ಮಾಳೇಟಿರ ಸೀತಮ್ಮ ವಿವೇಕ್ ಅವರ ಕವಿತೆ-ಜೀವ ಜೀವನ ಅಮೂಲ್ಯ

ನೀವಿರುವಂತೆ ಇರುತಲಿರಿ
ಮುಜುಗರವ ಪಡದಲೆ||
ನಿಮ್ಮಿರುವಿಕೆಯೆ ಸೃಷ್ಟಿ ಸ್ಪೂರ್ತಿ
ಮೆರೆಯುತಿರಿ ಅಳುಕದಲೆ||

ನಮ್ಮೊಳಗಿನ ಸಂಶಯವದು
ನಿಮ್ಮ ಕಾಡಿದರೆ ದೂರುತಲೆ||
ತಮ್ಮೊಳಗಿನ ವಿಶ್ವಾಸವದು
ಕಾಣೆಯಾಗದಿರಲಿ ಕೊರಗಿನಲೆ||

ಅವರಿವರ ಜತನ ಮಾಡುವ
ಹೊಣೆಗೆ ಸುಮ್ಮನೆ ಸಿಲುಕದಲೆ||
ತಮ್ಮವರ ಕಾಯ್ದು ನಿಷ್ಠೆಯಲಿ
ಮಾಡಿ ಪರ ಸೇವೆ ನ್ಯಾಯದಲೆ||

ಯಾರಿಗೆ ನಿಮ್ಮಾವಭಾವ
ಪ್ರಚೋದಿಸಿತೋ ಅರಿಯದಲೆ||
ಸರಿತಪ್ಪುಗಳೊಳಗೆ ಮರೆಯಾಗದಿರಿ
ಕುಚೋದ್ಯಕೆ ನಲ್ನುಡಿಯದೆಲೆ||

ಜೀವನ ಎಲ್ಲರಿಗೂ ಅಮೂಲ್ಯ
ಮುನ್ನಡೆಯಿರಿ ಜೀವಮೌಲ್ಯ ಕಾಣುತಲೆ||
ಬದುಕಲು ಎಂದು ಹಿಂಜರಿಯದಿರಿ
ಭೂಮಿ ಎಲ್ಲರಿಗಾಗಿದೆ ತಿಳಿಯದಲೆ||

———————————————————————————————————-

ಮಾಳೇಟಿರ ಸೀತಮ್ಮ ವಿವೇಕ್

Leave a Reply

Back To Top