ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಜ್ಜೂಮಾ ಇಮಾಮ್ ಹಜರತ್
ಇವರ ಪುತ್ರರತ್ನರು
ಕರುನಾಡಿನ ಶಿಶುನಾಳ ಸಂತರು
ನಾಡಿನ ಕಬೀರದಾಸರು

ಗುರು ಗೋವಿಂದಭಟ್ಟರ ಪ್ರೀತಿಯ
ಪರಮ ಪಟ್ಟಶಿಷ್ಯರು
ಸಮಾಜದಲ್ಲಿ ಕಂಡ ವಿಷಯಗಳನೆ
ಪದಗಳನಾಗಿಸಿದರು

ಬದಲಾವಣೆಗೆ ಯತ್ನವ ಮಾಡಿದರು
ಪ್ರವೃತ್ತಿಗಳಿಗೆ ನೊಂದರು
ಜಾತಿಭೇದ ಅಳಿಸಿಹಾಕಿ ಭಾವೈಕ್ಯತೆಯ
ಬೀಜ ಬಿತ್ತಿದವರು

ಶಾಲೆಯ ಶಿಕ್ಷಕರಾಗಿ ಮಕ್ಕಳ ಬಾಳು
ಬೆಳಗುವಂತೆ ಮಾಡಿದರು
ಶರಣರ ವಚನಗಳನು ಒಪ್ಪಿದರು
ಮನಸಾರೆ ಅಪ್ಪಿದರು

ಕೈಯಲ್ಲಿ ತಂಬೂರಿ ಮೀಟುತಲಿ ಭಕ್ತಿ
ಮಾರ್ಗತೋರಿಸಿದರು
ತತ್ವಪದಗಳ ರಚಿಸಿ ಕನ್ನಡ ಸಾಹಿತ್ಯ
ಶ್ರೀಮಂತವಾಗಿಸಿದರು

ಆತ್ಮ ಅನಾತ್ಮಗಳನರಿತರು ಜನರಿಗೆ
ಜ್ಞಾನವ ಬೋಧಿಸಿದರು
ಸರಳುಡುಗೆಯ ಸಾದಾ ಮಹಂತರು
ಶರೀಫರಿಗೆ ನಮನಗಳು


About The Author

Leave a Reply

You cannot copy content of this page

Scroll to Top