ಹೆಚ್. ಎಸ್. ಪ್ರತಿಮಾ ಹಾಸನ್ ಕವಿತೆ,ನನ್ನಮ್ಮ

ಲೋಕದ ಆಡಂಬರವ ಅರಿತವಳಲ್ಲ
ಕಷ್ಟ ಸುಖವ ಅರಿತು ಬಾಳಿದವಳು
ದುಃಖ ದುಮ್ಮಾನಗಳ ಮೆಟ್ಟಿ ನಿಂತವಳು
ಜೀವನದಿ ಸಫಲತೆಗೆ ಹೋರಾಡಿದವಳು

ಬೈಗುಳಗಳನ್ನೇ ಪಾಠವಾಗಿ ಪಡೆದವಳು
ತಪ್ಪು ಒಪ್ಪುಗಳ ಅರಿತು ಜೀವನ ಮಾಡಿದವಳು
ನನ್ನಮ್ಮ ಎಲ್ಲರಂತೆ ಅಲ್ಲದಿದ್ದರೂ ಸದ್ಗುಣವಂತಳು
ಮನೆಯ ಏಳಿಗೆಗಾಗಿ ತನ್ನ ತಾನು ತ್ಯಾಗಮಾಡಿಕೊಂಡವಳು

ತನಗೆ ಬೇಕಾದದ್ದನ್ನೆಲ್ಲ ಪಡೆಯದೆ ಬಾಡಿದವಳು
ಅವಿಭಕ್ತ ಕುಟುಂಬವ ಸಮಾಲಿಸಿದವಳು
ಕೆಲವೊಮ್ಮೆ ಕಣ್ಣೀರು, ಸಂತೋಷವ ಪಡೆದವಳು
ಆಕಸ್ಮಿಕ ಕೆಟ್ಟ ಘಟನೆಗಳನು ಸಹ ಎದರಿಸಿದವಳು….

ವಿದ್ಯಾವಂತಳಾದರೂ ಅವಿದ್ಯಾವಂತಳಂತೆ ಬಾಳಿದವಳು
ಹೊರ ಜಗತ್ತಿನ ಅರಿವೇ ಇಲ್ಲದಂತೆ ಮನೆಯೊಳಗೆ ಇದ್ದವಳು
ಬಾಳಿನ, ಬದುಕಿನ ಅರ್ಥವ ಅರಿಯುತ ಸಾಗಿದವಳು
ಮಕ್ಕಳಿಗೆ ನೀತಿ ಪಾಠಗಳ ಕಲಿಸುತ್ತಾ ನಡೆದವಳು

ಸಾಧನೆಯ ದಾರಿ ಸುಗಮವಲ್ಲ ಎಂಬುದ ತಿಳಿಸಿದವಳು
ಜೀವನದಿ ಬರುವ ಕಷ್ಟಗಳ ಎದುರಿಸುವುದ ಕಲಿಸಿದವಳು
ತಗ್ಗಿ ಬಗ್ಗಿ ನಡೆಯುವುದ ತಿಳಿಸುತ್ತಾ ಸಾಗಿದವಳು
ಬಾಳು ಮೂರೇ ದಿನ ಅದರಲ್ಲಿ ಒಳಿತಿನ ಕಾರ್ಯ ಮಾಡೆಂದವಳು…..

ಭೂತಾಯಿಯ ಜೊತೆಗೆ ಅಡೆದವ್ವ ನನ್ನಮ್ಮ ನನ್ನವಳು
ಇವಳಿಗಿಂತ ತ್ಯಾಗಮಹಿಯ ಕಾಣಬೇಕೇನು ನಾನು
ಯಾವ ಜನ್ಮದಿ ನಿನ್ನ ಋಣ ವಾ ತೀರಿಸುವೆನು ನಾ ತಿಳಿಯೇನು?
ನನ್ನಮ್ಮನ ಹಾಗೆ ಯಾರು ಇಲ್ಲ ಎಂಬ ಭಾವದಿ ಕೊನೆ ಉಸಿರೇಳೆಯುವೆನು……


Leave a Reply

Back To Top