ಕಾವ್ಯಯಾನ

ಜಾಗವೊಂದು ಬೇಕಾಗಿದೆ!

ಪ್ರಮೀಳಾ ಎಸ್.ಪಿ.

ಬೇಕಿದೆ ನನಗೊಂದು ಜಾಗ
ಮನೆ ಮಂದಿರ
ಕಟ್ಟಲಲ್ಲ!

ಮಸೀದಿ ಚರ್ಚು ಕಟ್ಟಿ
ವಿವಾದ ಹುಟ್ಟು
ಹಾಕಲಲ್ಲ!

ಬ್ಯಾಂಕು ಬಂಕು
ಮಾಲ್ ಹಾಲ್
ನಿರ್ಮಿಸಲಲ್ಲ!

ಒಂದಿಷ್ಟು ಕುಳಿತು
ಅಳಲು
ಏಕಾಂತ ಸಿಗುವ
ಜಾಗ!

ಮನೆಯಲ್ಲಿ ಮಕ್ಕಳು
ನೋಡಿಯಾರು
ಬೀದಿಯಲಿ ಜನ
ನಕ್ಕಾರು!

ಗುಡಿಯ ಪೂಜಾರಿ
ದುರುಗುಟ್ಟಿಯಾನು
ಕಚೇರಿಯಲ್ಲಿ ನಗೆಗೆ
ಆಹಾರವಾದೇನು!

ಅದಕೆ
ಯಾರೂ ನೋಡದ,
ಯಾರಿಗೂ
ಕಾಣದ
ಏಕಾಂತದ ಜಾಗವೊಂದು ಬೇಕಿದೆ
ಕಣ್ಣೀರ ಕಟ್ಟೆ ಒಡೆಯಲು.

2 thoughts on “ಕಾವ್ಯಯಾನ

  1. ತಾಯಿ ಮಡಿಲು ಬಿಟ್ಟರೆ ಇನ್ನೆಲ್ಲೂ ಸಿಗಲಾರದು ನೀವು ಹುಡುಕುತ್ತಿರುವ ಜಾಗ

Leave a Reply

Back To Top