ಕಾವ್ಯ ಸಂಗಾತಿ
ಲಲಿತಾ ಪ್ರಭು ಅಂಗಡಿ
ದ್ವಿಪದಿಗಳು

ವೇಗದ ರೆಕ್ಕೆ ಕಟ್ಟಿಕೊಂಡ ಮಾನವ
ಆಸೆಗಳ ಬೆನ್ನು ಹತ್ತಿ ಪ್ರೀತಿಯನ್ನೆ ಕಳೆದುಕೊಂಡ
ವೈರಿಯ ಖಡ್ಗಕಿಂತ ಮೊನಚು
ಮ್ರೃದುಮಾತಿನ ಮೋಸಗಾರನ ನಗು.
ರಕ್ತಸಂಬಂಧಿಗಳ ಸಮಯಸಾಧಕತನದ ಸಂಚಿನ ಮುಂದೆ
ಗೆಳೆತನದ ಆತ್ಮೀಯ ಮಿತ್ರರ ಸಹಾಯ ವಿಶ್ವಾಸವೇ ಲೇಸು.
ತಿರಸ್ಕರಿಸಿದವರು ಪುರಸ್ಕರಿಸುವಂತೆ ಸಾಧನೆ ಮಾಡಿ ಸಫಲರಾಗಬೇಕು
ಜೀವನ ಬದಲಿಸುವ ಕೀಲಿ ಕೈ ನಮ್ಮ ಕೈಯಲ್ಲಿ ಇರಬೇಕು
ಯಾರ ಮೇಲೂ ಅತಿಯಾಗಿ ನಂಬಿಕೆ ಬೇಡ
ದ್ರೋಹಿಗಳು ಬೆನ್ನ ಹಿಂದೆ ಚೂರಿ ಹಾಕುವುದು ಗೊತ್ತಾಗೊದಿಲ್ಲ
ಸತ್ಯ ಹೇಳಲು ಗಟ್ಟಿ ಗುಂಡಿಗೆ ಬೇಕು
ಸುಳ್ಳು ಹೇಳಲು ಬಣ್ಣದ ಮಾತುಗಳೆ ಸಾಕು
ಲಲಿತಾ ಪ್ರಭು ಅಂಗಡಿಮುಂಬಯಿ

ಕೆಂಪು ಸತ್ಯ