ಕಾವ್ಯ ಸಂಗಾತಿ
ಟಿ.ದಾದಾಪೀರ್ ತರೀಕೆರೆ
ʼಹೃದಯ ಸ್ಥಂಭನ..ʼ

ಹೃದಯಗಳು ಏಕೊ
ಮೌನಕ್ಕೆ ಜಾರುತ್ತಿವೆ
ಮಿಡಿಯುವ ಲಯ ಮರೆಯುತ್ತಿವೆ
ಬೆಚ್ಚಿಬೀಳಿಸುವ ಸುದ್ದಿಗಳು
ಹತ್ತು , ಇಪ್ಪತ್ತು, ಮೂವತ್ತು ಹರೆಯ ದಾಟೋದೆ ಕಷ್ಟವಾಗಿದೆ
ಮನುಷ್ಯನ ಆಯಸ್ಸು
ಅಂಗಮಧ೯ನ, ಯೋಗದ ಭಂಗಿಗಳು ,
ಫಿಟ್ನೇಸ್ ಟ್ರೈನಿಂಗ್ ಗಳು
ಸೌಂದರ್ಯ ಕಾಪಿಟ್ಟು
ಫಿಟ್ನೆಸ್ ಉಳಿಸಿದರು
ಜೀವ ಮಾತ್ರ ಉಳಿಸುತ್ತಿಲ್ಲ
ನಿನ್ನೆ ನೋಡಿದ ನೋಟವೆ ಕೊನೆಯೆ .?
ಈಗ ಆಡಿದ ಮಾತು ಕೊನೆ ಮಾತೆ…?
ನಾಳೆಗಳು ಕನಸುಗಳೆಂಬುದೆಲ್ಲ ಸುಳ್ಳೆ ?
ಕ್ರೌರ್ಯ, ವಂಚನೆ,
ಅಹಂಮಿನ ಅಲಂಕಾರಕ್ಕೆ
ಹೃದಯ ಮೌನ ಬಯಸಿರಬೇಕು
ಪವಿತ್ರ ಹೃದಯ, ಹೃದಯ ದೇಗುಲ,
ಹೃದಯ ತುಂಬಿ ಬರುತ್ತಿದ್ದ
ಭಾವಗಳು
ಈಗ ಹೊಸ ಸಂಶೋಧನೆಗೆ ತೆರೆದುಕೊಂಡಿವೆ
ಹೃದಯ ಸತ್ತು ಬದುಕ ಬಹುದಿತ್ತು
ಸ್ಪಂದನೆ ಯಿಲ್ಲದೆ ಅ
ಆದರೆ ಈಗ…….?
ಟಿ.ದಾದಾಪೀರ್ ತರೀಕೆರೆ

.
