ವ್ಯಾಸ ಜೋಶಿ ಅವರ ಹಾಯ್ಕುಗಳು

ಅವಳೆಂದಳು
ತಾಳಿ; ಕಟ್ಟೇ ಬಿಟ್ಟನು
ಪ್ರಿಯತಮನು.

ಜಂಗಮವಾಣಿ,
ಮೇಘದೂತ ; ಈಗಿನ
ಪ್ರೇಮಿಗಳಿಗೆ.

ಸೂರ್ಯೋದಯಕೆ
ಮಂಜು ಕರಗಿದಂತೆ
ನಿನ್ನಾಗಮನ.

ಯಾರು ಗೆದ್ದರೂ
ಸೋತವರಿಗೆ ಖುಷಿ,
ದಾಂಪತ್ಯದಲಿ.

ಪ್ರೇಮದ ಲಗ್ನ
ಹಿರಿಯರ ಮಾತು-ಕತೆ
ನೆಪ ಮಾತ್ರಕೆ.

ಹೊಸ ಜೋಡಿಗೆ
ಪ್ರೀತಿಯ ಹೆಚ್ಚಿಸಿದ್ದು,
ಹುಸಿ ಮುನಿಸು.

————————————————————-

Leave a Reply

Back To Top