ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಿನ್ನೆಯದೆಲ್ಲವ ಮರೆತು
ಬರುವ ನಾಳೆಗೆ ನೀನು
ನಕ್ಕು ಹಿಡಿದು ಬಿಡು ನನ್ನ ಕೈ ಇಂದು

ಸತ್ತವರು ಸೋತಿಲ್ಲ
ಬದುಕು ಮೊಟಕಾಗಿಲ್ಲ
ಮತ್ತೆ ಉಸಿರಿಸಬೇಕು ಸತ್ಯ ನುಡಿಯು

ಒಲವ ತವರಿನ ಗೆಲುವು
ಸಂತೃಪಿ ಸಿರಿಗರಿಯ
ಬದುಕುವುದೇ ನೈಜ ಚೆಲುವು

ಕಡಲ ಪ್ರೀತಿಯ ತಂದು
ಒಡಲ ತುಂಬುವ ಸ್ನೇಹ
ಜಡ ಮರೆತು ಜಂಗಮಕೆ ಹೆಜ್ಜೆ ಹಾಕು

ತಿರುಗುವ ಭೂಮಿಯಲಿ
ಬಸವಳಿದ ಜೀವನವು
ಕೂಡಿ ಸಾಗುವ ನಾನು ನೀನು

ಜೀವ ನೆಲೆ ಸೆಲೆಯು
ಮಹಾ ಕಾವ್ಯ ಸಂಪುಟವು
ಓದುತ್ತಾ ನಡೆಯುವುದು ನಮ್ಮ ಧರ್ಮ

ಕಳೆದದ್ದು.ನೆನೆಯುತ್ತಾ
ನಿತ್ಯ ಅಳುವುದು ಬಿಟ್ಟು
ನಿನ್ನರಸಿ ಬರುವುದನು ಅಪ್ಪಿಕೋ

ಅತ್ತು ಬಿಡು ದುಃಖ ತೊಲಗಲಿ
ನಗೆ ಮಲ್ಲಿಗೆ ಅರಳಿ ನಿಲ್ಲಲಿ
ನಾವು ಸಾಗುವ ದಾರಿ ಹಲವು ವರುಷ


About The Author

14 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ “ನಾವು ಸಾಗುವ ದಾರಿ””

  1. ನಾವು ಸಾಗುವ ದಾರಿಯ ತಿಳುವಳಿಕೆಯ ಹೂರಣ ಎಲ್ಲರ ಮನ ಮುಟ್ಟುವಂತಿದೆ

    ಸುತೇಜ

  2. “ನಾವು ಸಾಗುವ ದಾರಿ ” ಕವನ ದಲ್ಲಿ ಹಿಂದಿನದನ್ನು ಮರೆತು ಮುಂದೆ ಸಾಗುವಾದರತ್ತ ಗಮನ ಕೊಡಬೇಕು ಎನ್ನುವದು ತುಂಬಾ ಸೊಗಸಾಗಿ ಮೂಡಿ ಬಂದಿದೆ.

  3. ‘ನನ ಕೈಯ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ
    ನಾನೂನು ನಕ್ಕೇನ’ ಬೇಂದ್ರೆ ನೆನಪಾದರು.
    ಆದರೆ ಅದು ಅಷ್ಟು ಸರಳವೇ ?
    ಆಶಾವಾದಿತ್ದದ ಕವನ ಚೆನ್ನಾಗಿದೆ. ಆದರೆ ಭಾವುಕ ಮನಸ್ಸಿಗೆ ಅನುಸರಿಸಲು ಕಷ್ಟವಾಗುತ್ತದೆ.

  4. ಬದುಕಲ್ಲಿ ಕಷ್ಟ, ನೋವು, ದುಃಖ ಸಹಜ… ಮರೆತು ನಗುತ ಮುಂದೆ ಸಾಗುವುದು ಒಳಿತು ಎನ್ನುವ ಭಾವ ತುಂಬಿದ ಕವನ ಅರ್ಥಪೂರ್ಣವಾಗಿದೆ ಸರ್

    ಜಯಶ್ರೀ ಎಸ್ ಪಾಟೀಲ

Leave a Reply

You cannot copy content of this page

Scroll to Top