ಕೆಜೆ ಪೂರ್ಣಿಮಾ ಅವರ ಹೊಸ ಕವಿತೆ,ಬೇಸರ

ಆಸೆ ಎಂಬ  ಅಂಬುಧಿ   ಬಾರದಿರು ನೀ ಹತ್ತಿರ ನಿನ್ನ ಸೇರೋ ತವಕದಲ್ಲಿ
 ಹರಿವ ನೀರಿನ ರಭಸದಲಿ ಮರೆಮಾಚಿದ ಸುಳಿ ನೀ
 ಹೋಗು ನೀ ಬಹು ದೂರ…
 ಬೇಸರ ಸುಳಿಯದಿರು ನೀ ನನ್ನ ಹತ್ತಿರ…
 ಭರವಸೆಗಳ ಬೆನ್ನ ಹತ್ತಿ ಹೊರಟ ನನಗೆ ಕಾಣದಾಗಿದೆ ನೇಸರ…
 ಬೇಸರ ಸುಳಿಯದಿರು ನೀ ನನ್ನ ಹತ್ತಿರ…
 ಆಗಸದಿಂದ ಬರುವ ಕಿರಣಗಳ ಬಾಚಿಕೊಂಡು ಬದುಕ ಬೆಳಕ ಬೆಳಗುವ ಬದುಕ ಬದುಕುವ ಕಾತುರ…..
 ಬೇಸರ ಸುಳಿಯದಿರು ನೀ ನನ್ನ ಹತ್ತಿರ…
 ಕಂಡ ಕನಸುಗಳು ಕರಿಮೋಡವಾಗಿ ಆಗಸದಲ್ಲಿ ಸಾಗುತಿರಲು ಬಿರುಗಾಳಿಗೆ ಮುನ್ನುಗ್ಗಿ ಹೋಗುತ್ತಿರಲು ಕನಸು ನನಸಾಗದಿರಲು ಇಳೆಗೆ ಮಳೆ ಬಾರದಿರೆ ಮೋಡಗಳು ಸರಿದವು ಬಹುದೂರ….
 ಸೂಚನೆ ಮರೆ ಮಾಡಿ ಯೋಚನೆ ಬಹು ದೂರ ಸಾಗಿ
 ಏನ್ ಒಂದನ್ನ ಅರಿಯದೆ ಏಕತಾನತೆಯಲ್ಲಿ ಈ ಅಂಬರ…
 ಬೇಸರ ಸುಳಿಯದಿರು ನೀ ನನ್ನ ಹತ್ತಿರ…..
 ನೈಜ ಬದುಕಿನ ನೈಸರ್ಗಿಕತೆಯಲ್ಲಿ ಬಿಟ್ಟುಬಿಡದೆ ಬೀಸಿದರೆ ಬಿರುಗಾಳಿ ಭರವಸೆಯೊಂದು ನಿಜ ಕ್ರೌರ್ಯ……
                    ಏನಂತೀರಿ


Leave a Reply

Back To Top