ಕಾವ್ಯ ಸಂಗಾತಿ
ಡಾ ಡೋ ನಾ ವೆಂಕಟೇಶ
“ಚಂದ”


ಮನಸಾರೆ ಕರೆದರೆ ಬರಬೇಕು ಪ್ರೀತಿ
ರೀತಿಗಳ ಮರೆತರೆ ಅಂಜದಿರ ಬೇಕು
ನೀನು ನಾನೇ ಆಗಿ
ಮನಸು ನಿನ್ನದಾಗಿ ಒಲವು
ನಗುವ ಹೂ ಗುಚ್ಛವಾಗ ಬೇಕು
ಬೆಳಗಿನ ರವಿಯಾಗ ಬೇಕು
ರಾತ್ರಿಯ ಹುಣ್ಣಿಮೆಯ
ಬೆಳಕಾಗ ಬೇಕು
ಏ ಜೀವ, ನೀನಿರ ಬೇಕು.
ತುಡಿತವಾಗಿ ಮಿಡಿಯ ಬೇಕು
ಹೃದಯದ ಧಾರೆಯಾಗ ಬೇಕು
ಚೆಂದವಾಗಿ ಧುಮ್ಮಿಕ್ಕ ಬೇಕು
ಅನಂತ ಉಸಿರಾಗಿರ ಬೇಕು
ಪ್ರೀತಿ ನಲಿಯುತ್ತಿರ ಬೇಕು!
ಡಾ ಡೋ ನಾ ವೆಂಕಟೇಶ



