

“ತಂಬಾಕು ಮುಕ್ತ ಬದುಕು ನಮ್ಮದಾಗಲಿ”
ಇದನ್ನು ಸೇವಿಸುವ, ಹಾಗೂ ಅರಿವಿರದೇ ಸೇವಿಸುವ  ಜನರಲ್ಲಿ ಅರಿವು, ಕಾಳಜಿ ಮೂಡಿಸಲು ಮೇ ೩೧ ರ ದಿನವನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತದೆ.

“ತಂಬಾಕು ಮುಕ್ತ ಬದುಕು ನಮ್ಮದಾಗಲಿ”ತಂಬಾಕು ರಹಿತದಿನದ ಸಾಂದರ್ಭಿಕ ಲೇಖನ – ಶುಭಲಕ್ಷ್ಮಿ ಆರ್ ನಾಯಕ Read Post »

ಆರೋಗ್ಯ, ಇತರೆ

“ಅಂತರಾಷ್ಟ್ರೀಯ ಮಹಿಳಾ ಆರೋಗ್ಯ  ದಿನ — ಬನ್ನಿ ಜಾಗೃತಿ ಮೂಡಿಸೋಣ” ಗಾಯತ್ರಿ ಸುಂಕದ್

ಮಹಿಳಾ ಸಂಗಾತಿ

ಗಾಯತ್ರಿ ಸುಂಕದ್

“ಅಂತರಾಷ್ಟ್ರೀಯ ಮಹಿಳಾ ಆರೋಗ್ಯ  ದಿನ —

ಬನ್ನಿ ಜಾಗೃತಿ ಮೂಡಿಸೋಣ”
ಕುಟುಂಬದ ನಿರ್ವಹಣೆಯಲ್ಲಿ ತನ್ನನ್ನು ತೊಡಗಿಸಿ ಕೊಳ್ಳುವ ಮಹಿಳೆ ತನ್ನ ಆರೋಗ್ಯದ  ಬಗ್ಗೆ ಡೊಂಟ್ ಕೇರ್ ಆಗಿ ಬಿಡುತ್ತಾಳೆ

“ಅಂತರಾಷ್ಟ್ರೀಯ ಮಹಿಳಾ ಆರೋಗ್ಯ  ದಿನ — ಬನ್ನಿ ಜಾಗೃತಿ ಮೂಡಿಸೋಣ” ಗಾಯತ್ರಿ ಸುಂಕದ್ Read Post »

ಆರೋಗ್ಯ, ಇತರೆ

“ಮಹಿಳಾ ಆರೋಗ್ಯಾಭಿವೃದ್ಧಿಗಿವೆ ಹಲವು ಯೋಜನೆಗಳು” ಮೇಘ ರಾಮದಾಸ್ ಜಿ ಅವರ ಲೇಖನ

 ಈ ಎಲ್ಲಾ ಯೋಜನೆಗಳ ಸಂಪೂರ್ಣ ಅನುಷ್ಠಾನದಿಂದ ರಾಜ್ಯದಲ್ಲಿ ತಾಯಿ ಹಾಗೂ ಶಿಶುಮರಣವನ್ನು ತಗ್ಗಿಸುವುದು ಸುಲಭವಾಗುತ್ತಿದೆ. ಆದ್ದರಿಂದ ಈ ಮಾಹಿತಿಯನ್ನು ಎಲ್ಲಾ ಹೆಣ್ಣು ಮಕ್ಕಳಿಗೂ ತಿಳಿಸುವ ಮೂಲಕ ಅವರ ಆರೋಗ್ಯದಲ್ಲಿ ಹಾಗೂ ಶಿಶುಗಳ ಆರೋಗ್ಯದಲ್ಲಿಯೂ ಉತ್ತಮ ಅಭಿವೃದ್ಧಿ ತರಲು ಸಾಧ್ಯವಾಗುತ್ತದೆ.
ಮಹಿಳಾ ಸಂಗಾತಿ

ಮೇಘ ರಾಮದಾಸ್ ಜಿ

“ಮಹಿಳಾ ಆರೋಗ್ಯಾಭಿವೃದ್ಧಿಗಿವೆ

ಹಲವು ಯೋಜನೆಗಳು”

“ಮಹಿಳಾ ಆರೋಗ್ಯಾಭಿವೃದ್ಧಿಗಿವೆ ಹಲವು ಯೋಜನೆಗಳು” ಮೇಘ ರಾಮದಾಸ್ ಜಿ ಅವರ ಲೇಖನ Read Post »

ಆರೋಗ್ಯ, ಇತರೆ

‘ಗರ್ಭ ಸಂಸ್ಕಾರ’ವೈದ್ಯಕೀಯ ಲೇಖನ-ಡಾ ಲಕ್ಷ್ಮಿ ಬಿದರಿ ಅವರ ಲೇಖನಿಯಲ್ಲಿ

‘ಗರ್ಭ ಸಂಸ್ಕಾರ’ವೈದ್ಯಕೀಯ ಲೇಖನ-ಡಾ ಲಕ್ಷ್ಮಿ ಬಿದರಿ ಅವರ ಲೇಖನಿಯಲ್ಲಿ
ಇದರ ವ್ಯಕ್ತಿತ್ವವು ಗರ್ಭಾಶಯದಲ್ಲಿ ರೂಪುಗೊಳ್ಳಲು ಪ್ರಾರಂಭಿಸುತ್ತದೆ ಮತ್ತು ಗರ್ಭಾವಸ್ಥೆಯಲ್ಲಿ ತಾಯಿ ಮತ್ತು ಮನಸ್ಸಿನ ಸ್ಥಿತಿಯಿಂದ ಸಕ್ರಿಯವಾಗಿ ಪ್ರಭಾವಿತವಾಗಿರುತ್ತದೆ.

‘ಗರ್ಭ ಸಂಸ್ಕಾರ’ವೈದ್ಯಕೀಯ ಲೇಖನ-ಡಾ ಲಕ್ಷ್ಮಿ ಬಿದರಿ ಅವರ ಲೇಖನಿಯಲ್ಲಿ Read Post »

You cannot copy content of this page

Scroll to Top