ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯವೆಂದರೆ
ಕಂದನ ಲಾಲಿ
ವೃದ್ಧನ‌ ಜೋಲಿ

ಕಾವ್ಯವೆಂದರೆ
ಬಸುರಿಯ ಕಾಮನೆ
ಬಂಜೆಯ ಬವಣೆ

ಕಾವ್ಯವೆಂದರೆ
ಬಡವನ ಗುಡಿಸಲು
ಧನಿಕನ ಮಹಲು

ಕಾವ್ಯವೆಂದರೆ
ತಬ್ಬಲಿಯ ತಲ್ಲಣ
ಅರಸನಿತ್ತ ಔತಣ

ಕಾವ್ಯವೆಂದರೆ
ಮುಗಿಲಿನತ್ತ ಚಿಗುರು
ನೆಲಕ್ಕಿಳಿದಿಹ ಬೇರು

ಕಾವ್ಯವೆಂದರೆ
ಗೀಚಿದೆಲ್ಲವು ಸಲ್ಲ
ತೋಚಿದ್ದೂ ಅಲ್ಲ

ಕಾವ್ಯವೆಂದರೆ
ಭೂತದ ಹೂಡಿಕೆ
ಭವಿಷ್ಯದ ಬೇಡಿಕೆ

ಕಾವ್ಯವೆಂದರೆ
ಹೇಳಲೆನಿತು ಕಷ್ಟ
ಕೇಳಲೆನಿತು ಇಷ್ಟ

ಕಾವ್ಯವೆಂದರೆ
ಮಾತಾಗುವ ಮೌನ
ಮೌನದಲ್ಲಿನ ಧ್ಯಾನ

ಕಾವ್ಯವೆಂದರೆ
ವಿರತಿಯ ವಿವಶ
ಆತ್ಮರತಿಯ ಕೈವಶ

ಕಾವ್ಯವೆಂದರೆ
ಸಂಗತಿಯ ಯೋಗ
ವಿಸಂಗತಿಯ ತ್ಯಾಗ

ಕಾವ್ಯವೆಂದರೆ
ಹಿತದ ಪ್ರವೃತ್ತಿ
ವಿಹಿತದ ನಿವೃತ್ತಿ

ಕಾವ್ಯವೆಂದರೆ
ಏನು? ಎತ್ತ? ಹೇಗೆ?
ಅದೇ,ಅತ್ತ,ಹಾಗೆಯೇ


About The Author

2 thoughts on “ಎಮ್ಮಾರ್ಕೆ ಅವರ ಕವಿತೆ-ಕಾವ್ಯವೆಂದರೆ..”

  1. ಕಾವ್ಯವೆಂದರೆ
    ಬಯಲಿನ ಹರವು
    ಶೂನ್ಯದ ಇರವು
    ಪೂರ್ಣದ ಕುರುಹು.
    _________________
    ಚಿಕ್ಕ ಸಾಲುಗಳಲ್ಲೆ ಬೃಹದರ್ಥಗಳನ್ನಡಗಿಸಿದ್ದೀರಿ.ಚೊಕ್ಕ ಕವಿತೆ!

Leave a Reply

You cannot copy content of this page

Scroll to Top