ಅಕ್ಕರೆಯ ಕವಿ ಎಚ್ಚೆಸ್ವಿ ಕುರಿತಾದ ಆಪ್ತವಾದ ಬರಹ ಶಾರದಾಜೈರಾಂ ಬಿ. ಅವರಿಂದ

ಅಕ್ಷರಲೋಕದ ಅಕ್ಕರೆಯ ಕವಿ ಹೆಚ್.ಎಸ್.ವೆಂಕಟೇಶ್ ಮೂರ್ತಿ ಅವರು ನುಡಿದಂತೆ ನಡೆಯುವುದು, ಬರೆದಂತೆ ಬದುಕುವುದು ಕಷ್ಟದ ಕೆಲಸ ಆದರೆ*ನಡೆನುಡಿ* ಬದುಕು ಬರಹ ಈ ಎಲ್ಲದರಲ್ಲೂ ಹೊಂದಾಣಿಕೆಯನ್ನು ಮೈಗೂಡಿಸಿಕೊಂಡು ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಕೆಲವೇ ಕೆಲವು ಸರಳ,ಸಜ್ಜನ,ಕವಿ ಪುಂಗವರಲ್ಲಿ ಡಾ.ಹೆಚ್.ಎಸ್.ವೆಂಕಟೇಶ್ ಮೂರ್ತಿ ಅವರು ಅಗ್ರಗಣ್ಯರು.

ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಹೆಚ್ಚ್ ಸ್ವಿ ಅವರು ಕೆಲಸ ಮಾಡದ ಕ್ಷೇತ್ರವೇ ಇಲ್ಲ ಕಥೆ,ಕವನ, ಕಾದಂಬರಿ, ವಿಮರ್ಶೆ,ನಾಟಕ, ಮಕ್ಕಳ ಸಾಹಿತ್ಯ,ಅನುವಾದ, ಹೀಗೆ ಎಲ್ಲ ಪ್ರಕಾರಗಳಲ್ಲೂ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿ ಕನ್ನಡ ನಾಡಿನ ಜನಮನವನ್ನು ಸೂರೆಗೊಂಡವರು ಎಚ್ಚೆಸ್ವಿ.
ಅವರ ಸಾಹಿತ್ಯ ಕೃಷಿ ಮೇರು ಪರ್ವತದಂತೆ ಅಕ್ಷರಗಳಲ್ಲಿ ಹಿಡಿದಿಡಲಾಗದು ಆದರೂ ಅನ್ನಿಸಿದ್ದು ಹೇಳುವ ಚಿಕ್ಕ ಪ್ರಯತ್ನ ನನ್ನದು.
ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ಅಪೂರ್ವ ಮತ್ತು ಅನನ್ಯತೆ ಯು ಸಮನ್ವಯ ಕವಿ ಅವರು.
ಎಚ್ಚೆಸ್ವಿ ಅವರು ಹುಟ್ಟಿದ್ದು ಜೂನ್ 23,1944ರಲ್ಲಿ,ಈಗಿನ ದಾವಣಗೆರೆ ಜಿಲ್ಲೆಯ ಹೋದಿಗೆರೆ ಎಂಬ ಪುಟ್ಟ ಹಳ್ಳಿಯಲ್ಲಿ.ಹುಟ್ಟುತ್ತಲೇ ತನ್ನ ತಂದೆಯನ್ನು ಕಳೆದುಕೊಂಡ ಇವರು ಬೆಳೆದದ್ದು ಕಡುಬಡತನದಲ್ಲಿ.ಇವರಿಗೆ ಆಸರೆಯಾಗಿ ನಿಂತವರು ಇವರ ತಾಯಿ ಮತ್ತು ಅಜ್ಜಿ.ಎಸ್ಸೆಸ್ಸೆಲ್ಸಿಯ ನಂತರ ಡಿಪ್ಲೊಮಾ ಪಡೆದ ಮೂರ್ತಿ ಅವರು ಮಲ್ಲಾಡಿಹಳ್ಳಿಯ ಶಾಲೆಯಲ್ಲಿ ಮೇಷ್ಟ್ರಾಗಿ ನೌಕರಿ ಹಿಡಿದರು,22ನೇ ವಯಸ್ಸಿನಲ್ಲಿ 17ವರ್ಷದ ರಾಜಲಕ್ಷ್ಮಿಯ ವರಿಸಿದರು.


ಎಚ್ಚೆಸ್ವಿ ಅವರು ಹೈಸ್ಕೂಲ್ ನಲ್ಲಿ ಡ್ರಾಯಿಂಗ್ ಟೀಚರ್ ಆಗಿ ಕೆಲಸ ಮಾಡುತ್ತಿರುವಾಗ ಡಾ.ಎನ್.ಎಸ್.ಲಕ್ಷ್ಮಿನಾರಾಯಣ ಭಟ್ ಅವರ ಇಚ್ಛೆಯಂತೆ ಕನ್ನಡ ಎಂ.ಎ.ಗೆ ಅರ್ಜಿ ಹಾಕುತ್ತಾರೆ,ಆಗ ವಿಭಾಗದ ಮುಖ್ಯಸ್ಥರಾಗಿ ಜಿ.ಎಸ್.ಶಿವರುದ್ರಪ್ಪನವರಿರುತ್ತಾರೆ , ಇವರು ಕನ್ನಡ ಮೇಜರ್ ಆಗಿ ಓದಿರುವುದಿಲ್ಲ ಆದರೂ ನೋಡಿ ಸರ್ ಅವರ ಪರಿವೃತ್ತ ಪುಸ್ತಕ ಕನ್ನಡದಲ್ಲಿ ಚೆನ್ನಾಗಿ ಬರೆಯುತ್ತಾರೆ ಎಂದು ತೋರಿಸಿ ಅವರಿಗೆ ಸೀಟು ಲಭಿಸುವಲ್ಲಿ ಒಂದು ಪ್ರಯತ್ನ ಮಾಡುವರು.ಮದುವೆ , ಮೂರು ಮಕ್ಕಳ ನಂತರ ಕನ್ನಡ ಎಂ.ಎ.ಗೆ ಸೇರಿದ್ದು ಎಚ್ಚೆಸ್ವಿ ಅವರು ಇಲ್ಲಿ ಒಂದು ಗಮನಿಸಬಹುದಾದ ಸಂಗತಿ ಕಲಿಯುವ ಆಸಕ್ತಿ ಇದ್ದಾಗ ಯಾವುದೇ ಕಷ್ಟಗಳು, ವಯಸ್ಸು,ಹಣ ಏನೇ ಸಮಸ್ಯೆಗಳಿದ್ದರು ತಡೆಯಾಗದು ಮುಖ್ಯವಾಗಿ ಪ್ರಬಲ ಇಚ್ಛಾಶಕ್ತಿ ಇದ್ದರೆ ಎಲ್ಲವೂ ಸಾಧ್ಯ ಎಂಬುದನ್ನು ನಾವು ಈ ಸಂಗತಿಯಿಂದ ಅರಿಯಬಹುದು.
ಡಾ.ಹೆಚ್.ಎಸ್.ವೆಂಕಟೇಶ್ ಮೂರ್ತಿ ಅವರು 85ನೇ ಸಾಹಿತ್ಯ ಸಮ್ಮೇಳನದ ಸವಾ೯ಧ್ಯಕ್ಷರಾಗಿದ್ದರು.
ಇಷ್ಟೆಲ್ಲಾ ಸಾಧಿಸಿದರು ಅವರು ಹೀಗೆ ಹೇಳುತ್ತಾರೆ ಬೇರೆಯವರಿಗೆ ಸಂದೇಶ ಕೊಡುವಷ್ಟು ನಾನು ದೊಡ್ಡವನು ನಾನಲ್ಲ, ಆದರೆ ನನಗೆ ನಾನು ಹೇಳಿಕೊಳ್ಳುವ ಕೆಲವು ಮಾತುಗಳೆಂದರೆ ನಾನು ಒಬ್ಬ ಲೇಖಕ,ಬರೆಯದೇ ಇರಲಾರೆನಾಗಿ ಬರೆಯುತ್ತಲೇ ಇರಬೇಕು.ಹಾಗೇ ಬರೆಯುವಾಗ ಸಾಹಿತ್ಯ ಧರ್ಮಕ್ಕೆ ಅಪಚಾರವಾಗದಂತೆ ಬರೆಯಬೇಕು.ನನ್ನ ಸೋಕ್ಷ ಮೋಕ್ಷ ಸಾಹಿತ್ಯದ ಮೂಲಕವೇ ಆಗತಕ್ಕದ್ದು.ನಾನು ಮಾಡಬೇಕಾದ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ, ನೂರಕ್ಕೆ ನೂರು ಮನಸ್ಸು ಹಾಕಿ ಶ್ರದ್ಧೆಯಿಂದ ಮಾಡತಕ್ಕದ್ದು,ಅದೇ ನನ್ನ ಸಮಾಜೋರಾಜಕೀಯ ಮತ್ತು ಸಾಹಿತ್ಯಿಕ ಬದ್ದತೆ.ನಾನು ಯಾರೊಂದಿಗೆ ಬರೆಯುತ್ತಿರುವೆನೋ ಅವರಲ್ಲಿ, ಯಾರಿಗೆ ಬರೆಯುತ್ತಿರುವೆನೋ ಅವರಲ್ಲಿ, ಏನು ಬರೆಯುತ್ತಿರುವೆನೋ ಅದರಲ್ಲಿ ಪ್ರೀತಿ ಕಳೆದುಕೊ‌ಳ್ಳದ ತನ್ಮಯತೆ ಸಾಧಿಸಿದರೆ ಸಾಕು ಎನ್ನಿಸುತ್ತದೆ..ಎಂದಿದ್ದರು. ಎಂತಹ ಮಾರ್ಮಿಕ ಸಾತ್ವಿಕ ನುಡಿಗಳಲ್ಲವೇ?
ಕವಿಯಾಗಲಿ,ಕಲಾವಿದನಾಗಿ ಜನಪ್ರಿಯನಾಗಕೂಡದು.ಜನಪ್ರಿಯತೆಯೆಂಬುದೊಂದು ಅಗ್ಗದ ಆಸೆ ಅನ್ನುವುದನ್ನು ಘೋಷಿಸಿಕೊಂಡೆ ಕಾವ್ಯ ಬರೆದವರು ನವ್ಯರು.ನಾವು ಕಾವ್ಯ ಬರೆಯುವುದು ಸಂತೆಯಲ್ಲಿ ನಿಂತು ಓದುವುದಕ್ಕಲ್ಲ, ಬಸ್ಸು,ರೈಲು ಪ್ರಯಾಣಗಳ ಆಕಳಿಕೆಗಳನ್ನು ನಿವಾರಿಸಿಕೊಳ್ಳುವುದಕ್ಕಲ್ಲ, ವೇದಿಕೆಗಳಲ್ಲಿ ಚಂದ ಚೆಂದವಾಗಿ ಹಾಡಿ ಚಪ್ಪಾಳೆ ತಟ್ಟಿಸಿಕೊಳ್ಳುವುದಕ್ಕಲ್ಲ ಭಾಷೆಯ ಜೊತೆ ಒಡನಾಡಿ ಕೈವಶ ಮಾಡಿಕೊಂಡು ಬರೆದಿರುವುದು ಕಷ್ಟಪಟ್ಟು ಓದಿ ಓದಿ ಎನ್ನುತ್ತಿದ್ದರು.
ಇನ್ನು ಅವರ ಕೊಟ್ರೇಶಿ ಕನಸು, ಚಿನ್ನಾರಿಮುತ್ತದ ಯಶಸ್ಸು ಎಲ್ಲರಿಗೂ ತಿಳಿದಿದೆ.
ಶಿಶು ಸಾಹಿತ್ಯ ಅನುಭಾವಿಸಿದ್ದೆ ಬರೆದರು ಬಾಳೊಂದು ಭಾವಗೀತೆ ಚಿತ್ರದಲ್ಲಿ ಅವರ ಕವಿತೆ ಹಂಸಲೇಖ ಅವರ ಸಂಗೀತ ನಿರ್ದೇಶನದಲ್ಲಿ, ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ


*ಕಾಮನ ಬಿಲ್ಲಿನ ಮೇಲೆ
ತೂಗುತಾ ಸಾಗುವ ರೈಲಿದೆ
ಬೆಳ್ಳಿಯ ದೀಪದ ಕಂಬ
ಚಂದಕ್ಕಿ ಮಾಮನ ಕೈಲಿದೆ*

ಅತ್ಯಂತ ಸುಂದರವಾದ ಶಿಶು ಗೀತೆಯಿದು.ಹಾಗೇಯೇ ಚಿನ್ನಾರಿಮುತ್ತ ದ
ರೆಕ್ಕೆ ಇದ್ದರೆ ಸಾಕೆ
ಹಕ್ಕಿಗೆ ಬೇಕು ಬಾನು
ಬಯಲಲಿ ತೇಲುತಾ ತಾನು
ಮ್ಯಾಲೇ ಹಾರೋಕೆ

ಪ್ರಕೃತಿಯೊಳಗೆ ಹೆಕ್ಕಿ,ಚಿಗರೆ, ಹೂವು, ಗಾಳಿ, ದುಂಬಿ, ನೀರು,ತೊರೆ,ಮೋಡ, ಮಳೆ, ಮಣ್ಣು ಒಂದು ಮತ್ತೋಂದನ್ನು ಅವಲಂಬಿಸಿಯೇ ಬದುಕಬೇಕಾದ ಅನಿವಾರ್ಯತೆಯಿದೆ ನಿಸರ್ಗದ ಸಹಬಾಳ್ವೆ ಪರಿಯನ್ನು ವರ್ಣಿಸಿದ್ದಾರೆ.
ಇನ್ನು ಅಮೆರಿಕ ಅಮೆರಿಕ ಚಿತ್ರದ


ಬಾನಲ್ಲಿ ಓಡೋ ಮೇಘಾ
ಗಿರಿಗೋ ನಿಂತಲ್ಲಿ ಯೋಗ
ಎಲ್ಲುಂಟು?ಒಲವಿರದ ಜಾಗ
ಬಾ ಬಾ ಗೆಳೆಯ ಬೇಗ..
ಕಿರಿಕ್ ಪಾರ್ಟಿ ಚಿತ್ರದ ಗೀತೆ
*ತೂಗು ಮಂಚದಲ್ಲಿ ಕೂತು
ಮೇಘ ಶ್ಯಾಮ ರಾಧೆಗಾತು
ಆಡುತಿಹನು ಏನೋ ಮಾತು*


ರಾಧೇ ಕೃಷ್ಣರ ಆಪ್ತತೆ, ಆತ್ಮೀಯತೆ, ಸ್ನೇಹ, ನಿಷ್ಕಲ್ಮಶ ಪ್ರೇಮ, ಪರಿಶುದ್ಧ ಕೋಮಲ ಸಹಜ ಭಾವನೆಗಳು ಗಾಡವಾಗಿ ಮೈದಾಳಿವೆ.
ಅಮ್ಮ ನಾನು ದೇವರಾಣೆ ಬೆಣ್ಣೆ ಕಂದಿಲ್ಲಮ್ಮ,ಎಲ್ಲ ಸೇರಿ ನನ್ನ ಬಾಯಿಗೆ ಬೆಣ್ಣೆ ಮೆತ್ತಿದರಮ್ಮ..
ಆ ತುಂಟ ಕೃಷ್ಣನ ಬಾಲ್ಯದ ಸೊಬಗ ಕಟ್ಟಿಕೊಡುತ್ತಾರೆ.
ಹುಚ್ಚುಖೋಡಿ ಮನಸ್ಸು..ಅದು ಹದಿನಾರರ ವಯಸ್ಸು..

ಕನ್ನಡಿಮುಂದಷ್ಟು ಹೊತ್ತು ಬರೆಯದಿರುವ ಕವನ..ಈ ಗೀತೆಯಂತೂ ನಮ್ಮೆಲ್ಲರ ಬಾಲ್ಯ, ಯೌವನ, ಈಗಲೂ ಗುನುಗುವ ಗೀತೆಯಾಗಿದೆ.
ಅವರು ಅನುಭವಿಸಿದ್ದು, ಕಂಡಿದ್ದು ಬರೆದರು ಯಾವ ಪ್ರಚಾರ, ಪ್ರಶಸ್ತಿಗಳ ಲಾಭಿ,ವಶೀಲಿಗೆ ಹೋಗಲಿಲ್ಲ, ಒಬ್ಬರಿಗೆ ಕೇಡು ಬಯಸದ ಕಾಡುವಂತ ಗೀತೆಗಳ ಬರೆದರು ಅವರನ್ನು ಬಿಡದೆ ಕೆಲವರು ಕಾಲೆಳೆದರು ಕ್ಯಾಸೆಟ್ ಕವಿಗಳೆಂದು ಆದರೆ ಕ್ಯಾಸೆಟ್ ಕವಿಗಳೇ ಅಸೆಟ್ ಆದರು ಎಲ್ಲರ ಮನ, ಮನೆಗಳಲ್ಲಿ ರಚನಾಕಾರರು ಗೊತ್ತಿಲ್ಲದಿದ್ದರು ಅವರ ಗೀತೆಗಳು ಚಿರಪರಿಚಿತ,ಕಾಲೆಳೆದವರು ಕತ್ತಲೆಗೆ ಸರಿದರು.
ಲೋಕದ ಕಣ್ಣಿಗೆ ರಾಧೇಯು ಕೂಡಾ
ಎಲ್ಲರಂತೆ ಒಂದು ಹೆಣ್ಣು.‌‌ಈ ಗೀತೆ

ಒವ೯ಪ್ರೇಮಿಯ ಪ್ರಾಮಾಣಿಕತೆ, ಪರಿಶುದ್ಧ, ಅಂತರ್ಗತ ಭಾವಗಳನ್ನು ಹೊರಹಾಕಿಸುತ್ತಾರೆ.
ಮಗುವಿನಿಂದ ಮುದುಕರವರೆಗೂ ಎಲ್ಲರಿಗೂ ಪರಮಾಪ್ತ ಗೆಳೆಯ, ದಾರಿದೀಪ,ಕುಸಿದಾಗ ಮೇಲೇತ್ತುವ ಗೆಳೆಯನಂತೆ, ದುಃಖಕ್ಕೆ ಹೆಗಲಾಗುವ  ಸ್ನೇಹಿತನಂತೆ,ಬಿಕ್ಕಳಿಸುವಾಗ ತಬ್ಬಿ ಸಂತೈಸುವ ತಾಯಿಯಂತೆ,ಬದುಕಿನ ಬೇಗೆಗೆ ತಂಪೆರೆವ ಹೊಂಗೆಯಂತೆ, ಪ್ರೇಮಿಗಳಿಗೆ ರಸನಿಮಿಷಗಳ ಸವಿ ಹೆಚ್ಚಿಸುವ ರಸಕಾವ್ಯಗಳಂತೆ, ಹತಾಶೆ ಗೆ ಭರವಸೆ ತುಂಬುವ ಸಹದಶಿ೯ , ಕೆಲವೊಮ್ಮೆ ತತ್ವ ಸಾರುವ ಸಾಲುಗಳ ಸಂತನಂತೆ ಎನ್ನಿಸಿ ಬಿಡುವರು.
ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಈ ಗೀತೆಯಲ್ಲಿ ಜೀವನದ ತತ್ವ ಸತ್ಯವಿದೆ ಎಲ್ಲ ನೀಡುವ ಪ್ರಕೃತಿ ತಿಳಿಯದಂತಿರುವಾಗ ನೀನೇಕೆ ಬೀಗುವೆ ಬಾಗಿ ನಡೆ ಎನ್ನುವ ಭಾವವಿದೆ ಭಕ್ತಿ ಮುಕ್ತಿಯಿದೆ.
ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರು ಅರಿತೆವೇನು ನಾವು ನಮ್ಮ ಅಂತರಾಳವ ಗೀತೆಯಲ್ಲಿ ದಾಂಪತ್ಯದ ಸಿಹಿಕಹಿಗಳ ಸತ್ಯದ ಅನಾವರಣವಿದೆ, ನಿನ್ನನು ನೀನು ಅರಿ ಮೊದಲು ಎನ್ನುವ ತಾತ್ಪರ್ಯವಿದೆ.
ನಾಯಿ ತಲೆ ಮೇಲಿನ ಬುತ್ತಿ ಸಂಸಾರ ಬಲು ದುಸ್ಸಾರ ಎನ್ನುವೆಡೆ ನಾಯಿ ತಲೆ ಮೇಲೆ ಏನು ಇಟ್ಟರು ನಿಲ್ಲದು ಹಾಗೇ ಈ ಜೀವನ ಎನ್ನುವ ಮಮ೯ವಿದೆ.
ಮಣ್ಣು ತಿಂದು ಸಿಹಿ ಹಣ್ಣು ಕೊಡುವ ಮರ…ನೀಡಿ ನೀಡಿ ಮುಕ್ತ ಮುಕ್ತ
ಇರುಳ ವಿರುಧ್ಧ ಬೆಳಕಿನ ಯುದ್ದ
ಕೊನೆಯಿಲ್ಲದ ಕಾದಾಟ
ತಡೆಯೇ ಇಲ್ಲದೆ ನಡೆಯಲೇ ಬೇಕು

ಸೋಲಿಲ್ಲದ ಹೋರಾಟ.‌‌ಈ ಸಾಲಿನಂತೆ ಮೂತ್ರಕೋಶದ ಕ್ಯಾನ್ಸರ್ ವಿರುದ್ಧ ಬದುಕಿನ ಕೊನೆಯವರೆಗೂ ಹೋರಾಡಿದರು ಅಂತಾ ಸಜ್ಜನ ವ್ಯಕ್ತಿಗೆ ಈ ಕಾಯಿಲೆ ನರಳಿಸಿದರು ಅವರು ಧೃತಿಗೆಡದೆ ಬದುಕಿದರು.
ಉತ್ತರಾಯಣ,ಅವರ ಪತ್ನಿ ತೀರಿದ ನಂತರ ಬರೆದದ್ದು ಬರೀ ವಿಷಾದವೇ ತುಂಬಿದ ಕೃತಿ.ಬುದ್ದಚರಣ ಹತ್ತು ವರ್ಷ ಸಮಯ ತೆಗೆದುಕೊಂಡ ಕೃತಿ.


ಧೃಡವಾಗು ನೋವಿಂದ ನನ್ನ ಬಾಳೇ
ಮಡಿಕೆ ಬೆಂದು ದೃಡವಾದಂತೆ.‌

ಸಂಜೆಯಾಗುತ್ತಿದೆ ನಡೆ ನಡೆ ಗೆಳೆಯ ಎನ್ನುತಾ ಹೊರಟೇ ಬಿಟ್ಟರು..‌
ಕೊನೆಯ ದಿನಗಳಲ್ಲಿ ಅವರ ಸಾಹಿತ್ಯದ ಬಗ್ಗೆ ನಾನು ಅವರೊಂದಿಗೆ ಸಂಭಾಷಿಸಿದ್ದು ನನ್ನ ಸುದೈವ ಅವರ ಪಾದಾರಾವಿಂದಗಳಿಗೆ ಅರ್ಪಿತವಿದು.


Leave a Reply

Back To Top