ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಣ್ಣು ಮಂಜಾಗುತ್ತಿವೆ
ಒಡೆದ ಕನ್ನಡಕ
ಜೋಲಿ ಹೋಗದಿರಲು
ಕೈಗೆ ಊರುಗೋಲು
ಕೂದಲು ನೆರೆಯುತ್ತಿವೆ
ಹಲ್ಲು ಉದುರಿ ಬಿಳುತ್ತಲಿವೆ
ಅರಳು ಮರಳು
ಮಾತು ತಡವರಿಕೆ
ದಣಿವು ಬಾಯಾರಿಕೆ
ಸಿಡುಕು ಮುನಿಸು
ಅದಮ್ಯ ಪ್ರೀತಿ
ಭಾವ ತೀವ್ರತೆಗೆ ಕಣ್ಣೀರು
ಒಂಟಿತನದ ಕಾಟ
ಅಧ್ಯಾತ್ಮದ ಗೀಳು
ನನ್ನ ನೆರಳು
ಒಮ್ಮೆ ಹಿಂದೆ ಒಮ್ಮೆ ಮುಂದೆ
ಮುದಿ ಭಾವ ನನ್ನೆಡೆಗೆ
ಇಣುಕಿ ಅಣುಕಿಸುತಿದೆ
ಕುಹಕವಿರದ ಮುಗ್ಧತನ
ಎಲೆ ಜೀವವೆ
ಸಾವು ನನ್ನ
ಅಪ್ಪಿಕೊಳ್ಳುವ ಮುನ್ನ
ನನಗೆ ತಿಳಿಸಿ ಬಿಡು
ಒಮ್ಮೆ ಮನಸಾರೆ ನಕ್ಕು
ಜಗದ ಜೀವ ಜಾಲಕ್ಕೆ
ವಿದಾಯ ಹೇಳುತ್ತೇನೆ
ಋಣ ತೀರಿಸುವ ಬಯಕೆ


About The Author

9 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ʼವಿದಾಯʼ”

  1. ವಿದಾಯದಲ್ಲಿ ಋಣ ತೀರಿಸುವ ಬಯಕೆಯನ್ನು ಓದಿ ಧನ್ಯತಾ ಭಾವ ಮೂಡಿತು ಸರ್… ಒಂದೊಳ್ಳೆಯ ಹೃದಯವಂತಿಕೆಯ
    ಮನಮಿಡಿಯುವ ಆಂತರ್ಯದ ಕನವರಿಕೆಗಳು ಕವನವಾಗಿ ಹರಿದಾಗ ಎಲ್ಲರ ಮನವನ್ನು ಅವು ಸರಳವಾಗಿ ತಲುಪುತ್ತಾ ಹೋಗುತ್ತವೆ.

    ಸುತೇಜ

  2. ಜನ್ಮ ತಾಳಿದ ನಂತರ ಸಾವು ಖಚಿತ ಆದರೆ ಇರುವ ನಮ್ಮ ಜೀವನವನ್ನು ಇದ್ದಷ್ಟು ದಿನ ಸಾರ್ಥಕ ಪಡಿಸಿಕೊಂಡು ನೆಮ್ಮದಿಯಿಂದ ಜೀವನಕ್ಕೆ ವಿದಾಯ ಹೇಳುವುದು ಎಲ್ಲ ಜೀವಿಗಳಿಗೂ ಸಾಧ್ಯವಿಲ್ಲ ಆದರೆ ಕೆಲವೇ ಕೆಲವು ಜೀವಾತ್ಮಗಳಿಗೆ ಸಾಧ್ಯ ತುಂಬಾ ಭಾವಪೂರ್ಣವಾದ ಕವಿತೆ

Leave a Reply

You cannot copy content of this page

Scroll to Top