ಪಿ.ವೆಂಕಟಾಚಲಯ್ಯ ಅವರ ಕವಿತೆ-ಕನ್ನಡ ನುಡಿ.

ಕನ್ನಡ ನನ್ನುಡಿ, ನಲ್ನುಡಿl
ಧನ್ಯತೆಯನುಭಾವದ, ಪರಿಪೂರ್ಣ ತೆಯಲಿ ನಾನ್ll
ಬಣ್ಣಿಪೆ, ದಿಟದಿಂ ಪೇಳ್ವಂl
ಎನ್ನೊಳಗಿನ ಅಂತರಾತ್ಮ, ನುಡಿ ಯುತಿರೆ ನಿಜಂll

ನಾಡಪರಂಪರೆ ಚರಿತೆಯl
ಒಡಲಲಡಿಗಿರುವ, ಜನಪದ, ಕಲೆ,
ಸಾಹಿತ್ಯಂll
ನಾಡಿನ ಐಸಿರಿಯ, ಏಳ್ಗೆಯl
ಸಾಧಿಪಲೆನಿಸಿ ದುಡಿಯುವ, ಜನಂ ಗಳ ನುಡಿಯಂll

ತರಲತೆ, ಸಸ್ಯೊದ್ಯಾನಂl
ಸಿರಿಸಂಪದದಿಂ ಮೆರೆಯುವ, ಭುವಿ ರಾಜ್ಞಿ ವನಂll
ಕೆರೆ ತೊರೆ, ನದಿ ಕಡಲಿನ, ನೀರ್-l
ತರಂಗದಲೆಗಳುಲಿಯುವ, ನಿನಾ ದದ ನುಡಿಯಂll

ಪಡುವನ ಸಹ್ಯಾದ್ರಿ ಗಿರಿಯl
ಕೋಡುಗಳಂದದಿ, ಇಳೆಯೊಳು ಶೋಭಿತ ಮಕುಟಂll
ಪೊಡವಿಯೊಳೀನಾಡ ಪೊರೆದl
ದಂಡಾಧಿಪರು ಮಮತೆಯಲಿ ಸಲ ಹಿದ ನುಡಿಯಂll

ಎನಿತು ಮಧುರಾತಿ ಮಧುರಂl
ಕನ್ನಡ ನುಡಿಯಂ,ಸುಲಲಿತ ಕರ್ಣಾ ನಂದಂll
ಎನಿತು ಇನಿತು,ಸವಿ ನುಡಿಯಂl
ಸನ್ಮತಿ ಸದ್ಗತಿ ಬಯಸಿದ, ಸಂತರ ನುಡಿಯಂll


Leave a Reply

Back To Top