
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ವೈವಾಹಿಕ ಬದುಕಿಗೆ ಕಾಲಿಡಲು
ಹಿಂಜರಿಯುತ್ತಿರುವ
ಹೆಣ್ಣು ಮಕ್ಕಳು….
ಪ್ರಶ್ನೆಗಳು ಹಲವು

ಆ ಮನೆಯ ಯುವತಿಗೆ ಈಗಾಗಲೇ 30 ವರ್ಷ ವಯಸ್ಸಾಗಿದೆ, 25ರ ಸುಮಾರಿಗೆ ಪಾಲಕರು ಮದುವೆಯಾಗಲು ವರನನ್ನು ನೋಡುತ್ತೇವೆ ಎಂದು ಹೇಳಿದಾಗ ಇನ್ನೊಂದೆರಡು ವರ್ಷ ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ ಎಂದು ಹೇಳಿದಳಾಕೆ ಆಯ್ತು ಎಂದು ಸುಮ್ಮನಾದ ಪಾಲಕರು ನಂತರ ಒತ್ತಾಯದಿಂದ ಆಕೆಗೆ ವರನನ್ನು ನೋಡಲು ಆರಂಭಿಸಿದರು… ಕನ್ನಡತಿಗಳಾಗಿ ಬರುವ ಯುವಕರಲ್ಲಿ ಒಂದಲ್ಲ ಒಂದು ತಪ್ಪನ್ನು ಕಂಡುಹಿಡಿದು ಮದುವೆಯನ್ನು ನಿರಾಕರಿಸುತ್ತಿರುವ ಆಕೆಗೆ ಇದೀಗ 30 ವರ್ಷ ತುಂಬುತ್ತಿದೆ. ನೋಡಲು ಬರುವ ವರಗಳ ಸಂಖ್ಯೆ ಇಳಿಮುಖವಾಗುತ್ತಿದ್ದರೆ ಆಕೆಯ ಪಾಲಕರಲ್ಲಿ ಮುಂದೇನು ಎಂಬ ಭಾವ?. ಖುದ್ದು ಆಕೆಗೂ ಕೂಡ ಎಂಬ ಭಯ ಆತಂಕಗಳು ಉಂಟಾಗಿತ್ತು ಮದುವೆಯನ್ನು ಒಪ್ಪಲೇ? ನಿರಾಕರಿಸಲೇ?ಎಂಬ ಗೊಂದಲ ಉಂಟಾಗಿದ್ದು ಇಬ್ಬಂದಿಯಲ್ಲಿ ಕಾಲ ಕಳೆಯುತ್ತಿದ್ದಾಳೆ.
ಮತ್ತೋರ್ವ ಯುವತಿ ಮದುವೆಯನ್ನು ಮಾಡಿಕೊಳ್ಳಲೇ ಬೇಕೆ ಮದುವೆ ಮಾಡಿಕೊಂಡು ನಿಮ್ಮ ಹಾಗೆ ಕಚ್ಚಾಡುತ್ತಾ ಜೀವನವಿಡಿ ಇರುವುದಾದರೆ ನಾನು ಅದಕ್ಕೆ ಸಿದ್ಧವಿಲ್ಲ ಎಂದು ಸ್ಪಷ್ಟವಾಗಿ ಪಾಲಕರಿಗೆ ಹೇಳಿದ್ದಾಳಾದರೂ ಪಾಲಕರು ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದಾರೆ.
ಮತ್ತೊಬ್ಬ ಯುವತಿ ನನ್ನನ್ನು ನೋಡಲು ಬರುವ ಯುವಕರಲ್ಲಿ ಕೊರತೆಗಳನ್ನು ಮುಂದೊಡ್ಡಿ ನಿರಾಕರಿಸಿದರೇ ಮಗದೊಬ್ಬ ಹೆಣ್ಣುಮಗಳು ತನಗಿಂತ ಆತನ ಸಂಬಳ ಕಡಿಮೆ ಇದೆ ಎಂದು ನಿರಾಕರಿಸುತ್ತಿದ್ದಾಳೆ.
ಹಲವು ಯುವತಿಯರು ಮದುವೆಯ ವಯಸ್ಸು ಮೀರುತ್ತಿದ್ದರೂ ವೈವಾಹಿಕ ಜೀವನಕ್ಕೆ ಮನಸ್ಸು ಮಾಡುತ್ತಿಲ್ಲ. ಇಂದಿನ ಹೆಣ್ಣು ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮ ಏನಾದರೂ ಹೆಚ್ಚು ಕಡಿಮೆ ಮಾಡಿಕೊಂಡುಬಿಟ್ಟರೆ ಎಂಬ ಭಯ ಪಾಲಕರಿಗೆ ಇದ್ದು ಅವರು ಕೂಡ ಈ ವಿಷಯದಲ್ಲಿ ಅಸಹಾಯಕರಾಗಿ ಕೈ ಚೆಲ್ಲಿದ್ದಾರೆ.
ಕೇವಲ ಆರ್ಥಿಕ ಸ್ವಾತಂತ್ರ್ಯ ಮಾತ್ರ ಹೆಣ್ಣು ಮಕ್ಕಳಲ್ಲಿ ಈ ರೀತಿಯ ವಿವಾಹ ಜೀವನದ ಮುಂದೂಡುವಿಕೆಯನ್ನು ಕಲಿಸುತ್ತದೆ ಎಂದರೆ ಅದು ಅಕ್ಷರಶಃ ಸುಳ್ಳು.
ಭಾರತೀಯ ಸಮಾಜದಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಹತ್ತು ಹಲವು ಸಾಮಾಜಿಕ ಕಟ್ಟುಪಾಡುಗಳು, ಹೆಣ್ಣು ಮಕ್ಕಳನ್ನು ಕೀಳಾಗಿ ನೋಡುವ ಅವರನ್ನು ತೊತ್ತಿನಂತೆ ಭಾವಿಸುವ, ಹೆಣ್ಣು ಮಕ್ಕಳು ತಮ್ಮ ಆಧೀನದಲ್ಲಿಯೇ ಇರಬೇಕು ಎಂಬ ಕಟ್ಟುಪಾಡುಗಳು ಸಾಮಾಜಿಕ ನಿರ್ಬಂಧಗಳು ಹೆಣ್ಣು ಮಕ್ಕಳಲ್ಲಿ ಭಯವನ್ನು ಹುಟ್ಟಿಸಿವೆ. ಮನೆಯವರ ತೊಂದರೆ ಇಲ್ಲದೆ ಇದ್ದರೂ ಕೂಡ ಸಾಮಾಜಿಕ ನೋವು ಅಪಮಾನಗಳು ಹೆಣ್ಣು ಮಕ್ಕಳಲ್ಲಿ ಭೀತಿಯನ್ನು ಮೂಡಿಸುತ್ತಿವೆ.

ಇನ್ನು ಕೌಟುಂಬಿಕವಾಗಿ ನೋಡುವುದಾದರೆ ಹೆಣ್ಣು ಮಕ್ಕಳನ್ನು ಹೊರೆ ಎಂಬಂತೆ ಭಾವಿಸುವುದು ಹೆಣ್ಣು ಮಕ್ಕಳಿಗೆ ಓದಿಸುವುದು ದಂಡ ಎಂಬಂತೆ ನೋಡುವುದು ಕೊಟ್ಟ ಮನೆಗೆ ಹೋಗುವವಳು ಎಂಬ ಪರಕೀಯ ಪ್ರಜ್ಞೆಗಳು ಆಕೆಯಲ್ಲಿ ಹುಟ್ಟಿಸುವ ಪಾಲಕರು ತಮ್ಮದೇ ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ಭೇದವನ್ನು ಮಾಡುವ ಮೂಲಕ ಅವರಲ್ಲಿ ಅತಂತ್ರ ಮನೋಭಾವವನ್ನು ಹುಟ್ಟುಹಾಕುತ್ತದೆ.
ಇನ್ನು ಮನೆಯಲ್ಲಿ ಮನೆಯ ಪುರುಷರಿಂದಲೇ ಶೋಷಣೆಗೆ ಒಳಗಾಗುವ ತಾಯಿ ಅಜ್ಜಿ ಸೋದರ ತೇರ ಜೀವನಗಳು ವರ್ಷಗಳ ಕಾಲ ಆ ಮನೆಯ ಸೊಸೆಯಾಗಿದ್ದು ಕೂಡ ತನ್ನದೇ ಮನೆಯ ಮೇಲೆ ಆಕೆಯ ಹಕ್ಕಿಲ್ಲದೆ ಮನೆಯಲ್ಲಿ ಯಾವುದಾದರು ಅಹಿತಕಾರಿ ಘಟನೆಗಳು ಸಂಭವಿಸಿದಾಗ ಆಕೆಯನ್ನು ಹೊರಗಿನಿಂದ ಬಂದವಳು ನಿನಗೂ ಈ ಮನೆಗೂ ಸಂಬಂಧವಿಲ್ಲ ಎಂಬ ದುರವರ್ತನೆಗಳನ್ನು ತೋರುವುದು ಸ್ವತಹ ತನ್ನ ಮನೆಯಲ್ಲಿಯೇ ತನ್ನ ತಾಯಿ ಅತಂತ್ರ ಲಾಗಿದ್ದು ಯಾವುದೇ ರೀತಿಯ ಆರ್ಥಿಕ ವರಮಾನಗಳು ಇಲ್ಲ ಆಕೆಗೆ ಇಲ್ಲದೆ ದೆ ಹೋಗಿರುವ ಕಾರಣ ಆಕೆ ಅನುಭವಿಸುವ ನೋವು ಅಪಮಾನಗಳು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಂಡು ಸುಖ ಅನುಭವಿಸುವುದು ಅಷ್ಟರಲ್ಲಿಯೇ ಇದೆ ಎಂಬ ಭಾವವನ್ನು ಮೂಡಿಸಿದ್ದರೆ ಅಚ್ಚರಿ ಏನಲ್ಲ ಇದರ ಜೊತೆಗೆ ಮದುವೆಯ ನಂತರ ಬರುವ ಗಂಡನ ಮನೆಯ ಹೊಣೆಗಾರಿಕೆಗಳು ಪತ್ನಿಯಾಗಿ,ಸೊಸೆಯಾಗಿ, ಅತ್ತಿಗೆಯಾಗಿ ಮನೆಯ ಸಕಲೆಂಟು ಜವಾಬ್ದಾರಿಗಳನ್ನು ನಿರ್ವಹಿಸಿಯೂ ಕೂಡ ಇಲ್ಲಸಲ್ಲದ ಆಪಾದನೆಗಳಿಗೆ ಗುರಿಯಾಗುವುದು ಆಕೆಗೆ ಸಹಿಸುವುದು ಅಸಾಧ್ಯ ಎಂಬ ಭಾವ ಮೂಡಿರಲು ಬಹುದು.
ಇನ್ನು ನಾನು ದುಡಿದ ಹಣವನ್ನು ನನಗಾಗಿ ಏನೂ ಮಾಡಿರದ ಗಂಡನ ಕುಟುಂಬಕ್ಕೆ ಏಕೆ ನೀಡಬೇಕು ಎಂಬ ಭಾವವೂ ಕೂಡ ಇದರಲ್ಲಿ ಮಿಳಿತಗೊಂಡಿರಬಹುದು.
ತನ್ನ ತಂದೆ ತಾಯಿಗಳ ಬಳಿ ರಾಜಕುಮಾರಿಯಂತೆ ಬೆಳೆದು ಗಂಡನ ಮನೆಗೆ ಹೋಗಿ ಗಂಡನ ಒಳ ಉಡುಪುಗಳನ್ನು ತೊಳೆಯುವ ಆತನ ಸರ್ವ ಚಾಕರಿಯನ್ನು ಮಾಡುವ ಕರ್ಮ ನನಗೇಕೆ ಎಂಬ ಭಾವ ಕೂಡ ಕೆಲ ಹೆಣ್ಣು ಮಕ್ಕಳಲ್ಲಿ ಇದೆ. ಇದಕ್ಕೆ ಕಾರಣ ಇಂದಿಗೂ ನಮ್ಮ ಸಮಾಜದಲ್ಲಿ ಗಂಡಸು ಏನೇ ಮಾಡಿದರೂ ಸರಿ, ಅವರಿಗೆ ಹೇಳುವ ಅಧಿಕಾರ ಹೆಣ್ಣು ಮಕ್ಕಳಿಗೆ ಇಲ್ಲ ಎಂಬಂತೆ ವರ್ತಿಸುವುದೇ ಆಗಿದೆ.
ಬದಲಾದ ಕಾಲ ಘಟ್ಟದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಮಾನಸಿಕವಾಗಿ ಸ್ವತಂತ್ರಳಾಗಿರುವ ಇಂದಿನ ಹೆಣ್ಣು ಮಕ್ಕಳು ತಮ್ಮ ತಾಯಿಯಂತೆ ತಗ್ಗಿ ಬಗ್ಗಿ ನಡೆಯುವ, ತಾವು ಹೇಳುವ ಎಲ್ಲಕ್ಕೂ ಕವಲೆತ್ತಿನಂತೆ ಗೋಣು ಹಾಕುವ, ಹೆಂಗಸರು ಅಡುಗೆ ಕೋಣೆಗೆ ಮಾತ್ರ ಸೀಮಿತ ಎಂಬಂತೆ ವರ್ತಿಸುವ ಗಂಡಸರ ದುರ್ವರ್ತನೆಗಳನ್ನು ಸಹಿಸಿಕೊಳ್ಳುವುದಿಲ್ಲ, ಹೊಡೆಯುವ ಬಡಿಯುವ ಗಂಡಂದಿರು ದೂರ ಉಳಿಯಿತು ಬಯ್ಯುವ ಅವಮಾನ ಮಾಡುವ ಗಂಡಸರನ್ನು ಕೂಡ ಆಕೆ ಸಹಿಸುವುದಿಲ್ಲ. ಸಾಮಾಜಿಕವಾಗಿ ಆರ್ಥಿಕವಾಗಿ ತಾನು ಗಂಡಿನ ಸರಿ ಸಮಾನಳು ಎಂಬ ಆಕೆಯ ಮಾತು ಆಕೆಯ ಕೃತಿಯಲ್ಲಿ ತೋರುತ್ತಿದೆ.
ಸಮಸ್ಯೆಯ ಕೆನೆ ಪದರವನ್ನು ನೋಡಿದರೆ ಹೆಣ್ಣು ಮಕ್ಕಳು ಅದೆಷ್ಟೇ ಶ್ರೀಮಂತ ಗಂಡಾದರೂ ತಾನು ಕೂಡ ಉದ್ಯೋಗ ಮಾಡುತ್ತೇನೆ ಎಂಬ ಕರಾರಿನ ಮೇಲೆ ಮದುವೆಗೆ ಒಪ್ಪಿಗೆ ಸೂಚಿಸುತ್ತಾರೆ ಇಲ್ಲವೇ ತನಗೆ ಯಾವುದೇ ರೀತಿಯ ದಿಗ್ಬಂದನಗಳನ್ನು ಹಾಕಬಾರದು ಎಂದು ಪೂರ್ವ ಅನುಮತಿಯನ್ನು ಪಡೆಯುತ್ತಾರೆ.
ಇನ್ನು ಒಳಪದರಕ್ಕೆ ಹೋಗಿ ನೋಡಿದರೆ ಈಗಾಗಲೇ ತಮ್ಮ ಕುಟುಂಬದ ಸ್ನೇಹಿತರ ಸುತ್ತ ಮುತ್ತಣ್ಣ ಸಮಾಜದಲ್ಲಿ ಆರ್ಥಿಕವಾಗಿ ಗಂಡನ ಮತ್ತು ಗಂಡನ ಮನೆಯವರ ಮೇಲೆ ಅವಲಂಬಿತವಾಗಿರುವ ಹೆಣ್ಣು ಮಕ್ಕಳು ಅನುಭವಿಸುವ ನೋವು ಸಂಕಟ ಇಬ್ಬಂದಿತನಗಳು, ಕುದ್ದು ತಮ್ಮದೇ ಮನೆಗಳಲ್ಲಿ ತಾಯಿ ಸಹೋದರಿಯರು ಅನುಭವಿಸುವ ಅವಮಾನ ಹಿಂಸೆಗಳು ಆಕೆಯಲ್ಲಿ ಈ ರೀತಿಯ ಸುರಕ್ಷತಾ ಭಾವವನ್ನು ಮೂಡಿಸಿ ಮದುವೆಯಿಂದ ಹಿಂಜರಿಯುವಂತೆ ಮಾಡಿರಬಹುದು ಕೂಡ. ಜೀವನದಲ್ಲಿ ಮದುವೆಯನ್ನಂತೂ ಮಾಡಿಕೊಳ್ಳಲೇಬೇಕು ಆದರೆ ಅದಕ್ಕೂ ಮುನ್ನ ಕೆಲ ವರುಷ ನನಗೆ ಬೇಕಾದಂತೆ ನಾನು ಜೀವಿಸಿ ಬಿಡುತ್ತೇನೆ ಎಂಬ ಧೋರಣೆಯನ್ನು ಕೆಲವರು ಹೊಂದಿದ್ದರೆ, ತೀವ್ರವಾಗಿ ಕೌಟುಂಬಿಕ ತೊಂದರೆಗಳನ್ನು ಕಂಡುಂಡ ಹೆಣ್ಣು ಮಕ್ಕಳು ಮದುವೆ ಎಂಬ ಪದದಿಂದ ದೂರ ಉಳಿಯಲು ಬಯಸುತ್ತಾರೆ.
ಆದ್ದರಿಂದ ಇನ್ನು ಮುಂದಾದರೂ ಈ ಹಿಂದಿನ ಅಸಮಾನತೆಯನ್ನು ತೊಡೆದುಹಾಕಿ, ಬದುಕಿನ ಬಂಡಿಯನ್ನು ಎಳೆಯಲು ಬಂಡಿನಷ್ಟೇ ಹೆಣ್ಣು ಸಮರ್ಥಳು ಆಕೆ ಇಚ್ಚಿಸುವ ಸ್ನೇಹ ಪ್ರೀತಿ ಗೌರವ ಮತ್ತು ನಂಬಿಕೆಗಳು ಆಕೆಗೆ ದೊರೆತರೆ ಆಕೆ ವಿವಾಹಕ್ಕೆ ಖಂಡಿತವಾಗಿಯೂ ಒಪ್ಪುತ್ತಾಳೆ ಎಂಬ ಭರವಸೆಯನ್ನು ಜೀವನ ಪೂರ್ತಿ ನಡೆಸಿಕೊಡುವ ಬಾಂಧವ್ಯವನ್ನು ಅರಿತು ಸ್ತ್ರೀಯರ ಕುರಿತಾದ ಸೂಕ್ಷ್ಮ ಸಂವೇದನೆಗಳನ್ನು ಹೊಂದಿರುವ ಪುರುಷ ಸಮಾಜದ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಮನೆಯ ತಾಯಂದಿರು ಕೂಡ ತಮ್ಮ ಹೆಣ್ಣು ಮಕ್ಕಳಲ್ಲಿ ಧೈರ್ಯ ಭರವಸೆಗಳನ್ನು ಗಂಡು ಮಕ್ಕಳಲ್ಲಿ ಸನ್ನಡತೆ ಸಚ್ಚಾರಿಕೆ ಮತ್ತು ಎಲ್ಲಾ ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣುವ ಸಂಸ್ಕಾರವನ್ನು ನೀಡಲೇ ಬೇಕಾಗಿದೆ.
ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎನ್ನುವಂತೆ ಗಂಡಸು ಕನ್ಯೆ ಹುಡುಕುವ ಕಾಲ ಮುಗಿದು ಹೋಗಿದ್ದು ಜೀವನ ಸಂಗಾತಿಯನ್ನು ಬದುಕಿನ ದಾರಿಗೆ ಜೊತೆಯಾಗಲು ಕೇಳಿಕೊಳ್ಳುವ ಕಾಲ ಬಂದಿದೆ. ಪುರುಷ ಅಹಂಕಾರಕ್ಕೆ ಇದೊಂದು ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಲಿ.
ವೀಣಾ ಹೇಮಂತ್ ಗೌಡ ಪಾಟೀಲ್
