ವೈ.ಎಂ.ಯಾಕೊಳ್ಳಿ ಅವರ ʼತನಗ ಸಂಪುಟʼ


ಅಂದುಕೊಂಡುದ ಮಾಡೆ
ದೈವ ನೀಡಿದ ವೇಳೆ
ಮತ್ತೊಂದು‌ ಮುಂಜಾನೆಯು
ದುಡಿಯೆ ಸಾರ್ಥಕವು


ಮನದಲಿ ನಿಂತಿಹ
ಚಿತ್ರವನು ನೆನೆಯೆ
ಮೂಡುವದು ನವೀನ
ಭಾವನೆಯ ಗೊನೆಯೆ


ಪ್ರೀತಿಗೆ ಸೋತ ಮೇಲೆ
ಗೆಲ್ಲುವ ಮಾತೆಲ್ಲಿದೆ
ಸುಂದರ ಬಾಳಿಗದು
ಮುನ್ನುಡಿಯೆ ಆಗಿದೆ


ಹಟಕ್ಕೆ ಬಿದ್ದರಲ್ಲಿ
ಪ್ರೀತಿಯ ಸೋಲಹುದು
ಅನುಸರಿಸಿ ನಡೆ
ಬದುಕೇ ಗೆಲ್ಲುವದು


ನನ್ನೊಳಗಿನೊಳಗು
ಅವಳೇ ಆಗಿಹುದು
ಬಿಟ್ಟು ಇರುವೆನೆನೆ
ಜೀವವೆ ಹೋಗುವುದು




 ಕುದಿಯುವ ಹಾಲಿಗೆ
ನೀರು ಹಾಕಲು ಶಾಂತ
ಕುದಿವ ಮನಸಿಗೆ
ಸಮಾಧಾನ ಸುಖಾಂತ



ಇತರರ ಒಳಿತ
ಹುಡುಕೊದಾಗದಿರೆ
ನಿನ್ನೊಳಗೆಲ್ಲೊ ತಪ್ಪು
ಇರಬೇಕು ಅರಸು



ಮಾತುಗಳ ಸವಿಯು
ಏನೆಂದು ಅರಿತದ್ದು
ಅವಳು‌ ಮಾತಾದಾಗ
ಮುತ್ತಿಗೂ ಮಿಗಿಲವು



ದಿನದ ಕಾರ್ಯಗಳ
ಎದ್ದೊಡನೆ ಯೋಜಿಸು
ದಿನಗಳೆದ ಹಾಗೆ
ಕಾರ್ಯವನು ಹೂಣಿಸು

೧೦

ಬೆಲ್ಲವೇ ಸಿಗೊದಿಲ್ಲ
ಬೇವೆಲ್ಲಿಂದ ಸಿಕ್ಕೀತು
ಬೇವು ಬೆಲ್ಲದ ಮಾತು
ಕಾವ್ಯೋಪಮೆ ಆದೀತು

೧೧
ಯುಗಾದಿಯು ಬಂದಿದೆ
ಬೇವು ಬೆಲ್ಲ ಕೊಡೆಂದೆ
ನೀನೇ ಬೇವಂಥವನು
ನಾನು ಬೆಲ್ಲವೆಂದಳು

—————————————————————————————————————-

Leave a Reply

Back To Top