ಕಾವ್ಯ ಸಂಗಾತಿ
“ನಾನು ನೀನು”
ಡಾ .ಶಶಿಕಾಂತ ಪಟ್ಟಣ ರಾಮದುರ್ಗ

ನಾನು ನೀನು ಗೆಳೆಯ ಗೆಳತಿ
ಬಾಳ ಪ್ರೀತಿಯ ಹೂರಣ
ಭಾವ ಬೆಸುಗೆ ಒಳಗೆ ಹೊರಗೆ
ಸ್ನೇಹ ಪ್ರೇಮದ ಬಂಧನ .
ಹಸಿರು ಚಿಗುರೆಲೆ ಚೈತ್ರ್ಯ ಬಂದಿದೆ.
ನಗೆಯ ನಲುಮೆಯ ತೋರಣ .
ಜೇನುಗೂಡು ಸವಿಯ ತಂದಿದೆ.
ಸ್ಫೂರ್ತಿ ನಿನ್ನಯ ಚುಂಬನ .
ಕಾಳ ಕತ್ತಲೆ ಕಳೆದು ಚೆಲ್ಲಿದೆ ,
ಹೊಸ ಬೆಳಕಿನ ನಂದನ .
ಮನಕೆ ಮನವು ತೀಡಿಕೊಂಡಿದೆ.
ಮಧುರ ಪರಿಮಳ ಚಂದನ .
ಕರುಣೆ ಕಾವ್ಯ ಕವನ ಹೊಸೆವುದು
ಮೌಲ್ಯ ತುಂಬಿದ ಚಿಂತನ .
ನನಗೆ ನೀನು ನಿನಗೆ ನಾನು
ಬದುಕು ನೆಲೆ ಸೆಲೆ ಕುಂದನ .
ಅಗೆದು ಬಗೆದು ಹುಡುಕಿ ನೋಡುವ
ಸಹನೆ ಶಾಂತಿ ಚೇತನ .
ದೂರ ದಾರಿ ಹೆಜ್ಜೆ ಹಾಕುವ
ಮುಕ್ತಿ ಕಾಣುವ ಕಾನನ .
ಭವರವಿರಲಿ ಬೆವರತರಲಿ
ಸಮರಸವೇ ಜೀವನ .
——————–
ಡಾ .ಶಶಿಕಾಂತ ಪಟ್ಟಣ -ರಾಮದುರ್ಗ

ಸಮರಸವೇ ಜೀವನ ಎನ್ನುವ ಆಶಯದ ಕವನ ಸುಂದರವಾಗಿ ಮೂಡಿ ಬಂದಿದೆ
ಸುತೇಜ
ಸುಂದರ ಪ್ರೇಮ ಕವನ