ಡಾ.ರೇಣುಕಾತಾಯಿ.ಸಂತಬಾ.ರೇಮಾಸಂ ಅವರ ಭಾವಗೀತೆ

ನೀ ಹಾಡಲು ನೋವ ಮರೆಯುವದೇನು
ನೀ ನೋಡಲು ದೇವರು ಹರಸುವರೇನು

ದೀಪವನು ಸುತ್ತಲೂಹಚ್ಚಿದರೆ
ಮನದ ಕತ್ತಲೆ ಕಳೆಯುವದೇನು
ಬೇವು ಬೆಲ್ಲವನು ಸವಿಯುತಿರೆ
ಯುಗಾದಿ ಹಬ್ಬ ಆಗುವದೇನು

ಬೆಟ್ಟದಷ್ಟು ಮಮತೆಯು ಸಿಕ್ಕರೆ
ಅವ್ವನ ವಾತ್ಸಲ್ಯಕೆ ಸಮವೇನು
ಮಡಿಲ ತುಂಬ ಮಕ್ಕಳಿದ್ದರೆ
ತಾಯಿಗೆ ಭಾರವಾಗುವುದೇನು

ಗೀಚಿದ ಗಾಯ ಮಾಯವಾದರೆ
ಮನದ ನೋವು ಶಮನವಾದಿತೇನು
ಚಿಟ್ಟೆಯಂತೆ ಹುಚ್ಚಲಿ ಬೆಂಕಿ ತಬ್ಬಿದರೆ
ಪ್ರೀತಿಯ ಆಳದ ಭಾವ ತಿಳಿಯುವದೇನು


Leave a Reply

Back To Top