ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಒಂದು ಪಲ್ಲವಿಯೇ
ಹಾಗೆ ಉಳಿದು ಬಿಡು
ಮಣ್ಣ ಹಣತೆಯಾಗಿ
ಬೆಳಕ ಸೂಸಿ ಬಿಡು……

ಮಣ್ಣಲ್ಲಿ ಚಿಗುರಾಗಿ
ಬೆಳೆವ ಹಸಿರಿಗೆ
ಗುರುತಾಗಿ ನೀ
ಉಳಿದು ಬಿಡು……..

ಒಂದು ತಂಗಾಳಿಯೇ
ಹಾಗೆ ಬೀಸಿ ಬಿಡು
ಮುಗಿಲು ಮುಟ್ಟುವಲ್ಲಿ
ಕನಸ ಕಟ್ಟಿ ಕೊಡು……

ಗಾಳಿಯಲ್ಲಿ ತೇಲಿ
ಜೀವವಾಗಿ ಮತ್ತೆ
ಮಗುವಾಗಿ ನೀ
ಒಲವಲ್ಲಿ ತೇಲಿಬಿಡು……

ಒಂದು ಚಿತ್ತಾರವೇ
ಚುಕ್ಕಿ ತಾರೆಗಳ
ಮಲ್ಲಿಗೆಯ ನಗುವ
ಒಮ್ಮೆ ಚೆಲ್ಲಿ ಬಿಡು……..


About The Author

1 thought on “ನಾಗರಾಜ ಬಿ.ನಾಯ್ಕ ಅವರ ಕವಿತೆ-ಒಂದು ತಂಗಾಳಿಯೇ……”

Leave a Reply

You cannot copy content of this page

Scroll to Top