ಕಾವ್ಯ ಸಂಗಾತಿ
“ಬುದ್ದ”
ಪಿ.ವೆಂಕಟಾಚಲಯ್ಯ .

ಜ್ಯೋತಿಷ್ಯಿಯ ಭವಿಷ್ಯ ವಾಣಿ,
ನಿಜವಾಗದಿರಲೆಂದು,
ಕಣ್ಣೆವೆಗಳನ್ನಿನ್ನೊ ತೆರೆಯದ,
ತನ್ನ ಕಂದನಿಗೆ,
ಲೌಕಿಕ ಕಷ್ಟಕಾರ್ಪಣ್ಯಗಳ,
ಅರಿವು ಆಗದಿರಲೆಂದು,
ಅರಮನೆಯಲ್ಲಿ, ಹತ್ತಾರು
ಕಣ್ಣುಗಳ ಕಾವಲುನಲ್ಲಿ,
ಸಕಲೈಶ್ವರ್ಯ ವೈಭೋಗದಲಿ,
ಸುಖದ ಸುಪ್ಪತ್ತಿಗೆಯಲ್ಲಿ,
ಸಾಕಿ ಸಲಹಿದನು ಮಗನ,
ರಾಜ ಸುದ್ಧೋದನ,
ಮರೆಮಾಚಿದೆನೆಂದು ಬಗೆದ,
ಲೌಕಿಕ ದು:ಖ ದುಮ್ಮಾನ.
ಎಂತಾದರೆಂ? ಬಂಧನವೆಲ್ಲ ಕಳಚಿ,
ಸಿದ್ಧಾರ್ಥ, ತಾಳಿದ ಬೌದ್ಧಾವತರ ಣ.
ಕಾರಣವಹುದೆ? ಪುರಪ್ರದಕ್ಷಣಾ ವೇಳೆಯಲಿ,
ಕಂಡ ಜರಾ ವ್ಯಾಧಿ ಮರಣ.
ರಾಜ್ಯಕೋಶ, ಪತ್ನಿ ಸುತ, ಪ್ರೀತಿಸು ವ,
ಎಲ್ಲರನು ತೊರೆದ.
ಭೋಗ ಜೀವನವ ತೊರೆದು,
ತ್ಯಾಗ ಜೀವಿಯಾದ.
ದು:ಖಕೆ ಕಾರಣ, ಅದರ ಜ್ಞಾನ ಸಿದ್ಧಿಗಾಗಿ,
ಸತ್ಯಾನ್ವೇಷಣೆಯಲ್ಲಿ ನಡೆದ.
ಸುಜ್ಞಾನಮಯಿ ಕಾರುಣ್ಯಮೂರ್ತಿ ಬುದ್ಧ,
ಜಗವನ್ನೆಲ್ಲ ಗೆದ್ದ. ಅದೆಂತು?
ಶೌರ್ಯ ಸಾಹಸದ ದಂಡಯಾತ್ರೆ ಗಳಿಂದಲ್ಲ,
ಬದುಕ ರೂಪಿಸುವ, ಸಂದೇಶಗ ಳಿಂದ.
” ನೋವು-ದು:ಖ, ಮನುಜರಲಿ
ಸಹಜ, ಸರ್ವಕಾಲಿಕ.
ಆಸೆ- ಅಸೂಯೆ, ನೋವು-
ದು:ಖಕೆ ಪ್ರೇರಕ.
ಸತ್-ಜ್ಞಾನ ದರ್ಶನ, ಸಚ್ಚಾರಿತ್ರದ,
ನಿಜಪಥದಲಿ,
ಮನುಜನ ಜೀವನದ ನಡೆ- ನುಡಿ,
ಚಿಂತನೆ ಸಾಗಲಿ.
ನಾನು- ನನ್ನದರ, ಅಹಂ ನೊಡನೆ,
ಮತ್ಸರ ತರುವುದು ಕೇಡು.
ಹಿಂಸೆಗೆ ಪ್ರತಿಹಿಂಸೆಯ ಬಯಸ ದಿರು,
ವೈರಿಯ ನೀನು ಕ್ಷಮಿಸಿಬಿಡು.
ದೇಹವು ಬಣ್ಣದ ಛಾಯಾಪ್ರತಿಮೆ,
ನಂಬಿಕೆಯದರೊಳು ಬರೀ ಭ್ರಮೆ.
ಚಿಂತನೆಗಳ ಗೂಡು,
ಮನುಜನ ಮನಸು
ಚಿಂತನೆಗಳ ಫಲವೇ, ನಾವ್
ಅನುಭವಿಸುವ ಒಳಿತು-ಕೆಡಕು.
ಮನಸ್ಸಿನ ಹಿಡಿತವೇ,
ಆನಂದಕ್ಕೆ ದಾರಿ.
ಸೇಡಿನ ಮನೋ-ಚಿಂತನೆಯೆ,
ಹಿಂಸೆಗೆ ದಾರಿ
ಶತಯುದ್ಧಗಳಂ ಗೆಲ್ದೊಡೆ.
ಪ್ರಯೋಜನಮಿಲ್ಲೈ ,
ನಿನ್ನನು ನೀ ಗೆಲ್.
ನಿನ್ನನರಿತು ನೀ ಬಾಳ್.
ಇದರೊಲು ಪರಿಪೂರ್ಣತೆಯಂ,
ಸಾಧಿಸಿದವನೆ ಜ್ಞಾನಿ.
ಬಿರುಗಾಳಿ ಮಳೆಗೆ ಅಳುಕದ,
ಕಲ್ಲು ಬಂಡೆಯ ತೆರದಿ,
ನಿಂದೆ-ಹೊಗಳಿಕೆಗೆ, ಸ್ಥಿತಪ್ರಜ್ಞೆಯ
ತೋರುವನೆ ಜ್ಞಾನಿ.
ಯಾರನೇನು ಬೇಡದವಂಗೆ,
ಭಯ- ಜಿಗುಪ್ಸೆ- ನೋವಿಲ್ಲ.
ಇರುವುದರಲ್ಲಿ ಸಂತುಷ್ಟಿಯಂ ಪಡೆ,
ಇಲ್ಲದಿರುವುದರಾಸೆ ಮಾನ್.
ಕಾಯಕದಿಂದಲೆ ನಮ್ಮಯ ಜೀವನ,
ಜಡತೆಯೆ ಮರಣ.
ಇಂದಿನ ಕೆಲಸ ಇಂದಿಗೆ ಮುಗಿಸು,
ಮುಂದೂಡುವುದರಲ್ಲಿಲ್ಲ ಶ್ರೇಯಸ್ಸು.
ಪರರ ಭಾವನೆಗಳಿಗೆ ಜೋತು ಬೀಳದಿರು,
ನಿನ್ನದೆ ಭಾವನೆಗಳಿಗೆ ನಿಷ್ಠನಾಗಿರು.
ಬಾಹ್ಯ ತೋರಿಕೆಯ ಸಂನ್ಯಾಸ ನಿಜವಲ್ಲ,
ರಾಗ- ದ್ವೇಷವ ಬಿಡದವ ಸಂನ್ಯಾ ಸಿಯಲ್ಲ .
ಗಳಿಸಿದ ಭೌತಿಕ ಸಂಪತ್ತು ನಿಜ ವಲ್ಲ,
ಸ್ವಯಂನಿರ್ಬಂಧದ ಜ್ಞಾನವೆ ನಿಜ ಸಂಪತ್ತು.
ಸ್ಪರ್ಷೇಂದ್ರಿಯಗಳ ಸ್ವಯಂ ಪ್ರತಿ ಬಂಧನ,
ನೋವನು ತಡೆಯುವ ಸಾಧನ.
ನೋವು- ನಲಿವನು ಸಮನಾಗಿ ಕಾಣುವ,
ಮನುಜನು ಪಡೆವನು ನಿತ್ಯಾನಂ ದವ.”
ಬುದ್ಧ ಬೋಧಿಸಿದ ಅಷ್ಟಾಂಗ ಮಾ ರ್ಗಗಳು,
ಬದುಕಿನ ದಾರಿ ದೀಪಗಳು.
ಸದ್ಧರ್ಮ, ಸದ್ಕರ್ಮಗಳು, ಶುದ್ಧ ಸಾತ್ವಿಕ-
ಬದುಕಿನ ರಥದ ಗಾಲಿಗಳು.
ದಟ್ಟಡವಿಯ ಗಿರಿಯೋನ್ನತ ಶಿಖರ ಕಂದರಗಳಲಿ,
ಮೊಳಗಿದ ವೇದವಾಙ್ಞಯದ ಚೈತ ನ್ಯಧಾರೆ,
ಕಣಕಣದೊಳುಕ್ಕಿ, ಪ್ರವಾಹ ತೆರದಿ ಸೊಕ್ಕಿ,
ನೆಲೆಗೊಂಡಿದೆ, ಬುದ್ಧನ ಬೋಧನೆ ಗಳಲಿ.
ನಡೆ, ನುಡಿ, ಕೈಂಕರ್ಯಗಳಿಂದಲಿ ಬುದ್ಧ,
ವೇದೋಪನಿಷತ್ತುಗಳ ಸಾರಮೆ ಲ್ಲವಂ ಬಗೆದು,
ಸರಳ ವ್ಯಾಖ್ಯಾನುಗಳಿಂದೆ, ಜನಮನ ದೊಳು ತುಂಬಿದ,
ಬುದ್ಧ, ಧರ್ಮ, ಸಂಘಕ್ಕೆ, ಶರಣೆಂ ಬುವರನು ಸಲಹಿದ.
ಪಿ.ವೆಂಕಟಾಚಲಯ್ಯ .
