ಪೂರ್ಣಿಮಾ ಸಾಲೆತ್ತೂರು ಅವರ ಕವಿತೆ ʼವಸಂತ ಚೈತ್ರʼ

ಬೇಸಿಗೆಯ ಬೇಗೆಯ ತಾಪದಲಿ ಬೆಂದು
ಹೋಗುತ್ತಿರುವ ಧರಿತ್ರಿ
ವರುಣನ ಆಗಮನಕ್ಕೆ ಕಾಯುತ್ತಾ
ಮೊದಲ ಮಳೆಯ ಹನಿಗಳ ಸ್ಪರ್ಶಕ್ಕೆ
ಕಾತರದಿಂದ ತಲೆ ಎತ್ತಿ ನೀಲಾಕಾಶವನ್ನು
ನೋಡುತ್ತಾ ಕಾಯುತಿಹಳು

ಕತ್ತಲೆಯಲ್ಲಿ ಮುಳುಗಿದ್ದ ಆ ಜಗತ್ತು ಕೂಡ
ನೇಸರನಿಗಾಗಿ ಹುಡುಕಾಡುತ್ತ
ಕ್ಷಣಗಳ ಎಣಿಸುತ್ತ ಕಾಯುತಲಿ
ಉದಯಿಸಿ ಹೊಂಗಿರಣಗಳ ಆಸರೆಯಿಂದ
ಮಂಕಾಗಿದ್ದ ಜಗತ್ತನ್ನು ಮೆಲ್ಲನೆ ಚಿಗುರಿಸುತಲಿ
ಅರಳಿಸುತ ಹೂವುಗಳ ನಗುವಲ್ಲಿ ನಲಿಯುತ್ತಿದೆ

ಚೈತ್ರದಲ್ಲಿ ಚಿಗುರಿದ ಸೃಷ್ಟಿಯು
ನವ ವಸಂತ ಋತುವಿನಲ್ಲಿ
ಮಾಗಿದ ಮನಸುಗಳೆರಡು ಒಬ್ಬರೊನ್ನೊಬ್ಬರು
ಸಂದಿಸಿದಾಗ ಅನುರಾಗವು ಅರಳಿ
ಕಂಗಳಿಂದ ಪ್ರೇಮಾಂಕುರವಾಗಿ
ಪ್ರೇಮ ಲೋಕವು ಸೃಷ್ಟಿಯಾಗಿ
ಕಾಣದ ಪ್ರೀತಿಯ ಹಂಬಲಿಸುತ್ತಿದೆ…..


Leave a Reply

Back To Top