ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬೇಕು ಬೇಡಿಕೆಗಳ ನಡುವೆ ಸಾಗಿದೆ ಜೀವನ
ಅರಿಯದ ಮನಗಳ ನಡುವೆ ಮೌನದ ತಲ್ಲಣ
ಕೋಪ ಮುನಿಸುಗಳ ನಡುವೆ ಜೀವನ ಪಯಣ
ಮತ್ತೇರಿದ ಗುಂಗಿನಲ್ಲಿ ಕೆಲವರ ಮಾತಿನ ಔತಣ
ಇರಲು ನಿನ್ನಲ್ಲಿ ತಾಳ್ಮೆಯ ಗುಣ ಗೆಲ್ಲುವೆ ನೀ ಎಲ್ಲರ ಮನ.
ಅಪರೂಪದ ಮಾತಿನ ಬಗೆಗಳ ಆಲಿಸುವ ತಾಳ್ಮೆಯ ಸೌಜನ್ಯ
ಸ್ವಾರ್ಥದ ಬೇಗೆಯಲ್ಲಿ ಬಂಧಗಳ ಬಿರುಕಿನ ಕಂಪನ .
ಆಡಿದವರ ಮಾತಿಗೆ ಹಾಕಬೇಕಿದೆ ವಿರಾಮ.
ನಿನ್ನ ನಡೆ-ನುಡಿಯಲ್ಲಿ ಇರಲಿ ಸದಾ ಚೇತನ
ಭಗವಂತನ ದಯೆ ಇರಲು ನಿನ್ನ ಮೇಲೆ ಸದಾ ಗೆಲುವಿನ ಪಯಣ.


About The Author

Leave a Reply

You cannot copy content of this page

Scroll to Top