
ಅಂಕಣ ಸಂಗಾತಿ
ಮನದ ಮಾತುಗಳು
ಜ್ಯೋತಿ ಡಿ ಬೊಮ್ಮಾ
ಬದುಕಲು ಬೇಕು
ಸ್ವಾವಲಂಬಿತನ
ಎಂಬ ಸಂಜೀವಿನಿ.

ಬದುಕಲು ಬೇಕು ಸ್ವಾವಲಂಬಿತನ ಎಂಬ ಸಂಜೀವಿನಿ.
ಜೂನ್ ತಿಂಗಳಿಗಿ ನಾನು ಪ್ರತಿ ವರ್ಷ ಬಾಳ ಕಾತರದಿಂದ ಕಾಯತಿರತಿನಿ. ಎಂಟು ತಿಂಗಳು ಬರಿ ಬಿಸಲು ಧಗಿ ಇರೋ ನಮ್ಮ ಕಡಿ ಮಳಿ ಬಂದ್ರ ಏನೋ ಒಂದಿಷ್ಟು ಸಂಭ್ರಮ. ಈ ಅನುಭವ ನಮ್ಮಂಥ ಭಾವನಾ ಜೀವಿಗಳಿಗಿ ಇರಬಹುದು. ಇಲ್ಲಂದ್ರ ಬಾಳ ಜನ ಮಳಿ ಅಂದ್ರ ಮೂಗು ಮುರಿತಾರ .ಒಂದೆರಡು ದಿನಕ್ಕ ಸಾಕಪ್ಪ ಈ ಮಳಿ ಸಹವಾಸ ಅನ್ನೊಹಂಗ ಬೇಜಾರ ಆಗತಾರ. ಸದಾ ಒಣಗಿದ ಪ್ರದೇಶದ ಕಡಿ ಇರೋ ನಮಗ ಕೆಸರು ಅಂದ್ರೆ ಇರುಸು ಮುರಸು.ಬಟ್ಟೆ ಅಒಣಗೋದಿಲ್ಲ ಎಂಬ ಗೋಳು , ಥಂಡಿಗಿ ನೆಗಡಿ ಕೆಮ್ಮುಗಳು ಶುರು ಆಗತವ.ಮತ್ತ ಎಲ್ಲಕ್ಕಿಂತ ದೊಡ್ಡ ತೊಂದ್ರೆ ಅಂದ್ರ ನಲ್ಲಿ ನೀರು ಕುಡಿಯೋರು ಕಾಲರಾದಂಥ ಸಮಸ ್ಯಗಳಿಂದ ಬಳಲಬೇಕಾಗತದ. ನಾವೆಲ್ಲ ಕುವೆಂಪು , ಕಾರಂತರ ಕಾದಂಬರಿಗಳಲ್ಲಿ ಓದಿದ ಮಳೆ ನಮ್ಮ ಕಡಿ ಬರಲ್ಲ ಬಿಡ್ರಿ.ಬಂದದ್ದ ಅಷ್ಟೆ ನಮಗ ತಡಕೊಳ್ಳಕ್ಕ ಆಗಲ್ಲ. ತೆಗ್ಗಿಗೆ ಇರೋ ಮನೆಗಳ ಕಥಿ ಕೇಳೋದೆ ಬ್ಯಾಡ. ಮಳೆ ಆನಂದಿಸೋರ ಖುಷಿ ಒಂದು ಕಡಿ ಆದ್ರ ಅದರಿಂದ ರಕ್ಷಿಸಿಕೊಳ್ಳಬೇಕಾಗೀರೋರ ಕಥಿ ಇನ್ನೊಂದು ಕಡಿ. ಬದುಕೆಂದ್ರ ಹಂಗ . ಕಭಿ ಖುಷಿ ಕಭಿ ಗಮ್ , ರೀತಿ. ಹಂಗೇನೆ ಇರಬೇಕು ಬಿಡ್ರಿ. ಅದಕ್ಕ ಜೀವನ ಅನ್ನೋದು . ಆದ್ರ ದುಃಖದ ಸಂದರ್ಭ ತಡಕ್ಕೊಳ್ಳೋ ಮನಸ್ಥಿತಿ ಎಷ್ಟ ಮಂದಿಗಿ ಇರತದ.ಆದ್ರೂ ದಿನಗಳು ಉರಳತಾವ. ಸಮಯ ಉತ್ತಮ ಮದ್ದು ಆಗತದ.
ಜೀವನ ಅಂಬೋದು ಸರಳವಾಗಿ ನಡದದ ಅನ್ನೊವಷ್ಟರಲ್ಲಿ ಅಲ್ಲೊಂದು ಸ್ಪೀಡ್ ಬ್ರೇಕ್ ಬರತದ. ಒಂದುಷ್ಟು ನಿಲ್ಲಬೇಕು ಇಲ್ಲ ಓಟ ತಗ್ಗಿಸಬೇಕು , ಬದುಕಿನ ರಸ್ತೆಯಲ್ಲಿ ಇದು ನಿರಂತರ. ಆದ್ರ ಈ ಸ್ಪೀಡ್ ಬ್ರೇಕ್ ನ ಅರಿವು ನಮಗಾಗದೆ ಒಮ್ಮೆಲೆ ಮುಗ್ಗರಿಸೋದಂದ್ರ ತಡಕೊಳ್ಳೋದು ಕಷ್ಟನೆ.

ಈಗ ಸಾವುಗಳು ಒಂದು ರೀತಿ ಆತಂಕವಾಗಿ ಕಾಡಲತವ. ವಯಸ್ಸಾದ ಮ್ಯಾಲ ಬರೋ ಸಾವಿಗಿ ಒಪ್ಪಿ ಸ್ವಾಗತಿಸಬಹುದು. ಚಿಕ್ಕವರ ಸಾವು ತಡಕೊಳ್ಳೋದು ಬಾಳ ಕಷ್ಟ.ಈಗಿಗಂತೂ ಸಾವು ಯಾವ ದಿಕ್ಕಿನಿಂದ ಬರತದ ಅಂಬೋ ಅರಿವೆ ಆಗತಿಲ್ಲ.ಎಷ್ಟೋ ಸಲ ವಿಡಿಯೋಗಳಲ್ಲಿ ನೋಡಿದ್ದೆವು , ಕುಂತ ಕುಂತಲ್ಲೆ , ನಿಂತ ನಿಂತಲ್ಲೆ ಕುಸಿದು ಬಿದ್ದು ಒಮ್ಮೆಲೆ ಇಲ್ಲವಾಗತಿದ್ದಾರ. ಹರೆದ ವಯಸ್ಸಿನವರ ಈ ಸಾವು ನ್ಯಾಯವಲ್ಲ.ಆದ್ರ ಬಂದದ್ದು ಒಪ್ಪಕೊಳ್ಳಲೇಬೇಕು.
ಯುವಜನತೆಗೆ ಈ ರೀತಿ ಆಗಲಕ್ಕ ಏನು ಕಾರಣ. ಹುಡುಕಿದ್ರ ಕಾರಣ ನೂರು ಕಾಣಬಹುದು.ಹಿಂದಿನ ಕಾಲದ ಈ ಕಾಲದ ಬದುಕುವ ಶೈಲಿ ಇದಕ್ಕ ಕಾರಣ ಆಗಿರಬಹುದು. ವ್ಯಸನಗಳು ಯುವ ಜನತೆಗೆ ದುರ್ಬಲ ಗೊಳಿಸಬಹುದು. ಆದ್ರ ಇದಕ್ಕ ವ್ಯತಿರಿಕ್ತವಾಗಿ ದೇಹ ದಂಡಿಸಿ ವ್ಯಾಯಾಮ ಮಾಡಿದ್ರೂ ಸಾವು ಸಂಭವಿಸಲತಾವ.
ಬದುಕುವದಕ್ಕ ಹರ ಸಾಹಸ ಮಾಡಬೇಕಾಗ್ಯಾದ. ವ್ಯಾಯಾಮ ಮಾಡಿದ್ರೂ ತೊಂದ್ರೆ ,, ಮಾಡ್ದೆ ಇದ್ರ ಇನ್ನೂ ತೊಂದ್ರೆ ಅನ್ನೊಹಂಗ ಆಗ್ಯಾದ.
ಆದ್ರ ಈಗ ಎಲ್ರೂ ಬದುಕಲಿಕ್ಕ ಹೊರಾಡವರೆ ಆಗ್ಯಾರ. ಬೆಳಗೆದ್ರೆ ಎನು ತಿನ್ನಬೇಕು , ಏನು ಕುಡಿಬೇಕು , ಎಷ್ಟು ನಡಿಬೇಕು , ಎಷ್ಟು ಓಡಬೇಕು , ಇಂತವೆ ಲೆಕ್ಕಾಚಾರದಲ್ಲಿ ಹಗಲು ಕಳೆದು ರಾತ್ರಿ ಆಗತದ. ಇದು ಎಲ್ಲರಿಗೂ ಅನ್ವಯಿಸಲ್ಲ ಬಿಡ್ರಿ. ದುಡದು ತಮ್ಮವರ ಹೊಟ್ಟೆ ತುಂಬಿಸುವರ ಚಿಂತೆಯಲ್ಲಿರುವವರಿಗಿ ಈ ಲೆಕ್ಕಾಚಾರ ಅನ್ವಯಿಸಲ್ಲ ಬಿಡ್ರಿ. ಆದ್ರ ಬರೀ ದುಡಿತದಲ್ಲೆ ವ್ಯಸ್ತರಾಗಿ ತಮ್ಮ ಆರೋಗ್ಯ ನಿರ್ಲಕ್ಷ್ಯ ಮಾಡಿಕೊಳ್ಳೊದು ಮೂರ್ಖತನ.

ಮೂರು ಹೊತ್ತು ಆರೊಗ್ಯ ಆರೊಗ್ಯ ಅಂತ ಕಾಳಜಿವಹಿಸೋರಿಗೂ ಸಾವು ತಪ್ಪಲ್ಲ ಬಿಡ್ರಿ.ಎಷ್ಟೊ ಸಲ ಕೇಳಿರತಿವಿ , ಒಂದು ಅಡಿಕಿ ಹೋಳು ತಿಂಬೊ ಚಟ ಇಲ್ದವ್ರಿಗೂ ಎಂಥೆಂಥದೋ ರೋಗಗಳು ಬರತವ. ಎನೇನೋ ಚಟ ಇರುವವರು ನಿರೋಗಿಗಳಾಗಿ ಇರತಾರ. ಅದಕ್ಕ ಸಾವು ಬದುಕಿನ ಲೆಕ್ಕಾಚಾರ ಅಂದ್ರ ಜೂಜು ಆಡಿದಂಗ.
ಈಗೀನ ಯುವಜನತೆಯ ಹಠಾತ್ ಸಾವು ನೋವುಗಳು ಅಸಹನೀಯ. ಅವರನ್ನೆ ಅವಲಂಬಿಸಿದವ್ರಿಗಿ ಒಮ್ಮೆಲೆ ಕಣ್ಣ ಕಟ್ಟಿ ಕಾಡಿನಾಗ ಬಿಟ್ಟಂಗ ಆಗತದ. ಅನೀರಿಕ್ಷಿತ ಗಳ ಬಗ್ಗೆ ಅರಿವಿದ್ರೂ ಇನ್ನೂ ನಾವೇಕೆ ಒಬ್ಬರ ಮ್ಯಾಲ ಅವಲಂಬಿತರಾಗಿರತೀವಿ. ಹೆಚ್ಚಾಗಿ ಹೆಣ್ಣ ಮಕ್ಳು. ಮದುವಿ ಆದ್ರ ಆಯ್ತು ತನ್ನ ತನ್ನ ಮಕ್ಕಳ ಜವಾಬ್ದಾರಿ ಎಲ್ಲಾ ಗಂಡಂದೆ ಎಂದು ನಿಶ್ಚಿಂತವಾಗಿ ಇದ್ದ ಬಿಡತಿವಿ. ಹಿಂದಿನ ಕಾಲದಿಂದ್ಲೂ ಹೀಗೆ . ಗಂಡು ಹೊರಗ ದುಡಿಬೇಕು , ಹೆಂಡತಿ ಮನೆಯಲ್ಲಿ ದುಡಿಬೇಕು. ಮನೆಯಲ್ಲಿ ದುಡಿಯುವ ಕೆಲಸಕ್ಕ ಯಾವ ಆದಾಯ ಇರತದ.ದುಡಿಯುವ ವ್ಯಕ್ತಿ ಇಲ್ಲವಾದ್ರ ಅವಲಂಬಿಸಿದ ಜೀವಗಳು ಏನು ಮಾಡಬೇಕು. ಮನೆಯಲ್ಲೂ ಇರಲಿಕ್ಕಾಗಧೆ ,ಹೋರಗೆ ಹೋಗಿ ದುಡಿಲಿಕ್ಕ ಆಗ್ದೆ ಒದ್ದಾಡಬೇಕು. ಜೀವನ ನಿಲ್ಲಲ್ಲ ಖರೆ , ಆದ್ರ ಅಷ್ಟು ಸರಳವಾಗಿನೂ ನಡೆಯೋದಿಲ್ಲ.
ಈಗ ಮಹಿಳೆಯರು ಸ್ವಾವಲಂಬಿ ಗಳಾಗತಿದ್ದಾರ.ಬಾಳ ಸಂತೋಷದ ವಿಷಯ.ಅವಲಂಬನೆ ಅನ್ನೊದು ಒಂದು ರೋಗದ ಥರಾ. ಅದರಿಂದ ತಪ್ಪಿಸಿಕೊಳ್ಳೊ ಪ್ರಯತ್ನ ಮಾಡತಾನೆ ಇರಬೇಕು.
ಹೆಣ್ಣು ಗಂಡಿನ ಮ್ಯಾಲ ಆರ್ಥಿಕವಾಗಿ ಅವಲಂಬಿತಳಾದ್ರ ಗಂಡು ಹೆಣ್ಣಿನ ಮ್ಯಾಲ ದೈಹಿಕವಾಗಿ ಅವಲಂಬಿತನಾಗಿರತಾನ. ಮನ್ಯಾಗ ಹೆಣ್ಣಮಕ್ಕಳು ಇರದಿದ್ರ ಊಟ ತಿಂಡಿಗಿ ಹೊರಗಿನ ಖಾನಾವಳಿ ಅವಲಂಬಿಸಬೇಕಾಗತದ. ನಾವು ಗಂಡ ಮಕ್ಕಳಿಗಿ ಅಡಿಗಿ ಮನಿ ಕೆಲಸ ಕಲಿರಿ ಅಂತ ಹೇಳೋದೆ ಇಲ್ಲ ಬಿಡ್ರಿ. ಅವನೇನಾದ್ರೂ ಮನ್ಯಾಗ ಕೆಲಸ ಮಾಡತಿದ್ರ ಹೆಂಗಸಿನಂಗ ಅಂಬೋ ವಿಶೇಷಣ ಕೊಡತಿವಿ.ಅದು ಅವನ ಪುರುಷತ್ವ ಕೆರಳಿಸಿ ಅಡುಗೆ ಮನೆ ಕಡೆ ಬರದಂತೆ ತಡಿತದ.ಒಮ್ಮೆ ಹೆಣ್ಣಿಲ್ದೆ ಜೀವಿಸಬೇಕಾದ ಪರಿಸ್ಥಿತಿ ಬಂದ್ರ ಅವನ ಸ್ಥಿತಿನೂ ಕಣ್ಣ ಕಟ್ಟಿ ಕಾಡಿನಾಗ ಬಿಟ್ಟಂಗೆ ಆಗತದ.

ಎಷ್ಟೋ ಸಂದರ್ಭಗಳಲ್ಲಿ ನಾವು ನೋಡಿದ್ದೆವಿ.ಗಂಡ ಸತ್ರೆ ಯಾವ ಹೆಣ್ಣು ನನಗೆ ಇನ್ನೊಂದು ಮದುವೆ ಬೇಕೆಬೇಕು ಅನ್ನೊ ಅನಿವಾರ್ಯ ಸ್ಥಿತಿ ಗಾಗಿ ಪರಿತಪಿಸಲ್ಲ , ಆದ್ರ ಹೆಣ್ತಿ ಸತ್ತ ಗಂಡಂಗ ಮೊದಲು ಎದುರಾಗೋದೆ ಊಟದ ಸಮಸ್ಯೆ . ಅದಕ್ಕಾಗಿಯಾದ್ರೂ ಅವ ಮರು ಮದುವೆ ಆಗ್ಲೆಬೇಕು , ಅವನಿಗೆ ಊಟದ ಸಮಸ್ಯೆ ಕಾಡಿದಂತೆ ಅವಳಿಗೂ ಒಂಟಿತನ ಕಾಡತದ.ಆದ್ರ ನಮ್ಮ ಸಮಾಜಕ್ಕ ಕಾಣೋದು ಗಂಡಿನ ಊಟದ ಸಮಸ್ಯೆ ಮಾತ್ರ.ಅದಕ್ಕೆ ಮರುಮದುವೆ ಗಂಡಿಗೆ ಅನಿವಾರ್ಯ ಆದಷ್ಟು ಹೆಣ್ಣಿಗೆ ಅನಿವಾರ್ಯ ಅಲ್ಲ ಅಂತ ಸಮಾಜನೆ ನಿರ್ದರಿಸಿ ಆಗಿದೆ.
ಕಾಲ ಯಾವದಕ್ಕೂ ನಿಲ್ಲೊದಿಲ್ಲ. ಖುಷಿ ಮತ್ತು ದುಃಖ ದ ತೀವ್ರತೆಗಳು ಕೃಮೇಣ ಕಡಿಮೆ ಆಗತ ಬರತವ.ಆದ್ರ ಜೀವನದಲ್ಲಿ ಬರೋ ಸಾವೆಂಬ ಅನಿರೀಕ್ಷಿತ ಗಳಿಗಿ ಮನಸ್ಸು ಒಪ್ಪಿಕೊಳ್ಳೊದು ಬಾಳ ಕಷ್ಟ. ಕೋವಿಡ್ ಕಾಲದಲ್ಲಿ ನೋಡಿದ್ದ ಕೇಳಿದ್ದ ಸಾವಿನ ತೀವ್ರತೆಗಳ ಘಟನೆಗಳು ಈಗ ನೇಪಥ್ಯಕ್ಕೆ ಸರಿದಿರಬಹುದು.ಆದ್ರ ಈಗಲೂ ಯುವ ಜನತೆ ಅಂತವಕ್ಕೆ ಬಲಿಯಾಗತಿರೋದು ವಿಷಾದ.
ಆಸ್ಪತ್ರೆ ವಾಸ ಎಂಬುದೆ ಒಂದು ವನವಾಸ.ಆರ್ಥಿಕ ವಾಗಿ ಮಾನಸಿಕವಾಗಿ ಹೈರಾಣ ಮಾಡಿಬಿಡತದ , ಆರೋಗ್ಯ ಎಂಬುದು ಒಂದು ವರ , ಅದೇನಾದರು ಶಾಪ ಆದ್ರೆ ಬದುಕು ಬಲು ಘೋರ. ರೋಗಿಯೊಂದಿಗೆ ಅವರಿಗೆ ಸಂಭಂದ ಪಟ್ಟವರ ಪಾಡು ಶೋಚನೀಯ.ಎಲ್ರೂ ಆರೊಗ್ಯವಾಗೆ ಬದುಕಬೆಕಂತಿವಿ. ಆದ್ರ ದುರ್ದೈವ ಯಾವ ಬಾಗಿಲಿನಿಂದ ಒಕ್ಕರಿಸಿಕೊಂಡು ಬಿಡತದ ತಿಳಿವಲ್ದು. ಬದುಕಂತೂ ಸಾಗಲೇಬೇಕು.
ಮುಂದಿನ ಪಿಳಿಗಿ ಆದಷ್ಟು ಸ್ವಾವಲಂಬಿಯಾಗಿ ಬದುಕಲು ಪ್ರಯತ್ನಿಸಲಿ.ಗಂಡು ಹೆಣ್ಣಿನ ಮ್ಯಾಲ ಹೊಟ್ಟೆಗಾಗಿ ಅವಲಂಬಿಸದೆ , ಹೆಣ್ಣು ಗಂಡಿನ ಮ್ಯಾಲ ದುಡ್ಡಿಗಾಗಿ ಅವಲಂಬಿಸದೆ ಇಬ್ರೂ ಜೊತೆಯಾಗಿದ್ರೂ ತಮ್ಮ ತಮ್ಮ ಸ್ವಾವಲಂಬನೆ ಯ ಘನತೆಯಲ್ಲಿ ಬದುಕುವಂತಾಗಬೇಕು. ಪೋಷಕರು ಹೆಣ್ಣ ಮಕ್ಳಿಗಿ ಮದುವೆ ಮಾಡಿ ಜವಾಬ್ದಾರಿ ಕಳಕೊಳ್ಳೊ ಪ್ರಯತ್ನ ಮಾಡಲಾರದೆ ಅವಳಿಗೊಂದು ಸ್ವಾವಲಂಬನೆ ಬದುಕು ಒದಗಿಸೊ ಪ್ರಯತ್ನ ಮಾಡಬೇಕು.ನಮ ಕಡಿ ತಂದಿತಾಯಿಗಳು ಹೆಣ್ಣ ಮಕ್ಕಳ ಮದುವಿ ಸಲುವಾಗಿ ಎಷ್ಟ ಬೇಕಾದ್ರೂ ವರದಕ್ಷಿಣೆ ಕೊಟ್ಟು ಜೋರ್ದಾರ ಮದಿ ಮಾಡಕೊಡಲಕ ಉತ್ಸಕರಾಗಿರತಾರ. ಅದೇ ದುಡ್ಡು ಮಗಳಿಗಾಗ್ಲಿ ಅಳಿಯನಿಗಾಗ್ಲಿ ಒಂದು ಉದ್ಯೋಗ, ವ್ಯಾಪಾರ ನಡೆಸೊ ಸಲುವಾಗಿ ಹಣ ಕೊಡಲಿಕ್ಕ ಹಿಂದ ಮುಂದ ನೊಡತಾರ.
ನಮ್ಮ ಮಕ್ಕಳಿಗಿ ಅದ್ದೂರಿ ಮದುವಿ , ವರದಕ್ಷಿಣೆ , ವರೋಪಚಾರ ಕೊಡಲು ಜೀವನ ಪೂರ್ತಿ ಬಡಿದಾಡೋ ಪೋಷಕರು ತಮ್ಮ ಮಕ್ಕಳು ಸ್ವಾವಲಂಬಿ ಯಾಗಿ ಬದುಕಲಿ ಎಂದು ಪ್ರಯತ್ನ ಮಾಡೊದು ಈಗಿನ ಪರಿಸ್ಥಿತಿ ಯಲ್ಲಿ ಅತ್ಯವಶ್ಯ ಆಗ್ಯಾದ.
ಜ್ಯೋತಿ , ಡಿ .ಬೊಮ್ಮಾ.

Suooooper