ಕಾವ್ಯಯಾನ

ಹೀಗೊಂದು ಕವಿತೆ

boat on calm body of water

ನಾಗರಾಜ್ ಹರಪನಹಳ್ಳಿ

-1-
ಎರಡು ಬಾಗಿಲು ಮುಚ್ಚಿದವು
ಇಷ್ಟೇ ತೆರೆದ ಕಿಟಕಿಗಳು
ಅಲ್ಲಿ ಶಬ್ದಗಳು
ಮೊಳೆಯಲಿಲ್ಲ


-2-
ಬಾಗಿಲಿಲ್ಲದ ಊರಲ್ಲಿ
ಬೀಗಗಳು ಕಳೆದು ಹೋಗಿವೆ
ಶಬ್ದಗಳ ಕಳಕೊಂಡವರು
ದಿಕ್ಕು ದಿಶೆಯಿಲ್ಲದೇ
ನಡೆಯುತ್ತಿದ್ದಾರೆ
ಎಂದೂ ಸಿಗದ ಕೊನೆಗೆ


-3-
ಕಾಲಿಲ್ಲದವರನ್ನು
ಕೈಯಿಲ್ಲದವರು ಕುಣಿಸಿದರು
ಅನಾಥ ಬೀದಿಗಳಲ್ಲಿ
ಮೆದುಳಿಲ್ಲದವರನ್ನು
ಕಣ್ಣಿಲ್ಲದವರು ಕೂಗಾಡಿಸಿದರು
ಹೃದಯ ಕಳೆದುಕೊಂಡ
ದೊರೆಯ ಮಹಲಿನ ಮುಂದೆ


-4-
ಮುಗಿಲ
ದುಃಖ
ಭೂಮಿಯ
ಬಾಯಾರಿಕೆ
ಮುಗಿಯುವಂತಹದ್ದಲ್ಲ


      -5-

ಯಾಕೋ ಮನಸ್ಸು ಖಾಲಿ ಖಾಲಿಯಾಗಿದೆ
ಆಕೆಯ ಹೆಜ್ಜೆ ಗೆಜ್ಜೆ ಸದ್ದು ಕೇಳದೇ

ಹರಿವ ನದಿಗೂ ಕಳೆಯಿಲ್ಲ
ಸಮುದ್ರ ಸೇರಿಯೂ ಸಂಭ್ರಮಿಸದ ಆಕೆಯಂತೆ
ಮನದಲ್ಲಿ ಎದ್ದ ಭಾವಗಳ ಅಲೆ ಸದ್ದು ಅವಳ ತಟ್ಟಿದೆ
**
-6-
ಹಿಡಿಯಷ್ಟು ಬದುಕಿನಲ್ಲಿ ಕಡಲಿನ ಪ್ರೀತಿಯ ಅರಿಯಲಾಗಲಿಲ್ಲ

ದಿನವೂ ಸೂರ್ಯ ಬೆಳಗಿದರೂ ಮನುಷ್ಯ ಮನದ ಕತ್ತಲು ಅಳಿಸಲಿಲ್ಲ


3 thoughts on “ಕಾವ್ಯಯಾನ

  1. ಅಧ್ಬುತ, ಮನೋಜ್ಞವಾಗಿ ಮನದಂಗಳದಲಿ ನಿಂತಿರುವಂತೆ ಮೂಡಿಬಂದಿದೆ..,…..ಮಾತಿಲ್ಲ..

Leave a Reply

Back To Top